Jana Aakrosha

Jana Aakrosha ಸತ್ಯಕ್ಕಾಗಿ ಫಾಲೋ ಮಾಡಿ, ಬೆಂಬಲಿಸಿ

ಶಹಪುರ್ ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾದ ಘಟನೆ ನಡೆದಿದೆ. ಇದರಿಂದ ನೊಂದ ರೈತ ವಿಷ ಕುಡಿ...
19/09/2025

ಶಹಪುರ್ ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾದ ಘಟನೆ ನಡೆದಿದೆ. ಇದರಿಂದ ನೊಂದ ರೈತ ವಿಷ ಕುಡಿಯಲು ಯತ್ನಿಸಿದ್ದು, ಸಂಬಂಧಿಕರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಗ್ರಾಮದ ಸರ್ವೇ ನಂಬರ್ 67/1 ರಲ್ಲಿ ಜೈನುಲ್ ಅಬದ್ದೀನ್ ದಾದುಲ್ ಎಂಬ ರೈತರಿಗೆ ಸೇರಿದ ಹೊಲದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ರೈಲ್ವೆ ಕಾಮಗಾರಿಯಿಂದ ಈ ಸ್ಥಿತಿ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಬೆಳೆ ಕಳೆದುಕೊಂಡು ದಿಕ್ಕುತೋಚದಂತಾದ ರೈತ ಜೈನುಲ್ ಅಬದ್ದೀನ್ ವಿಷ ಸೇವಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಅವರ ಸಂಬಂಧಿಕರು ತಕ್ಷಣ ಧಾವಿಸಿ ವಿಷದ ಬಾಟಲಿಯನ್ನು ಕಸಿದು ಅಪಾಯ ತಪ್ಪಿಸಿದ್ದಾರೆ....

ಶಹಪುರ್ ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾದ ಘಟನೆ ನಡೆದಿದೆ. ಇದರಿಂದ ನೊಂದ ರೈ...

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟ...
18/09/2025

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO) ಸೆಪ್ಟೆಂಬರ್ 27ರಂದು ಸ್ವಯಂಪ್ರೇರಿತ ತರಗತಿ ಬಹಿಷ್ಕಾರಕ್ಕೆ ಕರೆ ನೀಡಿದೆ. ಕಳೆದ ಎರಡು ತಿಂಗಳಿಂದ ಉಪನ್ಯಾಸಕರ ಕೊರತೆಯಿಂದಾಗಿ ರಾಜ್ಯದ ಸಾವಿರಾರು ಸರ್ಕಾರಿ ಪದವಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು AIDSO ಹೇಳಿಕೆಯಲ್ಲಿ ತಿಳಿಸಿದೆ. ಪಾಠ-ಪ್ರವಚನಗಳು ಸರಿಯಾಗಿ ನಡೆಯುತ್ತಿಲ್ಲ. ಇದರ ಪರಿಣಾಮವಾಗಿ, ಬಡ ಮತ್ತು ಗ್ರಾಮೀಣ ಹಿನ್ನಲೆಯ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಪಠ್ಯಕ್ರಮ ಮತ್ತು ಪರೀಕ್ಷೆಗಳು ಮುಗಿದಿದ್ದು, ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ....

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಆಲ್ ಇಂಡಿಯಾ ಡೆಮಾ....

ಯಾದಗಿರಿ: ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿ...
17/09/2025

ಯಾದಗಿರಿ: ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಗುರಮಿಟ್ಕಲ್ ಶಾಸಕರಾದ ಶರಣಗೌಡ ಕಂದಕೂರು ಅವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರಿಗೆ ದೂರು ನೀಡಿದ್ದಾರೆ.ದೂರಿನಲ್ಲಿ, ಶಾಸಕರು ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೇಣಿಕುಮಾರ ದೋಖಾ ಮತ್ತು ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಮಿತಿಯ ಸದಸ್ಯರು ಅಧಿಕಾರಿಗಳ ಜೊತೆ ಸಂಬಂಧವಿಲ್ಲದ ವಿಷಯಗಳನ್ನು ಚರ್ಚಿಸುತ್ತಾರೆ ಮತ್ತು ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ಬ್ಲಾಕ್‌ಮೇಯ್ಲ್‌ಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಅಧಿಕಾರಿಗಳು ತಮ್ಮ ಬಳಿ ಮೌಖಿಕವಾಗಿ ದೂರು ನೀಡಿದ್ದಾರೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ....

ಯಾದಗಿರಿ: ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾ....

ಯಾದಗಿರಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ನಗರದ ಶ್ರೀ ವಿದ್ಯಾ ಮಂಗಲ ಕಾರ್ಯಾಲಯ ಸ...
17/09/2025

ಯಾದಗಿರಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ನಗರದ ಶ್ರೀ ವಿದ್ಯಾ ಮಂಗಲ ಕಾರ್ಯಾಲಯ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ನಾಯಕರು, ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಂಶಪಾರಂಪರ್ಯ ರಾಜಕಾರಣವನ್ನು ಅಂತ್ಯಗೊಳಿಸುವ ಮತ್ತು ಸಮಗ್ರ ಅಭಿವೃದ್ಧಿಗಾಗಿ ಪರ್ಯಾಯ ರಾಜಕಾರಣವನ್ನು ರೂಪಿಸುವ ಬಗ್ಗೆ ತಮ್ಮ ದೃಢ ಸಂಕಲ್ಪ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಯಾದಗಿರಿ ಜಿಲ್ಲಾಧ್ಯಕ್ಷ ಜಗನ್ನಾಥ್ ಎಸ್. ಚಿಂತನಹಳ್ಳಿ ಅವರು, "12ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದಂತೆ, ಈಗ ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಹುಟ್ಟುಹಾಕುತ್ತಿರುವುದು ನಿಜಕ್ಕೂ ವಿಶೇಷ," ಎಂದು ತಿಳಿಸಿದರು....

ಯಾದಗಿರಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ನಗರದ ಶ್ರೀ ವಿದ್ಯಾ ಮಂಗಲ ಕಾರ್...

ಯಾದಗಿರಿ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಜಾನುವಾರುಗಳಲ್ಲಿ ಕಾಲರೋಗ ಮತ್ತು ಬಾಯಿ ರೋಗ ವ್ಯಾಪಕವಾಗಿ ಹರಡಿದ್ದು, ನೂರಾರು ಕುರಿ, ಮೇಕೆಗಳು ಸಾ...
17/09/2025

ಯಾದಗಿರಿ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಜಾನುವಾರುಗಳಲ್ಲಿ ಕಾಲರೋಗ ಮತ್ತು ಬಾಯಿ ರೋಗ ವ್ಯಾಪಕವಾಗಿ ಹರಡಿದ್ದು, ನೂರಾರು ಕುರಿ, ಮೇಕೆಗಳು ಸಾವನ್ನಪ್ಪಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ಕುರಿಗಾಹಿಗಳು ತಮ್ಮ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ಕರ್ನಾಟಕ ಪ್ರಾಂತ ರೈತ ಸಂಘವು ಜಿಲ್ಲಾ ಉಪನಿರ್ದೇಶಕರು, ಪಶು ಸಂಗೋಪನ ಇಲಾಖೆಗೆ ಪತ್ರ ಬರೆದು, ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದೆ. ಔಷಧಿಗಳ ಕೊರತೆ, ರೈತರಿಗೆ ಮತ್ತಷ್ಟು ಹೊರೆರೈತ ಸಂಘದ ವತಿಯಿಂದ ಸಲ್ಲಿಸಲಾದ ಮನವಿ ಪತ್ರದಲ್ಲಿ, ಜಿಲ್ಲೆಯಾದ್ಯಂತ ಕುರಿಗಾಹಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಲಾಗಿದೆ....

ಯಾದಗಿರಿ: ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಜಾನುವಾರುಗಳಲ್ಲಿ ಕಾಲರೋಗ ಮತ್ತು ಬಾಯಿ ರೋಗ ವ್ಯಾಪಕವಾಗಿ ಹರಡಿದ್ದು, ನೂರಾರು ಕುರಿ, .....

17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು...
17/09/2025

17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾಗವಾಯಿತು. ಈ ವಿಲೀನ ಪ್ರಕ್ರಿಯೆಯಲ್ಲಿ ಸಾಕಷ್ಟು ಮಹನೀಯರ ಸಾವು-ನೋವು ಸಂಭವಿಸಿತು. ಹೋರಾಟಗಾರರ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ನಿರ್ಮಾಣವಾಯಿತು. ಈಗ ಕಲ್ಯಾಣ ಕರ್ನಾಟಕ ಎಂಬ ಹೆಸರು ಮರು ನಾಮಕರಣಗೊಂಡಿದೆ. ಈ ಕಲ್ಯಾಣ ಕರ್ನಾಟಕ ಎಂಬ ಹೆಸರು ಶರಣ ಪರಂಪರೆಯನ್ನು ಬಿಂಬಿಸುತ್ತದೆ. ಈ ಹೆಸರು ಹೋರಾಟಗಾರರ ತ್ಯಾಗ-ಬಲಿದಾನಕ್ಕೆ ಪೂರಕವಾಗಿದೆ.ಇಂತಹ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಪ್ರಾಂತ್ಯವು ನಿಜಾಮನ ಶೋಷಣೆಗೆ ಗುರಿಯಾಗಿದ್ದು ಈ ನಾಡಿನ ದುರದೃಷ್ಟ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು....

17 ಸಪ್ಟೆಂಬರ್ 1948ರಂದು ಕರುನಾಡಿನ ಭಾಗವಾದ ಹೈದ್ರಾಬಾದ್ ಕರ್ನಾಟಕವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆಯಿತು. ಭಾರತದ ಒಕ್ಕೂಟದ ಭಾ....

16/09/2025

ಜನರ ಭಾವನೆಗಳಿಗೆ ವಿರುದ್ಧ ಮತ್ತು ಜನರಿಗೆ ತೊಂದರೆ ಉಂಟು ಮಾಡಿ ಜನರಿಗೆ ಇಷ್ಟವಿಲ್ಲದ ದಂದೆಯನ್ನು ನಡೆಸುವುದು ಏನನ್ನು ಸೂಚಿಸುತ್ತದೆ ಉತ್ತರಿಸಿ.

ಈ ದಂದೆ ಜನರಿಗೆ ಮಾರಕವಾಗಿದೆ ಹಾಗೂ ನೈಸರ್ಗಿಕ ಸಂಪನ್ಮೂಲದ ಲೂಟಿಯಾಗಿದೆ ಎಂದು ಸರ್ಕಾರಕ್ಕೆ ವಿವರಿಸಿದರೂ ಏಕೆ ಸರ್ಕಾರ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ?

ಇದು ಸುರಪುರ ತಾಲ್ಲೂಕಿನ ಅಕ್ರಮ ಮರಳು ಸಾಗಾಣಿಕೆ ದಂದೆ, ಶಾಸಕರು ಏಕೆ ಮೌನವಾಗಿದ್ದಾರೆ ಎನ್ನುವುದನ್ನು ವಿವರಿಸಿ.

ದಯವಿಟ್ಟು ಕಾಮೆಂಟಿಸಿ.

ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ೨೮ ಸೆಪ್ಟೆಂಬರ್ ೨೫ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಕೊಪ...
15/09/2025

ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ೨೮ ಸೆಪ್ಟೆಂಬರ್ ೨೫ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಕೊಪ್ಪಳದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಲೇಖಕಿಯರಿಗೆ ಮೀಸಲಾಗಿರುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಸಭೆಯ ಚರ್ಚೆಯಲ್ಲಿ ದತ್ತಿ ಪ್ರಶಸ್ತಿ ಪ್ರದಾನ ದಿ.ಲಕ್ಷ್ಮಮ್ಮ ಗಂ. ದೊಡ್ಡ ಪಂಪಣ್ಣ ಗೋನಾಳ ಇವರ ಸ್ಮರಣಾರ್ಥ ನೀಡುವ ದತ್ತಿ ಪ್ರಶಸ್ತಿಗೆ ೨೦೨೧ _ನಾರೀ ಪದ್ಯ ಸಾವಿತ್ರಿ ಮುಜಮದಾರ್. ೨೦೨೨_ಯಾವುದೇ ಕೃತಿಗಳು ಬಂದಿಲ್ಲ,೨೦೨೩ಗದ್ದಲ್ದೊಳಗ ಯಾಕ ನಿಂತಿ ಅರುಣಾ ನರೇಂದ್ರ,೨೦೨೪ವಚನ ಹೊಳಹು ರುದ್ರಮ್ಮ ಹಾಸಿನಾಳ ಇವರನ್ನು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ನಮ್ಮ ಸಂಘದ ಸರ್ವಸದಸ್ಯರು ಹಾಜರಿದ್ದು ಯಶಸ್ವಿಗೊಳಿಸಲುತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಹಕಾರ ಸಂಘ ನಿ.ಕೊಪ್ಪಳದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಪ್ರಕಟಣೆ ಮೂಲಕ ಕೋರಿದ್ದಾರೆ.

ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ೨೮ ಸೆಪ್ಟೆಂಬರ್ ೨೫ ರಂದು ರವಿವಾರ ಮುಂಜಾನೆ ೧೧ ಗಂ...

ಕೊಪ್ಪಳ : ಟಣಕನಕಲ್ಲ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಗ್ರಾಮ ಪಂಚಾಯತ್ ವಿವಿಧೋದ್ದೇಶ ಸಂಘ...
15/09/2025

ಕೊಪ್ಪಳ : ಟಣಕನಕಲ್ಲ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಗ್ರಾಮ ಪಂಚಾಯತ್ ವಿವಿಧೋದ್ದೇಶ ಸಂಘಟನಾ ಕಾರ್ಯಗಳ ಒಕ್ಕೂಟದಿಂದ ಓಜಿನಹಳ್ಳಿ ಗ್ರಾಮ ಪಂಚಾಯತ್ ಆದಯ್ಯ ಸ್ವಾಮಿ ಹಾಗೂ ಅಧ್ಯಕ್ಷ ಹುಚ್ಚಪ್ಪ ಯಮನಪ್ಪ ಭೋವಿ ಅವರಿಗೆ ಮನವಿ ಸಲ್ಲಿಸಲಾಯಿತು. ಕೊಪ್ಪಳ ತಾಲೂಕಿನ ಓಜಿನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಟಣಕನಕಲ್ಲ ಗ್ರಾಮದ ಎಸ್‌.ಸಿ. ಕಾಲೋನಿಯಲ್ಲಿ ಮಹಿಳೆಯರಿಗೆ ಯಾವುದೇ ಸಾರ್ವಜನಿಕ ಶೌಚಾಲಯ ಇರುವುದಿಲ್ಲ.ಇದರಿಂದ ಮಹಿಳೆಯರಿಗೆ ಬಹಿರ್ದೆಸೆಗೆ ಹೋಗಲು ತುಂಬಾ ತೊಂದರೆ ಆಗುತ್ತಿದೆ.ಕೂಡಲೇ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಕೊಡಬೇಕು.ಅಲ್ಲದೆ ಸಾರ್ವಜನಿಕ ಕುಡಿಯುವ ನೀರಿನ ನಳ ಇರುವುದಿಲ್ಲ. ಕೊಡಲೇ ಅಧಿಕಾರಿಗಳು ಕುಡಿಯುವ ನೀರಿಗಾಗಿ ಸಾರ್ವಜನಿಕ ಸ್ಥಳದಲ್ಲಿ ನಳದ ವ್ಯವಸ್ಥೆಯನ್ನು ಮಾಡಿಕೊಡಬೇಕು.ಅಲ್ಲದೆ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢಶಾಲೆಯಲ್ಲಿ ಅಡುಗೆ ಮಾಡುವ ಸಿಬ್ಬಂದಿಯಲ್ಲಿ ಯಾವುದೇ ದಲಿತ ಮಹಿಳೆಯರು ಇರುವುದಿಲ್ಲ....

ಕೊಪ್ಪಳ : ಟಣಕನಕಲ್ಲ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಗ್ರಾಮ ಪಂಚಾಯತ್ ವಿವಿಧ.....

14/09/2025

ಲೆಖ್ಖ ಶೀರ್ಷಿಕೆ 3054 ಮುಖ್ಯ ಜಿಲ್ಲಾ ರಸ್ತೆಗಳ ನಿರ್ವಹಣೆಯ ಅಡಿಯಲ್ಲಿ ಎರಡು ಲಕ್ಷಗಳು, ಮೂರು ಲಕ್ಷಗಳ ಅಂದಾಜು ತಯಾರಿಸಿ ಒಟ್ಟು ಐವತ್ತು ಏಳು ಕಾಮಗಾರಿಗಳನ್ನು ಟೆಂಡರ್ ಕರೆಯಲಾಗಿದೆ. ಯಾದಗಿರಿ ಲೋಕೋಪಯೋಗಿ ಇಲಾಖೆಯಲ್ಲಿ. ಕೋಟ್ಯಾಂತರ ರೂಪಾಯಿ ಹಣವನ್ನೆ ನುಂಗಿ ನೀರು ಕುಡಿಯುವ ಇಲಾಖೆ ಈ ಸಣ್ಣ ಮೊತ್ತದಲ್ಲಿ ಅದೇನು ರಸ್ತೆ ನಿರ್ವಹಣೆ ಮಾಡುತ್ತದೋ ನನಗೆ ಅರ್ಥವಾಗುತ್ತಿಲ್ಲ, ಅದು ಈ ಜಿಲ್ಲೆಯ ಹದಗೆಟ್ಟ ರಸ್ತೆಗಳನ್ನು. ಈ ಕಾಮಗಾರಿಗಳು ಅತಿಹೆಚ್ಚು ಸಂಖ್ಯೆಯಲ್ಲಿ ಗುರಮಿಟ್ಕಲ್ ಮತ್ತು ಸುರಪುರಗಳಲ್ಲಿವೆ. ಈ ಎರಡೂ ಮತಕ್ಷೇತ್ರಗಳು ಶಾಸಕರ ನಿಯಂತ್ರಣ ಮತ್ತು ಕಪಿಮುಷ್ಠಿಯಲ್ಲಿವೆ. ಇಲ್ಲಿ ಕಾನೂನು ಕಾಯ್ದೆಗಳಿಲ್ಲ. ಬಲ ಶಾಸನ ಬರೆಯುತ್ತದೆ.

ಸಣ್ಣ ಮೊತ್ತದ ಅಂದಾಜುಗಳ ಈ ಕಾಮಗಾರಿಗಳ ಗುತ್ತಿಗೆಗೆ ನಾಲ್ಕನೆಯ ದರ್ಜೆ ಪರವಾನಗಿಯನ್ನು ಅರ್ಹತೆ ಎಂದು ನಿರ್ಧರಿಸಲಾಗಿದ್ದು ಒಟ್ಟು‌ಇಪ್ಪತ್ತೇಳು ಯಾರಿದಂಲೂ ಪಾಲಿಸಲಾಗದ ಷರತ್ತುಗಳಿವೆ. ಇನ್ನೊಂದು ಮುಖ್ಯವಾದ ವಿಷಯ: ಜನಪ್ರಿಯ ಮತ್ತು ಜನರ ಕೈಗೆ ತಲುಪುವ ಪತ್ರಿಕೆಗಳಲ್ಲಿ ಈ ಕಾಮಗಾರಿಗಳ ಪ್ರಕಟಣೆ ಹೊರಡಿಸಿಲ್ಲ. ಇಪ್ರಾಕ್ರೂಟ್‌ಮೆಂಟಿನಲ್ಲಿ ಪ್ರಕಟಿಸಲಾಗಿದೆ, ಈ ವೆಬ್‌ಸೈಟ್ ತುಂಬಾ ಜನರಿಗೆ ಬಳಸುವುದು ಗೊತ್ತಿಲ್ಲ.

ದಯವಿಟ್ಟು ಹೋರಾಟಗಾರರು ಮತ್ತು ಬೆರಕಿಗಳು ನಾಳೆ ಸೆಲೆಕ್ಟ್ ಆದ ಗುತ್ತಿಗೆದಾರರ ದಾಖಲೆಗಳನ್ನು ಪರಿಶೀಲಿಸಬೇಕು. ಏಕೆಂದರೆ ಇಲ್ಲಿ ಗೋಲ್ಮಾಲ್ ನಡೆಯುವ ಸಾಧ್ಯತೆ ಇದೆ. ಈ‌ ಇಇ ಇರುವಂತೆ ನ್ಯಾಯಾಲಯ ಸರ್ಕಾರಿ ಪ್ರಾಧಿಕಾರವಾದ ಇದನ್ನು ಜಪ್ತಿ ಮಾಡಿತ್ತು. ಅದೀಗ ಸ್ಮರಣೀಯ.

Address

Shahabad
585304

Website

http://janaakrosha.in/

Alerts

Be the first to know and let us send you an email when Jana Aakrosha posts news and promotions. Your email address will not be used for any other purpose, and you can unsubscribe at any time.

Share