Tv1kannada

Tv1kannada ಇದು ಕನ್ನಡಿಗರ ಧ್ವನಿ

12/12/2025

ಪತ್ರ ಬರಹಗಾರರ ಪ್ರತಿಭಟನೆ
ಪ್ರತ್ಯೇಕ ಲಾಗಿನ್‌ ನೀಡಿ, ಸಮಸ್ಯೆ ಬಗೆಹರಿಸಲು ಒತ್ತಾಯ

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟ
ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ನಂತರ
ಜಿಲ್ಲಾ ಉಪನೋಂದಣಾಧಿಕಾರಿ
ಹಾಗೂ ಮೈಸೂರು ತಾಲೂಕು ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು

ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಿದ್ದಾಂಗ್ಲೆ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ತಂದಿರುವುದು ತಿಳಿದಿರುವ ಸಂಗತಿಯಾಗಿರುತ್ತದೆ. ಸುಧಾರಣೆಗಳಿಂದಾಗಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದ್ದು, ಪತ್ರಬರಹಗಾರರಾದ ನಾವುಗಳು ಸಹಾ ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡುವುದು ದುಸ್ಸಾಹಸವಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ. ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಸಹಾ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ. ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀರ್ವ ತೊಂದರೆಯನ್ನು ಅನುಭವಿಸುವಂತಾಗಿದೆ. ಆದ ಕಾರಣ ಮಾನ್ಯ ಅಧಿಕಾರಿಗಳು ಈ ಮೇಲ್ಕಂಡ ವಿಚಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರಿಗೆ ಮನದಟ್ಟು ಮಾಡುವ ಮೂಲಕ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು

ಇದೇ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ನಿಸಾರ್ ಅಹಮದ್ ಖಾನ್,
ಉಪಾಧ್ಯಕ್ಷರಾದ ಎಂ ಎಸ್ ಧನಂಜಯ್, ಕಾರ್ಯದರ್ಶಿ ಕೆ ಆರ್ ಉದಯ್ ಕುಮಾರ್, ಖಜಾಂಜಿ ಎಂ ಎಸ್ ನರಸಿಂಹಮೂರ್ತಿ, ಸಂಚಾಲಕ ಎಂ ಗಣೇಶ್, ನಿರ್ದೇಶಕರುಗಳಾದ ಕೆ ಆರ್ ಸತ್ಯನಾರಾಯಣ್, ಎಂ ಎನ್ ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಪಣಿರಾಜ್ ಎಸ್, ಚಂದ್ರಶೇಖರ್ ಎಸ್, ಎನ್ ದಿನೇಶ್ ಕುಮಾರ್, ಎಸ್ ಎಸ್ ವೇಣು, ಜಯಲಕ್ಷ್ಮ್ಹಿ
ಹಾಗೂ ಇನ್ನಿತರ ಪತ್ರ ಬರಹಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

12/12/2025

ಟಿ ನರಸೀಪುರದಲ್ಲಿ ಬೋನಿಗೆ ಬಿದ್ದ ಚಿರತೆ.
5 ವರ್ಷದ ಗಂಡು ಚಿರತೆ ಸೆರೆ.
ಟಿ ನರಸೀಪುರ ತಾಲ್ಲೂಕಿನ ಬೂದಳ್ಳಿ ಗ್ರಾಮದ ರೆಡ್ಡಿ ಎಂಬುವರ ಜಮೀನಿನಲ್ಲಿ ಸೆರೆ.
ಹಲವು ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ.
ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದ ಗ್ರಾಮಸ್ಥರು.
ಈ ಹಿನ್ನೆಲೆ ಚಿರತೆ ಚಲನವಲನ ಪತ್ತೆ ಹಚ್ಚಿ ಬೋನಿರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು.
ತಡರಾತ್ರಿ ಬೋನಿಗೆ ಬಿದ್ದಿರುವ ಚಿರತೆ.
ಚಿರತೆ ಸೆರೆ ಹಿನ್ನೆಲೆ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು.

11/12/2025

ಕೆ.ಆರ್.ನಗರದಲ್ಲಿ ನಡೆದ ಹನುಮ ಜಯಂತಿಯಲ್ಲಿ
ಜೀವಾ ಅರ್ಥೋ ಕೇರ್‌ನ
ಖ್ಯಾತ ಮೂಳೆ ತಜ್ಞ ಡಾ.ಕೆ.ಆರ್. ಗೌತಮ್ ಅವರು ಮಾತನಾಡಿದರು...
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಮೈಸೂರು ನಮ್ಮ ಹೆಮ್ಮೆ

11/12/2025

ಶ್ರೀ ಮಾರುತಿ ಯುವಕರ ಸಂಘದ ಅಧ್ಯಕ್ಷ ಗೌತಮ್ ಜಾದವ್ ಅವರು ಮಾತನಾಡಿದರು..
Namma K R Nagara / ನಮ್ಮ ಕೆ.ಆರ್.ನಗರ ನಮ್ಮ ಮೈಸೂರು ನಮ್ಮ ಹೆಮ್ಮೆ

11/12/2025

ಕೆ.ಆರ್.ನಗರದಲ್ಲಿ ನಡೆದ ಹನುಮ ಜಯಂತಿಯಲ್ಲಿ
ಶಾಸಕ ಡಿ. ರವಿಶಂಕರ್ ರವರು ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು...
Namma K R Nagara / ನಮ್ಮ ಕೆ.ಆರ್.ನಗರ Namma Hunsuru ನಮ್ಮ ಮೈಸೂರು ನಮ್ಮ ಹೆಮ್ಮೆ D Ravishankar Sunitha Ravishankar D Ravishankar / ಡಿ ರವಿಶಂಕರ್

11/12/2025

ಕೆ.ಆರ್.ನಗರದಲ್ಲಿ ನಡೆದ ಹನುಮ ಜಯಂತಿಯಲ್ಲಿ
ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು...
Namma K R Nagara / ನಮ್ಮ ಕೆ.ಆರ್.ನಗರ

11/12/2025

ಮೈಸೂರು

ಸಿಎಂ ನಿವಾಸಕ್ಕೆ ಇನ್ನೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ

ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಚೆಸ್ಕಾಂ ಅಧಿಕಾರಿಗಳು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚೆಸ್ಕಾಂ ಅಧಿಕಾರಿಗಳ ಕೈಚಳಕ

ಚೆಸ್ಕಾಂ ಅಧಿಕಾರಿಗಳ ಅಕ್ರಮದ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ವಿದ್ಯುತ್ ಗುತ್ತಿಗೆದಾರ ಶ್ರೀಪಾಲ್

ಮೈಸೂರಿನ ಎನ್.ಆರ್. ಮೊಹಲ್ಲಾದ ಗೌರ್ನಮೆಂಟ್ ಗೆಸ್ಟ್ ಹೌಸ್ ಹಿಂಭಾಗ ನಿರ್ಮಾಣವಾಗಿರುವ G+5 ಕಟ್ಟಡ

G+2ಗೆ ಅನುಮತಿ ಪಡೆದು ಹೆಚ್ಚುವರಿ ಅಂತಸ್ತು ನಿರ್ಮಾಣ

ಇಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಸುಪ್ರೀಂ ಕೋರ್ಟ್ ಆದೇಶ

2024ರ ಡಿಸೆಂಬರ್ ನಲ್ಲಿ ಕೋರ್ಟ್ ನಿಂದ ಸ್ಪಷ್ಟ ಆದೇಶ

ಈ ಆದೇಶ ಉಲ್ಲಂಘಿಸಿ ಎನ್.ಆರ್. ಸಬ್ ಡಿವಿಜನ್ ಎಕ್ಸಿಕ್ಯುಟಿವ್ ಎಂಜಿನಿಯರ್ ಅನಿತ ಎಸ್.ಬಿ. ವಿದ್ಯುತ್ ಸಂಪರ್ಕ ಕಲ್ಪಿಸಿ ಅನುಮತಿ

ಕುವೆಂಪುನಗರ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಸಿಎಂ ಸಿದ್ದ ರಾಮಯ್ಯ ನಿವಾಸ

ನಿವಾಸಕ್ಕೆ ಕಾರ್ಯಾದೇಶವಾಗಿ ಹಲವು ತಿಂಗಳು ಕಳೆದರೂ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ

ಇತ್ತ ಮಹಿಳಾ ಅಧಿಕಾರಿಯಿಂದ ಕೆ.ಇ.ಆರ್.ಸಿ ಹಳೇ ಆದೇಶ ಉಲ್ಲೇಖಿಸಿ ಆದೇಶ
...ಸುಪ್ರೀಂ ಕೋರ್ಟ್ ಆದೇಶದನ್ವಯ ಎಲ್ಲಿಯೂ ಅನಧಿಕೃತ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸದಂತೆ ಸುತ್ತೋಲೆ ಹೊರಡಿಸಿರುವ ಚೆಸ್ಕಾಂ

ಇಲಾಖೆ ಆದೇಶವನ್ನೇ ಉಲ್ಲಂಘಿಸಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಮಹಿಳಾ ಅಧಿಕಾರಿಣಿ ಅನಿತ್ ಎಸ್.ಬಿ.

ಅಧಿಕಾರಿ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ವಿದ್ಯುತ್ ಗುತ್ತಿಗೆದಾರ ಶ್ರೀಪಾಲ್

ಅನಧಿಕೃತ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ರದ್ದು ಮಾಡಿ, ಅಕ್ರಮವೆಸಗಿದ ಅಧಿಕಾರ ಸಸ್ಪಂಡ್ ಗೆ ಶ್ರೀಪಾಲ್ ಆಗ್ರಹ

ಒಂದೊಮ್ಮೆ ಚೆಸ್ಕಾಂ ಕ್ರಮ‌ ಜರುಗಿಸದಿದ್ದರೆ ನ್ಯಾಯಾಂಗ ನಿಂದನೆ ದಾಖಲಿಸುವ ಎಚ್ಚರಿಕೆ

11/12/2025

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೆವಿಲ್ ಸಿನಿಮಾ ವೀಕ್ಷಿಸಲು ಬೆಳ್ಳಂಬೆಳ್ಳಗ್ಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಅಭಿಮಾನಿಗಳು...... ಸಮಾಜ ಸೇವಕ ಡಾ. ಮಹೇಂದ್ರ ಸಿಂಗ್ ಕಾಳಪ್ಪನವರು ಮಾಧ್ಯಮಗಳ ಜೊತೆ ಮಾತನಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವುದೇ ಸಿನಿಮಾ ಬಂದರು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇವೆ ಅವರ ಪ್ರತಿಯೊಂದು ಸಾಮಾಜಿಕ ಕಳಕಳಿ ಉಳ್ಳ ಚಿತ್ರ ನೋಡಿ ಅವರ ಪಕ್ಕ ಅಭಿಮಾನಿಯಾಗಿ ಅವರಂತೆ ನಾವು ಕೂಡ ಸಮಾಜ ಸೇವೆ ಮಾಡುವುದನ್ನು ಕಲಿತಿದ್ದೇವೆ ಹಾಗಾಗಿ ಇಂದು ಅವರ ಅನುಪ ಸ್ಥಿತಿಯಲ್ಲಿ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲಲಿ ಶತದಿನೋತ್ಸವ ಆಚರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಮಾತನಾಡಿದ್ದಾರೆ.

Address

#03 1st Floor 7th Road Near More Super Market Krishnarajanagara. Mysuru
Mysore
571602

Alerts

Be the first to know and let us send you an email when Tv1kannada posts news and promotions. Your email address will not be used for any other purpose, and you can unsubscribe at any time.

Share