SDK MEDIA

SDK MEDIA SDK MEDIA is one of the best spot news media.

ನಮ್ಮ ನಾಡ ಒಕ್ಕೂಟ ಕಡಬ ವತಿಯಿಂದ ಉಚಿತ ಸರ್ಕಾರಿ ಸೌಲಭ್ಯ ಶಿಬಿರ     ಕಡಬ: ನಮ್ಮ ನಾಡ ಒಕ್ಕೂಟ ಕಡಬ ತಾಲೂಕು ಸಮಿತಿ ವತಿಯಿಂದ ಇಂದು ಕಡಬದ ಕೊರುಂದ...
17/04/2022

ನಮ್ಮ ನಾಡ ಒಕ್ಕೂಟ ಕಡಬ ವತಿಯಿಂದ ಉಚಿತ ಸರ್ಕಾರಿ ಸೌಲಭ್ಯ ಶಿಬಿರ

ಕಡಬ: ನಮ್ಮ ನಾಡ ಒಕ್ಕೂಟ ಕಡಬ ತಾಲೂಕು ಸಮಿತಿ ವತಿಯಿಂದ ಇಂದು ಕಡಬದ ಕೊರುಂದೂರು ಭಾಗದಲ್ಲಿ ಉಚಿತ ಸರ್ಕಾರದ ಸೌಲಭ್ಯ ಶಿಬಿರ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸರ್ಕಾರದ ಸೌಲಭ್ಯಗಳಾದ ಇ- ಶ್ರಮ್ ಕಾರ್ಡ್, ಆಯುಶ್ಮಾನ್ ಕಾರ್ಡ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳನ್ನು ಉಚಿತವಾಗಿ ನಡೆಸಲಾಯಿತು. ನಮ್ಮ ನಾಡ ಒಕ್ಕೂಟ ಕಡಬ ತಾಲೂಕು ಅಧ್ಯಕ್ಷರಾದ ಸಿದ್ದೀಕ್ ಕೊರುಂದೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ನಾಡ ಒಕ್ಕೂಟ ಸಮುದಾಯದ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಸಮುದಾಯವನ್ನು ಒಗ್ಗಟ್ಟಿನತ್ತ ಕೊಂಡೊಯ್ಯುತ್ತಿದೆ , ಸಮುದಾಯದ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ಉಚಿತವಾಗಿ ನೀಡಿ , ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸದ ಪ್ರೋತ್ಸಾಹ ನೀಡಿ ಸಮುದಾಯಕ್ಕೆ ಮತ್ತು ಅಶಕ್ತರಿಗೆ ಆಶಾ ಕಿರಣವಾಗಿದೆ ಎಂದು ತಿಳಿಸಿದರು.

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶಪ್ರಭಾಷಣ ಲೋಕದ ಯವ ತಾರೆ ಸಿದ್ದೀಕ್ ಅಲಿ ರಾಂಗಟ್ಟೂರ್ ಸುಳ್ಯಕ್ಕೆ.ಭಾರತೀಯ ಮುಸ...
05/02/2021

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ

ಪ್ರಭಾಷಣ ಲೋಕದ ಯವ ತಾರೆ ಸಿದ್ದೀಕ್ ಅಲಿ ರಾಂಗಟ್ಟೂರ್ ಸುಳ್ಯಕ್ಕೆ.

ಭಾರತೀಯ ಮುಸಲ್ಮಾನರ ಅಭಿಮಾನವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷ ದ.ಕ ಜಿಲ್ಲಾ ಸಮಿತಿ ವತಿಯಿಂದ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ ಫೆಬ್ರವರಿ 11- 2021ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸುಳ್ಯದ ಗ್ರಾಂಡ್ ಪರಿವಾರ್ ಗಾರ್ಡನ್ ನಲ್ಲಿ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣವನ್ನು ಭಾಷಣ ಲೋಕದ ಯುವ ತಾರೆ ಸಿದ್ದೀಕ್ ಅಲಿ ರಾಂಗಟ್ಟೂರ್ ಕೇರಳ ಇವರು ನಡೆಸಲಿದ್ದಾರೆ ಎಂದು ಸ್ವಾಗತ ಸಮಿತಿ ಸದಸ್ಯ ಮತ್ತು ಮುಸ್ಲಿಂ ಲೀಗ್ ಕಡಬ ತಾಲೂಕು ಉಸ್ತುವಾರಿ ಆಗಿರುವ ಸಿದ್ದೀಕ್ ಕಡಬ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶಉದ್ಘಾಟನೆ ಭಾರತೀಯ ಮುಸಲ್ಮಾನರ ಅಭಿಮಾನದ ನೇತಾರ ಪಾಣಕ್ಕಾಡ್ ಸಯ್ಯದ್ ಸಾದಿಕಲಿ ...
03/02/2021

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ

ಉದ್ಘಾಟನೆ ಭಾರತೀಯ ಮುಸಲ್ಮಾನರ ಅಭಿಮಾನದ ನೇತಾರ ಪಾಣಕ್ಕಾಡ್ ಸಯ್ಯದ್ ಸಾದಿಕಲಿ ಶಿಹಾಬ್ ತಂಙಲ್

ಭಾರತೀಯ ಮುಸಲ್ಮಾನರ ಅಭಿಮಾನವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷ ದ.ಕ ಜಿಲ್ಲಾ ಸಮಿತಿ ವತಿಯಿಂದ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ ಫೆಬ್ರವರಿ 11- 2021ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸುಳ್ಯದ ಗ್ರಾಂಡ್ ಪರಿವಾರ್ ಗಾರ್ಡನ್ ನಲ್ಲಿ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮನ್ನು ಭಾರತೀಯ ಮುಸಲ್ಮಾನರ ಅಭಿಮಾನದ ನಾಯಕ ಮತ್ತು ಮುಸ್ಲಿಂ ಲೀಗ್ ಕೇರಳ ರಾಜ್ಯದ ಉಸ್ತುವಾರಿ ಸಮಿತಿಯ ಸದಸ್ಯ ಪಾಣಕ್ಕಾಡ್ ಸಯ್ಯದ್ ಸಾದಿಕಲಿ ಶಿಹಾಬ್ ತಂಙಲ್ ರವರು ಉದ್ಘಾಟಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸದಸ್ಯ ಮತ್ತು ಮುಸ್ಲಿಂ ಲೀಗ್ ಕಡಬ ತಾಲೂಕು ಉಸ್ತುವಾರಿ ಆಗಿರುವ ಸಿದ್ದೀಕ್ ಕಡಬ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶಪ್ರಾರ್ಥನಾ ನೇತೃತ್ವ ದಕ್ಷಿಣ ಕನ್ನಡದ ಆಧ್ಯಾತ್ಮಿಕ ನೇತಾರ ಝೈನುಲ್ ಆಬಿದೀನ್ ತ...
03/02/2021

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ

ಪ್ರಾರ್ಥನಾ ನೇತೃತ್ವ ದಕ್ಷಿಣ ಕನ್ನಡದ ಆಧ್ಯಾತ್ಮಿಕ ನೇತಾರ ಝೈನುಲ್ ಆಬಿದೀನ್ ತಂಙಲ್ ದುಗ್ಗಲಡ್ಕ.

ಭಾರತೀಯ ಮುಸಲ್ಮಾನರ ಅಭಿಮಾನವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷ ದ.ಕ ಜಿಲ್ಲಾ ಸಮಿತಿ ವತಿಯಿಂದ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ ಫೆಬ್ರವರಿ 11- 2021ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸುಳ್ಯದ ಗ್ರಾಂಡ್ ಪರಿವಾರ್ ಗಾರ್ಡನ್ ನಲ್ಲಿ ನಡೆಯಲಿದ್ದು ಪ್ರಸ್ತುತ ಕಾರ್ಯಕ್ರಮನ್ನು ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ ಸಯ್ಯದ್ NPM ಝೈನುಲ್ ಆಬಿದೀನ್ ತಂಙಲ್ ದುಗ್ಗಲಡ್ಕ ರವರು ದುಃವಾದೊಂದಿಗೆ ಪ್ರಾರ್ಥನಾ ನೇತೃತ್ವ ನೀಡಲಿದ್ದಾರೆ ಎಂದು ಸ್ವಾಗತ ಸಮಿತಿ ಸದಸ್ಯ ಮತ್ತು ಮುಸ್ಲಿಂ ಲೀಗ್ ಕಡಬ ತಾಲೂಕು ಉಸ್ತುವಾರಿ ಆಗಿರುವ ಸಿದ್ದೀಕ್ ಕಡಬ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ ಅದ್ಯಕ್ಷತೆ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಸಯ್ಯದ್ ಮುಈನಲಿ ಶಿ...
03/02/2021

ಫೆಬ್ರುವರಿ 11 ರಂದು ಸುಳ್ಯದಲ್ಲಿ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ

ಅದ್ಯಕ್ಷತೆ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಸಯ್ಯದ್ ಮುಈನಲಿ ಶಿಹಾಬ್ ತಂಙಲ್ ಪಾಣಕ್ಕಾಡ್

ಭಾರತೀಯ ಮುಸಲ್ಮಾನರ ಅಭಿಮಾನವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷ ದ.ಕ ಜಿಲ್ಲಾ ಸಮಿತಿ ವತಿಯಿಂದ ಮುಸ್ಲಿಂ ಲೀಗ್ ಜಿಲ್ಲಾ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ ಫೆಬ್ರವರಿ 11- 2021ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸುಳ್ಯದ ಗ್ರಾಂಡ್ ಪರಿವಾರ್ ಗಾರ್ಡನ್ ನಲ್ಲಿ ನಡೆಯಲಿದ್ದು ಪ್ರಸ್ತುತ ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಯೂತ್ ಲೀಗ್ ಉಪಾದ್ಯಕ್ಷರಾದ ಸಯ್ಯದ್ ಮುಈನಲಿ ಶಿಹಾಬ್ ತಂಙಲ್ ಪಾಣಕ್ಕಾಡ್ ರವರು ವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸದಸ್ಯ ಮತ್ತು ಮುಸ್ಲಿಂ ಲೀಗ್ ಕಡಬ ತಾಲೂಕು ಉಸ್ತುವಾರಿ ಆಗಿರುವ ಸಿದ್ದೀಕ್ ಕಡಬ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್  ಚಾಂಪಿಯನ್ಸ್‌‌ ನಲ್ಲಿ ಭಾಗವಹಿಸುವ ಕರ್ನಾಟಕ ತಂಡದ ತರಬೇತುದಾರಾಗಿ ಕಡಬದ ಅಬ್ದುಲ್ ಖಾದರ್ ಆಯ್ಕೆ.ಪೆಬ್ರವರಿ ...
29/01/2021

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಸ್‌‌ ನಲ್ಲಿ ಭಾಗವಹಿಸುವ ಕರ್ನಾಟಕ ತಂಡದ ತರಬೇತುದಾರಾಗಿ ಕಡಬದ ಅಬ್ದುಲ್ ಖಾದರ್ ಆಯ್ಕೆ.

ಪೆಬ್ರವರಿ 6 ರಿಂದ10 ರವರೆಗೆ ನಡೆಯಲಿರುವ 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲಿರುವ ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಖ್ಯಾತ ಕಬ್ಬಡ್ಡಿ ತರಬೇತುದಾರ ಮತ್ತು ತೀರ್ಪುಗಾರರಾಗಿರುವ ಅಬ್ದುಲ್ ಖಾದರ್ (ಕಲಂದರ್) ಇವರು ಆಯ್ಕೆಯಾಗಿದ್ದಾರೆ. ಇವರು ಕರ್ನಾಟಕ ತಂಡದ ತರಬೇತುದಾರರಾಗಿ ಅಸ್ಸಾಂನ ಗುವಾಹಟಿಗೆ ತೆರಳಲಿದ್ದಾರೆ.

🔥*ಕರ್ತವ್ಯ ನಿರತ ಕುಟ್ರುಪ್ಪಾಡಿ  ಪಿ. ಡಿ. ಒ ಮೇಲೆ ಹಲ್ಲೆ ಪ್ರಕರಣ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು*🔥ಕಡಬ ತಾಲ್ಲೂಕಿನ ಕುಟ್ರುಪ್ಪಾಡಿ ...
15/01/2021

🔥*ಕರ್ತವ್ಯ ನಿರತ ಕುಟ್ರುಪ್ಪಾಡಿ ಪಿ. ಡಿ. ಒ ಮೇಲೆ ಹಲ್ಲೆ ಪ್ರಕರಣ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು*🔥

ಕಡಬ ತಾಲ್ಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಪಿ. ಡಿ. ಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರು ಕರ್ತವ್ಯದ ಮೇರೆಗೆ ತೆರಳಿದ್ದ ಸಂದರ್ಭದಲ್ಲಿ ಹೊಸ್ಮಟ ದೇರಾಜೆ ಕ್ರಾಸ್ ಬಳಿಯ ನಿವಾಸಿ ಯಾಕೂಬ್ ಸೇರಿದಂತೆ ಐವರು ಕಾರನ್ನು ತಡೆದು ಹಲ್ಲೆ ನಡೆಸಿ, ಮೊಬೈಲ್ ಫೋನ್ ಕಸಿದು ದಾಖಲೆಗಳನ್ನು ಡಿಲೀಟ್ ಮಾಡಿದ್ದಾರೆಂದು ಪಿ. ಡಿ. ಒ ಅವರು ಕಡಬ ಠಾಣೆಗೆ ದೂರು ನೀಡಿದ್ದು, ನಂತರ ಆರೋಪಿಗಳು ತಲೆಮಾರೆಸಿಕೊಂಡು ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಗಣಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಅದೇಶಿಸಿದೆ.
ಇವರ ಪರವಾಗಿ *ಕಡಬದ ಯುವ ನ್ಯಾಯವಾದಿ ಮುಸ್ತಫಾ ಎಂ, ಅಶ್ರಫ್ ಕೆ ಅಗ್ನಡಿ, ಅಬ್ದುಲ್ ಮಜೀದ್ ಖಾನ್* ವಾದಿಸಿದ್ದರು.

*ಸಾಮಾಜಿಕ ಜಾಲತಾಣ ವಾದ ಇನ್ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು ಮಂಜೂರು*ಪ್ರಕರಣದ ಹಿನ್ನೆಲೆ : ಪುತ್ತೂರು...
05/01/2021

*ಸಾಮಾಜಿಕ ಜಾಲತಾಣ ವಾದ ಇನ್ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪಿಗೆ ಜಾಮೀನು ಮಂಜೂರು*

ಪ್ರಕರಣದ ಹಿನ್ನೆಲೆ : ಪುತ್ತೂರು ತಾಲ್ಲೂಕಿನ ಸವಣೂರಿನ ಮೆಸ್ಕಾಂ ಉದ್ಯೋಗಿಯಾಗಿರುವಂತಹ ಸುಹೈಬ್ ಕೊತ್ವಲ್ ಎಂಬಾತನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಮೂಲಕ ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ಸಂದೇಶಗಳನ್ನು ರವಾನಿಸಿದ ಪ್ರಕರಣದಲ್ಲಿ ಈತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈತನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಯ ಪರವಾಗಿ ವಕೀಲರಾದ ಅಶ್ರಫ್ ಕೆ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಇಬ್ರಾಹಿಂ ಬಾತೀಶ ಯು ಕೆ, ರಮೀಜ್ ಕರ್ವೆಲ್, ಹಾಗೂ ಮುಸ್ತಫಾ ಎಂ ಕಡಬ ವಾದಿಸಿದ್ದರು.

ಕೆ.ಪಿ.ಸಿ.ಸಿ  ಮಾದ್ಯಮ ವಕ್ತಾರರಾಗಿ ಆಯ್ಕೆಯಾದ ಫಝಲ್ ಕೋಡಿಂಬಾಳರವರಿಗೆ ಸನ್ಮಾನ.ಎ.ಐ.ಸಿ.ಸಿ ಕಾರ್ಯದರ್ಶಿ ಐವನ್ ಡಿಸೋಜ , ಮಾಜಿ ಸಚಿವ ಯು.ಟಿ ಖಾದ...
05/01/2021

ಕೆ.ಪಿ.ಸಿ.ಸಿ ಮಾದ್ಯಮ ವಕ್ತಾರರಾಗಿ ಆಯ್ಕೆಯಾದ ಫಝಲ್ ಕೋಡಿಂಬಾಳರವರಿಗೆ ಸನ್ಮಾನ.

ಎ.ಐ.ಸಿ.ಸಿ ಕಾರ್ಯದರ್ಶಿ ಐವನ್ ಡಿಸೋಜ , ಮಾಜಿ ಸಚಿವ ಯು.ಟಿ ಖಾದರ್ ಭಾಗಿ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾದ್ಯಮ ವಕ್ತಾರರಾಗಿ ಆಯ್ಕೆಯಾದ ಮಾಜಿ ಕಡಬ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಎ.ಐ.ಸಿ.ಸಿ ಕಾರ್ಯದರ್ಶಿ ಐವನ್ ಡಿಸೋಜ ರವರು ಮತ್ತು ಮಾಜಿ ಸಚಿವ ಯು.ಟಿ ಖಾದರ್ ರವರು ನೂತನ ಮಾದ್ಯಮ ವಕ್ತಾರರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಗಣೇಶ್ ಕೈಕುರೆ, ಡಾ. ರಘು, ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ , ಸರ್ವೋತ್ತಮ ಗೌಡ, ಕಾಂಗ್ರೆಸ್ ಮುಖಂಡರಾದ ರೋಯಿ ಅಬ್ರಹಾಂ, ಕೆ.ಪಿ ತೋಮಸ್, ಹಾಗೂ ಕಾಂಗ್ರೆಸ್ ವಿವಿಧ ಘಟಕಗಳ ಅದ್ಯಕ್ಷರುಗಳು ಉಪಸ್ಥಿತರಿದ್ದರು.

*  Breaking🚨**ಕಡಬವನ್ನು ತಲ್ಲಣ ಗೊಳಿಸಿದ ಸ್ಟೇಟಸ್ ಪ್ರಕರಣ ಆರೋಪಿಗೆ ಜಾಮೀನು ಮಂಜೂರು*  *ಬೇಕರಿಗೆ ಜ್ಯೂಸ್ ಕುಡಿಯಲು ಹೋದ  ಬಾಲಕಿಯ ಫೋಟೋ ತೆಗ...
03/01/2021

* Breaking🚨*
*ಕಡಬವನ್ನು ತಲ್ಲಣ ಗೊಳಿಸಿದ ಸ್ಟೇಟಸ್ ಪ್ರಕರಣ ಆರೋಪಿಗೆ ಜಾಮೀನು ಮಂಜೂರು*

*ಬೇಕರಿಗೆ ಜ್ಯೂಸ್ ಕುಡಿಯಲು ಹೋದ ಬಾಲಕಿಯ ಫೋಟೋ ತೆಗೆದು ಸ್ಟೇಟಸ್ ಹಾಕಿದ ಪ್ರಕರಣ ಅಂಗಡಿ ಮಾಲಕನಿಗೆ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ. ಯಫ್. ಸಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ ಇವರ ಪರವಾಗಿ ಮುಸ್ತಾಫಾ ಎಂ ಕೊರುಂದೂರು ವಕೀಲರು ಕಡಬ ವಾದಿಸಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾದ್ಯಮ ವಕ್ತಾರರಾಗಿ ಫಝಲ್ ಕೋಡಿಂಬಾಳ ನೇಮಕ.ಆದೇಶ ಹೊರಡಿಸಿದ ಕೆ.ಪಿ.ಸಿ.ಸಿ ಅದ್ಯಕ್ಷ ಡಿ.ಕೆ ಶಿವಕುಮಾರ್.ಕ...
03/01/2021

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾದ್ಯಮ ವಕ್ತಾರರಾಗಿ ಫಝಲ್ ಕೋಡಿಂಬಾಳ ನೇಮಕ.

ಆದೇಶ ಹೊರಡಿಸಿದ ಕೆ.ಪಿ.ಸಿ.ಸಿ ಅದ್ಯಕ್ಷ ಡಿ.ಕೆ ಶಿವಕುಮಾರ್.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾದ್ಯಮ ವಕ್ತಾರರಾಗಿ ಮಾಜಿ ಕಡಬ ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ ಅವರನ್ನು ಕೆ.ಪಿ.ಸಿ.ಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅವರು ನೇಮಕಗೊಳಿಸಿ ಅದೇಶ ಹೊರಡಿಸಿದ್ದಾರೆ.
ಎನ್. ಎಸ್.ಯು.ಐ ಮೂಲಕ ರಾಜಕೀಯ ಪ್ರವೇಶಿಸಿ ಸತತ ಮೂರು ಬಾರಿ ಕಡಬ‌ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುವ ಇವರು ಕಡಬ ಗ್ರಾ.ಪಂ. ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ ಬಾರಿ ಕಡಬ ತಾ.ಪಂ. ಸದಸ್ಯರಾಗಿದ್ದರು ಬಳಿಕ ಕಡಬ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದಾಗ ತಾಲೂಕು ಪಂಚಾಯತ್ ಸದಸ್ಯ ಸ್ಥಾನ ಕಳೆದುಕೊಂಡಿದ್ದರು. ಮಂಗಳೂರು ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ತೊಡಗಿಸಿಕೊಂಡು ಎಲ್ಲರ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಸಮಾಜ ಸೇವೆಯ ಮೂಲಕ ಜನಸಾಮಾನ್ಯರ ಮನಗೆದ್ದು ಹಲವಾರು ಸಂಘಟನೆಯಲ್ಲಿ ನಾಯಕತ್ವ ಸ್ಥಾನ ವಹಿಸಿಕೊಂಡಿದ್ದಾರೆ.

ಮೂರು ದಶಕ ಕಳೆದರೂ ಅಭಿವೃದ್ಧಿ ಕಾಣದ ರಸ್ತೆ  ಪೆರಬೆ -ಪಲ್ಲತ್ತಡ್ಕ ನಿವಾಸಿಗಳಿಂದ ಮತದಾನ ಬಹಿಷ್ಕಾರಕ್ಕೆ ಚಿಂತನೆ.   ಕಡಬ ನೂತನ ತಾಲೂಕಿನ ಕುಂತೂರ...
24/12/2020

ಮೂರು ದಶಕ ಕಳೆದರೂ ಅಭಿವೃದ್ಧಿ ಕಾಣದ ರಸ್ತೆ

ಪೆರಬೆ -ಪಲ್ಲತ್ತಡ್ಕ ನಿವಾಸಿಗಳಿಂದ ಮತದಾನ ಬಹಿಷ್ಕಾರಕ್ಕೆ ಚಿಂತನೆ.

ಕಡಬ ನೂತನ ತಾಲೂಕಿನ ಕುಂತೂರು ಪೆರಬೆ ಗ್ರಾಮದ ಪಲ್ಲತ್ತಡ್ಕ ಮೂರನೆ ವಾರ್ಡ್ ನ ರಸ್ತೆಯು ಅಭಿವೃದ್ಧಿ ಕುರಿತು ಗ್ರಾ.ಪಂ , ತಾ.ಪಂ, ಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಈ ಭಾಗದ ಜನರು ಮತದಾನ ಬಹಿಷ್ಕಾರ ಮಾಡುವ ಮೂಲಕ ಹೊಸ ರೀತಿಯ ಪ್ರತಿಭಟನೆಗೆ ಚಿಂತನೆ ನಡೆಸಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಎಲ್ಲಾ ರಾಜಕೀಯ ವ್ಯಕ್ತಿಗಳು ಕೇವಲ ಅಶ್ವಾಸನೆ ಮಾತ್ರ ನೀಡಿದ್ದು ಚುನಾವಣಾ ಬಳಿಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರುವುದಿಲ್ಲ ಅದರಿಂದ ಈ ಸಲದ ಗ್ರಾ.ಪಂ ಚುನಾವಣಾ ಬಹಿಷ್ಕಾರಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಹನೀಫ್ ಝೈನಿ ಮತ್ತು ಎಂ.ಕೆ ಅಶ್ರಫ್ ತಿಳಿಸಿದ್ದಾರೆ

*ನಾಳೆ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಕಡಬಕ್ಕೆ.**ತಾಲೂಕಿನ ವಿವಿಧೆಡೆ ಕಾರ್ಯಕರ್ತರ ಜೊತೆ ಸಮಾಲೋಚನೆ* ಕರ್ನಾಟಕ ಮುಸ್ಲಿಂ ಲೀಗ್ ಉಸ...
18/12/2020

*ನಾಳೆ ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಕಡಬಕ್ಕೆ.*

*ತಾಲೂಕಿನ ವಿವಿಧೆಡೆ ಕಾರ್ಯಕರ್ತರ ಜೊತೆ ಸಮಾಲೋಚನೆ*

ಕರ್ನಾಟಕ ಮುಸ್ಲಿಂ ಲೀಗ್ ಉಸ್ತುವಾರಿ ಮತ್ತು ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪಾಣಕ್ಕಾಡ್ ಮುಈನಲಿ ಶಿಹಾಬ್ ತಂಙಲ್ ರವರು ಕಡಬ , ಸುಂಕದಕಟ್ಟೆ, ಕುಂತೂರು ಸೇರಿದಂತೆ ಕಡಬ ತಾಲೂಕಿನ ವಿವಿದೆಡೆಗೆ ಆಗಮಿಸಿ ಪಕ್ಷದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಡಬ ತಾಲೂಕು ವಕ್ತಾರರಾದ ಸಿದ್ದೀಕ್ ಕೊರುಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಹಲವಾರು ದಶಕ ಕಳೆದರೂ ಅಭಿವೃದ್ಧಿ ಕಾಣದ  ಸುಂಕದಕಟ್ಟೆ ಮೂಜರು ರಸ್ತೆ , ಗಮನ ಹರಿಸದ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಮಾಜ ಸೇವಕ ನ...
17/12/2020

ಹಲವಾರು ದಶಕ ಕಳೆದರೂ ಅಭಿವೃದ್ಧಿ ಕಾಣದ ಸುಂಕದಕಟ್ಟೆ ಮೂಜರು ರಸ್ತೆ , ಗಮನ ಹರಿಸದ ಅಧಿಕಾರಿಗಳು

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಮಾಜ ಸೇವಕ ನವಾಜ್ ಶರೀಫ್

ಕಡಬ ನೂತನ ತಾಲೂಕಿಗೆ ವ್ಯಾಪ್ತಿಗೆ ಒಳಪಡುವ ಐತ್ತೂರು ಗ್ರಾಮ ಸುಂಕದಕಟ್ಟೆ ಮೂಜೂರು ರಸ್ತೆಯು ಹಲವು ದಶಕಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದೆ ತೀರ ಹದಗೆಟ್ಟಿದ್ದು ಯಾವುದೇ ಅಧಿಕಾರಿಗಳು ಗಮನಹರಿಸಿವುದಿಲ್ಲ. ಮಳೆಗಾಲದಲ್ಲಿ ಈ ರಸ್ತೆಯು ಪೂರ್ತಿ ಕೆಸರಿನಿಂದ ಕೂಡಿ ಶಾಲಾ ಮಕ್ಕಳು ಭಾರಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.ರಾತ್ರಿ ಹೊತ್ತು ಮದ್ರಾಸಕ್ಕೆ ಹೋಗುವ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳ ತೀರದು. ಹಲವಾರು ಬಾರಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪರಿಹಾರ ದೊರಕಿರುವುದಿಲ್ಲ. ಅದರಿಂದ ಕೂಡಲೇ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ನೀಡುವಂತೆ ಐತ್ತೂರು ಗ್ರಾಮದ ಸಮಾಜ ಸೇವಕ ನವಾಜ್ ಶರೀಫ್ ರವರು ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನೀರಿನ ಮತ್ತು ಬೀದಿ ದೀಪ ಸೌಲಭ್ಯವಿಲ್ಲದ ತಮಿಲ್ಸ್ ಎಂಟನೇ ಕಾಲನಿ, ಗಮನ ಹರಿಸದ ಅಧಿಕಾರಿಗಳುಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಮಾಜ ಸೇವಕ ನವಾಜ್ ...
17/12/2020

ನೀರಿನ ಮತ್ತು ಬೀದಿ ದೀಪ ಸೌಲಭ್ಯವಿಲ್ಲದ ತಮಿಲ್ಸ್ ಎಂಟನೇ ಕಾಲನಿ, ಗಮನ ಹರಿಸದ ಅಧಿಕಾರಿಗಳು

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಮಾಜ ಸೇವಕ ನವಾಜ್ ಶರೀಫ್ ಎಂ.

ಕಡಬ ನೂತನ ತಾಲೂಕಿಗೆ ಒಳಪಟ್ಟ ಐತ್ತೂರು ಗ್ರಾಮದ ತಮಿಳ್ಸ್ ಎಂಟನೇ ಕಾಲನಿಯಲ್ಲಿ ಸುಮಾರು 20ಕ್ಕೂ ಅಧಿಕ ಮನೆಗಳಿದ್ದು ಹಲವು ವರ್ಷ ಕಳೆದರೂ ಈ ವ್ಯಾಪ್ತಿಯ ಮನೆಗಳಿಗೆ ಯಾವುದೇ ನೀರಿನ ವ್ಯವಸ್ಥೆ ಇರುವುದಿಲ್ಲ. ಸುಮಾರು 2ಕಿ.ಮೀ ದೂರ ನಡೆದು ನೀರು ಹೊತ್ತುಕೊಂಡು ಬರುವ ಪರಿಸ್ಥಿತಿಯು ಉಂಟಾಗಿದೆ. ಇದರ ಬಗ್ಗೆ ಹಲವು ಬಾರಿ ಗ್ರಾ.ಪಂ. ಮತ್ತು ತಾ.ಪಂ ಗಳಿಗೆ ಮನವಿ ನೀಡಿದರೂ ಯಾವುದೇ ಪರಿಹಾರ ದೊರಕಿರುವುದಿಲ್ಲ. ಅದುದರಿಂದ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಒದಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಐತ್ತೂರು ಗ್ರಾಮದ ಸಮಾಜ ಸೇವಕ ನವಾಜ್ ಶರೀಫ್ ಇವರು ಮನವಿ ಸಲ್ಲಿಸಿದರು.

ಹಲವು ದಶಕ ಕಳೆದರೂ ಅಭಿವೃದ್ಧಿ ಕಾಣದ  ಕೊರುಂದೂರು ರಸ್ತೆ ವಿಚಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಿದ್ದೀಕ್ ಕೊರುಂದೂರು  ಕಡಬ ನೂತನ ಪಟ್ಟಣ ಪಂ...
17/12/2020

ಹಲವು ದಶಕ ಕಳೆದರೂ ಅಭಿವೃದ್ಧಿ ಕಾಣದ ಕೊರುಂದೂರು ರಸ್ತೆ ವಿಚಾರ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಿದ್ದೀಕ್ ಕೊರುಂದೂರು

ಕಡಬ ನೂತನ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕೊರುಂದೂರು ರಸ್ತೆಯು ಹಲವು ದಶಕಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದೆ ತೀರ ಹದಗೆಟ್ಟಿದ್ದು ಯಾವುದೇ ಅಧಿಕಾರಿಗಳು ಗಮನಹರಿಸಿವುದಿಲ್ಲ. ಮಳೆಗಾಲದಲ್ಲಿ ಈ ರಸ್ತೆಯು ಪೂರ್ತಿ ಕೆಸರಿನಿಂದ ಕೂಡಿ ಶಾಲಾ ಮಕ್ಕಳು ಭಾರಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.ರಾತ್ರಿ ಹೊತ್ತು ಮದ್ರಾಸಕ್ಕೆ ಹೋಗುವ ವಿದ್ಯಾರ್ಥಿಗಳ ಪರಿಸ್ಥಿತಿ ಹೇಳ ತೀರದು. ಹಲವಾರು ಬಾರಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪರಿಹಾರ ದೊರಕಿರುವುದಿಲ್ಲ. ಅದರಿಂದ ಕೂಡಲೇ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ನೀಡುವಂತೆ ಸಿದ್ದೀಕ್ ಕೊರುಂದೂರು ರವರು ಮಾನ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮರ್ದಾಳ ಗ್ರಾಂ.ಪಂ. ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಹೆಸರು ಅಧಿಕೃತ ಘೊಷಣೆ. ಕಡಬ ನೂತನ ತಾಲೂಕಿಗೆ ಒಳಪಟ್ಟ ಮರ್ದಾಳ ಗ್ರಾಮ ಪಂಚಾಯತ್ ಚುನ...
16/12/2020

ಮರ್ದಾಳ ಗ್ರಾಂ.ಪಂ. ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಹೆಸರು ಅಧಿಕೃತ ಘೊಷಣೆ.

ಕಡಬ ನೂತನ ತಾಲೂಕಿಗೆ ಒಳಪಟ್ಟ ಮರ್ದಾಳ ಗ್ರಾಮ ಪಂಚಾಯತ್ ಚುನಾವಣೆಗೆ ಹಲವು ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು. ಅಂದರಂತೆ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಕಡಬ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಗಣೇಶ್ ಕೈಕುರೆಯವರು ಘೊಷಿಸಿದ್ದು ಹೆಸರು ಕೆಳಗಿನಂತಿವೆ...
ಬಂಟ್ರ ಕ್ಷೇತ್ರ -1
1)ಸಾಮಾನ್ಯ - ಶೇಕ್ ಮಹಮ್ಮದ್ ಶರೀಫ್,
2)ಸಾಮಾನ್ಯ- ದೀಕ್ಷಿತ್ ಡಿ.ಜೆ
3)ಹಿಂದುಳಿದ ವರ್ಗ 'ಎ' ಮಹಿಳೆ -ಮೈಮುನ
4)ಪರಿಶಿಷ್ಟ ಪಂಗಡ ಮಹಿಳೆ -ಯಶೋದ

102-ನೆಕ್ಕಿಲಾಡಿ-1 ಕ್ಷೇತ್ರ
1)ಸಾಮಾನ್ಯ- ಅಜಯ್ ಎ.ಎಮ್
2)ಹಿಂದುಳಿದ ವರ್ಗ 'ಎ' ಪುರುಷ- ಮಹಮ್ಮದ್ ಶಾಕೀರ್ ಪಿಲ್ಯ.
3)ಸಾಮಾನ್ಯ ಮಹಿಳೆ : ಮೀನಾಕ್ಷಿ

102 ನೆಕ್ಕಿಲಾಡಿ - 2 ಕ್ಷೇತ್ರ
1)ಸಾಮಾನ್ಯ ಮಹಿಳೆ : ಶುಭಲಕ್ಷ್ಮಿ
2)ಪರಿಶಿಷ್ಟ ಜಾತಿ ಮಹಿಳೆ: ಕುಸುಮ

ಅಭ್ಯರ್ಥಿಗಳನ್ನು ಹೆಚ್ಚಿನ ಪ್ರಮಾಣದ ಮತಗಳಿಂದ ಗೆಲ್ಲಿಸುವಂತೆ ಅದ್ಯಕ್ಷ ಗಣೇಶ್ ಕೈಕುರೆ ರವರು ವಿನಂತಿಸಿದರು.

ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ ಪೇಡರೇಷನ್ (ಎಸ್.ಎಂ.ಎಫ್) ಜಮಾಅತ್ ಪ್ರತಿನಿಧಿ ಸಂಗಮ ಮತ್ತು ಸಮಸ್ತ ಆಗಲಿದ ನೇತಾರರ ಅನುಸ್ಮರಣೆ ಕಡಬ:- ಕಡಬ ತಾ...
26/11/2020

ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ ಪೇಡರೇಷನ್ (ಎಸ್.ಎಂ.ಎಫ್) ಜಮಾಅತ್ ಪ್ರತಿನಿಧಿ ಸಂಗಮ ಮತ್ತು ಸಮಸ್ತ ಆಗಲಿದ ನೇತಾರರ ಅನುಸ್ಮರಣೆ

ಕಡಬ:- ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ ಪೇಡರೇಷನ್ (ಎಸ್.ಎಂ.ಎಫ್) ವತಿಯಿಂದ ಕಡಬ ತಾಲೂಕು ವ್ಯಾಪ್ತಿಯ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಜಮಾಅತ್ ಪ್ರತಿನಿಧಿಗಳ ಸಂಗಮ ಮತ್ತು ಶೈಖುನಾ ಶಂಸುಲ್ ಉಲಮಾ ಅಗಲಿದ ಸಮಸ್ತ ನೇತಾರರ ಅನುಸ್ಮರಣ ಸಂಗಮವು ನ.೨೪ ರಂದು ಕಡಬ ಮುಈನುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಎಸ್.ಎಂ.ಎಫ್ ಕಡಬ ತಾಲೂಕು ಅಧ್ಯಕ್ಷರಾದ ಹಾಜಿ ಎಸ್. ಅಬ್ದುಲ್ ಖಾದರ್ ಸುಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನೆಟ್ಟಣ ಖತೀಬರಾದ ಜಲೀಲ್ ಅರ್ಶದಿ ಉದ್ಘಾಟಿಸಿದರು. ಪಣೆಮಜಲು ಖತೀಬರಾದ ಅಬ್ಬಾಸ್ ಮದನಿ ದುವಾ ನೆರವೇರಿಸಿದರು ಸುಂಕದಕಟ್ಟೆ ಖತೀಬರಾದ ಮುರ್ಷಿದ್ ಫೈಝಿ ಅನುಸ್ಮರಣಾ ಪ್ರಭಾಷಣ ನಡೆಸಿದರು.
ಈ ಸಭೆಯಲ್ಲಿ ಕಡಬ ತಾಲೂಕು ವ್ಯಾಪ್ತಿಯ ೧೭ ಜಮಾಅತಿನ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ವ್ಯಾಪ್ತಿಯ ಈ ಜಮಾಅತ್‌ಗಳನ್ನು ಮಾದರಿ ಜಮಾಅತ್‌ಗಳಾಗಿ ರೂಪಿಕರಿಸುವರೇ ಕೆಲವೊಂದು ತೀರ್ಮಾಣಗಳನ್ನು ತೆಗೆದುಕೊಳ್ಳಲಾಯಿತು. ವೇದಿಕೆಯಲ್ಲಿ ಕಡಬ ಆರ್.ಟಿ.ಜೆ.ಎಂ. ಅಧ್ಯಕ್ಷ ಹಾಜಿ ಕೆ. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್ ಅಬ್ದುಲ್ ಹಮೀದ್, ಹಾಜಿ ಕೆ.ಪಿ.ಎಂ. ಶರೀಫ್ ಫೈಝಿ, ಕಡಬ ಎಂ. ಐ ಮದರಸ ಸದರ್ ಉಸ್ತಾರ್ ಟಿ.ಹೆಚ್. ಶರೀಫ್ ದಾರಿಮಿ, ಎಸ್.ಎಂ.ಎಫ್ ಉಪಾಧ್ಯಕ್ಷ ಹಾಜಿ ರಫೀಕ್ ಗಂಡಿಬಾಗಿಲು, ಅಬ್ದುಲ್ ರಜಾಕ್ ಹೆಂತಾರ್, ಮತ್ತು ಕುದ್ಲೂರು, ಅತೂರು, ನೆಕ್ಕರೆ ಕುಂತೂರು, ಕಳಾರ, ಕಡಬ, ಪನ್ಯ, ಚಾಪಳ್ಳ, ಪಣೆಮಜಲು, ಪರಣೆ , ಸುಂಕದಕಟ್ಟೆ, ನೆಟ್ಟಣ, ಪೊಸೊಳಿಗೆ, ಗಂಡಿಬಾಗಿಲು, ಕೋಲ್ಪೆ, ಕುಂಡಾಜೆ ಜಮಾಅತಿನ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಂ.ಎಫ್. ಪ್ರ. ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಎಂ.ಎಫ್. ಸಂ. ಕಾರ್ಯದರ್ಶಿ ಫಲ್‌ಲುದ್ದೀನ್ ಅತೂರು ವಂದಿಸಿದರು

Address

Kadaba
Mangalore
574221

Telephone

+918139916202

Website

Alerts

Be the first to know and let us send you an email when SDK MEDIA posts news and promotions. Your email address will not be used for any other purpose, and you can unsubscribe at any time.

Contact The Business

Send a message to SDK MEDIA:

Share