Sangatya News - ಸಾಂಗತ್ಯ ನ್ಯೂಸ್

Sangatya News - ಸಾಂಗತ್ಯ ನ್ಯೂಸ್ Kannada News

*ಕೋಟೆಕಾರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ  ಜಮಾಲ್ ಅಜ್ಜಿನಡ್ಕ, ಮ್ಯಾಥ್ ಡಿಸೋಜಾ ಆಯ್ಕೆ*ಮಂಗಳೂರು (ಜು 22): ಕೋಟೆಕಾರು ಪಟ್ಟಣ ಪ...
22/07/2025

*ಕೋಟೆಕಾರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಜಮಾಲ್ ಅಜ್ಜಿನಡ್ಕ, ಮ್ಯಾಥ್ ಡಿಸೋಜಾ ಆಯ್ಕೆ*

ಮಂಗಳೂರು (ಜು 22): ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಿ ವಿಭಾಗದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ಜಮಾಲ್ ಅಜ್ಜಿನಡ್ಕ ಪುನರಾಯ್ಕೆಗೊಂಡರೆ ಎ ವಿಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮ್ಯಾಥ್ಯು ಡಿಸೋಜಾ ಆಯ್ಕೆಗೊಂಡರು.

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬೀರಿ ಮ್ಯಾರೇಜ್ ಮಹಲ್ ನಲ್ಲಿ ಉಳ್ಳಾಲ ಬ್ಲಾಕ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಅಶ್ರಫ್ ಕೆಸಿ ರೋಡ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತಾನಾಡಿದ ರಮೇಶ್ ಶೆಟ್ಟಿ ಬೋಳಿಯಾರ್ ಪಕ್ಷ ಸಂಘಟನೆಯಲ್ಲಿ ಕೋಟೆಕಾರು ವಲಯ ಸಮಿತಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಬಾಹುಳ್ಯವನ್ನು ಉಳಿಸಿ ಎಲ್ಲ ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಗೊಳಿಸುವಲ್ಲಿ ಕಾರ್ಯಕರ್ತರು ಮತ್ತು ಬೂತ್ ಅಧ್ಯಕ್ಷರು ಹೆಚ್ಚಿನ ಶ್ರಮ ವಹಿಸಲು ಕರೆ ಕೊಟ್ಟರು.

ಅದೇ ರೀತಿ ಉಳ್ಳಾಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಶ್ರಮ ಮತ್ತು ಅಭಿವೃದ್ಧಿಯನ್ನು ಜನ ಮೆಚ್ಚಿ ಕೊಂಡ ಬಗ್ಗೆ ಹಾಗೂ ಕೋಟೆಕಾರು ವಲಯದಲ್ಲಿ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಹೆಚ್ಚಿನ ಪವರ್ ಸ್ಟೇಷನ್ ಗಳನ್ನು ಮಾಡುವಲ್ಲಿ ಗ್ರಾಮದ ಜನರಿಗೆ ಮತ್ತು ಕೋಟೆಕಾರು ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳನ್ನು ಮಾಡಲು ಹೆಚ್ಚಿನ ಅನುದಾನ ನೀಡಿ ಕೆಲಸ ಕಾರ್ಯಗಳನ್ನು ಮಾಡಿಸಿದ ಬಗ್ಗೆ ವಿವರಣೆ ನೀಡಿದರು.

ಈ ವೇಳೆ ಎಲ್ಲಾ ಹಳೇ ಸಮಿತಿಗಳನ್ನು ಬರ್ಖಾಸ್ತು ಮಾಡಿ ಹೊಸ ವಲಯ ಸಮಿತಿಗೆ ಎರಡು ವಿಭಾಗದಲ್ಲಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು. ವಲಯ ಒಂದನೆ ವಿಭಾಗಕ್ಕೆ 7 ಬೂತ್ ಗಳ ವಲಯ ಸಮಿತಿ ಮತ್ತು ಎರಡನೆ ವಲಯ ಸಮಿತಿಗೆ 8 ಬೂತ್ ಗಳ ವಲಯ ಸಮಿತಿ ರಚನೆ ಮಾಡಲಾಯಿತು.

◾ಉಲೆಮಾ ಒಕ್ಕೂಟದ ಸಭೆಯಲ್ಲಿ ರಾಜಕೀಯ ಬೇಕಾ?◾◾ಶಾಫಿ ಸಅದಿ ಬಾಯಿ ಮುಚ್ಚಿಸಿದ ಬಿ. ಕೆ ಹರಿಪ್ರಸಾದ್◾ಇಂದು ಮಂಗಳೂರಿಗೆ ಆಗಮಿಸಿದ್ದ ಎಐಸಿಸಿ ಕಾರ್ಯದರ...
06/06/2025

◾ಉಲೆಮಾ ಒಕ್ಕೂಟದ ಸಭೆಯಲ್ಲಿ ರಾಜಕೀಯ ಬೇಕಾ?◾

◾ಶಾಫಿ ಸಅದಿ ಬಾಯಿ ಮುಚ್ಚಿಸಿದ ಬಿ. ಕೆ ಹರಿಪ್ರಸಾದ್◾

ಇಂದು ಮಂಗಳೂರಿಗೆ ಆಗಮಿಸಿದ್ದ ಎಐಸಿಸಿ ಕಾರ್ಯದರ್ಶಿ ಬಿ. ಕೆ ಹರಿಪ್ರಸಾದ್ ಜಿಲ್ಲೆಯ ಉಲೆಮಾ ಒಕ್ಕೂಟದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ಸಮಯದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವವರ ಪರವಾಗಿ ಶಾಫಿ ಸಅದಿ ಮಾತನಾಡಿ ಶೋಕಾಸ್ ನೋಟಿಸ್ ನೀಡಿರುವುದನ್ನು ಖಂಡಿಸಿದಾಗ ಬಿ. ಕೆ ಹರಿಪ್ರಸಾದ್ ನಾನು ಇಲ್ಲಿ ಕರಾವಳಿಯ ಪರಿಸ್ಥಿತಿ ಅರಿಯಲು ಹಾಗೂ ಅದನ್ನು ಪರಿಹರಿಸಲು ತಮ್ಮನ್ನು ಭೇಟಿಯಾಗಿದ್ದೇನೆ. ಇಲ್ಲಿ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಬೇಡಿ ಎಂದು ಹೇಳಿದ ಘಟನೆ ನಡೆದಿದೆ.

ಮಂಗಳೂರು ಸುದ್ದಿ 24×7

ಕೋಟೆಕಾರ್ ಗ್ರಾಮದಲ್ಲಿ ಪ್ರವಾಹದಲ್ಲಿ ಕುರಿ ಗಳನ್ನು ಕಳೆದು ಕೊಂಡ ವ್ಯಕ್ತಿಗೆ ಪರಿಹಾರ ಬಿಡುಗಡೆ.ಮಂಗಳೂರು ( ಜೂನ್ 2 ) ಕೋಟೆಕಾರ್ ಗ್ರಾಮದಲ್ಲಿ ಉ...
06/06/2025

ಕೋಟೆಕಾರ್ ಗ್ರಾಮದಲ್ಲಿ ಪ್ರವಾಹದಲ್ಲಿ ಕುರಿ ಗಳನ್ನು ಕಳೆದು ಕೊಂಡ ವ್ಯಕ್ತಿಗೆ ಪರಿಹಾರ ಬಿಡುಗಡೆ.

ಮಂಗಳೂರು ( ಜೂನ್ 2 ) ಕೋಟೆಕಾರ್ ಗ್ರಾಮದಲ್ಲಿ ಉಂಟಾದ ಪ್ರವಾಹದಲ್ಲಿ ಕೆಸಿ ರೋಡ್ ಯಾಕೂಬ್ ಎಂಬುವವರ ಕುರಿಗಳು ಮೃತಪಟ್ಟ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ತುರ್ತು ಪರಿಹಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ.

ಕೋಟೆಕಾರು ಅಜ್ಜಿನಡ್ಕದಲ್ಲಿ ಯಾಕೂಬ್ ಅವರಿಗೆ ಸೇರಿದ ಒಟ್ಟು 73 ಕುರಿಗಳನ್ನು ಶೆಡ್ ನಲ್ಲಿ ಇಡಲಾಗಿತ್ತು. ರಾತ್ರಿ ಸಮಯದಲ್ಲಿ ಉಂಟಾದ ಏಕಾಏಕಿ ಪ್ರವಾಹದಿಂದ ಒಟ್ಟು 68 ಕುರಿಗಳು ಮೃತಪಟ್ಟಿದ್ದು 5 ಕುರಿಗಳು ಜೀವ ಉಳಿಸಿಕೊಂಡಿತ್ತು. ಈ ಕುರಿತ ಮಾಹಿತಿ ಸಿಕ್ಕ ಕೂಡಲೇ ಹಜ್ ಯಾತ್ರೆಗೆ ತೆರಳಿರುವ ಯುಟಿ ಖಾದರ್ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ಪರಿಹಾರ ಬಿಡುಗಡೆ ಮಾಡುವಂತೆ ಸೂಚಿಸಿದ್ದರು.

24/12/2024
*ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು. ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ*ತಲಪಾಡಿ ( ನ 23) : ಕರ್ನಾಟಕ ವ...
23/11/2024

*ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು. ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಕಾರ್ಯಕರ್ತರಿಂದ ಸಂಭ್ರಮಾಚರಣೆ*

ತಲಪಾಡಿ ( ನ 23) : ಕರ್ನಾಟಕ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ ಹಿನ್ನಲೆಯಲ್ಲಿ ತಲಪಾಡಿ ವಲಯ ಕಾಂಗ್ರೆಸ್ ವತಿಯಿಂದ ಇಂದು ಕೆಸಿ ರೋಡ್ ಜಂಕ್ಷನ್ ನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಕೆಸಿ ರೋಡ್ ನಿಂದ ಕೆಸಿ ನಗರದ ವರೆಗೆ ವಾದ್ಯಗೋಷ್ಠಿಗಳೊಂದಿಗೆ ವಿಜಯೋತ್ಸವ ಮೆರವಣಿಗೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶ್ರಫ್ ಕೆಸಿ ರೋಡ್ ಮೂರೂ ಕ್ಷೇತ್ರದ ಗೆಲುವು ಸಿದ್ದರಾಮಯ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಗೆಲುವು. ಮೂಡ ಎಂಬ ಗುಮ್ಮ ತೋರಿಸಿ, ವಖ್ಫ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ವಿಭಜಿಸಿ ಮತ ಪಡೆಯಲು ಹೊಂಚುಹಾಕಿದ್ದ ಬಿಜೆಪಿಗೆ ಪ್ರಜ್ಞಾವಂತ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಸುರೇಖಾ ಚಂದ್ರಹಾಸ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಸಲಾಂ ಕೆಸಿ ರೋಡ್, ಶಾಸಕರ ಆಪ್ತ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಗ್ರಾಪಂ ಸದಸ್ಯ ವೈಭವ್ ಶೆಟ್ಟಿ ತಲಪಾಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಉಸ್ಮಾನ್ ಕಲ್ಲಾಪು, ಜಿಯಾದ್ ಮುಕ್ಕಚ್ಚೇರಿ, ಇಬ್ರಾಹಿಂ ಟಿ. ಎಂ, ಸಲಾಂ ಪಿಲಿಕೂರು, ಕೋಟೆಕಾರ್ ಪಂಚಾಯತ್ ಕೌನ್ಸಿಲರ್ ಅಹಮದ್ ಅಜ್ಜಿನಡ್ಕ, ಇಸಾಕ್ ಕೋಟೆಕಾರ್, ವಲಯ ಉಪಾಧ್ಯಕ್ಷರಾದ ವಿನಯ್ ಕುಮಾರ್ ಶೆಟ್ಟಿ, ವಸಂತಿ ತಲಪಾಡಿ, ಕಾರ್ಯದರ್ಶಿಗಳಾದ ಅಬ್ಬಾಸ್ ಪಂಜಳ, ರಾಜೇಶ್ ಕೊಟ್ಟಾರಿ, ಬಿ. ಎಸ್ ಇಸ್ಮಾಯಿಲ್, ಕೋಶಾಧಿಕಾರಿ ಯಾಕೂಬ್ ಪಿಲಿಕೂರು. ಸಚ್ಚಿದಾನಂದ ಶೆಟ್ಟಿ, ಅಬ್ದುಲ್ ಖಾದರ್ ಮಕ್ಯಾರ್,ಲತಾ ವಿಶ್ವನಾಥ್, ಗೋಪಾಲ್ ತಚ್ಚಾನಿ, ರವೀಂದ್ರ ಟಿ. ಎಂ, ಬಶೀರ್ ಕೊಳಂಗರೆ ಮತ್ತಿತರರು ಭಾಗವಹಿಸಿದ್ದರು.

ಮಂಗಳೂರು ( ಏ 13):  ಪಾವೂರ್ ಮಂಡಲ ಪಂಚಾಯತ್ ಮಾಜಿ   ಪ್ರಧಾನರೂ,  ಮಂಗಳೂರು ತಾಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷರೂ ಆಗಿದ್ದ ಸಾಮಾಜಿಕ ಮುಂದಾಳು ಬ...
13/04/2024

ಮಂಗಳೂರು ( ಏ 13): ಪಾವೂರ್ ಮಂಡಲ ಪಂಚಾಯತ್ ಮಾಜಿ ಪ್ರಧಾನರೂ, ಮಂಗಳೂರು ತಾಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷರೂ ಆಗಿದ್ದ ಸಾಮಾಜಿಕ ಮುಂದಾಳು ಬೋಳಿಯಾರ್ ಬಂಡಸಾಲೆ ಅಬ್ದುಲ್ ರಹೀಮ್ (ಚೇರ್ಮ್ಯಾನ್ ರಹೀಮಾಕ) ರವರು ಅಲ್ಪ ಕಾಲದ ಅನಾರೋಗ್ಯದ ಕಾರಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಯು. ಟಿ ಫರೀದ್ ರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು ತಮ್ಮ ಅಧಿಕಾರವಧಿಯಲ್ಲಿ ಬೋಳಿಯಾರು, ಪಾವೂರು ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ತಲಪಾಡಿ ಭೇಟಿ ಹಿನ್ನಲೆಯಲ್ಲಿ ವಲಯ ಸಮಿತಿಯಿಂದ ಸಿದ್ಧತಾ ಸಭೆ ಉಳ್ಳಾಲ ( ಏ 8) ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪ...
08/04/2024

ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ತಲಪಾಡಿ ಭೇಟಿ ಹಿನ್ನಲೆಯಲ್ಲಿ ವಲಯ ಸಮಿತಿಯಿಂದ ಸಿದ್ಧತಾ ಸಭೆ

ಉಳ್ಳಾಲ ( ಏ 8) ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರು ಏಪ್ರಿಲ್ 14 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ತಲಪಾಡಿ ಗ್ರಾಮದ ಕೆಸಿ ರೋಡ್ ಜಂಕ್ಷನ್ ನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರನ್ನು ಭೇಟಿ ಮಾಡಲಿದ್ದು ಈ ಹಿನ್ನಲೆಯಲ್ಲಿ ಇಂದು ಅದರ ಪೂರ್ವಭಾವಿ ಸಿದ್ಧತೆಗಾಗಿ ತಲಪಾಡಿ ವಲಯ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ವಲಯ ಅಧ್ಯಕ್ಷರಾದ ಟಿ. ಎ. ಟಿ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ ನುಡಿದಂತೆ ನಡೆದ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿ ಕೊಡುವುದರ ಜೊತೆಗೆ ಪದ್ಮರಾಜ್ ಪೂಜಾರಿ ಅವರ ಪರವಾಗಿ ಬೆಂಬಲ ಯಾಚಿಸಿ ಅವರ ಗೆಲುವಿಗೆ ಮುಂದಾಗುವುದಕ್ಕೆ ನಿರ್ಧಾರ ಮಾಡಲಾಯಿತು.

ಸಭೆಯಲ್ಲಿ ವಲಯ ಸಮಿತಿ ಉಸ್ತುವಾರಿ ರವಿರಾಜ್ ಶೆಟ್ಟಿ, ಮಾಜಿ ತಾಪಂ ಅಧ್ಯಕ್ಷರಾದ ಮಹಮದ್ ಮೋನು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ವಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಮ್ಮದ್ ಸಲೀಂ ಮೇಘ ನೇಮಕ.ಮಂಗಳೂರು ( ಮಾ 22):  ದ.ಕ.ಜಿಲ್ಲಾ ಕಾಂಗ್ರೆಸ್ ತನ...
22/03/2024

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹಮ್ಮದ್ ಸಲೀಂ ಮೇಘ ನೇಮಕ.

ಮಂಗಳೂರು ( ಮಾ 22): ದ.ಕ.ಜಿಲ್ಲಾ ಕಾಂಗ್ರೆಸ್ ತನ್ನ ಆಂತರಿಕ ಕಾರ್ಯ ಚಟುವಟಿಕೆಯ ಭಾಗವಾಗಿ ಹಾಲಿ ಸಮಿತಿಯನ್ನು ಪುನರ್ರಚನೆ ಮಾಡಿದ್ದು ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಸಕ್ರಿಯರಾಗಿರುವ ಮಹಮ್ಮದ್ ಸಲೀಂ ಮೇಘ ಅವರಿಗೆ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಹಾಲಿ ದ.ಕ.ಜಿಲ್ಲೆ ನೂತನ ಸಮಿತಿಯ ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ,.ಶುಭೋದಯ ಆಳ್ವ, ಕೆ.ಅಶ್ರಫ್(ಮಾಜಿ ಮೇಯರ್), ಬಶೀರ್ ಬೈಕಂಪಾಡಿ, ಟಿ.ಹೊನ್ನಯ್ಯ ರನ್ನು ನೇಮಕ ಮಾಡಿದ್ದರೆ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಜಯಶೀಲ ಅಡ್ಯಂತಾಯ,ರಂಜನ್ ಜಿ ಗೌಡ ಬೆಳ್ತಂಗಡಿ, ಅಬ್ದುಲ್ ನಝೀರ್ ಮಠ, ಕಿರಣ್ ಬುಡ್ಲೆ ಗುತ್ತು ಸುಳ್ಯ, ಭರತೇಶ ಆಮೀನ್ ಬಜಾಲ್, ಟಿ.ಡಿ.ವಿಕಾಸ್ ಶೆಟ್ಟಿ, ಸೈಮನ್ ಕಡಬ ಸಿ.ಜೆ, ಹೇಮಂತ್ ಕುಮಾರ್ ಬೀ.ಎನ್ ಸುರತ್ಕಲ್, ಚಿತ್ತರಂಜನ್ ಶೆಟ್ಟಿ ಬೊಂಡಾಲ,ಅಬೂಬಕ್ಕರ್ ಸಿದ್ದೀಕ್ ಪಾರೆ,ಅಶ್ರಫ್ ಬಸ್ತಿಕಾರ್ ಉಪ್ಪಿನಂಗಡಿ ಮತ್ತು ಕೃಷ್ಣ ಪ್ರಸಾದ್ ಆಳ್ವ ಪುತ್ತೂರು ರವರನ್ನು ನೇಮಿಸಿದೆ.

ಕಾರ್ಯದರ್ಶಿ ಗಳನ್ನಾಗಿ ಸಬಿತಾ ಮಿಸ್ಕೀತ್,ಅರ್ಷದ್ ದರ್ಬೆ ಪುತ್ತೂರು,ಅಭಿನಂದನ್ ಬೆಳ್ತಂಗಡಿ,ರಾಧಾಕೃಷ್ಣ ಬೊಳ್ಳುರು ಸುಳ್ಯ,ಜಿತೇಂದ್ರ ಜೇ. ಸುವರ್ಣ,ಗಿರೀಶ್ ಶೆಟ್ಟಿ ಕದ್ರಿ, ಪ್ರಶಾಂತ್ ಕುಲಾಲ್ ಬಂಟ್ವಾಳ, ಜೋಸೆಫ್ ಡಿ ಸೋಜಾ, ವಿಶಾಲಾಕ್ಷಿ ಪುತ್ತೂರು,ಯಶ್ವಂತ್ ಪ್ರಭು ರವನ್ನು ನೇಮಿಸಲಾಗಿದೆ.

ಕಾರ್ಯಕಾರಿ ಸದಸ್ಯರಾಗಿ ಸುನಿಲ್ ಪೂಜಾರಿ ಗಂಜಿಮಠ,ಮಹಮ್ಮದ್ ಸಲೀಮ್ ಮೇಘ, ಲಕ್ಷ್ಮಣ್ ಶೆಟ್ಟಿ, ಬಾಲಕೃಷ್ಣ ಕರ್ಕೇರಾ ವಾಮಂಜೂರು,ರಾಬಿನ್ ಪ್ರೀತಮ್ ರವರನ್ನು ನೇಮಕ ಮಾಡಲಾಗಿದೆ

ಲೋಕಸಭಾ ಚುನಾವಣೆಯಲ್ಲಿ ದ. ಕ ಜಿಲ್ಲೆಯಿಂದ ಅಭ್ಯರ್ಥಿ ಆಯ್ಕೆಗೆ ಕೆಪಿಸಿಸಿ ವೀಕ್ಷಕರಾಗಿ ಮಧು ಬಂಗಾರಪ್ಪ ನೇಮಕ.ಬೆಂಗಳೂರು (ಸೆ 22): ಮುಂಬರುವ ಲೋಕ...
22/09/2023

ಲೋಕಸಭಾ ಚುನಾವಣೆಯಲ್ಲಿ ದ. ಕ ಜಿಲ್ಲೆಯಿಂದ ಅಭ್ಯರ್ಥಿ ಆಯ್ಕೆಗೆ ಕೆಪಿಸಿಸಿ ವೀಕ್ಷಕರಾಗಿ ಮಧು ಬಂಗಾರಪ್ಪ ನೇಮಕ.

ಬೆಂಗಳೂರು (ಸೆ 22): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆಲುವಿಗೆ ಕಾಂಗ್ರೆಸ್ ಪಣ ತೊಟ್ಟಿದ್ದು ಸಮರ್ಥ ಅಭ್ಯರ್ಥಿಯ ಆಯ್ಕೆಗೆ ಮುಂದಾಗಿದೆ. ಲೋಕಸಭಾ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ವರದಿ ನೀಡಲು ಸಚಿವರಾದ ಮಧು ಬಂಗಾರಪ್ಪ ಅವರನ್ನು ವೀಕ್ಷಕರನ್ನಾಗಿ ಕೆಪಿಸಿಸಿ ನೇಮಕ ಮಾಡಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ ಶಿವಕುಮಾರ್ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಪಕ್ಷದ ಪ್ರಮುಖರು, ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿ ಅಭ್ಯರ್ಥಿ ಆಯ್ಕೆಯ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮಧು ಬಂಗಾರಪ್ಪ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಡಿತ ಹೊಂದಿದ್ದು ಇವರು ಜಿಲ್ಲೆಯ ವೀಕ್ಷಕರಾಗಿ ನೇಮಕವಾಗಿರುವುದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ರಣತಂತ್ರ ರೂಪಿಸುವುದಕ್ಕೆ ನೆರವಾಗಲಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ದಕ್ಷ ಅಧಿಕಾರಿ ಎಲ್. ಕೆ ಅತೀಕ್ ನೇಮಕಮಂಗಳೂರು (ಮೇ 19 ) : ದಕ್ಷಿಣ ಕನ್ನಡ ಜಿಲ್ಲಾ ಉಸ್ತು...
19/06/2023

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ದಕ್ಷ ಅಧಿಕಾರಿ ಎಲ್. ಕೆ ಅತೀಕ್ ನೇಮಕ

ಮಂಗಳೂರು (ಮೇ 19 ) : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಎಲ್. ಕೆ ಅತೀಕ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿರುವ ಎಲ್. ಕೆ ಅತೀಕ್ ಗ್ರಾಮೀಣಾಭಿವೃದ್ಧಿ ಹಾಗೂ ಹಣಕಾಸು ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 1991 ನೇ ಬ್ಯಾಚ್ ನ ಅಧಿಕಾರಿಯಾಗಿರುವ ಎಲ್. ಕೆ ಅತೀಕ್ ಈ ಹಿಂದೆ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಇವರು ವಾಷಿಂಗ್ಟನ್ ಡಿಸಿ ಯಲ್ಲಿ ವಿಶ್ವಬ್ಯಾಂಕ್ ನ ಹಿರಿಯ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಈ ಹಿಂದೆ ಮೇ 2016 ರಿಂದ 2018 ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಹಿರಿಯ ಅಧಿಕಾರಿಯಾಗಿರುವ ಎಲ್. ಕೆ ಅತೀಕ್ ಅವರನ್ನು ದ. ಕ ಜಿಲ್ಲೆಯ ಉಸ್ತುವಾರಿ ನೇಮಕ ಮಾಡಿರುವುದಕ್ಕೆ ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ.

ನಾಳೆ ತೊಕ್ಕೊಟ್ಟುವಿನಲ್ಲಿ ಮಹಿಳೆಯರ ಉಚಿತ ಬಸ್ ಸಂಚಾರ ಯೋಜನೆ ( ಶಕ್ತಿ ) ಗೆ ಚಾಲನೆ.ಮಂಗಳೂರು ( ಜೂ 10 ) : ದಿನಾಂಕ 11/06/2023 ನಾಳೆ ಭಾನುವಾ...
10/06/2023

ನಾಳೆ ತೊಕ್ಕೊಟ್ಟುವಿನಲ್ಲಿ ಮಹಿಳೆಯರ ಉಚಿತ ಬಸ್ ಸಂಚಾರ ಯೋಜನೆ ( ಶಕ್ತಿ ) ಗೆ ಚಾಲನೆ.

ಮಂಗಳೂರು ( ಜೂ 10 ) : ದಿನಾಂಕ 11/06/2023 ನಾಳೆ ಭಾನುವಾರ ಮಧ್ಯಾಹ್ನ 1 ಗಂಟೆಗೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕರ್ನಾಟಕ ಸರ್ಕಾರ ಘೋಷಿಸಿದ ಮಹಿಳೆಯರ ಉಚಿತ ಬಸ್ ಪ್ರಯಾಣ (ಶಕ್ತಿ) ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಉಳ್ಳಾಲ ಹಾಗೂ ಮುಡಿಪು ಬ್ಲಾಕ್ ವ್ಯಾಪ್ತಿಯ ಎಲ್ಲಾ ಹಿರಿಯ, ಕಿರಿಯ ಕಾಂಗ್ರೆಸ್ ನಾಯಕರುಗಳು ಹಾಗೂ ಕಾರ್ಯಕರ್ತರುಗಳು, ಈ ಯೋಜನೆಯ ಫಲಾನುಭವಿಗಳಾದ ಮಹಿಳೆಯರು ಹಾಗೂ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನ ಪಾಸ್ ಪೋರ್ಟ್ ಆಫೀಸಿನ ಕರ್ಮಕಾಂಡವನ್ನು ನಿಲ್ಲಿಸುವಿರಾ?. ಪಾಸ್ ಪೋರ್ಟ್ ಅಧಿಕಾರಿಗಳ ಕಿರುಕುಳದ ಬಗ್ಗೆ ಬರುತ್ತಿವೆ ಹಲವು ದೂರುಗಳು. ಮಂ...
09/06/2023

ಮಂಗಳೂರಿನ ಪಾಸ್ ಪೋರ್ಟ್ ಆಫೀಸಿನ ಕರ್ಮಕಾಂಡವನ್ನು ನಿಲ್ಲಿಸುವಿರಾ?. ಪಾಸ್ ಪೋರ್ಟ್ ಅಧಿಕಾರಿಗಳ ಕಿರುಕುಳದ ಬಗ್ಗೆ ಬರುತ್ತಿವೆ ಹಲವು ದೂರುಗಳು.

ಮಂಗಳೂರು ( ಜೂ 9 ): ಮಂಗಳೂರು ಪಾಸ್ ಪಾಸ್ ಪೋರ್ಟ್ ಕಚೇರಿಯಲ್ಲಿ ಗ್ರಾಹಕರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಪಾಸ್ ಪೋರ್ಟ್ ಮಾಡಿಸಲು ಒಂದು ವ್ಯಕ್ತಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್ ಹೀಗೆ ನಮೂದಿಸಿರುವ ಹಲವು ದಾಖಲೆಗಳ ಪೈಕಿ ಎರಡು ದಾಖಲೆ ಹಾಜರು ಪಡಿಸಿದರೆ ಸಾಕು ಎಂದು ನಮೂದಿಸಿದ್ದರೂ ಇನ್ನೂ ಹೆಚ್ಚು ದಾಖಲೆ ತರುವಂತೆ ಒತ್ತಾಯಿಸಲಾಗುತ್ತಿದೆ. ತರದಿದ್ದಲ್ಲಿ ಅರ್ಜಿ ತಿರಸ್ಕರಿಸಿ ವಾಪಾಸ್ಸು ಕಳುಹಿಸುತ್ತಿದ್ದಾರೆ ಎನ್ನುವ ಹಲವು ದೂರುಗಳು ಬಂದಿವೆ.

ಇನ್ನು 50 ವರ್ಷ ಮೇಲ್ಪಟ್ಟ ವರಿಗೆ ಒಂದೇ ದಾಖಲೆ ಸಾಕು ಎಂದು ಕೇಂದ್ರ ಸರ್ಕಾರ ಕಾನೂನು ತಂದರೆ ಮಂಗಳೂರಿನ ಪಾಸ್ ಪೋರ್ಟ್ ಆಫೀಸಿನಲ್ಲಿ ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. 70 ವರ್ಷ ವಯಸ್ಸಾದ ವರಲ್ಲಿ ಎಲ್ಲಾ ದಾಖಲೆ ಇದ್ದರೂ ಜನನ ಸರ್ಟಿಫಿಕೇಟ್ ಎಲ್ಲಿದೆ ಆರು ತಿಂಗಳ ಹಿಂದಿನ ಬ್ಯಾಂಕ್ ಅಕೌಂಟ್ ಎಲ್ಲಿದೆ ಎಲ್ಲಾ ಮಾಡ್ಕೊಂಡು ಬನ್ನಿ ಎಂದು ಆ ವಯಸ್ಸಾದವರನ್ನೂ ಸತಾಯಿಸಲಾಗುತ್ತಿದೆ.

ಇನ್ನು ಗಂಡ ಹೊರ ದೇಶದಲ್ಲಿದ್ದರೆ ಚಿಕ್ಕ ಮಕ್ಕಳಿಗೆ ಪಾಸ್ ಪೋರ್ಟ್ ಮಾಡಲು ಹೋದರೆ ಆತ ಪಾಸ್ ಪೋರ್ಟ್ ಕಾಪಿಗೆ, ಆನೆಕ್ಷರ್ ಡಿ ಫಾರ್ಮಿಗೆ ಸಹಿ ಹಾಕಿ ಹೋಗಿದ್ದರೂ ಅದನ್ನು ಪುರಸ್ಕರಿಸದೇ ಆತ ಸಹಿ ಹಾಕಿ ಗಲ್ಫ್ ನಿಂದಲೇ ಮನೆಗೆ ಕೊರಿಯರ್ ಮಾಡಬೇಕು ಮತ್ತು ಆ ಕೊರಿಯರ್ ಕವರನ್ನು ಪಾಸ್ ಪೋರ್ಟ್ ಕಚೇರಿಗೆ ತರಬೇಕು ಎಂಬ ವಿಚಿತ್ರ ಕಾನೂನು ಮಂಗಳೂರು ಪಾಸ್ ಪೋರ್ಟ್ ಕಚೇರಿಯಲ್ಲಿ ಚಾಲ್ತಿಗೆ ತರಲಾಗಿದೆ.

ಮಂಗಳೂರಿನ ಪಾಸ್ಪೋರ್ಟ್ ಆಫೀಸಿನ ಪ್ರತಿಯೊಂದು ಕೌಂಟರಿನಲ್ಲೂ ಕೇರಳದರೇ ತುಂಬಿದ್ದು ಕನ್ನಡ ಮಾತ್ರ ಮಾತನಾಡುವವರು ಇವರ ಜೊತೆ ವ್ಯವಹರಿಸಲು ಕಷ್ಟ ಪಡಬೇಕಿದೆ. ಗ್ರಾಹಕರನ್ನು ಸತಾಯಿಸುವ ಈ ಪಾಸ್ ಪೋರ್ಟ್ ಅಧಿಕಾರಿಗಳ ಉದ್ದೇಶದ ಬಗ್ಗೆ ಸಂಶಯಗಳಿದ್ದು ಕೇಂದ್ರ ಸರ್ಕಾರ ಪಾಸ್ ಪೋರ್ಟ್ ಕಚೇರಿಗಳು ಗ್ರಾಹಕ ಸ್ನೇಹಿಯಾಗಿ ಸುಲಭವಾಗಿ ಎಲ್ಲರಿಗೂ ಪಾಸ್ ಪೋರ್ಟ್ ಸಿಗುವಂತಾಗಬೇಕು ಎಂದು ಜಾಹಿರಾತು ಮೂಲಕ ಪ್ರಚಾರ ಮಾಡುತ್ತಿದ್ದರೆ ಮಂಗಳೂರಿನ ಪಾಸ್ ಪೋರ್ಟ್ ಕಚೇರಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಹಕರಿಗೆ ತೊಂದರೆ ಕೊಡುವುದರಲ್ಲಿ ನಿರತವಾಗಿದೆ.

ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ಮಂಗಳೂರು ಪಾಸ್ ಪೋರ್ಟ್ ಕಚೇರಿಯಲ್ಲಿ ಕೇರಳ ಮೂಲದ ಅಧಿಕಾರಿಗಳು ಗ್ರಾಹಕರಿಗೆ ನೀಡುತ್ತಿರುವ ಅನಗತ್ಯ ಕಿರುಕುಳ ನಿಲ್ಲಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Address

Mangalore

Website

Alerts

Be the first to know and let us send you an email when Sangatya News - ಸಾಂಗತ್ಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Share