Indian TV

Indian TV Indian TV is a Mysore based news channel operating in Mysore, Mandya, Hasana, Kodagu, Chamarajanagara
(5)

08/06/2026

ಸರಳತೆ ಮತ್ತು ಸೇವೆಯೊಂದಿಗೆ ಹುಟ್ಟುಹಬ್ಬ ಆಚರಣೆ: ಸುರೇಶ್ ಮಾದರಿ | INDIAN TV

ಸಂಭ್ರಮಕ್ಕಿಂತ ಸಮಾಜ ಸೇವೆಗೆ ಆದ್ಯತೆ ನೀಡಿದ ಒಕ್ಕಲಿಗರ ಸಂಘ ಜನತಾ ನಗರ ಅಧ್ಯಕ್ಷ ಸುರೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

08/06/2026

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಒಕ್ಕಲಿಗರ ಸಂಘ ಜನತಾ ನಗರ ಅಧ್ಯಕ್ಷ ಸುರೇಶ್ | INDIAN TV

ಸಂಭ್ರಮಕ್ಕಿಂತ ಸಮಾಜ ಸೇವೆಗೆ ಆದ್ಯತೆ ನೀಡಿದ ಒಕ್ಕಲಿಗರ ಸಂಘ ಜನತಾ ನಗರ ಅಧ್ಯಕ್ಷ ಸುರೇಶ್ ಅವರು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು

08/06/2026

92.7 ಬಿಗ್ FM 'ದಮ್ ಇದ್ರೆ ದಮ್ ಬಿಡಿ' ಅಭಿಯಾನ ಯಶಸ್ವಿ | ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ ವಿಶೇಷ ಕಾರ್ಯಕ್ರಮ | INDIAN TV

ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ 92.7 ಬಿಗ್ FM ವತಿಯಿಂದ ಇಂಡಿಯನ್ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ "ದಮ್ ಇದ್ರೆ ದಮ್ ಬಿಡಿ" ಅಭಿಯಾನದ ಸಮಾರೋಪ ಕಾರ್ಯಕ್ರಮ ಇಂದು ಮೈಸೂರಿನ ಅಪೋಲೋ ಆಸ್ಪತ್ರೆ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಪೋಲೋ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿದರು. ತಂಬಾಕು ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಂದೇಶ ನೀಡಲಾಯಿತು.

ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದವರಿಗೆ ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಸೇರಿದಂತೆ ವಿವಿಧ ಮಾರಕ ಕಾಯಿಲೆಗಳ ಕುರಿತು ಮಾಹಿತಿ ನೀಡಲಾಯಿತು.

07/06/2026

ಅಪ್ಪನ ಸಾವಿನ ಕನಸು ಇವರಿಗೆ ಮೊದಲೇ ಬಿದ್ದಿತ್ತು! ಅನು ಪ್ರಭಾಕರ್ ಹೇಳಿದ ಆ ಸತ್ಯಗಳು

ನನಗೆ ಅಪ್ಪನ ಸಾವಿನ ಕನಸು ಬಿದ್ದಿತ್ತು. ಅದು ನಿಜವೂ ಆಯಿತು. ಜಯಂತಿ ಅಮ್ಮ ನಾನು ಮಾಡಿರೋ ತಪ್ಪು ನೀನು ಮಾಡ್ಬೇಡ ಅಂತ ಹೇಳೋರು. ಸೆಕೆಂಡ್ ಹ್ಯಾಂಡ್ ಅನ್ನುವ ಕಾಮೆಂಟ್ ಹರ್ಟ್ ಮಾಡುತ್ತದೆ. ಅನು ಪ್ರಭಾಕರ್ ಹೀಗೆ ಇನ್ನು ಸಾಕಷ್ಟು ಸತ್ಯ ಹೇಳಿದ್ದಾರೆ.

07/06/2026

ಪತಿಯ ಜೊತೆ ನಟಿ ಸಂಜನಾ ಬುರ್ಲಿ ಫೋಟೋಶೂಟ್: ಕೊಟ್ಟರೊಂದು ಸ್ವೀಟ್ ನ್ಯೂಸ್

'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾಗಿರುವ ಸಮರ್ಥ ಚನ್ನಗಿರಿ ಅವರನ್ನು ವರಿಸಿದ್ದು, ಇದೀಗ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ. ಪತಿಯೊಂದಿಗಿನ ಫೋಟೋ ಹಂಚಿಕೊಂಡಿರುವ ಅವರು, ಪ್ರೀತಿ ಮತ್ತು ಮದುವೆಯ ಕುರಿತು ತಮ್ಮ ಆಳವಾದ, ವೇದಾಂತದ ದೃಷ್ಟಿಕೋನ ಹಂಚಿಕೊಂಡಿದ್ದಾರೆ.

07/06/2026

ಮೊದಲ ಮಗು ಹೆಣ್ಣು ಜನಿಸಿದರೆ ತಂದೆಯ ಅದೃಷ್ಟವೇ ಬದಲಾಗುತ್ತಾ? ಶಾಸ್ತ್ರಗಳು ಹೇಳುವುದೇನು?

ಹಿಂದೂ ಧರ್ಮದಲ್ಲಿ ಹೆಣ್ಣು ಮಗು ಮಹಾಲಕ್ಷ್ಮಿಯ ಸ್ವರೂಪ. ಅವಳ ಜನನವು ತಂದೆಯ ಅದೃಷ್ಟವನ್ನು ಬದಲಿಸಿ, ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಅನಿರೀಕ್ಷಿತ ಧನಾಗಮನಕ್ಕೆ ಕಾರಣವಾಗುತ್ತದೆ. ಚಂದ್ರ ಮತ್ತು ಶುಕ್ರ ಗ್ರಹಗಳ ಬಲ ಹೆಚ್ಚಿಸಿ, ಮನೆಯಲ್ಲಿ ಸಂಪತ್ತು, ಶಾಂತಿ ನೆಲೆಸುತ್ತದೆ. ಕನ್ಯಾದಾನದಿಂದ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ ಎಂದು ಜ್ಯೋತಿಷ್ಯ ಮತ್ತು ಪುರಾಣಗಳು ತಿಳಿಸುತ್ತವೆ.

07/06/2026

47ರ ಹರೆಯದಲ್ಲೂ 20ರ ಸೌಂದರ್ಯ: ನಟಿ ಜ್ಯೋತಿಕಾ ಬ್ಯೂಟಿ ಗುಟ್ಟು ರಟ್ಟಾಗೋಯ್ತು

ತೆರೆಯಿಂದ ಮರೆಯಾಗಿದ್ದ ಖ್ಯಾತ ನಟಿ, ತಮಿಳಿನ ಸ್ಟಾರ್ ನಟ ಸೂರ್ಯ ಪತ್ನಿ ಜ್ಯೋತಿಕಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಜ್ಯೋತಿಕಾ 2024ರಲ್ಲಿ ಬಿಡುಗಡೆಯಾದ ಸೈತಾನ್ ಚಿತ್ರದ ಮೂಲಕ ಬಾಲಿವುಡ್ಗೆ 25 ವರ್ಷಗಳ ಮರಳಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಆರ್ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ನಟಿಯ ಫಿಟ್ನೆಸ್ ಕುರಿತು ಸಾಕಷ್ಟು ಚರ್ಚೆಯಾಗಿತ್ತು.

06/06/2026

ಇಂಡಿಯನ್ ಟಿವಿ ಬಿಗ್ ಇಂಪಾಕ್ಟ್!

ಎಚ್.ಡಿ. ಕೋಟೆಯಲ್ಲಿ ಇಂಡಿಯನ್ ಟಿವಿ ಬಿಜಿನೆಸ್ ಅಥವಾ ತನಿಖಾ ವರದಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಎಚ್.ಡಿ. ಕೋಟೆಯ ಪ್ರಸಿದ್ಧ ಚಿಕ್ಕದೇವಮ್ಮನವರ ದೇವಸ್ಥಾನದ ಬಳಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಬಾರ್ ಕುರಿತು 'ಇಂಡಿಯನ್ ಟಿವಿ' ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು. ಪವಿತ್ರ ದೇವಸ್ಥಾನದ ಆವರಣದ ಬಳಿಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರ ಬಗ್ಗೆ ಸಾರ್ವಜನಿಕರ ಆಕ್ರೋಶವನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇಂಡಿಯನ್ ಟಿವಿ ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತು ಕೊತ್ತೇಗಾಲ ಗ್ರಾಮ ಪಂಚಾಯಿತಿ, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪವಿತ್ರ ಸ್ಥಳದಲ್ಲಿರುವ ಈ ಅಕ್ರಮ ಬಾರ್ ಅನ್ನು ತಕ್ಷಣವೇ ಸ್ಥಳಾಂತರ ಮಾಡುವಂತೆ ಕೊತ್ತೇಗಾಲ ಗ್ರಾಮ ಪಂಚಾಯಿತಿ ಇದೀಗ ಅಧಿಕೃತ ಆದೇಶ ಹೊರಡಿಸಿದೆ.

06/06/2026

ವಚನಾನಂದ ಸ್ವಾಮೀಜಿ ಪೋಕ್ಸೋ
ಕೇಸ್‌ನಲ್ಲಿ ಇಂದು ಬಿಗ್ ಅಪ್ಡೇಟ್!

ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ಅವರ ಮೇಲಿನ ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಪ್ರಮುಖ ವಿಚಾರಣೆ ನಡೆಯಲಿದೆ. ಅಪ್ರಾಪ್ತ ಬಾಲಕನ ಮೇಲಿನ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಸಾಕ್ಷ್ಯ ಕಲೆಹಾಕಿದ್ದು, ಇಂದಿನ ಕೋರ್ಟ್ ನಡೆ ಭಾರಿ ಕುತೂಹಲ ಮೂಡಿಸಿದೆ. ಇದರ ನಡುವೆ ಮಠದ ವಿವಾದದ ಹಿನ್ನೆಲೆಯಲ್ಲಿ ಜೂನ್ ೧೫ ರವರೆಗೆ ಪಂಚಮಸಾಲಿ ಮಠದ ಆವರಣದಲ್ಲಿ ಬಿಎನ್‌ಎಸ್ ೧೬೩ ಅನ್ವಯ ನಿಷೇಧಾಜ್ಞೆಯನ್ನು ಮುಂದುವರಿಸಿ ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

06/06/2026

3 ದಿನ ಅನ್ನ-ನೀರಿಲ್ಲದೆ ಪಕ್ಕದ ಹಾಸ್ಟೆಲ್‌ನಲ್ಲಿ
ಕೈಚಾಚಿದ ಬಡ ವಿದ್ಯಾರ್ಥಿಗಳು!

ರಾಯಚೂರಿನ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಊಟ ಮತ್ತು ಕುಡಿಯುವ ನೀರಿಲ್ಲದೆ ಬಡ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸಿದ್ದಾರೆ. ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಿಂದ ಬಂದಿರುವ ಈ ವಿದ್ಯಾರ್ಥಿಗಳು, ಹಸಿವು ತಾಳಲಾರದೆ ಪಕ್ಕದ ಹಾಸ್ಟೆಲ್‌ನಲ್ಲಿ ಅನ್ನ ಕೇಳಿ ಪಡೆದಿದ್ದಾರೆ. ವಾರ್ಡನ್ ಮೆಹಬೂಬ್‌ನ ಉಡಾಫೆ ವರ್ತನೆಗೆ ಬೇಸತ್ತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಎದುರು ವಿದ್ಯಾರ್ಥಿಗಳು ಬೃಹತ್ ಧರಣಿ ನಡೆಸಿದ್ದು, ವಾರ್ಡನ್ ತಕ್ಷಣ ವರ್ಗಾವಣೆಗೆ ಪಟ್ಟು ಹಿಡಿದಿದ್ದಾರೆ.

Address

Kamakshi Hospital Road, 8th Cross, 77, 8th Main Road, Kuvempunagara North, Saraswathipuram, Mysuru
Mysore
570009

Telephone

+919739366666

Website

Alerts

Be the first to know and let us send you an email when Indian TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Indian TV:

Share