Voice Of Puttur

Voice Of Puttur Welcome to Voice of Puttur

ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ  ಗುರುತಿಸಿಕೊಂಡಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿಯನ್ನು ಸ್ವತಃ ಡಿ.ಕೆ. ಶಿವಕ...
29/05/2026

ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿಯನ್ನು ಸ್ವತಃ ಡಿ.ಕೆ. ಶಿವಕುಮಾರ್ ಹಲವು ಬಾರಿ ಸಾರ್ವಜನಿಕವಾಗಿ ಮೆಚ್ಚಿಕೊಂಡಿದ್ದಾರೆ. ಇತ್ತೀಚಿಗೆ ಹಲವು ವೇದಿಕೆಗಳಲ್ಲಿ ಬಹಿರಂಗವಾಗಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಅಶೋಕ್ ಕುಮಾರ್ ರೈ ಘೋಷಣೆ ಕೂಡಾ ಮಾಡಿದ್ದರು. ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣದೀಪ್ ಸಿಂಗ್ ಸುರ್ಜೆವಾಲ ಅವರೂ ಅಶೋಕ್ ಕುಮಾರ್ ರೈ ಅವರ ರಾಜಕೀಯ ಇಚ್ಛಾಶಕ್ತಿ ಹಾಗೂ ಅಭಿವೃದ್ಧಿ ದೃಷ್ಟಿಕೋನವನ್ನು ಈಗಾಗಲೇ ಪ್ರಶಂಸಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಶಾಸಕರು ಯು.ಟಿ. ಖಾದರ್ ಮತ್ತು ಅಶೋಕ್ ಕುಮಾರ್ ರೈ ಮಾತ್ರವಾಗಿರುವುದು ರಾಜಕೀಯವಾಗಿ ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅಶೋಕ್ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಚರ್ಚೆಗಳು ಜೋರಾಗಿವೆ. ಆದರೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕಾರಣ ಸಚಿವ ಸ್ಥಾನ ಸುಲಭವಾಗದು ಎನ್ನುವ ಅಭಿಪ್ರಾಯಗಳೂ ಕೇಳಿಬರುತ್ತಿವೆ.

ಇನ್ನೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುವ ನಾಯಕರಿಗೆ ಆದ್ಯತೆ ನೀಡುವ ಬಗ್ಗೆ ನೀಡಿರುವ ಸಂದೇಶದ ಹಿನ್ನೆಲೆ ಅಶೋಕ್ ಕುಮಾರ್ ರೈ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ವಿಶೇಷವಾಗಿ ಯು.ಟಿ. ಖಾದರ್ ಅವರು ಸ್ಪೀಕರ್ ಹುದ್ದೆಯಲ್ಲೇ ಮುಂದುವರಿದರೆ ಅಶೋಕ್ ಕುಮಾರ್ ರೈ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಖಾದರ್ ಅವರು ಸ್ಪೀಕರ್ ಸ್ಥಾನ ತೊರೆದು ಸಂಪುಟ ಸೇರುವ ಸಾಧ್ಯತೆಯೂ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಈ ಎಲ್ಲ ರಾಜಕೀಯ ಲೆಕ್ಕಾಚಾರಗಳ ನಡುವೆ ಅಶೋಕ್ ಕುಮಾರ್ ರೈ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು ಹೀಗೆ:

“ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡೋದಿಲ್ಲ. ಮಹಾಲಿಂಗೇಶ್ವರ ದೇವರ ಅನುಗ್ರಹ ಮತ್ತು ಕ್ಷೇತ್ರದ ಜನತೆಯ ಪ್ರೀತಿ, ಆಶೀರ್ವಾದದಿಂದ ಸಚಿವ ಸ್ಥಾನ ದೊರೆತರೆ ಅದನ್ನು ಜವಾಬ್ದಾರಿಯಿಂದ ನಿಭಾಯಿಸುವೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಸಚಿವ ಸ್ಥಾನ ದೊರೆತರೆ ಮೆಡಿಕಲ್ ಕಾಲೇಜಿನಂತಹ ಬಹು ಬೇಡಿಕೆಯ ಅಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.”

ಯಕ್ಷಗಾನ, ರಂಗಭೂಮಿ, ಧಾರಾವಾಹಿ ಹಾಗೂ ಕಂಬಳ ಕ್ಷೇತ್ರದ ಕಲಾವಿದರಿಗಾಗಿ ಮಹತ್ವದ ಯೋಜನೆ🔥ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ವತಿಯಿಂದ ಭಾ...
29/05/2026

ಯಕ್ಷಗಾನ, ರಂಗಭೂಮಿ, ಧಾರಾವಾಹಿ ಹಾಗೂ ಕಂಬಳ ಕ್ಷೇತ್ರದ ಕಲಾವಿದರಿಗಾಗಿ ಮಹತ್ವದ ಯೋಜನೆ🔥

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ವತಿಯಿಂದ ಭಾರತೀಯ ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸಹಯೋಗದಲ್ಲಿ ಉಚಿತ ಅಪಘಾತ ವಿಮಾ ಮೇಳ ಆಯೋಜಿಸಲಾಗಿದೆ.

👉 10 ಲಕ್ಷ ರೂ.ವರೆಗೆ ಅಪಘಾತ ವಿಮೆ ಸೌಲಭ್ಯ
👉 18 ರಿಂದ 65 ವರ್ಷದವರಿಗೂ ಅವಕಾಶ
👉 ಯಕ್ಷಗಾನ ಹಾಗೂ ಕಲಾ ಕ್ಷೇತ್ರದವರಿಗಾಗಿ ವಿಶೇಷ ಕಾರ್ಯಕ್ರಮ

📅 ದಿನಾಂಕ: 30 ಮೇ 2026, ಶನಿವಾರ
📍 ಸ್ಥಳ: ಅಡ್ಯಾರ್ ಗಾರ್ಡನ್ಸ್, ಮಂಗಳೂರು
⏰ ಸಮಯ: ಬೆಳಿಗ್ಗೆ 8:00 ರಿಂದ

ಎಲ್ಲ ಕಲಾವಿದರು ಹಾಗೂ ಕ್ಷೇತ್ರದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಲಭ್ಯದ ಪ್ರಯೋಜನ ಪಡೆಯಿರಿ. 🙏🔥

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪಕ್ಷಕ್ಕೆ ಅವರಿಗೆ ರಾಜಕೀಯವಾಗಿ ಪ್ರಬಲ ಎದುರಾಳಿಗಳಾಗಿದ್ದ ನಾಲ್ವರು ಪ್ರಮುಖ ಮುಖ್ಯಮಂತ್ರಿಗಳ ರಾಜಕೀಯ ಭವಿಷ್ಯ...
28/05/2026

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಪಕ್ಷಕ್ಕೆ ಅವರಿಗೆ ರಾಜಕೀಯವಾಗಿ ಪ್ರಬಲ ಎದುರಾಳಿಗಳಾಗಿದ್ದ ನಾಲ್ವರು ಪ್ರಮುಖ ಮುಖ್ಯಮಂತ್ರಿಗಳ ರಾಜಕೀಯ ಭವಿಷ್ಯ ಒಂದೇ ತಿಂಗಳಲ್ಲಿ ಬದಲಾಗಿದೆ.🔥

ಎಂ ಕೆ ಸ್ಟಾಲಿನ್ , ಮಮತಾ ಬ್ಯಾನರ್ಜೀ , ಪಿಣರಾಯಿ ವಿಜಯನ್ ಅವರು ಚುನಾವನೆಯಲ್ಲಿ ಸೋತು ಅಧಿಕಾರ ಕಳೆದುಕೊಂಡರೆ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗದ ಮೂಲಕ ಹೊಸ ರಾಜಕೀಯ ಸಮೀಕರಣಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ.

ಈ ಬೆಳವಣಿಗೆಗಳ ನಂತರ ದೇಶದ ರಾಜಕಾರಣ ಮತ್ತೊಂದು ಹೊಸ ತಿರುವಿನತ್ತ ಸಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. 🔥

ರಾಜಕೀಯ ಮುತ್ಸದ್ದಿತನ ಅಂದ್ರೇನು ಅನ್ನೋದನ್ನು ಸಿದ್ದರಾಮಯ್ಯ ಅವರು ತೋರಿಸಿದ್ದಾರೆ🔥ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾವುದೇ ಮುಜುಗರ ಉಂಟಾಗದಂತೆ, ...
28/05/2026

ರಾಜಕೀಯ ಮುತ್ಸದ್ದಿತನ ಅಂದ್ರೇನು ಅನ್ನೋದನ್ನು ಸಿದ್ದರಾಮಯ್ಯ ಅವರು ತೋರಿಸಿದ್ದಾರೆ🔥

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾವುದೇ ಮುಜುಗರ ಉಂಟಾಗದಂತೆ, ಯಾವುದೇ ಹೈಡ್ರಾಮಾ ಮಾಡದೇ, ಯಾವುದೇ ಬ್ಲ್ಯಾಕ್ಮೇಲ್ ರಾಜಕಾರಣಕ್ಕೆ ಇಳಿಯದೇ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಿಜವಾದ ಪಕ್ಷನಿಷ್ಠೆ. ಇದು ಅಧಿಕಾರದ ಮೇಲಿನ ಆಸೆಗಿಂತ, ಪಕ್ಷ ಮತ್ತು ತತ್ವಗಳ ಮೇಲಿನ ನಿಷ್ಠೆ ದೊಡ್ಡದು ಎನ್ನುವ ಸಂದೇಶ.

ಹಿಂದೆ ನಡೆದ ಒಪ್ಪಂದಕ್ಕೆ ಬದ್ಧರಾಗಿ, ಹೈಕಮಾಂಡ್ ಸೂಚನೆಗೆ ಗೌರವ ನೀಡಿ, ತನ್ನ ಜೊತೆ ರಾಜ್ಯದ ಮೂಲೆಮೂಲೆಗೂ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಿದ್ದ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿಕೊಟ್ಟು ತಮ್ಮ ಹಿರಿತನ ಮೆರೆದಿದ್ದಾರೆ.

ಸಿದ್ದರಾಮಯ್ಯ ಅವರು ಬಯಸಿದ್ದರೆ ಇನ್ನೂ ಅಧಿಕಾರದಲ್ಲಿ ಮುಂದುವರಿಯಬಹುದಿತ್ತು…
ಆದರೆ ಪಕ್ಷದ ಗೌರವಕ್ಕಾಗಿ, ಸಂಘಟನೆಯ ಏಕತೆಯಿಗಾಗಿ ತಮ್ಮ ಸ್ಥಾನವನ್ನೇ ಬದಿಗಿಟ್ಟಿದ್ದಾರೆ.

ಬಿನ್ನಮತಕ್ಕೆ ಅವಕಾಶ ನೀಡಲಿಲ್ಲ, ರೆಸಾರ್ಟ್ ರಾಜಕಾರಣ ಮಾಡಲಿಲ್ಲ, ನಾಯಕತ್ವದ ಬಿಕ್ಕಟ್ಟಿಗೆ ಕಾರಣರಾಗಲಿಲ್ಲ…
ಹೈಕಮಾಂಡ್ ವಿರುದ್ಧ ಸೆಡ್ಡು ಹೊಡೆಯಲಿಲ್ಲ.

ಯಾವುದೇ ಗೊಂದಲವಿಲ್ಲದೆ, ಯಾವುದೇ ಬಂಡಾಯವಿಲ್ಲದೆ, ಅತ್ಯಂತ ಗೌರವಯುತವಾಗಿ ತಮ್ಮ ಸ್ಥಾನ ತ್ಯಜಿಸಿದ್ದಾರೆ ಸಿದ್ದರಾಮಯ್ಯ. ನುಡಿದಂತೆ ನಡೆದು
ಪಕ್ಷಕ್ಕಿಂತ ತನ್ನನ್ನು ದೊಡ್ಡವನಾಗಿ ನೋಡದ ರಾಜಕಾರಣಿ ಅಧಿಕಾರಕ್ಕಿಂತ ನಿಷ್ಠೆಯನ್ನು ಮೇಲುಗೈ ಮಾಡಿಸಿದ ವ್ಯಕ್ತಿತ್ತ್ವ 🔥

“ಸಿದ್ದರಾಮಯ್ಯ” ಎಂಬ ಹೆಸರು ಕರ್ನಾಟಕ ರಾಜಕೀಯದಲ್ಲಿ ಸದಾ ಗೌರವದಿಂದ ಉಚ್ಚರಿಸಲ್ಪಡುತ್ತದೆ. 🙏🔥

ಮಂಗಳೂರು ಶೈಲಿಯ ಸಿಂಪಲ್ ಲಂಚ್🔥ಕುಚ್ಚಿಲಕ್ಕಿ ಅನ್ನ + ಬದನೇಕಾಯಿ, ನುಗ್ಗೆ ಹಾಕಿದ ಬೇಳೆಸಾರು 🔥ನೆಕ್ಕರೆ ಮಾವಿನ ಹಣ್ಣಿನ ಪಲ್ಯ 🥭ಊರಿನ ತೊಂಡೆಕಾಯಿಯ...
28/05/2026

ಮಂಗಳೂರು ಶೈಲಿಯ ಸಿಂಪಲ್ ಲಂಚ್🔥
ಕುಚ್ಚಿಲಕ್ಕಿ ಅನ್ನ + ಬದನೇಕಾಯಿ, ನುಗ್ಗೆ ಹಾಕಿದ ಬೇಳೆಸಾರು 🔥
ನೆಕ್ಕರೆ ಮಾವಿನ ಹಣ್ಣಿನ ಪಲ್ಯ 🥭
ಊರಿನ ತೊಂಡೆಕಾಯಿಯ ಪಲ್ಯ (ಮಸಾಲೆ ಹಾಕಿ) 🌶️
ಮಜ್ಜಿಗೆ ಸಾರು 🥛
ಮಾವಿನಕಾಯಿ ಹುರಿದ ಉಪ್ಪಿನಕಾಯಿ 🥭
ಸೆಂಡಿಗೆ 😋

ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ ಇನ್ನೊಂದೆಡೆ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನ...
28/05/2026

ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ ಇನ್ನೊಂದೆಡೆ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನು ಅಧಿಕಾರದಿಂದ ಎಳೆದು ಕೆಡವುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿಯನ್ನು ಯಾಕೆ ಪದಚ್ಯುತಿಗೊಳಿಸಿದಿರಿ ?

ಸಿದ್ದರಾಮಯ್ಯ ಪರ ಪೋಸ್ಟ್ ಮಾಡಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ 🔥

ಡಿಕೆ ಶಿವಕುಮಾರ್ ಸಂಪುಟದಲ್ಲಿ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾಗಿ ದಕ್ಷಿಣ ಕನ್ನಡದ ಶಾಸಕರೇ ಇರಲಿ 👍🙏ಬೆಂಗಳೂರು, ಕೋಲಾರದವರು ಇಲ್ಲಿಯ ಉಸ್ತುವ...
27/05/2026

ಡಿಕೆ ಶಿವಕುಮಾರ್ ಸಂಪುಟದಲ್ಲಿ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾಗಿ ದಕ್ಷಿಣ ಕನ್ನಡದ ಶಾಸಕರೇ ಇರಲಿ 👍🙏ಬೆಂಗಳೂರು, ಕೋಲಾರದವರು ಇಲ್ಲಿಯ ಉಸ್ತುವಾರಿ ಆಗೋದು ಬೇಡ👍
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ 2 ಜನ ಶಾಸಕರಿದ್ದಾರೆ. ಹಾಲಿ ಸಭಾಧ್ಯಕ್ಷ ಯುಟಿ ಖಾದರ್ ಹಿರಿಯರಾಗಿದ್ದರಿಂದ ಅವರಿಗೆ ಚಾನ್ಸ್ ಜಾಸ್ತಿ, ಒಂದು ವೇಳೆ ಸ್ಪೀಕರ್ ಸ್ಥಾನದಲ್ಲೇ ಮುಂದುವರೆದರೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮಂತ್ರಿಯಾಗುವ ಯೋಗವನ್ನು ಮಹಾಲಿಂಗೇಶ್ವರ ದೇವರು ಒದಗಿಸಲಿ ❤️🙏

ಅಕ್ರಮ-ಸಕ್ರಮ ವಿಚಾರದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ.“ಮಾಜಿ ಶಾಸಕ ಸಂಜೀವ...
27/05/2026

ಅಕ್ರಮ-ಸಕ್ರಮ ವಿಚಾರದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ.

“ಮಾಜಿ ಶಾಸಕ ಸಂಜೀವ ಮಠಂದೂರು ಎಕರೆಗೆ 2 ಲಕ್ಷ ರೂ. ಲಂಚ ಪಡೆಯುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ನನ್ನ ಬಳಿ 45 ಜನರ ಮಾಹಿತಿ ಇದೆ,” ಎಂದು ಅಶೋಕ್ ಕುಮಾರ್ ರೈ ಆರೋಪಿಸಿದರು.

“ನಾವು ಅಕ್ರಮ-ಸಕ್ರಮ ಮೂಲಕ ಕೆಲಸ ಮಾಡಿಕೊಟ್ಟವರಲ್ಲಿ ಬಿಜೆಪಿ ಪದಾಧಿಕಾರಿಗಳೂ ಇದ್ದಾರೆ. ಗೌರವ ಇದ್ದಿದ್ದರೆ ಮಾಜಿ ಶಾಸಕರು ತಮ್ಮದೇ ಪಕ್ಷದವರ ಕೆಲಸ ಮಾಡಿಕೊಡಬೇಕಾಗಿತ್ತು. ಎಸಿ ರೂಮ್‌ನಲ್ಲಿ ಕುಳಿತು ಏಜೆಂಟ್‌ಗಳ ಮೂಲಕ ಹಣ ವಸೂಲಿ ಮಾಡಿ ಈಗ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು. 🔥

ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಪುತ್ತೂರ...
27/05/2026

ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಗಂಭೀರ ಆರೋಪ ಮಾಡಿದ್ದಾರೆ. ಪುತ್ತೂರಿನಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ-ಸಕ್ರಮ ಸಂಬಂಧ ಲಂಚದ ಆರೋಪದ ಕುರಿತು ಶಾಸಕರಿಗೆ ಬಹಿರಂಗ ಸವಾಲು ಹಾಕಿದರು.

“ನಾನು ಅಧಿಕಾರದಲ್ಲಿದ್ದ ವೇಳೆ 32 ಸಾವಿರ ಅಕ್ರಮ-ಸಕ್ರಮ ಅರ್ಜಿಗಳನ್ನು ಬಾಕಿ ಇಟ್ಟಿದ್ದೆ ಮತ್ತು ತಾನು ಅಧಿಕಾರಕ್ಕೆ ಬಂದ ಬಳಿಕ ಅವನ್ನೆಲ್ಲ ವಿಲೇವಾರಿ ಮಾಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳುತ್ತಿದ್ದಾರೆ. ಆದರೆ ಪುತ್ತೂರು ತಾಲೂಕಿನಲ್ಲಿ ಈವರೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳ ಸಂಖ್ಯೆಯೇ ವಿಭಿನ್ನವಾಗಿದೆ,” ಎಂದು ಮಠಂದೂರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದರು.

ಅಕ್ರಮ-ಸಕ್ರಮ ಪ್ರಕ್ರಿಯೆಯಲ್ಲಿ 45 ಜನರಿಂದ ಲಂಚ ಪಡೆದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಶಾಸಕರು ತಾಕತ್ತಿದ್ದರೆ ಹಣ ನೀಡಿದ್ದಾರೆ ಎನ್ನಲಾದ ಆ 45 ಮಂದಿಯನ್ನು ಯಾವುದೇ ದೇವಸ್ಥಾನಕ್ಕೆ ಅಥವಾ ಸಾರ್ವಜನಿಕ ವೇದಿಕೆಗೆ ಕರೆತಂದು ನಿಲ್ಲಿಸಲಿ. ನಾವು ಕೂಡ ಬರಲು ಸಿದ್ಧರಿದ್ದೇವೆ. ಯಾರು, ಯಾರಿಗೆ, ಯಾವ ಕಾರಣಕ್ಕೆ ಹಣ ನೀಡಿದ್ದಾರೆ ಎಂಬುದನ್ನು ಆ 45 ಜನರು ಬಹಿರಂಗವಾಗಿ ಹೇಳಲಿ. ಸುಳ್ಳು ಆರೋಪ ಮಾಡಿ ನಂತರ ಪಲಾಯನವಾದ ಮಾಡುವುದು ನಿಲ್ಲಿಸಬೇಕು,” ಎಂದು ಸವಾಲು ಹಾಕಿದರು.

ಇನ್ನೂ ಮಾತನಾಡಿದ ಅವರು, “ಸರ್ಕಾರಿ ಜಾಗವನ್ನು ಬಡವರಿಗೆ ನೀಡುವ ಸಂದರ್ಭದಲ್ಲಿ ನಾನು ಎಂದಿಗೂ ಜಾತಿ, ಧರ್ಮ ಅಥವಾ ರಾಜಕೀಯ ಹಿನ್ನೆಲೆ ಪರಿಗಣಿಸಿಲ್ಲ. ಅದು ರಾಜಧರ್ಮವೂ ಅಲ್ಲ. ಆದರೆ ಈಗ ಹಕ್ಕುಪತ್ರ ವಿತರಿಸಿ ಅದನ್ನೇ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಮತ ಕೇಳುವ ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ,” ಎಂದು ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಹುಟ್ಟುಹಬ್ಬದ ಆಚರಣೆಯನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ ಕಹಳೆ ನ್ಯೂಸ್ ಮುಖ್ಯಸ್ಥರಾದ ಶ್ಯಾಮ್ ಸುದರ್ಶನ್ ಹೊಸಮೂಲೆ 🔥❤️🎉 ದೈಗೋಳಿಯ ಸ...
27/05/2026

ಹುಟ್ಟುಹಬ್ಬದ ಆಚರಣೆಯನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ ಕಹಳೆ ನ್ಯೂಸ್ ಮುಖ್ಯಸ್ಥರಾದ ಶ್ಯಾಮ್ ಸುದರ್ಶನ್ ಹೊಸಮೂಲೆ 🔥❤️🎉

ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮದ ದೇವರ ಮಕ್ಕಳಿಗೆ ಗಜಾನನ ಕ್ರಿಕೆಟರ್ಸ್ ಸಿನಿಮಾ ವೀಕ್ಷಣೆಯ ಅವಕಾಶ ಕಲ್ಪಿಸಿ, ಸಂತಸದ ಕ್ಷಣಗಳನ್ನು ನಿರ್ಮಿಸಿದ್ದಾರೆ ❤️ ತಮ್ಮ ಹುಟ್ಟುಹಬ್ಬವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಸಂದೇಶ ನೀಡುವ ಮೂಲಕ ನಾಲ್ಕು ಜನರಿಗೆ ಮಾದರಿ ಹಾಗೂ ಪ್ರೇರಣೆಯಾಗುವ ಕೆಲಸ ಮಾಡಿದ್ದಾರೆ ಶ್ಯಾಮ್ ಸುದರ್ಶನ್ ಅವ್ರು 🔥👏

ಇಂತಹ ಅರ್ಥಪೂರ್ಣ ಕಾರ್ಯಗಳು ಇನ್ನಷ್ಟು ಜನರಿಗೆ ಸ್ಪೂರ್ತಿಯಾಗಲಿ. ಹುಟ್ಟುಹಬ್ಬದ ಶುಭಾಶಯಗಳು ಮತ್ತು ಸಮಾಜಮುಖಿ ಕಾರ್ಯಗಳಿಗೆ ಅಭಿನಂದನೆಗಳು 🎂❤️🔥

ಇತ್ತೀಚಿನ ಮಾಧ್ಯಮ ವರದಿಗಳು ಮತ್ತು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಕುರ...
27/05/2026

ಇತ್ತೀಚಿನ ಮಾಧ್ಯಮ ವರದಿಗಳು ಮತ್ತು ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ನೋಡಿದರೆ, ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿವೆ. ಆದರೆ ಇದುವರೆಗೆ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂಬುದನ್ನು ಗಮನಿಸಬೇಕು.

ಒಂದುವೇಳೆ ಸಿದ್ದರಾಮಯ್ಯ ಅಧಿಕಾರ ತ್ಯಜಿಸಿದರೆ, ಅದು ಕೇವಲ ಮುಖ್ಯಮಂತ್ರಿ ಬದಲಾವಣೆ ಅಲ್ಲ, ಕಳೆದ ಹಲವು ದಶಕಗಳಿಂದ ಕರ್ನಾಟಕ ರಾಜಕಾರಣದಲ್ಲಿ ಪ್ರಭಾವ ಬೀರಿದ ಒಬ್ಬ ನಾಯಕನ ಸಕ್ರಿಯ ರಾಜಕಾರಣ ಅಧ್ಯಾಯದ ಪ್ರಮುಖ ತಿರುವಾಗಬಹುದು. ಹೋರಾಟ, ಪಾದಯಾತ್ರೆ, ಅಹಿಂದ ನಾಯಕ ಎನ್ನುವ ಹಣೆ ಪಟ್ಟ ಹಾಗೂ ಪ್ರಬಲ ರಾಜಕೀಯ ವ್ಯಕ್ತಿತ್ವದಿಂದ ಸಿದ್ದರಾಮಯ್ಯ ತಮ್ಮದೇ ರಾಜಕೀಯ ಶೈಲಿಯನ್ನು ನಿರ್ಮಿಸಿದ್ದಾರೆ. ಹೀಗಾಗಿ ಅವರ ನಿರ್ಗಮನ ಕಾಂಗ್ರೆಸ್ ಮತ್ತು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮತ್ತೊಂದೆಡೆ, ಡಿ.ಕೆ ಶಿವಕುಮಾರ್ ದೀರ್ಘಕಾಲದ ಪಕ್ಷ ನಿಷ್ಠೆ, ಸಂಘಟನಾ ಸಾಮರ್ಥ್ಯ ಮತ್ತು ಹೈಕಮಾಂಡ್ ಜೊತೆಗಿನ ಉತ್ತಮ ಸಂಬಂಧಗಳಿಂದ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಾಯಕತ್ವ ಬದಲಾವಣೆ ನಡೆದರೂ, ಹೊಸ ಸರ್ಕಾರ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆಯೇ ಅಥವಾ ಹಿರಿಯ ನಾಯಕರ ಪ್ರಭಾವ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗಳು ಈಗಾಗಲೇ ಚರ್ಚೆಗೆ ಕಾರಣವಾಗಿವೆ.

ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ನೋಡಿದರೆ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಸಂದೇಶವನ್ನು ಹೈಕಮಾಂಡ್ ನೀಡುವ ಸಾಧ್ಯತೆಯೂ ಇದೆ. ಆದರೆ ಸಿದ್ದರಾಮಯ್ಯ ಅವರಂತಹ ನಾಯಕನನ್ನು ಗೌರವಯುತವಾಗಿ ನಿರ್ವಹಿಸುವುದು ಪಕ್ಷಕ್ಕೆ ಸವಾಲಾಗಬಹುದು. ಹಾಗೆಯೇ ಡಿಕೆಶಿಗೆ ಅವಕಾಶ ಸಿಕ್ಕರೆ, ಅದು ಹಲವು ವರ್ಷಗಳ ರಾಜಕೀಯ ನಿರೀಕ್ಷೆಯ ಫಲ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯಕ್ಕೆ ಇವೆಲ್ಲವೂ ಮಾಧ್ಯಮ ವರದಿಗಳು, ರಾಜಕೀಯ ವಿಶ್ಲೇಷಣೆಗಳು ಮತ್ತು ಊಹಾಪೋಹಗಳ ಆಧಾರದಲ್ಲಿದ್ದು, ಅಧಿಕೃತ ಘೋಷಣೆ ಹೊರಬರುವವರೆಗೆ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆಯೇ ಅಥವಾ ಇಂದಿನ ನಾಯಕತ್ವವೇ ಮುಂದುವರಿಯುತ್ತದೆಯೇ ಎಂಬುದು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟವಾಗಲಿದೆ. 🔥

#ಸಿದ್ದರಾಮಯ್ಯ

Address

Puttur

Alerts

Be the first to know and let us send you an email when Voice Of Puttur posts news and promotions. Your email address will not be used for any other purpose, and you can unsubscribe at any time.

Share