ChanDhan Digital News

ChanDhan Digital News Contact information, map and directions, contact form, opening hours, services, ratings, photos, videos and announcements from ChanDhan Digital News, Digital creator, Puttur.

Health Tips ಅರೋಗ್ಯವೇ ಭಾಗ್ಯ ಸೀತಾಫಲದ ಹಣ್ಣನ್ನು ತಿನ್ನುವುದರಿಂದ ಶರೀರದ ಉಷ್ಣ ಕಡಿಮೆ ಆಗಿ ತಂಪಾಗುವುದು.
12/06/2026

Health Tips
ಅರೋಗ್ಯವೇ ಭಾಗ್ಯ
ಸೀತಾಫಲದ ಹಣ್ಣನ್ನು ತಿನ್ನುವುದರಿಂದ ಶರೀರದ ಉಷ್ಣ ಕಡಿಮೆ ಆಗಿ ತಂಪಾಗುವುದು.



ಇನ್ಮುಂದೆ ಗೃಹಲಕ್ಷ್ಮಿ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯಮುಂದಿನ ತಿಂಗಳಿನಿಂದಲೇ ಜಾರಿಗೆ ನಿರ್ಧಾರಗೃಹಲಕ್ಷ್ಮಿ ಹಣದ ದುರುಪಯೋಗ ತಡೆಗಟ್ಟಲು ಬಯೋ ಮೆಟ...
10/06/2026

ಇನ್ಮುಂದೆ ಗೃಹಲಕ್ಷ್ಮಿ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯ

ಮುಂದಿನ ತಿಂಗಳಿನಿಂದಲೇ ಜಾರಿಗೆ ನಿರ್ಧಾರ

ಗೃಹಲಕ್ಷ್ಮಿ ಹಣದ ದುರುಪಯೋಗ ತಡೆಗಟ್ಟಲು ಬಯೋ ಮೆಟ್ರಿಕ್ ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಿದ್ದು, ಮುಂದಿನ ತಿಂಗ ಫಲಾನುಭವಿಗಳು ಬಯೋಮೆಟ್ರಿಕ್ ಮಾಡಿ 5₹ ಶುಲ್ಕವನ್ನ ಪಾವತಿ ಮಾಡಬೇಕಿದೆ. ಬಯೋಮೆಟ್ರಿಕ್ ಆಗದೇ ಇದ್ದರೆ 2 ಸಾವಿರ ರೂ. ಆಮೌಂಟ್ ಬರುವುದಿಲ್ಲ.

👉 ಬೆಂಗಳೂರು ಒನ್, ಗ್ರಾಮ ಒನ್‌ಗಳಲ್ಲಿ ಬಯೋಮೆಟ್ರಿಕ್‌ಗೆ ಅವಕಾಶ ಸಾಧ್ಯತೆ

👉 ಗೃಹಲಕ್ಷ್ಮಿ ಬಯೋಮೆಟ್ರಿಕ್‌ ಗೆ 5 ರೂ. ಶುಲ್ಕ ಮಹಿಳಾ ಇಲಾಖೆ ನಿಗದಿ ಮಾಡಲಿದೆ

👉 ಬಯೋಮೆಟ್ರಿಕ್ ಮಾಡಿಸಲು ಆಧಾರ್ ಕಾರ್ಡ್‌ಸಹಿತವಾಗಿ ಹೋಗಬೇಕು

👉 ಗೃಹಲಕ್ಷ್ಮಿ ಸದಸ್ಯತ್ವ ಬೇಕಿದ್ದವರು 1,250 ರೂ. ಪಾವತಿಸಿ, ಸದಸ್ಯರಾಗಬಹುದು



ಸರಕಾರದ ಉತ್ತಮವಾದ ಯೋಜನೆ ಇನ್ನು ಕೂಡ ಆರಂಭವಾಗಿಲ್ಲ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ, ಇನ್...
09/06/2026

ಸರಕಾರದ ಉತ್ತಮವಾದ ಯೋಜನೆ ಇನ್ನು ಕೂಡ ಆರಂಭವಾಗಿಲ್ಲ

ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಸರ್ಕಾರ ಘೋಷಿಸಿದ್ದರೂ, ಇನ್ನೂ ಕೂಡ ಪಾಸ್ ವಿತರಣೆ ಆರಂಭವಾಗಿಲ್ಲ. ಇದರಿಂದಾಗಿ ಪ್ರತಿದಿನ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
​ ಬಸ್ ಪಾಸ್‌ಗಳು ಅಧಿಕೃತವಾಗಿ ಕೈ ಸೇರುವವರೆಗೆ, ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ (Aadhaar Card) ಅಥವಾ ಶಾಲಾ ಗುರುತಿನ ಚೀಟಿ (School ID) ತೋರಿಸಿ ಉಚಿತವಾಗಿ ಪ್ರಯಾಣಿಸಲು ಸರ್ಕಾರ ತಕ್ಷಣವೇ ತಾತ್ಕಾಲಿಕ ಆದೇಶ ಹೊರಡಿಸಬೇಕು


ಸರಳ ಉಪಾಯ ಮೊಬೈಲ್ ನ ಚಾರ್ಜರ್ ವಯರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಯರ್ ತುಂಬಾ ಗಲೀಜಾಗಿದ್ದರೆ ಸ್ವಲ್ಪ ಕೋಲ್ಗೇಟ್ ಪೇಸ್ಟ್ ಅನ್ನು ವಯರ್ ಮೇಲೆಲ...
07/06/2026

ಸರಳ ಉಪಾಯ
ಮೊಬೈಲ್ ನ ಚಾರ್ಜರ್ ವಯರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಯರ್ ತುಂಬಾ ಗಲೀಜಾಗಿದ್ದರೆ ಸ್ವಲ್ಪ ಕೋಲ್ಗೇಟ್ ಪೇಸ್ಟ್ ಅನ್ನು ವಯರ್ ಮೇಲೆಲ್ಲಾ ಸವರಿ ನಂತರ ಒಂದು ಒಣ ಬಟ್ಟೆಯಿಂದ ಒರೆಸಿದರೆ ಗಲೀಜಾಗಿರುವ ವಯರ್ ಗಳು ಸ್ವಚ್ಛವಾಗುತ್ತವೆ.



ತುಳು ಲೆಕ್ಕಾಚಾರೊದ ರಡ್ಡನೆ ತಿಂಗೊಳು ಬೇಸ ಪತ್ತೇನಾನಿ ಪತ್ತನಾಜೆ.ಆಲಡೆದ ಅಕೇರಿದ ಅಯನ ಖಂಡೆವುದ, ದೇವಸ್ಥಾನಡು ಅಕೇರಿದ ಬಲಿ ಕಾರಿಂಜದ..ನೇಮೊಡು ಅ...
25/05/2026

ತುಳು ಲೆಕ್ಕಾಚಾರೊದ ರಡ್ಡನೆ ತಿಂಗೊಳು ಬೇಸ ಪತ್ತೇನಾನಿ ಪತ್ತನಾಜೆ.
ಆಲಡೆದ ಅಕೇರಿದ ಅಯನ ಖಂಡೆವುದ, ದೇವಸ್ಥಾನಡು ಅಕೇರಿದ ಬಲಿ ಕಾರಿಂಜದ..
ನೇಮೊಡು ಅಕೇರಿದ ಪಿರಿ ಬೂಲ್ಯ ಕೊಂಡಾಣದ..
ಪತ್ತನಾಜೆ ಕರಿದ್ ಆಟ ಇಜ್ಜಿ, ಪತ್ತನಾಜೆ ಬುಕ್ಕ ಕೊಡಿಯಡಿಟು ಗಗ್ಗರ ತೋಜುಜಿ..
ಚೆಂಡೆ ಮದ್ದಳೆದ ಸ್ವರ ಕೆನುಜಿ, ಜಾತ್ರೆದ ಗೌಜಿ ಗದ್ದಲ ಇಜ್ಜಿ, ರಂಗಪೂಜೆದ ಜಾಗಟೆ ಕೆನುಜಿ, ದೇವೆರೆ ಬಲಿತ ಪೊರ್ಲು ತೋಜುಜಿ!
ನನ ದಾಲ ಇತ್ತುಂಡಲ ಬುಲೆ ಸಲೆ ಕಂಜಿ ಕೈಕಂಜಿ ಕಾಪುನ ಗುಡ್ಡೆದ ಬೈರವನ..
ಪತ್ತನಾಜೆದ ಪತ್ತ್ ಪನಿ ಬರ್ಸದ ಒಟ್ಟುಗು ಮರಿಯಲೋನು ಎದುಕೊನ್ಗ...

#ಪತ್ತನಾಜೆ #ತುಳುನಾಡ್

ಸೋಷಿಯಲ್ ಮೀಡಿಯಾದಲ್ಲಿ 'ಜಿರಳೆ' ಹಾವಳಿ #ಕಾಕ್ರೋಚ್ ಜನತಾ ಪಾರ್ಟಿ' ​ಸದ್ಯ ಭಾರತೀಯ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಧೂಳೆಬ್ಬಿಸುತ್ತಿರುವ 'ಕಾಕ್...
22/05/2026

ಸೋಷಿಯಲ್ ಮೀಡಿಯಾದಲ್ಲಿ 'ಜಿರಳೆ' ಹಾವಳಿ
#ಕಾಕ್ರೋಚ್ ಜನತಾ ಪಾರ್ಟಿ'

​ಸದ್ಯ ಭಾರತೀಯ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಧೂಳೆಬ್ಬಿಸುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP)
ಕೇವಲ ನಾಲ್ಕೇ ದಿನಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಗಳಿಸಿ ವೈರಲ್ ಆಗಿದ್ದು ದೇಶವ್ಯಾಪಿ ಚರ್ಚೆಗೆ ಕಾರಣವಾಗಿದ್ದು, ವ್ಯವಸ್ಥೆಯ ವಿರುದ್ಧ ಭಾರೀ ಬೆಂಬಲ ವ್ಯಕ್ತವಾಗಿದೆ.!!


​ಏನಿದು 'ಕಾಕ್ರೋಚ್ ಜನತಾ ಪಾರ್ಟಿ'?
​ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಜಸ್ಟಿಸ್ ಸೂರ್ಯಕಾಂತ್ ಅವರು ದೇಶದ ನಿರುದ್ಯೋಗಿ ಯುವಕರನ್ನು 'ಜಿರಳೆ'ಗಳಿಗೆ (ಕಾಕ್ರೋಚ್) ಹೋಲಿಸಿದ್ದರು ಎನ್ನಲಾದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ವ್ಯಂಗ್ಯವಾಗಿ ಕೌಂಟರ್ ಕೊಡಲು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಅಭಿಜಿತ್ ದಿಪ್ಕೆ ಎಂಬುವವರು ಎಕ್ಸ್‌ನಲ್ಲಿ ಈ 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ಆರಂಭಿಸಿದರು.

​ತಮ್ಮನ್ನು ತಾವು "ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ಮತ್ತು ಸೋಮಾರಿ ತತ್ವಗಳನ್ನು ಪಾಲಿಸುವ ಪಕ್ಷ" ಎಂದು ಈ ಜಿರಲೆ ಪಾರ್ಟಿ ಕರೆದುಕೊಂಡಿದೆ.

​ಬಿಜೆಪಿಯನ್ನೇ ಹಿಂದಿಕ್ಕಿದ್ದ ಸಿಜೆಪಿ!
​ಟ್ವಿಟರ್‌ನಲ್ಲಿ ಈ ಪಕ್ಷಕ್ಕೆ ಯುವಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಖಾತೆ ಆರಂಭವಾದ ಕೇವಲ 4 ದಿನಗಳಲ್ಲಿ ಈ ಪಾರ್ಟಿ ಬರೋಬ್ಬರಿ 1.23 ಕೋಟಿ ಹಿಂಬಾಲಕರನ್ನು (Followers) ಹೊಂದುವ ಮೂಲಕ, 87 ಲಕ್ಷ ಫಾಲೋವರ್ಸ್ ಹೊಂದಿರುವ ದೇಶದ ಆಡಳಿತಾರೂಢ ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯನ್ನೇ ಹಿಂದಿಕ್ಕಿ ದಾಖಲೆ ಬರೆದಿತ್ತು! ಸದ್ಯ 1.33 ಕೋಟಿ ಫಾಲೋವರ್ಸ್ ಹೊಂದಿರುವ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ.

​ಜಿರಲೆ ಪಕ್ಷದ 'ಕ್ರೇಜಿ' ಪ್ರಣಾಳಿಕೆಗಳು!
​ಈ ಪಕ್ಷದ ವಿಲಕ್ಷಣ ಹಾಗೂ ಸಮಾಜದ ವಾಸ್ತವಕ್ಕೆ ಕನ್ನಡಿ ಹಿಡಿಯುವಂತಿದ್ದ ಪ್ರಣಾಳಿಕೆಗಳು ಜನರನ್ನು ಸಿಕ್ಕಾಪಟ್ಟೆ ಆಕರ್ಷಿಸಿದ್ದವು. ಅವುಗಳಲ್ಲಿ ಪ್ರಮುಖವಾದವು:

▶​ನ್ಯಾಯಮೂರ್ತಿಗಳಿಗೆ ನೋ ಗಿಫ್ಟ್: ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದೇ ರಾಜ್ಯಸಭಾ ಸೀಟು ಅಥವಾ ಸರ್ಕಾರಿ ಹುದ್ದೆಗಳನ್ನು ನೀಡಬಾರದು.
▶​ಮಹಿಳಾ ಮೀಸಲಾತಿ: ಸಂಸತ್ತಿನ ಒಟ್ಟು ಸ್ಥಾನಗಳನ್ನು ಹೆಚ್ಚಿಸದೆಯೇ ಮಹಿಳೆಯರಿಗೆ ಶೇ. 50 ರಷ್ಟು ಕಡ್ಡಾಯ ಮೀಸಲಾತಿ ಕೊಡಬೇಕು.
▶​ಪಕ್ಷಾಂತರಿಗಳಿಗೆ ಶಾಕ್: ರೆಸಾರ್ಟ್ ರಾಜಕೀಯ ಮಾಡುವ ಅಥವಾ ಪಕ್ಷಾಂತರ ಮಾಡುವ ಎಂಎಲ್‌ಎ ಮತ್ತು ಎಂಪಿಗಳಿಗೆ 20 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಬ್ಯಾನ್ ಮಾಡಬೇಕು.

​ಈ ಕ್ರೇಜಿ ಪ್ರಣಾಳಿಕೆಗಳನ್ನು ನೋಡಿ ನೆಟ್ಟಿಗರು ಒಂದೆಡೆ ನಗೆಗಡಲಲ್ಲಿ ತೇಲುತ್ತಿದ್ದರೆ, ಮತ್ತೊಂದೆಡೆ ಇದೊಂದು ಡಿಜಿಟಲ್ ಕ್ರಾಂತಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.



ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದು ಬೃಹ...
16/05/2026

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದಲ್ಲಿರುವ ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಸಿಡಿಲು ಬಡಿದು ಬೃಹತ್ ನಷ್ಟ ಸುಮಾರು 1 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ಸಂಜೆ ಸುಮಾರು 4.30 ರ ವೇಳೆ ಗೆ ಸುರಿದ ಗಾಳಿ ಮಳೆಯ ನಡುವೆ ಸಿಡಿಲು ಬಡಿದಿದೆ. ಸಿಡಿಲಿನ ಬಡಿತಕ್ಕೆ ದೇವಸ್ಥಾನದ ಗರ್ಭ ಗುಡಿಯ ಮೇಲಿನ ಪ್ರಾಕಾರ ದ ಶಿಲಾ ಕಲ್ಲುಗಳು ಛಿದ್ರಗೊಂಡು ನೆಲಕ್ಕಪ್ಪಳಿಸಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ದೇವಸ್ಥಾನದ ದೇವರ ಗರ್ಭಗುಡಿಗೆ ಹಾನಿಯಾಗಿದ್ದು,ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ.

16/05/2026

ದಕ್ಷಿಣ ಕನ್ನಡದಲ್ಲಿ ಭರ್ಜರಿ ಪೂರ್ವ ಮಂಗಾರು ಮಳೆ ಆರಂಭ; ರೈತರ ಮೊಗದಲ್ಲಿ ಸಂತಸ💙

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಬೆಳ್ತಂಗಡಿ ತಾಲ್ಲೂಕುಗಳಲ್ಲಿ  ಕಾಸರಗೋಡು ಗಡಿಭಾಗಗಳಲ್ಲಿ ಮಧ್ಯಾಹ್ನ ನಂತರ ಸಿಡಿಲು ಮಿಂಚು ಗಾಳಿ ಸಹಿತ ...
16/05/2026

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಕಾಸರಗೋಡು ಗಡಿಭಾಗಗಳಲ್ಲಿ ಮಧ್ಯಾಹ್ನ ನಂತರ ಸಿಡಿಲು ಮಿಂಚು ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಗುಡುಗು ಮಳೆಯಾಗುತ್ತಿದೆ

"ಆಯುಧ" ಅಂದರೆ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಕೆಲಸದಲ್ಲಿ ಉಪಯೋಗಿಸುವ ಸಾಮಗ್ರಿಗಳು.ಈ ದಿನದಲ್ಲಿ ದೇವಿ ದುರ್ಗಾ, ಶ್ರೀರಾಮ, ಶ್ರೀಕೃಷ್ಣ ಇ...
01/10/2025

"ಆಯುಧ" ಅಂದರೆ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಕೆಲಸದಲ್ಲಿ ಉಪಯೋಗಿಸುವ ಸಾಮಗ್ರಿಗಳು.

ಈ ದಿನದಲ್ಲಿ ದೇವಿ ದುರ್ಗಾ, ಶ್ರೀರಾಮ, ಶ್ರೀಕೃಷ್ಣ ಇವರುಗಳ ಶೌರ್ಯ ಮತ್ತು ವಿಜಯವನ್ನು ಸ್ಮರಿಸಲಾಗುತ್ತದೆ.

ಶಸ್ತ್ರಾಸ್ತ್ರ, ವಾಹನ, ಯಂತ್ರೋಪಕರಣ, ಪುಸ್ತಕ, ಕೆಲಸಕ್ಕೆ ಸಂಬಂಧಿಸಿದ ಸಾಧನಗಳನ್ನು ಶುದ್ಧಗೊಳಿಸಿ ಪೂಜಿಸಲಾಗುತ್ತದೆ.

ಶಕ್ತಿ (ಶಸ್ತ್ರ) ಮತ್ತು ಜ್ಞಾನ (ಪುಸ್ತಕ) ಎರಡೂ ಸಮಾನವಾಗಿ ಗೌರವಿಸಲ್ಪಡುತ್ತವೆ.
​ಆಯುಧ ಪೂಜೆ ಮತ್ತು ಮಹಾನವಮಿಯ ಶುಭಾಶಯಗಳು






Address

Puttur
574201

Website

Alerts

Be the first to know and let us send you an email when ChanDhan Digital News posts news and promotions. Your email address will not be used for any other purpose, and you can unsubscribe at any time.

Share