13/06/2026
ಸಾವಲ್ಲೂ ಸಾರ್ಥಕತೆ: ಮೂವರಿಗೆ ಅಂಗಾಂಗ ದಾನ
ಮೈಸೂರು: ಅಪಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ 32 ವರ್ಷದ ವ್ಯಕ್ತಿಯೊಬ್ಬನ ಅಂಗಾಂಗಳ ದಾನದ ಮೂಲಕ ಇತರೆ ಮೂವರು ಮಂದಿಗೆ ಜೀವದಾನ ಮಾಡಿ ಸಾರ್ಥಕತೆ ಮಾಡಿರುವ ಘಟನೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
32 ವರ್ಷ ವಯಸ್ಸಿನ ಕೆ.ಎಂ.ದೊಡ್ಡಿ ಕ್ಯಾತಘಟ್ಟ ಗ್ರಾಮದ ಗಿರೀಗೌಡ(ರಂಜಿತ್) ಎಂಬುವವರೇ ತಮ್ಮ ಸಾವಿನ ಬಳಿಕವೂ ಮೂವರಿಗೆ ಜೀವಕ್ಕೆ ನೆರವಾದವರಾಗಿದ್ದಾರೆ. ಜೂ.11ರಂದು ಭಾರತೀನಗರದ ಮದ್ದೂರು ಮಳವಳ್ಳಿ ರಸ್ತೆ ಸಮಯದಲ್ಲಿ ಆಲಭುಜನಹಳ್ಳಿ ಕಡೆ ತಿರುವಿನ ವೇಳೆ ದ್ವಿಚಕ್ರವಾಹನ ಅಪಘಾತ ಸಂಭವಿಸಿದೆ. ಬಳಿಕ ಅವರನ್ನು ಅಂದೇ ರಾತ್ರಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೆದುಳು ನಿಷ್ಕ್ರಿಯಗೊಂಡಿದೆ. ಕೊನೆಗೆ ಅಂಗಾಂಗ ದಾನದ ವಿಚಾರವನ್ನು ಪತ್ನಿಸ್ಪಂದನ ಅವರಕ್ಕೆ ವೈದ್ಯರು ತಂದಿದ್ದಾರೆ.
ಅವರ ಸ್ವಯಂ ಅನುಮತಿ ಮೇರೆಗೆ ಯಕೃತ್, ಎರಡು ಮೂತ್ರಪಿಂಡವನ್ನು ಅವಶ್ಯಕತೆ ಇರುವವರಿಗೆ ವರ್ಗಾಯಿಸುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ. ಮೃತರ ಕುಟುಂಬಸ್ಥರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೃತರು ಸಿವಿಕ್ಷ, ರಿತ್ವಿಕ್, ಗೌತಮಿ ಎಂಬ ಮೂವರು ಮಕ್ಕಳನ್ನು ಹಾಗೂ ತಾಯಿ ಚಿಕ್ಕತಾಯಮ್ಮರನ್ನು ಅಗಲಿದ್ದಾರೆ.
#ಜಯಭಾರತ