22/03/2024
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಮ್ಮದ್ ಸಲೀಂ ಮೇಘ ನೇಮಕ.
ಮಂಗಳೂರು ( ಮಾ 22): ದ.ಕ.ಜಿಲ್ಲಾ ಕಾಂಗ್ರೆಸ್ ತನ್ನ ಆಂತರಿಕ ಕಾರ್ಯ ಚಟುವಟಿಕೆಯ ಭಾಗವಾಗಿ ಹಾಲಿ ಸಮಿತಿಯನ್ನು ಪುನರ್ರಚನೆ ಮಾಡಿದ್ದು ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಸಕ್ರಿಯರಾಗಿರುವ ಮಹಮ್ಮದ್ ಸಲೀಂ ಮೇಘ ಅವರಿಗೆ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಹಾಲಿ ದ.ಕ.ಜಿಲ್ಲೆ ನೂತನ ಸಮಿತಿಯ ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ,.ಶುಭೋದಯ ಆಳ್ವ, ಕೆ.ಅಶ್ರಫ್(ಮಾಜಿ ಮೇಯರ್), ಬಶೀರ್ ಬೈಕಂಪಾಡಿ, ಟಿ.ಹೊನ್ನಯ್ಯ ರನ್ನು ನೇಮಕ ಮಾಡಿದ್ದರೆ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಜಯಶೀಲ ಅಡ್ಯಂತಾಯ,ರಂಜನ್ ಜಿ ಗೌಡ ಬೆಳ್ತಂಗಡಿ, ಅಬ್ದುಲ್ ನಝೀರ್ ಮಠ, ಕಿರಣ್ ಬುಡ್ಲೆ ಗುತ್ತು ಸುಳ್ಯ, ಭರತೇಶ ಆಮೀನ್ ಬಜಾಲ್, ಟಿ.ಡಿ.ವಿಕಾಸ್ ಶೆಟ್ಟಿ, ಸೈಮನ್ ಕಡಬ ಸಿ.ಜೆ, ಹೇಮಂತ್ ಕುಮಾರ್ ಬೀ.ಎನ್ ಸುರತ್ಕಲ್, ಚಿತ್ತರಂಜನ್ ಶೆಟ್ಟಿ ಬೊಂಡಾಲ,ಅಬೂಬಕ್ಕರ್ ಸಿದ್ದೀಕ್ ಪಾರೆ,ಅಶ್ರಫ್ ಬಸ್ತಿಕಾರ್ ಉಪ್ಪಿನಂಗಡಿ ಮತ್ತು ಕೃಷ್ಣ ಪ್ರಸಾದ್ ಆಳ್ವ ಪುತ್ತೂರು ರವರನ್ನು ನೇಮಿಸಿದೆ.
ಕಾರ್ಯದರ್ಶಿ ಗಳನ್ನಾಗಿ ಸಬಿತಾ ಮಿಸ್ಕೀತ್,ಅರ್ಷದ್ ದರ್ಬೆ ಪುತ್ತೂರು,ಅಭಿನಂದನ್ ಬೆಳ್ತಂಗಡಿ,ರಾಧಾಕೃಷ್ಣ ಬೊಳ್ಳುರು ಸುಳ್ಯ,ಜಿತೇಂದ್ರ ಜೇ. ಸುವರ್ಣ,ಗಿರೀಶ್ ಶೆಟ್ಟಿ ಕದ್ರಿ, ಪ್ರಶಾಂತ್ ಕುಲಾಲ್ ಬಂಟ್ವಾಳ, ಜೋಸೆಫ್ ಡಿ ಸೋಜಾ, ವಿಶಾಲಾಕ್ಷಿ ಪುತ್ತೂರು,ಯಶ್ವಂತ್ ಪ್ರಭು ರವನ್ನು ನೇಮಿಸಲಾಗಿದೆ.
ಕಾರ್ಯಕಾರಿ ಸದಸ್ಯರಾಗಿ ಸುನಿಲ್ ಪೂಜಾರಿ ಗಂಜಿಮಠ,ಮಹಮ್ಮದ್ ಸಲೀಮ್ ಮೇಘ, ಲಕ್ಷ್ಮಣ್ ಶೆಟ್ಟಿ, ಬಾಲಕೃಷ್ಣ ಕರ್ಕೇರಾ ವಾಮಂಜೂರು,ರಾಬಿನ್ ಪ್ರೀತಮ್ ರವರನ್ನು ನೇಮಕ ಮಾಡಲಾಗಿದೆ