hafizsinan_

hafizsinan_ digital creator

17/07/2026

ಮನುಷ್ಯತ್ವ ಮರೆಯಾಗುತ್ತಿದೆ...

ಶಾಜಹಾನ್ ತನ್ನ ಪತ್ನಿಯ ಮೇಲಿರುವ ಪ್ರೀತಿಯನ್ನು ತಾಜ್ ಮಹಲ್ ಮೂಲಕ ವ್ಯಕ್ತಪಡಿಸಿದ. ಹೀಗೆ ಹಲವಾರು ಹಲವು ರೀತಿಯಲ್ಲಿ ತಮ್ಮ ಪ್ರೇಯಸಿಯರೊಂದಿಗೆ/ಜೀವನ ಸಂಗಾತಿಯರೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ನಿನ್ನೆ ಬಿಸಿ ರೋಡಿನಲ್ಲಿ ನಡೆದ ಘಟನೆ ಎಲ್ಲರೂ ನೋಡಿರಬಹುದು. ಅದೂ ಕೂಡ ಒಂದು ಪ್ರೀತಿ ಪ್ರಕಟಣೆ,ತಾನು ಪ್ರೀತಿಸಿದ ಹುಡುಗಿ ತನ್ನನ್ನು ಪ್ರೀತಿಸದ ಕಾರಣ ಅವಳನ್ನು ಈ ಲೋಕದಿಂದಲೇ ಕಳುಹಿಸಿಬಿಟ್ಟ ಆ ಮನುಷ್ಯತ್ವವಿಲ್ಲದ ಕೊಲೆಗಾರ.
"ಹೇಗಪ್ಪಾ ಒಬ್ಬ ಮನುಷ್ಯನಿಗೆ ಈ ರೀತಿಯಲ್ಲಿ ಕೊಲೆಗೈಯಲು ಸಾಧ್ಯವಾಗುವುದು ?" ಎಂದು ಹಲವರು ಚಿಂತಿಸಿರಬಹುದು.
ಪ್ರಧಾನ ಕಾರಣ, ಪ್ರೀತಿ ಎಂಬ ಹುಚ್ಚು. ಈ ಹುಚ್ಚು ತಲೆಗೆ ಹತ್ತಿದರೆ ಸುತ್ತಮುತ್ತಲಿನ ಯಾವುದೂ ಕಾಣಿಸುವುದಿಲ್ಲ. ಸ್ವಂತದವರೆಂದು ನನಗಿರುವ ತಂದೆ ತಾಯಂದಿರನ್ನು ಕೂಡಾ ಮರೆತುಹೋಗುತ್ತಾರೆ. ಪ್ರಿಯತಮನಿಗೊಸ್ಕರ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಗಂಡನನ್ನೇ ಕೊಂದ ಘಟನೆ ನಾವು ಕಂಡಿದ್ದೇವೆ.
ಮತ್ತೊಂದು ಕಾರಣ, ಇಂದಿನ ಕಾಲದ ಸಿನಿಮಾ ಸ್ಟೈಲ್. ಅಂದರೆ, ಸಿನಿಮಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕಾಣುವ ಶಾರ್ಟ್ ವಿಡಿಯೋಗಳು. "ಅದರಲ್ಲಿ ಇರುವ ಹಾಗೆ ನನಗೆ ಜೀವಿಸಬೇಕು, ಅದರಲ್ಲಿರುವ ನಾಯಕನ ಹಾಗೆ ನನಗೆ ಪ್ರೀತಿಸಬೇಕು, ಪ್ರೇಯಸಿಯನ್ನು ಮದುವೆ ಮಾಡಬೇಕು" ಹೀಗೆ ಹಲವಾರು ಚಿಂತೆಗಳು ಮನುಷ್ಯನನ್ನು ಈ ರೀತಿಯ ಕೆಲಸಕ್ಕೆ ಕರೆದೊಯ್ಯುತ್ತದೆ.
ಅದರಲ್ಲಿರುವುದು ಕೇವಲ ನಟನೆಯೆಂದೂ, ಅದರಲ್ಲಿರುವ ಪಾತ್ರ ಕೇವಲ ನಟನೆಗೆ ಬೇಕಾಗಿ ಎಂದೂ ಕೂಡ ಅರ್ಥೈಸುವಷ್ಟು ಬುದ್ಧಿ ನಮ್ಮ ಈ ಜೆನ್ಝಿ ಯುವಕ/ಯುವತಿಯರಿಗೆ ಇಲ್ಲ ಎಂಬುವುದೇ ನಗ್ನಸತ್ಯ. ಹಿರಿಯರ ಮಾತಿಗೆ ಬೆಲೆ ಕೊಡದೆ, ಬುದ್ಧಿಮಾತು ಹೇಳುವವರನ್ನು ಕಡೆಗಣಿಸಿ ಜೀವಿಸುವ ಈ ತಲೆಮಾರು ಹೀಗಾದರೆ, ಇನ್ನು ಬರುವ ತಲೆಮಾರು ಹೇಗಿರಬಹುದು ?

✒️ ಹಾಫಿಝ್ ಸಿನಾನ್ ಕಬಕ

16/07/2026

ಮಲಯಾಳಂ ಅಕ್ಷರಮಾಲೆಯ ಒತ್ತಕ್ಷರಗಳು - ಭಾಗ 01

12/07/2026

ಯಾರನ್ನು ಹೆಚ್ಚು ಪ್ರೀತಿಸಬೇಕು?
"ಅಲ್ಲಾಹು ಮತ್ತು ತಮ್ಮ ನಂತರ ಅತೀ ಹೆಚ್ಚು ಪ್ರೀತಿಸಬೇಕಾದದ್ದು ಯಾರನ್ನು ?" ಎಂದು ಪ್ರವಾದಿ ﷺ ರ ಬಳಿ ಮೂರು ಬಾರಿ ಕೇಳಿದಾಗಲೂ "ಅಮ್ಮ" ಎಂದೂ ನಾಲ್ಕನೇ ಬಾರಿ "ಅಪ್ಪ" ಎಂದು ಉತ್ತರಿಸಿದರು ಪ್ರವಾದಿ ﷺ ರು.
ನಮಗೆ ಜನ್ಮ ನೀಡಿದ ನಮ್ಮ ತಂದೆ ತಾಯಂದಿರನ್ನು ಲೋಕದಲ್ಲಿರುವ ಎಲ್ಲಾ ಮನುಷ್ಯರಿಗಿಂತ ಹೆಚ್ಚು ಪ್ರೀತಿಸಬೇಕು. ಕಾರಣ, ನಾವು ಈ ಲೋಕಕ್ಕೆ ಬರಲು ಕಾರಣ ಅವರು.
ಅವರಿಗಿಂತ ಹೆಚ್ಚು ನಾವು, ನಮ್ಮನ್ನು ಸೃಷ್ಟಿಸಿದ ಅಲ್ಲಾಹನನ್ನು ಮತ್ತು ಸೃಷ್ಟಿಸಲು ಕಾರಣಕರ್ತರಾದ ಪ್ರವಾದಿ ﷺ ರನ್ನು ಪ್ರೀತಿಸಬೇಕು.
ಅಂದರೆ, ಮೊದಲು ಅಲ್ಲಾಹನನ್ನು, ನಂತರ ಪ್ರವಾದಿ ﷺ ರನ್ನು ನಂತರ ತಂದೆ ತಾಯಂದಿರನ್ನು. ಇದು ಕಡ್ಡಾಯವಾದ ಸಂಗತಿಯಾಗಿದೆ. ಇವರನ್ನು ಬಿಟ್ಟು ಬೇರೆ ಯಾರಿಗೋ ನಮ್ಮ ಪ್ರೀತಿಯನ್ನು ಕೊಟ್ಟು ಇಹಪರ ಲೋಕದಲ್ಲಿ ಸೋತುಹೋಗುವ ಜನರಾಗಬಾರದು ನಾವು.
ಕಡ್ಡಾಯವಾಗಿ ಪ್ರೀತಿಸಬೇಕಾದವರನ್ನು ಪ್ರೀತಿಸದೆ, ಎಷ್ಟು ದೊಡ್ಡ ಸಿನಿಮಾ/ಫುಟ್ಬಾಲ್/ಕ್ರಿಕೆಟ್ ತಾರೆಯರನ್ನು ಪ್ರೀತಿಸಿದರೂ ಯಾವುದೇ ಫಲವಿಲ್ಲ.
ಅಲ್ಲಾಹನು ನಮಗೆ ನೀಡಿದ ಎರಡು ಅತ್ಯಮೂಲ್ಯ ಅನುಗ್ರಹಗಳನ್ನು ಅಲ್ಲಾಹನ ದಾರಿಯಲ್ಲೇ ಉಪಯೋಗಿಸಲು ಶ್ರಮಿಸೋಣ...
ಸಮಯ ಮತ್ತು ಆರೋಗ್ಯ - ಇವೆರಡು ಅಲ್ಲಾಹನು ನಮಗೆ ನೀಡಿದ ಅತೀ ದೊಡ್ಡ ಅನುಗ್ರಹ.

11/07/2026

"ಮಾತಾ - ಪಿತ - ಗುರು - ದೈವ"

✒️ ಹಾಫಿಝ್ ಸಿನಾನ್ ಕಬಕ

"ಮಾತಾ - ಪಿತ - ಗುರು - ದೈವ" ಎಂಬುವುದು ನಾವು ಚಿಕ್ಕಂದಿನಲ್ಲೇ ಕೇಳಿ ಬಂದ ವಾಕ್ಯವಾಗಿದೆ. ತಂದೆ ತಾಯಂದಿರು ಮತ್ತು ಗುರುವಾರ್ಯರು ದೇವರಿಗೆ ಸಮಾನ ಎಂದಾಗಿದೆ ಇದರ ಅರ್ಥ.
ತಂದೆ ತಾಯಂದಿರು ನಮ್ಮನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿ ಆತ್ಮೀಯವಾದ ಅರಿವು ಸಿಗಲು ಬೇಕಾಗಿ ಮದ್ರಸಕ್ಕೆ ಕಳುಹಿಸುತ್ತಾರೆ.
"ಅದಬ್" ಎಂಬ ಪದದೊಂದಿಗೆ ಆರಂಭಿಸಿ, ಜೀವನದಲ್ಲಿ ಯಾರನ್ನು ಗೌರವಿಸಬೇಕು, ಹೇಗೆ ಗೌರವಿಸಬೇಕು ಯಾವುದನ್ನು ಗೌರವಿಸಬೇಕು ಎಂದೆಲ್ಲಾ ನಮಗೆ ಕಲಿಸಿ ಕೊಡುವುದು ನಮ್ಮ ಗುರುವರ್ಯರು.
ತಾಯಿಯ ಕಾಲಡಿಯಲ್ಲಿ "ಸ್ವರ್ಗ" ಎಂದೂ ತಂದೆ ನಮಗೆ ಮಾರ್ಗದರ್ಶಿ ಎಂದೂ ನಮಗೆ ಹೇಳಿಕೊಡುವುದು ಉಸ್ತಾದರು.
ಯಾವುದೇ ಡಿಗ್ರೀ ಕಾಲೇಜಿನಲ್ಲೂ ಇನ್ಸ್ಟಿಟ್ಯೂಷನಿನಲ್ಲೂ ಸಿಗದ ಅರಿವು ಮತ್ತು ಜೀವನಶೈಲಿ ನಮಗೆ ಮದ್ರಸದಿಂದ ಸಿಗುತ್ತದೆ.
ನಮಗೆ ಒಬ್ಬರು ಸಹಾಯ ಮಾಡಿದರೆ ಅವರಿಗೆ ಪ್ರತಿಯಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಇಹಲೋಕದಲ್ಲೂ ಪರಲೋಕದಲ್ಲೂ ವಿಜಯಿಸಲಿರುವ ವಿದ್ಯೆಗಳು ಕಲಿಸಿ ಕೊಡುವ ಉಸ್ತಾದರುಗಳಿಗೆ ನಾವು ಎಷ್ಟು ಕೃತಜ್ಞತೆ ಮತ್ತು ಗೌರವ ಸಲ್ಲಿಸಿದರೂ ಸಾಕಾಗುವುದಿಲ್ಲ.
ಆದ್ದರಿಂದ ನಮಗೆ ಅರಿವು ಕಲಿಸಿಕೊಡುವ ಗುರುಹಿರಿಯರನ್ನು ಗೌರವಿಸಿ ನಮ್ಮ ಜೀವನವನ್ನು ಹಿತಕರವಾಗಿ ಮುಂದೆ ತೆಗೆದುಕೊಂಡು ಹೋಗೋಣ...

24/06/2026

ಮಲಯಾಳಂ ಅಕ್ಷರಮಾಲೆಯ ಚಿಹ್ನೆಗಳು-ಭಾಗ4️⃣

22/06/2026

ಮಲಯಾಳಂ ಅಕ್ಷರಮಾಲೆಯ ಚಿಹ್ನೆಗಳು-ಭಾಗ3️⃣

17/06/2026

ಮಲಯಾಳಂ ಅಕ್ಷರಮಾಲೆಯ ಚಿಹ್ನೆಗಳು-ಭಾಗ2️⃣

14/06/2026

ಮಲಯಾಳಂ ಅಕ್ಷರಮಾಲೆಯ ಚಿಹ್ನೆಗಳು-ಭಾಗ1️⃣

Address

Kabaka
Puttur
574243

Alerts

Be the first to know and let us send you an email when hafizsinan_ posts news and promotions. Your email address will not be used for any other purpose, and you can unsubscribe at any time.

Contact The Business

Send a message to hafizsinan_:

Shortcuts

Share