Coorg the Kashmir of Karnataka

Coorg the Kashmir of Karnataka Coorg's No 1 social media channel...Follow us for news updates, Subscribe us on YouTube and watch our videos. Support us
(405)

You can follow our Instagram profile, follow us on Threads and Twitter too ..

 #ಭಾರತ_ಹಾಕಿ_ತಂಡವನ್ನು_ಪ್ರತಿನಿಧಿಸುತ್ತಿರುವ_ಕೊಡಗಿನ_ಪೂವಣ್ಣ .ಭಾರತ ಪುರುಷರ ಹಾಕಿ ತಂಡಕ್ಕೆ (ಮುಖ್ಯ ತಂಡ) ಆಯ್ಕೆಗೊಂಡು, ಇಂದಿನಿಂದ ಅ. 20 ರ...
08/08/2025

#ಭಾರತ_ಹಾಕಿ_ತಂಡವನ್ನು_ಪ್ರತಿನಿಧಿಸುತ್ತಿರುವ_ಕೊಡಗಿನ_ಪೂವಣ್ಣ .

ಭಾರತ ಪುರುಷರ ಹಾಕಿ ತಂಡಕ್ಕೆ (ಮುಖ್ಯ ತಂಡ) ಆಯ್ಕೆಗೊಂಡು, ಇಂದಿನಿಂದ ಅ. 20 ರವರೆಗೆ ನಡೆಯಲಿರುವ ಯುರೋಪ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಕಂಡಂಗಾಲ ಗ್ರಾಮದ ಚಂದೂರ ಬಿ. ಪೂವಣ್ಣ .

 #ಶ್ರೀ_ಕ್ಷೇತ್ರ_ಧರ್ಮಸ್ಥಳದ_ಅಪಪ್ರಚಾರ_ಮಡಿಕೇರಿಯಲ್ಲಿ_ಭಕ್ತಾಭಿಮಾನಿ_ಬಳಗದಿಂದ_ಪ್ರತಿಭಟನೆ.          ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಧ...
08/08/2025

#ಶ್ರೀ_ಕ್ಷೇತ್ರ_ಧರ್ಮಸ್ಥಳದ_ಅಪಪ್ರಚಾರ_ಮಡಿಕೇರಿಯಲ್ಲಿ_ಭಕ್ತಾಭಿಮಾನಿ_ಬಳಗದಿಂದ_ಪ್ರತಿಭಟನೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಧಿಕಾರಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದನ್ನು ಖಂಡಿಸಿ ಮತ್ತು ಅಶಾಂತಿ ಉಂಟು ಮಾಡುತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಡಗು ಧರ್ಮಸ್ಥಳ ಭಕ್ತಾಭಿಮಾನಿ ಬಳಗ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ 300ಕ್ಕೂ ಹೆಚ್ಚು ಪ್ರತಿಭಟನಾಕಾರಾರು ಅಶಾಂತಿ ಮೂಡಿಸುತ್ತಿರುವ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಶಾಂತಿ ಮೂಡಿಸುತ್ತಿರುವವರ ಬಳಿ ಹಲವು ಸಾಕ್ಷಿಗಳು ಇದೆ ಎಂದು ಸಾರುತ್ತಿರುವವರ ಮನೆ, ಕಛೇರಿಗಳನ್ನು ತನಿಖೆ ಮಾಡಬೇಕು, ಈಗಿರುವ ತನಿಖಾ ತಂಡ ಎಸ್ಐಟಿ ಇನ್ನಷ್ಟು ಬಲಗೊಳ್ಳಬೇಕು ಎಂದು ಒತ್ತಾಯಿಸಿದರು.

08/08/2025

#ವಿರಾಜಪೇಟೆ_ಮಾಕುಟ್ಟ_ರಸ್ತೆಯಲ್ಲಿ_ಮರ_ತೆರವು_ಸಂಚಾರಕ್ಕೆ_ಮುಕ್ತ

08/08/2025

#ವಿರಾಜಪೇಟೆಯ_ಮಾಕುಟ್ಟ_ರಸ್ತೆಯಲ್ಲಿ_ಮರ_ಬಿದ್ದು_ಸಂಚಾರ_ಸಂಪೂರ್ಣ_ಬಂದ್.

 #ಹಿರಿಯ_ಜೀವ_ಅದೇನು_ಕನಸು_ಕಟ್ಟಿಕೊಂಡಿತ್ತೋ!!!ನಿನ್ನೆಯ ದಿನ ರಾತ್ರಿ ಕೊಡಗು ಜಿಲ್ಲೆಯ ಚೆoಬು ಗ್ರಾಮ ಕ್ಕೆ ಒಂದು ಅಘಾತಕಾರಿ ಸುದ್ದಿ ಬರುತ್ತದೆ ...
07/08/2025

#ಹಿರಿಯ_ಜೀವ_ಅದೇನು_ಕನಸು_ಕಟ್ಟಿಕೊಂಡಿತ್ತೋ!!!

ನಿನ್ನೆಯ ದಿನ ರಾತ್ರಿ ಕೊಡಗು ಜಿಲ್ಲೆಯ ಚೆoಬು ಗ್ರಾಮ ಕ್ಕೆ ಒಂದು ಅಘಾತಕಾರಿ ಸುದ್ದಿ ಬರುತ್ತದೆ ಎಲ್ಲರು ಗಾಡ ನಿದ್ರೆಯಲ್ಲಿ ಇರುವ ಸಮಯದಲ್ಲಿ ಚೆoಬು ಗ್ರಾಮದ ಅಂಡಮಾನ್ ತರ ಇರುವ ದಬ್ಬಡ್ಕ ದಲ್ಲಿರುವ ಕೊಪ್ಪ ಮನೆತನದ ಒಂದು ಹಿರಿ ಜೀವ ಆನೆಯ ಆಕ್ರಮಣ ಕ್ಕೆ ಬಲಿ ಆಗಿ ಹೋದರು, ಮನುಷ್ಯ ನ ಹಾಗೂ ವನ್ಯ ಪ್ರಾಣಿಗಳ ಕಾಳಗದಲ್ಲಿ ಒಂದು ಜೀವ ಕಳೆದುಕೊಳ್ಳಬೇಕಾಯ್ತು.

ದಬ್ಬಡ್ಕ ಅಂದರೆ ಅದೊಂದು ನೆಟ್ವರ್ಕ್ ಹಾಗೂ ಮೂಲ ಸೌಕರ್ಯ ವನ್ನು ಹೊಂದಿಲ್ಲ ದ ಸುತ್ತಲೂ ದಟ್ಟ ಕಾನನದಿಂದ ಕೂಡಿರುವ ಒಂದು ಸುಂದರ ತಾಣ, ಆದರೆ ಅಲ್ಲಿ ಪ್ರತಿ ದಿನ ವನ್ಯ ಪ್ರಾಣಿ ಗಳ ಜೊತೆ ಸೆನಸಾಡಲೇಬೇಕು, ಕೃಷಿ ಯನ್ನೇ ನಂಬಿ ಬದುಕಿರುವ ಹಲವು ಕನಸುಗಳನ್ನು ಹೊತ್ತ ಅದೆಷ್ಟೋ ಕುಟುಂಬಗಳು ಇವತ್ತಿಗೂ ಕೆಲವೊಂದು ಮೂಲ ಸೌಕರ್ಯ ದಿಂದ ವಂಚಿತರಾಗಿದ್ದಾರೆ,

ರಾಜಕಾರಣ ದ ಒಳ ಜಗಳದಲ್ಲಿ ಬರಬೇಕಾದ ಮೂಲ ಸೌಕರ್ಯ ಗಳು ಬರುತ್ತಿಲ್ಲ.
ತಂದೆ ತಾಯಿಯ ಜಗಳದಲ್ಲಿ ಮಗು ಬಡಾವಯ್ತು ಅಂದ ಹಾಗೆ ಇಲ್ಲಿ ಇರುವ 2 ಬಲಿಷ್ಠ ರಾಜಕೀಯದ ಒಳ ಜಗಳದಿಂದ ಇಲ್ಲಿನ ಜನಗಳು ಬಡವಾಗಿದ್ದಾರೆ. ಸರಿಯಾದ ರಸ್ತೆ ಸಂಪರ್ಕ ಇಲ್ಲ, ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ, ಕೆಲವೊಂದು ಮನೆಗಳಲ್ಲಿ ಪ್ರಕೃತಿ ಯ ಮಡಿಲಿನಿಂದಲೇ ಜುಳು ಜುಳು ಹರಿಯುವ ಕೊಲ್ಲಿ ನೀರಿನ ಮೂಲಕ ವಿದ್ಯುತ್ ಉತ್ಪಡಿಸಿಕೊಂಡು ಉಪಯೋಗಿಸುತ್ತಿದ್ದಾರೆ,

ದೊಡ್ಡ ದೊಡ್ಡ ರಾಜಕೀಯ ನಾಯಕರೇ ಒಮ್ಮೆ ಈ ಕಡೆ ತಿರುಗಿ ನೋಡಿ ಪ್ರಕೃತಿ ಸೌಂದರ್ಯ ಕ್ಕೆ ಹೆಸರು ವಾಸಿಯಾದ ಕೊಡಗು ಜಿಲ್ಲೆಯ ಒಂದು ಗ್ರಾಮ ನನ್ನ ಚೆoಬು ಗ್ರಾಮ,ಆದರೆ ಇಲ್ಲಿ ಮೂಲ ಸೌಕರ್ಯ ದಿಂದ ವಂಚಿತರಾದ ಹಲವು ಕುಟುಂಬ ಗಳು ಇವತ್ತಿಗೂ ಇದೆ.
ನಿಮ್ಮ ಉಚಿತ ಭಾಗ್ಯ ಗಳನ್ನು ಬದಿಗೆ ಇಟ್ಟು ಆ ಹಣದಲ್ಲಿ ಈ ತರ ಮೂಲ ಸೌಕರ್ಯ ವಂಚಿತ ಗ್ರಾಮ ಗಳಿಗೆ ಆದಷ್ಟು ಬೇಗ ಮೂಲ ಸೌಕರ್ಯ ವನ್ನು ಒದಗಿಸುವಂತೆ ಆಗಿ.
ಎಷ್ಟೋ ವಿದ್ಯಾವಂತ ವಿದ್ಯಾರ್ಥಿಗಳು ನಮ್ಮ ಗ್ರಾಮದಲ್ಲಿ ಇದ್ದರು ಕೂಡ ಸರಿಯಾದ ಹೋಗಿ ಬರುವ ವ್ಯವಸ್ಥೆ ಇಲ್ಲದೆ ಮನೆಯಲ್ಲೇ ಉಳಿಯುವಂತೆ ಆಗಿದೆ, ದೂರದ ಕಾಲೇಜು ಗಳಿಗೆ ಕಳಿಸುವುದಕ್ಕೂ ಭಯ ಪಡುತ್ತಾರೆ, ಸಂಪರ್ಕ ಮಾಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಆ ಊರಿಗೆ ಜೀಪು ಬಿಟ್ಟರೆ ಬೇರೆ ಗಾಡಿ ಗಳು ಹೋಗುವುದಕ್ಕೂ ಕಷ್ಟ.

ಅಲ್ಲಿ ನ ವಯಸ್ಸಿಗೆ ಬಂದ ಹುಡುಗರ ಪರಿಸ್ಥಿತಿ ಅಂತೂ ಕೇಳುವುದು ಬೇಡ. ಮದುವೆ ಆಗೋಣ ಅಂದರೆ ಹುಡುಗಿ ಕೊಡುವವರು ಬೇಕಲ್ಲವೇ. ನೋಡುಗರಿಗೆ ಸುಂದರ ಪ್ರಕೃತಿ ತಾಣ,ಆದರೆ ಅಲ್ಲಿ ವಾಸಿಸುವ ಜನರಿಗೆ ಅದೇ ಒಂತರ ನರಕ ತಾಣ ಆಗೋಗಿದೆ
ಇಂತಹ ಪರಿಸ್ಥಿತಿ ಯಲ್ಲಿ ಇರುವ ಗ್ರಾಮ ಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು,
ಕಣ್ಣಿಗೆ ಕಾಣುವ ಊರುಗಳನ್ನು ಮಾತ್ರ ಅಭಿವೃದ್ಧಿ ಮಾಡುವುದರಿಂದ ನಮ್ಮ ಜಿಲ್ಲೆ ಆಗಲಿ ದೇಶ ಆಗಲಿ ಅಭಿವೃದ್ಧಿ ಆಗೋದಿಲ್ಲ. ಬುಡದಿಂದಲೇ ಅಭಿವೃದ್ಧಿ ಕೆಲಸ ಆಗಬೇಕು *ಸ್ಥಳೀಯ ನಾಯಕರುಗಳು ರಾಜಕೀಯ ಬಿಟ್ಟು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಬೇಕು*
ನೀವುಗಳು ಕೇವಲ ಹೆಸರಿಗೆ ನಾನೊಬ್ಬ ನಾಯಕ ಅಂದರೆ ಸಾಲುವುದಿಲ್ಲ, ನಿಮ್ಮ ಹೆಸರು ಅಲ್ಲಿನ ಜನರ ಬಾಯಲ್ಲಿ ಅಜರಾಮರ ಆಗಿರುವಂತೆ ಕೆಲಸ ಮಾಡಬೇಕು,

ಇವತ್ತಿನ ದಿನ ಒಂದು ಹಿರಿ ಜೀವ ಅದೆಷ್ಟು ನರಳಿ ನರಳಿ ಪ್ರಾಣ ಬಿಟ್ಟಿರಬಹುದು ಒಮ್ಮೆ ಯೋಚನೆ ಮಾಡಿ ಹಲವು ಸಮಯದಿಂದ ಸಂಭಂದ ಪಟ್ಟ ಅಧಿಕಾರಿಗಳ ಜೊತೆ ದೊಡ್ಡ ದೊಡ್ಡ ನಾಯಕರ ಜೊತೆ ಅಲ್ಲಿನ ಆನೆ ಸಮಸ್ಯೆ ಯನ್ನು ಹೇಳಿದರು ಯಾವುದೇ ಪ್ರತಿಫಲ ಸಿಕ್ಕಿರುವುದಿಲ್ಲ, ಅಧಿಕಾರಿಗಳು ಆದವರು ಸ್ವಲ್ಪ ಜನ ಸಾಮಾನ್ಯ ರ ಕಷ್ಟಕ್ಕೆ ಸ್ಪಂದಿಸಿ ನೀವುಗಳು ಅಲ್ಲಿನ ಜನರು ಸಮಸ್ಯೆ ಹೇಳಿದಂದೆ ಆ ಆನೆಯನ್ನ ಹಿಡಿಯುವ ಪ್ರಯತ್ನ ಪಟ್ಟಿದರೆ ಇವತ್ತು ನಮ್ಮ್ಮ ಊರಿನ ಹಿರಿಯ ಜೀವ ಇನ್ನೊಂದಿಷ್ಟು ವರ್ಷ ಕುಟುಂಬದೊಂದಿಗೆ ಕಾಲ ಕಳೆಯುತ್ತಿದರು.
ದೊಡ್ಡ ಜನನಾಯಕರುಗಳಿಗೆ ಮನವಿ ಕೊಟ್ಟಾಗ ತಕ್ಷಣ ಕ್ಕೆ ಸ್ಪಂದಿಸಿದ್ದರೆ ಇವತ್ತು ನೀವೆಲ್ಲ ನಮಗೆ ದೇವರು ತರ ಕಾಣುವಂತೆ ಆಗಿತ್ತು.

ಈಗ ಎಲ್ಲಾ ಮುಗಿದ ಮೇಲೆ ಆನೆ ಹಿಡಿಯುವ ಕಾರ್ಯಕ್ಕೆ ಕೈ ಹಾಕಿದೀರಾ ಒಳ್ಳೆಯ ಕೆಲಸ ಆದರೆ ಇದರ ಅರ್ಥ ಸಾವಿಗೋಸ್ಕರ ಕಾಯುತ್ತಿದ್ದಿದ್ದ? ಒಂದು ಜೀವ ಹೋದಮೇಲೆ ನಿದ್ದೆಯಿಂದ ಎದ್ದಿದಾ? ಎಷ್ಟೋ ಶಾಲಾ ಮಕ್ಕಳು ಇವತ್ತು ಅದೇ ದಾರಿಯಲ್ಲಿ ಹೋಗುತ್ತಿರುತ್ತಾರೆ ದೊಡ್ಡ ಅಪಾಯ ನಡೆಯುತ್ತಿದ್ದರೆ ಏನು ಮಾಡುತ್ತಿದ್ರಿ?
ಸತ್ತ ಮೇಲೆ ಸಾಂತ್ವನ ಹೇಳೋದು ಅಲ್ಲ ಕೆಲಸ,ಜನರ ಮನವಿ ಯನ್ನು ಗಂಭೀರ ವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುವಂತಗಬೇಕು. ಸತ್ತ ಮೇಲೆ ದುಡ್ಡು ಕೊಟ್ಟರೆ ನಮ್ಮ ಹಿರಿಯ ಜೇವವಕ್ಕೆ ಬೆಲೆ ಕಟ್ಟಿದ ಹಾಗೆ ಅಷ್ಟೇ ☹️.

ದಯವಿಟ್ಟು ಇನ್ನು ಆದರೂ ಜನರ ಮನವಿಗೆ ಸ್ಪಂದಿಸಿ ರಾಜಕೀಯ ಬಿಟ್ಟು ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಿ.
ಎಲ್ಲಾ ಅಧಿಕಾರಿ ವರ್ಗ ದವರನ್ನು ಎಚ್ಚರಿಸಿ, ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿ .

ಗಡಿ ಗ್ರಾಮದ ಅಭಿವೃದ್ಧಿ ಕಡೆ ಗಮನ ಹರಿಸಿ

ಈ ದಿನ ನಮ್ಮನ್ನು ಅಗಲಿದ ಆ ದಬ್ಬಡ್ಕ ಕೊಪ್ಪ ಕುಟುಂಬದ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಸಿಗಲಿ

ಓಂ ಶಾಂತಿ 😥

NGB@ಕೊಂಬೆಟ್ಟು

07/08/2025

#ಇದಲ್ವೆ_ಕೊಡಗಿನ_ಕಲಿಯ_ಗುರಿ 👇👌👍

ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗಿಯಾದ ಶಾಸಕರಾದ ಎ ಎಸ್ ಪೂನ್ನಣ್ಣನವರು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು.

A.S Ponnanna

 #ಆನೆ_ತುಳಿತದಲ್ಲಿ_ದುರ್ಮರಣಕ್ಕೀಡಾದ_ರೈತನ_ಅಂತಿಮ_ದರ್ಶನ_ಪಡೆದ_ಶಾಸಕ_ಪೊನ್ನಣ್ಣ . ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ನೆನ್ನೆ ರಾತ್ರಿ ಆನೆ ದಾ...
07/08/2025

#ಆನೆ_ತುಳಿತದಲ್ಲಿ_ದುರ್ಮರಣಕ್ಕೀಡಾದ_ರೈತನ_ಅಂತಿಮ_ದರ್ಶನ_ಪಡೆದ_ಶಾಸಕ_ಪೊನ್ನಣ್ಣ .

ಚೆಂಬು ಗ್ರಾಮದ ದಬ್ಬಕ್ಕ ಭಾಗದಲ್ಲಿ ನೆನ್ನೆ ರಾತ್ರಿ ಆನೆ ದಾಳಿಯಿಂದ ಮೃತಪಟ್ಟ ಕೊಪ್ಪದ ಶಿವಪ್ಪ (72) ಎಂಬ ರೈತನ ಪಾರ್ಥಿವ ಶರೀರವನ್ನು ಇಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಅಂತಿಮ ದರ್ಶನ ಪಡೆದರು .
ನೆನ್ನೆ ಘಟನೆ ನಡೆದ ಕೂಡಲೇ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪುವಯ್ಯರವರನ್ನು ಸ್ಥಳಕ್ಕೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಶಾಸಕರು ವ್ಯವಸ್ಥೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಇಂದು ಅಂತಿಮ ದರ್ಶನ ಪಡೆದ ಬಳಿಕ ಮನೆಯವರಿಗೆ ಸಾಂತ್ವನ ಹೇಳಿದ ಮಾನ್ಯ ಶಾಸಕರು ಪರಿಹಾರ ಚೆಕ್ ನ ಮೊದಲ ಕಂತನ್ನು ಮನೆ ಯವರಿಗೆ ಹಸ್ತಾಂತರಿಸಿದರು. ಬಳಿಕ ಜನರ ಆತಂಕವನ್ನು ಆಲಿಸಿದ ಮಾನ್ಯ ಶಾಸಕರು, ಈಗಾಗಲೇ ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದನ್ನು ಸಹ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಗ್ರಾಮಸ್ಥರಿಗೆ ಭರವಸೆ ನೀಡಿದ ಬಳಿಕ ಅರಣ್ಯಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ಡಬ್ಬಡ್ಕ ಭಾಗದಲ್ಲಿ ರೈಲ್ವೆ ಬ್ಯಾರಿಕೆಡ್ ಸೋಲಾರ್ ದೀಪ ಹೆಚ್ಚುವರಿ ಇ ಟಿ ಎಫ್ ಹಾಗೂ ಆರ್ ಆರ್ ಎಫ್ ಪಡೆಗಳನ್ನು ಕರೆಯುತ್ತಿರುವಂತೆಯೂ ಹಾಗೂ ಶಾಲಾ ಮಕ್ಕಳ ಓಡಾಟಕ್ಕೆ ಇಲಾಖೆ ವತಿಯಿಂದ ಒಂದು ವಾಹನ ವ್ಯವಸ್ಥೆಯನ್ನು ಮಾಡುವಂತೆಯೂ ಸೂಚನೆ ನೀಡಿದರು.

 #ಪೆರುಂಬಾಡಿಯಲ್ಲಿ_ಎಸ್‌ಇಎ_ಮಹಿಳಾ_ಕಾಲೇಜಿನ_ಗ್ರಂಥಾಲಯ_ಉದ್ಘಾಟನೆ_ಮಾಡಿದ_ಶಾಸಕ_ಎ_ಎಸ್_ಪೊನ್ನಣ್ಣ.
07/08/2025

#ಪೆರುಂಬಾಡಿಯಲ್ಲಿ_ಎಸ್‌ಇಎ_ಮಹಿಳಾ_ಕಾಲೇಜಿನ_ಗ್ರಂಥಾಲಯ_ಉದ್ಘಾಟನೆ_ಮಾಡಿದ_ಶಾಸಕ_ಎ_ಎಸ್_ಪೊನ್ನಣ್ಣ.

07/08/2025

#ಶನಿವಾಸಂತೆ_ಪೊಲೀಸ್_ಠಾಣೆಯಲ್ಲಿ_ತೆರೆದ_ಮನೆ_ಕಾರ್ಯಕ್ರಮ'

ಪೊಲೀಸ್ ಠಾಣೆಗಳು ಸಾರ್ವಜನಿಕರಿಗೆ, ವಿಶೇಷವಾಗಿ ಮಕ್ಕಳಿಗೆ ತಮ್ಮ ಆವರಣವನ್ನು ತೆರೆದಿಟ್ಟು, ಪೊಲೀಸ್ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಒಂದು ಕಾರ್ಯಕ್ರಮ. ಈ ಕಾರ್ಯಕ್ರಮದ ಮೂಲಕ, ಮಕ್ಕಳು ಪೊಲೀಸರ ಕೆಲಸದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು
ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ. ಪೊಲೀಸ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಅವರಲ್ಲಿ ಭರವಸೆ ಮೂಡಿಸುವ ಪ್ರಯತ್ನ.

07/08/2025

#ಕಾಡಾನೆ_ಪೀಡಿತ_ದಾಸವಾಳಕ್ಕೆ_ಅರಣ್ಯ_ಇಲಾಖಾಧಿಕಾರಿಗಳ_ಭೇಟಿ.

ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸವಾಳ ಎಂಬಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದರು.

07/08/2025

#ಬೆಂಗಳೂರಿನಲ್ಲಿ_ಮುಖ್ಯಮಂತ್ರಿಗಳನ್ನು_ಭೇಟಿ_ಮಾಡಿದ_ಶಾಸಕ_ಡಾ_ಮಂತರ್_ಗೌಡ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಇಂದು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರನ್ನು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು. Siddaramaiah Mantar Gowda

07/08/2025

#ಗೋಣಿಕೊಪ್ಪ_ಬಾಳೆಲೆ_ರಸ್ತೆಯ_ಕೊನ್ನಂನಕಟ್ಟೆಯಲ್ಲಿ_ಕಾಡಾನೆಯ_ಹಿಂಡು

Address

Kushalnagar
571201

Telephone

+919900280819

Website

Alerts

Be the first to know and let us send you an email when Coorg the Kashmir of Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg the Kashmir of Karnataka:

Share