TV1kannada

TV1kannada ಇದು ಕನ್ನಡಿಗರ ಧ್ವನಿ

18/08/2025

ಪಬ್ ನಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಯ ಕಿರಿಕ್...ಗುಂಡಿನ ಮತ್ತಿನಲ್ಲಿ ಆವಾಜ್...ವಿಡಿಯೋ ವೈರಲ್...

ಮೈಸೂರಿನ ಚೌಮುಂಡಿ ಬೆಟ್ಟದ ರಸ್ತೆಯ ಜೆಸಿ ನಗರದ ಪಬ್ ಒಂದರಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಕಿರಿಕ್ ತೆಗೆದಿದ್ದಾರೆ.ಅಲ್ಲಿನ ಸಿಬ್ಬಂದಿಗಳಿಗೆ ಆವಾಜ್ ಹಾಕಿದ್ದಾರೆ.
ಬಿಲ್ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಖಾಸಗಿ ಇವೆಂಟ್ ನಲ್ಲಿ ಪಾಸ್ ಇಲ್ಲದೆ ಎಂಟ್ರಿಯಾಗಿದ್ದಾರೆಂದು ಹೇಳಲಾಗಿದೆ. ಎಂಟ್ರಿ ಆಗುವಾಗಲೇ ಫುಲ್ ಟೈಟು ಎಂದು ಕೇಳಿಬಂದಿದೆ. ನಾನು ಸಿಸಿಬಿ ಆಫೀಸರ್ ಎಂದು ಧಮ್ಕಿ ಹಾಕಿದ್ದಾರೆ.ಅಧಿಕಾರ ದುರುಪಯೋಗ ಪಡಿಸಿಕೊಂಡ ಅಧಿಕಾರಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದ್ದಾರೆ.ವಿಡಿಯೋ ಮಾಡುದ್ರೆ ಕೇಸ್ ಮಾಡ್ತಿನಿ ಎಂದು ಹೆದರಿಸಿದ್ದಾರೆ. ನನ್ನ ನೀವು ಏನೂ ಮಾಡೋಕೆ ಆಗಲ್ಲಾ ಎಂದು ಆವಾಜ್ ಹಾಕಿದ್ದಾರೆ.ಸಧ್ಯ ವಿಡಿಯೋ ವೈರಲ್ ಆಗಿದೆ.ಇಂತಹ ಅಧಿಕಾರಿ ವಿರುದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ...?

Mysore City ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Namma Karnataka - Namma Bengaluru Tv1kannada TV1kannada Siddaramaiah DK Shivakumar Namma Bengaluru ನಮ್ಮ ಬೆಂಗಳೂರು Karnataka Police Magazine

11/08/2025

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಭಕ್ತವೃಂದ ಕೃಷ್ಣರಾಜನಗರ ಇವರ ವತಿಯಿಂದ ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನ ಮಹೋತ್ಸವದ ಪ್ರಯುಕ್ತ ಪಟ್ಟಣದ ಶ್ರೀರಾಮ ಬ್ಲಾಕ್ ನಲ್ಲಿರುವ ಯೂನಿಯನ್ ಬ್ಯಾಂಕ್ ಹತ್ತಿರ ದಿನಾಂಕ 11-08-2025 ರಂದು ಸೋಮವಾರ ನಡೆದ 2ನೇ ವರ್ಷದ ಪೂಜಾ ಕಾರ್ಯಕ್ರಮ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಇದೇ ಸಂದರ್ಭದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಭಕ್ತ ಸೇವಾ ಸಮಿತಿಯ ಸದಸ್ಯರುಗಳಾದ ಗೌತಮ್ ಗೌಡಯ್ಯ, ವಿ.ಎಸ್.ಪ್ರಸನ್ನಕುಮಾರ್, ತುಳಸಿಕುಮಾರ್ ಕೆ.ಎನ್, ಸಂತೋಷ್ ಗೌಡ ಡಿ.ವಿ, ಮಹದೇವ್ ಬಿ.ಎಸ್, ಅವಿನಾಶ್ ವೈ.ಎನ್. ಸೇರಿದಂತೆ ನೂರಾರು ಭಕ್ತಾದಿಗಳು ಹಾಜರಿದ್ದರು.

I've just reached 5K followers! Thank you for continuing support. I could never have made it without each and every one ...
10/08/2025

I've just reached 5K followers! Thank you for continuing support. I could never have made it without each and every one of you. 🙏🤗🎉

09/08/2025

ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ಕಿರಿಕ್...ಗುದ್ದಲಿಯಿಂದ ಹಲ್ಲೆ...ಇಬ್ಬರ ವಿರುದ್ದ FIR...

ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕುಮಾರ್ ಹಲ್ಲೆಗೆ ಒಳಗಾದವರು.ಗುದ್ದಲಿಯಿಂದ ಹಲ್ಲೆ ನಡೆಸಿದ ಹರೀಶ್ ಹಾಗೂ ಮಹೇಶ್ ಎಂಬುವರ ವಿರುದ್ದ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಿಗ್ರಾಮ ಸರ್ವೆ ನಂ.148/1 ಹಾಗೂ 148/- ಒಂದು ಎಕ್ರೆ ಗದ್ದೆ ಕುಮಾರ್ ಗೆ ಸೇರಿದ್ದು.ಪಕ್ಕದ ಜಮೀನನ್ನ ರಾಂಪುರದ ಹರೀಶ್ ಭೋಗ್ಯಕ್ಕೆ ಪಡೆದಿದ್ರು.ದೊಡ್ಡಕಾಲುವೆಯಿಂದ ಜಮೀನಿಗೆ ನೀರು ಹಾದುಹೋಗುವ ಬದುವನ್ನ ಕುಮಾರ್ ಕೆತ್ತುತ್ತಿದ್ದಾಗ ಹರೀಶ್ ಬಂದು ಕಿರಿಕ್ ತೆಗೆದಿದ್ದಾರೆ.ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.ಕೈಯಲ್ಲಿ ಹಿಡಿದಿದ್ದ ಗುದ್ದಲಿಯಿಂದ ಕುಮಾರ್ ಮೇಲೆ ಹರೀಶ್ ಹಲ್ಲೆ ನಡೆಸಿದ್ದಾರೆ.ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.ಹರೀಶ್ ಗೆ ಮಹೇಶ್ ಸಾಥ್ ನೀಡಿದ್ದಾರೆ.ಹಲ್ಲೆಗೊಳಗಾದ ಕುಮಾರ್ ಪತ್ನಿ ಅರ್ಪಿತಾ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಹರೀಶ್ ಹಾಗೂ ಮಹೇಶ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ...
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City Tv1kannada TV1kannada D Ravishankar / ಡಿ ರವಿಶಂಕರ್ Sara Mahesh

07/08/2025

ನಾಳೆ ಬರುವ ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಕೆ ಆರ್ ನಗರದ ಬಜಾರ್ ರಸ್ತೆಯಲ್ಲಿ ಜನಜಂಗುಳಿ ಜೊತೆಗೆ ಟ್ರಾಫಿಕ್ ಜಾಮ್..,
ಹಬ್ಬದ ಹಿನ್ನಲೆ ಯಲ್ಲಿ ಗಗನಕ್ಕೇರಿದ ಹಣ್ಣು ಹೂ ಬೆಲೆ
ಬೆಲೆ ಹೇರಿಕೆ ನಡುವೆಯೂ ಪೂಜೆ ಸಾಮಗ್ರಿಯ ಖರೀದಿಗೆ ಮುಗಿಬಿದ್ದ ಜನರು...,
Namma K R Nagara / ನಮ್ಮ ಕೆ.ಆರ್.ನಗರ Hunsur updates Namma Bengaluru ನಮ್ಮ ಬೆಂಗಳೂರು Periyapatna Nagara ಪಿರಿಯಾಪಟ್ಟಣ ನಗರ Mysore City Tv1kannada TV1kannada Sara Mahesh D Ravishankar / ಡಿ ರವಿಶಂಕರ್ Sakaraj Acn KR Nagar Namma Karnataka - Namma Bengaluru

05/08/2025

ಪಿರಿಯಾಪಟ್ಟಣದ ದೇವರಾಜು ಅರಸು ಭವನದಲ್ಲಿ ಒಕ್ಕಲಿಗರ ಯುವ ಬ್ರಿಗೇಡ್ ವತಿಯಿಂದ ನಾಡಪ್ರಭು ಕೆಂಪೇಗೌಡ ಸಂಸರಣೋತ್ಸವ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಪ್ರತಿಭಾವಂತ ಮಕ್ಕಳಿಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಅದ್ದೂರಿಯಾಗಿ ನಡೆಯಿತು.
ನಮ್ಮ ಪಿರಿಯಾಪಟ್ಟಣ Namma Periyapatna Namma Bengaluru ನಮ್ಮ ಬೆಂಗಳೂರು Hunsur updates ನಮ್ಮ ಕೆ.ಆರ್ ನಗರ / Namma K.R Nagara Mysore City Tv1kannada TV1kannada KempeGowda - ನಾಡಪ್ರಭು ಕೆಂಪೇಗೌಡರು Kempegowda International Airport Bengaluru Vakkaliga gowdas

17/07/2025

ಹುಟ್ಟೂರಿನಲ್ಲಿ HN ವಿಜಯ್ ಅವರ ಅರ್ಥಪೂರ್ಣ 51ನೇ ಜನ್ಮದಿನ ಆಚರಣೆ..,
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Hunsur updates ನಮ್ಮ ಪಿರಿಯಾಪಟ್ಟಣ Namma Periyapatna Mysore City Tv1kannada Tv1kannada

16/07/2025

*ಮೈಸೂರು ಜಿಲ್ಲೆ, ಸಾಲಿಗ್ರಾಮ ತಾಲೂಕುಮಿರ್ಲೆ ಹೋಬಳಿ ಹೋಬಳಿ ಶ್ರೀ ಕ್ಷೇತ್ರ ಮೇಲೂರು ಗ್ರಾಮದಲ್ಲಿರುವ ನೆಲೆಸಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ದಿನಾಂಕ:-17-7-2025ನೇ ಗುರುವಾರದಂದು ಆಷಾಢ ಮಾಸದಲ್ಲಿ ಅಮ್ಮನವರ ವರ್ಧಂತೋತ್ಸವ ಅಂದರೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಜನ್ಮದಿನದಂದು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರಿಗೆ ಪ್ರಾತಃಕಾಲದಲ್ಲಿ ಪಂಚಾಮೃತ ಅಭಿಷೇಕ ರುದ್ರಾಭಿಷೇಕ,ಕುಂಕುಮಾರ್ಚನೆ,ಪುಷ್ಪಾರ್ಚನೆ, ಮತ್ತು ವಿಶೇಷ ಪೂಜಾಕಾರ್ಯಕ್ರಮ 11- 30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಇರುವುದರಿಂದ ಸದ್ಭಕ್ತಾದಿಗಳು ಬಂದು ತಾಯಿಯ ಕೃಪೆಗೆ ಪಾಲ್ಗೊಳ್ಳಿ* ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪ್ರಕಾಶ್ ಪುರೋಹಿತರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸಂಸ್ಥಾಪಕರು ಮತ್ತು ಆರಾಧಕರು ಶ್ರೀ ಕ್ಷೇತ್ರ ಮೇಲೂರು 8105359186
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Namma Hunsuru Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City Namma Bengaluru ನಮ್ಮ ಬೆಂಗಳೂರು TV1kannada Tv1kannada D Ravishankar / ಡಿ ರವಿಶಂಕರ್ Sara Mahesh

06/07/2025

ಇನ್ಫೋಟೆಕ್ ಕಂಪನಿ ಮ್ಯಾನೇಜರ್ ಸತೀಶ್ ಅಗಲಿಕೆ...ಕೆ ಆರ್ ನಗರ ಅರ್ಕೆಶ್ವರ ಕೇಬಲ್ ಆಪರೇಟರ್ ಗಳಿಂದ ಭಾವಪೂರ್ಣ ಶ್ರದ್ಧಾಂಜಲಿ...
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Namma Bengaluru ನಮ್ಮ ಬೆಂಗಳೂರು Periyapatna Nagara ಪಿರಿಯಾಪಟ್ಟಣ ನಗರ Mysore City Namma Karnataka - Namma Bengaluru TV1kannada Tv1kannada Sakaraj Acn KR Nagar Malanadu Tv Live

24/06/2025

ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಪ್ರಸ್ತುತ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ದೊಡ್ಡಸ್ವಾಮೇಗೌಡ ಅವರಿಗೆ ಬೆಂಬಲ ಸೂಚಿಸಿದ ದೆಗ್ಗನಹಳ್ಳಿ ಎಸ್ ಸಿದ್ದೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಕೆ.ಆರ್ ನಗರ / Namma K.R Nagara Namma Bengaluru ನಮ್ಮ ಬೆಂಗಳೂರು Namma Karnataka - Namma Bengaluru Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City TV1kannada Tv1kannada D Ravishankar / ಡಿ ರವಿಶಂಕರ್ Siddaramaiah

20/06/2025

ಕೆ.ಆರ್.ನಗರ ಪಟ್ಟಣದ ಪತಂಜಲಿ ಯೋಗಾಶ್ರಮ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಪಟ್ಟಣದ ಬಯಲು ರಂಗಮಂದಿರ ಡಾ.ರಾಜ್‌ಕುಮಾರ್ ಬಾನಂಗಳದಲ್ಲಿ
ಆಯೋಜಿಸಲಾಗಿದೆ. ಜೂನ್ 21ರಂದು ಬೆಳಿಗ್ಗೆರಿಂದ8 ಗಂಟೆಯವರೆಗೆ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗಾಶ್ರಮದ ಸದಸ್ಯರು ಹಾಗೂ ಎಲ್ಲಾ ಯೋಗ ಬಂಧುಗಳು ಸೇರಿ ಯೋಗಾಸನ, ಪ್ರಾಣಾಯಾಮ ನಡೆಸಿಕೊಡಲಿದ್ದಾರೆ ಎಂದು
ಟ್ರಸ್ಟ್‌ನ ಅಧ್ಯಕ್ಷ ಪಿ.ಆರ್‌.ವಿಶ್ವನಾಥಶೆಟ್ಟಿ TV1 ಕನ್ನಡ ವಾಹಿನಿಯೊಂದಿಗೆ ತಿಳಿಸಿದ್ದಾರೆ.
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City D Ravishankar / ಡಿ ರವಿಶಂಕರ್ Sara Mahesh TV1kannada Tv1kannada International Yoga Festival

Address

#03 1st Floor 7th Road Near More Super Market Krishnarajanagara. Mysuru
Mysore
571602

Alerts

Be the first to know and let us send you an email when TV1kannada posts news and promotions. Your email address will not be used for any other purpose, and you can unsubscribe at any time.

Share