Voice Of Puttur

Voice Of Puttur Welcome to Voice of Puttur
(1)

Su from So ಚಿತ್ರದಲ್ಲಿ ರವಿ ಅಣ್ಣ ನ ಪಾತ್ರದಲ್ಲಿ ನಟಿಸಿ ಮಿಂಚಿದ ಶನಿಲ್ ಗೌತಮ್ ಅವ್ರು ಬಂಟ್ವಾಳ ದವ್ರು. ಬಂಟ್ವಾಳ ಮೂಡಬಿದ್ರೆ ರಸ್ತೆಯ ಆರಂಭದ...
09/08/2025

Su from So ಚಿತ್ರದಲ್ಲಿ ರವಿ ಅಣ್ಣ ನ ಪಾತ್ರದಲ್ಲಿ ನಟಿಸಿ ಮಿಂಚಿದ ಶನಿಲ್ ಗೌತಮ್ ಅವ್ರು ಬಂಟ್ವಾಳ ದವ್ರು. ಬಂಟ್ವಾಳ ಮೂಡಬಿದ್ರೆ ರಸ್ತೆಯ ಆರಂಭದಲ್ಲೇ ಶನಿಲ್ ಅವ್ರ ಮನೆ. ಊರಲ್ಲಿ ಶನಿಲ್ ಅವ್ರ ಬ್ಯಾನರ್ ತುಂಬಾ ಕಾಣಿಸ್ತಾ ಇದೆ. ಕಾಂತಾರ ಚಿತ್ರದಲ್ಲೂ ಶನಿಲ್ ಅವ್ರು ನಟಿಸಿದ್ರೂ ಸು ಫ್ರಮ್ ಸೋ ಅವ್ರಗೆ ದೊಡ್ಡ ಹೆಸ್ರು ತಂದು ಕೊಟ್ಟಿದೆ. 🔥

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ರು ಓಡಿಸಿದ್ದ ಕೋಣ, bollamballi ಪರಮೇಶ್ವರ ಭಟ್ರ ಮೆಚ್ಚೀನ ಕೋಣ ಅಪ್ಪು ಇನ್ನಿಲ್ಲ. ಸದ್ಗತಿ ಪ್ರಾಪ್ತಿ ಆಗಲಿ ...
08/08/2025

ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ರು ಓಡಿಸಿದ್ದ ಕೋಣ, bollamballi ಪರಮೇಶ್ವರ ಭಟ್ರ ಮೆಚ್ಚೀನ ಕೋಣ ಅಪ್ಪು ಇನ್ನಿಲ್ಲ. ಸದ್ಗತಿ ಪ್ರಾಪ್ತಿ ಆಗಲಿ 🙏

ಮುಂದೊಂದು ದಿನ ನಮ್ಮ ಕರಾವಳಿಯವರೇ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಸ್ ಆಗಿ ಮೆರೆಯುತ್ತಾರೆ ನೋಡಿ 🔥
07/08/2025

ಮುಂದೊಂದು ದಿನ ನಮ್ಮ ಕರಾವಳಿಯವರೇ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಸ್ ಆಗಿ ಮೆರೆಯುತ್ತಾರೆ ನೋಡಿ 🔥

ಸೋತಾಗ ಉಗ್ದೋನಿಗೆ ಗೆದ್ದಾಗ ಹೋಗಳಲೇ ಬೇಕಲ್ವಾ?ಭಾರತ ಕ್ರಿಕೆಟ್ ತಂಡ ಓವಲ್ ನಲ್ಲಿ ರೋಮಾಂಚನಕಾರಿ ಗೆಲುವು ಸಾಧಿಸುವುದರೊಂದಿಗೆ ಭಾರತ ಮತ್ತು ಇಂಗ್ಲ...
05/08/2025

ಸೋತಾಗ ಉಗ್ದೋನಿಗೆ ಗೆದ್ದಾಗ ಹೋಗಳಲೇ ಬೇಕಲ್ವಾ?

ಭಾರತ ಕ್ರಿಕೆಟ್ ತಂಡ ಓವಲ್ ನಲ್ಲಿ ರೋಮಾಂಚನಕಾರಿ ಗೆಲುವು ಸಾಧಿಸುವುದರೊಂದಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊಹಮದ್ ಸಿರಾಜ್, ಪ್ರಸಿದ್ ಕೃಷ್ಣ, ಶುಭ್ ಮನ್ ಗಿಲ್, ಆಕಾಶ್ ದೀಪ್, ಜೈಸ್ವಾಲ್, ರಾಹುಲ್ ಎಲ್ರೂ ಈ ಗೆಲುವಿನ ರೂವಾರಿಗಳು. ಎಲ್ರನ್ನೂ ಹಾಡಿ ಹೊಗಳ್ತಾ ಇದ್ದಾರೆ, ಒಬ್ರನ್ನ ಬಿಟ್ಟು. ಅದು ಮತ್ಯಾರು ಅಲ್ಲ ಕೋಚ್ ಗೌತಮ್ ಗಂಭೀರ್. ಭಾರತ ಟೆಸ್ಟ್ ಸೋತಾಗ ಮೊದ್ಲು ಟ್ರೋಲ್ ಗೆ ಒಳಗಾಗೋದು ಕೋಚ್ ಗಂಭೀರ್ 🙄. ಗಂಭೀರ್ ಟೀಂ ಸೆಲೆಕ್ಷನ್ ಮತ್ತು strategy ನೆ ಇದಕ್ಕೆ ಕಾರಣ ಅಂತ ಗಂಭೀರ್ ನ ಮನಸೋ ಇಚ್ಚೆ ಟ್ರೋಲ್ ಮಾಡೋ ಜನ ಇವತ್ತು ಗಂಭೀರ್ ಗೆ ದ್ದಾಗ ಬಾಯಿಗೆ 5 ರೂಪಾಯಿ ಫೇವಿ ಕ್ವೀಕ್ ಹಾಕೊಂಡ್ ಕೂತಿದ್ದಾರೆ 😁 ಗೆದ್ದಾಗ ಟೀಂ ಎಫರ್ಟ್, ಸೋತಾಗ ಕೋಚ್ ಮಿಸ್ಟೇಕ್ ಅಂತಾ ಹೇಳೋರೆ ಜಾಸ್ತಿ 😁 ಇನ್ನು ಕೆಲವ್ರು ಒಂದು ಹೆಜ್ಜೆ ಮುಂದೆ ಹೋಗಿ ಗಂಭೀರ್ ನ ಕೋಚ್ ಸ್ಥಾನದಿಂದ ಕೆಳಗಿಳಸದೆ ಹೋದ್ರೆ ಭಾರತ ಕ್ರಿಕೆಟ್ ತಂಡವನ್ನೇ ಮಕಾಡೆ ಮಲಗಿಸ್ತಾನೆ. ಈ ಸರಣಿಯೆ ಗಂಭೀರ್ ನ ಕೊನೆಯ ಸರಣಿ ಆಗಿರಲಿ ಅಂತಾ ಹೇಳಿದ್ರು. ಆದ್ರೆ ಅದೆಲ್ಲಡಿಕ್ಕೂ ಭಾರತ ಓವಲ್ ಟೆಸ್ಟ್ ಗೆಲುವು ಬ್ರೇಕ್ ಅಂತೂ ಹಾಕಿದೆ.

ಗಂಭೀರ್ ಹೆಸರಿನಲ್ಲಿ ಮಾತ್ರ ಅಲ್ಲ ಸ್ವಭಾವದಲ್ಲೂ ಗಂಭೀರನೇ. ಹಿಂದಿನ ಕೋಚ್ ರವಿ ಶಾಸ್ತ್ರಿ ತರ ಪಾರ್ಟಿ ಫ್ರೀಕ್ ಅಲ್ಲ. ಫಿಟ್ನೆಸ್, ಅಭ್ಯಾಸದ ಕಡೆಗೇನೇ ಜಾಸ್ತಿ ಗಮನ. ಒಂತರ ಸಿಕ್ಕಾಪಟ್ಟೆ ಶಿಸ್ತಿನ ಮನುಷ್ಯ. ಅದೇ ಶಿಸ್ತಿನ ಕಾರಣ 2 ಸಲ KKR ನ ಚಾಂಪಿಯನ್ ಮಾಡಿಸಿದ್ದು ಕ್ಯಾಪ್ಟನ್ ಆಗಿ ಮತ್ತೊಮ್ಮೆ ಮೆಂಟರ್ ಆಗಿ. ಗಂಭೀರ್ ನ ಕೋಚಿಂಗ್ ಮಾಡೆಲ್ ಎಲ್ರಿಗೂ ಇಷ್ಟ ಆಗಲ್ಲ ಬಿಡಿ. ಆದ್ರೆ ಅವಯ್ಯನ ಗುರಿ ಮಾತ್ರ ತಪ್ಪಿಲ್ಲ ಇಲ್ಲಿ ವರೆಗೆ. ಶುಭಮನ್ ಗಿಲ್ ಅಂತ ಸಣ್ಣ ವಯಸ್ಸಿನ ನಾಯಕ, ಗಂಭೀರ್ ನಂತ ಕೋಚ್ ಈ ಜೋಡಿಯ ಜೈತ್ರ ಯಾತ್ರೆ ಇದೆ ತರ ಮುಂದುವರಿಯಲಿ 🔥❤️

2017 ರಲ್ಲಿ ಗಂಭೀರ್ ಬಗ್ಗೆ ಹೊಸದಿಗಂತ ಪತ್ರಿಕೆಗೆ ಬರೆದಿದ್ದ ಲೇಖನ 👇

ಈ ಸಲದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಯಾವುದೇ ಥ್ರಿಲ್ಲರ್ ಮೂವಿಗೆ ಕಡಿಮೆ ಇರ್ಲಿಲ್ಲ🔥🔥
04/08/2025

ಈ ಸಲದ ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಯಾವುದೇ ಥ್ರಿಲ್ಲರ್ ಮೂವಿಗೆ ಕಡಿಮೆ ಇರ್ಲಿಲ್ಲ🔥🔥

ನಾರಾವಿ ಯುವರಾಜ್ ಜೈನ್ 🔥ಪಲಾಯ್ದ ಪಿಲಿ ಅಂತಾನೆ ಇವರಿಗೆ ಬಿರುದು 🔥ಕರ್ನಾಟಕ ಸರಕಾರದ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರು 🔥 ಅಡ್ಡಹಲಗೆ, ಕನಹಲಗೆ ...
02/08/2025

ನಾರಾವಿ ಯುವರಾಜ್ ಜೈನ್ 🔥ಪಲಾಯ್ದ ಪಿಲಿ ಅಂತಾನೆ ಇವರಿಗೆ ಬಿರುದು 🔥ಕರ್ನಾಟಕ ಸರಕಾರದ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರು 🔥 ಅಡ್ಡಹಲಗೆ, ಕನಹಲಗೆ ಯಲ್ಲಿ ಕೋಣಗಳನ್ನು ಓಡಿಸಿ ಮೆಡಲ್ ಗಳನ್ನು ಮಾಡಿದ ಕಂಬಳದ ಹಿರಿಯ ಓಟಗಾರರು. 66 ವರ್ಷದ ವರೆಗೂ ಹಲಗೆಯಲ್ಲಿ ನಿಂತು ಕೋಣ ಓಡಿಸುತ್ತ ಇದ್ದ ಛಲಗಾರ 🔥ಕೋಣ ಓಡಿಸುತ್ತಿದ್ದಾಗ ಬಿದ್ದು ಗಾಯಗೊಂಡ ನಂತರ ತಾವೇ ಅಡ್ಡಹಲಗೆಯ ಕೋಣಗಳ ಯಜಮಾನರಾಗಿ 2024-2025 ಸಾಲಿನ ಅಡ್ಡಹಲಗೆಯ ವಿಭಾಗದ ಚಾಂಪಿಯನ್ ಕೂಡ ಆದವರು 🔥ಕೋಣಗಳ ಸೆಲೆಕ್ಷನ್, ಯುವ ಓಟಗಾರರು ಕಂಬಳದಲ್ಲಿ ಕೋಣ ಹೇಗೆ ಓಡಿಸಬೇಕು ಇದೆಲ್ಲದರ ಬಗ್ಗೆ ಅವರ ಜ್ಞಾನ ಅಪಾರ 🔥 ಇವತ್ತು ನಾರಾವಿ ಯುವರಾಜ್ ಜೈನ್ರಿಗೆ ಮಂಗಳೂರು ವಕೀಲರ ಸಂಘದ ಆಟಿದ ನೆಂಪು ಕಾರ್ಯಕ್ರಮದಲ್ಲಿ ಗೌರವ ಪೂರ್ವಕ ಸನ್ಮಾನ ನಡೆಯಿತು 🔥❤️

ಇವ್ರು ಪುತ್ತೂರಿನ ಹೋಟೆಲ್ ಮಹೇಶ್ ಪ್ರಸಾದ್ ನ ಕ್ಯಾಶಿಯರ್ ರಘುರಾಮ ತುಂಗ. ನಗುಮುಖದ ವ್ಯಕ್ತಿ. ಪ್ರಾಯಶ ಪುತ್ತೂರಿನ ಹೋಟೆಲಗಳಲ್ಲಿ ಅತಿ ಹಿರಿಯ ಕ್...
31/07/2025

ಇವ್ರು ಪುತ್ತೂರಿನ ಹೋಟೆಲ್ ಮಹೇಶ್ ಪ್ರಸಾದ್ ನ ಕ್ಯಾಶಿಯರ್ ರಘುರಾಮ ತುಂಗ. ನಗುಮುಖದ ವ್ಯಕ್ತಿ. ಪ್ರಾಯಶ ಪುತ್ತೂರಿನ ಹೋಟೆಲಗಳಲ್ಲಿ ಅತಿ ಹಿರಿಯ ಕ್ಯಾಶಿಯರ್ ಇವ್ರೇ ಅನ್ಸುತ್ತೆ. ಹಳೆಯ ಹೋಟೆಲ್ ಗಣೇಶ್ ಪ್ರಸಾದ್ ಇದ್ದಾಗಲೂ ಇವ್ರೇ ಕ್ಯಾಶಿಯರ್. ಪ್ರತಿನಿತ್ಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಟೆಲ್ ನಿಂದ ಹರಿವಾಣದಲ್ಲಿ ಹಣ್ಣು ಕಾಯಿ ತಗೊಂಡು ಹೋಗ್ತಾ ಇದ್ರು. ಹಳೆ ಹೋಟೆಲ್ ಅನಿವಾರ್ಯ ಕಾರಣದಿಂದ ಬಂದ್ ಮಾಡಬೇಕಾಗಿ ಬಂದಾಗ ಕೊನೆಯ ದಿನ ರಘುರಾಮ ತುಂಗಾ ಅವ್ರನ್ನು ಭೇಟಿ ಆಗಿದ್ದಾಗ ಹೊಸ ಹೋಟೆಲ್ ಮಾಡ್ತಾರೆ ಯಜಮಾನ್ರು ಅಲ್ಲಿಗೂ ನಾನೆ ಕ್ಯಾಶಿಯರ್ ಅಂತ ಹೇಳಿದ್ದಾರೆ ಅಂದಿದ್ರು. ಈಗ ಮಹೇಶ್ ಪ್ರಸಾದ್ ಹೋಟೆಲ್ ನಲ್ಲೂ ಅವ್ರೆ ಕಾಶಿಯರ್ ಆಗಿದ್ದಾರೆ. ಇವರ ಜೀವನ ಪ್ರೀತಿಗೆ ಸಲಾಂ ❤️🔥👏

ಕೆಂಪು ಕಲ್ಲಿನ ಸಮಸ್ಯೆ ಪರಿಹಾರಕ್ಕೆ ಶಾಸಕರ ನಿಯೋಗದ ಜೊತೆಗೆ ಸಿಎಂ ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ❤️
30/07/2025

ಕೆಂಪು ಕಲ್ಲಿನ ಸಮಸ್ಯೆ ಪರಿಹಾರಕ್ಕೆ ಶಾಸಕರ ನಿಯೋಗದ ಜೊತೆಗೆ ಸಿಎಂ ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ❤️

ನಾಗರ ಪಂಚಮಿ🙏😍ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ಅಂದರೆ ನಾಗರ ಪಂಚಮಿಯೊಂದಿಗೆ ನಾಡಿನಾದ್ಯಂತ ಹಬ್ಬಗಳ ಪರ್ವ ಕಾಲ ಆರಂಭವಾಗುತ್ತದೆ.ಮುಂದೆ ರಕ್ಷಾ ...
29/07/2025

ನಾಗರ ಪಂಚಮಿ🙏😍

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ಅಂದರೆ ನಾಗರ ಪಂಚಮಿಯೊಂದಿಗೆ ನಾಡಿನಾದ್ಯಂತ ಹಬ್ಬಗಳ ಪರ್ವ ಕಾಲ ಆರಂಭವಾಗುತ್ತದೆ.
ಮುಂದೆ ರಕ್ಷಾ ಬಂಧನ, ಕೃಷ್ಣಾಷ್ಠಮಿ, ಗಣೇಶ ಚತುರ್ಥಿ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳು ಬರುತ್ತವೆ😍
ತುಳುನಾಡಿನಲ್ಲಿ ನಾಗದೇವರಿಗೆ ವಿಶೇಷ ಪ್ರಾಧಾನ್ಯತೆ ಇದೆ ಮತ್ತು ಎಲ್ಲ ನಾಗ ದೇವರ ಸಾನಿಧ್ಯದಲ್ಲಿ ತಂಬಿಲವನ್ನು ಮಾಡಲಾಗುತ್ತದೆ.🙏
ನಾಗರ ಪಂಚಮಿಯ ದಿನ ಮಾಡುವ ವಿಶೇಷ ಸಿಹಿತಿಂಡಿಯನ್ನು ಗೆಣಸಲೆ ಅಥವಾ ತುಳುವಿನಲ್ಲಿ ಮಂಜಲ್ ಇರೆತ್ತ ಗಟ್ಟಿ ಎಂದು ಕರೆಯುತ್ತಾರೆ😋

ಸಾಧಿಸಲು ಅಸಾಧ್ಯ ಯಾವುದು ಇಲ್ಲ ಸಾಧಿಸೋ ಛಲ ಬೇಕು ಅನ್ನೋದನ್ನ ಪ್ರೂವ್ ಮಾಡಿದ್ದಾರೆ ಸಹೋದರಿ ರಿಮೋನ ಪಿರೇರಾ 🔥❤️ ಸತತ 170 ಗಂಟೆಗಳ ಕಾಲ ಭರತನಾಟ್...
28/07/2025

ಸಾಧಿಸಲು ಅಸಾಧ್ಯ ಯಾವುದು ಇಲ್ಲ ಸಾಧಿಸೋ ಛಲ ಬೇಕು ಅನ್ನೋದನ್ನ ಪ್ರೂವ್ ಮಾಡಿದ್ದಾರೆ ಸಹೋದರಿ ರಿಮೋನ ಪಿರೇರಾ 🔥❤️ ಸತತ 170 ಗಂಟೆಗಳ ಕಾಲ ಭರತನಾಟ್ಯ ಮಾಡುವ ಮೂಲಕ ವಿಶ್ವದಾಖಲೆ ಬರೆದ ಮಂಗಳೂರಿನ ಹೆಣ್ಣು ಮಗಳಿಗೆ ಅಭಿನಂದನೆಗಳು 🔥❤️

28/07/2025

ಧುಮ್ಮಿಕ್ಕುತ್ತಿರೋ ಕೇರಳದ ಅತಿರಪಳ್ಳಿ ಜಲಪಾತ😍🔥

ಸೋಲಿಲ್ಲದ ಸರದಾರ, ಕಂಬಳ ಕ್ರೀಡೆಯ ಚಾಂಪಿಯನ್ ಪದವು ಕಾನಡ್ಕ ದೂಜ ನಿಗೆ ನಮನ ಯುವ ಬಾಂಧವೆರ್ ಮತ್ತು ಶ್ರೀ ಮಹಾದೇವಿ ಭಜನಾ ಮಂಡಳಿ ರಿ. ಕೆಲ್ಲಪುತ್ತ...
28/07/2025

ಸೋಲಿಲ್ಲದ ಸರದಾರ, ಕಂಬಳ ಕ್ರೀಡೆಯ ಚಾಂಪಿಯನ್ ಪದವು ಕಾನಡ್ಕ ದೂಜ ನಿಗೆ ನಮನ ಯುವ ಬಾಂಧವೆರ್ ಮತ್ತು ಶ್ರೀ ಮಹಾದೇವಿ ಭಜನಾ ಮಂಡಳಿ ರಿ. ಕೆಲ್ಲಪುತ್ತಿಗೆ ಇವುಗಳ ಸಹಯೋಗದಲ್ಲಿ 10 ನೇ ವಷ೯ದ "ಕೆಸರ್‌ಡ್ ಒಂಜಿ ದಿನ" ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಕ್ಷಣ 🔥🔥

Address

Puttur

Alerts

Be the first to know and let us send you an email when Voice Of Puttur posts news and promotions. Your email address will not be used for any other purpose, and you can unsubscribe at any time.

Share