Shakthi Daily

Shakthi Daily 'Shakthi' is the first Kannada daily in Kodagu started in the year 1957 by late BS Gopalakrishna.

Shathi Daily, is the first Kannada daily newspaper of Kodagu established in 1957 by late BS Gopalakrishna. With the motto, 'ನ್ಯಾಯಪಾಲನೆ ನಮ್ಮ ಯುಕ್ತಿ, ನ್ಯಾಯದರ್ಶನ ನಮ್ಮ ಶಕ್ತಿ', the newspaper has been giving strength and voice to the people of Kodagu ever since. Always abiding by the truth and publishing first-hand news, the paper has managed to win the hearts of the people of Kodagu and has now success

fully stepped into its 66th year. Today, it is managed by sons of late BS Gopalakrishna -
Editor and Administrator - G Chidvilas
Chief Editor - G Rajendra
Consultant Editor - BG Ananthashayana

The other two sons, passed on souls, of Late BS Gopalakrishna - Yedumani and Sandhya - have lent their best hands in the upbringing of 'Shakthi'.

ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ಯೋಜನೆ ಕೈ ಬಿಟ್ಟ ಸರಕಾರಮಡಿಕೇರಿ, ಆ. ೧೩: ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿ ವ್ಯಾಪಕ ವಿರ...
14/08/2025

ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ಯೋಜನೆ ಕೈ ಬಿಟ್ಟ ಸರಕಾರ

ಮಡಿಕೇರಿ, ಆ. ೧೩: ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿ ವ್ಯಾಪಕ ವಿರೋಧಕ್ಕೆ ಒಳಗಾಗಿದ್ದ ರಾಜಾಸೀಟ್‌ನಲ್ಲಿ ‘ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್’ ನಿರ್ಮಾಣ ಯೋಜನೆಯನ್ನು ಕೊನೆಗೂ ರಾಜ್ಯ ಸರಕಾರ ಕೈ ಬಿಟ್ಟಿರುವ ಕುರಿತು ‘ಶಕ್ತಿ’ಗೆ ಅಧಿಕೃತ ಮೂಲಗಳು ದೃಢಪಡಿಸಿದ್ದು, ಇದನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕೂಡ ಒಪ್ಪಿಕೊಂಡಿದ್ದಾರೆ.

ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಕೇಂದ್ರಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ರಾಜಾಸೀಟ್ ತನ್ನ ವಾತಾವರಣ, ಪರಿಸರ ಹಾಗೂ ವಿಹಂಗಮ ನೋಟದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಹಚ್ಚ ಹಸಿರನ್ನು ಹೊದ್ದು ಮಲಗಿರುವ ಈ ಜಾಗದಲ್ಲಿ ಸೂರ್ಯಸ್ತಮಾನ ನೋಡುವುದೇ ಒಂದು ಆಹ್ಲಾದಕರ ಅನುಭವವಾಗಿದೆ. ವಾಯು ವಿಹಾರಕ್ಕಂತೂ ಹೇಳಿ ಮಾಡಿಸಿದ ಈ ಜಾಗ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರಿಗೂ ಅಚ್ಚುಮೆಚ್ಚು. ಇಂತಹ ಜಾಗದಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದ್ದಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗುವುದರೊಂದಿಗೆ ಭೌಗೋಳಿಕ ಸಮಸ್ಯೆಗಳಿಂದ ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪದಂತಹ ಅನಾಹುತಗಳು ಸಂಭವಿಸುತ್ತವೆೆ ಎಂಬ ವಿರೋಧ ಜಿಲ್ಲೆಯ ಜನರಿಂದ ವ್ಯಕ್ತವಾಗತೊಡಗಿತ್ತು. ರಾಜಕೀಯವಾಗಿಯೂ ಪರ-ವಿರೋಧದ ಚರ್ಚೆಗೂ ಒಳಗಾಗಿತ್ತು.

For more details: log onto

Shakthi Daily is the first Kannada daily newspaper of Kodagu established in 1957 by late BS Gopalakrishna with the motto ನ್ಯಾಯಪಾಲನೆ ನಮ್ಮ ಯುಕ್ತಿ, ನ್ಯಾಯದರ್ಶನ ನಮ್ಮ ಶಕ್ತ

ವಿಜ್ಞಾನ ಅಂಕಣ
25/07/2025

ವಿಜ್ಞಾನ ಅಂಕಣ

'ದೇವರಲ್ಲಿ ಮುಗ್ಧತೆಯ ಮೊರೆ'
23/07/2025

'ದೇವರಲ್ಲಿ ಮುಗ್ಧತೆಯ ಮೊರೆ'

05/07/2025
05/07/2025
From hand typesetting to offset printing, Shakthi has come a long way and the immense support from its readers has been ...
27/06/2025

From hand typesetting to offset printing, Shakthi has come a long way and the immense support from its readers has been a blessing. Shakthi Daily as seen in the 1980s.

07/02/2025

ಮಡಿಕೇರಿಯಲ್ಲಿ ಕೊಡವರ ಪಾದಯಾತ್ರೆ

ಸಹಸ್ರಾರು ಮಂದಿಯ ನಮನದೊಂದಿಗೆ ಪಂಚಭೂತಗಳಲ್ಲಿ ಲೀನನಾದ ಯೋಧಸೋಮವಾರಪೇಟೆ, ಜ. ೧: ೨೦೨೪ರ ಡಿಸೆಂಬರ್ ೨೪ರಂದು ಸೇನಾ ಕರ್ತವ್ಯದಲ್ಲಿದ್ದಾಗಲೇ ವಾಹನ ಅ...
02/01/2025

ಸಹಸ್ರಾರು ಮಂದಿಯ ನಮನದೊಂದಿಗೆ ಪಂಚಭೂತಗಳಲ್ಲಿ ಲೀನನಾದ ಯೋಧ
ಸೋಮವಾರಪೇಟೆ, ಜ. ೧: ೨೦೨೪ರ ಡಿಸೆಂಬರ್ ೨೪ರಂದು ಸೇನಾ ಕರ್ತವ್ಯದಲ್ಲಿದ್ದಾಗಲೇ ವಾಹನ ಅವಘಡಕ್ಕೀಡಾಗಿ ಡಿ.೨೯ರಂದು ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆಲೂರು ಸಿದ್ದಾಪುರದ ಯೋಧ ಪಳಂಗೋಟು ದಿವಿನ್ (೩೧) ಅವರ ಪಾರ್ಥಿವ ಶರೀರಕ್ಕೆ ಸಹಸ್ರಾರು ಮಂದಿ ಅಭಿಮಾನಗಳ ಅಂತಿಮ ನಮನದೊಂದಿಗೆ ಸೇನಾ ಗೌರವ ಸಹಿತ ಸ್ವಗ್ರಾಮದಲ್ಲಿ ಅಗ್ನಿಸ್ಪರ್ಶ ಮಾಡಲಾಯಿತು.

ಇಂದು ಬೆಳಿಗ್ಗೆ ಕುಶಾಲನಗರದಿಂದ ಕೂಡಿಗೆ, ಹೆಬ್ಬಾಲೆ ಮಾರ್ಗವಾಗಿ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಆಲೂರುಸಿದ್ದಾಪುರಕ್ಕೆ ಮಧ್ಯಾಹ್ನ ೧೨.೦೫ಕ್ಕೆ ತರಲಾಯಿತು. ಆಲೂರುಸಿದ್ದಾಪುರ ಸರ್ಕಾರಿ ಪ್ರೌಢಶಾಲೆ-ಕಾಲೇಜು ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಸೋಮವಾರಪೇಟೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ, ಕೊಣನೂರು, ಹಂಡ್ರAಗಿ, ಕಣಗಾಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಮೈದಾನಕ್ಕೆ ಆಗಮಿಸಿ ಮೃತ ದಿವಿನ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
https://shorturl.at/EFJMK

ಕೊಡಗಿನ ಯುವಕನ ಪಾರ್ಥಿವ ಶರೀರದ ಅಸ್ಥಿ ದಾನಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆದ ಪ್ರಕ್ರಿಯೆ* ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನಕಾರಿ.ಮಡಿಕೇರಿ, ಡ...
24/12/2024

ಕೊಡಗಿನ ಯುವಕನ ಪಾರ್ಥಿವ ಶರೀರದ ಅಸ್ಥಿ ದಾನ

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆದ ಪ್ರಕ್ರಿಯೆ* ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನಕಾರಿ.
ಮಡಿಕೇರಿ, ಡಿ. ೨೩: ಕರ್ನಾಟಕ–ಅಂಗಾAಗ ದಾನದ ಗಮನಾರ್ಹ ಮತ್ತು ನಿಸ್ವಾರ್ಥ ಕ್ರಿಯೆ ನಿನ್ನೆ ನಡೆದಿದೆ. ಕೊಡಗಿನ ಸೋಮವಾರಪೇಟೆ ತಾಲೂಕು ಜಂಬೂರು ಗ್ರಾಮದ ನಿವಾಸಿ ಈಶ್ವರ್ ಎನ್(೩೨) ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು ದುರಂತವಾಗಿ ಸಾವನ್ನಪ್ಪಿದರು. ಈಶ್ವರ್ ಅವರನ್ನು ಮಂಗಳೂರಿನ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಗಾಯಗಳಿಗೆ ಚಿಕಿತ್ಸೆ ನೀಡಲಾಯಿತು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವರು ನಿನ್ನೆ ಬೆಳಿಗ್ಗೆ ೧೦ ಗಂಟೆಗೆ ನಿಧನರಾದರು. ತಾ. ೨೧ರ ರಾತ್ರಿ ಸುಮಾರು ೧೦-೩೦ರ ಸುಮಾರಿಗೆ ಸುಂಟಿಕೊಪ್ಪದಿAದ ಜಂಬೂರಿಗೆ ಈಶ್ವರ್ ತಮ್ಮ ಪಿಕಪ್ ವಾಹನದಲ್ಲಿ (ಕೆಎ-೦೪ - ಡಿ-೩೫೫೦) ಮನೆಗೆ ಹಿಂದಿರುಗುವ ಸಂದರ್ಭ ಗರಗಂದೂರು ಬಳಿ ವಾಹನ ಕಲ್ಲೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಪರಿಣಾಮ ಗಾಯಗೊಂಡು ವಾಹನದ ಅಡಿಯಲ್ಲಿ ಈಶ್ವರ್ ಸಿಲುಕಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಆಗಮಿಸಿ ಸಿಲುಕಿಕೊಂಡಿದ್ದ ಚಾಲಕನನ್ನು ವಾಹನದಿಂದ ತೆಗೆದು, ತುರ್ತಾಗಿ ಮಂಗಳೂರಿಗೆ ಸಾಗಿಸಿ ಅಲ್ಲಿನ ದೇರಳಕಟ್ಟೆಯಲ್ಲಿರುವ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಈಶ್ವರ್ ನಿಧನರಾದರು. ಅವಿವಾಹಿತರಾಗಿದ್ದ ಈಶ್ವರ್ ತನ್ನ ತಂದೆ ನಂಜಪ್ಪ ಹಾಗೂ ತಾಯಿ ಗೌರಮ್ಮ ಮತ್ತು ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ. ಪಿಕಪ್ ಚಾಲಿಸಿ ಬಾಡಿಗೆ ಮೂಲಕವೇ ಬದುಕು ಸಾಗಿಸುತ್ತಿದ್ದ ಈಶ್ವರ್ ಜೀವನ ಯಾತ್ರೆ ಮುಕ್ತಾಯಗೊಂಡಿದ್ದರೂ ಅವರ ಪೋಷಕರು, ಸಹೋದರಿಯರು, ಬಾವಂದಿರು ಈಶ್ವರ್‌ನ ಅಸ್ಥಿಗಳನ್ನು ಪರರ ಅನುಕೂಲಕ್ಕಾಗಿ ಆಸ್ಪತ್ರೆಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸಾರ್ಥಕಗೊಳಿಸಿದ್ದಾರೆ. ಮೃತನÀ ಸಹೋದರಿ ಸೌಮ್ಯ ತನ್ನ ತಮ್ಮ ಸಾಯುವುದು ಖಾತರಿಯಾದಾಗಲೇ ಆತನ ಅಸ್ಥಿಗಳನ್ನು ದಾನ ಮಾಡಲು ವಿಶೇಷ ಆಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ಕೆ ಕುಟುಂಬದ ಇತರರು ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೆಗ್ಡೆ ಆಸ್ಪತ್ರೆಯ ಕಸಿ ಸಂಯೋಜಕರಾದ ಶ್ರೀಮತಿ ಅಕ್ಷತಾ ಶೆಟ್ಟಿ ಮತ್ತು ನರಗಳÀ ಶಸ್ತ್ರಚಿಕಿತ್ಸಕರು ಸೇರಿದಂತೆ ವೈದ್ಯಕೀಯ ತಂಡದಿAದ ಈ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಬಳಿಕ ಈಶ್ವರ ಅವರ ಸಹೋದರಿ ಸೌಮ್ಯ ಅವರು ಮೂಳೆಗಳನ್ನು ಕಸಿ ನಿರ್ವಹಣೆಗಾಗಿ ದಾನ ಮಾಡಲು ಒಪ್ಪಿಕೊಂಡರು. ಕುಟುಂಬದ ಖಚಿತ ಸಮ್ಮತಿ ಬಳಿಕ ಈ ಸಂಬAಧ ಪ್ರಕ್ರ‍್ರಿಯೆಗಳನ್ನು ಪೂರ್ಣಗೊಳಿಸಲಾಯಿತು.
ಇದರಿಂದಾಗಿ ಗಾಯಾಳು ಈಶ್ವರ್ ಸಾವಿಗೀಡಾದೊಡನೆಯೇ ಮೂಳೆಗಳನ್ನು ಬೇರ್ಪಡಿಸುವ ಕಾರ್ಯ ಸುಲಭಗೊಂಡು ಸಫಲವಾಯಿತು.
ಆರ್ಥೋಪೆಡಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಿಕ್ರಂ ಶೆಟ್ಟಿ ನೇತೃತ್ವದಲ್ಲಿ ಪ್ರೊ.ಎಂ.ಶಾAತಾರಾಮ ಶೆಟ್ಟಿ ಟಿಶ್ಯೂ ಬ್ಯಾಂಕ್ನ ಸ್ಥಾಪಕ ವೈದ್ಯಕೀಯ ನಿರ್ದೇಶಕರು, ಶಸ್ತ್ರಚಿಕಿತ್ಸಾ ತಂಡವು ಈ ಕಾರ್ಯಕ್ಕೆ ಸನ್ನದ್ಧವಾಯಿತು. ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಥಿಯೇಟರ್ನಲ್ಲಿ ಅಸ್ಥಿಗಳನ್ನು ಮೃತದೇಹದಿಂದ ಬೇರ್ಪಡಿಸುವ ಕಾರ್ಯ ನಡೆಸಲಾಯಿತು.. ಡಾ. ವಿಕ್ರಂ ಶೆಟ್ಟಿ ಅವರಿಗೆ ಪ್ರೊ.ಎಂ.ಶಾAತಾರಾಮ ಶೆಟ್ಟಿ ಟಿಶ್ಯೂ ಬ್ಯಾಂಕ್‌ನ ವೈದ್ಯಕೀಯ ನಿರ್ದೇಶಕ ಡಾ.ವರುಣ್ ಶೆಟ್ಟಿ, ಟಿಶ್ಯೂ ಬ್ಯಾಂಕ್ ತಂಡ ಸೇರಿದಂತೆ ಡಾ.ಶ್ರೀದೀಶ್ ನಂಬಿಯಾರ್ ಸಹಕರಿಸಿದರು. ಮೂಳೆಗಳನ್ನು ಹೊರತೆಗೆಯಲಾಯಿತು ಮತ್ತು ಸಂರಕ್ಷಿಸಲಾಗಿದೆ, ಶವದ ಮೂಳೆಗಳ ಸ್ಥಳಗಳÀಲ್ಲಿ ಬದಲೀ ಪ್ಲಾಸ್ಟಿಕ್ ಮೂಳೆಗಳನ್ನು ಸೇರಿಸಲಾಯಿತು.
ಈ ದಾನದಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಪೀಡಿತ ಆರು ಮಕ್ಕಳ ಕೈಕಾಲುಗಳನ್ನು ಸಮರ್ಥವಾಗಿ ಉಳಿಸಬಹುದು ಎಂದು ಡಾ.ವರುಣ್ ಶೆಟ್ಟಿ ವಿವರಿಸಿದರು,
ಇದು ರಾಜ್ಯದಲ್ಲಿಯೇ ಮೊಟ್ಟಮೊದಲ ಪಾರ್ಥಿವ ಶರೀರಿದ ಮೂಳೆ ದಾನವಾಗಿದೆ. ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಶೆಟ್ಟಿ ಅವರು ಕುಟುಂಬದ ಬೆಂಬಲ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು, ಜೊತೆಗೆ ಈ ಮಹತ್ವದ ದಾನ ಸಾಧ್ಯವಾಗುವಲ್ಲಿ ವೈದ್ಯಕೀಯ ತಂಡದ ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಿದರು.

ಏಕಿದು ಕರ್ನಾಟಕದಲ್ಲಿಯೇ ಪ್ರಥಮ?
ಈ ಪ್ರಕ್ರಿಯೆ ಕರ್ನಾಟಕದಲ್ಲಿಯೇ ಪ್ರಥಮ ಪ್ರಯೋಗವಾಗಿದೆ ಏಕೆ? ಈ ಕುರಿತು ಆರ್ಥೋಪೆಡಿಷಿಯನ್ ಡಾ. ವಿಕ್ರಂ ಶೆಟ್ಟಿ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಅವರು ಈ ಕುರಿತು ಹೀಗೆ ವಿವರಿಸಿದರು:-“ಸಾಮಾನ್ಯವಾಗಿ ಅವಘಡ ಅಥವ ಅನಾರೋಗ್ಯ ವೈಪರೀತ್ಯದಿಂದ ಮಿದುಳು ನಿಷ್ಕಿçಯಗೊಂಡು ಶೂನ್ಯವಾದಾಗ ಆ ಕುಟುಂಬಸ್ಥರು ಅಂತಹ ವ್ಯಕ್ತಿಯ ‘ಕಿಡ್ನಿ, ಲಿವರ್,’ ಹೃದಯ ಇತ್ಯಾದಿ ಅಂಗಾAಗಗಳನ್ನು ಸಾಯುವ ಮೊದಲೇ ತೆಗೆದು ದಾನ ಮಾಡಲು ಒಪ್ಪಿಕೊಳ್ಳುತ್ತಾರೆ. ಕೆಲವೊಮ್ಮೆ ತುರ್ತು ರೋಗಿಗಳಿಗೆ ಬೇರೆ ಪ್ರದೇಶಗಳಿಗೆ ಇಂತಹ ಅಂಗಾAಗಗಳನ್ನು ‘ಝೀರೋ ಟ್ರಾಫಿಕ್’ ಮಾಡಿ ಸಾಗಿಸಿ ಇತರ ರೋಗಿಗಳನ್ನು ಬದುಕಿಸಿರುವಂತಹ ಘಟನೆಗಳೂ ನಡೆಯುತ್ತಿವೆ. ಕೆಲವು ಕುಟುಂಬಸ್ಥರು ಆ ಸಂದರ್ಭ ಮಿದುಳು ನಿಷ್ಕಿçಯವಾದ ವ್ಯಕ್ತಿಯ ಚರ್ಮ, ಕಣ್ಣುಗಳು ಹಾಗೂ ಮೂಳೆಗಳನ್ನು ತೆಗೆಯಲೂ ಸಮ್ಮತಿ ನೀಡುವುದಿದೆ. ಹಾಗೆಂದು ಓರ್ವ ವ್ಯಕ್ತಿ ಸಾವಿಗೀಡಾದ ಬಳಿಕ ಮೂರು ಅಂಗಾAಗಗಳನ್ನು ಮಾತ್ರ ನೀಡಿದರೆ ಇತರ ರೋಗಿಗಳಿಗೆ ಅವುಗಳನ್ನು ಬಳಸಬಹುದಾಗಿದೆ. ಅವುಗಳೆಂದರೆ ಮೂಳೆ, ಚರ್ಮ ಮತ್ತು ಕಣ್ಣು. ಇವುಗಳನ್ನು ಹೊರತು ಪಡಿಸಿ ಸತ್ತ ವ್ಯಕ್ತಿಯಿಂದ ತೆಗೆಯುವ ಇತರ ಯಾವದೇ ಅಂಗಾAಗಗಳು ಇತರ ರೋಗಿಗಳಿಗೆ ಯಾವದೇ ಪ್ರಯೋಜನವಾಗುವುದಿಲ್ಲ. ಈ ಮೂರು ಅಂಗಾAಗಳನ್ನೂ ಕೂಡ ವ್ಯಕ್ತಿ ಸಾವಿಗೀಡಾದ ಬಳಿಕ ನಾಲ್ಕು ತಾಸಿನ ಒಳಗೆ ತೆಗೆದರೆ ಮಾತ್ರ ಇತರ ರೋಗಿಗಳಿಗೆ ಅಳವಡಿಸಲು ಸಾಧ್ಯ. ಅಥವ ಮೃತ ಶರೀರವನ್ನು ‘ಫ್ರೀಝರ್’ನಲ್ಲಿರಿಸಿದರೆ ೮ ಗಂಟೆಯೊಳಗೆ ತೆಗೆಯಬಹುದಾಗಿದೆ.
ಇದೀಗ ಮೃತ ವ್ಯಕ್ತಿ ಈಶ್ವರ್‌ನ ಶರೀರದಿಂದ ತೆಗೆಯಲ್ಪಟ್ಟುದು ದೊಡ್ಡ ಮೂಳೆಗಳು ಮಾತ್ರ. ಎರಡು ತೊಡೆಯ ಮೂಳೆಗಳು (ಸೀಮರ್), ಎರಡು ಮೊಣ ಕಾಲ ಕೆಳಗಿನ ಮೂಳೆಗಳು(ಟಿಬಿಯಾ) ಭುಜ ಮತ್ತು ಮೊಣಕೈಗಳ ನಡುವೆ ಇರುವಂತಹ(ಹ್ಯುಮರಸ್) ಎರಡು ಮೂಳೆಗಳು- ಹೀಗೆ ಒಟ್ಟು ೬ ಮೂಳೆಗಳನ್ನು ದೇಹದಿಂದ ತೆಗೆಯಲಾಗಿದೆ. ಈ ಮೂಳೆಗಳನ್ನು ಹೊರ ತೆಗೆಯುವ ಮುನ್ನ ಕುಟುಂಬದವರ ಪೂರ್ವಭಾವೀ ಒಪ್ಪ್ಪಿಗೆಯೊಂದಿಗೆ ಕಾನೂನಾತ್ಮಕವಾಗಿ ಕೊಡಗು ಜಿಲ್ಲಾ ಎಸ್.ಪಿ ಅವರ ಅನುಮತಿಯನ್ನೂ ಪಡೆಯಲಾಯಿತು. ಮೂಳೆೆಗಳನ್ನು ತೆಗೆದ ಬಳಿಕ ಆ ಖಾಲಿ ಜಾಗಗಳಿಗೆ ಅದೇ ಗಾತ್ರಗಳÀ ಪ್ಲಾಸ್ಟಿಕ್ ಮೂಳೆಗಳನ್ನು ಪಾರ್ಥಿವ ಶರೀರಕ್ಕೆ ಅಳವಡಿಸಿ ಹೊಲಿಗೆ ಮಾಡಿ ಬಳಿಕ ಕುಟುಂಬಸ್ಥರಿಗೆ ನೀಡಲಾಯಿತು. ಏಕೆಂದÀರೆ ಕುಟುಂಬಸ್ಥರು ಪಾರ್ಥಿವ ಶರೀರಕ್ಕೆÀ್ಕ ಅಂತಿಮ ಸಂಸ್ಕಾರ ನಡೆಸುವಾಗ ಆಭಾಸವಾಗಬಾರದೆನ್ನುವುದಕ್ಕಾಗಿ ಈ ಕಾರ್ಯವನ್ನು ನಡೆಸಲಾಗುತ್ತದೆ. ಅವರ ಭಾವನಾತ್ಮಕ ವಿಚಾರಗಳಿಗೆ, ಸಂಬAಧಗಳಿಗೆ ಘಾಸಿಯಾಗಬಾರದೆನ್ನುವುದಕ್ಕಾಗಿ ಈ ಪ್ರಕ್ರಿಯೆ ನಡೆಸಲಾಗುತ್ತದೆ. ಈಗ ತೆಗೆದ ಅಸ್ಥಿಗಳನ್ನು ಕ್ಯಾನ್ಸರ್ ಪೀಡಿತರಿಗೆ ಅದರಲ್ಲಿಯೂ ಆದ್ಯತೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಪಯೋಗಿಸಬಹುದಾಗಿದೆ. ಸಾಮಾನ್ಯವಾಗಿ ಅವಘಡಗಳಾದಾಗ ರಕ್ತ ಸಂಚಾರ ಸ್ಥಗಿತಗೊಂಡು ಕ್ಷೀಣವಾಗಿದ್ದು ತೆಗೆದ ಮೂಳೆಗಳನ್ನು ಬಳಸಲಾಗುತ್ತದೆ. ಅಲ್ಲದೆ ಅಂತಹ ಮೂಳೆಗಳನ್ನು ಬಳಸಬೇಕಾದರೆ ಅವುಗಳು ‘ಇನ್ಫೆಕ್ಷನ್‌ಗೆ ಒಳಗಾಗಿರಬಾರದು. ಆದರೆ, ಈಗ ತೆಗೆದಿರುವಂತಹ ಮೂಳೆಗಳು ಸಿಗುವುದು ಬಲು ಅಪರೂಪವೆನ್ನಬಹುದು.
ಕರ್ನಾಟಕದಲ್ಲಿ ಈ ರೀತಿಯ ಪ್ರಕ್ರಿಯೆಗೆ ಅವಕಾಶ ದೊರಕಿರುವುದು ಇದೇ ಪ್ರಥಮವಾಗಿದೆ. ದಕ್ಷಿಣ ಭಾರತದಲ್ಲಿಯೇ ಇಂತಹ ಪ್ರಕ್ರಿಯೆ ಅತ್ಯಪರೂಪವೆÀನ್ನಬಹುದು. ಇಂತಹ ಕಾರ್ಯಕ್ಕೆ ಮುನ್ನಡಿಯಿಟ್ಟು ಮೃತನ ಸಹೋದರಿ ಮತ್ತು ಕುÄಟುಂಬಸ್ಥರು ನಾಡಿಗೇ ಆದರ್ಶ ಪ್ರಾಯರಾಗಿದ್ದಾರೆ.
ಇದೀಗ ಈ ಮೂಳೆಗಳನ್ನು ಮೈನಸ್ ೮೦ ಡಿಗ್ರಿ ಶೈಥ್ಯದಲ್ಲ್ಲಿರಿಸಲಾಗಿದೆ. ಅಗತ್ಯವಿರುವ ಯಾವದೇ ಕಡೆಗಳಿಗೂ ಇದನ್ನು ಕಳುಹಿಸಬಹುದು. ಕಳುಹಿಸುವಾಗ ಅದನ್ನು ಲಿಕ್ವಿಡ್ ಐಸ್‌ನಲ್ಲಿರಿಸಿ ಕಳುಹಿಸಬೇಕು. ಆದರೆ ದೂರದ ಪ್ರದೇಶಗಳಿಗಾದರೆ ಶೀಘ್ರ ಬಳಕೆಯಾಗಬೇಕಾಗುವುದರಿಂದ ವಿಮಾನದ ಮೂಲಕವೇÀ ಕಳುಹಿಸಿ ಕೊಡಬೇಕಾಗುತ್ತದೆ,”

https://shorturl.at/yjjpa

26/10/2024

ವ್ಯಕ್ತಿಯನ್ನು ಹತ್ಯೆಗೈದು ಸುಂಟಿಕೊಪ್ಪ ಸಮೀಪದ ಎಸ್ಟೇಟ್ ವೊಂದರಲ್ಲಿ ದೇಹವನ್ನು ಸುಟ್ಟಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಿದ ಕೊಡಗು ಪೊಲೀಸರು...

Address

Madikeri
571201

Alerts

Be the first to know and let us send you an email when Shakthi Daily posts news and promotions. Your email address will not be used for any other purpose, and you can unsubscribe at any time.

Contact The Business

Send a message to Shakthi Daily:

Share

Our Story

Shakthi Daily, is the first Kannada daily newspaper of Kodagu established in 1957 by late BS Gopalakrishna. With the motto, 'ನ್ಯಾಯಪಾಲನೆ ನಮ್ಮ ಯುಕ್ತಿ, ನ್ಯಾಯದರ್ಶನ ನಮ್ಮ ಶಕ್ತಿ', the newspaper has been giving strength and voice to the people of Kodagu ever since. Always abiding by the truth and publishing first-hand news, the paper has managed to win the hearts of the people of Kodagu and has now successfully stepped into its 64th year. Today, it is managed by sons of late BS Gopalakrishna - Editor and Administrator - G Chidvilas Chief Editor - G Rajendra Consultant Editor - BG Ananthashayana The other two sons, passed on souls, of Late BS Gopalakrishna - Yedumani and Sandhya - have lent their best hands in the upbringing of 'Shakthi'. ‘Shakthi’ has also been blessed with truthful, loyal and devoted staff including the many correspondents, agents and in-house employees. Our readers have always been our greatest strength and motivation.