Kodagu Channel

Kodagu Channel Every thing about kodagu

*ಕಾವೇರಿ ನೀರಾವರಿ ನಿಗಮದ ಕಛೇರಿಗೆ ಲೋಕಾಯುಕ್ತ ದಾಳಿ*ಕುಶಾಲನಗರದಲ್ಲಿರುವ ನೀರಾವರಿ ನಿಗಮದ ಹಾರಂಗಿ ಪುನರ್ವಸತಿ ವಿಭಾಗದ ಕಛೇರಿನಿಗಮದ ವಿಭಾಗೀಯ ಕ...
11/09/2025

*ಕಾವೇರಿ ನೀರಾವರಿ ನಿಗಮದ ಕಛೇರಿಗೆ ಲೋಕಾಯುಕ್ತ ದಾಳಿ*

ಕುಶಾಲನಗರದಲ್ಲಿರುವ ನೀರಾವರಿ ನಿಗಮದ ಹಾರಂಗಿ ಪುನರ್ವಸತಿ ವಿಭಾಗದ ಕಛೇರಿ

ನಿಗಮದ ವಿಭಾಗೀಯ ಕಛೇರಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕನ ವಿರುದ್ದ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ.

ಮಡಿಕೇರಿ ಲೋಕಾಯುಕ್ತ ದಿನಕರ ಶೆಟ್ಟಿ ನೇತೃತ್ವದಲ್ಲಿ ಪರಿಶೀಲನೆ

10/09/2025
*ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್ಮಾಡಿದ ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು*ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ...
10/09/2025

*ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್ಮಾಡಿದ ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು*

ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಾರಕಾಸ್ತ್ರ ಹಿಡಿದು ರಿಲ್ಸ್ ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ವಿದ್ಯಾರ್ಥಿ ವಿರುದ್ದ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಕಾಲೇಜಿನೊಳಗೆ ಲಾಂಗ್ ಹಿಡಿದು ರಿಲ್ಸ್ ಮಾಡಿದ್ದ, ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕಾಲೇಜು ಪ್ರಾಂಶುಪಾಲರು ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಕೂಡ ಅಸಮಧಾನ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದ ಮೇಲೆ ನಿಗಾವಹಿಸಿದ ಪೊಲೀಸರು ರಿಲ್ಸ್ ಮಾಡಿದ್ದ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲು ಮಾಡಿ ಮುಂದಿನ ಕ್ತಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಾದ‌ ಹಿನ್ನೆಲೆಯಲ್ಲಿ ವಿದ್ಯಾರ್ಥಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ.

*DJ ನಿಯಮ ಉಲ್ಲಂಘನೆ : FIR ದಾಖಲು*ನೆನ್ನೆ ರಾತ್ರಿ ವಿರಾಜಪೇಟೆಯಲ್ಲಿ ನಡೆದ ಗಣೇಶ ವಿಸರ್ಜನೋತ್ಸವದಲ್ಲಿ ಡಿಜೆ ನಿಯಮ ಉಲ್ಲಂಘನೆ ಮಾಡಿರುವುದರ ವಿರ...
08/09/2025

*DJ ನಿಯಮ ಉಲ್ಲಂಘನೆ : FIR ದಾಖಲು*

ನೆನ್ನೆ ರಾತ್ರಿ ವಿರಾಜಪೇಟೆಯಲ್ಲಿ ನಡೆದ ಗಣೇಶ ವಿಸರ್ಜನೋತ್ಸವದಲ್ಲಿ ಡಿಜೆ ನಿಯಮ ಉಲ್ಲಂಘನೆ ಮಾಡಿರುವುದರ ವಿರುದ್ಧ 16 FIR ದಾಖಲಾಗಿವೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಬಂದ ನಂತರ ಪರಿಸರ ಕಾಯ್ದೆ 1986ರ ಅಡಿಯಲ್ಲಿ ಡಿಜೆ ನಿಯಮ ಉಲ್ಲಂಘಿಸಿರುವ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

08/09/2025
08/09/2025

**

ವಾಹನಗಳಲ್ಲಿ ಸಂಚರಿಸುವಾಗ ಕಿಟಕಿಯಿಂದ ತಲೆ ಹೊರಗೆ ಹಾಕುವುದು ಅಪಾಯಕಾರಿ. ಕೆಲವರು ತಾವು ಪ್ರಯಾಣಿಸುತ್ತಿದ್ದ ವಾಹನದಿಂದ ತಲೆ ಹೊರಗೆ ಹಾಕಿ ಜೀವಕ್ಕೆ ಸಂಚಾಕಾರ ತಂದುಕೊಂಡ ನಿದರ್ಶನಗಳೂ ಇವೆ. ಇಲ್ಲೊಬ್ಬ ಬಾಲಕ ಚಲಿಸುತ್ತಿದ್ದ ಕಾರಿನ ಸನ್ ಗ್ಲಾಸ್ ನಿಂದ ತಲೆಯನ್ನು ಹೊರಗೆ ಹಾಕಿ ಕಂಟಕ ತಂದುಕೊಂಡಿದ್ದಾನೆ.
ಬೆಂಗಳೂರು ವಿದ್ಯಾರಣ್ಯ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಪೋಷಕರೊಂದಿಗೆ ಕಾರಿನಲ್ಲಿ ಸಾಗುತ್ತಿದ್ದಾಗ ಸನ್ ಗ್ಲಾಸ್ ನಿಂದ ಹೊರಗೆ ತಲೆ ಹಾಕಿದ್ದಾನೆ. ದುರದೃಷ್ಟವಶಾತ್, ರಸ್ತೆಯಲ್ಲಿ ಅಳವಡಿಸಿದ್ದ ಕಮಾನಿಗೆ ಈತನ ತಲೆ ಬಲವಾಗಿ ತಗುಲಿ ಕಾರಿನ ಒಳಗೆ ಕುಸಿದು ಬಿದ್ದಿದ್ದಾನೆ. ಇದರಿಂದ ಚಿಂತಾಕ್ರಾಂತನಾದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

21/08/2025

ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ವಿಧೇಯಕವನ್ನು ಸದನದಲ್ಲಿ ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಮಂಡಿಸಿದರು.
ಈ ವಿಧೇಯಕ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣನವರು ಸ್ಪಷ್ಟಣೆ ನೀಡಿ, ಈ ವಿಧೇಯಕ ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬಂಧಿಸಿದ್ದಾಗಿದೆ. 1964ನೇ ಕರ್ನಾಟಕ ಕಂದಾಯ ಕಾನೂನಿನಲ್ಲಿ ಕೆಲವು ಅಂಶಗಳು ಕೊಡಗು ಜನರ ಸಮಸ್ಯೆಗೆ ಕಾರಣವಾಗಿದೆ. ಅತ್ಯಂತ ಜಟೀಲವಾದ ಸಮಸ್ಯೆಯಾಗಿರುವುದರಿಂದ ಇದನ್ನು ತಿದ್ದುಪಡಿ ಮಾಡಲು ಅವಶ್ಯಕವಾಗಿರುತ್ತದೆ.
ಆದುದರಿಂದ ವಿಧಾನಸಭೆಯ ಆಯ್ಕೆ ಸಮಿತಿ ರಚನೆ ಮಾಡಲು ಮನವಿ ಮಾಡಿಕೊಂಡರು.
ಈ ಬಗ್ಗೆ ವಿಧಾನಸಭೆಯಲ್ಲಿ ವಿಧಾನಸಭೆ ಆಯ್ಕೆ ಸಮಿತಿ ರಚನೆ ಮಾಡಲು ಒಪ್ಪಿಗೆ ನೀಡಲಾಯಿತು.

*ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು*ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ ಪಟ್ಟ ಘಟನೆ ಸೋಮವಾರಪಟೆ ತಾಲೂಕು ಶನಿವಾರಸಂತ...
20/08/2025

*ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು*

ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ ಪಟ್ಟ ಘಟನೆ ಸೋಮವಾರಪಟೆ ತಾಲೂಕು ಶನಿವಾರಸಂತೆ ಮಾಲಂಬಿ ಜೇನು ಕಲ್ಲು ಬೆಟ್ಟದ ಬದಿ ನಡೆದಿದೆ.

ಮಾಲಂಬಿ ಗ್ರಾಮದ ಅಯ್ಯಪ್ಪ (53) ಮೃತ ಪಟ್ಟ ವ್ಯಕ್ತಿ.

ಇದೆ ತಿಂಗಳ 15ನೇ ಶುಕ್ರವಾರ ಜೇನುಕಲ್ಲು ಬೆಟ್ಟಕ್ಕೆ ಕಣಿಲೇ ತರಲೆಂದು ತೆರಳಿದ ಸಂದರ್ಭದಲ್ಲಿ ಬೆಟ್ಟದ ಮೇಲಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ.

ನಂತರ ಮನೆಯವರು ಗ್ರಾಮಸ್ಥರು ಹುಡುಕಾಟ ನಡೆಸಿದರು ಸಿಗಲಿಲ್ಲ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದರು.

ನಿನ್ನೆ ಮಂಗಳವಾರ ಸ್ಥಳೀಯರು ಕಾಡಿನತ್ತ ತೆರಳಿದಾಗ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು.

ಅಯ್ಯಪ್ಪ ಇವರ ಪತ್ನಿ ಸರೋಜ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

This is the city of Hamadan, founded in the 12th century BC. It became the first Iranian capital in 700 BC, chosen by bo...
20/08/2025

This is the city of Hamadan, founded in the 12th century BC. It became the first Iranian capital in 700 BC, chosen by both the Achaemenid and Parthian Empires as their summer capital, looted by Alexander, sacked by the Mongols, yet still holds its ancient layout with 600,000 inhabitants.

18/08/2025

ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಬಿರುಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆ ನಾಳೆ (ಆಗಸ್ಟ್ 19 ರಂದು) ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

18/08/2025

ಇಂದು ಬೆಳಿಗ್ಗೆ ಸೋಮವಾರಪೇಟೆಯಿಂದ ಸೂರ್ಲಬ್ಬಿ ಮಾರ್ಗವಾಗಿ ಸಂಚರಿಸುತ್ತಿದ್ದ KSRTC ಬಸ್ ಮುಟ್ಲು ಗ್ರಾಮದ ಸುಬ್ರಮಣ್ಯ ದೇವಸ್ಥಾನದ ಸಮೀಪ ಬರೆಗೆ ಅಪ್ಪಳಿಸಿರುವುದು...

Address

Race Course Road, Near Press Club
Madikeri
571201

Alerts

Be the first to know and let us send you an email when Kodagu Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Kodagu Channel:

Share