CIEFM - ಮಂಡ್ಯ

CIEFM - ಮಂಡ್ಯ Contact information, map and directions, contact form, opening hours, services, ratings, photos, videos and announcements from CIEFM - ಮಂಡ್ಯ, Social Media Agency, Mandya.

An initiative by three young people from Mandya, India with the intention of wholesome development of students, mentoring them to be purpose-driven, academically excellent, and socially responsible citizens through the Good News of God.

ಹೇಳುತ್ತಿದ್ದೇನೆ. ದೇವರು ನನಗೆ ಮೇಲು ಮಾಡಿದನೆಂದು ನನಗೆ ನಿಶ್ಚಯವಾಗಿ ಹೇಳಲು ಸಾಧ್ಯವಿದೆ. ಯೇಸು ಕ್ರಿಸ್ತನನ್ನು ಪ್ರತಿಬಿಂಬಿಸಲು ನನ್ನನ್ನು ದೇವ...
03/04/2025

ಹೇಳುತ್ತಿದ್ದೇನೆ. ದೇವರು ನನಗೆ ಮೇಲು ಮಾಡಿದನೆಂದು ನನಗೆ ನಿಶ್ಚಯವಾಗಿ ಹೇಳಲು ಸಾಧ್ಯವಿದೆ. ಯೇಸು ಕ್ರಿಸ್ತನನ್ನು ಪ್ರತಿಬಿಂಬಿಸಲು ನನ್ನನ್ನು ದೇವರು ಶಕ್ತಳಾಗಿಸಿದನು. ಅದು ನನ್ನ ಸ್ವಭಾವವನ್ನೆ ಬದಲೀಸಿತು. ಸಂತೋಷವನ್ನು ದ್ವಿಗುಣಗೊಳಿಸಿತ್ತು. ಸಹಿಷ್ಣತೆಯನ್ನು ಬೆಳೆಸಿತು. ನನ್ನ ಜೀವಿತಕ್ಕೆ ಒಂದರ್ಥವನ್ನು ನೀಡಿತು.

ಎಲ್ಲಕ್ಕಿಂತಲೂ ಮಿಗಿಲಾಗಿ ನಾನಿಂದೂ ಸಂತೃಪ್ತಿಯುಳ್ಳವಳಾಗಿದ್ದೇನೆ. ನನ್ನ ಕಲೆ ನನ್ನ ಮನಸ್ಸಿನ ಸಂತೃಪ್ತಿಯ ಪ್ರತೀಕವಾಗಿದೆ. ಅದನ್ನು ನೋಡುವವರು ಅರಿತುಕೊಳ್ಳಬೇಕಾದದ್ದು: ನನ್ನಂಥ ಬಲಹೀನರನ್ನು ಪರಿಸ್ಥಿತಿಯನ್ನು ಜಯಿಸಲು ದೇವರು ಶಕ್ತಿಕರಿಸುತ್ತಾನೆ ಎಂದು.!!

ನ್ಯೂಸ್ ಅಮೇರಿಕನ್ ದಿನಪತ್ರದಲ್ಲಿ, ಜೋನಿಯ ಹಾಗೂ ಆಕೆಯ ಕಲೆಯ ಬಗ್ಗೆ ಒಂದು ಪೂರ್ಣಪುಟ ಲೇಖನವು ಬರೆಯಲ್ಪಟ್ಟಿತ್ತು; ಅದರಲ್ಲಿ ದೇವರಲ್ಲಿಯ ಆಶ್ರಯದ ತನ್ನ ಆತ್ಮ ಸ್ಥೆರ್ಯದ ಮಾತುಗಳನ್ನು ಪೂರ್ಣವಾಗಿ ಬರೆದಿದ್ದರು. ಬಾಲ್ಟಿಮೋರ್ T.V ಯ ಚಾನೆಲ್ 11ರಲ್ಲಿ 'ಜೋನಿ ಎರಿಕ್ಷನ್ ದಿನ'ದ ಕುರಿತಾದ ವಾರ್ತೆಯನ್ನು ನೀಡಿದರು.

ಜೋನಿಯನ್ನು ಆಶ್ಚರ್ಯಪಡಿಸಿದ ಇನ್ನೊಂದು ವಿಷಯ ತನ್ನ ಚಿತ್ರಗಳು ಮಾರಟವಾಗಿತ್ತು. ಅದು ನಡೆಯುತ್ತದೆ ಎಂಬ ನಿರೀಕ್ಷೆಯು ಆಕೆಗಿರಲಿಲ್ಲ. ಅದನ್ನು ಅವಳು ಇಚ್ಛಿಸಿದರೂ ಸಹ.....! ಆದರೆ 'ಜೋನಿ ಎರಿಕ್ಷನ್ ದಿನೌದಲ್ಲಿ ಅವಳ ಹತ್ತು ಹನ್ನೇರಡು ಚಿತ್ರಗಳು ಸುಮಾರು ಸಾವಿರ ಡಾಲರ್ ಬೆಲೆಗೆ ಮಾರಲ್ಪಟ್ಟವು.!!

ಬಾಲ್ಟಿಮೊರ್‌ನಲ್ಲಿನ ಚಿತ್ರ ಪ್ರದರ್ಶನವನ್ನು ಜೋನಿಯನ್ನು ಪ್ರಸಿದ್ದಗೊಳಿಸಿತು. ಬಹಳ ಪ್ರದರ್ಶನವನ್ನು ನಡೆಸಲು ಆಮಂತ್ರಣಗಳು ಲಭಿಸಿದವು. ಅದರೊಟ್ಟಿಗೆ ಸ್ಕೂಲ್‌ಗಳಲ್ಲಿ, ಚರ್ಚ್‌ ಗಳಲ್ಲಿ, ವೈ. ಡಬ್ಲ್ಯೂ. ಸಿ. ಎ. ಗಳಲ್ಲಿಯೂ ಮತಿತ್ತರ ಸಾರ್ವಜನಿಕ ಸಭೆಗಳಲ್ಲಿಯೂ ಆಕೆ ಆಮಂತ್ರಿಸಲ್ಪಟ್ಟಳು. ಅಲ್ಲಿ ಕೇವಲ ತನ್ನ ಚಿತ್ರಗಳನ್ನು ಪ್ರದರ್ಶಿಸಲು ಮಾತ್ರವಲ್ಲ, ತನ್ನ ಕ್ರೈಸ್ತವ ಸಾಕ್ಷಿಯನ್ನು ಹೇಳಲು ಅವಕಾಶವು ಲಭಿಸಿತು. ಒಂದೊಂದು ಹೊಸ ಪ್ರದರ್ಶನಗಳು ಹಲವು ಹೊಸ ಅವಕಾಶಗಳನ್ನು ಒದಗಿಸಿದವು.

ಹಲವು TV ರೆಡಿಯೋ ಕಾರ್ಯಕ್ರಮಗಳಲ್ಲಿ ಜೋನಿ ಭಾಗವಹಿಸಿದಳು. ಚಿತ್ರಗಳು ಅತೀ ವೇಗದಲ್ಲಿ ಮಾರಲ್ಪಟ್ಟವು. ರಚಿಸಿದ ಚಿತ್ರಗಳು ಆಗಿಂದಾಗಲೇ ಎಂಬಂತೆ! ಅದು ಕುಂಟುಂಬದಲ್ಲಿನ ಸಾಲಗಳನ್ನು ತೀರಿಸಿತು ಎಂದು ಮಾತ್ರವಲ್ಲ, ತಾನು ಆರ್ಥಿಕ ವಿಷಯದಲ್ಲಿಯಾದರೂ ಇತರರಿಗೆ ಭಾರವಾಗಿಲ್ಲ ಎಂಬ ಸಂತೋಷವೂ ಆತ್ಮಸ್ಥೆರ್ಯವೂ ಆಕೆಗೆ ನೀಡಲ್ಪಟ್ಟಿತು. ಕಾಲುಗಳಿಗೆ ಬಲವಿಲ್ಲದಿದ್ದರೂ 'ಸ್ವಂತ ಕಾಲುಗಳಲ್ಲಿ' ನಿಂತುಕೊಳ್ಳಲು ದೇವರು ಸಹಾಯ ಮಾಡಿದನೆಂಬ ಒಂದು ಅನಿಸಿಕೆ!
ಚಿತ್ರಗಳ ರಚನೆಯೊಟ್ಟಿಗೆ ಜೋನಿ ಶುಭಾಷಯಗಳ ಕಾರ್ಡ್‌ ಗಳನ್ನು ಡಿಸೈನ್ ಮಾಡಿ ಅಚ್ಚು ಹಾಕಿಸಿದಳು. ಅದು ಒಳ್ಳೆಯ ರೀತಿಯಲ್ಲಿ ಮಾರಲ್ಪಟ್ಟವು ಆಕೆಯು ಆ ಕಂಪನಿಗೆ 'ಜೋನಿ PTL' ಎಂದು ಹೆಸರಿಟ್ಟಳು.

ಬೇರೆ ಮೂರು ಜೊತೆಗಾರರೊಂದಿಗೆ ಸೇರಿ ಜೋನಿ ಬಾಲ್ಟಿಮೋರ್‌ನಲ್ಲಿ ಒಂದು ಕ್ರೈಸ್ತವ ವಾಚನಾಲಯವನ್ನು ತೆರೆದಳು. ಅದು ಕೇವಲ ಒಂದು ವಾಚನಾಲಯವಾಗಿರದೆ ಅದೊಂದು 'ಕೌನ್ಸಿಲಿಂಗ್ ಸೆಂಟರ್' ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆ ನಗರದ ಒಂದು 'ಕ್ರೈಸ್ತವ ಕೇಂದ್ರ'ವಾಗಿ ಮಾರ್ಪಟ್ಟಿತು.

ಆ ದಿನಗಳಲ್ಲಿ ರಾಷ್ಟ್ರಾಧ್ಯಕ್ಷನನ್ನು ಭೇಟಿಯಾಗಲೂ ಜೋನಿಗೆ 'ವೈಟ್ ಹೌಸ್'ನಿಂದ ಒಂದು ಆಮಂತ್ರಣವು ಲಭಿಸಿತು! ಮರೆಯಲಾಗದ ಒಂದು ಸಂದರ್ಶನವಾಗಿತ್ತು ಅದು. ಫಸ್ಟ್ ಲೇಡಿ (ರಾಷ್ಟ್ರಧ್ಯಕ್ಷರ ಪತ್ನಿ) (ಶ್ರೀಮತಿ ಪ್ಯಾಟ ನಿಕ್ಷನ್)ಗೆ ಜೋನಿ ಒಂದು ಚಿತ್ರವನ್ನು ಉಡುಗೊರೆಯಾಗಿ ನೀಡಿದಳು.

ಜೋನಿ ತನ್ನ ಸಾಕ್ಷಿಯನ್ನು ವಿವರಿಸುವ ಒಂದು ಚಿಕ್ಕ ಪುಸ್ತಿಕವನ್ನು ಅಚ್ಚು ಹಾಕಿಸಿದಳು. ತಾನು ಆಮಂತ್ರಿಸಲ್ಪಟ್ಟಲ್ಲಿ ಎಲ್ಲಾ ಕಡೆಯೂ ಆಕೆ ತನ್ನ ಸಾಕ್ಷಿಯನ್ನು ಹೇಳುತ್ತಿದ್ದಳು. ಮತ್ತು ಈ ಚಿಕ್ಕ ಪುಸ್ತಕವನ್ನು ಹಂಚುತ್ತಿದ್ದಳು.

1974 ರಲ್ಲಿ ಒಂದು ಮರೆಯಲಾಗದ ಅನುಭವ ಜೋನಿಯ ಜೀವಿತದಲ್ಲಿ ಉಂಟಾಯಿತು. ಅಮೇರಿಕಾದಲ್ಲಿ ಅತೀ ಹೆಚ್ಚು ಜನರು ವೀಕ್ಷಿಸುವ “ಟುಡೇ ಶೋ" (ಇಂದಿನ ಪ್ರದರ್ಶನ)ವೆಂಬ ಟಿ. ವಿ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಳಿಗೆ ಅವಕಾಶ ಲಭಿಸಿತು. ಕೋಟಿಗಟ್ಟಲೇ ಜನರು ಅವಳ ಸಾಕ್ಷಿಯನ್ನು ಕೇಳಿದರು. ಅದು ಆಕೆಯ ಸಾಧ್ಯತೆಗಳನ್ನು ಹೆಚ್ಚಿಸಿತು.

ಈಗ ಜೋನಿ ಲೋಕ ಪ್ರಸಿದ್ಧಳಾಗಿದ್ದಾಳೆ. ಆಕೆಯ ಸಾಕ್ಷಿಯನ್ನು ಕೇಳಲು ಹತ್ತು ಸಾವಿರಗಟ್ಟಲೇ ಜನರು ಬಂದು ಸೇರುತ್ತಾರೆ. ಜೋನಿಯ ಕಥೆಯನ್ನು ಬಿಲ್ಲಿ ಗ್ರಾಹಂ ಇವಾಂಜೇಲಿಸ್ಟಿಕ್ ಆಸೋಸಿಯೇಶನ್ ಚಲನಚಿತ್ರವಾಗಿ ಮಾಡಿದರು. ಇಂದು ಜೋನಿ ಒಂದು ಬಹುಮುಖಿ ಪ್ರತಿಭೆಯಾಗಿ ಪ್ರಸಿದ್ಧಳಾಗಿದ್ದಾಳೆ. ಆಕೆಯು ಚಿತ್ರಕಲೆಗಾರ್ತಿ, ಹಾಡುಗಾರ್ತಿ, ಆಲೋಚನಾ ಕರ್ತೆ ಎಂಬ ರೀತಿಗಳಲ್ಲಿ ಪ್ರಸಿದ್ಧಳಾಗಿದ್ದಾಳೆ. ಇದೆಲ್ಲದರ ಮಿಗಿಲಾಗಿ ಆಕೆಯು ಯೇಸು ಕ್ರಿಸ್ತನ ಒಂದು ಶಕ್ತವಾದ ಸಾಕ್ಷಿಯಾಗಿದ್ದಾಳೆ.

ಲೇಖಕರು ಸಾಜು

"ನೋಡು ನಾನು ಇಲ್ಲಿ ಯಾತಕ್ಕೆ ಬಂದಿದ್ದೇನೆಂಬುದು ನನಗೆ ಗೊತ್ತಿಲ್ಲ ನಿಮ್ಮೊಟ್ಟಿಗೆ ಮಾತನಾಡುವದಾದರೆ ಒಳ್ಳೆಯದಾಗಿರುತ್ತದೆಂದು: ನಿಮ್ಮ ಲಕ್ಷಾಗ್ರಸ...
02/04/2025

"ನೋಡು ನಾನು ಇಲ್ಲಿ ಯಾತಕ್ಕೆ ಬಂದಿದ್ದೇನೆಂಬುದು ನನಗೆ ಗೊತ್ತಿಲ್ಲ ನಿಮ್ಮೊಟ್ಟಿಗೆ ಮಾತನಾಡುವದಾದರೆ ಒಳ್ಳೆಯದಾಗಿರುತ್ತದೆಂದು: ನಿಮ್ಮ ಲಕ್ಷಾಗ್ರಸ್ತದಿನಗಳಲ್ಲಿ ಬಹಳ ನಿರಾಶೆಯ ದಿನಗಳನ್ನು ನೀವು ಎದುರಿಸಿರುವಿರೆಂದು..... ಶ್ರೀ ಮಿಲ್ಲರ್ ಹೇಳಿದರು" ಆತನು ಹೇಳಿದ.

ಜೋನಿ ಸ್ವಲ್ಪ ಸಮಯ ಸುಮ್ಮನಿದ್ದಳು. ಆಗಲೂ ಒಂದು ವಿಷಯ ಅರ್ಥವಾಗಿರಲಿಲ್ಲ. ಮಿಲ್ಲರ್ ಈ ಯೌವನಸ್ಥನನ್ನು ತನ್ನ ಕಡೆಗೆ ಯಾಕೆ ಕಳುಹಿಸಿದನು.? ಈ ಯೌವನಸ್ಥನ ಅವಶ್ಯಕತೆಯಾದರೂ ಏನು?

ಆತನು ಒಂದು ನಿಮೀಷ ಜೋನಿಯ ಮುಖವನ್ನು ದೃಷ್ಟಿಸಿ ನೋಡಿ, ಮೆಲ್ಲನೆ ಜಾಕೆಟಿನ್ ಜೇಬಿನಿಂದ ತನ್ನ ಕೈಗಳನ್ನು ಮೇಲಕ್ಕೆ ಎತ್ತಿದ್ದ. ಆದರೆ ಅದರಲ್ಲಿ ಕೈ ಬೆರಳುಗಳಿರಲಿಲ್ಲ.

“ಈ ಅಸಹ್ಯವಾದ ತುಂಡುಗಳನ್ನು ನೋಡು....." ಆತನು ಕೈಗಳನ್ನು ಎತ್ತಿ ಹಿಡಿದನು. "ಒಂದು ಅಗ್ನಿ ಅನಾಹುತದಲ್ಲಿ ಸುಟ್ಟು ಹೋದದಾಗಿದೆ. ಇದು.... ಇನ್ನೂ ಯಾವತ್ತು ನನಗೆ ಕೈಗಳುಂಟಾಗಿರುವದಿಲ್ಲ... ಇದು ನನಗೆ ತಾಳಿಕೊಳ್ಳಲು ಆಗುತ್ತಿಲ್ಲ."

ನಿರಾಶೆ ಹಾಗೂ ದುಃಖದಿಂದ ಆತನ ಮಾತುಗಳು ತೊದಲಿತು. ಆತನ ಮಾತುಗಳು ಚೂರು ಚೂರಾದವು.

"ನಾನು ವಿಷಾದಿಸುತ್ತೇನೆ...." ಜೋನಿ ಹೇಳಿದಳು. "ಶ್ರೀ ಮಿಲ್ಲರ್ ಹೇಳಿದ್ದು ಸತ್ಯವಾಗಿದೆ ಒಂದು ವೇಳೆ ನನಗೆ ನಿಮ್ಮನ್ನು ಸಹಾಯಮಾಡಲು ಸಾಧ್ಯವಾಗಬಹುದು.'

"ನನಗೆ ಗೊತ್ತಿದೆ" ಜೋನಿ ಹೇಳಿದಳು ಆದರೆ, ನಾನು ಹೇಳಿದ್ದು ಅಲಂಕಾರದ ಮಾತುಗಳಲ್ಲಾ. ನಿಮ್ಮ ಮಾನಸಿಕ ಸ್ಥಿತಿಯಿಂದ ನಾನು ಸಹ ಹಾದು ಹೋಗಿದ್ದೇನೆ: ನಿಮ್ಮ ದುಃಖ, ಕೋಪ, ನಿರಾಶೆ. ಮೋಸ ಹೋದೆನೆಂಬ ಆ ಅನಿಸಿಕೆ, ಸ್ವಾಭಿಮಾನಕ್ಕೆ ಉಂಟಾದ ಆ ಆಳವಾದ ಗಾಯ.... ಈ ಎಲ್ಲಾ ಅವಸ್ಥೆಗಳಿಂದ ನಾನು ಹಾದು ಹೋಗಿದ್ದೇನೆ. ಒಂದು ವೇಳೆ ಒಬ್ಬ ಪುರುಷನ ವಿಷಯದಲ್ಲಿ ಅದು ಇನ್ನೂ ವೇದನಾಜನಕವಾಗಿರಬಹುದು. ಆದರೆ ಈ ಅವಸ್ಥೆಯಲ್ಲಿ ನನಗೆ ನಿಮ್ಮೊಟ್ಟಿಗೆ ಸ್ಪಂದಿಸಲು ಸಾಧ್ಯವಿದೆ ಎಂದು ಚಿಂತಿಸುತ್ತೇನೆ."

ಆಸ್ಪತ್ರೆಯ ಕೊಣೆಯಲ್ಲಿ ತಾನು ಅನುಭವಿಸಿದ ಮಾನಸಿಕ ವ್ಯಥೆಯನ್ನು ಜೋನಿ ಆತನಿಗೆ ವಿವರಿಸಿದಳು; ಆತನ ಆಕ್ರೋಶವೂ ವಿದ್ವೇಶವೂ ಸ್ವಾಭಾವಿಕವಾದದ್ದೆ ಎಂದು ಹೇಳಿ ಆತನನ್ನು ಸಂತೈಸಿದಳು.
"ಆದರೆ ನೀವು ಈಗ ಬಹಳ ಆನಂದಭರಿತರಾಗಿದ್ದಿರಲ್ಲಾ, ನೀವು ದುಃಖವನ್ನು ಹೇಗೆ ಎದುರಿಸಿದ್ದಿರಿ?" ಶರೀರ ಪೂರ್ಣವಾಗಿ (ಬಳ೦ದ) ಲಕ್ಷಾಗ್ರಸ್ಥಳಾದ ಒಬ್ಬ ಯುವತಿಯು ಸಂತೋಷಭರಿತಳಾಗಿ ಜೀವಿಸುವದನ್ನು ಕಂಡು ಆತನಿಗೆ ಆಶ್ಚರ್ಯವುಂಟಾಯಿತು!.

ಜೋನಿ ತನ್ನ ಹೋರಾಟದ ಕಥೆಯನ್ನು ಆತನೊಟ್ಟಿಗೆ ವಿವರಿಸಿದಳು. ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಪುನಃ ಸ್ಥಾಪಿಸಲ್ಪಡುವ ಆ ಒಳ್ಳೆಯ ಸಂಬಂಧದ ಬಗ್ಗೆಯೂ, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಅಲ್ಲಂದ ನೀಡುವ ಪ್ರತ್ಯೇಕ ಶಕ್ತಿಯ ಕುರಿತಾಗಿಯೂ, ಇತ್ಯಾದಿ.

ಹೆಚ್ಚು ಕಡಿಮೆ ಅರ್ಧಗಂಟೆಕಾಲ ಅವರು ಮಾತನಾಡಿದರು. ಆ ಯೌವನಸ್ಥನು ಹೋಗುವದಕ್ಕಾಗಿ ಎದ್ದನು; "ಥ್ಯಾಂಕ್ಸ್ ಜೋನಿ, ಮಿಲ್ಲರ್ ಹೇಳಿದ್ದು ಸರಿಯಾಗಿತ್ತು, ಸತ್ಯವಾಗಿ ನೀನು ನನಗೆ ಸಹಾಯ ಮಾಡಿದೆ. ನಾನು ಜೀವಿತವನ್ನು ಅಧಿಕ ನಿರೀಕ್ಷೆಯುಳ್ಳವನಾಗಿ ಎದುರಿಸಲು ಇಚ್ಛಿಸುತ್ತೇನೆ..... ಥ್ಯಾಂಕ್ಸ್"

ತನ್ನ ಸಮಾನಾವಸ್ಥೆಯಲ್ಲಿ ಹಾದುಹೋಗುವವರೊಂದಿಗೆ ಬಹಳ ಸರಳವಾಗಿ ಸಹಕರಿಸಲು ಸಾಧ್ಯವಿದೆಯೆಂದು ಜೋನಿಗೆ ಅರ್ಥವಾಯಿತು. ಸತ್ಯವೇದದ ಬರಹಗಾರರಲ್ಲಿ ಯೋಬ, ಯೆರೆಮೀಯ ಹಾಗೂ ಪೌಲರು ತನ್ನನ್ನು ಹೆಚ್ಚಾಗಿ ಸ್ವಾಧೀನಿಸಲು (ಪ್ರಭಾವ ಬೀರಲು) ಇದುವೇ ಕಾರಣ. ಅವರು ತನಗೆ ಸಮಾನವಾದ ಅನುಭವಗಳಿಂದ ಹಾದು ಹೋದವರಾಗಿದ್ದಾರೆ. ಯೇಸುವಿಗೂ ನಮ್ಮೊಟ್ಟಿಗೆ ಸಹಾನುಭೂತಿ ತೋರಿಸಲು ಸಾಧ್ಯವಾಗುವದರ ಕಾರಣವು ಅದೇ ಆಗಿದೆ. ಆತನು ನಮಗೆ ಸಮಾನವಾಗಿ ಪರೀಕ್ಷಿಸಲ್ಪಟ್ಟನು. ಅದೇ ರೀತಿಯಲ್ಲಿ ಸಮಾನವಾದ ಸ್ಥಿತಿಯಲ್ಲಿರುವ ಸಮಕಾಲೀನ ಜನರಿಗೆ ಸಹಾಯಮಾಡಲು ತನಗೆ ಬೇಗ ಸಾಧ್ಯವಾಗುತ್ತಿದೆ. ಅಂಗವಿಕಲರಾದವರೊಟ್ಟಿಗೆ ಯೇಸುವಿನ ಸಾಕ್ಷಿ ನೀಡಲು ಹೆಚ್ಚಿನ ಸಮಯವನ್ನು ಕಂಡುಕೊಳ್ಳಬೇಕೆಂಬುದಾಗಿ ಜೋನಿಗೆ ತೋಚಿತು...

ಅವಳು ಆ ರೀತಿಯಾಗಿ ಯೋಚಿಸುತ್ತಿರುವಾಗ, ನ್ಯೂಸ್ ಅಮೇರಿಕನ್ ದಿನಪತ್ರದ ಪತ್ರಕರ್ತ 'ಸಿಮೂರ್ ಕೋಫ್' ಬಂದು "ನಿಮ್ಮ ಚಿತ್ರದಲ್ಲಿ PTL ಎಂದು ಯಾಕೆ ಸಹಿ ಮಾಡುತ್ತೀರಿ ಎಂದು ಕೇಳಿದ."

"ಅದು 'ಪ್ರೆಸ್ ದಿ ಲೋರ್ಡ್' ಎಂಬುದರ ಸಂಕ್ಷಿಪ್ತವಾಗಿದೆ" ಆಕೆ ಹೇಳಿದಳು." ನೋಡಿ ಶ್ರೀ. ಕೋಫ್, ದೇವರು ನಮ್ಮನ್ನು ಪ್ರೀತಿಸುತ್ತಾನೆ. ಆತನು ಪರಿಪಾಲಿಸುವ ಒಬ್ಬ ದೇವರಾಗಿದ್ದಾನೆ.... ದೇವರು ಪ್ರೀತಿಸುವವರ ಜೀವಿತದಲ್ಲಿ ಸಂಭವಿಸುವದೆಲ್ಲವೂ... ಸ್ಪಷ್ಟವಾಗಿ ಹೇಳಿದರೆ 17ನೇ ವಯಸ್ಸಿನಲ್ಲಿ ನನಗೆ ಲಕ್ವಾ ಬಹುಮಾನವಾಗಿ ನೀಡಿದ ಆ ಡೈವಿಂಗ್ ದುರಂತವಿದೆಯಲ್ಲಾ, ಅದು ಸಹಾ ಹಿತಕ್ಕಾಗಿ ಸಂಭವಿಸುತ್ತದೆ. ನನ್ನ ಅನುಭವಗಳಿಂದ ಇದನ್ನು

ಲೇಖಕರು ಸಾಜು

ಕೆಲವು ದಿನಗಳ ನಂತರ ಮಿಲ್ಲರ್ ಪೋನ್ ಮಾಡಿದ: ಜೋನಿಯ ಚಿತ್ರಗಳ ಒಂದು ಚಿಕ್ಕ ಪ್ರದರ್ಶನವನ್ನು, ಬಾಲ್ಟಮೋರ್‌ನ ಒಂದು ಹೋಟೇಲಿನಲ್ಲಿ ಏರ್ಪಡಿಸಲಾಗಿದೆ....
01/04/2025

ಕೆಲವು ದಿನಗಳ ನಂತರ ಮಿಲ್ಲರ್ ಪೋನ್ ಮಾಡಿದ: ಜೋನಿಯ ಚಿತ್ರಗಳ ಒಂದು ಚಿಕ್ಕ ಪ್ರದರ್ಶನವನ್ನು, ಬಾಲ್ಟಮೋರ್‌ನ ಒಂದು ಹೋಟೇಲಿನಲ್ಲಿ ಏರ್ಪಡಿಸಲಾಗಿದೆ. ಡ್ಯಾಡಿ, ಜೋನಿಯ ಪೂರ್ಣಗೊಂಡ ಎಲ್ಲಾ ಚಿತ್ರಗಳನ್ನು ತೆಗೆದುಕೊಟ್ಟನು.

ಜೋನಿ ಅತ್ಯಂತ ಸಂತೋಷಪಟ್ಟಳು ಚಿಕ್ಕ ಪ್ರದರ್ಶನವಾದರೂ ಕೆಲವು ಜನರಾದರೂ ತನ್ನ ಚಿತ್ರಗಳನ್ನು ನೋಡುತ್ತಾರೆ. ಎಂದು ನಿರೀಕ್ಷಿಸಿದಳು. ಒಂದೇರಡು ಚಿತ್ರಗಳನ್ನಾದರೂ ಮಾರಲು ಸಾಧ್ಯವಾಗಿದ್ದರೆ ಎಂಬುದಾಗಿ ಅವಳು ಮನಸ್ಸಿನಲ್ಲಿ ನೆನೆಸಿದಳು.

ಪ್ರದರ್ಶನ ದಿನದ ಬೆಳಗ್ಗೆ, ಡಯಾನಾ ಹಾಗೂ ಜೋಯ ಒಟ್ಟಿಗೆ ಜೋನಿಯು ಸಹ ಪ್ರದರ್ಶನ ಸ್ಥಳಕ್ಕೆ ಹೋದಳು. ಹತ್ತು ಗಂಟೆಗೆ ಅಲ್ಲಿ ತಲುಪಲು ಮಿಲ್ಲರ್ ಹೇಳಿದ್ದನು. ಹೋಟೇಲಿನ ಮುಂಭಾಗದಲ್ಲಿರುವ ಸೌತ್ ಸ್ಟ್ರೀಟ್ಗೆ ತಿರುಗಲು ಪ್ರಯತ್ನಿಸಿದಾಗ ವಾಹನಗಳ ಬಹಳ ದಟ್ಟನೆ ಇತ್ತು.

"ಮಾರ್ಗದಲ್ಲಿ ದುರಸ್ಥಿ ಕಾರ್ಯವೇನು ನಡೆಯುತ್ತಿಲ್ಲವಲ್ಲಾ. ಮತ್ತೆ ಯಾಕೆ ಮುಖ್ಯ ಮಾರ್ಗದಲ್ಲಿ ಅಡಚಣೆಯುಂಟು ಮಾಡಿ ಜನರಿಗೆ ತಾಪತ್ರ ನೀಡುತ್ತಿರುವದು?" ಜೋನಿ ಕೇಳಿದಳು.

"ಯಾಕೋ...! ನಾನು ಬೇರೊಂದು ಮಾರ್ಗವಾಗಿ ತಿರುಗಿಸಿ ಕೊಂಡು ಬರುತ್ತೇನೆ. ಅಂದು ಜೊಯ್ ಕಾರನ್ನು ಓಡಿಸುತ್ತಾ ಇದ್ದಳು. ಆಕೆ ಕಾರನ್ನು ಮುಂದಕ್ಕೆ ಕೊಂಡೊಯ್ದಳು.

"ನಿಲ್ಲು! ಅಲ್ಲಿಂದಲೂ ಹೋಗಲು ಸಾಧ್ಯವಿದೆ ಎಂದು ತೋಚುತ್ತಿಲ್ಲ. ನೋಡಿಲ್ಲವೆ ಪೋಲಿಸ್‌ ಜನರನ್ನು ಹಿಂತಿರುಗಿಸುತ್ತಿರುವದು?"

"ಯಾವುದಾದರು ವ್ಯಾಪಾರ, ವ್ಯವಸಾಯ, ಸಮ್ಮೇಳನವೇನಾದರು ನಡೆಯುತ್ತಿರಬಹುದು.

ಜೊಯ್ ಕಾರನ್ನು ತಿರುಗಿಸಲಿಕ್ಕಿದ್ದಳು. ಆಗ ಮುಂದೆ ಕಟ್ಟಿರುವ ಬ್ಯಾನ‌ರನ್ನು ಲಕ್ಷಿಸಿದಳು.

"ಜೋನಿ ಎರಿಕ್ಸನ್ ದಿನ'

ಯಾರಿಗೂ ನಂಬಲು ಸಾಧ್ಯವಾಗಲಿಲ್ಲ. ಹೊಟೇಲಿನ ಮುಂದೆ ದೊಡ್ಡ ಜನಸಾಗರ. ಟಿ.ವಿ ಕ್ಯಾಮರಾದೊಂದಿಗೆ ಜನರು ಕಾದು ನಿಂತಿದ್ದಾರೆ.

ಜೊಯ್ ತುಂಬಾ ಕಷ್ಟಪಟ್ಟು ಕಾರನ್ನು ಹೋಟೇಲಿನ ಮುಂದೆ ತಲುಪಿಸಿದಳು. ಕಾರಿನಿಂದ ವೀಲ್‌ಚೆಯರ್ ಸ್ಥಾನಪಲ್ಲಟಗೊಂಡ ಕೂಡಲೇ ಪತ್ರಕರ್ತರು
ಆಕೆಯನ್ನು ಮುತ್ತಿಕೊಂಡರು. ಅವರು ಹಲವು ಪ್ರಶ್ನೆಗಳನ್ನು ಕೇಳುತ್ತಾ ಇದ್ದರು. ಸಿಟಿಹಾಲ್ ಹೋಟೇಲಿನ ಕಾರ್ಯಕರ್ತನೊಬ್ಬನು ಒಂದು ಪುಷ್ಪಗುಚ್ಛವನ್ನು ನೀಡಿ ಆಕೆಯನ್ನು ಸ್ವಾಗತಿಸಿದನು.

ಜೋನಿಗೆ ಹೆಚ್ಚಿನ ಸಂತೋಷವುಂಟುಮಾಡಿದ ಸಂಗತಿ ಯಾವುದೆಂದರೆ, ಜನರು ತನ್ನ ಚಿತ್ರಗಳನ್ನು ಅದರ ಉತಕೃಷ್ಣತೆಗೆ ಅನುಗುಣವಾಗಿ ಇಷ್ಟಪಟ್ಟರು. ಅವರೆಲ್ಲರೂ ಆಕೆಯೊಟ್ಟಿಗೆ ಒಬ್ಬ ಸಾಮಾನ್ಯ ವ್ಯಕ್ತಿಯೊಡನೆ ವರ್ತಿಸುವ ರೀತಿಯಲ್ಲೇ ವರ್ತಿಸಿದರು. ಪತ್ರಕರ್ತರ ಪ್ರಶ್ನೆಯಲ್ಲೂ ಆಕೆಯ ವೀಲ್‌ಚೆಯರ್ ಹಾಗೂ ವಿಕಾಲಾಂಗತೆ ಎಂಬ ವಿಷಯವೇ ಇರಲಿಲ್ಲ. ಅವರು ಆಕೆಯನ್ನು ವ್ಯವಸಾಯಿಕವಾದ ಪ್ರಶ್ನೆಯನ್ನೆ ಕೇಳಿದರು. ಉದಾಹರಣೆಗೆ:- ನೀವು ಚಿತ್ರಕಲೆಯ ತರಬೇತಿ ಹೊಂದಿದ್ದೀರಾ, ಚಿತ್ರರಚನೆಗೆ ಪ್ರೇರಣೆ ಎಲ್ಲಿಂದ ಲಭಿಸುತ್ತದೆ. ಒಂದು ಚಿತ್ರರಚಿಸಲು ಎಷ್ಟು ಸಮಯಬೇಕಾಗುತ್ತದೆ? ಎಂಬಿತ್ಯಾಧಿ....

ಜನರ ಗುಂಪು ಕಡಿಮೆಯಾದಾಗ ಶ್ರೀ.ಮಿಲ್ಲರ್ ಒಬ್ಬ ಯುವಕನನ್ನು ಆಕೆಯ ಹತ್ತಿರ ಕರೆತಂದನು. ನೀವು ಇವನೊಟ್ಟಿಗೆ ಸ್ವಲ್ಪ ಸಮಯ ಮಾತನಾಡುತ್ತೀರಾ? ಜೋನಿಯ ಉತ್ತರವನ್ನು ನಿರೀಕ್ಷಿಸದೇ ಆತ ಅಲ್ಲಿಂದ ಹೊರಟು ಹೋದ. ಆತನು ಒಂದು ಉದ್ದನೆಯ ಸುಂದರನಾದ ಯುವಕನಾಗಿದ್ದ.

“ನಿಮ್ಮನ್ನು ಬೇಟಿಯಾಗಿ ಸಂತೋಷವಾಯಿತು. ದಯವಿಟ್ಟು ಇಲ್ಲ ಕೂತುಕೊಳ್ಳಿ."

ಆ ಯುವಕನು ಕುರ್ಚಿಯಲ್ಲಿ ಕೂತುಕೊಂಡ,

"ಈಗ ಇವನೊಟ್ಟಿಗೆ ಏನು ಹೇಳಲಿ? ಮಿಲ್ಲರ್ ಇವನನ್ನು ನನ್ನ ಹತ್ತಿರ ಯಾಕೆ ತಂದನು? ಇವನಾದರೋ ಏನು ಮಾತನಾಡಲು ಇಚ್ಛಿಸುತ್ತಿಲ್ಲ. ಏನು ಮಾಡುತ್ತಿಯಾ?" ಕೊನೆಯಲ್ಲಿ ಜೋನಿ ಕೇಳಿದಳು.

"ಏನು ಮಾಡುತ್ತಿಲ್ಲಾ. ಅಗ್ನಿ ಶಾಮಕದಲ್ಲಿ ಕೆಲಸ ಮಾಡುತ್ತಾ ಇದ್ದೆ ಆದರೆ ಈಗ ನನಗೆ ಕೆಲಸ ಮಾಡಲು ಸಾಧ್ಯವಿಲ್ಲ."

"ಹೌದಾ ಏನು ಸಂಭವಿಸಿತ್ತು. ಎಂಬುದಾಗಿ ಹೇಳುತ್ತಿಯಾ." ಜೋನಿ ಕೇಳಿದಳು.

"ಅದೊಂದು ಅಪಘಾತವಾಗಿತ್ತು"

"ಹೌದಾ?"

ಆತನು ತುಂಬಾ ಅಸ್ವಸ್ಥನಾಗಿ ಕುರ್ಚಿಯಲ್ಲಿ ಕೂತಿದ್ದಾನೆ. ಮಾತನ್ನು ಮುಂದುವರಿಸಬೇಕೆಂಬ ಇಚ್ಛೆಯೇನು ಆತನಿಗೆ ಇದ್ದಂತೆ ತೋಚುತ್ತಿಲ್ಲ.

ಲೇಖಕರು ಸಾಜು

ಚಿತ್ರರಚನೆಯಲ್ಲಿ ಹೆಚ್ಚಾಗಿ ಶ್ರದ್ಧೆ ವಹಿಸಲು ಜೋನಿ ನಿರ್ಣಯಿಸಿದಳು. "ವೀಲ್‌ಚೆಯರಲ್ಲಿ ಕೂತು ಬಾಯಲ್ಲಿ ಪೆನ್ಸಿಲ್ ಕಚ್ಚಿ ಹಿಡಿದು ಬಿಡಿಸಿದ ಒಬ್ಬ...
31/03/2025

ಚಿತ್ರರಚನೆಯಲ್ಲಿ ಹೆಚ್ಚಾಗಿ ಶ್ರದ್ಧೆ ವಹಿಸಲು ಜೋನಿ ನಿರ್ಣಯಿಸಿದಳು. "ವೀಲ್‌ಚೆಯರಲ್ಲಿ ಕೂತು ಬಾಯಲ್ಲಿ ಪೆನ್ಸಿಲ್ ಕಚ್ಚಿ ಹಿಡಿದು ಬಿಡಿಸಿದ ಒಬ್ಬರ ಚಿತ್ರವೆಂಬುದಾಗಿ ಪರಿಚಯಿಸಲ್ಪಡಲು ಆಕೆ ಇಷ್ಟಪಡಲಿಲ್ಲ. ತನ್ನ ಚಿತ್ರಗಳು 'ಪ್ರೊಫೆಷನಲ್' (ವ್ಯವಸಾಯಿಕ) ಆಗಿರಬೇಕೆಂದು ಆಕೆ ಇಚ್ಛಿಸಿದಳು.ಆದುದರಿಂದ ಬಹಳ ಸಮಯವನ್ನು ತರಬೇತಿಗಾಗಿ ವ್ಯಯಿಸಿದಳು. ಅದು ಚಿತ್ರರಚನೆಗೆ ಉತಕೃಷ್ಣತೆಯನ್ನು ನೀಡಿತು.

ಜೋನಿ ತಾನು ರಚಿಸಿದ ಚಿತ್ರಗಳನ್ನು ತನ್ನ ಮಿತ್ರರಿಗೆ ವಿಶೇಷ ಸಂಧರ್ಬಗಳಲ್ಲಿ ಕೊಡುಗೆಯಾಗಿ ಕೊಡುತ್ತಿದ್ದಳು. ಚಿತ್ರರಚನೆಯಿಂದ ಆಕೆಯು ಅದಕ್ಕಿಂತ ಹೆಚ್ಚು ಇಚ್ಛಿಸುವದಾಗಲಿ ನಿರೀಕ್ಷಿಸುವದಾಗಲಿ ಮಾಡಿರಲಿಲ್ಲ. ಆದರೆ ಆಕೆಯ ಕರಿಯರನ್ನೆ ಬದಲಿಸುವ ಒಂದು ಘಟನೆ ಆ ದಿನಗಳಲ್ಲಿ ಸಂಭವಿಸಿತು. 'ನೀಲ್ ಮಿಲ್ಲರ್' ಎಂಬ ಒಬ್ಬ ಎಕ್ಸಿಕ್ಯುಟಿವ್‌ನ ಬರೋಣದೊಂದಿಗೆ ಅದು ಸಾಧ್ಯವಾಯಿತು. ಸಾಧಾರಣ ಜನರು ಅಡಚಣೆಗಳನ್ನು ಕಾಣುವ ಸ್ಥಳದಲ್ಲಿ ಸಾಧ್ಯತೆಗಳನ್ನು ಕಾಣುವ ಒಬ್ಬ ವ್ಯಕ್ತಿಯಾಗಿದ್ದ ಮಿಲ್ಲರ್ ಡ್ಯಾಡಿಯನ್ನು ನೋಡಲು ಬಂದಿದ್ದ ಆ ವ್ಯಕ್ತಿ: ಸ್ವಾಗತ ಕೊಠಡಿಯ ಗೊಡೆಯಲ್ಲಿ ನೇತುಹಾಕಿದ್ದ ಒಂದು ಚಿತ್ರವನ್ನು ನೋಡಿ "ಇದು ಪ್ರಿಂಟಾ ಅಥವಾ ಓರಿಜನಲಾ?" ಎಂದು ಜೋನಿಯ ಡ್ಯಾಡಿಯನ್ನು ಕೇಳಿದ.
ಅದು "ಓರಿಜನಲ್" ಆಗಿದೆ ಡ್ಯಾಡಿ ಹೇಳಿದರು. "ಸರಿಯಾಗಿ ಹೇಳುವದಾದರೆ ಅದು ನನ್ನ ಮಗಳು ಜೋನಿ ರಚಿಸಿದ್ದು."

"ಸತ್ಯವಾಗಿಯೂ.... ಮನೋಹರವಾಗಿದೆ! ಅವಳು ನಿಜವಾಗಿಯೂ ಒಬ್ಬ ಕಲೆಗಾರಳೇ" ಮಿಲ್ಲರ್ ಹೇಳಿದ.

"ನೋಡಿ ಶ್ರೀ. ಎರಿಕ್ಷನ್ ಎಷ್ಟು ಸೂಕ್ಷ್ಮವಾಗಿ ಇದನ್ನು ರಚಿಸಲಾಗಿದೆ. ಇದು ಎಷ್ಟು ವಾಸ್ತವಿಕವಾಗಿ ತೋಚುತ್ತದೆ?” ನಿಶ್ಚಯವಾಗಿ ಅವಳಿಗೆ ಅವಳದೇ ಆದ ಶೈಲಿ ಇದೆ. ಬಣ್ಣ ಕೊಡುವದರಲ್ಲಿ ಅವಳು ಬೇಕಾದಷ್ಟು ನಿಪುಣತೆಯನ್ನು ತೋರಿದ್ದಾಳೆ.” ಆತನು ಚಿತ್ರವನ್ನು ದಿಟ್ಟಿಸಿ ನೋಡುತ್ತಲೇ ನಿಂತು ಬಿಟ್ಟ.

"ದನ್ಯವಾದಗಳು ಶ್ರೀ ಮಿಲ್ಲರ್, ನಾನು ಈ ವಿಷಯಗಳನ್ನು ನನ್ನ ಮಗಳಿಗೆ ಹೇಳುತ್ತೇನೆ." ಬೇರೊಂದು ವಿಷಯವನ್ನು ಸಹ ತಿಳಿದುಕೊಳ್ಳುವದು. ವಿಸ್ಮಯಕಾರಿಯಾಗಿರುತ್ತದೆ. ಶ್ರೀ ಮಿಲ್ಲರ್ ನನ್ನ ಮಗಳು ಒಂದು ಲಕ್ವಾಗ್ರಸ್ಥಳಾಗಿದ್ದಾಳೆ. ಆಕೆಯು ಕೈಗಳಿಂದಲ್ಲಾ ಚಿತ್ರ ರಚಿಸುವದು. ಬ್ರಷ್‌ನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು."

"ಹಾಂ!" ಮಿಲ್ಲರ್ ವಿಸ್ಮಿತನಾಗಿ ನೋಡುತ್ತಾ ನಿಂತನು.

"ವಿಸ್ಮಯಕಾರಿಯಾಗಿದೆ ನಿಜವಾಗಿಯೂ ಶ್ರೇಷ್ಠ!"

"ಅದು ಮಾತ್ರವಲ್ಲ ಅವರಿಗೆ ಚಿತ್ರಕಲೆಯಲ್ಲಿ ಪ್ರತ್ಯೇಕ ತರಬೇತಿಯೇನು ಲಭಿಸಿಲ್ಲ. ನಾನು ಚಿಕ್ಕಂದಿನಲ್ಲಿ ಚಿತ್ರಗಳನ್ನೂ ಬಿಡಿಸುತ್ತಿದ್ದೆ. ನನಗೆ ತೋಚುತ್ತದೆ. ಅವಳಿಗೆ ಈ ಸಾಮರ್ಥ್ಯವು ವಂಶ ಪಾರಂಪರ್ಯವಾಗಿ ಲಭಿಸಿರಬಹುದು." ಡ್ಯಾಡಿ ಸ್ವಾಭಿಮಾನದೊಡನೆ ಹೇಳಿದ.

'ಆಕೆ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾಳಾ?" ಮಿಲ್ಲರ್ ಕೇಳಿದ.

"ಹೇ, ಹಾಗೇನು ಇಲ್ಲ. ಆಕೆ ಚಿತ್ರಗಳನ್ನು ಕೆಲವು ಮಿತ್ರರಿಗೆ ಕೊಡುತ್ತಾಳೆ ಅಷ್ಟೇ."

ಆದರೆ ಶ್ರೀ ಎರಿಕ್ಸನ್, ಇಷ್ಟು ಅದ್ಭುತವಾದ ಕಲೆಯನ್ನು ಪ್ರದರ್ಶಿಸದೇ ಇರಬಾರದು... ಆಗಲಿ ನಾನು ಚಿಕ್ಕದಾದ ಒಂದು ಚಿತ್ರಕಲೆ ಪ್ರದರ್ಶನವನ್ನು ಏರ್ಪಡಿಸಿದರೆ ಆಕೆಗೆ ವಿರೋಧವೇನು ಇಲ್ಲ ತಾನೇ?"

"ಯಾತಕೆ? ಅವಳಿಗೆ ಇದರಲ್ಲಿ ಸಂತೋಷವೇ ಉಂಟಾಗುತ್ತದೆ" ಡ್ಯಾಡಿ ಹೇಳಿದರು.

ಲೇಖಕರು ಸಾಜು

ತಿರುಗಿ ಅವಳು ಪೌಲನ ಮಾತುಗಳಲ್ಲಿ ಸಂಚರಿಸಿದಳು;ಸಹೋದರರೇ, ನಾವೊಟ್ಟಾಗಿ ಈ ಹೋರಾಟದಲ್ಲಿದ್ದೇವೆ. ಕಳೆದ ದಿನಗಳಲ್ಲಿ ನಾನು ತ್ರಿಸ್ತನಿಗೋಸ್ಕರ ಕಷ್ಟಪ...
30/03/2025

ತಿರುಗಿ ಅವಳು ಪೌಲನ ಮಾತುಗಳಲ್ಲಿ ಸಂಚರಿಸಿದಳು;

ಸಹೋದರರೇ, ನಾವೊಟ್ಟಾಗಿ ಈ ಹೋರಾಟದಲ್ಲಿದ್ದೇವೆ. ಕಳೆದ ದಿನಗಳಲ್ಲಿ ನಾನು ತ್ರಿಸ್ತನಿಗೋಸ್ಕರ ಕಷ್ಟಪಡುವದನ್ನು ನೀವು ನೋಡಿದ್ದೀರಿ. ಈಗಲೂ ನಾನು ಹೋರಾಟ ಮಧ್ಯದಲ್ಲಿದ್ದೇನೆಂಬದಾಗಿ ನೀವು ಬಲ್ಲರಲ್ಲಾ, ಅದೇ ಹೋರಾಟದಲ್ಲಿ ಸಹ ಭಾಗಿಗಳಾಗುವದಕ್ಕಾಗಿ ನಾನು ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ (ಫಿಲಿಪ್ಪಿ #30)

ವ್ಯತ್ಯಾಸವುಳ್ಳ ರೀತಿಯಲ್ಲಿಯಾದರು ಸರಿಯೇ; ತಾನು ಸಹ ಮೊದಲ ಶತಮಾನದ ಪೌಲನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆಂಬ ಅರಿವು ಜೋನಿಯನ್ನು ಉತ್ತೇಜಿಸಿತು. ಹೌದು ತಾನು ಆ ಹೋರಾಟದಲ್ಲಿದ್ದೇನೆ. ಶತಮಾನಗಳಿಂದ ಭಕ್ತರು ಹೋರಾಡಿದ ಹೋರಾಟ!!

'ತಾನು ಬಂಧಿತನಾಗಿದ್ದರೂ ದೇವರ ವಾಕ್ಯಕ್ಕೆ ಬಂಧನವಿಲ್ಲ' ಎಂದು ಪೌಲನು ಹೇಳುತ್ತಿದ್ದಾನೆ. (2 ತಿವೊಥೆ 219) ಹೌದು ಪೌಲನು ರೋಮಾ ಕಾರಗೃಹದಲ್ಲಿ ಬಂಧಿತನಾಗಿದ್ದಾನು. ತಾನೂ ಈ ವೀಲ್‌ಚೆಯರ್‌ನಲ್ಲಿ ಬಂಧಿತಳಾಗಿದ್ದೇನೆ. ಆದರೆ ದೇವರ ವಾಕ್ಯವೂ ಬಂಧಿಸಲ್ಪಡುವದಿಲ್ಲ. ಅದನ್ನು ಸಂಕೊಲೆಯಿಂದ ಬಂಧಿಸಲು ಸಾಧ್ಯವಿಲ್ಲ.

"ದೇವರಾರಿಸಿಕೊಂಡವರಿಗೆ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವ ಸಹಿತವಾಗಿ ಹೊಂದಲು ನನ್ನ ಕಷ್ಟವು ಪ್ರಯೋಜನ ಪಡುವದಾದರೆ ಅದನ್ನು ಸಹಿಸಲು ನಾನು ಪೂರ್ಣ ಸಿದ್ಧತೆಯುಳ್ಳವನಾಗಿದ್ದೇನೆ (2 ತಿಮೊಥೆ 2:10)

'కౌన్సిలరా' ఎంబ రితియల్ల జిలనియోట్టిగ జిల్లు మగ్గళు ಬೇಗನೆ ಬೆರೆತರು. ಅತೀ ವ್ಯಕ್ತಿಗತವಾದ ಪ್ರಶ್ನೆಗಳನ್ನು ಸಹ ಕೇಳಲು ಅವರು ಹಿಂಜರಿಯಲಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಹಾಗೂ ಅವರನ್ನು ಹೆಚ್ಚಿನ ಉನ್ನತ ನಂಬಿಕೆಯ ಅನುಭವಕ್ಕೆ ನಡೆಸಲು ಆಕೆ ಪ್ರಯತ್ನಿಸಿದಳು. ಅವರಲ್ಲಿ ಅನೇಕರ ಜೀವಿತವನ್ನು - ಕೆಲವರ ಕರಿಯರ್ ಮೇಲೆ ಪ್ರಭಾವ ಬೀರಲು ಅವಳಿಗೆ ಸಾಧ್ಯವಾಯಿತು. ಉದಾಹರಣೆಗೆ, 'ಡೇಬಿ' ಎಂಬ ಒಬ್ಬ ಯುವತಿ, ಒಬ್ಬ ಫಿಸಿಯೋ ಥೆರಾಪಿಸ್ಟ್ ಆಗಲು ಅದೇ ರೀತಿಯಲ್ಲಿ ಕಷ್ಟವನ್ನನುಭವಿಸುವ ಅಂಗವಿಕಲರಿಗೆ ಸಹಾಯಮಾಡಲು ನಿರ್ಣಯಿಸಿದಳು.

ಜೋನಿ ತನ್ನ ಜೊತೆಗಾರರೊಂದಿಗೆ ಒಂದು ಸಂಗೀತ ಸಂಘವನ್ನು ರಚಿಸಿದರು; ಕಳಪೆಯಲ್ಲದ ಒಂದು ಸಂಘವಾಗಿತ್ತು ಅವರದು. ಹೆಚ್ಚಿನ
ಸಮಯಗಳಲ್ಲಿಯೂ 'ಯಂಗ್ ಲೈಫ್' ಹಾಗೂ 'ಯುತ್ ಪರ್ ಕ್ರೈಸ್ಟನ ಕೂಟಗಳಲ್ಲಿ ಜೋನಿ ಹಾಗೂ ಜೊತೆಗಾರರೇ ಹಾಡುತ್ತಿದ್ದರು.

ಸಂಗೀತ, ಸಾಕ್ಷಿ ಕಲಿಕೆ.... ಸಂತೋಷದ ದಿನಗಳು ಮುಂದುವರೆಯುತ್ತಲೇ ಹೋಯಿತು. ಆದರೆ ಸ್ಟೀವ್ ಒಂದು ಬೈಬಲ್ ಸೆಮಿನಾರಿಯಲ್ಲಿ ಸೇರಿ ಕಲಿಯಲು ನಿರ್ಣಯಿಸಿದ್ದ. ಸ್ಟಡಿ ಗ್ರುಪ್‌ನಲ್ಲಿ ಬೇರ್ಪಡಿಸುವಿಕೆಯ ದುಃಖವು ಪ್ರಸರಿಸಿತು. ಆದರೆ ಅವನ ಬಗ್ಗೆ ಇರುವ ದೇವರ ಉದ್ದೇಶವೂ ಪೂರ್ತಿಯಾಗಲು ತಾವು ಒಂದು ಅಡಚಣೆಯಾಗಿರಬಾರದೆಂಬ ಅರಿವು ಅವರಿಗಿತ್ತು.

ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇದ್ದದ್ದು ಜೋನಿಗಾಗಿತ್ತು. ನಿರಾಶೆಯ ಗುಂಡಿಯಿಂದ ಆಕೆಯನ್ನು ಸತ್ಯವೇದ ಜ್ಞಾನದ ಪವಿತ್ರತೆಗೆ ಎತ್ತಲು ದೇವರು ಸ್ಟೀವ್‌ನನ್ನು ಉಪಯೋಗಿಸಿದ್ದನು. ಡಯಾನಾ ಸ್ಟೀವ್‌ನನ್ನು ಕುರಿತು ಹೇಳಿದಾಗ ತಾನು ಹೊರಪಡಿಸಿದ ಅಭಿಪ್ರಾಯವನ್ನು ಅವಳು ನೆನೆಸಿಕೊಂಡಳು: ಹೈಸ್ಕೂಲ್ ವಿಧ್ಯಾರ್ಥಿಯಾ ಸತ್ಯವೇದದ ಸತ್ಯಗಳನ್ನು ಕಲಿಸಲು ಬರುತ್ತಿರುವದು ಎಂಬುದಾಗಿ.... ಆದರೆ, ಆ ಹೈಸ್ಕೂಲ್ ವಿಧ್ಯಾರ್ಥಿ ತನಗೆ ಅನೇಕ ಸತ್ಯವೇದದ ಸತ್ಯಗಳನ್ನು ಕಲಿಸಿದ.

"ಸ್ಟೀವ್, ಇನ್ನು ನನ್ನನ್ನು ದೇವರ ವಾಕ್ಯದ ಸತ್ಯಗಳಿಗೆ ಕೊಂಡೊಯ್ಯುವವರಾರು?" ಜೋನಿ ಕೇಳಿದಳು. 'ನಿನ್ನ ಮಾತುಗಳಿಂದಲೇ ನಾನು ಸತ್ಯವೇದ ವಿಚಾರಗಳನ್ನು ಕಲಿತದ್ದು. ನೀನೇ ನನಗೆ ಪೌಲನ ಮಾತುಗಳ ಅರ್ಥವನ್ನು ತಿಳಿಸಿಕೊಟ್ಟದ್ದು. ಸ್ಟೀವ್ ಜೀವಿತವನ್ನು ಬದಲಿಸಲು ಸಾಧ್ಯವಿರುವ ದೇವರ ವಾಕ್ಯದ ಭಾಗಗಳನ್ನು ನನ್ನ ಮುಂದೆ ತೆರೆದಿಟ್ಟವನು ನೀನೇ. ನಿನ್ನ ಅನುಪಸ್ಥಿತಿಯು ನನಗೆ ಸಹಿಸಲು ಅಸಾಧ್ಯವಾದದ್ದು, ಕಳೆದ ಒಂದು ವರ್ಷ ನನ್ನ ಆತ್ಮೀಕ ನಾಯಕ ನೀನಾಗಿದ್ದಿ.”

"ಜೋನಿ ಅದು ಸರಿಯಲ್ಲ. ದೇವರು ನನ್ನನ್ನು ಉಪಯೋಗಿಸಿದ. ಅಷ್ಟು ಮಾತ್ರವೇ. ನಿನ್ನನ್ನು ಕಲಿಸಿದ್ದೂ ಮಾರ್ಗದಲ್ಲಿ ನಡೆಸಿದ್ದೂ ಪವಿತ್ರಾತ್ಮನಾಗಿದ್ದಾನೆ. ನಾನು ಎಲ್ಲಿಯೋ ಓದಿದ ಒಂದು ಹೇಳಿಕೆಯನ್ನು ನೆನೆಸಿಕೊಳ್ಳುತ್ತೇನೆ. ಒಬ್ಬ ದೇವರ ಮನುಷ್ಯನು ಮರಣಹೊಂದುವಾಗ, ದೇವರ ಕಾರ್ಯ ಮರಣಹೊಂದುವದಿಲ್ಲ. ಕೋನಿ, ದೇವರಿಗೆ ಯಾರು ಏನು ಒಂದು ಅನಿವಾರ್ಯತೆಯಲ್ಲ, ನಾನು ಇಲ್ಲಿಂದ ಹೋಗುವಾಗ ದೇವರು ನಿನ್ನನ್ನು ಕೈಬಿಡುತಾನೆಂಬುದಾಗಿಯೋ? ಯಾವತ್ತಿಗೂ ಇಲ್ಲ. ನಿನ್ನ ನೋಟವು ಯಾವಾಗಲೂ ಕ್ರಿಸ್ತನಲ್ಲಿಯಾಗಿರಬೇಕು. ದೇವರ ವಾಕ್ಯವನ್ನು ಹಿಂಬಾಲಿಸಲು ಆತನು ನಂಬಿಗಸ್ತನಾಗಿ ನಿನ್ನನ್ನು ನಡೆಸುತ್ತಾನೆ."

ಸ್ಟೀವ್‌ನ ಪತ್ರಗಳು 'ಮೂರಯ್'ಗೆ ಲಭಿಸುತಿತ್ತು. ಬೈಬಲ್ ಸ್ಟಡಿಗ್ರುಪ್‌ನಲ್ಲಿರುವ ಎಲ್ಲರಿಗೂ ಆತನ ಅನುಪಸ್ಥಿತಿ ಒಂದು ನಷ್ಟವೇ ಆಗಿತ್ತು.
ಆದರೆ 'ಪವಿತ್ರಾತ್ಮನು ನಡೆಸುತ್ತಾನೆ' ಎಂಬ ನಿಶ್ಚಯವು ಯಥಾರ್ಥವಾಯಿತು. ಸತ್ಯವೇದದ ಸತ್ಯಗಳನ್ನು ಈಗ ಪರರ ಸಹಾಯವಿಲ್ಲದೆ ಅರ್ಥಮಾಡಿಕೊಳ್ಳಲು ಪವಿತ್ರಾತ್ಮನು ಜೋನಿಯನ್ನು ಶಕ್ತಳಾಗಿಸಿತು.

ಲೇಖಕರು ಸಾಜು

ಒಳ್ಳೆಯ ಕಲಾಕೃತಿಯಾಗುವುದಕ್ಕಾಗಿ ದೇವರಿಗೆ ಚಿತ್ರ ಬಿಡಿಸಲು ಪೂರ್ಣವಕಾಶ ನೀಡಬೇಕಾದದ್ದು ಅವಶ್ಯಕ.ಬೇರೊಂದು ಮಾತು: ಒಂದು ಚಿತ್ರವು ಕಲೆಗಾರನ ಮನಸ್ಸ...
29/03/2025

ಒಳ್ಳೆಯ ಕಲಾಕೃತಿಯಾಗುವುದಕ್ಕಾಗಿ ದೇವರಿಗೆ ಚಿತ್ರ ಬಿಡಿಸಲು ಪೂರ್ಣವಕಾಶ ನೀಡಬೇಕಾದದ್ದು ಅವಶ್ಯಕ.

ಬೇರೊಂದು ಮಾತು: ಒಂದು ಚಿತ್ರವು ಕಲೆಗಾರನ ಮನಸ್ಸಿನ ಪ್ರತಿಬಿಂಬವಾಗಿದೆ. ಅದರಲ್ಲಿ ಬೇರೆಯಾರು ಸೇರಬಾರದು ನಮಗೆ ದೇವರನ್ನು (ಒಂದು ಕನ್ನಡಿಯಲ್ಲಿಯೋ ಎಂಬಂತೆ) ಮನೋಹರವಾಗಿ ಪ್ರತಿ ಬಿಂಬಿಸಬೇಕಾದರೆ, ಆ ಚಿತ್ರ ರಚನೆಯು ಪೂರ್ಣವಾಗಿ ದೇವರದಾಗಿರಬೇಕು. ಅದು ಸಾಧ್ಯವಾಗುವಾಗಲೇ ನಾವು ದೇವರ ಸ್ವರೂಪವನ್ನು ಪ್ರತಿಬಿಂಬಿಸುತ್ತೇವೆ.

ಮತ್ತೊಂದು ವಿಷಯವನ್ನು ಸಹಾ ಇದರಿಂದ ಕಲಿಯಬಹುದು ಜೋನಿ:

ನಿನ್ನ ದೇಹ-ವೀಲ್‌ಜೆಯರ್‌ನ ಪರಿಸ್ಥಿತಿ-ಒಂದು ಕ್ಯಾನವಾಸ್ (ಚಿತ್ರರಚನೆಗೆ ಉಪಯೋಗಿಸುವ) ಮಾತ್ರವಾಗಿದೆ. ಅದರಲ್ಲಿ ದೇವರು ಮನೋಹರವಾದ ಚಿತ್ರ ಬಿಡಿಸುತ್ತಿದ್ದಾನೆ. ಒಂದು ಆರ್ಟ ಗ್ಯಾಲರಿಗೆ ಜನರು ಹೋಗುವದು ಕೇವಲ ಆ ಕ್ಯಾನವಾಸ್‌ನ್ನು ನೋಡುವದಕ್ಕಲ್ಲಾ, ಕಲಾಕೃತಿ (ಚಿತ್ರ)ವನ್ನು ನೋಡುವದಕ್ಕೆ ನಾನು ಇದನ್ನು ಹೇಳುವದಕ್ಕೆ ಕಾರಣ ನಿನ್ನ ಕೀಳರಿಮೆಯೇ ಕಾರಣ. ವೀಲ್‌ಜೆಯರ್‌ನಲ್ಲಿ ನಿನ್ನ ಪರಿಸ್ಥಿತಿಯನ್ನು ಬೇರೆಯವರು ಹೇಗೆ ಕಾಣುತ್ತಾರೆ. ಎಂದು ನೀನು ಅನೇಕ ಸಾರಿ ವ್ಯಾಕುಲ ಪಡುವವಳಾಗಿದ್ದೆ. ಆದರೆ ಅದನ್ನು ಕುರಿತು ಚಿಂತಿಸಲೇ ಬೇಡ. ಈ ಕ್ಯಾನವಾಸಿನ ಚಿತ್ರವು ಪೂರ್ಣಗೊಂಡಾಗ: ಅದು ಕ್ರಿಸ್ತನ ಸ್ವರೂಪಕ್ಕೆ ಹೊಲಿಕೆಯುಳ್ಳದಾಗಿರುತ್ತದೆ;

ಜೋನಿ ಸ್ತಬ್ಧಳಾಗಿ ಕೂತುಬಿಟ್ಟಳು. ಎಷ್ಟು ಉನ್ನತವಾದ ಆತ್ಮೀಕ ಸತ್ಯವನ್ನು ಸ್ಟೀವ್ ಇಷ್ಟು ಸರಳವಾಗಿ ಹೇಳಿಕೊಟ್ಟಿದ್ದಾನೆ!! ತನ್ನ ವೀಲ್‌ಚೆಯರ್ ಜೀವಿತ ದೇವರ ಕ್ಯಾನ್‌ವಾಸ್ ಆಗಿದೆ. ದೇವರು ಚಿತ್ರರಚನೆಯಲ್ಲಿ ನಿರತನಾಗಿದ್ದಾನೆ. ಏನಾಗಿರಬಹುದು ಚಿತ್ರ? ಅದು ಚಿತ್ರಗಾರನ ಮನಸ್ಸಿನಲ್ಲಿದೆ. ಚಿತ್ರಗಾರನ ಸಾಮರ್ಥದಲ್ಲಿ ಹಾಗೂ ಪರಿಪಾಲನೆಯಲ್ಲಿ ನಂಬಿಕೆಯಿದ್ದರೆ. ವ್ಯಾಕುಲತೆ ಯಾತಕ್ಕೆ? ತಾಳ್ಮೆಯಿಂದ ಕಾದಿರುವದಾದರೆ ಕ್ರಿಸ್ತನ ಸ್ವರೂಪವು ತನ್ನಲ್ಲಿ ಗೋಚರಿಸುತ್ತದೆ.

ವೀಲ್‌ಚೆಯರನ್ನು ಕುರಿತು ತುಂಬಾ ವ್ಯತ್ಯಸ್ಥವಾದ ಒಂದು ವಿಚಾರ ಜೋನಿಗೆ ಲಭಿಸಿತು, ಒಂದು ಕಾಲದಲ್ಲಿ ಅದೊಂದು ಭಾರವುಳ್ಳದಾಗಿತ್ತು. ಕ್ರಮೇಣವಾಗಿ ಕರ್ತನು ಜೀವಿತದಲ್ಲಿ ಕ್ರೀಯೆಮಾಡಲು ಆರಂಭಿಸಿದಾಗ, ದೇವರ ಪದ್ಧತಿಗಳನ್ನು ಅಥೈಸಲು ಸಹಾಯಮಾಡುವ ಒಂದು ಉಪಕರಣವಾಗಿತ್ತು ಅದು, ಆದರೆ ಈಗ ದೇವರ ಕ್ರೀಯೆಗಳನ್ನು ತನ್ನಲ್ಲಿ ಪ್ರಕಟಿಸಲ್ಪಡುವದಕ್ಕಾಗಿ ಸಹಾಯ ಮಾಡುವ ಒಂದು ಕ್ಯಾನ್‌ವಾಸ್ ಆಗಿದೆ ಈ ವೀಲ್‌ಚೆಯರ್-ಇದು ದೇವರಿಂದ ಲಭಿಸಿದ ಒಂದು ಅರ್ಶಿವಾದವಾಗಿದೆ. ಹಾಗೆ ಜೀವಿತದಲ್ಲಿ ಮೊಟ್ಟಮೊದಲಬಾರಿ, ಜೋನಿ ತನ್ನ ವೀಲ್‌ಚೆಯರನ್ನು ಸಂತೋಷದಿಂದ ನೋಡಲಾರಂಭಿಸಿದಳು..
ಇದೇ ಸಮಯದಲ್ಲಿ ಜೋನಿಯ 'ಸೇವೆ'ಯು ನಡೆಯುತ್ತಲೇ ಇತ್ತು. ರಾನಡಲ್ಸ್ ಪಟ್ಟಣದ ಹತ್ತಿರವಿರುವ 'ಯಂಗ್ ಲೈಫ್ ಕ್ಲಬ್' ಜೋನಿಯನ್ನು ಒಬ್ಬ 'ಕೌನ್ಸಲರ್' ಆಗಿ ಕಾರ್ಯನಿರ್ವಹಿಸಲು ಆಮಂತ್ರಿಸಿತು. ಅದು ಜೋನಿಗೆ ತುಂಬಾ ಸಂತೋಷ ನೀಡಿದ ಅನುಭವವಾಗಿತ್ತು, ಹೈಸ್ಕೂಲ್ ಹಾಗೂ ಜೂನಿಯರ್ ಶಾಲೆಗಳಲ್ಲಿಯೂ ಕಲಿಯುವ ಹೆಣ್ಣು ಮಕ್ಕಳೊಟ್ಟಿಗೆ ತನ್ನ ವಿಶ್ವಾಸವನ್ನು ಹಂಚಿಕೊಳ್ಳಲು ಅವಕಾಶ ಲಭಿಸಿತು. ದೇವರು ಅವರ ಜೀವಿತದಲ್ಲಿ ಮಾಡಿದ, ಮಾಡುತ್ತಿರುವ ಅದ್ಭುತಗಳ ವಿವರಣೆಯು ಆ ಹೆಣ್ಣು ಮಕ್ಕಳಲ್ಲಿ ಆತ್ಮ ಸ್ಥೆರ್ಯವನ್ನು ಅಭಿವೃದ್ಧಿಪಡಿಸಲು ಪರ್ಯಾಪ್ತವಾಗಿತ್ತು.

'ದೇವರ ವಾಕ್ಯವು ನಂಬಿಕೆಗೆಯೋಗ್ಯ (ವಿಶ್ವಾಸಾರ್ಹ)ವಾದದ್ದು. ಯಾಕೆಂದರೆ ನಾನದನ್ನು ಅನುಭವಿಸಿದ್ದೆನೆ, ನನಗೆ ಇರುವಂತಹ ಪರಿಸ್ಥಿತಿಗಳಲ್ಲಿಯೂ ದೇವರು ನಂಬಿಗಸ್ತನೋ ಎಂದು ನೀವು ಕೇಳಬಹುದು. ಹೌದು ಈ ವೀಲ್‌ಚೆಯರ್‌ನ ಅನುಭವಗಳಲ್ಲಿಯೂ ಆತನು ನಂಬಿಗಸ್ತನಾಗಿದ್ದಾನೆ. ಅದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ನೀವು ಈ ವೀಲ್‌ಚೆಯರ್‌ನ ಅನುಭವದಿಂದ ಹಾದು ಹೋಗಬೇಕಾದದ್ದಿಲ್ಲ. ನನ್ನ ಸಾಕ್ಷಿಯನ್ನು ನೀವು ನಂಬುವದೇ ಆದರೆ....' ಆಕೆ ಅವರಿಗೆ ಹೇಳಿದಳು.

ಇದನ್ನು ಹೇಳಿದಾಗ ಜೋನಿಗೆ ಸಂತೋಷವುಂಟಾಯಿತು. ತನ್ನ ವೀಲ್‌ಚೆಯರ್ ದೇವರ ರಾಜ್ಯದ ವ್ಯಾಪ್ತಿಗೆ ಒಂದು ಕಾರಣವಾಗುತ್ತದೆ ಎಂಬುದಾಗಿ ಸ್ಟೀವ್ ಒಂದು ಸಾರಿ ಹೇಳಿದ್ದ. ವೀಲ್‌ಚೆಯರ್‌ನಲ್ಲಿಯೂ ದೇವರು ನಂಬಿಗಸ್ತನಾಗಿದ್ದಾನೆ ಎಂಬ ಸಾಕ್ಷಿಯು ವಿಧ್ಯಾರ್ಥಿಗಳನ್ನು ಉತ್ತೇಜಿತ್ತರಾಗ ಮಾಡುತ್ತಿದೆ.... 'ವೀಲ್‌ಚೆಯರ್‌ನಲ್ಲಿನ ಜೋನಿ' ಎಂಬ ಕ್ಯಾನ್‌ವಾಸಿನಲ್ಲಿ ದೇವರ ನಂಬಿಗಸ್ತಿಕೆ ಎಂಬ ಚಿತ್ರವು ಸ್ಪಷ್ಟವಾಗಿ ಮೂಡಿಬರುತ್ತಿದೆ!!

ರೋಮನ್ ಕಾರಾಗೃಹದಲ್ಲಿ ಆಗಿದ್ದಾಗ ಆಗಿರಬೇಕು ಪೌಲನು ಫಿಲಿಪ್ಪಿಯರಿಗೆ ಪತ್ರಿಕೆ ಬರೆದದ್ದು; ಅದರಲ್ಲಿ ಒಂದು ಪ್ರಧಾನ ವಾಕ್ಯವನ್ನು ಜೋನಿ ನೆನೆಸಿಕೊಂಡಳು: “ಸಹೋದರರೇ ನನಗೆ ಸಂಭವಿಸಿರುವ ಒಂದೊಂದು ವೇದನೆಯ ಪರಿಸ್ಥಿತಿಗಳೂ (ಕಾರಗೃಹದಲ್ಲಿನ ಯಾತನೆ) ಯೇಸುವಿನ ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು; ನೀವು ತಿಳಿಯಬೇಕೆಂಬುದಾಗಿ ಅಪೇಕ್ಷಿಸುತ್ತೇನೆ." (4໙໖ 1:12)

ಜೋನಿಗೆ ಬಹಳ ಸಂತೋಷವುಂಟಾಯಿತು. ತನಗೆ ಸಂಭವಿಸಿರುವ ದುರಂತಕ್ಕೆ ಇಗೋ ಒಂದು ಉತಕೃಷ್ಟವಾದ (ಅತ್ಯುತ್ತಮ) ಒಂದು ಉದ್ದೇಶವಿತ್ತು, ಕನ್ನ ಜೀವಿತದ ಅವಸ್ಥೆಗಳು ದೇವರ ರಾಜ್ಯದ ಬೆಳವಣಿಗೆಗೆ ಕಾರಣವಾಗುತ್ತಿದೆ. ಸಂಕಲ್ಪದ ಮೇರೆಗೆ ಕರೆಯಲ್ಪಟ್ಟವರಿಗೆ ಎಲ್ಲವೂ (ವೀಲ್‌ಚೆಯರ್ ಸಹಾ) ಏತಕ್ಕಾಗಿ ಅನುಕೂಲವಾಗುತ್ತದೆ.

ಲೇಖಕರು ಸಾಜು

1970 ರಲ್ಲಿ ಫೆಬ್ರವರಿಯಲ್ಲಿ ಕೆಲ್ಲಿ ಮರಣಹೊಂದಿದನು ಮೆದುಳಿನ ಕ್ಯಾನ್ಸರ್ ನಿಂದ ಒಂದು ವರುಷ ನಿರಂತರವಾಗಿ ಅವನು ವೇದನೆ ಸಹಿಸಬೇಕಾಯಿತು. ಆದರೆ ಬರ...
28/03/2025

1970 ರಲ್ಲಿ ಫೆಬ್ರವರಿಯಲ್ಲಿ ಕೆಲ್ಲಿ ಮರಣಹೊಂದಿದನು ಮೆದುಳಿನ ಕ್ಯಾನ್ಸರ್ ನಿಂದ ಒಂದು ವರುಷ ನಿರಂತರವಾಗಿ ಅವನು ವೇದನೆ ಸಹಿಸಬೇಕಾಯಿತು. ಆದರೆ ಬರೀ ಐದು ವರುಷ ವಯಸ್ಸುಳ್ಳ ಕೆಲ್ಲ. ವೇದನೆಯ ಮಧ್ಯದಲ್ಲೂ ತೋರ್ಪಡಿಸಿದ ಶಾಂತತೆ ಹಾಗೂ ನಂಬಿಕೆ ವಯಸ್ಕರಾದ ಕುಟುಂಬದ ಸದಸ್ಯರಿಗೆ ಸಹ ದೇವರಲ್ಲಿ ಭರವಸೆಯಿಡುವದಕ್ಕಾಗಿ ಪ್ರೇರಣೆ ನೀಡಿತು. ಅವನ ಮರಣವು ಕುಟುಂಬದ ಸದಸ್ಯರನ್ನು ಒಂದು ಗಾಢವಾದ ಸಂಬಂಧಕ್ಕೆ ನಡೆಸಿತು ಎಂದು ಹೇಳದೆ ಇರುವದಕ್ಕೆ ಸಾಧ್ಯವಿಲ್ಲ.

ಕೆಲ್ಲಿಯ ಮರಣವು ಕೆಲವು ತಿಂಗಳು ಮುಂಚೆ ನಡೆದಿದ್ದರೆ ಅದು ಜೋನಿಗೆ ಬಹುದೊಡ್ಡ ಆತ್ಮೀಕ ಆಘಾತವಾಗುತ್ತಿತ್ತು. ಆದರೆ ಬೈಬಲ್ ಸ್ಟಡಿ ಗ್ರೂಪ್‌ನಲ್ಲಿ ಕಲಿತ ಪಾಠಗಳು ಬಹಳ ಉನ್ನತವಾದ ಕ್ರೈಸ್ತ ವಿಚಾರಗಳನ್ನು ಅವಳಲ್ಲಿ ಬೆಳೆಸಿದ್ದವು ಆದುದರಿಂದ ಪುಟ್ಟ ಕೆಲ್ಲಿಯ ಮರಣವನ್ನು ಒಂದು ಹಂತದವರೆಗೆ ಶಾಂತಿಯುತ ರೀತಿಯಲ್ಲಿ ಸ್ವೀಕರಿಸಿದಳು. ಜೋನಿಯನ್ನು ಮಾತ್ರವಲ್ಲ ಅವಳ ಮನೆಯ ಸದಸ್ಯರಲ್ಲಿಯೂ, ಜೊತೆಗಾರರಲ್ಲಿಯೂ ಬೈಬಲ್ ಸ್ಟಡಿಗ್ರೂಪ್ ಪ್ರಭಾವ ಬೀರಿತ್ತು. ದೇವರ ಪರಮಾಧಿಕಾರವನ್ನೂ ಸರ್ವಜ್ಞಾವನ್ನೂ ನಂಬಿಕೆಯಿಂದ ಕಾಣಲೂ, ಭರವಸೆಪೂರ್ವಕವಾಗಿ ಸ್ವೀಕರಿಸಲೂ ಅವರನ್ನು ಶಕ್ತಗೊಳಿಸಿದ್ದು ಆ
ಸ್ಟಡಿಗ್ರೂಪ್‌ನಲ್ಲಿ ಸತ್ಯವೇದದ ಕಲಿಕೆಯಾಗಿತ್ತು. ಡ್ಯಾಡಿ ಯಾವಾಗಲೂ ಹೇಳುವ ರೀತಿಯಲ್ಲಿ "ತಾನು ಏನು ಮಾಡುತಿದ್ದೇನೆಂಬುದು ಆತನಿಗೆ ತಿಳಿದಿದೆ ದೇವರಿಗೆ ಆಲೊಚನೆ ಹೇಳಿಕೊಡುವದಕ್ಕೆ ನಾವು ಯಾರು?"

ಒಂದೊಂದು ದಿನ ಗತಿಸಿದ ಹಾಗೆ ಸ್ಟೀವ್ ಅವರಿಗೆ ಹೆಚ್ಚು ಆಳಾವಾದ ವಿಚಾರಗಳನ್ನು ಹೇಳಿಕೊಟ್ಟನು. "ನಾವು ಎದುರಿಸುವ ಜೀವಿತದ ಎಲ್ಲಾ ಪರಿಸ್ಥಿತಿಗಳಿಗೆ ನಾವೇ ಹೊಣೆಗಾರರೆಂದು ಹೇಳಲು ಆಗುವದಿಲ್ಲ." ಒಂದು ದಿನ ಸ್ಟೀವ್ ಹೇಳಿದ. "ಆದರೆ ಆ ಪರಿಸ್ಥಿತಿಗಳನ್ನು ಎದುರಿಸುವ ರೀತಿಗೆ ನಾವೇ ಹೊಣೆಗಾರರು..... ಪವಿತ್ರಾತ್ಮನು ಉದ್ದೇಶಿಸುವ ರೀತಿಯಲ್ಲಿಯಾಗಿದೆಯೋ ನಾವು ಅದನ್ನು ಎದುರಿಸುವದು?."

ಕೆಲ್ಲಿಯ ಮರಣವು ಒಂದು ಪರಿಸ್ಥಿತಿಯಯಾಗಿದೆ. ಅದನ್ನು ಅದಕ್ಕೆ ಸಂಬಧಿಸಿದವರು ಹೇಗೆ ಕಾಣುತ್ತಾರೆ, ಎದುರಿಸುತ್ತಾರೆ.... ಅದುವೇ ಪ್ರಾಮುಖ್ಯವಾದದ್ದು ಪ್ರವಿತ್ರಾತ್ಮನು ಉದ್ದೇಶಿಸುವ ರೀತಿಯಲ್ಲಿಯಾಗಿದೆಯೋ ಅದನ್ನು ಎದುರಿಸುವದು?

'ಕರ್ತನ ಆತ್ಮನ ಸಾನಿಧ್ಯವಿರುವಲ್ಲಿ ಸ್ವಾತಂತ್ರ್ಯ ವನ್ನು ಅನುಭವಿಸಲು ಆಗುತ್ತದೆ. ಅದರ ಫಲವೋ ಕರ್ತನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಗಳಾಗುವದಕ್ಕೆ ನಮಗೆ ಸಾಧ್ಯವಾಗುತ್ತದೆ. ಹಾಗೆ ಕರ್ತನ ಆತ್ಮನು ನಮ್ಮಲ್ಲಿ ಕಾರ್ಯನಿರತವಾಗಿರುವಾಗ, ನಾವು ಅಧಿಕಾಧಿಕವಾಗಿ ಆತನ ಸ್ವರೂಪಕ್ಕೆ ಅನುರೂಪರಾಗುವುದಕ್ಕಾಗುತ್ತದೆ. (2 3:17,18)

ಪವಿತ್ರಾತ್ಮನ ಸಾನಿಧ್ಯದೊಡನೆ ಪರಿಸ್ಥಿತಿಗಳನ್ನು ಎದುರಿಸಲು ಜೋನಿ ನಿರ್ಣಯಿಸಿದಳು. ಹಾಗೆ ಮಾಡುವಾಗ ಕ್ರಿಸ್ತನ ಸ್ವರೂಪದೊಟ್ಟಿಗೆ ಅಧಿಕ ಅನುರೂಪವಾಗುವುದಕ್ಕೂ, ಆತನ ಮಹಿಮೆಯನ್ನು ಕನ್ನಡಿಯಲ್ಲಿಯೋ ಎಂಬಂತೆ ಬೇರೆಯವರಿಗೆ ಪ್ರತಿಬಿಂಬಿಸಲು ಅದು ಕಾರಣವಾಗುತ್ತದೆ.

ಸ್ಟೀವ್ ಅದಕ್ಕೆ ತಕ್ಕದಾದ ಒಂದು ಉದಾಹರಣೆಯನ್ನು ನೀಡಿದ: ನಮ್ಮ ಜೀವಿತವು ದೇವರ ಒಂದು ರಚನೆಯಾಗಿದೆ.-ಒಂದು ಕಲಾ ಕೃತಿ ಒಂದೊಂದು ದಿನವು ಅವನು ಚಿತ್ರಿಸುತ್ತಲೇ ಇರುತ್ತಾನೆ. ಒಂದು ಒಳ್ಳೆಯ ಕಲಾಕೃತಿಯಾಗುವದಕ್ಕೆ ಮಾಡಬೇಕಾಗಿರುವದು, ತಾಳ್ಮೆಯಿಂದ ದೇವರ ಕಾರ್ಯಕೋಸ್ಕರ ಕೂತೂಕೊಳ್ಳುವದು. ಆದರೆ ನಮಗೆ ಯಾವಾಗಲೂ ಅವಸರ, ಆದುದರಿಂದ ಏನು ಸಂಭವಿಸುತ್ತದೆ? ದೇವರು ಚಿತ್ರ ಬಿಡಿಸುತ್ತಿರುವದರ ಮಧ್ಯೆ ನಾವು ಚಿತ್ರ ಬಿಡಿಸುತ್ತೇವೆ; ಅಲ್ಲಲ್ಲಿ ಬಣ್ಣವನ್ನು ಬಳಿಯುತ್ತೇವೆ. ಫಲಸ್ವರೂಪವಾಗಿ ಬಹಳ ವಿರೂಪವಾದ ಚಿತ್ರ ಗೋಚರಿಸುತ್ತದೆ. ನಮ್ಮ ಜೀವಿತವು ಒಂದು

ಲೇಖಕರು ಸಾಜು

ಚಿತ್ತ'ವೆಂಬ ಬುದ್ಧಿಪೂರ್ವಕವಾದ ತಿಳುವಳಿಕೆಯು ನನ್ನ ಒಂದು ವ್ಯಕ್ತಿಗತವಾದ ಅನುಭವವಾಗಿ ಲಭಿಸುತ್ತದೆ. ಈ ರೀತಿಯಲ್ಲಿ ದೇವರ ಸನಾತನಾವಾದ ಸತ್ಯಗಳನ್ನ...
27/03/2025

ಚಿತ್ತ'ವೆಂಬ ಬುದ್ಧಿಪೂರ್ವಕವಾದ ತಿಳುವಳಿಕೆಯು ನನ್ನ ಒಂದು ವ್ಯಕ್ತಿಗತವಾದ ಅನುಭವವಾಗಿ ಲಭಿಸುತ್ತದೆ. ಈ ರೀತಿಯಲ್ಲಿ ದೇವರ ಸನಾತನಾವಾದ ಸತ್ಯಗಳನ್ನು ಪುಸ್ತಕದಿಂದಲೂ, ತಲೆಯಿಂದಲೂ (ಬುದ್ಧಿ) ನನ್ನ ದೈನಂದಿನ ಜೀವಿತಕ್ಕೆ ಕೊಂಡುಬರುತ್ತೇವೆ.

ಇದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಮನುಷ್ಯರ ಜೀವಿತ ಅನುಭವಗಳಿಂದಲೇ ದೇವರು ತನ್ನನ್ನು ಪ್ರಕಟಿಸುವದು, ಅದರ ವಿವರಣೆಯನ್ನೆ ಸತ್ಯವೇದದಲ್ಲಿ ನಾವು ಕಾಣುವದು. ಸತ್ಯವೇದದ ಜನರ ಜೀವಿತಾನುಭವವು ಕೇವಲ ಯಾವುದೇ ಒಂದು ಕಾಲಕ್ಕೆ ಮಾತ್ರ ಸೀಮಿತವಾದದ್ದಲ್ಲ. ಅದು ಎಲ್ಲಾ ಕಾಲದಲ್ಲಿಯು ಇರುವ ಜನರಿಗೋಸ್ಕರ ಇರುವಂತಹದು. ನಿಜವಾಗಿ ಸತ್ಯವೇದವನ್ನು ಸಜೀವವುಳ್ಳದಾಗಿಸುವಂತಹದು, ಮನುಷ್ಯರ ಪರಿಸ್ಥಿತಿಗಳಲ್ಲಿ ಪ್ರತ್ಯಕ್ಷವಾಗುವ ಈ ದೈವಿಕ ಸ್ಪರ್ಶವೇ ಆಗಿದೆ.

ಆ ಕಾಲದಲ್ಲಿ ಮಾತ್ರವಲ್ಲ; ಇಂದೂ, ನಮ್ಮ ಜೀವಿತದ ಅನುಭವಗಳಲ್ಲಿಯೂ ದೇವರ ಸ್ಪರ್ಶ ನಡೆಯುತ್ತಿದೆ. ಆದರೆ ಹಲವು ಸಾರಿ ನಮಗೆ ಅದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಸಾಧ್ಯವಾಗಬೇಕಾದರೆ ಸತ್ಯವೇದದ ಚರಿತ್ರೆಯಲ್ಲಿ ನನ್ನ ಜೀವಿತ ಅನುಭವಕ್ಕೆ ಸಮಾನವಾದ ಅನುಭವದಿಂದ ಹಾದುಹೋದವರ ಜೀವಿತದಲ್ಲಿನ ದೇವರ ಸ್ಪರ್ಶವನ್ನು ನಾನು ಅರಿತುಕೊಳ್ಳಬೇಕು.

ಯೋಬನ ಜೀವಿತದಲ್ಲಿ ಕಷ್ಟ ಬಂದವು.: ಒಂದು ಕಥೆಯ ರೀತಿಯಲ್ಲಿ ನಾವದನ್ನು ಬುದ್ಧಿಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದೇವೆ. ಆದರೆ ಯೋಜನ ಅನುಭವಕ್ಕೆ ಸಮಾನವಾದ ಅನುಭವದಿಂದ ಒಬ್ಬನು ಹಾದು ಹೋಗುವಾಗ ಅ ಕಥೆಯು ಜೀವಿತದಲ್ಲಿ ಅನುಭವವಾಗಿ ತೀರುತ್ತದೆ. ಯೋಬನ ಜೀವಿತದಲ್ಲಿ ದೇವರ ಸ್ಪರ್ಶವನ್ನು ಈಗ ಆ ವ್ಯಕ್ತಿ ಅನುಭವಿಸುತ್ತಿದ್ದಾನೆ. ಬುದ್ದಿಯಲ್ಲಿ ಅಲ್ಲ. ಜೀವಿತದಲ್ಲಿ,! ಈ ದೇವರ ಸ್ಪರ್ಶನಕ್ಕೆ ಪ್ರತಿಕ್ರೀಯೆ ಏನಾಗಿರಬೇಕು? ಇಲ್ಲಿಯಾಗಿದೆ ಸತ್ಯವೇದದ. ಅನುಭವಗಳು ಪ್ರಯೋಗದಲ್ಲಿ ತರಬೇಕಾದದ್ದು. ದೇವರ ಸ್ವರ್ಶನಕ್ಕೆ ಯೋಬನ ಅಥವಾ ಪ್ರತಿಯೊಬ್ಬ ಭಕ್ತರ ಪ್ರತಿಕ್ರೀಯೇ ನಮ್ಮ ಪ್ರತಿಕ್ರೀಯೆಯಾಗ ಬೇಕು. ಇನ್ನೂ ಅದೊಂದು ಸನಾತನ ಸತ್ಯವಾಗಿ ಪುಸ್ತಕದಲ್ಲಿ ಇರುವದಿಲ್ಲ, ಜೀವಿತದಲ್ಲಿ ಸತ್ಯವಾಗಿ ಪ್ರಯೋಗಿಸಲ್ಪಡುತ್ತಾ ಇದೆ.

ತನ್ನ ಜೀವೀತದ ಅನುಭವಕ್ಕೆ ಸಮಾನವಾದ ಅವಸ್ಥೆಯಿಂದ ಹಾದುಹೋದ ಸತ್ಯವೇದದ ಭಕ್ತರ ಒಂದು ಗುಂಪೇ ಜೋನಿಯ ಮನಸ್ಸಿನಲ್ಲಿ ನೆನಪಿಗೆ ಬಂತು. ಯೋಬ, ಯೆರೆಮೀಯ ಪೌಲನು ಯೋಬನು ಕಷ್ಟವನ್ನು ಅನುಭವಿಸಿದವನಾಗಿದ್ದಾನೆ. ಆದುದರಿಂದ ಆತನಿಗೆ ತನ್ನೊಟ್ಟಿಗೆ ಮಾತನಾಡಲು ಸಾಧ್ಯವಿದೆ. ಯೆರೆಮೀಯನು ತನಗೆ ಸಮಾನವಾದ ಪರಿಸ್ಥಿತಿಯಿಂದ ಹಾದು
ಹೋಗಿದ್ದಾನೆ. ಆದುದರಿಂದ ಅರಿವು ಹುಟ್ಟಿಸುವ ರೀತಿಯಲ್ಲಿ ತನ್ನೊಡನೆ ವಾದಿಸಲು ಸಾಧ್ಯವಿದೆ. ಪೌಲನು ಅನೇಕ ಕಷ್ಟಗಳಿಂದ ಹಾದುಹೋಗಿದ್ದಾನೆ; ಆದುದರಿಂದ ಪೌಲನ ಮಾತುಗಳಿಗೆ ನಿಶ್ಚಯವಾಗಿಯೂ ತನ್ನ ಜೀವಿತದಲ್ಲಿ ಪ್ರಾಧನ್ಯತೆ ಇದೆ. ಕಷ್ಟದ 'ಅನ್ಯೂನ್ಯತೆ'ಯನ್ನು ಸತ್ಯವೇದದಲ್ಲಿನ ಪಾತ್ರಗಳು ತನಗೆ ನೀಡುತ್ತಿದ್ದಾರೆಂದು ಜೋನಿಗೆ ತೋಚಿತು. ಅವರು ಅದನ್ನು ನಿರಾಶೆಯಿಂದ ಅಲ್ಲ ಎದುರಿಸಿದ್ದು; ಅದು ಅವರಿಗೆ ಒಂದು ಪಾಠಶಾಲೆಯಾಗಿತ್ತು.

ಕಷ್ಟಗಳಿಂದ ಅನೇಕ ಕಾರ್ಯಗಳನ್ನು ಕಲಿತ ಪೌಲನು, ಅದರ ಉನ್ನತದಲ್ಲಿ ಬಂದು ನಿಂತಿರುವಾಗಲೂ 'ನಾನು ಏನು ಆಗಬೇಕಿತ್ತೋ ಅದಿನ್ನು ಪೂರ್ಣಗೊಂಡಿಲ್ಲ. ಎಂದು ಹೇಳುತ್ತಾನೆ, ಒಳ್ಳೆಯ ಹೋರಾಟ ಮಾಡಿದೆ' ಎಂಬ ಅರಿವುಂಟಾಗಲು ಪೌಲನಿಗೆ ಜೀವನ ಪೂರ್ತಿ ಕಷ್ಟಗಳ ಪಾಠ ಶಾಲೆಯಿಂದ ಹಾದು ಹೋಗಬೇಕಾಗಿ ಬಂತು. ಒಂದು ವೇಳೆ ಕಷ್ಟಗಳಿಂದ ದೇವರು ತನಗೆ ನೀಡುತ್ತಿರುವ ತರಬೇತಿಯು ಒಂದು ಜೀವನ ಪೂರ್ತಿಯ ಒಂದು ಕಾರ್ಯಕ್ರಮವಾಗಿರಬಹುದೆಂದು ಜೋನಿ ನೆನೆಸಿಕೊಂಡಳು. ಕ್ರಿಸ್ತನೊಟ್ಟಿಗೆ ಆಗುವವರೆಗೆ ಈ ತರಭೇತಿ ನೆಲೆನಿಲ್ಲ ಬಹುದು.

ಆದರೆ ಕಷ್ಟಗಳಿಂದ ಹಾದು ಹೋದಾಗಲೂ ಪೌಲನು ಸ್ವಾರ್ಥವನ್ನು ಹುಡುಕಲಿಲ್ಲ: ಬಹುಜನರಿಗೆ ಪ್ರಯೋಜನವುಳ್ಳ ಒಂದು ಸೇವೆ ತನಗೆ ನಿರ್ವಹಿಸುವದಕ್ಕಿತು. ತನಗೂ ಏನಾದರೂ ಸೇವೆ ಮಾಡುವದಕ್ಕಿದ್ದಿದ್ದರೆ. ಎಂಬುದಾಗಿ ಜೋನಿ ಆಶಿಸಿದಳು. ದೇವರು ತನಗೆ ವಹಿಸಿಕೊಟ್ಟ ಸೇವೆ ಯಾವುದು?

ತನ್ನ ಸತ್ಯವೇದದ ನೂತನ ಗ್ರಹಿಕೆಯನ್ನು ಬೇರೆಯವರೊಟ್ಟಿಗೆ ಹಂಚಲು, ಸ್ಟೀವ್ ಜೋನಿಯನ್ನು ಪ್ರೋತ್ಸಾಹಪಡಿಸಿದನು. ತನ್ನ ಸಭೆಯ ಯೌವನಸ್ಥಕೂಟದಲ್ಲಿ, ಕ್ರೈಸ್ತವ ಅನುಭವಗಳನ್ನು ಹಂಚಲು ಆತನು ಆಕೆಗೆ ಅವಕಾಶ ನೀಡಿದನು.

ಅದೊಂದು ಹೊಸ ಅನುಭವವಾಗಿತ್ತು. ಹದಿನೈದು ಯೌವನಸ್ಥರೊಟ್ಟಿಗೆ 'ಸಾಕ್ಷಿ ಹೇಳುವದು' ಎಂಬ ಚಿಂತೆಯೇ ಜೋನಿಗೆ 'ಗಾಬರಿ' ಹುಟ್ಟಿಸಿತು. ಅದಕ್ಕಾಗಿ ತನ್ನ ಹೆಸರು ಕರೆದಾಗ ಅವಳು ಸ್ವಾಭಾವಿಕವಾಗಿ ನಾಚಿಕೊಂಡಳು. ಆಟೋಟಗಳಲ್ಲಿ ಒಳ್ಳೆಯ ಸಾಮರ್ಥ್ಯ ಪ್ರಕಟಿಸಿದ್ದರೂ, ಇದೊಂದು ಹೊಸ ಅನುಭವವಾಗಿತ್ತು. ಕಣ್ಣು, ಕಿವಿ ನಿವರಿಸಿ ಮುಂದೆ ಕೂತಿರುವ ಯೌವನಸ್ಥರೊಟ್ಟಿಗೆ ಮಾತನಾಡಲೂ ಆರಂಭಿಸಿದಾಗ ತನ್ನ ನಾಲಿಗೆ ತೊದಲಿತು,

"ನಾನು..... ನಾನು... ನನ್ನ ಹೆಸರು ಜೋನಿ ಎರಿಕ್ಷನ್.. ನಾನು ಇಲ್ಲಿ ಬಂದದ್ದು.... "ಎನು ಹೇಳಬೇಕೆಂಬುದನ್ನು ಜೋನಿ ಮರೆತಳು. "ನಾನು ಹೇಳಲು
ಪ್ರಾರಂಭಿಸಿದ್ದು.. ಯೇಸು ನನಗೊಂದು ವಾಸ್ತವಿಕತೆ..... ನನ್ನ ಜೀವಿತದಲ್ಲಿ ಅನೇಕ ಸಮಸ್ಯೆಗಳಿದ್ದವು. ಆದರೆ... ಮತ್ತೆ....ನನ್ನ ಸಮಸ್ಯೆಗಳನ್ನು ಎದುರಿಸಲು ಯೇಸು ನನಗೆ ಸಾಮರ್ಥ್ಯವನ್ನು ನೀಡಿದನು.... ಆತನು ನಂಬಿಗಸ್ಥನಾದ ಒಬ್ಬ ಜೊತೆಗಾರನಾಗಿದ್ದಾನೆ. ನನಗೆ ಸಾಮರ್ಥ್ಯ ನೀಡಿದ. ನೀವು.... ನೀವೂ ಆತನನ್ನು ನಿಮ್ಮ ಜೊತೆಗಾರನಾಗಿ ಮಾಡಿಕೊಳ್ಳಿರಿ....."

ಜೋನಿಯ ಗಂಟಲು ಬತ್ತಿತು.... ಮುಖವೆಲ್ಲಾ ಬೇವರಿತು. ನಂತರ ಒಂದಕ್ಷರವನ್ನು ಸಹ ಉಚ್ಚರಿಸಲೂ ಆಕೆಗೆ ಸಾಧ್ಯವಾಗಲಿಲ್ಲ. ಸ್ಟೇಜ್‌ನಲ್ಲಿ ಜೋನಿ ಹೀಗೆ ನಿಸ್ಸಹಾಯಕಳಾಗಿ ವೀಲ್‌ಚೆಯರ್‌ನಲ್ಲಿ ಕೂತಾಗ ಸ್ಟೀವ್ ಸ್ಟೇಜೆಗೆ ಬಂದು ಜೋನಿ ಹೇಳಿದ ತುಂಡುಗಳನ್ನು ಆತನು ಒಂದು ಒಳ್ಳೆಯ ಬಾಷಣ (ಪ್ರಚಾರ) ವಾಗಿ ಕೊನೆಗೊಳಿಸಿದನು.

ಜೋನಿಗೆ ತನ್ನ ಸಾಕ್ಷಿಯು ಸ್ಟೀವ್‌ನ ಸಹಾಯದಿಂದಲೇ ಸರಿ, ಆ ಯೌವನಸ್ಥರನ್ನು ಸ್ಪರ್ಶಿಸಿತು ಎಂಬ ಅರಿವುಂಟಾಯಿತು. ಆದರೆ ಹೊರಗೆ ಬಂದಾಗ "ಇನ್ನೂ ಜೀವಿತದಲ್ಲಿ ಎಲ್ಲಿಯೂ ಸಾಕ್ಷಿ ನೀಡುವದಿಲ್ಲವೆಂದು" ಹೇಳಿದಳು.

"ತಪ್ಪು" ಸ್ಟೀವ್ ಹೇಳಿದ "ಅದರಲ್ಲಿ ಕೊರತೆಯೇನಿತ್ತು? ನಿನಗೆ ಸ್ವಲ್ಪ ತರಭೇತಿ ಬೇಕಷ್ಟೇ..... ಹಾಂ!

ಕಾಲಕ್ರಮೇಣ ಜೋನಿ ಆತ್ಮವಿಶ್ವಾಸವನ್ನು ಹೊಂದಿಕೊಂಡಳು ತಾನು ಹೇಳುವ ವಿಷಯವನ್ನು ಕೇಳಲು ಜನರಿಗೆ ಇಚ್ಛೆಯಿದೆ ಎಂಬ ಅರಿವು ಜೋನಿಗೆ ಪ್ರತ್ಯೇಕವಾದ ಆದರಣಿ ಒದಗಿಸಿತು. ತನಗೊಂದು ಸೇವೆಯಿದೆ ಎಂಬುದಾಗಿ ತನ್ನ ಅಂತರ್ಯದಲ್ಲಿ ಅರಿತುಕೊಂಡಳು.

ಲೇಖಕರು ಸಾಜು

ಯಾಕೆ ಸಂಚರಿಸಬೇಕು? ಬರಲಿಕ್ಕಿರುವ ಆ ಸ್ವರ್ಗಿಯ ದಿನಗಳನ್ನು ಕನಸ್ಸು ಕಾಣುವದಲ್ಲವೇ ಬೇಕಾಗಿರುವದು?'ಕ್ರಿಸ್ತನು ಪುನರುತ್ಥಾನಗೊಂಡಾಗ' ನೀವು ಪುನಃ ...
26/03/2025

ಯಾಕೆ ಸಂಚರಿಸಬೇಕು? ಬರಲಿಕ್ಕಿರುವ ಆ ಸ್ವರ್ಗಿಯ ದಿನಗಳನ್ನು ಕನಸ್ಸು ಕಾಣುವದಲ್ಲವೇ ಬೇಕಾಗಿರುವದು?

'ಕ್ರಿಸ್ತನು ಪುನರುತ್ಥಾನಗೊಂಡಾಗ' ನೀವು ಪುನಃ ಜೀವಿಸುವವರಾದಿರೆಂದು ಹೇಳಬಹುದು ಇನ್ನೀಗ ನಾವು ಆತನೊಟ್ಟಿಗೆ ಜೀವಿಸುತ್ತೇವೆ. ಅದು ಸರಿಯಾಗಿದ್ದರೆ, ಲೌಕಿಕ ವಿಷಯಗಳ ಕುರಿತು ಕನಸು ಕಾಣುವದರಲ್ಲಿಯೂ ಅದರ ನಷ್ಟಗಳಲ್ಲಿ ವಿಚಲೀತರಾಗುವದರೆಲ್ಲಿಯೂ ಯಾವ ಅರ್ಥವಿದೆ. ಕ್ರಿಸ್ತನ ವಾಸಸ್ಥಾನವಾದ-ಆತನೊಟ್ಟಿಗೆ ಸೇರಿ ಜೀವಿಸುವದಕ್ಕೆ ಹೋಗುವ ಆ ಉನ್ನತದಲ್ಲಿರುವ ವಿಷಯಗಳ ಬಗ್ಗೆ ಮಾತ್ರ ಚಿಂತಿಸೋಣ. ನಮ್ಮ ನೋಟವು ಯಾವಾಗಲೂ ಅಲ್ಲಿಯೇ ಆಗಿರಲಿ (ಕೊಲೊಸ್ಸೆ ಪತ್ರಿಕೆ) ಡಯಾನಾ ಕಾಲೇಜಿನಲ್ಲಿ ಸೈಕೊಳಜಿ ಕ್ಲಾಸಿನಲ್ಲಿ ಕಲಿತ ಒಂದು ವಿಷಯವನ್ನು ಕೆಲವೊಮ್ಮೆ ಜೋನಿಯ ಮನೆಯಲ್ಲಿ ಪರೀಕ್ಷಿಸುತ್ತಿದ್ದಳು. ಜನರನ್ನು ಅವರ ಪರಿಸ್ಥಿತಿಯ ಆಧಾರದಲ್ಲಿ ಅರ್ಥೈಸಲು ಸಹಾಯವಾಗುವ ಈ ಆಟವನ್ನು 'ರೊಲ್ ಪ್ಲೇ' ಎಂದು ಕರೆಯಲಾಗುತ್ತದೆ. ಕೆಲವು ಸಮಯಕ್ಕೆ ಬೇರೆ ಯಾರಾದರೂ ಒಬ್ಬರು ಇನ್ನೊಬ್ಬರ ಜೀವಿತ ಪರಿಸ್ಥಿತಿಯಲ್ಲಿ ಸಂಚರಿಸುವದು ಅವರನ್ನು ತಿಳಿದುಕೊಳ್ಳುವದು!

ಒಂದು ಬುಧವಾರ ರಾತ್ರಿ ಬೈಬಲ್ ಸ್ಟಡಿನಂತರ 'ರೋಲ್ ಪ್ಲೇ' ಆರಂಭವಾಯಿತು. ಅಂದು ಜೋನಿಯು ಡಯಾನಾಳ ಪಾತ್ರವನ್ನು ಡಯಾನಾ ಜೋನಿಯ ಪಾತ್ರವನ್ನು ಸ್ವೀಕರಿಸಿದರು. ಡಿಕ್ ಜೋನಿಯನ್ನು ಎತ್ತಿ ಸೋಫಾದಲ್ಲಿ ಕುರಿಸಿದ ಡಯಾನಾ ವಿಲ್‌ ಚೆಯರ್‌ನಲ್ಲಿ ಕೂತುಕೊಂಡಳು.

"ಡಯಾನಾ ನೋಡು ಇದು ವಿಚಿತ್ರವಾಗಿದೆ ಡಯಾನಾ ವಿಲ್ ಚೇಯರ್ ನಲ್ಲಿ ಕೂತುಕೊಂಡು ಜೋನಿಯಾಗಲೂ ಪ್ರಯತ್ನಿಸುತ್ತಾ ಹೇಳಿದಳು. "ನೀವುಗಳೆಲ್ಲಾ ವೀಲ್ ಚೆಯರ್‌ನ್ನು ಭಯದೊಡನೆ ಕಾಣುವವರಾಗಿದ್ದಿರಿ: ಯಾಕೆ ಹೀಗೆ ದೂರ ಸರಿದು ನಡೆಯುತ್ತೀರಿ? ಸುತ್ತಲೂ ಬೇಲಿಯಿದೆಯೋ ಎಂಬಂತೆ ಯಾಕೆ ಇಷ್ಟು ಸ್ಥಳ ಖಾಲಿಯಾಗಿ ಬಿದ್ದಿದ್ದೆ? ಅತಿಕ್ರಮಿಸಿ ಬಂದರೆ ನಿಮ್ಮನ್ನು ಶಿಕ್ಷಿಸುವದಿಲ್ಲ."

"ಬೇಷ್ ಡಯನಾ, ನೀನು ಒಳ್ಳೆಯದಾಗಿ ಅರ್ಥಮಾಡಿಕೊಂಡೆ" ಜೋನಿ ಹೇಳಿದಳು. "ವೀಲ್‌ಚೆಯರ್‌ನಲ್ಲಿ ಕೂತುಕೊಳ್ಳುವಾಗ ನನ್ನ ಮನಸ್ಸಿನಲ್ಲಿ ಹಾದುಹೋಗುವ ಚಿಂತೆಗಳನ್ನು ನಿನಗೆ ಗ್ರಹಿಸಲು ಸಾಧ್ಯವಾಯಿತು."

ತಟ್ಟನೆ ವೀಲ್ ಚೆಯರ್‌ನಲ್ಲಿರುವವರನ್ನು ಜನರು ಹೇಗೆ ಕಾಣುತ್ತಾರೆ ಎಂಬುಂದರ ಕುರಿತಾಗಿ ಚರ್ಚೆ ಹುಟ್ಟಿಕೊಂಡಿತು. ಡಯಾನಾ ಹೇಳಿದ್ದು ಸರಿಯಾಗಿದೆ. ಜನರು ವೀಲ್ ಚೆಯನ್ನು ಏನೋ ವಿಚಿತ್ರ ವಸ್ತುವಾಗಿ ಕಾಣಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ವೀಲ್‌ಚೆಯರಿಗೆ ಹೆಚ್ಚೆಂದರೆ ಎರಡು ಅಡಿ ಅಗಲವಿರಬಹುದು, ಆದರೆ ದಾರಿಪಕ್ಕದಿಂದ ವೀಲ್‌ಚೆಯರ್ ‌ ಹೋದರೆ
ಒಂದು ಕಾರು ಹೋಗಬಹುದಾದಷ್ಟು ಜಾಗವನ್ನು ಜನರು ಬಿಟ್ಟುಕೊಡುತ್ತಾರೆ. 'ಅಮೂಲ್ಯವಾದ ಪುರಾತನ ವಸ್ತುವೇನೋ ಅದರಲ್ಲಿದೆ ಎಂಬ ರೀತಿಯಲ್ಲಿಯಾಗಿದೆ ಜನರ ನಡವಳಿಕೆ; "ಕೈ ಕಾಲುಗಳು ಬಳಲಿದ್ದಾದರೆ ಮೆದುಳಿಗೂ ಏನಾದರೂ ಕ್ಷತಿ ಸಂಭವಿಸಿರಬಹುದು ಎಂಬದಾಗಿ ಜನರು ವಿಚಾರಿಸುತ್ತಾರೆ. ಬೆಟ್ಟಿ ಜಾಕ್‌ಸನ್‌ಳ ಮಾತುಗಳನ್ನು ಜೋನಿ ಸ್ಮರಿಸಿಕೊಂಡಳು.

ರೋಲ್ ಪ್ಲೇ ಮುಂದುವರೆಯುತ್ತದೆ,

"ಜೋನಿ ನನಗೆ ಒಂದು ಲೋಟ ನೀರುಬೇಕು" ಡಯಾನಾ ವೀಲ್ ಚೆಯರ್‌ಲ್ಲಿ ಕೂತುಕೊಂಡು ನಿಸ್ಸಹಾಯಕ ಎಂಬ ರೀತಿಯಲ್ಲಿ ಹೇಳಿದಳು. ಜೋನಿ ಸೋಫಾದಲ್ಲಿ ಕೂತು ಡಯಾನಾಳ ಪಾತ್ರವನ್ನು ನಟಿಸುತ್ತಿದ್ದಾಳೆ. ಏನು ಮಾಡುತ್ತಾಳೆ?

"ಹಾಂ........ ಒಂದು ನಿಮಿಷ ಈ ಟಿ.ವಿಯಲ್ಲಿಯ ಕಾರ್ಯಕ್ರಮವೊಂದು ಮುಗಿಯಲಿ ಜಾಹಿರಾತಿನ ಸಮಯವಾಗುವಾಗ ತಂದು ಕೊಡುತ್ತೆನೆ. ಸಾಕಾ?" ಜೋನಿ ಡಯಾನಾಳ ಪಾತ್ರವನ್ನು ಸರಿಯಾಗಿ ನಟಿಸಿದಳು. ಆದರೂ ಬೇರೆಯವರ ಭಾವನಾತ್ಮಕ ಅವಶ್ಯಕತೆಗಳನ್ನು ಪರಿಗಣಿಸದೆಯೋ, ತಾನು ತನ್ನ ಸ್ವಂತ ಅವಶ್ಯಕತೆಗಳನ್ನು ಪೂರೈಸಲು ಅವರಿಗೆ ಹೇಳುತ್ತಿರುವದು ಎಂಬುದಾಗಿ ಜೋನಿ ಡಯಾನಾಳ ಪಾತ್ರವನ್ನು ನಟಿಸಿದಾಗ ಸಂಶಯಪಟ್ಟಳು. ಇನ್ನು ಮೇಲೆ ಬೇರೆಯವರ ಕುರಿತು ಹೆಚ್ಚಿನ ಪರಿಗಣನೆಯುಳ್ಳವಳಾಗಿರಬೇಕೆಂದು ಆಕೆ ನಿರ್ಣಯಿಸಿದಳು.

ಪ್ರತಿದಿನವೂ ಸತ್ಯವೇದ ವಚನಗಳನ್ನು ಯಾವಾ ರೀತಿಯಲ್ಲಿ ಜೀವಿತದಲ್ಲಿ ಅಳವಡಿಸಬಹುದು ಎಂಬುದರ ಕುರಿತು ಒಂದು ಚರ್ಚೆ ಬೈಬಲ್ ಸ್ಟಡಿ ಗುಂಪಿನಲ್ಲಿ ನಡೆಯಿತು. ಸ್ಟೀವ್ ಅದರ ಬಗ್ಗೆ ವಿವರವಾದ ಕ್ಲಾಸನ್ನು ತೆಗೆದುಕೊಂಡನು. "ನಾವು ದೇವರ ವಾಕ್ಯವನ್ನು ಓದುತ್ತೇವೆ ಅದರಲ್ಲಿನ ದೇವರ ಸತ್ಯಗಳನ್ನು ಅರಿತುಕೊಳ್ಳುತ್ತೇವೆ. ಆದರೆ ಅನೇಕ ಸಾರಿ ನಾವು ಅದನ್ನು ನಮ್ಮ ಬುದ್ದಿಯಲ್ಲಿ ಸಂಗ್ರಹಿಸಿಡುತ್ತೇವೆ. ಅಂದರೆ ನಾವು ಅದನ್ನು ಮೊದಲು ಮನಸ್ಸಿನಲ್ಲಿ ಸ್ವೀಕರಿಸುತ್ತೇವೆ ನಂತರ ನಾವದನ್ನು ವಿಮರ್ಶೆಗೊಳಪಡಿಸುತ್ತೇವೆ. ಆಗಳಿಗೆಯಲ್ಲಿ ಅದೊಂದು 'ಸನಾತನ ಸತ್ಯ'ವಾಗಿದೆ. ಎಲ್ಲರಿಗೋಸ್ಕರವಾದದ್ದು: ಇದು ಮಾನವ ಜಾತಿಯ ಕುರಿತು ದೇವರ ಚಿತ್ತವಾಗಿದೆ ಎಂದು ನಾನು (ಬುದ್ಧಿಯಿಂದ) ತಿಳಿದುಕೊಳ್ಳುತ್ತೇನೆ. ಆ ತಿಳುವಳಿಕೆ ನನ್ನನ್ನು ಸಂತೋಷಪಡಿಸಬಹುದು ಆದರೆ ಅದು ನನಗೆ ವ್ಯಕ್ತಿಗತವಾದ ಅನುಭವವಲ್ಲ.

ಆದರೆ 'ಎಲ್ಲರಿಗೋಸ್ಕರವಾಗಿ' ಆ ಸತ್ಯವನ್ನು ನಾನು ನನ್ನ ಜೀವಿತದಲ್ಲಿ ಪರೀಕ್ಷಿಸಲು ಸಿದ್ಧನಾಗುವಾಗ, 'ಇದು ಮಾನವ ಜಾತಿಗೋಸ್ಕರ ದೇವರೆ

ಲೇಖಕರು ಸಾಜು

ಪರಿಪೂರ್ಣವಾದ ಬಿಡುಗಡೆ" ಇಬ್ರಿಯ 11:35ರಲ್ಲಿ "ಕೆಲವರು ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದರು..... ಎಂಬುದಾಗಿ ಬ...
25/03/2025

ಪರಿಪೂರ್ಣವಾದ ಬಿಡುಗಡೆ" ಇಬ್ರಿಯ 11:35ರಲ್ಲಿ "ಕೆಲವರು ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದರು..... ಎಂಬುದಾಗಿ ಬರೆಯಲ್ಪಟ್ಟಿದೆ. ಇಲ್ಲಿಯ ಬಂದನವು ಶ್ರೇಷ್ಠವಾದ ಜೀವಿತಕ್ಕಿರುವ ಪುನರುತ್ಥಾನಾವಸ್ಥೆಗಿರುವಂತ ಒಂದು ಮೆಟ್ಟಿಲಾಗಿದೆ. ನಾವಿದನ್ನು ನಿಷೇಧಿಸಬಾರದು. ದೇವರ ಚಿತ್ತಕ್ಕಾಗಿಯೂ ದೇವರ ಸಮಯಕ್ಕಾಗಿಯೂ ಕಾದಿರುವದೇ ಪ್ರಾಮುಖ್ಯವಾದದ್ದು.

ಮಾತ್ರವಲ್ಲ ಜೋನಿ, ಸತ್ಯವೇದ ಕಲಿಸುವದು ಈ ಶರೀರವೂ ಒಂದು ತಾತ್ಕಾಲಿಕವಾದ ಗುಡಾರವಾಗಿದೆ. ಭೌತಿಕ ಜೀವಿತವೇ ತಾತ್ಕಾಲಿಕವಾದದ್ದು ಹೀಗಿರುವಾಗ ಈ ಜೀವಿತದ ಸುಖ ಸೌಕರ್ಯಗಳು ನಾವು ಎಣಿಸುವಷ್ಟು ಪ್ರಧಾನವಾದದ್ದೆ?

ಸತ್ಯವೇದದ ವಚನಗಳ ಅರ್ಥವ್ಯಾಪ್ತಿ ಜೋನಿಯನ್ನು ಆಶ್ಚರ್ಯಪಡಿಸಿತು. ತನ್ನ ಪರಿಸ್ಥಿತಿಗಳನ್ನು ಒಂದು ಹೊಸ ದೃಷ್ಟಿಕೋನದಲ್ಲಿ ಅವಳಿಗೆ ಕಾಣಲು ಸಾಧ್ಯವಾಯಿತು. ನಂಬಿಕೆಯಿಂದ ಅದ್ಭುತವನ್ನು ನಡೆಸುವವರು ಮಾತ್ರವಲ್ಲ, ನಂಬಿಕೆಯಿಂದ ಕಷ್ಟವನ್ನು ಸಹಿಸುವವರ ಚರಿತ್ರೆ ಸಹ ಇಬೀಯ ಹನ್ನೊಂದರಲ್ಲಿ ವಿವರಿಸಲಾಗಿದೆ. ಅಪಹಾಸ್ಯವನ್ನು ತಾಳಿದವರು, ಕೊರಡೆಯ ಪೆಟ್ಟು ಹಸಿವೆಯನ್ನು, ರೋಗವನ್ನು, ಅಪಮಾನವನ್ನೂ ಸಹಿಸಿ ಅಲೆದಾಡಿದವರೂ. ನಂಬಿಕೆಯ ಸಾಕ್ಷಿ ಹೊಂದಿಕೊಂಡವರೆಂದು: ದೇವರ ವಾಕ್ಯವು ಕಲಿಸುತ್ತದೆ (ಇಬ್ರಿಯ 11:39)

ಅದೇರಿತಿಯಲ್ಲಿ ತನ್ನ ಶಾರೀರಿಕ ದುರ್ಬಲತೆ 'ಶಾಶ್ವತ'ವಾಗಿರುತ್ತದೆ ಎಂದು ಡಾಕ್ಟರರು ಹೇಳಿದದಿನಿಂದ, ಎಂದೆಂದಿಗೂ ನಿರಾಶೆಯುಳ್ಳವಳಾಗಿರುವದಕೋಸ ರ ವಿಧಿಸಲ್ಪಟ್ಟವಳಾಗಿಯೇ ಜೋನಿ ತನ್ನನ್ನು ಎಣಿಸಿದ್ದು, ಆದರೆ ಈ ಲೋಕದ ಜೀವಿತವೇ ತಾತ್ಕಾಲಿಕವಾದದ್ದು ಎಂದು ಸತ್ಯವೇದದ ಬೆಳಕಿನಲ್ಲಿ ಸ್ಟೀವ್ ಒತ್ತಿ ಹೇಳಿದಾಗ: ಅದು ಅದುವರೆಗೂ ಕೇಳದೆ ಇದ್ದ ಹೊಸ ವಿಚಾರವೇನು ಆಗಿಲ್ಲದಿದ್ದರೂ ಸಹ, ಜೋನಿಗೆ ಒಂದು ನೂತನ ಹುಮಸ್ಸು ಲಭಿಸಿತು. ಒಂದು ವೇಳೆ ಶ್ರೇಷ್ಟವಾದ ಪುನರುತ್ಥಾನದ ನಿರೀಕ್ಷೆ' (ಇg 11:35)ಯಾಗಿರಬಹುದು. ಆಕೆಗೆ ನೂತನ ಹುಮ್ಮಸನ್ನು ಕೊಟ್ಟದು, ಬರಲಿಕ್ಕಿರುವ ಲೋಕದ ಕಷ್ಟಗಳು ಅಲ್ಪವೇ ಸರಿ ಎಂದೇಣಿಸಲು ನಮ್ಮನ್ನು ಶಕ್ತರಾಗಿಸುತ್ತದೆ. ಪೌಲನ ಮಾತುಗಳು ಆಕೆಗೆ ಸಂತೈಸುವಿಕೆಯನ್ನು ನೀಡಿತು. 2 ಕೊರಿಂಥದವರಿಗೆ ಬರೆದ ಎರಡನೇಯ ಅಧ್ಯಾಯದಲ್ಲಿ ಪೌಲನು ಹೀಗೆ ಹೇಳುತ್ತಾನೆ “ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರ್ಯವು ದಿನೇ ದಿನೇ ಹೊಸದಾಗುತ್ತಾ ಬರುತ್ತಿದೆ. ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ."
ಅದೇ ಪತ್ರಿಕೆಯ ಐದನೇಯ ಅಧ್ಯಾಯವೂ ಲೌಕಿಕ ಜೀವಿತದ ತಾತ್ಕಾಲಿಕತೆಯನ್ನೂ ಬರಲಿಕ್ಕಿರುವ ಲೋಕದ ಶ್ರೇಷ್ಠತೆಯನ್ನು ಕುರಿತು ವಿವರಿಸುತ್ತದೆ. 'ನಾವು ಈಗ ವಾಸಿಸುತ್ತಿರುವ ಈ ಗುಡಾರವು ಕಿತ್ತುಹಾಕಲ್ಪಡುವಾಗ-ನಾವು ಮರಣ ಹೊಂದುತ್ತೇವೆ. ಈ ಶರೀರವನ್ನು ತ್ಯಜಿಸುವಾಗ ಸ್ವರ್ಗದಲ್ಲಿ (ಪರಲೋಕದಲ್ಲಿ) ಅದ್ಭುತಕರವಾದ ನೂತನ ಶರೀರಗಳು ಲಭಿಸುತ್ತದೆ ಎಂಬ ನಿಶ್ಚಯ ನಮಗಿದೆ. ಅವು ಮನುಷ್ಯನ ಹಸ್ತಗಳಲ್ಲ, ದೇವರು ತಾನೇ ನಿರ್ಮಿಸಿದ ನಿತ್ಯ ಶರೀರಗಳಾಗಿರುತ್ತವೆ.

ಈಗಿನ ಶರೀರದಲ್ಲಿ ನಾವು ಎಷ್ಟೂ ಬಳಲಿದವರಾಗಿದ್ದೇವೆ! ಕಷ್ಟವನ್ನು ಅನುಭವಿಸುವವರಾಗಿದ್ದೇವೆ.!! ಅದರರ್ಥ ನಾವು ಶರೀರವನ್ನು ತ್ಯಜಿಸಲು ಆಶಿಸುತ್ತೇವೆ ಎಂದಲ್ಲ. ಆದರೂ ಒಂದು ನೂತನ ವಸ್ತ್ರವೆಂಬಂತೆ ಸ್ವರ್ಗಿಯ ಶರೀರಗಳನ್ನು ಧರಿಸಲು ಸಾಧ್ಯವಾಗುವ ಆ ದಿನಕ್ಕಾಗಿ ನಾವು ಆಶಾಭರಿತರಾಗಿ ಎದುರು ನೋಡುತ್ತಿದ್ದೇವೆ.

ಈ ಶರೀರದಲ್ಲಿ ವಾಸಿಸುವಾಗ ಹೆಚ್ಚಿನ ಸಮಯ ಪಿಡೆಗಳ ನಿಮಿತ್ತ ನಾವು ನರಳಾಡುತ್ತಾ ನಿಟ್ಟುಸಿರು ಬಿಡುತ್ತಾ ಇರುತ್ತೇವೆ. ಈ ಅವಸ್ಥೆಯು ದುಃಖಭರಿತವಾದದ್ದಾದರೂ ಇದು ನಮ್ಮನ್ನು ನಿರಾಶೆಗೊಳಿಸುವದಿಲ್ಲ. ಕಾರಣವೆನೆಂದರೆ ಇದು ತಾತ್ಕಾಲಿಕವಾದದ್ದೆಂದು ಬಲ್ಲೆವು. ಅದು ಮಾತ್ರವಲ್ಲ 'ಶಾಶ್ವತ'ವಾದದ್ದೆನೆಂಬುದರ ಅರಿವು ನಮಗಿದೆ. ಬರಲಿಕ್ಕಿರುವ ಆ 'ಶಾಶ್ವತ ಮನೆ'ಯಲ್ಲಿ ನಾವು ಶರೀರವಿಲ್ಲದ ಕೇವಲ ಆತ್ಮಗಳಾಗಿ ತಿರುವದಿಲ್ಲ-ಅದಕೋಸ್ಕರ ನಾವು ಆಶಿಸುತ್ತಾನು ಇಲ್ಲ. ಅಂದು ಲಯಾವಸ್ಥೆಯ ಈ ಶರೀರಗಳು ಶಾಶ್ವತವಾದ ಜೀವದಿಂದ ಆವರಿಸಲ್ಪಡುವದಕ್ಕಾಗಿ ರೂಪಾಂತರ ಹೊಂದಿ. ನೂತನ ಶರೀರಗಳನ್ನು ಸ್ವೀಕರಿಸುತ್ತವೆ ಎಂದು ನಮಗೆ ಅರಿವಿದೆ. ಅದಕೋಸ್ಕರ ಸಿದ್ಧರಾಗಿದ್ದೇವೆ ನಾವು'.

ಬರಲಿಕ್ಕಿರುವ ಆ ಲೋಕದ ಕುರಿತಾದ ನೆನಪು ಜೋನಿಯ ಮನಸ್ಸಿಗೆ ಆದರಣೆಯುಂಟು ಮಾಡಿತು. ತನ್ನ ಶಾರೀರಿಕ ನಿರ್ಬಲಾವಸ್ಥೆ 'ಶಾಶ್ವತ'ವಲ್ಲ ಮಹಿಮೆಯುಳ್ಳ ಒಂದು ಶರೀರವನ್ನು ಕ್ರಿಸ್ತನು ನನಗೆ ಕೊಡುತ್ತಾನೆ.

ಸ್ಟೀವ್ ಜೋನಿಯನ್ನು ಉನ್ನತವಾದ ವಿಚಾರಗಳ ಕಡೆಗೆ ಕೊಂಡೊಯ್ದನು. ಅವಳು ಅರಿತಿದ್ದ ಅವಳ ಒಳ್ಳೆಯ ಕಾಲ ಅವಳ ಗತಿಸಿದ ದಿನಗಳಾಗಿದ್ದವು-ಆಕೆಯ ಬಾಲ್ಯಾವಸ್ಥೆ, ಯೌವನಾವಸ್ಥೆ. ಆದುದರಿಂದ ಆಕೆಯ ಕನಸ್ಸುಗಳೆಲ್ಲಾ ಗತಿಸಿಹೋದ ಕಾಲಕ್ಕೆ ಮರಳಿಹೋಗುವಂತಹದಾಗಿತ್ತು. ಆದರೆ ಸತ್ಯವೇದವು ಗತಿಸಿದ ಕಾಲಕ್ಕಿಂತ ಉನ್ನತವೂ ಮಹಿಮೆಯುಳ್ಳದ್ದೂ ಬರಲಿಕ್ಕಿರುವ ಕಾಲವಾಗಿದೆ ಎಂದು ಕಲಿಸಿತು. ಹಾಗದರೆ ಇನ್ನೂ ಕನಸಿನಲ್ಲಿ ಭೂತಕಾಲದಲ್ಲಿ

ಲೇಖಕರು ಸಾಜು

Address

Mandya

Alerts

Be the first to know and let us send you an email when CIEFM - ಮಂಡ್ಯ posts news and promotions. Your email address will not be used for any other purpose, and you can unsubscribe at any time.

Share