Taluknewskarnataka

Taluknewskarnataka Print Journalism Multimedia Journalism Broadcast Journalism Social Media Journalism News Revolution

08/06/2025
ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ  ₹28,999 ರೂ. ವಂಚನೆ – ಸೈಬರ್ ಕ್ರೈಂಗೆ ದೂರುಬೆಂಗಳೂರು, ಜೂನ್ 8, 2025 – ನಗರದಲ್ಲಿ  ಆನ್‌ಲೈನ್ ವಂಚನೆ ಪ್ರಕ...
08/06/2025

ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹28,999 ರೂ. ವಂಚನೆ – ಸೈಬರ್ ಕ್ರೈಂಗೆ ದೂರು

ಬೆಂಗಳೂರು, ಜೂನ್ 8, 2025 –
ನಗರದಲ್ಲಿ ಆನ್‌ಲೈನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ದಿನಾಂಕ 05.06.2025 ರಂದು ರಾತ್ರಿ 8 ಗಂಟೆಗೆ ಜ್ಞಾನಭಾರತಿ ಪೋಲೀಸ್ ಠಾಣೆಗೆ ಹಾಜರಾದ ಪುನೀತ್ ರವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯು ಹೂಡಿಕೆ ಮಾಡುವಂತೆ ನಂಬಿಸಿ ₹28,999 ವಂಚಿಸಿದ್ದಾರೆ.

ಪುನೀತ್ ರವರ ಹೇಳಿಕೆಯಂತೆ, ದಿನಾಂಕ 12.04.2025 ರಂದು ವಂಚಕರು ಸಂಪರ್ಕಿಸಿ ಲಾಭದ ಆಶ್ವಾಸನೆ ನೀಡಿ ಹೂಡಿಕೆಗೆ ಪ್ರೇರೇಪಿಸಿದರು. ಬಳಿಕ, ಹಂತ ಹಂತವಾಗಿ ಆತನಿಂದ ಹಣ ಪಡೆದು ಯಾವುದೇ ಆದಾಯವಿಲ್ಲದೆ ಸಂಪರ್ಕ ಕಡಿತಗೊಳಿಸಿದರು. ತಕ್ಷಣ ಎಚ್ಚೆತ್ತ ಪುನೀತ್ ರವರು ರಾಷ್ಟ್ರೀಯ ಸೈಬರ್ ಕ್ರೈಂ ಹಾಟ್‌ಲೈನ್ 1930 ಗೆ ಕರೆಮಾಡಿ ದೂರು ದಾಖಲಿಸಿದ್ದು, ದೂರು ಸಂಖ್ಯೆ 31604250048162 ಆಗಿದೆ.

ವಂಚನೆ ವೇಳೆ ಹಣ ಪುನೀತ್ ರವರ ಖಾತೆ ಯಿಂದ ವರ್ಗಾವಣೆಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಾನು ವಂಚನೆಯೊಳಗಾದ ಬಗ್ಗೆ ಸ್ಪಷ್ಟ ಪುರಾವೆಗಳೊಂದಿಗೆ ಠಾಣೆಗೆ ದೂರು ನೀಡಿದ್ದು, ವಂಚಕರನ್ನು ಪತ್ತೆಹಚ್ಚಿ ತನ್ನ ಹಣ ವಾಪಸ್ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸೈಬರ್ ಕ್ರೈಂ ಘಟಕದ ಸಹಾಯದಿಂದ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ತಿಳಿಸಲಾಗಿದೆ.

ವರದಕ್ಷಿಣೆ ಕಿರುಕುಳ ಪ್ರಕರಣ: ಕಿರುಕುಳಕ್ಕೊಳಗಾದ ನಳಿನಿ ಯವರ ಮನವಿಯ ಮೇರೆಗೆ  ಎಫ್‌ಐಆರ್ ದಾಖಲಿಸಿದ ಜ್ಞಾನಭಾರತಿ ಪೋಲೀಸರು....ಹೊಸಪೇಟೆ, 08 ಜೂ...
08/06/2025

ವರದಕ್ಷಿಣೆ ಕಿರುಕುಳ ಪ್ರಕರಣ: ಕಿರುಕುಳಕ್ಕೊಳಗಾದ ನಳಿನಿ ಯವರ ಮನವಿಯ ಮೇರೆಗೆ ಎಫ್‌ಐಆರ್ ದಾಖಲಿಸಿದ ಜ್ಞಾನಭಾರತಿ ಪೋಲೀಸರು....

ಹೊಸಪೇಟೆ, 08 ಜೂನ್ 2025 –
ದಿನಾಂಕ 05.06.2025 ರಂದು ಸಂಜೆ 4 ಗಂಟೆಗೆ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಜೀರೋ ಎಫ್‌ಐಆರ್ ಸಂಖ್ಯೆ 01/2025 ಅನ್ನು ದಾಖಲಿಸಲಾಗಿದ್ದು, ವರದಕ್ಷಿಣೆ ಕಿರುಕುಳ ಸಂಬಂಧಿತ ಗಂಭೀರ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.

ನಳಿನಿ ಅವರು ದಿನಾಂಕ 11/12/2020 ರಂದು ಎಲ್.ಎ. ಉಮಾಪತಿ ಅವರೊಂದಿಗೆ ಬಲೀಜ್ ಭವನ, ಹೊಸಪೇಟೆಯಲ್ಲಿ ಕುಲ ಸಂಪ್ರದಾಯದಂತೆ ವಿವಾಹವಾದರು. ಮದುವೆಗೆ ಮುನ್ನವೇ ಪತಿ ಉಮಾಪತಿ, ಇವರ ತಾಯಿ ಅನ್ನಪೂರ್ಣಮ್ಮ, ಅಣ್ಣ ಎಲ್.ಎ. ಸಿದ್ದಲಿಂಗೇಶ್ವರ, ಅವರ ಪತ್ನಿ ಪವಿತ್ರಾ ಮತ್ತು ಮಾವ ವೀರಯ್ಯ ಬಿ.ಎಂ ಇವರುಗಳು ತಾವು ಮದುವೆ ಮಾಡಲು ಕೆಲವೊಂದು ವರದಕ್ಷಿಣೆಯ ಬೇಡಿಕೆಗಳನ್ನು ಇಟ್ಟಿದ್ದರು – ರೂ. 3 ಲಕ್ಷ ನಗದು, 5 ತೊಲೆ ಬಂಗಾರ ಮತ್ತು 2 ಕೆ.ಜಿ ಬೆಳ್ಳಿ ಸಾಮಾನುಗಳು.

ನಳಿನಿ ಅವರ ಮನೆಯವರು ಈ ಬೇಡಿಕೆಗೆ ಪ್ರತಿಯಾಗಿ ರೂ. 1 ಲಕ್ಷ ನಗದು, 2 ತೊಲೆ ಬಂಗಾರ ಮತ್ತು 1 ಕೆ.ಜಿ ಬೆಳ್ಳಿ ನೀಡಲು ಒಪ್ಪಿಕೊಂಡು ಮದುವೆ ನೆರವೇರಿತು. ಮದುವೆಯಾದ ಬಳಿಕ ನಳಿನಿ ಯವರು ಬೆಂಗಳೂರಿಗೆ ಪತಿಯೊಂದಿಗೆ ತೆರಳಿದ್ದು, 8 ತಿಂಗಳ ಕಾಲ ಸಹಜವಾಗಿಯೇ ಬದುಕಿದರು. ಆದರೆ ನಂತರ, ಉಮಾಪತಿ ಮತ್ತು ಅವರ ಮನೆಯವರು ಇನ್ನೂ ಹೆಚ್ಚಿನ ಬಂಗಾರ ತರಬೇಕೆಂಬ ನಿಟ್ಟಿನಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡತೊಡಗಿದರು.

ನಳಿನಿ ಯವರ ತಂದೆ ಈ ಸಂಬಂಧ ಗ್ರಾಮ ಪಂಚಾಯಿತಿ ಸಭೆ ಕರೆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಕೊನೆಗೆ, ದಿನಾಂಕ 25/12/2024 ರಂದು ತಾನು ತಂದೆಯ ಮನೆಗೆ ಹಿಂಸೆ ತಾಳದೆ ಹೋಗಿರುತ್ತಾರೆ . ಅಲ್ಲೂ ಕೂಡ ಬಿಡದೆ ಉಮಾಪತಿ ಫೋನಿನ ಮೂಲಕ ಹಿಂಸೆ ಕೊಡುತಿದ್ದರು ದಿನಾಂಕ 11/05/2025 ರಂದು ಪತಿ ಜೊತೆ ಮಾತುಗಳಾದಾಗ, ಪತಿ ಸ್ಪಷ್ಟವಾಗಿ "ಹಣ ಮತ್ತು ಬಂಗಾರ ತಂದರೆ ಮಾತ್ರ ಮನೆಗೆ ಸೇರಿಸುವೆ" ಎಂದು ಬೆದರಿಕೆ ಹಾಕಿದನು.

ಈ ಎಲ್ಲಾ ಘಟನೆಯ ಆಧಾರದಲ್ಲಿ ನಳಿನಿ ದಿನಾಂಕ 04/06/2025 ರಂದು ಠಾಣೆಗೆ ದೂರು ನೀಡಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಜೀರೋ ಎಫ್‌ಐಆರ್ ರೂಪದಲ್ಲಿ ದಾಖಲಿಸಿ, ಭಾರತೀಯ ದಂಡ ಸಂಹಿತೆ ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್-1961 ನ ಸೆಕ್ಷನ್ 0:85, 115(2), 352, 351(3) / 23(5) 2.2.2-2023 ಹಾಗೂ ಸೆಕ್ಷನ್ 2, 3 ಮತ್ತು 4 ರಂತೆ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸರು ಆರೋಪಿಗಳನ್ನು ಚರ್ಚೆಯ ಆಧಾರದಲ್ಲಿ ತನಿಖೆಗೆ ಒಳಪಡಿಸಿದ್ದು, ಮುಂದಿನ ಹಂತದ ಕ್ರಮ ಮುಂದುವರಿಸುತ್ತಿದ್ದಾರೆ.

📢 ತಾಲೂಕು ನ್ಯೂಸ್ ಮೀಡಿಯಾ ಲಿಮಿಟೆಡ್(A Public Limited Media Organization)💐 ನಿಮ್ಮನ್ನು ನಮ್ಮೊಂದಿಗೆ ಸ್ವಾಗತಿಸುತ್ತೇವೆ!ನಾವು ನಿಮ್ಮನ್ನ...
08/06/2025

📢 ತಾಲೂಕು ನ್ಯೂಸ್ ಮೀಡಿಯಾ ಲಿಮಿಟೆಡ್
(A Public Limited Media Organization)
💐 ನಿಮ್ಮನ್ನು ನಮ್ಮೊಂದಿಗೆ ಸ್ವಾಗತಿಸುತ್ತೇವೆ!
ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸಂಸ್ಥೆಯ ಅಜೀವ ಸದಸ್ಯತ್ವ ಪಡೆಯಲು ಆಹ್ವಾನಿಸುತ್ತೇವೆ.
By joining as a Lifetime Member, you support the growth and outreach of our organization.

🎯 Lifetime Membership Invitation – ಅಜೀವ ಸದಸ್ಯತ್ವ ಆಹ್ವಾನ
🔹 Membership Fee: ₹20,000/- only
🔹 In return, as a token of appreciation and gratitude, we will transfer shares or debentures worth ₹20,000/- of our actively operating media company to your Demat account.

📈 As a shareholder, you are also entitled to annual dividends, ensuring a continued connection with our organization's journey and success.

📰 Our Media Operations – ಸಂಸ್ಥೆಯ ಕಾರ್ಯಚಟುವಟಿಕೆಗಳು
We have initiated operations in every Taluk of Karnataka, including:

🗞 Monthly Printed Magazine – ಮಾಸಿಕ ಮುದ್ರಿತ ಪತ್ರಿಕೆ

📺 Local Cable Network & Live Streaming TV Broadcast

🌐 Online Daily News Portal

📲 Digital News Broadcast via Social Media Channels

Through these platforms, we aim to:
✅ Promote local businesses
✅ Strengthen community communication
✅ Contribute to Taluk-level development

🤝 Your Support Matters – ನಿಮ್ಮ ಸಹಕಾರ ಅಮೂಲ್ಯ
Your involvement will aid us in building awareness for social equity, transparency, and local empowerment.

📍 Let’s work together to build a stronger, informed, and united local community through media.

📞 For Membership Details & Support
Visit: https://talukpathrike.com
Email: [email protected]
Phone: 9481838705 / 9481838704

🏢 ತಾಲ್ಲೂಕು ನ್ಯೂಸ್ ಮೀಡಿಯಾ ಲಿಮಿಟೆಡ್📚 ಇಂಟರ್ನ್‌ಶಿಪ್‌ ಅವಕಾಶ – Internship Opportunity🌐 LOCAL | ONLINE | PRINT | BROADCAST MEDI...
07/06/2025

🏢 ತಾಲ್ಲೂಕು ನ್ಯೂಸ್ ಮೀಡಿಯಾ ಲಿಮಿಟೆಡ್
📚 ಇಂಟರ್ನ್‌ಶಿಪ್‌ ಅವಕಾಶ – Internship Opportunity
🌐 LOCAL | ONLINE | PRINT | BROADCAST MEDIA
📍 www.taluknews.tv | www.talukpathrike.com

🎯 ಇಂಟರ್ನ್‌ಶಿಪ್‌ ಉದ್ದೇಶ
ನಿಮ್ಮ ತಾಲ್ಲೂಕು ಅಥವಾ ವಿಧಾನಸಭಾ ವ್ಯಾಪ್ತಿಯಲ್ಲಿ, ಮಾಧ್ಯಮ ಕ್ಷೇತ್ರದ ಪ್ರಾಯೋಗಿಕ ಜ್ಞಾನ ಪಡೆದು, ಸಂಸ್ಥೆಯ ವಿವಿಧ ಕಾರ್ಯಗಳಲ್ಲಿ ಭಾಗವಹಿಸಿ, ಮಾಧ್ಯಮ ಉದ್ಯೋಗಕ್ಕೆ ತಯಾರಾಗುವ ಅವಕಾಶ.

👨‍💼 ಇಂಟರ್ನ್‌ಶಿಪ್ ಬಳಿಕ ನೇಮಕಾತಿ ಹುದ್ದೆಗಳು:
📡 ಸಾರ್ವಜನಿಕ ಸಂಪರ್ಕ ಅಧಿಕಾರಿ (PRO)

📣 ಸಂಸ್ಥೆಯ ಪ್ರಮೋಟರ್

📰 ವರದಿಗಾರ (Reporter)

🎤 ಆ್ಯಂಕರ್ (Anchor)

✍️ ಸ್ಕ್ರಿಪ್ಟ್ ರೈಟರ್ (Script Writer)

📂 ಸಂಗ್ರಹಕಾರ (Archivist)

📸 ಛಾಯಾಗ್ರಾಹಕ (Photographer)

💼 ಮಾರ್ಕೆಟಿಂಗ್ ಅಸೋಸಿಯೇಟ್ (Any Degree)

📝 ಸಂಪಾದಕ (Journalism Degree Required)

✅ ಅರ್ಹತೆಗಳು:
ವಿದ್ಯಾರ್ಹತೆ / ಅನುಭವ / ಆಸಕ್ತಿ ಇದ್ದರೆ ಸಾಕು

ಪ್ರಾಯೋಗಿಕ ತರಬೇತಿಯ ರೀತಿ ಕೆಲಸ ನಿರ್ವಹಿಸಬೇಕು

ಇಂಟರ್ನ್‌ಶಿಪ್ ನಂತರ ಚಟುವಟಿಕೆ ಮತ್ತು ಆಸಕ್ತಿಯ ಆಧಾರದಲ್ಲಿ ಪೂರ್ಣ ಸಮಯದ ಉದ್ಯೋಗ

📌 ಮಾಧ್ಯಮ ಕ್ಷೇತ್ರಕ್ಕೆ ಸರ್ಕಾರ ನಿಗದಿಪಡಿಸಿರುವ ಸಂಭಳ ಹಾಗೂ ಸೌಲಭ್ಯ ಮಾನದಂಡಗಳು ಅನ್ವಯವಾಗುತ್ತವೆ.

📲 ಸಂಪರ್ಕಿಸಿ:
Whatsapp Chat: 9481838705
Call: 9481838704 / 9481838705

🏢 Communication & HR Office Address:
TALUKNEWS MEDIA LIMITED
#220, 3rd Floor, 60 Feet Road, Avalahalli New BDA Layout, Girinagara, Bengaluru – 560085
📍 Google Maps Link

📢 ಸ್ಥಳೀಯ ಮಾಧ್ಯಮದಲ್ಲಿ ನಿಮ್ಮ ಭವಿಷ್ಯ ನಿರ್ಮಿಸಿ!
Join us – Learn, Lead, and Grow in Local Media.

ಜಯನಗರದಲ್ಲಿ ಆರ್.ಪಿ. ಪ್ರಣವ್ ರವರ ಬೈಕ್ Yamaha RX 100 ಕಳ್ಳತನ.ಕೆ.ಪಿ. ರಮೇಶ್ ರವರ ಹೆಸರಿನಲ್ಲಿ ನೋಂದಾಯಿತ, ನಂ: TN-47-B-5655 ನಂಬರಿನ ಕಪ...
07/06/2025

ಜಯನಗರದಲ್ಲಿ ಆರ್.ಪಿ. ಪ್ರಣವ್ ರವರ ಬೈಕ್ Yamaha RX 100 ಕಳ್ಳತನ.

ಕೆ.ಪಿ. ರಮೇಶ್ ರವರ ಹೆಸರಿನಲ್ಲಿ ನೋಂದಾಯಿತ, ನಂ: TN-47-B-5655 ನಂಬರಿನ ಕಪ್ಪು ಬಣ್ಣದ Yamaha RX 100 (1996 ಮಾದರಿ) ದ್ವಿಚಕ್ರವಾಹನವನ್ನು ತಮ್ಮ ವಾಸದ ಮನೆಯ ಮುಂಭಾಗ ನಿಲ್ಲಿಸಿದ್ದರು. ಆದರೆ, ದಿನಾಂಕ 01-06-2025 ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ವಾಹನ ಅಲ್ಲೆ ಇರುವುದು ದೃಢಪಡಿಸಿದರು. ಆದರೆ ಇದೇ ದಿನ ರಾತ್ರಿ 10:00 ಗಂಟೆಗೆ ವಾಪಸ್ಸು ನೋಡಿದಾಗ, ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಇರುವುದಿಲ್ಲ. ಅಪರಿಚಿತ ವ್ಯಕ್ತಿಗಳು ಸುಮಾರು ರೂ. 50,000/- ಮೌಲ್ಯದ Yamaha RX 100 ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಕಳ್ಳತನಕ್ಕೊಳಗಾದ ದ್ವಿಚಕ್ರವಾಹನದ ವಿವರಗಳು:
ನೋಂದಣಿ ಸಂಖ್ಯೆ: TN-47-B-5655
ಚಾಸಿಸ್ ಸಂಖ್ಯೆ: 96A1L1568186
ಎಂಜಿನ್ ಸಂಖ್ಯೆ: 1L1568186
ಮಾದರಿ: Yamaha RX 100 (1996)
ಬಣ್ಣ: ಕಪ್ಪು
ಅಂದಾಜು ಮೌಲ್ಯ: ₹50,000/-

ಕಳ್ಳತನ ಮಾಡಿದವರನ್ನು ಪತ್ತೆಹಚ್ಚಿ, ದ್ವಿಚಕ್ರವಾಹನವನ್ನು ಹುಡುಕಿ ಕೊಡುವಂತೆ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

ಬಿಸ್ಮಿಲ್ಲಾ ನಗರದಲ್ಲಿ ಯುವತಿ ಕಾಣೆ ಪ್ರಕರಣ: ಗಂಡನಿಗೆ ತನ್ನ ಸ್ನೇಹಿತನ ಮೇಲೆ ಶಂಕೆ ಬಿಸ್ಮಿಲ್ಲಾ ನಗರದಲ್ಲಿ ನಡೆದಿರುವ ಕುತೂಹಲಕರ ಘಟನೆ ಒಂದರಲ್...
07/06/2025

ಬಿಸ್ಮಿಲ್ಲಾ ನಗರದಲ್ಲಿ ಯುವತಿ ಕಾಣೆ ಪ್ರಕರಣ: ಗಂಡನಿಗೆ ತನ್ನ ಸ್ನೇಹಿತನ ಮೇಲೆ ಶಂಕೆ

ಬಿಸ್ಮಿಲ್ಲಾ ನಗರದಲ್ಲಿ ನಡೆದಿರುವ ಕುತೂಹಲಕರ ಘಟನೆ ಒಂದರಲ್ಲಿ, ಯುವತಿ ಮನೆಯಿಂದ ಹೊರಟು ಹೋದ ಬಳಿಕ ಕಾಣೆಯಾಗಿರುವ ಪ್ರಕರಣ ವರದಿಯಾಗಿದೆ. ಪ್ರಕರಣದ ಪ್ರಕಾರ, ಜಯನಗರದ ನಿವಾಸಿ ಹಾಗೂ ಬಿಸ್ಮಿಲ್ಲಾ ಮಸೀದಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರ ಪತ್ನಿ ರಿಜ್ವಾನ್ ಫಾರ್ಹಾತ್ (31) ಮನೆ ಬಿಟ್ಟು ಹೊರಟಿರುವ ಕುರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಹಿತಿಯಂತೆ, ದಿನಾಂಕ 02-06-2025 ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ, ರಿಜ್ವಾನ್ ಫಾರ್ಹಾತ್ ಅವರು ತಮ್ಮ ನಾಲ್ಕು ಮಕ್ಕಳನ್ನು ಬಿಟ್ಟು, ಯಾರಿಗೂ ಯಾವುದೇ ಮಾಹಿತಿ ನೀಡದೆ ಮನೆಯಿಂದ ಹೊರಟು ಹೋಗಿದ್ದಾರೆ. ಆ ನಂತರದಿಂದ ಇವರೆಗೆ ಅವರು ಮರಳಿ ಬಂದಿಲ್ಲ.

ಪತ್ನಿಯು ಏಕಾಏಕಿ ಕಾಣೆಯಾಗಿರುವುದರಿಂದ ದೂರುದಾರರು ಕುಟುಂಬಸ್ಥರೊಂದಿಗೆ ಹಾಗೂ ಪರಿಚಿತರ ಜೊತೆ ಎಷ್ಟೇ ಹುಡುಕಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದರು. ದೂರುದಾರರು ವಿಶೇಷವಾಗಿ ನಾಯಂಡಳ್ಳಿಯ ಎಂಡಿ ರಾಹೀಲ್ ಎಂಬ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಈತ ಈ ಪ್ರಕರಣಕ್ಕೆ ಸಂಬಂಧಿಸಿರುವ ಇಲ್ಲವೊ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಣೆಯಾದ ಮಹಿಳೆಯ ಗುರುತು ಚಿಹ್ನೆಗಳು ಹೀಗಿವೆ:

ಹೆಸರು: ರಿಜ್ವಾನ್ ಫಾರ್ಹಾತ್

ವಯಸ್ಸು: 31 ವರ್ಷ

ಎತ್ತರ: 5 ಅಡಿ

ಮುಖ: ದುಂಡು ಮುಖ

ಮೈಕಟ್ಟು: ಸಾದಾರಣ

ಮೈಬಣ್ಣ: ಗೋಧಿ

ತಲೆ ಕೂದಲು: ಕಪ್ಪು

ಧರಿಸಿದ್ದ ಬಟ್ಟೆ: ಕೆಂಪು ಬಣ್ಣದ ಡ್ರೆಸ್

ಮಾತನಾಡುವ ಭಾಷೆ: ಹಿಂದಿ ಮತ್ತು ತೆಲುಗು

ತಿಲಕ್ ನಗರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿ, ಯುವತಿಯನ್ನು ಪತ್ತೆಹಚ್ಚಲು ಕ್ರಮ ಆರಂಭಿಸಿದ್ದಾರೆ. ಈಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಪೊಲೀಸ್ ಠಾಣೆಗೆ ತಕ್ಷಣವೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಂದ 57 ಸಾವಿರ ರೂ ನಗದು ಹಾಗೂ ಮೊಬೈಲ್ ಕಳ್ಳತನ!ಬೆಂಗಳೂರು, ಜೂನ್ 7, 2025:ನಗರದ ವ್ಯಾಪಾರಿ ಹಿಮತ್ ರಾಮ್...
07/06/2025

ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಂದ 57 ಸಾವಿರ ರೂ ನಗದು ಹಾಗೂ ಮೊಬೈಲ್ ಕಳ್ಳತನ!

ಬೆಂಗಳೂರು, ಜೂನ್ 7, 2025:
ನಗರದ ವ್ಯಾಪಾರಿ ಹಿಮತ್ ರಾಮ್ ಸೋಲಂಕಿ ಅವರು ತಮ್ಮ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದ ಯುವಕನೊಬ್ಬರಿಂದ 57 ಸಾವಿರಕ್ಕೂ ಹೆಚ್ಚು ಹಣ ಹಾಗೂ ಮೊಬೈಲ್ ಕಳ್ಳತನವಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ರಾಜಸ್ಥಾನ ರಾಜ್ಯದ ಜಾಲೂರ್ ಜಿಲ್ಲೆಯ ಉಮೇದಬಾದ್ ಗ್ರಾಮದ ನಿವಾಸಿ ಸವ್ಲಾರಾಮ್ ಬಿನ್ ಸೋಮಜೀ ಚೌದರಿ (31) ಎಂಬ ಯುವಕನು ಕಳೆದ 8 ದಿನಗಳಿಂದ ಹಿಮತ್ ರಾಮ್ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲಸದ ಅವಧಿಯಲ್ಲಿ ಆತನು ವಾಸಕ್ಕಾಗಿ ದೂರುದಾರರ ಮನೆಯಲ್ಲಿಯೇ ತಂಗಿದ್ದ. ಈ ನಡುವೆ ಹಿಮತ್ ರಾಮ್ ಶ್ರೀಮತಿ ಅಸ್ವಸ್ಥರಾಗಿದ್ದು, ಅವರ ಗಮನ ಕುಟುಂಬದ ಕಡೆ ಹೆಚ್ಚು ಇದ್ದುದಾಗಿ ಅವರು ತಿಳಿಸಿದ್ದಾರೆ.

ಜೂನ್ 2 ರಂದು ಅಂಗಡಿಯಲ್ಲಿ ನಗದು ವ್ಯವಹಾರವಾದ ಬಳಿಕ ರೂ. 48,600 ಹಣ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು (IMEI ಸಂಖ್ಯೆ: 865578063512494, 865578063512502) ಮನೆ ಹಾಲ್‌ನ ಷೋಕೇಶ್ನಲ್ಲಿ ಇರಿಸಲಾಗಿತ್ತು. ಆದರೆ, ಜೂನ್ 3 ರಂದು ಬೆಳಿಗ್ಗೆ ಎದ್ದಾಗ ಹಣ ಹಾಗೂ ಮೊಬೈಲ್‌ಗಳು ಕಾಣೆಯಾಗಿದ್ದು, ಈ ವೇಳೆ ಮನೆಗೆ ತಂಗಿದ್ದ ಸವ್ಲಾರಾಮ್ ಸಹ ಕಾಣೆಯಾಗಿದ್ದ.

ತದನಂತರದ ತನಿಖೆಯಲ್ಲಿ, ಹಿಮತ್ ರಾಮ್ ಹೆಂಡತಿಯ ಕೋಟಕ್ ಬ್ಯಾಂಕ್ ಖಾತೆಯಿಂದ ರೂ. 6,300 ಹಾಗೂ ರೂ. 2,200 ಹಣವನ್ನು ಸವ್ಲಾರಾಮ್ ತನ್ನ ಖಾತೆಗೆ ವರ್ಗಾಯಿಸಿರುವ ಮಾಹಿತಿ ಲಭಿಸಿದೆ.

ಹೆಚ್ಚಿನ ದಾಖಲೆಗಳ ಆಧಾರದ ಮೇಲೆ, ಸವ್ಲಾರಾಮ್ ವಿರುದ್ಧ ಕ್ರಮ ಕೈಗೊಂಡು, ಒಟ್ಟು ರೂ. 57,400 ನಗದು ಹಾಗೂ ರೂ. 11,400 ಬೆಲೆಯ ಮೊಬೈಲ್‌ಗಳನ್ನು ವಾಪಸ್ ಪಡೆಯಲು ಸಂಬಂಧಿಸಿದ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದಾರೆ.

ಸ್ಥಳೀಯ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Address

Nagamangala
571432

Alerts

Be the first to know and let us send you an email when Taluknewskarnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Taluknewskarnataka:

Share