Coorg the Kashmir of Karnataka

Coorg the Kashmir of Karnataka Coorg's No 1 social media channel...Follow us for news updates, Subscribe us on YouTube and watch our videos. Support us
(405)

You can follow our Instagram profile, follow us on Threads and Twitter too ..

02/11/2025

ಾಕುವವರೇ_ನಿಮ್ಮ_ಹಿಂದೆ_ನಾವಿದ್ದೇವೆ. Clean Virajpet

ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿ ಇಸಿಎಚ್‌ಎಸ್ ಪಾಲಿಕ್ಲಿನಿಕ್ (ಸೈನ್ಯ ಆಸ್ಪತ್ರೆ) ಬಳಿ ಈ ಕಸದ ವಸ್ತುಗಳು ಪದೇ ಪದೇ ಕಂಡುಬರುತ್ತಿವೆ. ಬೆಳಿಗ್ಗೆ ವಾಕಿಂಗ್ ಮಾಡುವವರು ವಸತಿ ಮನೆಗಳಿಗೆ ಹೋಗುವ ರಸ್ತೆಯಲ್ಲಿ ತ್ಯಾಜ್ಯ ಎಸೆಯುವುದಕ್ಕೆ ಕಾರಣರಾಗಿದ್ದಾರೆ ಎಂದು ವರದಿಯಾಗಿದೆ. ಪಟ್ಟಣ ಪುರಸಭೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳಾ ವಿನಂತಿ. ಕಸ ಹಾಕುವವರಿಗೆ ಎಚ್ಚರಿಕೆ ನೀಡುವ ಮೂಲಕ, ದಂಡ ವಿಧಿಸುವ ಮೂಲಕ ಅಥವಾ ಮತ್ತಷ್ಟು ಕಸ ಸುರಿಯುವುದನ್ನು ತಡೆಯಲು ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದು.

02/11/2025

#ಮಡಿಕೇರಿಯಲ್ಲಿ_ಕೊಡಗು_ಜಿಲ್ಲಾ_ಕಾಂಗ್ರೆಸ್_ಭವನಕ್ಕೆ_ಶಿಲನ್ಯಾಸ

ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮಾನ್ಯ ಉಸ್ತುವಾರಿ ಸಚಿವರಾದ ಬಸವರಾಜು, ವಿರಾಜಪೇಟೆಯ ಶಾಸಕರಾದ ಎ ಎಸ್ ಪೊನ್ನಣ್ಣ, ಮಡಿಕೇರಿಯ ಶಾಸಕರಾದ ಮಂತರ ಗೌಡ ಮತ್ತು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಶಿಲನ್ಯಾಸ ಕಾರ್ಯಕ್ರಮ ನಡೆಯಿತು.

Mantar Gowda Kodagu Congress A.S Ponnanna

02/11/2025

#ಏನ್_ತ್ರೋ_ಗುರು Clean Virajpet #ಇವರಿಗೊಂದು_ಪ್ರೈಸ್_ಕೊಡಿ 🙏

02/11/2025

#ಹೀಗ್ಯಾಕಂದರು_ಮಾಜಿ_ಶಾಸಕ_ಬೋಪಯ್ಯನವರು..?

ಪೊನ್ನಣ್ಣ ಮುಂದೆ ಚುನಾವಣೆಗೆ ನಿಲ್ಲಲು ಬಿಜೆಪಿಯವರಿಗೆ ಯಾರಿಗೂ ಮೀಟರ್.... ಓ ಸಾರಿ ಬ್ಯಾಟ್ರಿ ಇರಲಿಲ್ಲಾ. ಹೀಗ್ಯಾಕಂದರು ಬೋಪಯ್ಯನವರು.. ಇದೊಂದು ವೀಡಿಯೊ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 ್ಷಗಳ_ಟೆನಿಸ್_ಬದುಕಿಗೆ_ವಿದಾಯ_ಹೇಳಿದ_ರೋಹನ್_ಬೋಪಣ್ಣ.22 ವರ್ಷಗಳ ಕಾಲ ಟೆನಿಸ್ ಲೋಕದಲ್ಲಿ ಮಿಂಚಿದ್ದ ಕೊಡಗಿನ ರೋಹನ್ ಬೋಪಣ್ಣ  ತಮ್ಮ ಅದ್ಭುತ ವೃ...
02/11/2025

್ಷಗಳ_ಟೆನಿಸ್_ಬದುಕಿಗೆ_ವಿದಾಯ_ಹೇಳಿದ_ರೋಹನ್_ಬೋಪಣ್ಣ.

22 ವರ್ಷಗಳ ಕಾಲ ಟೆನಿಸ್ ಲೋಕದಲ್ಲಿ ಮಿಂಚಿದ್ದ ಕೊಡಗಿನ ರೋಹನ್ ಬೋಪಣ್ಣ ತಮ್ಮ ಅದ್ಭುತ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಅಂದರೆ ರೋಹನ್ ಬೋಪಣ್ಣ ತಮ್ಮ ವೃತ್ತಿಪರ ಟೆನಿಸ್‌ಗೆ ನಿವೃತ್ತಿ (Tennis Retirement) ಘೋಷಿಸಿದ್ದಾರೆ. ಪ್ಯಾರಿಸ್ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದ ಬೋಪಣ್ಣ, ಇದೀಗ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಬೋಪಣ್ಣ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ವಿಜೇತ ಮತ್ತು ವಿಶ್ವದ ಅತ್ಯಂತ ಹಿರಿಯ ನಂಬರ್ 1 ಆಟಗಾರನಾಗುವ ಮೂಲಕ ಇತಿಹಾಸ ಕೂಡ ನಿರ್ಮಿಸಿದ್ದರು. ಇದೀಗ ವೃತ್ತಿಜೀವನಕ್ಕೆ ತೆರೆ ಎಳೆದಿರುವ ರೋಹನ್ ಬೋಪಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

#ನಿವೃತ್ತಿ_ಬಗ್ಗೆ_ರೋಹನ್_ಬೋಪಣ್ಣ_ಹೇಳಿದ್ದೇನು?

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿವೃತ್ತಿ ಘೋಷಿಸಿರುವ ಬೋಪಣ್ಣ, ‘ನಿಮ್ಮ ಜೀವನಕ್ಕೆ ಅರ್ಥ ನೀಡಿದ ವಿಷಯಕ್ಕೆ ನೀವು ಹೇಗೆ ವಿದಾಯ ಹೇಳುತ್ತೀರಿ? 20 ಮರೆಯಲಾಗದ ವರ್ಷಗಳ ಪ್ರವಾಸದ ನಂತರ, ಈಗ ಸಮಯ ಬಂದಿದೆ… ನಾನು ಅಧಿಕೃತವಾಗಿ ನನ್ನ ಟೆನಿಸ್ ರಾಕೆಟ್ ಅನ್ನು ನೇತುಹಾಕುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಪ್ರತಿ ಬಾರಿ ಕೋರ್ಟ್‌ಗೆ ಕಾಲಿಟ್ಟಾಗಲೂ ಆ ಧ್ವಜಕ್ಕಾಗಿ, ಆ ಭಾವನೆಗಾಗಿ ಮತ್ತು ಆ ಹೆಮ್ಮೆಗಾಗಿ ಆಡಿದ್ದೇನೆ. ಟೆನಿಸ್ ನನಗೆ ಕೇವಲ ಕ್ರೀಡೆಗಿಂತ ಹೆಚ್ಚಿನದಾಗಿದೆ. ನಾನು ಸೋತಾಗ ಅದು ನನಗೆ ಉದ್ದೇಶವನ್ನು ಹಾಗೂ ಶಕ್ತಿ ನೀಡಿತು ಮತ್ತು ಜಗತ್ತು ನನ್ನನ್ನು ಅನುಮಾನಿಸಿದಾಗ ಆತ್ಮವಿಶ್ವಾಸವನ್ನು ನೀಡಿತು. ಪ್ರತಿ ಬಾರಿ ನಾನು ಕೋರ್ಟ್‌ಗೆ ಕಾಲಿಟ್ಟಾಗ ಪರಿಶ್ರಮ, ಮತ್ತೆ ಮೇಲೇರಲು ಸ್ಥಿತಿಸ್ಥಾಪಕತ್ವ ಮತ್ತು ಮತ್ತೆ ಹೋರಾಡಲು ಧೈರ್ಯವನ್ನು ಕಲಿಸಿತು ಎಂದಿದ್ದಾರೆ.
ರೋಹನ್ ಬೋಪಣ್ಣ ಮೈಲಿಗಲ್ಲು
45 ವರ್ಷದ ಬೋಪಣ್ಣ ತಮ್ಮ ವೃತ್ತಿಜೀವನವನ್ನು ಎರಡು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳೊಂದಿಗೆ ಕೊನೆಗೊಳಿಸಿದ್ದಾರೆ. 2024 ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ (ಮ್ಯಾಥ್ಯೂ ಎಬ್ಡೆನ್ ಜೊತೆ) ಮತ್ತು 2017 ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ (ಗೇಬ್ರಿಯೆಲಾ ಡಬ್ರೋವ್ಸ್ಕಿ ಜೊತೆ) ಗೆಲ್ಲುವ ಮೂಲಕ ತಮ್ಮ ವರ್ಣರಂಜಿತ ವೃತ್ತಿಜೀವನಕ್ಕೆ ಫುಲ್​ಸ್ಟಾಪ್ ಇಟ್ಟಿದ್ದಾರೆ. ಇದನ್ನು ಹೊರತುಪಡಿಸಿ ತಮ್ಮ ವೃತ್ತಿಜೀವನಕದಲ್ಲಿ ಬೋಪಣ್ಣ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ್ದಾರೆ.

2020 ರ ಯುಎಸ್ ಓಪನ್‌ನಲ್ಲಿ ಐಸಾಮ್-ಉಲ್-ಹಕ್ ಖುರೇಷಿ ಜೊತೆ ಮತ್ತು 2023 ರ ಯುಎಸ್ ಓಪನ್‌ನಲ್ಲಿ ಎಬ್ಡೆನ್ ಜೊತೆ ಎರಡು ಬಾರಿ ಪುರುಷರ ಡಬಲ್ಸ್‌ನ ಫೈನಲ್​ ಆಡಿರುವ ಬೋಪಣ್ಣ, ಎರಡು ಮಿಶ್ರ ಡಬಲ್ಸ್ ಫೈನಲ್‌ಗಳನ್ನು ಸಹ ಆಡಿದ್ದಾರೆ. 2018 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಟೈಮಾ ಬಾಬೋಸ್ ಜೊತೆ ಮತ್ತು 2023 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ ಬೋಪಣ್ಣ ಮಿಶ್ರ ಡಬಲ್ಸ್ ಫೈನಲ್‌ ಆಡಿದ್ದರು. ಇದಲ್ಲದೆ ರೋಹನ್ ಬೋಪಣ್ಣ 2012 ಮತ್ತು 2015 ರಲ್ಲಿ ಮಹೇಶ್ ಭೂಪತಿ ಮತ್ತು ಫ್ಲೋರಿನ್ ಮೆರ್ಗೆಯಾ ಅವರೊಂದಿಗೆ ಎಟಿಪಿ ಫೈನಲ್ ಕೂಡ ಆಡಿದ್ದರು. Rohan Bopanna

 #ಮಡಿಕೇರಿ_ಗಾಳಿಬೀಡು_ರಸ್ತೆ_ಕಾಮಗಾರಿಗೆ_ನವೆಂಬರ್_14ಕ್ಕೆ_ಗುದ್ದಲಿ_ಪೂಜೆ.​ಕಳೆದ 25 ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದ ಬಹು ನಿರೀಕ...
02/11/2025

#ಮಡಿಕೇರಿ_ಗಾಳಿಬೀಡು_ರಸ್ತೆ_ಕಾಮಗಾರಿಗೆ_ನವೆಂಬರ್_14ಕ್ಕೆ_ಗುದ್ದಲಿ_ಪೂಜೆ.

​ಕಳೆದ 25 ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದ ಬಹು ನಿರೀಕ್ಷಿತ ಮಡಿಕೇರಿ-ಗಾಳಿಬೀಡು ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ₹3.50 ಕೋಟಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದೇ ನವೆಂಬರ್ 14 ರಂದು ಗುದ್ದಲಿ ಪೂಜೆ ನೆರವೇರಿಸಲು ತೀರ್ಮಾನಿಸಲಾಗಿದೆ.

#ಶಾಸಕ_ಡಾ_ಮಂತರ್_ಗೌಡ_ಸೂಚನೆ:
​ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು, ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ. ಗುದ್ದಲಿ ಪೂಜೆಯಾದ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಕಾಮಗಾರಿ ಪ್ರಾರಂಭವಾಗಬೇಕು ಎಂದು ಅವರು ತಿಳಿಸಿದ್ದಾರೆ.

#ಈಡೇರಿದ_25_ವರ್ಷಗಳ_ಬೇಡಿಕೆ:
​ದಶಕಗಳಿಂದಲೂ ಸಂಪೂರ್ಣ ಹಾಳಾಗಿ ಸಂಚಾರಕ್ಕೆ ದುಸ್ತರವಾಗಿದ್ದ ಈ ರಸ್ತೆಯ ದುರಸ್ತಿಗಾಗಿ ಗ್ರಾಮಸ್ಥರು ಸತತವಾಗಿ ಬೇಡಿಕೆ ಇಟ್ಟಿದ್ದರು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಈ ರಸ್ತೆ ಅಭಿವೃದ್ಧಿಗೆ ಭರವಸೆ ನೀಡಿದ್ದರು. ಅದರಂತೆ ಇದೀಗ ₹3.50 ಕೋಟಿ ಅನುದಾನದಲ್ಲಿ ಕಾಮಗಾರಿ ಆರಂಭವಾಗುತ್ತಿರುವುದು, ಕೊಟ್ಟ ಮಾತನ್ನು ಉಳಿಸಿಕೊಂಡ ಜನಪ್ರತಿನಿಧಿಯ ನೈತಿಕತೆಗೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. Mantar Gowda

02/11/2025

#ವಿರಾಜಪೇಟೆಯ_ಮೀನುಪೇಟೆಯಲ್ಲಿ_ಕಸ_ಎಸೆಯಲು_ಹೋಗುತ್ತಿರುವ_ಮುಸುಕುದಾರಿ_ಮಹಿಳೆಯರು Clean Virajpet

02/11/2025

#ಮಗುಚಿದ_ಟಿಂಬರ್_ಲಾರಿ_ಚಾಲಕ_ಪ್ರಾಣಾಪಾಯದಿಂದ_ಪಾರು.

ಶನಿವಾರ ರಾತ್ರಿ 8.30 ಗಂಟೆಗೆ ಮಕ್ಕಂದೂರಿನಿಂದ ಸಿಂಕೋನಾ ಮಾರ್ಗವಾಗಿ ಹೋಗುವ ದಾರಿಯ ಮಧ್ಯದಲ್ಲಿ ಮರದ ದಿಮ್ಮಿಗಳನ್ನು ತುಂಬಿದ ಕೆ ಎ54 3693 ಲಾರಿಯೊoದು ತೋಟದೊಳಗೆ ಮಗುಚಿ ಬಿದ್ದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

02/11/2025

#ಭಾಗಮಂಡಲ_ಅಟಲ್_ಬಿಹಾರಿ_ವಾಜಪೇಯಿ_ಶಾಲಾ_ವಿದ್ಯಾರ್ಥಿಗಳಿಂದ_ಕನ್ನಡ_ರಾಜ್ಯೋತ್ಸವದ_ಮೆರವಣಿಗೆ

 #ಅಂತರರಾಷ್ಟ್ರೀಯ_ಮಟ್ಟದ_ಕರಾಟೆ_ಚಾಂಪಿಯನ್‌ಶಿಪ್‌ನಲ್ಲಿ_2ನೇ_ಸ್ಥಾನ_ಪಡೆದ_ಕೊಡಗಿನ_ರಕ್ಷನ್. ದುಬೈನ ಅಲ್ ಮಂಝರಿನಲ್ಲಿರುವ ಅಲ್ ಇತಿಹಾದ್ ಅಂತರರಾ...
01/11/2025

#ಅಂತರರಾಷ್ಟ್ರೀಯ_ಮಟ್ಟದ_ಕರಾಟೆ_ಚಾಂಪಿಯನ್‌ಶಿಪ್‌ನಲ್ಲಿ_2ನೇ_ಸ್ಥಾನ_ಪಡೆದ_ಕೊಡಗಿನ_ರಕ್ಷನ್.

ದುಬೈನ ಅಲ್ ಮಂಝರಿನಲ್ಲಿರುವ ಅಲ್ ಇತಿಹಾದ್ ಅಂತರರಾಷ್ಟ್ರೀಯ ಶಾಲೆಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಭಾಗವಹಿಸಿದ ಗೋಣಿಕೊಪ್ಪಲಿನ ಸರ್ವದೈವತ ಶಾಲೆಯ 9ನೇ ತರಗತಿಯ ಸಿ.ಪಿ. ರಕ್ಷನ್ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಎರಡನೇ ಸ್ಥಾನ ಪಡೆದರು.

01/11/2025

#ಚೋವಂಡ_ಐನ್_ಮನೆ #ಮಗ್ಗುಲ #ವಿರಾಜಪೇಟೆ

 #ಕನ್ನಡ_ರಾಜ್ಯೋತ್ಸವದ_ಅಂಗವಾಗಿ_ಸ್ವಚ್ಛತಾ_ಜಾಗೃತಿ_ಕಾರ್ಯಕ್ರಮ ಅಬ್ಬೂರುಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚ...
01/11/2025

#ಕನ್ನಡ_ರಾಜ್ಯೋತ್ಸವದ_ಅಂಗವಾಗಿ_ಸ್ವಚ್ಛತಾ_ಜಾಗೃತಿ_ಕಾರ್ಯಕ್ರಮ

ಅಬ್ಬೂರುಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ರೆಡ್‌ಬುಲ್ಸ್ ತಂಡದ ನೇತೃತ್ವದಲ್ಲಿ ಮಹತ್ವದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ‘ನಮ್ಮ ಗ್ರಾಮ, ನಮ್ಮ ಹೊಣೆ’ ಎಂಬ ಘೋಷಣೆಯೊಂದಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಸಹಯೋಗ, ಗ್ರಾಮಪಂಚಾಯತ್ ಅಧ್ಯಕ್ಷ ವಿನೋದ್ ಕುಮಾರ್ ಹಾಗೂ ಸದಸ್ಯರ ಸಹಕಾರ, ಮಹಿಳಾ ಸ್ವಸಹಾಯ ಸಮೂಹಗಳು ಮತ್ತು ಸಮಾಜ ಸೇವಕರ ಸಹಭಾಗಿತ್ವದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ರೆಡ್‌ಬುಲ್ಸ್ ತಂಡದ ಅಧ್ಯಕ್ಷ ಅಶ್ವಥ್ ಸಿ. ಸಿ. ಮತ್ತು ಕಾರ್ಯದರ್ಶಿ ನಿತಿನ್ ಪೆರೇರಾ ಅವರ ಮಾರ್ಗದರ್ಶನದಲ್ಲಿ, ಸಮುದಾಯದ ಎಲ್ಲ ವರ್ಗಗಳ ಸಕ್ರಿಯ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ಎಸ್. ಎಂ. ಡಿ ಸಿಲ್ವಾ, ರವಿ ಕುಮಾರ್, ಮತ್ತು ಅಂಕುರಂ ವಿದ್ಯಾ ಸಂಸ್ಥೆಯ ನಿರ್ದೇಶಕರ ಮಂಡಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಮೂಲಕ ಸ್ವಚ್ಛತೆಯ ಮಹತ್ವ ಮತ್ತು ಜಾಗೃತಿಯ ಅಗತ್ಯತೆಯ ಕುರಿತು ಅರಿವು ಮೂಡಿಸಲಾಯಿತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಈ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ನಮ್ಮೆಲ್ಲರ ಹೆಮ್ಮೆಯ ಕಾರ್ಯವಾಗಿದೆ!

Address

Kushalnagar
571201

Telephone

+919900280819

Website

Alerts

Be the first to know and let us send you an email when Coorg the Kashmir of Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg the Kashmir of Karnataka:

Share