TV1kannada

TV1kannada ಇದು ಕನ್ನಡಿಗರ ಧ್ವನಿ
(1)

13/08/2026

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ನ ನಿಲ್ಲದ ಕಾಮಕಂಡ ಪರಪ್ಪನ
ಅಗ್ರಹಾರ ಜೈಲಿನಲ್ಲಿ ಸಿಕ್ಕ ಮೊಬೈಲ್ ನಲ್ಲಿ 90 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು..!

13/08/2026

ಸೋಮವಾರಪೇಟೆ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಆದೇಶ ಪತ್ರ ವಿತರಣೆ ನೀಡಿದ ಶಾಸಕ ಮಂತರ್ ಗೌಡ...

ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸೋಮವಾರಪೇಟೆಯ ಶಾಸಕರ ಕಚೇರಿ ಆವರಣದಲ್ಲಿ ಆದೇಶ ಪತ್ರಗಳನ್ನು ವಿತರಿಸಲಾಯಿತು.

12/08/2026

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಹೆಮ್ಮೆ ಶಿಲ್ಪಾ ಕೆ. ಶೈಲಾ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಗೌರವ!

ಶಿಲ್ಪಾ ಸಾಧನೆಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ..

11/08/2026

ಸಾ.ರಾ. ಮಹೇಶ್ ಹುಟ್ಟುಹಬ್ಬಕ್ಕೆ ಎಚ್.ಡಿ. ಕುಮಾರಸ್ವಾಮಿ ಶುಭಾಶಯ..

ಮೈಸೂರು: ಮಾಜಿ ಶಾಸಕ ಸಾ.ರಾ. ಮಹೇಶ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಕರೆ ಮಾಡಿ ಶುಭಾಶಯ ಕೋರಿದರು.

ಈ ವೇಳೆ ಸಾ.ರಾ. ಮಹೇಶ್ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದ ಕುಮಾರಸ್ವಾಮಿ, ಅವರ ರಾಜಕೀಯ ಸೇವೆ ಹಾಗೂ ಕಾರ್ಯವೈಖರಿಯನ್ನು ಸ್ಮರಿಸಿ ಗುಣಗಾನ ಮಾಡಿದರು.

ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಸಾ.ರಾ. ಮಹೇಶ್ ಅವರಿಗೆ ಉತ್ತಮ ಆರೋಗ್ಯ, ಸುಖ-ಸಮೃದ್ಧಿ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.

11/08/2026

ಪರಿಹಾರ ನೀಡದ ಪುರಸಭೆ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ: ಕೊನೆ ಕ್ಷಣದಲ್ಲಿ ಮುಂದೂಡಿಕೆ.

ಕೆ.ಆರ್.ನಗರ: ಒಳಚರಂಡಿ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣಕ್ಕಾಗಿ ಜಮೀನು ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೆ.ಆರ್.ನಗರ ಪುರಸಭೆ ಆಸ್ತಿ ಜಪ್ತಿಗೆ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.

2009ರಲ್ಲಿ ಮಧುವನಹಳ್ಳಿ ಹಾಗೂ ಕಾಳೇನಹಳ್ಳಿ ವ್ಯಾಪ್ತಿಯಲ್ಲಿ ಒಳಚರಂಡಿ ಟ್ರೀಟ್‌ಮೆಂಟ್ ಪ್ಲಾಂಟ್ ನಿರ್ಮಾಣಕ್ಕಾಗಿ 30ಕ್ಕೂ ಹೆಚ್ಚು ರೈತರಿಂದ ಸುಮಾರು 7 ಎಕರೆ 14 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಅಂದು ಗುಂಟೆಗೆ ₹13 ಸಾವಿರದಂತೆ ಸುಮಾರು ₹80 ಲಕ್ಷ ಪರಿಹಾರ ನೀಡಲಾಗಿತ್ತು.

ಪರಿಹಾರ ಮೊತ್ತ ಸಾಲದೆಂದು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಹೆಚ್ಚುವರಿ ಹಾಗೂ ಸೂಕ್ತ ಪರಿಹಾರ ನೀಡುವಂತೆ ಎರಡು ವರ್ಷಗಳ ಹಿಂದೆಯೇ ಆದೇಶಿಸಿತ್ತು. ಆದರೆ ಪರಿಹಾರ ಪಾವತಿ ವಿಳಂಬವಾದ ಹಿನ್ನೆಲೆಯಲ್ಲಿ ರೈತರ ಪರ ವಕೀಲ ವಿ.ಎಸ್. ಧನಂಜಯ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಇದರಿಂದಾಗಿ ಜಿಲ್ಲಾ ನ್ಯಾಯಾಲಯ ಪುರಸಭೆಯ ಆಸ್ತಿ ಜಪ್ತಿಗೆ ಆದೇಶ ನೀಡಿತ್ತು. ಅದರಂತೆ ಸೋಮವಾರ ವಕೀಲರು ಹಾಗೂ ಕೋರ್ಟ್ ಅಮೀನ್ದಾರರು ರೈತರೊಂದಿಗೆ ಪುರಸಭೆ ಕಚೇರಿಗೆ ಆಗಮಿಸಿ ಜಪ್ತಿ ಕಾರ್ಯಕ್ಕೆ ಮುಂದಾದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಜಿ.ಎಸ್. ರಮೇಶ್ ಮಧ್ಯಪ್ರವೇಶಿಸಿ, ಜಪ್ತಿ ಮಾಡದಂತೆ ಮನವಿ ಮಾಡಿದರು. ರೈತರಿಗೆ ₹10 ಕೋಟಿಗೂ ಅಧಿಕ ಪರಿಹಾರ ನೀಡಬೇಕಿದ್ದು, ಈ ಮೊತ್ತವನ್ನು ಪುರಸಭೆಯಿಂದ ಭರಿಸುವುದು ಕಷ್ಟವಾಗಿದೆ. ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಆದರೆ ರೈತರು ಹಾಗೂ ವಕೀಲರು ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿ, ನಿಗದಿತ ಅವಧಿಯೊಳಗೆ ನ್ಯಾಯಾಲಯದ ಮೂಲಕ ಪರಿಹಾರದ ಹಣ ರೈತರಿಗೆ ತಲುಪಬೇಕು. ಇಲ್ಲವಾದಲ್ಲಿ ಕೋರ್ಟ್ ಆದೇಶದಂತೆ ಪುರಸಭೆ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಹಿನ್ನೆಲೆಯಲ್ಲಿ ಸೋಮವಾರದ ಜಪ್ತಿ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಪರಿಹಾರ ಪಾವತಿಗೆ ಗಡುವು ನೀಡಲಾಗಿದೆ.
#ಕೆಆರ್‌ನಗರ #ರೈತರು #ರೈತರಪರಿಹಾರ #ಪುರಸಭೆ #ಪುರಸಭೆಜಪ್ತಿ #ಕೋರ್ಟ್‌ಆದೇಶ #ಜಿಲ್ಲಾನ್ಯಾಯಾಲಯ #ಭೂಸ್ವಾಧೀನ #ಪರಿಹಾರ #ರೈತರಹೋರಾಟ #ಕೃಷಿಕರು #ನ್ಯಾಯಕ್ಕಾಗಿ_ಹೋರಾಟ #ಮೈಸೂರು #ಮೈಸೂರುಜಿಲ್ಲೆ ್ನಡ

11/08/2026

ಹುಲಿಯನ್ನೇ ಅಟ್ಟಾಡಿಸಿದ ಆನೆ! ಕಾಡಿನಲ್ಲಿ ರೋಚಕ ಮುಖಾಮುಖಿ..
KR NAGARA OFFICIAL.💝🌎🌾

09/08/2026

₹5 ಲಕ್ಷ ಪರಿಹಾರ ವಿತರಣೆ… ಕುಟುಂಬದ ಜೊತೆ ನಿಂತ ಶಾಸಕ ರವಿಶಂಕರ್ ಡಿ..

ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಲವಕುಮಾರ್ ಅವರು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆ, ಅವರ ಪತ್ನಿ ರಂಜಿತಾ ಅವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನೀಡಲಾದ ₹5 ಲಕ್ಷ ಪರಿಹಾರದ ಚೆಕ್‌ನ್ನು ಶಾಸಕ ಡಿ.ರವಿಶಂಕರ್ ವಿತರಿಸಿದರು.
ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕರು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಅಲ್ಲದೇ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ₹50 ಸಾವಿರ ನೆರವು ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕುಟುಂಬದ ಕಷ್ಟಕ್ಕೆ ನೆರವಾದ ಶಾಸಕ ರವಿಶಂಕರ್‌ ಡಿ ಅವರ ಮಾನವೀಯ ನಡೆಗೆ ಮೆಚ್ಚುಗೆ.

09/08/2026

ದಾವಣಗೆರೆ KSRTC ಬಸ್ ನಿಲ್ದಾಣಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಭೇಟಿ ನೀಡಿ, ಬಸ್ ನಿಲ್ದಾಣದಲ್ಲಿನ ವಿವಿಧ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಈ ವೇಳೆ ಬಸ್ ನಿಲ್ದಾಣ ಸ್ವಚ್ಛತಾ ಸಿಬ್ಬಂದಿಗಳಿಂದ ವೇತನದ ಕುರಿತು ಮಾಹಿತಿ ಪಡೆದಾಗ, ಸರಿಯಾದ ರೀತಿಯಲ್ಲಿ ಸಂಬಳ ಪಾವತಿಯಾಗುತ್ತಿಲ್ಲ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡರು.

ಇದರಿಂದ ಅಸಮಾಧಾನಗೊಂಡ ಡಾ. ನಾಗಲಕ್ಷ್ಮಿ ಅವರು ಸ್ಥಳದಲ್ಲೇ ಸಂಬಂಧಪಟ್ಟ ಏಜೆನ್ಸಿ ಹಾಗೂ KSRTC ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು, ಸಿಬ್ಬಂದಿಗೆ ನ್ಯಾಯಯುತವಾಗಿ ವೇತನ ಪಾವತಿಸುವಂತೆ ಸೂಚಿಸಿ ಎಚ್ಚರಿಕೆ ನೀಡಿದರು.
KarnatakaMahilaAyoga DrNagalakshmi KSRTCNews BreakingNews KannadaNews KarnatakaNewsToday WomenRights EmployeeRights WorkersRights SocialJustice PublicAwareness CitizenRights Awareness TV1Kannada ViralNews TrendingNews NewsUpdate

09/08/2026

ಉಡುಪಿ ಉದ್ಯಮಿಗೆ ಶೂಟ್‌ಔಟ್! ಕಾರು ಹತ್ತುವ ವೇಳೆ ತಲೆಗೆ ಗುಂಡಿಕ್ಕಿ ಹ*ತ್ಯೆ..

ಉಡುಪಿ: ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು ಶೂಟ್‌ಔಟ್ ನಡೆಸಿ ಹ*ತ್ಯೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
#ಶೂಟ್‌ಔಟ್ #ಉದ್ಯಮಿಹತ್ಯೆ

Address

#122 Dewans Road Ramaswamy Circle Mysuru. 2nd Branch Office #03 1st Floor 7th Road Near More Super Market Krishnarajanagara. Mysuru
Mysore
571602

Alerts

Be the first to know and let us send you an email when TV1kannada posts news and promotions. Your email address will not be used for any other purpose, and you can unsubscribe at any time.

Shortcuts

Share