Kodagu Channel

Kodagu Channel Every thing about kodagu

ದ್ವಿತೀಯ ಪಿಯುಸಿ ಫಲಿತಾಂಶ; ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಪಿ.ಎನ್. ನವ್ಯ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆನಾಪೋಕ್ಲು : 2025 -26 ನೇ ಸಾಲ...
11/04/2026

ದ್ವಿತೀಯ ಪಿಯುಸಿ ಫಲಿತಾಂಶ; ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಪಿ.ಎನ್. ನವ್ಯ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

ನಾಪೋಕ್ಲು : 2025 -26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಗೋಣಿಕೊಪ್ಪ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪಿ.ಎನ್.ನವ್ಯ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡು ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 576ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡು ನವ್ಯ ಸಾಧನೆ ಮಾಡಿದ್ದಾರೆ. ನವ್ಯ ನರಿಯಂದಡ ಕೋಕೇರಿ ಗ್ರಾಮದ ಪೆಮ್ಮಂಡ ನಂದ ನಾಣಯ್ಯ ಹಾಗೂ ಮಮತಾ ದಂಪತಿಗಳ ಪುತ್ರಿಯಾಗಿದ್ದಾಳೆ.

10/04/2026

*ಯಸಳೂರಿನ ಮತ್ತೂರಿನಲ್ಲಿ ಇಂದು ಕ್ಯಾಮರಾ ಕಣ್ಣಿಗೆ ಬಿದ್ದ ಕಾಡಾನೆ – ಆತಂಕದಲ್ಲಿ ಗ್ರಾಮಸ್ಥರು!* ಸಕಲೇಶಪುರ: ಯಸಳೂರು ಹೋಬಳಿಯ ಮತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ದಿನದಿಂದ ದಿನಕ್ಕೆ ಭೀತಿ ಹುಟ್ಟಿಸುತ್ತಿದೆ. ಮೊನ್ನೆಯಷ್ಟೇ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಕಾಡಾನೆ, ಈಗಲೂ ಗ್ರಾಮದ ಆಸುಪಾಸಿನಲ್ಲೇ ಬೀಡುಬಿಟ್ಟಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ.

09/04/2026
08/03/2026

Happy Women’s Day ’s day special

05/03/2026

ಪೊನ್ನಂಪೇಟೆ ತಾಲೂಕಿನ ಬಾಳಲೆ ಭಾಗಕ್ಕೆ ಕಾರ್ಯ ನಿಮಿತ್ತ ‌ಪ್ರಯಾಣಿಸುತ್ತಿದ್ದಾಗ, ಪೊನ್ನಪ್ಪಸಂತೆ ಮಾರ್ಗದಲ್ಲಿ ರಸ್ತೆ ಅಪಘಾತಕ್ಕೀಳಿದ ಬೈಕ್ ಸವಾರನನ್ನು ಗಮನಿಸಿ ತಕ್ಷಣ ವಾಹನ ನಿಲ್ಲಿಸಿ, ಗಾಯಾಳುವಿಗೆ ಅಂಬುಲೆನ್ಸ್ ವ್ಯವಸ್ಥೆ ಮಾಡಿ ನಂತರ ನನ್ನ ಉದ್ದೇಶಿತ ಕಾರ್ಯಕ್ರಮಕ್ಕೆ ಪ್ರಯಾಣ ಮುಂದುವರಿಸಿದೆ. (GoK)

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್‌ 8 ರಿಂದ 3 ದಿನಗಳ ಕಾಲ ಪಾಸ್‌ಪೋರ್ಟ್‌ ಮೇಳ; ಸಂಸದರ ಮನವಿಗೆ ಸ್ಪಂದಿಸಿ ಆಯೋಜಿಸಿರುವ ವಿದೇಶಾಂಗ ಸಚಿವಾಲಯಮೈಸೂರು,...
03/03/2026

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್‌ 8 ರಿಂದ 3 ದಿನಗಳ ಕಾಲ ಪಾಸ್‌ಪೋರ್ಟ್‌ ಮೇಳ; ಸಂಸದರ ಮನವಿಗೆ ಸ್ಪಂದಿಸಿ ಆಯೋಜಿಸಿರುವ ವಿದೇಶಾಂಗ ಸಚಿವಾಲಯ

ಮೈಸೂರು, ಫೆ. 3: ಕಿತ್ತಳೆ ನಾಡು ಕೊಡಗು ಜಿಲ್ಲೆಯ ನಾಗರಿಕರಿಗೆ ಸಂತಸದ ಸುದ್ದಿ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌* ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್‌ ಆಯೋಜಿಸಲು ಬೆಂಗಳೂರು ವಿಭಾಗೀಯ ಪಾಸ್‌ಪೋರ್ಟ್‌ ಕಚೇರಿ ನಿರ್ಧರಿಸಿದೆ.

ಏಪ್ರಿಲ್‌ 8ರಿಂದ ಮೂರು ದಿನಗಳ ಕಾಲ ಕೊಡಗ ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌ ಮೇಳ ನಡೆಯಲಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಯದುವೀರ್‌ ಒಡೆಯರ್‌ ಕೊಡಗು ಜಿಲ್ಲೆಯಲ್ಲಿ ಪಾಸ್‌ಪೋರ್ಟ್‌ ಮೇಳ ಆಯೋಜಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಬೆಂಗಳೂರು ರೀಜನಲ್‌ ಪಾಸ್‌ಪೋರ್ಟ್‌ ಅಧಿಕಾರಿಗಳು ಸಂಸದರಿಗೆ ಪತ್ರ ಬರೆದು, ಏಪ್ರಿಲ್‌ 8, 9, 10ರಂದು ಮೇಳ ಆಯೋಜಿಸಲಾಗುವುದು ಹಾಗೂ ೮ ರಂದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಬೇಕು ಎಂದು ಸಂಸದ ಯದುವೀರ್‌ ಒಡೆಯರ್‌ ಅವರಿಗೆ ಮನವಿ ಮಾಡಿದ್ದಾರೆ

ಮಕ್ಕಂದೂರಿನಲ್ಲಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಡಾ ಮಂತರ್ ಗೌಡ ರವರಿಂದ ಚಾಲನೆಮಡಿಕೇರಿ; ತಾಲೂಕಿನ ಮಕ್ಕಂದೂರು ಹೆಮ್ಮೆತಾಳು ಪರಿಶಿಷ್ಟ ಪಂಗಡದ ಕಾ...
03/03/2026

ಮಕ್ಕಂದೂರಿನಲ್ಲಿ ಕಾಲೋನಿ ರಸ್ತೆ ಅಭಿವೃದ್ಧಿಗೆ ಡಾ ಮಂತರ್ ಗೌಡ ರವರಿಂದ ಚಾಲನೆ

ಮಡಿಕೇರಿ; ತಾಲೂಕಿನ ಮಕ್ಕಂದೂರು ಹೆಮ್ಮೆತಾಳು ಪರಿಶಿಷ್ಟ ಪಂಗಡದ ಕಾಲೋನಿಗೆ 10 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು. Tourist Destinations

ಮಕ್ಕಂದೂರು ಗಾಳೀಬೀಡು ಮಾದಾಪುರ ಶಾಂತಳ್ಳಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ವಿಭಿನ್ನವಾಗಿದ್ದು ಮುಖ್ಯ ರಸ್ತೆಯಿಂದ ದೂರದಲ್ಲಿ ಒಂದೊಂದು ಮನೆಗಳು ಇದ್ದು ರಸ್ತೆ ಮತ್ತು ವಿದ್ಯುತ್ ಸೌಕರ್ಯ ಗಳ ಸಮಸ್ಯೆಗಳನ್ನು ಅತಿಯಾಗಿ ಎದುರಿಸುತ್ತಿರುವುದು ಗಮನಕ್ಕೆ ಬಂದಿದ್ದು ಇವುಗಳ ಪರಿಹಾರಕ್ಕೆ ವಿಶೇಷ ಕಾಳಜಿವಹಿಸಲಾಗುವುದು ಎಂದು ಮಂತರ್ ಗೌಡ ರವರು ತಿಳಿಸಿದರು.

ಕುಗ್ರಾಮಗಳನ್ನು ಸುಗ್ರಾಮವಾಗಿ ಪರಿವರ್ತಿಸುವ ಭರವಸೆಯನ್ನು ಚುನಾವಣಾ ಪೂರ್ವದಲ್ಲಿ ನೀಡಿದ್ದು ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ಮೂಡಾ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ನಿಕಟಪೂರ್ವ ಪಂಚಾಯತ್ ಸದಸ್ಯರಾದ ಕನ್ನಿಗಂಡ ಶ್ಯಾಮ್ , ಗಣೇಶ್ ಪ್ರಮುಖರಾದ ರವೂಫ್ ಶೇಖ್, ವಿ.ಜಿ.ಮೋಹನ್,ಕೋಚನ ಹರಿಪ್ರಸಾದ್,ಮುದ್ದುರಾಜ್,ಶರಣ್ ಸೇರಿದಂತೆ ಗ್ರಾಮ ಪಂಚಾಯತ್ ಪಿ.ಡಿ.ಒ ,ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

02/03/2026

Guess the Place race

Address

Race Course Road, Near Press Club
Madikeri
571201

Alerts

Be the first to know and let us send you an email when Kodagu Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Kodagu Channel:

Share