Coorg the Kashmir of Karnataka

Coorg the Kashmir of Karnataka Coorg's No 1 social media channel...Follow us for news updates, Subscribe us on YouTube and watch our videos. Support us
(406)

You can follow our Instagram profile, follow us on Threads and Twitter too ..

28/12/2025

#ಕೊಡವರ_ಗತ್ತು_ಜಗತ್ತಿಗೆ_ಗೊತ್ತು

ಕಾರ್ಯಕ್ರಮ ಒಂದರಲ್ಲಿ ವಾಲಗಕ್ಕೆ ಕುಣಿದ ವಿರಾಜಪೇಟೆಯ ಶಾಸಕರಾದ ಎ ಎಸ್ ಪೊನ್ನಣ್ಣ.

28/12/2025

#ಕುಶಾಲನಗರದಲ್ಲಿ_ಶಿವಕುಮಾರ್_ಸ್ವಾಮೀಜಿ_ವೃತ್ತ_ಉದ್ಘಾಟನೆ.

ಕುಶಾಲನಗರದಲ್ಲಿ ನಡೆದಾಡುವ ದೇವರು ಡಾ|| ಶಿವಕುಮಾರ್ ಸ್ವಾಮೀಜಿ ವೃತ್ತ ಉದ್ಘಾಟನೆ ಮಾಡಿದ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಹಾಲಿ ಶಾಸಕರಾದ ಡಾ ಮಂತರ್ ಗೌಡರು.

28/12/2025

#ವಿರಾಜಪೇಟೆ_ಗೋಣಿಕೊಪ್ಪ_ರಸ್ತೆಯ_ಬಿಟ್ಟಂಗಾಲ_ಸಮೀಪದ_ಕಾವೇರಿ_ಕಾಲೇಜಿನ_ಸಮೀಪ_ರಸ್ತೆಯಲ್ಲಿ_ಕಸದ_ರಾಶಿ.

Clean Virajpet

 #ಸಮರ್ಥ_ಸಾಹಿತ್ಯ_ಪ್ರತಿಷ್ಟಾನದ_ಪತ್ರಿಕೋದ್ಯಮ_ಪ್ರಶಸ್ತಿಗೆ_ಅನಿಲ್_ಹೆಚ್_ಟಿ_ಆಯ್ಕೆ.  ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ...
28/12/2025

#ಸಮರ್ಥ_ಸಾಹಿತ್ಯ_ಪ್ರತಿಷ್ಟಾನದ_ಪತ್ರಿಕೋದ್ಯಮ_ಪ್ರಶಸ್ತಿಗೆ_ಅನಿಲ್_ಹೆಚ್_ಟಿ_ಆಯ್ಕೆ.

ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಠಾನವು ನೀಡುವ ವಾರ್ಷಿಕ ಪ್ರಶಸ್ತಿಗೆ ಪತ್ರಿಕೋಧ್ಯಮ ಕ್ಷೇತ್ರದಿಂದ ಮಡಿಕೇರಿಯ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ.

ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಟಾನವು ವಾರ್ಷಿಕವಾಗಿ ಪತ್ರಿಕೋದ್ಯಮ, ಸಮಾಜಸೇವೆ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಉದ್ಯಮ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಗಾಂಧಿ ಪ್ರಿಯ ಹೆಸರಿನ ಪ್ರಶಸ್ತಿ ನೀಡುತ್ತಿದೆ. ಈ ವಷ೯ದ ಗಾಂಧಿ ಪ್ರಿಯ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ವಿದ್ಯುನ್ಮಾನ, ಬಾನುಲಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಸೇವೆಗಳಲ್ಲಿ ಅನಿಲ್ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರತಿಷ್ಟಾನದ ಅಧ್ಯಕ್ಷ ಎಸ್.ಆರ್. ವಿಜಯಸಮರ್ಥ್ ತಿಳಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭವು ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿತವಾಗಿದ್ದು ವಿಶ್ರಾಂತ ನ್ಯಾಯಮೂರ್ತಿ ಪಾಲಾಕ್ಷಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ಮಡಿಕೇರಿಯಲ್ಲಿ ಪತ್ರಕರ್ತರಾಗಿರುವ ಅನಿಲ್ ಟಿವಿ 1 ಚಾನಲ್ ನ ಪ್ರಧಾನ ಸಂಪಾದಕರಾಗಿದ್ದು ಆಕಾಶವಾಣಿಯ ಕೊಡಗು ಜಿಲ್ಲಾ ವರದಿಗಾರರಾಗಿದ್ದಾರೆ. ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರರು, ಪ್ರವಾಸಿ ಪ್ರಪಂಚ ವಾರಪತ್ರಿಕೆಯ ವಿಶೇಷ ಪ್ರತಿನಿಧಿಯಾಗಿದ್ದಾರೆ. ಅನಿಲ್ ಅವರಿಗೆ ದೊರಕುತ್ತಿರುವ ಪತ್ರಿಕೋದ್ಯಮದಲ್ಲೆಯೇ ದಾಖಲೆಯ 64 ನೇ ಪ್ರಶಸ್ತಿ ಇದಾಗಿದೆ.

 #ಮೇಕೇರಿಯ_ಸ್ವಾಗತ_ಯುವಕ_ಸಂಘದಿಂದ_14ನೇ_ವರ್ಷದ_ರಕ್ತದಾನ_ಶಿಬಿರ. ಮೇಕೇರಿಯಲ್ಲಿ ನಡೆದ ಸ್ವಾಗತ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಸುಶಾಸನ ದಿನದ...
28/12/2025

#ಮೇಕೇರಿಯ_ಸ್ವಾಗತ_ಯುವಕ_ಸಂಘದಿಂದ_14ನೇ_ವರ್ಷದ_ರಕ್ತದಾನ_ಶಿಬಿರ.

ಮೇಕೇರಿಯಲ್ಲಿ ನಡೆದ ಸ್ವಾಗತ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಸುಶಾಸನ ದಿನದ ಪ್ರಯುಕ್ತ 14ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ.

28/12/2025

#ಕುಶಾಲನಗರದಲ್ಲಿ_ಶಿವಕುಮಾರ_ಸ್ವಾಮೀಜಿ_ವೃತ್ತ

ಕುಶಾಲನಗರದ ಬಲಮುರಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ನೂತನವಾಗಿ ನಿರ್ಮಾಣವಾದ ನಡೆದಾಡಿದ ದೇವರು ಡಾ‌. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಭಾನುವಾರ ಲೋಕಾರ್ಪಣೆ.

 #ಕೊಡಗಿನ_ಯುವ_ಬರಹಗಾರನ_ಕವಿತೆ_ಪ್ರಕಾಶನ_ಮಾಡಲಿರುವ_ಮುಖ್ಯಮಂತ್ರಿಗಳು.ವಿಶ್ವ ರೈತ ದಿನದ ಭಾಗವಾಗಿ ಕೊಡಗಿನ ಯುವ ಬರಹಗಾರ ಶಾಫಿ ಅನ್ವಾರಿ ಕೊಡಗರಹಳ...
28/12/2025

#ಕೊಡಗಿನ_ಯುವ_ಬರಹಗಾರನ_ಕವಿತೆ_ಪ್ರಕಾಶನ_ಮಾಡಲಿರುವ_ಮುಖ್ಯಮಂತ್ರಿಗಳು.

ವಿಶ್ವ ರೈತ ದಿನದ ಭಾಗವಾಗಿ ಕೊಡಗಿನ ಯುವ ಬರಹಗಾರ ಶಾಫಿ ಅನ್ವಾರಿ ಕೊಡಗರಹಳ್ಳಿಯವರು ಬರೆದ #ರೈತ_ಮಣ್ಣಿನ_ಮಾಂತ್ರಿಕ ಎಂಬ ಕವನ ಅರ್ಥಗರ್ಭಿತ ಹಾಗೂ ಭಾವನಾತ್ಮಕವಾಗಿದ್ದು, ಕರ್ನಾಟಕ ರೈತ ಒಕ್ಕೂಟ ಹೊರತರಲಿರುವ #ಅನ್ನದಾತ ವಿಶೇಷ ಸಂಚಿಕೆಯಲ್ಲಿ ಪ್ರಸ್ತುತ ಕವನವು ಪ್ರಕಟವಾಗಲಿದೆ. ಸನ್ಮಾನ್ಯ ಮುಖ್ಯಮಂತ್ರಿಯವರು ಪ್ರಕಾಶನ ಮಾಡಲಿದ್ದಾರೆ.

 #ಪತ್ರಕರ್ತ_ಚಂದನ್_ನಂದರಬೆಟ್ಟುರವರಿಗೆ_ನಾಡೋಜ_ಡಾ_ಕಯ್ಯಾರ_ರಾಷ್ಟ್ರೀಯ_ಪ್ರಶಸ್ತಿ_2026.ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯ...
28/12/2025

#ಪತ್ರಕರ್ತ_ಚಂದನ್_ನಂದರಬೆಟ್ಟುರವರಿಗೆ_ನಾಡೋಜ_ಡಾ_ಕಯ್ಯಾರ_ರಾಷ್ಟ್ರೀಯ_ಪ್ರಶಸ್ತಿ_2026.

ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಕಾಸರಗೋಡು ಇದರ ರಜತ ಸಂಭ್ರಮದ ಶುಭ ಕಾರ್ಯಕ್ರಮವಾದ “ನಾಡು -ನುಡಿ ಸಂಭ್ರಮ
2026, 18-01-2026 ರಂದು ಕಾಸರಗೋಡು
ಕನ್ನಡ ಭವನ ರಜತ ಮಂಟಪ ವೇದಿಕೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮ ದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯ ಪತ್ರಕರ್ತ, ಲೇಖಕ ಹಾಗು ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಎಲೆಮರೆ ಕಾಯಿಯಂತಿರುವ ಚಂದನ್ ನಂದರಬೆಟ್ಟು ಇವರೀಗೆ ಕನ್ನಡ ಭವನ ಕೊಡಮಾಡುವ ಪ್ರತಿಷ್ಠಿತ *ರಾಷ್ಟ್ರ ಪ್ರಶಸ್ತಿಯಾದ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ,” 2026* ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

#ಪತ್ರಕರ್ತ_ಸಮಾಜಸೇವಕ_ಚಂದನ್_ನಂದರಬೆಟ್ಟು

ಗಾಳಿಬೀಡು ಗ್ರಾಮದ. ನಿವೃತ್ತ ಸಬ್ ಇನ್ಸ್ಪೆಕ್ಟರ್ ಕೃಷ್ಣ ಎನ್ ಎಂ ಹಾಗು ಜಯಲಕ್ಷ್ಮಿ ಎನ್ ಕೆ ಇವರ ಪುತ್ರರಾಗಿರುವ ಚಂದನ್ ನಂದರಬೆಟ್ಟು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗಾಳಿಬೀಡು ಗ್ರಾಮದ ಸರಕಾರಿ ಶಾಲೆಗಳಲ್ಲಿ ಮುಗಿಸಿ ಬಳಿಕ ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಪದವಿಪೂರ್ವ ವ್ಯಾಸಂಗ ಹಾಗು
ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು ಮಡಿಕೇರಿಯಲ್ಲಿ ಬಿ ಕಾಂ ಪದವಿಯನ್ನು ಓದಿ ಆನಂತರ ತಮ್ಮದೇ ಶೈಲಿಯಲ್ಲಿ ಬರವಣಿಗೆಯನ್ನು ಆರಂಭಿಸಿ ಲೇಖನ, ಕಥೆ, ಕವನ, ವಿಮರ್ಶೆಗಳ ಮುಖಾಂತರ ಜನಮನಗೆದ್ದವರು. ಸಮಾಜಮುಖಿ ಚಿಂತನೆಗಳತ್ತ ಹೆಚ್ಚು ಒಲವು ತೋರುವ ಇವರ ಪತ್ರಿಕಾ ವರದಿಗಳು ಬಹಳಷ್ಟು ಸರಕಾರದ ಸೌಲಭ್ಯಗಳು ಜನರನ್ನು ತಲುಪುವಂತೆ ಮಾಡಿದೆ.

ಸಮಾಜ ಸೇವೆಯಲ್ಲಿ ತನ್ನದೇ ಕೊಡುಗೆ ನೀಡುತ್ತಿರುವ ಇವರು ಹದಿನೆಂಟು ಬಾರಿ ರಕ್ತದಾನ ಮಾಡಿದ್ದಾರೆ ಹಾಗು ಮರಣಾನಂತರ ತಮ್ಮ ಕಣ್ಣುಗಳನ್ನು ಮತ್ತು ದೇಹವನ್ನು ದಾನಮಾಡಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಷ್ಟದಲ್ಲಿರುವವರಿಗೆ ಸದಾ ನೆರವನ್ನು ನೀಡುವ ಇವರು ಎಲ್ಲಿಯೂ ಪ್ರಚಾರದ ಕಡೆಗೆ ಒಲವನ್ನು ತೋರಿದವರಲ್ಲ. ಆ ಕಾರಣಕ್ಕೆಂದೇ ಈ ಒಂದು ಲೇಖನವನ್ನು ನಿಮ್ಮ ಮುಂದಿಡುತ್ತಿರುವೆ.

ಮೂಲತಃ ವಿಟ್ಲದ ಕನ್ಯಾನ ಗ್ರಾಮದವರಾದ ಇವರು ಈಗ ಕೊಡಗಿನ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾಮದಲ್ಲಿ ನೆಲೆಸಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ಪತ್ರಿಕಾ ರಂಗದ ಮೊದಲ ಹೆಜ್ಜೆಯಾಗಿ ಶ್ರೀಧರ್ ನೆಲ್ಲಿತ್ತಾಯ ಸಾರಥ್ಯದ ಕೂರ್ಗ್ ಎಕ್ಸ್‌ಪ್ರೆಸ್‌ ವಾರಪತ್ರಿಕೆ ಹಾಗು ಚಾನಲ್ ಕೂರ್ಗ್ ನ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು ಬಳಿಕ ಸ್ಥಳೀಯ ಹಾಗು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ವಿಶ್ವದೂತ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತಿದ್ದಾರೆ. ವಿಜಯಕರ್ನಾಟಕ ದಿನಪತ್ರಿಕೆಯ ಹವ್ಯಾಸಿ ಬರಹಗಾರರೂ ಹೌದು.

#ಕನ್ನಡದ_ಮೊದಲ_ಪುಸ್ತಕ

ನೆತ್ತರು ಎನ್ನುವ ರಕ್ತಕ್ಕೆ ಸಂಬಂಧಿಸಿದ ಸಮಸ್ತ ವಿವರಗಳುಳ್ಳ ಪುಸ್ತಕವನ್ನೂ ಪ್ರಕಟಿಸಿದ್ದು, ಕನ್ನಡದಲ್ಲಿ ಈ ರೀತಿ ರಕ್ತಕ್ಕೆ ಸಂಬಂಧಿಸಿದ ಪೂರ್ತಿ ವಿವರಗಳುಳ್ಳ ಮೊದಲ ಪುಸ್ತಕ ಎನ್ನುವ ದಾಖಲೆ ಈ ಪುಸ್ತಕದ್ದು.

ನಗುಮುಖದಿಂದಲೇ ಎಲ್ಲರೊಡನೆ ಬೆರೆಯುವ ಇವರ ಸ್ನೇಹಿತರ ಪಡೆ ಬಹಳಾ ದೊಡ್ಡದು. ಯಾರನ್ನೇ ಆದರೂ ಮಾತುಗಳಿಂದ ತಮ್ಮೆಡೆಗೆ ಸೆಳೆದುಕೊಳ್ಳುವ ತಾಕತ್ತು ಇವರ ನಗುಮುಖದ ಮಾತಿಗಿದೆ. ಪ್ರವಾಸವೆಂದರೆ ಗೊತ್ತುಗುರಿ ಇಲ್ಲದೆ ಪ್ರಯಾಣಿಸುವ ಇವರಿಗೆ ಒಬ್ಬಂಟಿಯಾಗಿ ಪ್ರವಾಸ ಹೋಗುವುದು ಬಹಳಾ ಖುಷಿಯ ವಿಚಾರ. ಇದಲ್ಲದೆ ಕಂಟೆಂಟ್ ಕ್ರಿಯೇಷನ್, ಕಿರುಚಿತ್ರಗಳಲ್ಲಿ ನಟಿಸುವುದು, ಪ್ರಾಚೀನ ವಸ್ತುಗಳ ಸಂಗ್ರಹಣೆ, ಪುಸ್ತಕ ಓದುವಿಕೆ, ಪುಸ್ತಕ ಸಂಗ್ರಹ ಹೀಗೆ ಬಹಳಷ್ಟು ಹವ್ಯಾಸಗಳನ್ನು ತಮ್ಮ ಬದುಕಿನ ಆನಂದಕ್ಕೆ ಅವಲಂಬಿಸಿಕೊಂಡಿದ್ದಾರೆ. ಎರಡರಿಂದ ಎರಡೂವರೆ ಸಾವಿರ ಪುಸ್ತಕಗಳ ಸಂಗ್ರಹ ಇವರ ಬಳಿ ಇದೆ.

#ಕಾಲೇಜು_ದಿನಗಳಲ್ಲೇ_ಸಮಾಜ_ಸೇವೆಯತ್ತ_ಆಸಕ್ತಿ

ಪದವಿ ವ್ಯಾಸಂಗ ಮಾಡುತ್ತಿದ್ದಾಗಲೇ ರಾಷ್ಟ್ರೀಯ ಸೇವಾ ಯೋಜನೆಯನ್ನು ಸೇರಿ ಸಮಾಜಮುಖಿ ಕೆಲಸಗಳನ್ನು ಮಾಡಲಾರಂಭಿಸಿದ್ದರು.
ಕಾಲೇಜು ದಿನಗಳಲ್ಲಿ ಸತತವಾಗಿ ಮೂರು ವರ್ಷ ಅತ್ಯುತ್ತಮ ಎನ್ ಎಸ್ ಎಸ್ ಸ್ವಯಂ ಸೇವಕ ಪ್ರಶಸ್ತಿ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅತ್ಯುತ್ತಮ ಎನ್ ಎಸ್ ಎಸ್ ಸ್ವಯಂ ಸೇವಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಹಾಗು ತಮ್ಮ ಸಮಾಜ ಸೇವೆಗಾಗಿ ಸಂಘ ಸಂಸ್ಥೆಗಳಿಂದ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.

#ಕೊಡಗು_ಜಿಲ್ಲಾ_ಕಾರ್ಯನಿರತ_ಪತ್ರಕರ್ತರ_ಸಂಘದ_ವಾರ್ಷಿಕ_ಜಿಲ್ಲಾ_ಪ್ರಶಸ್ತಿ.

ಶಕ್ತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಳೆದುಹೋದವಳ ಏಳು ವರ್ಷಗಳ ಬಳಿಕ‌ ಕೈಹಿಡಿದು ಕರೆದೊಯ್ದರು : ನೆರಳು ಕೊಟ್ಟ ತನಲ್ ನಸುನಗುತ್ತಿತ್ತು. ಎನ್ನುವ ವರದಿಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ಮಾನವೀಯ ವರದಿಗಾಗ ಜಿಲ್ಲಾ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಾಸರಗೋಡು ಕನ್ನಡ ಭವನದಿಂದ ಕೊಡಮಾಡುವ 2025 ನೇ ಸಾಲಿನ ಪ್ರತಿಷ್ಠಿತ ಅಂತರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

#ಕೋವಿಡ್_ವಾರಿಯರ್_ಆಗಿ_ಕೆಲಸ.

ಎಲ್ಲೆಡೆ ಕೋವಿಡ್ ಆವರಿಸಿಕೊಂಡು ಜನರು ಮನೆಯಿಂದ ಹೊರಬರಲು ಭಯಾತಂಕಗಳಿಂದ ಇದ್ದಂತಹ ದಿನಗಳಲ್ಲಿ ಸೀಲ್ ಮಾಡಿದ್ದ ಮನೆಗಳಲ್ಲಿನ ಜನರಿಗೆ ಊಟ ನೀಡಿ, ನಗರದಲ್ಲಿ ವಾಸಿಸುತಿದ್ದ ಅಸಹಾಯಕರು, ಪ್ರಾಣಿಗಳಿಗೆ ಆಹಾರ ನೀಡವಲ್ಲಿ ಬಹಳಷ್ಟು ಮುತುವರ್ಜಿ ವಹಿಸಿದ್ದನ್ನು ನಾವು ಪ್ರಶಂಸಿಸಲೇಬೇಕು.

#ವಿದ್ಯಾರ್ಥಿಗಳ_ವಿದ್ಯಾಭ್ಯಾಸಕ್ಕೆ_ನೆರವು.

ಕೊಡಗಿನಲ್ಲಿ ಇವರಿಗೆ ಪರಿಚಿತರಿರುವ ವಿದ್ಯಾರ್ಥಿಗಳಿಗೆ, ಬಡತನವೋ ಅಥವಾ ಇನ್ಯಾವುದೋ ಕಾರಣದಿಂದ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಮಸ್ಯೆ ಬಂದಂತಹ ಸಂದರ್ಭದಲ್ಲಿ ತಮ್ಮ ಕೈಯಿಂದಾಗುವಷ್ಟು ನೆರವು ಒದಗಿಸುವ ಮೂಲಕ ಅವರ ಓದಿಗೆ ಪ್ರೋತ್ಸಾಹ ನೀಡುವ ಸಹೃದಯಿ.
ಈಗಾಗಲೇ ಐದಾರು ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚಗಳನ್ನು ಇವರೇ ಭರಿಸುತ್ತಿರುವುದು ಹೆಮ್ಮೆಯ ವಿಚಾರ. ಇವರ ಈ ಸಹಾಯಹಸ್ತ ಇತರರಿಗೂ ಪ್ರೇರೇಪಣೆಯಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವು ಸಿಗುವಂತಾಗಲಿ.

#ಅನಾರೋಗ್ಯ_ಪೀಡಿತ_ವ್ಯಕ್ತಿಗೆ_ಚಿಕಿತ್ಸೆ.

ಮಡಿಕೇರಿಯಲ್ಲಿ ಅನಾರೋಗ್ಯಕ್ಕೀಡಾಗಿ ಮಾನಸಿಕವಾಗಿ ಅಸ್ವಸ್ಥರಾಗಿದ್ದವರೋರ್ವರನ್ನು ಯಾರೂ ಸಹಾಯಕ್ಕೆ ನೆರವಾಗದಂತಹ ಸಂದರ್ಭದಲ್ಲಿ ತಕ್ಷಣ ಕಾರ್ಯತತ್ಪರರಾಗಿ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯದ ಮೇಲ್ವಿಚಾರಕರಾದ ಸತೀಶ್ ಅವರೊಡಗೂಡಿ ಆಂಬ್ಯುಲನ್ಸ್ ನಲ್ಲಿ ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆಗೆ ನೆರವಾದ ವಿಚಾರ ಮಾತ್ರ ಚಂದನ್ ನಂದರಬೆಟ್ಟು ಅವರ ಮನದಾಳದಲ್ಲೇ ಭದ್ರವಾಗಿದೆ. ಇಲ್ಲಿ ಸತೀಶ್ ಅವರ ಕಾರ್ಯವನ್ನೂ ಮೆಚ್ಚಲೇಬೇಕು.

ಸದಾ ಜನರ ಕಾಳಜಿಯನ್ನು ಬಯಸುವ ಇವರು ಸಮಾಜದಲ್ಲಿ ತಪ್ಪು ಕಂಡರೆ ಪ್ರತಿಭಟಿಸುವುದರ ಮೂಲಕ ತಪ್ಪನ್ನು ಪ್ರಶ್ನಿಸುತ್ತಾರೆ ಹಾಗು ಆ ತಪ್ಪು ಮರುಕಳಿಸದಂತೆ ಎಚ್ಚರಿಕೆಯನ್ನೂ ನ್ಯಾಯಯುತವಾಗಿ ನೀಡುತ್ತಾರೆ. ಇದಕ್ಕೆ ಉದಾಹರಣೆ ಕೆಲದಿನಗಳ ಹಿಂದೆ ಕಾಟಿಕೇರಿ ಬಳಿ ಮಂಗಳೂರು ಮುಖ್ಯ ರಸ್ತೆ ಬದಿಯಲ್ಲಿನ ಹೋಟೇಲ್ ಒಂದರಲ್ಲಿನ ಅಶುದ್ಧತೆಯ ಬಗ್ಗೆ ಅಧಿಕಾರಿಗಳ ಗಮನಸೆಳೆದು ಹೊಟೇಲ್ ಸ್ವಚ್ಛಗೊಳಿಸಿದ ಪ್ರಕರಣ. ಹೀಗೆ ಜನರಿಗೆ ನೆರವಾಗಬೇಕಾದ ಸರ್ಕಾರದ ಸವಲತ್ತುಗಳ ಕುರಿತಾಗಿ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸುತ್ತಲೇ ಇರುವ ಸಾಮಾಜಿಕ ಕಾಳಜಿಗೆ ಜನರ ಬೆಂಬಲವೂ ಬಹಳಾ ಮುಖ್ಯ.

ಪ್ರಸ್ತುತ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ, ಕೊಡಗು ಕನ್ನಡ ಭವನದ ಪ್ರಧಾನ ಕಾರ್ಯದರ್ಶಿಯಾಗಿ, ಕೊಡಗು ಚುಟುಕು ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿಯಾಗಿ ಹಾಗು ಕೋದಂಡ ರಾಮ ದೇವಾಲಯದ ರಾಮೋತ್ಸವ ಸಮಿತಿಯ ಸಹಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

28/12/2025

#ವಾಹನ_ಸವಾರರೇ_ಎಚ್ಚರ

 #ಸ್ವಾಮಿಯೇ_ಶರಣಂ_ಅಯ್ಯಪ್ಪ.ಕೊಡಗು ಜಿಲ್ಲೆಯ ಗಡಿಭಾಗ ಕರಿಕೆ ಗ್ರಾಮದಿಂದ ಶಬರಿಮಲೆಗೆ ಪಾದಯಾತ್ರೆಯ ಮೂಲಕ ಹೊರಟ ಅಯ್ಯಪ್ಪ ಮಾಲಾಧಾರಿಗಳಾದ  #ನಾಗರಾ...
27/12/2025

#ಸ್ವಾಮಿಯೇ_ಶರಣಂ_ಅಯ್ಯಪ್ಪ.

ಕೊಡಗು ಜಿಲ್ಲೆಯ ಗಡಿಭಾಗ ಕರಿಕೆ ಗ್ರಾಮದಿಂದ ಶಬರಿಮಲೆಗೆ ಪಾದಯಾತ್ರೆಯ ಮೂಲಕ ಹೊರಟ ಅಯ್ಯಪ್ಪ ಮಾಲಾಧಾರಿಗಳಾದ #ನಾಗರಾಜ_ಅಳತಿಕಡವು, #ತೀರ್ಥಹಕುಮಾರ್_ಅಳತಿಕಡವು ಮತ್ತು
#ಜೀವನ್_ಅಳತಿಕಡವು ಪಾದಯಾತ್ರೆಯ ಮೂಲಕ ಸುಮಾರು 509 ಕಿಮೀ ಅಯ್ಯಪ್ಪ ಸ್ವಾಮಿಯನ್ನು ಜಪಿಸುತ್ತಾ 16 ದಿನಗಳಲ್ಲಿ ಶಬರಿಮಲೆ ತಲುಪಲಿದ್ದಾರೆ .

 #ದಶಕಗಳಿಂದ_ಕೊಡಗನ್ನು_ಕಾಡುತ್ತಿದ್ದ_ಸಮಸ್ಯೆಗೆ_ಪರಿಹಾರ_ಶಾಸಕರಿಗೆ_ಕೆಎಂಎ_ಅಭಿನಂದನೆ.ಕೊಡಗಿನ ಹಿಡುವಳಿದಾರರನ್ನು  ದಶಕಗಳದಿಂದ ಕಾಡುತ್ತಿದ್ದ ಜಿ...
27/12/2025

#ದಶಕಗಳಿಂದ_ಕೊಡಗನ್ನು_ಕಾಡುತ್ತಿದ್ದ_ಸಮಸ್ಯೆಗೆ_ಪರಿಹಾರ_ಶಾಸಕರಿಗೆ_ಕೆಎಂಎ_ಅಭಿನಂದನೆ.

ಕೊಡಗಿನ ಹಿಡುವಳಿದಾರರನ್ನು ದಶಕಗಳದಿಂದ ಕಾಡುತ್ತಿದ್ದ ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ಕರ್ನಾಟಕ ಕಂದಾಯ ಕಾನೂನು 1964ರ ತಿದ್ದುಪಡಿ ವಿಧೇಯಕ (Karnataka Land Revenue Amendment Bill, 2025) ವನ್ನು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಇಂದು ಸನ್ಮಾನಿಸಿ ಧನ್ಯವಾದಗಳು ಸಲ್ಲಿಸಲಾಯಿತು.

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಮಾನ್ಯ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿಯವರ ನೇತೃತ್ವದಲ್ಲಿ ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ಪೊನ್ನಣ್ಣನವರನ್ನು ಭೇಟಿ ಮಾಡಿದ ಕೆಎಂಎ ನಿಯೋಗ, ಅವರಿಗೆ ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸನ್ಮಾನಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಎ ಅಧ್ಯಕ್ಷರಾದ ಸೂಫಿ ಹಾಜಿ, ಈ ಮಸೂದೆ ಶಾಸನಸಭೆಯಲ್ಲಿ ಅಂಗೀಕಾರಗೊಂಡಿರುವುದರಿಂದ ಜಮ್ಮಾ ಹಿಡುವಳಿದಾರರ ಬಹುಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಂತಾಗಿದೆ. ಇದಕ್ಕಾಗಿ ಕೊಡವ ಮುಸ್ಲಿಂ ಸಮುದಾಯದ ಪರವಾಗಿ ಶಾಸಕರಾದ ಪೊನ್ನಣ್ಣನವರನ್ನು ಸೇರಿದಂತೆ ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು.

ಶಾಸಕರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ ನ ಆಡಳಿತ ಮಂಡಳಿ ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ಸಂಘಟನಾ ಕಾರ್ಯದರ್ಶಿ ಮೀತಲ್ತಂಡ ಇಸ್ಮಾಯಿಲ್, ಹಿರಿಯ ನಿರ್ದೇಶಕರಾದ ಚಿಮ್ಮಿಚೀರ ಇಬ್ರಾಹಿಂ ಹಾಜಿ, ನಿರ್ದೇಶಕರಾದ ಮಂಡೇoಡ ಎ. ಮೊಯ್ದು, ಕೋಳುಮಂಡ ರಫೀಕ್, ಕತ್ತಣಿರ ಅಂದಾಯಿ, ಕುಂಡಂಡ ರಜ್ಹಾಕ್, ಪರವಂಡ ಎ. ಸಿರಾಜ್ ಹಾಗೂ ಕೆಎಂಎ ಸದಸ್ಯರೂ ಆಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಪಟ್ಟಿಯಡ ಎ. ಹನೀಫ್ ಅವರು ಉಪಸ್ಥಿತರಿದ್ದರು.

27/12/2025

😍

Address

Kushalnagar
571201

Telephone

+919900280819

Website

Alerts

Be the first to know and let us send you an email when Coorg the Kashmir of Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg the Kashmir of Karnataka:

Share