13/02/2026
ನಾಳೆ ಅರಮನೆ ನಗರಿಯ ಸ್ವಚ್ಛತೆಗಾಗಿ “ಬೃಹತ್ ಸೈಕಲ್ ಜಾಥಾ’’ - ಮಾಧ್ಯಮದವರಿಗೆ ಆದರದ ಆಹ್ವಾನ.
ನಮ್ಮ ಹೆಮ್ಮೆಯ ಮೈಸೂರನ್ನು ಸ್ವಚ್ಛತೆಯಲ್ಲಿ ದೇಶಕ್ಕೆ 'ನಂಬರ್ 1' ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಯಂತೆ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರಾದ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ.
“ನಾಳಿನ ಉತ್ತಮ ಪರಿಸರಕ್ಕಾಗಿ ಇಂದೇ ಏರೋಣ ಸೈಕಲ್ ಸವಾರಿ”
ಕಾರ್ಯಕ್ರಮದ ವಿವರ:
• ದಿನಾಂಕ: ಫೆಬ್ರವರಿ 14, 2026, ಶನಿವಾರ.
• ಸಮಯ: ಮುಂಜಾನೆ 6:30 ಗಂಟೆಗೆ.
• ಸ್ಥಳ: ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ, ಮೈಸೂರು.
ಜಾಥಾ ಸಾಗುವ ಮಾರ್ಗ: ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ದೊಡ್ಡ ಗಡಿಯಾರ, ಕೆ.ಆರ್ ವೃತ್ತ, ಆಯುರ್ವೇದಿಕ್ ವೃತ್ತ, ಹೈವೇ ಸರ್ಕಲ್, ಎಲ್.ಐ.ಸಿ ವೃತ್ತ, ಜೆ.ಎಸ್.ಎಸ್. ಮೆಡಿಕಲ್ ಕಾಲೇಜು ಮೂಲಕ ಸಾಗಿ ಪುನಃ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ.
ಪರಿಸರ ಸಂರಕ್ಷಣೆ ಮತ್ತು ನಗರದ ನೈರ್ಮಲ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ವ್ಯಾಪಕ ಪ್ರಚಾರ ನೀಡಲು ತಾವುಗಳು ಆಗಮಿಸಬೇಕೆಂದು ವಿನಂತಿಸುತ್ತೇವೆ.
ತಮ್ಮ ವಿಶ್ವಾಸಿ,
ಆಯುಕ್ತರು
ಮೈಸೂರು ಮಹಾನಗರ ಪಾಲಿಕೆ.