12/02/2016
ನಾನು ರಘು. ಹಲವು ವರ್ಷಗಳಿಂದ ತಂದೆ ಯಾರು? ನನ್ನ ಜಾತಿ ಯಾವುದು? ನನ್ನನ್ನು ಸಾಕಿದ ಸರಕಾರದಲ್ಲಿ ಪ್ರಶ್ನೆ ಮಾಡುತ್ತಾ ಬಂದಿದ್ದು, ನನ್ನ ಧ್ವನಿಗೆ ಬೆಲೆ ಇಲ್ಲದೆ ಇತ್ತು, ಯಾವಾಗ ಮಾಧ್ಯಮ ನನ್ನ ಧ್ವನಿ ಎತ್ತಿ ಹಿಡಿಯಿರಿ ಆಗ ಸರಕಾರಕ್ಕೆ ಉಸಿರು ಕಟ್ಟಿದಂತೆ ಬಾಯಿ ಸಮಾಜ ಮುಂದೆ ಬಿಟ್ಟಿತು. ಅಷ್ಟೊಂದು ವರ್ಷ ನನ್ನೋಳಗೆ ಇದ್ದ ಆಶೆಗೆ ಮಾಧ್ಯಮಗಳು ಕಿರಣ ಮೂಡಿಸಿದೆ.
ಮಾಧ್ಯಮಗಳ ವಿಸೃತ ವರದಿಯ ಒತ್ತಡದಿಂದ
ಪ್ರಕರಣದಲ್ಲಿ ಜಾತಿ ನೀಡುತ್ತೇವೆ ಎಂದು ಭರವಸೆ ನೀಡಿದ ಸರಕಾರದ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕಮಿಟಿ ಒಂದು ತಿಂಗಳು ಒಳಗೆ ಮಾಧ್ಯಮಕ್ಕೆ ಭರವಸೆ ನೀಡಿತ್ತು.ನಾಳೆಗೆ ಒಂದು ತಿಂಗಳು ಗಡು ಮುಗಿಯತ್ತದೆ.ಅದರೆ ನಡುವೆ ಸದ್ಯದ ಊಟ ಇನ್ನಿತರ ಖರ್ಚಿಗಾಗಿ ತಾತ್ಕಾಲಿಕ ಕೆಲಸವು ನೀಡಿದೆ(8000 +ಸಾವಿರ ರೂ ) ಅದರೆ ಯಾವತ್ತೂ ಇದು ಖಾಯಂ ಉದ್ಯೋಗ ಅಲ್ಲ.
ಯಾರು ನನಗೆ ಕೆಲಸ ಕೊಟ್ಟರೊ ಅವರು ಈ ಹುದ್ದೆಯಿಂದ ಹೋದರೆ ಹೊಸಬ್ಬ ಬಂದರೆ ಕೆಲಸದಿಂದ ತೆಗೆಯುವ ಭಯ ಇದೆ .ಆದ್ದರಿಂದ ಮುಂದಿನ ನನ್ನ ಕನಸಿನ ವಿದ್ಯಾಭ್ಯಾಸ ( ಐ.ಎ.ಯಸ್) ಮಾಡುವ ಜೀವನದ ಕನಸು ಹಾಗೂ ಸರಕಾರದಿಂದ ಸಿಗುವ ಸವಲತ್ತು ಗಳಿಗೆ ಜಾತಿಯೆಂಬ ಪೀಡೆ ಬೇಕೆ ಬೇಕು ..
ಇದು ಸಂವಿಧಾನದತ್ಮಕ ಹಕ್ಕೂ ಕೂಡ ..ಇಲ್ಲಿ ಉದ್ಬವಿಸುವ ಪ್ರಶ್ನೆ ಸರಕಾರ ಒಂದು ತಿಂಗಳ ಒಳಗೆ ಜಾತಿ ಕೊಡುತ್ತೇನೆ ಎಂದು ಮಾಧ್ಯಮವನ್ನು ಸಾಕ್ಷಿಯಾಗಿಟ್ಟು ರಾಜ್ಯದ ಜನತೆಯ ಸರಕಾರ ಜವಾಬ್ದಾರಿಯುತ ಸಚಿವರು ಮುಂದೆ ಹೇಳಿದರೂ ಯಾಕೆ ನಿರ್ಲಕ್ಷ ಮಾಡುವುದು ಎಷ್ಟು ಸರಿ.
ನನ್ನ ಹೋರಾಟದ ದೃಷ್ಟಿಕೋನ ಒಂದೇ .ನನ್ನ ಜೀವನಲ್ಲಿ ಈ ಸರಕಾರದ ವ್ಯವಸ್ಥೆ ಯಲ್ಲಿ ಅಳವಡಿಸಿದ ಜಾತಿ, ಅಪ್ಪ, ಅಮ್ಮನ ಹೆಸರು ದಾಖಲು ಇಲ್ಲದೆ ಬದುಕಲು ಎಷ್ಟು ಕಷ್ಟ ಅನುಭವಿಸಿದ್ದೇನೆ ಮತ್ತು ಅನುಭವಿಸುತ್ತಾ ಇದ್ದೇನೆ ಅದ್ದರಿಂದ ನನ್ನಂಥ ಎಷ್ಟೋ ಅಪ್ಪ ಅಮ್ಮ ಗೊತ್ತಿಲ್ಲದ ಮಕ್ಕಳು ಈ ರಾಜ್ಯದಲ್ಲಿ ಇದ್ದಾರೆ.
ನನ್ನ ತಾಯಿ ಭಿಕ್ಷೆ ಬೇಡುತ್ತಿದ್ದ ಆ ಕೊಳೆಗೇರಿ ವಾಸಿಗಳ ಜಾತಿ ನೀಡಬಹುದು.ಜಾತಿ ಜಿಲ್ಲಾ ಕಮಿಟಿ ನೀಡಿದ ವರದಿ ಸರಕಾರ ಪರಿಗಣಿಸಬೇಕು ಎಂದು ಕೈ ಮುಗಿದು ವಿನಂತಿಸುತ್ತಾ ,
ಜಾತಿ ನೀಡದಿದ್ದರೂ ಸರಿ. ನನ್ನ ಜೊತೆ ಅವರಿಗೂ ನ್ಯಾಯ ಸಿಗುವಂತೆ ಕಾನೂನು ಜ್ಯಾರಿಗೆ ತನ್ನಿ ..ಇದಕ್ಕೆ ಎಲ್ಲಾ ಮಾಧ್ಯಮದ ಮತ್ತು ರಾಜ್ಯದ ಎಲ್ಲಾ ಅಕ್ಕ ತಂಗಿ ಅಣ್ಣ ತಮ್ಮಂದಿರಲ್ಲಿ ಬೇಡುತ್ತೇನೆ.
ದಯವಿಟ್ಟು ಮಾನಸಿಕ ವಾಗಿ ಸಪೋರ್ಟ್ ಮಾಡಿ. ಸ್ವಾಭಿಮಾನಕ್ಕೆ ಬೆಲೆ ನೀಡಿ. ನನ್ನ ಮೂಗಿ, ಕಿವುಡಿ ಕಣ್ಣಿಲ್ಲದ ತಾಯಿ ಭಿಕ್ಷುಕಿ ಆಗಿರಬಹುದು. ಅದು ನನ್ನ ಹಣೆಬರಹ ಆದರೆ ನನಗೆ ಭಿಕ್ಷೆ ಬೇಡ ನೈತಿಕ ಬೆಂಬಲ ಬೇಕು ದಯವಿಟ್ಟು ಕೊಡಿ. ನಾನು ಮಾಡದ ತಪ್ಪಿಗೆ ತೊಂದರೆ ಅನುಭವಿಸುತ್ತಿದ್ದೇನೆ .ನನ್ನಂತಯೇ ಈ ಜಾತಿ ವ್ಯವಸ್ಥೆಯಲ್ಲಿ ತೊಂದರೆ ಅನುಭಿಸುವವರು ಎಷ್ಟೋ ಇರಬಹುದು. ನನ್ನ ಬೇಡಿಕೆಯ ಕಾನೂನಿನ ಮುಖಾಂತರ ನನಗೆ ಒಬ್ಬನಿಗೆ ಅಂತ ಮೇಲ್ನೋಟಕ್ಕೆ ತಮಗೆ ಅನಿಸಬಹುದು ..ಅದರೆ ನನ್ನಂಥಹ ನಿರಾಶ್ರಿತರರಿಗೆ ಕಾನೂನು ಅಲ್ಲರಿಗೂ ಅನ್ವಹಿಸತ್ತದೆ .ಇದು ನಮ್ಮ ಸಂವಿಧಾನದ ಶಕ್ತಿ ಮತ್ತು ಆಶಯ..
ಇಂತೀ ನಿಮ್ಮವ
ರಘು
7411879338
ನನ್ನಲ್ಲಿ ವ್ಯಾಟ್ ಅಪ್ ಪೋನ್ ಇಲ್ಲದ ಕಾರಣ ಬೇರೆ ನಮ್ಮ ಮಿತ್ರರ ಮುಖಾಂತರ ಕಳುಸುತ್ತಿದ್ದೇನೆ.. ಜಾತ್ಯಾತೀತ ಭಾರತದ ವ್ಯವಸ್ಥೆಯಲ್ಲಿ ನನ್ನ ಮತ್ತು ನನ್ನಂತವರ ಭವಿಷ್ಯಕ್ಕೆ ಶಾಲಾ ಅದೂ S.S.L.C ಮಾರ್ಕ್ಸ್ ಕಾರ್ಡ್ ಗೆ ಜಾತಿ ಮುಖ್ಯವಾಗಿದ್ದು ,ಅದಕ್ಕೆ ಈ ಬೇಡಿಕೆ ನ್ಯಾಯಯುತವಾಗಿದೆ ಎಂದು ನಂಬಿದ್ದೇನೆ
ಮಾನ್ಯ ಕಮೀಷನರ್ ಸಾಮಾಜಿಕ ನ್ಯಾಯ ಇಲಾಖೆ .ನನ್ನ ಕಡತ ಇವರಲ್ಲಿದೆ
9480843003
ಮತ್ತು ಈಗ ತಾತ್ಕಾಲಿಕ ಕೆಲಸ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಾಯಂಕಲ 6.30 ತನಕ ಪೋನ್ ಯೂಸ್ ಮಾಡಲು ಅನುಮತಿ ಇಲ್ಲ .
https://www.google.co.in/search?q=%E0%B2%B0%E0%B2%98%E0%B3%81+%E0%B2%9C%E0%B2%BE%E0%B2%A4%E0%B2%BF&oq=%E0%B2%B0&aqs=chrome.2.69i57j69i59l2j0j69i61l2.1946j0j4&client=ms-android-samsung&sourceid=chrome-mobile&ie=UTF-8