Nam Samachara

Nam Samachara ಕನ್ನಡ ಪಾಕ್ಷಿಕ ಪತ್ರಿಕೆ

31/05/2023

ವರ್ಗಾವಣೆಗೆ ಕಾಲಮಿತಿ ಅಗತ್ಯ ; ಮ.ಸ.ನಂಜುಂಡಸ್ವಾಮಿ

09/02/2023

40 ವರ್ಷಗಳ ನಂತರ ಸಾಗರದ 'ಅಗ್ರಹಾರ ದತ್ತ ಮಂದಿರ'ದಲ್ಲಿ ಲೋಕಕಲ್ಯಾಣಾರ್ಥವಾಗಿ ದಿನಾಂಕ 24-02-2023 ಶುಕ್ರವಾರದಿಂದ ದಿನಾಂಕ 26-02-2023 ಭಾನುವಾರದ ವರೆಗೆ ನಡೆಯುತ್ತಿರುವ ಮಹಾರುದ್ರಯಾಗದಲ್ಲಿ ತಾವೆಲ್ಲರೂ ಭಾಗವಹಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ...

Send a message to learn more

ನಮ್ಮ ಈ ಯುಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ... ಹೆಚ್ಚಿನ ವಿಡಿಯೋಗಳನ್ನು ಆನಂದಿಸಿ!!!Page Link: https://www.youtube.com/        ...
08/02/2023

ನಮ್ಮ ಈ ಯುಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ... ಹೆಚ್ಚಿನ ವಿಡಿಯೋಗಳನ್ನು ಆನಂದಿಸಿ!!!

Page Link: https://www.youtube.com/

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"January 16-30, 2022 Please Read & Support Nam Samachar...
21/01/2023

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"

January 16-30, 2022

Please Read & Support Nam Samachara

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"January 01-15, 2022 Please Read & Support Nam Samachar...
07/01/2023

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"

January 01-15, 2022

Please Read & Support Nam Samachara

ಕಳೆದ ವರ್ಷ 2022 ಆಗಸ್ಟ್ 15ರಂದು ಬಿಜಾಪುರದಲ್ಲಿ ನನ್ನ ಆಪ್ತ  ಸ್ನೇಹಿತರಾದ ಪ್ರಕಾಶ್ ಗಿಡ್ಡೆ ಅವರ ಶಾಲೆಯ  ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ...
03/01/2023

ಕಳೆದ ವರ್ಷ 2022 ಆಗಸ್ಟ್ 15ರಂದು ಬಿಜಾಪುರದಲ್ಲಿ ನನ್ನ ಆಪ್ತ ಸ್ನೇಹಿತರಾದ ಪ್ರಕಾಶ್ ಗಿಡ್ಡೆ ಅವರ ಶಾಲೆಯ ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ಜ್ಞಾನ ಯೋಗಶ್ರಮದಲ್ಲಿ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೆ.. ಅಂದು ನಾನು ನನ್ನ ಜೀವಮಾನದಲ್ಲಿ ನೋಡಿದ ಒಂದು ಪರಮಾಶ್ಚರ್ಯ ನೋಟ ವೆಂದರೆ ಕಾವಿ ಧರಿಸದ ಸರಳ ಉಡಪನ್ನು ಧರಿಸಿದ್ದ ಒಬ್ಬ ಮಹಾತ್ಮರಿಗೆ ಕಾವಿ ಧರಿಸಿದ್ದ ಸ್ವಾಮಿಗಳು ಕಾಲು ಮುಟ್ಟಿ ನಮಸ್ಕರಿಸುತ್ತಿದ್ದನ್ನು ನಾನು ಮೊದಲ ಬಾರಿಗೆ ನೋಡಿದ್ದು ಇಂಥ ಪರಮ ಪುರುಷರನ್ನು ನಾನು ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೆ ಎಂಬುದೇ ನನ್ನ ಜೀವನದ ನೆನಪಿನ ಸಂತಸದ ಕ್ಷಣಗಳು.. ಪೂಜ್ಯರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇವೆ..

ಮ ಸ ನಂಜುಂಡಸ್ವಾಮಿ.
ಪ್ರಧಾನ ಸಂಪಾದಕರು
ನಮ್ ಸಮಾಚಾರ ಪಾಕ್ಷಿಕ ಪತ್ರಿಕೆ ಸಾಗರ

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"December 16-31, 2022Please Read & Support Nam Samachar...
01/01/2023

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"

December 16-31, 2022

Please Read & Support Nam Samachara

17/12/2022

ಕರೋನಾ ಸಂದರ್ಭದಲ್ಲಿ ಪ್ರಾರಂಭವಾದ ರುದ್ರ ಪಾರಾಯಣ ವೈದಿಕ ಪರಿಷತ್, ಶ್ರೀ ಶೃಂಗೇರಿ ಶಂಕರ ಮಠ, ಜೋಶಿ ಫೌಂಡೇಶನ್, ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ, ನಮ್ ಸಮಾಚಾರ ಪತ್ರಿಕಾ ಬಳಗ ಹಾಗೂ ವಿವಿಧ ವಿಪ್ರ ಸಂಘಟನೆಗಳ ಸಹಕಾರದಿಂದ ಪ್ರತಿ ಸೋಮವಾರ ಹಾಗೂ ಭಕ್ತರ ಇಚ್ಛೆಯಂತೆ ವಿಶೇಷ ಸಂದರ್ಭಗಳಲ್ಲಿ ನಡೆಯುತ್ತಿದ್ದು ಪ್ರಸ್ತುತ 174ನೇ ರುದ್ರಪಾರಾಯಣವು ಸಾಗರ ವಿಜಯನಗರ ಎರಡನೇ ಹಂತದಲ್ಲಿರುವ ಶ್ರೀ ಶ್ರೀಧರ ಕೃಪಾದಲ್ಲಿ 17 ರ ಶನಿವಾರ ಬೆಳಿಗ್ಗೆ ಎಂಟು ಗಂಟೆಯಿಂದ ಜಗದ್ಗುರು ಶ್ರೀ ಶ್ರೀ ಆದಿ ಶಂಕರಾಚಾರ್ಯ ಅದ್ವೈತ ಪೀಠಂ ಬೆಂಗಳೂರು ದಕ್ಷಿಣ.. ಇದರ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಮ್ ಸಮಾಚಾರ ಪತ್ರಿಕೆ
ಜೋಶಿ ಫೌಂಡೇಶನ್
ಸಂಪರ್ಕಿಸಿ: +91 94487 21572

ಈ ಬಾರಿಯ ‘ನಂ ಸಮಾಚಾರ’ ಪಾಕ್ಷಿಕದಲ್ಲಿ ಶ್ರೀಮತಿ ಸುಧಾ ಜಯಪ್ರಕಾಶ್ ತಲವಾಟ, ಇವರು ನಡೆಸಿದ ನಮ್ಮೂರ ಹಿರಿಯ ವೈದ್ಯ ಡಾ. ಪಿ.ಎಸ್.ಮಂಜಪ್ಪ ಅವರ ಜೊತೆ...
17/12/2022

ಈ ಬಾರಿಯ ‘ನಂ ಸಮಾಚಾರ’ ಪಾಕ್ಷಿಕದಲ್ಲಿ ಶ್ರೀಮತಿ ಸುಧಾ ಜಯಪ್ರಕಾಶ್ ತಲವಾಟ, ಇವರು ನಡೆಸಿದ ನಮ್ಮೂರ ಹಿರಿಯ ವೈದ್ಯ ಡಾ. ಪಿ.ಎಸ್.ಮಂಜಪ್ಪ ಅವರ ಜೊತೆಗಿನ ಮಾತುಕತೆಯ ವಿವರವನ್ನು ಪ್ರಕಟಿಸಲಾಗಿದೆ. ಪತ್ರಿಕೆ ಮುದ್ರಣವಾಗಿ ಬಂದಿದೆ. ಈ ಚಳಿ, ಮಳೆ ವಾತಾವರಣದಲ್ಲಿ ವೈದ್ಯರ ಆರೋಗ್ಯದಲ್ಲಿ ಸ್ವಲ್ಪ ವೆತ್ಯಾಸ ಉಂಟಾಗಿದೆ ಎಂಬ ಮಾಹಿತಿ ನಮ್ಮ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಮಾ. ವೆಂ. ಸ. ಪ್ರಸಾದ್ ಮುಖಾಂತರ ತಿಳಿಯಿತು . ಹಾಗಾಗಿ ಅವರನ್ನು ಒಂದು ಸಲ ನೋಡಿ, ಅವರ ಕುರಿತ ಲೇಖನ ಇರುವ ಸಂಚಿಕೆಯನ್ನು ಅವರ ಕೈಗಿತ್ತು ಬಂದರೆ ಆ ಹಿರಿಯ ಜೀವ ಖುಷಿಯಾದೀತು ಎಂಬ ಭಾವ ಮನದಾಳದಲ್ಲಿತ್ತು.
ನಾನು ಅವರದೇ ಕೇರಿಯಲ್ಲಿ ಬಹಳ ವರ್ಷಗಳು ಇದ್ದರೂ ಕೂಡ ನಮ್ಮಿಬ್ಬರ ನಡುವೆ ತುಂಬಾ ಮಾತುಕತೆ ಅಥವಾ ಚರ್ಚೆ ಇರಲಿಲ್ಲ. ವಯಸ್ಸಿನ ಅಂತರವೂ ಇರಬಹುದು. ಆದರೆ ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಅವರನ್ನು ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸಂದರ್ಭದಲ್ಲಿ ಅವರನ್ನು ಗೌರವಿಸಬೇಕೆಂದು ಬಹಳ ಪ್ರಯತ್ನ ಪಟ್ಟೆವು ಆದರೆ ಅವರು ಸುತಾರಾಮ್ ಒಪ್ಪಲೇ ಇಲ್ಲ. ಈಗಲೂ ಅವರನ್ನು ಗೌರವಿಸುವ ಪ್ರಯತ್ನ ನಿಂತಿಲ್ಲ.ಇವೆಲ್ಲ ಕಾರಣಗಳು ಸೇರಿ ಪತ್ರಿಕೆಯನ್ನು ಅವರಿಗೆ ನೀಡಲು ಅವರ ಮನೆಗೆ ದೌಢಾಯಿಸಿದೆ.
ಅವರ ಮನೆಗೆ ಹೋದಾಗ ಅವರ ಮಗಳು ಬಂದು, ಡಾಕ್ಟ್ರು ಊಟ ಮಾಡುತ್ತಿದ್ದಾರೆ ಬನ್ನಿ ಕೂತುಕೊಳ್ಳಿ ಎಂದು ಹೇಳಿದರು. ಒಳಗೆ ಹೋಗಿ ನಂಜುಂಡಸ್ವಾಮಿಯವರು ಬಂದಿದ್ದಾರೆ ಎಂದು ಅಪ್ಪನಿಗೆ ತಿಳಿಸಿದರು. ಕೂಡಲೇ ಅವರು, ಒಳಗೆ ಬನ್ನಿ ಎಂದು ವಿಶ್ವಾಸವಿಟ್ಟು ಆಹ್ವಾನಿಸಿದರು. ಊಟ ಮಾಡುತ್ತಾ ಸಾಗಿತ್ತು ನಮ್ಮಿಬ್ಬರ ಮಾತುಕತೆ. ದೈಹಿಕವಾಗಿ ವಯೋ ಸಹಜ ಕಾರಣದಿಂದಾಗಿ ಸ್ವಲ್ಪ ಸುಸ್ತಾಗಿದ್ದಾರೆ. ಕಿವಿ ಮಂದವಾಗಿದೆ. ಆದರೆ ಕಂಚಿನ ಕಂಠ ಹಾಗೇ ಇದೆ. ಮಾತಿನಲ್ಲಿ ಸ್ಪಷ್ಟತೆ, ನೆನಪುಗಳು ಒಂದು ಚೂರು ಆಚೀಚೆ ಆಗಿಲ್ಲ.
ನಾನು ಸಾಗರಕ್ಕೆ ಬಂದ ದಿನಗಳ ವಿಚಾರದಿಂದ ಆರಂಭಿಸಿ, ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ ಅವರು ಒಂದು ಹಂತದಲ್ಲಿ ಹೇಳಿದರು, "ನೋಡಿ, ನಂಜುಂಡಸ್ವಾಮಿಯವರೇ, ನಿಮ್ಮ ಹೋರಾಟ, ಪ್ರಾಮಾಣಿಕತೆ ನನಗೆ ಗೊತ್ತು. ಹಾಗೂ ತ್ರಿಮತಸ್ಥ ಬ್ರಾಹ್ಮಣರನ್ನು ಸಂಘಟಿಸಲು ಮಾಡಿದ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮನ್ನು ಹತ್ತಾರು ವರ್ಷಗಳ ಹಿಂದೆಯೇ ಕೆಲವರು ಮುಗಿಸಬೇಕು ಎಂದುಕೊಂಡಿದ್ದರು. ಇಲ್ಲಿಂದ ಓಡಿಸಬೇಕೆಂದು ಇನ್ನು ಕೆಲವರು ಪ್ರಯತ್ನ ಪಟ್ಟರು. ಆದಾಗಿಯೂ ಅದರಲ್ಲೇ ಕೆಲವರು ನಿಮ್ಮಲ್ಲಿಯೇ ಸೇರಿಕೊಂಡರು. ಆದರೆ ಇದ್ಯಾವದು ಆಗದೆ ಹತಾಶರಾಗಿ ಕೈಕಟ್ಟಿ ಕುಳಿತುಕೊಂಡರು. ನೀವು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ನಿಮ್ಮ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿರುವುದು ನನಗೆ ಗೊತ್ತಿದೆ. ನಿಮಗೆ ದೇವರ ಆಶೀರ್ವಾದ ತುಂಬಾ ಚೆನ್ನಾಗಿದೆ"
"ಸರ್ಕಾರಿ ಆಸ್ಪತ್ರೆಯ ವಿಷಯ ಬಂದಾಗೆಲ್ಲ ನಿಮ್ಮ ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ ನಾನು ಇಲ್ಲಿಯವರೆಗೂ ನಿಮ್ಮ ಬಗ್ಗೆ ಸಾರ್ವಜನಿಕ ವಲಯದಲ್ಲಿ ಲಂಚಕೋರ ಎಂದಾಗಲಿ, ಭ್ರಷ್ಟ ಎಂದಾಗಲಿ ಇಲ್ಲಿಯವರೆಗೂ ಕೇಳಿಬಂದಿಲ್ಲ. ನಿಮಗೆ ಇದಕ್ಕಿಂತ ಹೆಚ್ಚಿಗೆ ಏನು ಬೇಕು ಎಂದು ಅವರು ಕೇಳಿದಾಗ, ಈ ಭೂಮಿಯಲ್ಲಿ ಹುಟ್ಟಿದ್ದಕ್ಕೂ ನನ್ನ ಜನ್ಮ ಸಾರ್ಥಕವಾಯಿತು ಎಂದುಕೊಂಡೆ.
ನಾನು ಅವರಿಗೆ ಹೇಳಿದೆ, "ನೀವಂದುಕೊಂಡಷ್ಟು ನಾನು ಪ್ರಾಮಾಣಿಕ ಅಲ್ಲ ಎಂದು ಹೇಳಿದೆ. ಕೆಲವರು ಈ ಕೆಲಸ ಆಗುವುದಿಲ್ಲ ಎಂದು ಹೇಳಿದರೂ ಕೂಡಾ, ಇಲ್ಲ; ಇದು ನಿಮ್ಮಿಂದ ಆಗುತ್ತದೆ. ದಯಮಾಡಿ ನೀವು ಒಂದು ಬಾರಿ ಹೇಳಿ, ನಮ್ಮ ಜೊತೆ ಬೆಂಗಳೂರಿಗೆ ಬನ್ನಿ ಅಥವಾ ನೀವು ಹೋಗಿ ಬನ್ನಿ ಎಂದು ಒತ್ತಾಯ ಮಾಡುತ್ತಾರೆ. ಕೆಲವೊಮ್ಮೆ ತುಂಬಾ ಅನಿವಾರ್ಯವಾಗಿ ಈ ಕೆಲಸಕ್ಕೆ ಮುಲಾಜಿಗೆ ಒಳಗಾಗಿ ಕೈ ಹಾಕಲೇ ಬೇಕಾಗುತ್ತದೆ. ಇದು ನನ್ನೊಬ್ಬನ ಸಮಸ್ಯೆಯಲ್ಲ ಸಾಮಾಜಿಕ ಜೀವನದಲ್ಲಿ ಸ್ವಲ್ಪ ಪ್ರಭಾವವಿರುವ ಎಲ್ಲಾ ಮಧ್ಯಮ ವರ್ಗದವರ ಸಮಸ್ಯೆಯೂ ಇದೇ ಆಗಿರುತ್ತದೆ. ಹೋಗುವ ಬಸ್ಸು ಅಥವಾ ಟ್ರೈನ್ ಅಲ್ಲಿ ತಂಗುವ ವಸತಿ ಗೃಹ ಓಡಾಡುವ ವಾಹನಗಳು ನಮ್ಮಗಳ ಸ್ವಂತದಾಗಿರುವುದಿಲ್ಲ . ಹಾಗಾಗಿ ಖರ್ಚಾಗುವ ಹಣವನ್ನು ಅವರಿಂದ ಪಡೆಯಲೇಬೇಕಾಗುತ್ತದೆ. ಅವರ ಕೆಲಸವಾದರೆ ನಾವು ಒಳ್ಳೆಯವರಾಗುತ್ತೇವೆ . ಇಲ್ಲದಿದ್ದರೆ ನಾವು ಅವರ ದೃಷ್ಟಿಯಲ್ಲಿ ಭ್ರಷ್ಟರಾಗುತ್ತೇವೆ. ತಮ್ಮ ಕೆಲಸವಾದ ಕೂಡಲೇ ಕೆಲವರು ತುಂಬಾ ಥ್ಯಾಂಕ್ಸ್ ಸರ್ ಎಂದು ತಲೆ ಮೇಲೆ ಕೈ ಎಳೆದು ಹೋದ ಸಂದರ್ಭವೂ ಇದೆ ಎಂದೆ. ಪ್ರಸ್ತುತ ನೀವು ಒಳ್ಳೆಯ ಉದ್ದೇಶಗನ್ನಿಟ್ಟುಕೊಂಡು ಪತ್ರಿಕೆಯನ್ನು ಪ್ರಾರಂಭಿಸಿದ್ದೀರಿ. ಪತ್ರಿಕೆಯ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಓದಿಸಿಕೊಂಡು ಹೋಗುತ್ತದೆ. ನನ್ನ ಚಂದಾ ಹಣವನ್ನು ನೀವು ತೆಗೆದುಕೊಳ್ಳಿ. ತುಂಬಾ ಸಾಲ ಮಾಡಬೇಡಿ, ನಿಮಗೂ ಈಗ ವಯಸ್ಸಾಗುತ್ತಿದೆ, ನಾವು ಮುಂದಿನವರೆಗೆ ಸಾಲದ ಹೊರೆ ಮಾಡಿ ಹೋಗಬಾರದು ಎಂದು ಸೂಕ್ಷ್ಮವಾಗಿ ಹೇಳಿದ ಮಾತು ನನಗೆ ‘ಎಚ್ಚರಿಕೆಯ ಗಂಟೆ’ ಎಂದು ಭಾವಿಸಿದೆ.
ಇಂತಹ ವಿಚಾರಗಳ ಬಂದಾಗ ನಾನು ನನ್ನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಇಂತಹ ದ್ವಂದ್ವಗಳ ನಡುವೆಯೂ ನನ್ನಿಂದ ಆದಷ್ಟು ಯಾರಿಗೂ ತೊಂದರೆ ಆಗಬಾರದು. ಬೇರೆಯವರ ಕಣ್ಣಿನಲ್ಲಿ ದುಃಖದ ನೀರು ಬರಿಸಲು ತುಂಬಾ ಬುದ್ಧಿವಂತಿಕೆ ಬೇಕಾಗಿಲ್ಲ. ಆದರೆ ಬೇರೆಯವರನ್ನು ಸಂತೋಷಪಡಿಸಲು ಹೃದಯ ವೈಶಾಲ್ಯ ಇರಬೇಕಷ್ಟೇ. ಇಂತಹ ಒಳ್ಳೆಯ ಗುಣವಂತ ಡಾಕ್ಟರ್ ಗಳೂ ಸದಾ ಆರೋಗ್ಯವಾಗಿರಲಿ ಎಂದು ನನ್ನ ಆರಾಧ್ಯ ದೈವ ಪರಮಪೂಜ್ಯ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳಲ್ಲಿ ಪ್ರಾರ್ಥಿಸುತ್ತಾ ಅವರ ಪಾದಗಳಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದು ಹೊರಬಂದೆ.

- ಮ.ಸ.ನಂಜುಂಡಸ್ವಾಮಿ,
ಪ್ರಧಾನ ಸಂಪಾದಕರು,
ನಂ ಸಮಾಚಾರ್ ಪಾಕ್ಷಿಕ ಪತ್ರಿಕೆ

14/12/2022

'NPS' ತೊಲಗಿಸಿ ; 'OPS' ಜಾರಿಗೊಳಿಸಿ!!! ಕುರಿತು 'ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ ನಂಜುಂಡ ಸ್ವಾಮಿ ಹೇಳಿದ್ದೇನು ಗೊತ್ತೇ???

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಮ್ ಸಮಾಚಾರ ಪತ್ರಿಕೆ
ಜೋಶಿ ಫೌಂಡೇಶನ್
ಸಂಪರ್ಕಿಸಿ: +91 94487 21572

Address

Masa Nam Samachara
Sagar
577401

Website

Alerts

Be the first to know and let us send you an email when Nam Samachara posts news and promotions. Your email address will not be used for any other purpose, and you can unsubscribe at any time.

Contact The Business

Send a message to Nam Samachara:

Share