TV1kannada

TV1kannada ಇದು ಕನ್ನಡಿಗರ ಧ್ವನಿ

03/01/2026

ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂತನ ಎಂ.ಸಿ.ಡಿ.ಸಿ.ಸಿ ಅಧ್ಯಕ್ಷರಾದ ದೊಡ್ಡಸ್ವಾಮೇಗೌಡರು ಮಾತನಾಡಿ ನನ್ನನ್ನು ಅಧ್ಯಕ್ಷರಾಗಲು ಕಾರಣಿಕೃತರಾದ ಎಲ್ಲಾ ನಾಯಕರಿಗೂ ಧನ್ಯವಾದಗಳನ್ನು ತಿಳಿಸಿದ್ದರು.
ನಮ್ಮ ಕೆ.ಆರ್ ನಗರ / Namma K.R Nagara Namma K R Nagara / ನಮ್ಮ ಕೆ.ಆರ್.ನಗರ Hunsur updates Periyapatna Nagara ಪಿರಿಯಾಪಟ್ಟಣ ನಗರ Mysore City D Ravishankar / ಡಿ ರವಿಶಂಕರ್ D Ravishankar Doddaswame Gowda Siddaramaiah DK Shivakumar Indian National Congress - Karnataka TV1kannada

03/01/2026

ಧರ್ಮಸ್ಥಳದ ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್ ಇದರ ರಾಷ್ಟ್ರಮಟ್ಟದ ಟ್ರಸ್ಟಿನ ನೂತನ ಟ್ರಸ್ಟಿ ಎಸ್.ಕೆ.ಚಂದ್ರು ಅವರಿಗೆ ಜ.೧೧ ರಂದು ಅಭಿನಂದನಾ ಸಮಾರಂಭ
ಸಾಗರ(ಶಿವಮೊಗ್ಗ),ಜ,೦೩: ಶ್ರೀ ಕ್ಷೇತ್ರ ಧರ್ಮಸ್ಥಳದ ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಮ್ ಇದರ ರಾಷ್ಟ್ರಮಟ್ಟದ ಟ್ರಸ್ಟಿನ ಟ್ರಸ್ಟಿಯನ್ನಾಗಿ ಎಸ್.ಕೆ.ಚಂದ್ರು ಅವರನ್ನು ಪರಮಪೂಜ್ಯ ಮಹಾಮಂಡಲೇಶ್ವರ ಶ್ರಿ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳು ನೇಮಿಸಿರುವುದರಿಂದ ನೂತನ ಟ್ರಸ್ಟಿ ಎಸ್.ಕೆ.ಚಂದ್ರು ಅವರಿಗೆ ವಿಶೇಷ ಅಭಿನಂದನೆ ಹಮ್ಮಿಕೊಂಡಿರುವುದಾಗಿ ಸಾಗರ ಬಿಲ್ಲವ ಸಂಘದ ಉಪಾಧ್ಯಕ್ಷ ನಾಗರಾಜ ಗೀಜಗಾರು ಹೇಳಿದರು.
ಅವರು ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಗರದ ಸರಳ ಸಜ್ಜಿನಿಕೆಯ ಉದ್ಯಮಿ ಸಾಗರ ತಾಲ್ಲೂಕು ಬಿಲ್ಲವ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರು ಅವರು ಬಡತನದಿಂದ ಸ್ವತಃ ಪರಿಶ್ರಮ ದುಡಿಮೆಯ ಮೂಲಕವೇ ಉದ್ಯಮಿಯಾಗಿ ಹೊರಹೊಮ್ಮಿರುವ ಇವರನ್ನು ದೇಶದಾದ್ಯಂತ ತನ್ನ ಧಾರ್ಮಿಕ ಸಾಮಾಜಿಕ ಜಾಲವನ್ನು ಹೊಂದಿರುವ ಟ್ರಸ್ಟಿಗೆ ನೇಮಕಮಾಡಿರುವುದು ಬಿಲ್ಲವ ಸಮಾಜಕ್ಕೆ ಹಮ್ಮೆಯ ಸಂಗತಿಯಾಗಿದೆ ಎಂದರು.
ಜ.೧೧-೨೦೨೬ ರಂದು ಭಾನುವಾರ ಸಾಗರದ ಆದಿಶಕ್ತಿ ನಗರದಲ್ಲಿರುವ ಬಿಲ್ಲವ ಸಮುದಾಯಭವನದಲ್ಲಿ ಬೆಳಿಗ್ಗೆ ೧೧-೦೦ ಗಂಟೆಗೆ ನೂತನ ಟ್ರಸ್ಟಿ ಎಸ್.ಕೆ.ಚಂದ್ರು ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮದ ಜೊತೆಗೆ ಬಿಲ್ಲವ ಸಮಾಜದ ಮಹಿಳಾ ಘಟಕದ ಉದ್ಘಾಟನೆ ಕಾರ್ಯಕ್ರಮ ಹಾಗೂ ಬಿಲ್ಲವ ಸೇವಾದಳ ತಂಡದ ಚಾಲನೆಯನ್ನು ನೀಡಲಾಗುವುದು ಎಂದರು.
ಸಾಗರ ಬಿಲ್ಲವ ಸಂಘದ ಉಪಾಧ್ಯಕ್ಷ ಬಿ.ಎಸ್.ಸುಂದರ್ ಹೆಗ್ಗೋಡು ಮಾತನಾಡಿ ಕಳೆದ ೪೦ ವರ್ಷಗಳಿಂದ ಬಿಲ್ಲವ ಸಂಘ ಸಾಗರ ತಾಲ್ಲೂಕಿನಲ್ಲಿ ಕಾರ್ಯರ್ವಹಿಸುತ್ತಾ ಸಮುದಾಯದ ಸಂಘಟನೆಯಲ್ಲಿ ತೊಡಗಿದ್ದು,ಎಸ್.ಕೆ.ಚಂದ್ರು ಅವರ ಅದ್ಯಕ್ಷತೆಯಲ್ಲಿ ಸಾಗರದ ಆದಿಶಕ್ತಿ ನಗರದಲ್ಲಿ ೨ ಕೋಟಿ ಮೊತ್ತದ ಬಿಲ್ಲವ ಸಮುದಾಯಭವನ ನಿರ್ಮಿಸಿ ಲೋಕಾರ್ಪಣೆಗೊಂಡು ಸಮಾಜಕ್ಕೆ ಆಸ್ತಿಯಾಗಿದೆ ಎಂದರು.

03/01/2026

ಹುಬ್ಬಳ್ಳಿ

ಹುಬ್ಬಳ್ಳಿಯ ಇನಾಂ ವೀರಾಪುರಮಾರ್ಯದೆ ಕೊಲೆ ಪ್ರಕರಣದ ಹಿನ್ನೆಲೆ

ಡಿಸಿಆರ್‌ಇ ಡಿಜಿ ರಾಮಚಂದ್ರ ರಾವ್ ಅವರು ಶನಿವಾರ ಮರ್ಯಾದಾ ಹತ್ಯೆ ನಡೆದ ತಾಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದರು.

ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು

ಘಟನೆಯ ಬಗ್ಗೆ ಸಚಿವರು ಮಾಹಿತಿ ಸಂಗ್ರಹಿಸಿದರು

ಡಿಸೆಂಬರ್ 21 ರಂದು ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದೆ

ಇನಾಂ ವೀರಾಪುರ ಗ್ರಾಮದಲ್ಲಿ ಮಗಳು ಜಾತಿಯ ಹುಡುಗನನ್ನು ಮದುವೆಯಾದ ಕಾರಣ ತಂದೆ ಮಗಳನ್ನು ಕೊಲೆ ಮಾಡಿದ್ದಾರೆ ಮಾನ್ಯ ಪಾಟೀಲ್ ಅವರ ತಂದೆ ಪ್ರಕಾಶ್ ಗೌಡ ಪಾಟೀಲ್ ಕೊಲೆ ಮಾಡಿದ್ದಾರೆ.

03/01/2026

ಶಿವಮೊಗ್ಗ ಮಹಾನಗರ ಪಾಲಿಕೆ ವಿರುದ್ಧ ರಾಷ್ಟ್ರಭಕ್ತ ಬಳಗದಿಂದ ಪ್ರತಿಭಟನೆ.

ಮಾಜಿ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರಭಕ್ತ ಬಳಗದ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪ್ರತಿಭಟನೆ:

- ವಾಣಿಜ್ಯ ಸಂಕೀರ್ಣಗಳನ್ನು ನಿಗಮಕ್ಕೆ ಹಸ್ತಾಂತರಿಸದಿರುವುದು
- ಶಿವಪ್ಪ ನಾಯಕ್ ಹೂವಿನ ಮಾರುಕಟ್ಟೆಯಲ್ಲಿ 117 ವಾಣಿಜ್ಯ ಮಳಿಗೆಗಳನ್ನು ಹಂಚಿಕೆ ಮಾಡದಿರುವುದು
- ಗಾರ್ಡನ್ ಏರಿಯಾ, ಗಾಂಧಿ ನಗರ ಮತ್ತು ಖಾಸಾ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣಗಳೊಂದಿಗೆ ಕಾನೂನು ಸಮಸ್ಯೆಗಳು
- ಎಲ್ಲಾ ವಾಣಿಜ್ಯ ಕಟ್ಟಡ ಮಳಿಗೆಗಳನ್ನು ಹಂಚಿಕೆ ಮಾಡಲು ಆಗ್ರಹ
- ಇ-ಆಸ್ತಿ ನೋಂದಣಿಯಲ್ಲಿ ಭ್ರಷ್ಟಾಚಾರದ ಆರೋಪ
- ಇ-ಆಸ್ತಿ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
- ಆಶ್ರಯ ಯೋಜನೆಯಡಿ ಮನೆಗಳನ್ನು ವಿತರಿಸಲು ಆಗ್ರಹ
- ರೋಟರಿ ಅನಿಲ್ ಚಿಟಗಾರ ದುರಸ್ತಿಗೆ ಆಗ್ರಹ
- ಕೊಳೆಗೇರಿ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹ
- ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಕ್ರೀಡಾ ಮೈದಾನದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಆಗ್ರಹ

ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

03/01/2026

ಬಳ್ಳಾರಿ ಶೂಟೌಟ್ ಪ್ರಕರಣದಲ್ಲಿ ಬಳ್ಳಾರಿ ಎಸ್ಪಿ ಸಸ್ಪೆನ್ಷನ್ ವಿಚಾರ ನೋಡಿ ಡಿಸೆಂಬರ್ 31 ರಂದು ಎಸ್ಪಿ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಎಸ್ಪಿ ಸ್ವತಃ ಹೋಗಿ ನಿಂತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಎಸ್ಪಿ ಏನೇ ತಪ್ಪು ಮಾಡಿದ್ದರೂ ಅದು ತಪ್ಪೇ. ಪ್ರಕರಣದ ಬಗ್ಗೆ ನನಗೆ ಸರಿಯಾಗಿ ತಿಳಿದಿಲ್ಲ. ಸಿಎಂ ಅದಕ್ಕೆ ಉತ್ತರಿಸಬೇಕು.

03/01/2026

ಅಂಧಕಾಸುರ ವಧೆ ವೇಳೆ ಅರ್ಚಕ ಕುಸಿದುಬಿದ್ದು ಸಾವು...ಹೃದಯಾಘಾತ ಶಂಕೆ...ನಂಜನಗೂಡು ದೇವಾಲಯದಲ್ಲಿ ಸೂತಕದ ಛಾಯೆ...

ನಂಜನಗೂಡು,ಜ3,Tv1kannada

ನಂಜನಗೂಡಿನಲ್ಲಿ ನಿನ್ನೆ ರಾತ್ರಿ ನಡೆದ ಅಂಧಕಾಸುರ ವಧೆ ಕಾರ್ಯಕ್ರಮದಲ್ಲಿ ಅರ್ಚಕರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿದೆ.ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಅರ್ಚಕ ಉಪಾಧ್ಯಾಯ(55)ಮೃತರು.ನಿನ್ನೆ ರಾತ್ರಿ ದೇವಾಲಯದ ಮುಂದೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು.ನೆಲದ ಮೇಲೆ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಅಂಧಕಾಸುರನ ಭಾವಚಿತ್ರದ ಮೇಲೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನ ಹೊತ್ತ ಅರ್ಚಕರ ತಂಡ ಎಂದಿನ ಆಚರಣೆಯಂತೆ ಹೊತ್ತುತಂದರು.ಮಂತ್ರಘೋಷಗಳು ಮುಗಿಲು ಮುಟ್ಟಿತ್ತು.ಭಾವಚಿತ್ರದ ಮೇಲೆ ಪಲ್ಲಕ್ಕಿ ಬರುತ್ತಿದ್ದಂತೆ ಸ್ವಲ್ಪ ದೂರದಲ್ಲಿ ನಿಂತಿದ್ದ ಅರ್ಚಕ ಉಪಾಧ್ಯಾಯ ರವರು ಪಲ್ಲಕ್ಕಿಯನ್ನ ತಮ್ಮ ಭುಜದ ಮೇಲೆ ಹೊರಲು ಮುಂದೆ ಬಂದು ಭುಜ ಕೊಟ್ಟ ಕೆಲವೇ ಸೆಕೆಂಡ್ ಗಳಲ್ಲಿ ಕುಸಿದು ಬಿದ್ದರು.ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ರವರ ನೆರವಿಗೆ ಧಾವಿಸಿದರು.ಕೂಡಲೇ ಶುಶ್ರೂಷೆ ನೀಡಿ ಆಸ್ಪತ್ರೆಗೆ ಸಾಗಿಸಿದರಾದರೂ ಮೃತಪಟ್ಟಿದ್ದರು.ಸಧ್ಯ ಇದೀಗ ಶ್ರೀಕಂಠೇಶ್ವರನ ದೇವಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ

03/01/2026

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ಧತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಿಕಾಗೋಷ್ಠಿ...

ಜಿ ರಾಮ್‌ ಜಿ ಹಿಂಪಡೆದು ಮನರೇಗಾ ಕಾಯ್ದೆ ಮರುಸ್ಥಾಪಿಸುವವರೆಗೆ ಹೋರಾಟ: ಸಿಎಂ

03/01/2026

ಮೈಸೂರು

ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ಅದ್ಯಕ್ಷರಾದ ಶ್ರೀ ಬಂಗಾರು ಹನುಮಂತು ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಸರಸ್ವತಿಪುರಂನ ಟಿ ಟಿ ಎಲ್ ಕಾಲೇಜು ಪಕ್ಕದ ಸಾನಿಧ್ಯ ಆಶ್ರಯದಲ್ಲಿ ಮೈಸೂರು ನಗರ ಎಸ್ ಟಿ ಮೋರ್ಚಾ ವತಿಯಿಂದ ಹಣ್ಣು ವಿತರಣೆ ಮಾಡಿದರು ಈ ಸಂಧರ್ಭದಲ್ಲಿ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ, ಉಪಾಧ್ಯಕ್ಷ ಎಸ್ ತ್ಯಾಗರಾಜು,ನಗರ ಕಾರ್ಯದರ್ಶಿ ಮರಿಸ್ವಾಮಿನಾಯಕ, ಕೆ ಆರ್ ಕ್ಷೇತ್ರದ ಅದ್ಯಕ್ಷ ನಂದೀಶ್ ನಾಯಕ ಪ್ರದಾನ ಕಾರ್ಯದರ್ಶಿ ಜಯನಗರ ಕೃಷ್ಣ,ರಾಜನಾಯಕ, ನಾಗೇಶ್,ಮದಕರಿ ಮಹದೇವ, ಪೈಲ್ವಾನ್ ಗಂಗಣ್ಣ ಉಪಸ್ಥಿತರಿದ್ದರು

03/01/2026

ತ್ಯಾಜ್ಯದ ಬೀಡಾದ ಹುಲ್ಲಹಳ್ಳಿ ನಾಲೆ...ನಂಜನಗೂಡಿಗೆ ಭಕ್ತರನ್ನ ಸ್ವಾಗತಿಸುವ ಗೊಬ್ಬು ವಾಸನೆ...ತುಕ್ಕು ಹಿಡಿದ ದಕ್ಷಿಣಕಾಶಿ ತಾಲೂಕು ಆಡಳಿತ...ಮೇಜರ್ ಸರ್ಜರಿ ಯಾವಾಗ...?

ನಂಜನಗೂಡು,ಜ3,Tv1kannada

ನಂಜನಗೂಡು ತಾಲೂಕು ಆಡಳಿತ ವೈಖರಿ ತುಕ್ಕು ಹಿಡಿದಂತಾಗಿದೆ.ಒಂದೆಡೆ ಕ್ರೈಂ ರೇಟ್ ಜನರನ್ನ ಬೆಚ್ಚಿಬೀಳಿಸುತ್ತಿದ್ದರೆ ಮತ್ತೊಂದೆಡೆ ಸ್ವಚ್ಛತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಕೊಲೆ,ಸುಲಿಗೆ,ಕಳ್ಳತನಗಳ ಪ್ರಕರಣಗಳಿಂದ ಬೇಸತ್ತ ಜನಕ್ಕೆ ಸ್ವಚ್ಛತೆಯೂ ಸಹ ಆಕ್ರೋಷ ವ್ಯಕ್ತಪಡಿಸುವಂತಾಗಿದೆ.ನಂಜನಗೂಡಿಗೆ ಬರುವ ಭಕ್ತರನ್ನ ಮೊದಲು ಸ್ವಾಗತಿಸುವುದೇ ಗೊಬ್ಬುವಾಸನೆ.ರಾಷ್ಟ್ರಪತಿ ರಸ್ತೆಯ ರೈಲ್ವೆ ಗೇಟ್ ಬಳಿ ನೀವು ಸಾಗಬೇಕೆಂದ್ರೆ ಮೂಗುಮುಚ್ಚಿ ನಡೆಯಲೇ ಬೇಕು..ಇಲ್ಲದಿದ್ದಲ್ಲಿ ವಾಕರಿಕೆ ಬರುವಂತ ಸಂಕಟ,ಅನುಭವ ನಿಮಗಾಗೋದು ಗ್ಯಾರೆಂಟಿ.ಸುಭಾಷ್ ಪಾರ್ಕಿನ ಮಟನ್ ತ್ಯಾಜ್ಯ ಈ ಜಾಗಕ್ಕೆ ಬಂದು ಸೇರುತ್ತದೆ.ಇನ್ನು ಪಟ್ಟಣದ ಹೊರಭಾಗದ ಹುಲ್ಲಹಳ್ಳಿ ನಾಲೆ ಪರಿಸ್ಥಿತಿ ಆ ನಂಜುಂಡೇಶ್ವರನಿಗೇ ಪ್ರೀತಿ..ಮಟನ್ ಮಾರ್ಕೆಟ್ ನ ತ್ಯಾಜ್ಯ ಇಲ್ಲಿ ಸಂಗ್ರಹವಾಗುತ್ತಿದೆ.ರೈಲ್ವೆ ಗೇಟ್ ಹಾಕಿದ್ರಂತೂ ವಾಹನ ಸವಾರರು ಗೊಬ್ಬುವಾಸನೆಯಿಂದ ಹೈರಾಣರಾಗಿದ್ದಾರೆ.ಸಮೀಪದಲ್ಲೇ ಕಾಲೇಜು ಇದೆ.ಶಿಕ್ಷಕರ ಭವನವಿದೆ,ಶನಿದೇವರ ದೇವಾಲಯವಿದೆ.ಜನನಿಬಿಡ ಪ್ರದೇಶವೂ ಇದಾಗಿದೆ.ಅಶುಚಿತ್ವ ತಾಂಡವವಾಡುತ್ತಿದೆ.ನಂಜನಗೂಡಿನ ಅಭಿವೃದ್ದಿಯ ಕನಸು ಕಾಣುತ್ತಿರುವ ಶಾಸಕ ದರ್ಶನ್ ಧೃವನಾರಾಯಣ್ ಕಣ್ಣಿಗೆ ಇದು ಕಾಣಿಸದಿರುವುದು ದುರಂತ.ಈಗಾಗಲೇ ಸ್ಥಳೀಯರು ತಾಲೂಕು ಆಡಳಿತದ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ.ಗೊಬ್ಬೆದ್ದು ನಾರುತ್ತಿರುವ ನಂಜನಗೂಡಿನಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡದಿದ್ದಲ್ಲಿ ರೋಗರುಜಿನಗಳ ಗೂಡಾಗುವುದರಲ್ಲಿ ಸಂಶಯವಿಲ್ಲ.ಇನ್ನಾದ್ರೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.ಇಲ್ಲದಿದ್ದಲ್ಲಿ ಭಾರಿ ದಂಡ ತೆರಬೇಕಾಗುತ್ತದೆ...

03/01/2026

ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ಗುಂಡಾ ಗರ್ದಿ ನಡೆದಿದೆ..

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ...

ಬಳ್ಳಾರಿಯ ಜನಾರ್ದನರೆಡ್ಡಿ ನಿವಾಸದ ಬಳಿ ಹೇಳಿಕೆ

ಸಾವಿರಾರು ಗುಂಡಾಗಳನ್ನ ಕರೆದುಕೊಂಡು ಬಂದಿದ್ರು..

ಸತೀಶ್ ರೆಡ್ಡಿ ಅನ್ನೋ ವ್ಯಕ್ತಿ ಖಾಸಗಿ ವ್ಯಕ್ತಿಗಳನ್ನು ಬಳಸಿ ಫೈರ್ ಮಾಡಿದ್ದಾನೆ.

ಇದನ್ನು ಬಿಜೆಪಿ ಖಂಡಿಸುತ್ತದೆ..

ಗುಂಡಾ ಗರ್ದಿ ಮೂಲಕ ನಮ್ಮ ನಾಯಕರನ್ನು ಹೆದರಿಸೋ ಕೆಲಸ ಆಗಿದೆ..

ಜನಾರ್ದನ ರೆಡ್ಡಿ,ರಾಮುಲು,ಆನಂದ್ ಸಿಂಗ್ ರನ್ನ ಹೆದರಿಸೋ ಕೆಲಸ ಆಗ್ತಿದೆ

ಇದರಿಂದ ಕಾರ್ಯಕರ್ತರು ಧೃತಿಗೆಡೋ ಅವಶ್ಯಕತೆ ಇಲ್ಲ..

ವಾಲ್ಮೀಕಿ ಪುತ್ಥಳಿ ವಿಚಾರ ಗಲಾಟೆಯಾಗಿದೆ...

ನಾಚಿಕೆಯಾಗಬೇಕು ಕಾಂಗ್ರೆಸ್ ಗೆ..

ಮಹರ್ಷಿ ವಾಲ್ಮೀಕಿಯನ್ನ ಪೂಜಿಸಬೇಕು ಅನ್ನೋ ಕಾರಣಕ್ಕೆ

ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ರಜಾ ದಿನ ಘೋಷಣೆ ಮಾಡಿದ್ರು..

ವಾಲ್ಮೀಕಿ ಭವನಕ್ಕೆ ಹಣ ಕೊಡಸಿದ್ದು ರಾಮುಲು ಅವರು‌..

25 ವರ್ಷದ ಹಿಂದೆ ಅಲ್ಲಿ ಪುತ್ಥಳಿ ಇತ್ತು.

ಇವತ್ತು ರಾಜಕೀಯ ತೆವಲಿಗೆ ಬ್ಯಾನರ್ ಹಾಕಿದ್ದಾರೆ..

ಜನಾರ್ದನ ರೆಡ್ಡಿ ಮನೆ ಮೇಲೆ ಖಾಸಗಿ ವ್ಯಕ್ತಿಗಳು ಗುಂಡು ಹಾರಿಸಿದ್ದು ಅಕ್ಷಮ್ಯ ಅಪರಾಧ ‌.

ಸಿಎಮ್ ಹಾಗೂ ಗೃಹ ಸಚಿವರು ದ್ವೇಷ ಭಾಷಣ ಕಾಯ್ದೆ ತರೋಕೆ ಹೊರಟಿದ್ರು....

ಮೊದಲ ಆರೋಪಿ ಭರತ್ ರೆಡ್ಡಿ‌..

ಶಾಸಕನನ್ನು ಒದ್ದು ಒಳಗೆ ಹಾಕಿ ಎಂದ ವಿಜಯೇಂದ್ರ..

ತಾಕತ್ತಿದ್ರೆ ಕಾಂಗ್ರೆಸ್ ಸರ್ಕಾರ ಶಾಸಕರನ್ನು ಒದ್ದು ಒಳಗೆ ಹಾಕಬೇಕು.

ಬಿಜೆಪಿ ಇದನ್ನು ಬಲವಾಗಿ ಖಂಡಿಸುತ್ತದೆ‌...

ನಿನ್ನೆ ಘಟನೆ ಸಮಗ್ರ ತನಿಖೆಯಾಗಬೇಕು.

ಹೈಕೋರ್ಟ್ ಜಡ್ಜರಿಂದ ಉನ್ನತ ತನಿಖೆಯಾಗಬೇಕು‌.

SIT ರಚನೆ ಮಾಡಿ ತೇಪೆ ಹಚ್ಚೋ ಕೆಲಸ ಆಗಬಾರದು...

ಹೈಕೋರ್ಟ್ ಜಡ್ಜರಿಂದ ತನಿಖೆ ಆಗಬೇಕು‌..

ರಾಜ್ಯ ಸರ್ಕಾರ ಈ ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು..

ಪೊಲೀಸ್ ಠಾಣೆಗಳು ಕಾಂಗ್ರೆಸ್ ಮ ಪಕ್ಷದ ಕಚೇರಿಗಳಾಗಿವೆ...

ಕೂಡಲೇ ಗೃಹ ಸಚಿವರು ಎಚ್ಚೆತ್ತಕೊಳ್ಳಬೇಕು‌.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಮೃತಪಟ್ಟಿರೋದು ಅವರ ಖಾಸಗಿ ಗನ್ ಮ್ಯಾನ್ ಗುಂಡಿನಿಂದ..

ಅವರ ಖಾಸಗಿ ಗನ್ ಮ್ಯಾನ್ ಗಳ ಗುಂಡಿನಿಂದ ಮೃತಪಟ್ಟಿರೋದು
ಇದಕ್ಕೆ ಶಾಸಕ ಭರತ್ ರೆಡ್ಡಿ ಉತ್ತರ ಕೊಡಬೇಕು..

ಕಾನೂನು ಸುವ್ಯವಸ್ಥೆ ಸರಿ ಇರಬೇಕು ಅಂದರೆ ಸಮಗ್ರ ತನಿಖೆಯಾಗಬೇಕು ಎಂದ ವಿಜಯೇಂದ್ರ

02/01/2026

ಇಂದು ಸಾಗರ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 5 ಮತ್ತು 6 ರಲ್ಲಿ ಕಳೆದ ಎರಡು ವರ್ಷದಿಂದ ಸ್ವಚ್ಛತಾ ಕಾರ್ಯ ನಡೆಸದ ಹಾಗೂ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಅಣಲೆಕೊಪ್ಪ ಭಾಗದ ನಿವಾಸಿಗಳು SDPI ಸಾಗರ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
SDPI ಕಾರ್ಯದರ್ಶಿ ಅಮೀರ್ ಖಾನ್, ಸಮೀವುಲ್ಲಾ, ಸಾಹಿಲ್, ಮುಬಾರಕ್, ಸವೂದ್, ಸುಭಾನ್, ಮಾಲತಿ, ಅಭಿದಾ, ಪರ್ವೀನ್, ಫಾಮಿದಾ, ಅಮೀನ ಹಾಗೂ ಅಣಲೆಕೊಪ್ಪ ಭಾಗದ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

02/01/2026

ಹರಿಶ್ಚಂದ್ರ ಘಾಟ್ ತಲುಪಿದ ರಾಜಶೇಖರ ಶವ ಯಾತ್ರೆ
ಕೊನೆಯ ಬಾರಿಗೆ ಎದ್ದೇಳು ರಾಜಶೇಖರ ಎಂದು ಕಣ್ಣೀರು ಹಾಕಿದ ಕುಟುಂಬಸ್ಥರು
ಮಗನನ್ನು ಕೆನ್ನೆ ಮುಟ್ಟಿ ಎದ್ದೇಳು ರಾಜಶೇಖರ ಎಂದು ಕಣ್ಣೀರು ಹಾಕಿದ ತಾಯಿ
ಐದು ಕಿಲೋಮೀಟರ್ ನಷ್ಟು ನಡೆದ ಶವಯಾತ್ರೆ
ಹರಿಶ್ಚಂದ್ರ ಘಾಟ್ ನಲ್ಲಿ ಜರುಗಲಿರುವ ಅಂತ್ಯಕ್ರಿಯೆ
ವಿದ್ಯುತ್ ಚಿತಾಗಾರ್ ದಲ್ಲಿ ಜರುಗುತ್ತಿರುವ ಅಂತ್ಯಕ್ರಿಯೆ
ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಶಾಸಕ ಭರತ್ ರೆಡ್ಡಿ, ಜೆ ಎನ್ ಗಣೇಶ
ಅಂತ್ಯಕ್ರಿಯೆಯಲ್ಲಿ ಕಾಂಗ್ರೆಸ್ ಮುಂಖಡರು,ರಾಜಶೇಖರ ಸಂಬಂಧಿಗಳು,ಸ್ನೇಹಿತರು ಭಾಗಿ

Address

#03 1st Floor 7th Road Near More Super Market Krishnarajanagara. Mysuru
Mysore
571602

Alerts

Be the first to know and let us send you an email when TV1kannada posts news and promotions. Your email address will not be used for any other purpose, and you can unsubscribe at any time.

Share