05/06/2026
🎵 ಜೈಲು ಹಕ್ಕಿಗಳ ಗಾನಸುಧೆ! 📻 | ಶಿವಮೊಗ್ಗ ಕೇಂದ್ರ ಕಾರಾಗೃಹದ ಬಂದಿಗಳಿಂದ ಪ್ರಪ್ರಥಮ ಬಾರಿಗೆ ಆಕಾಶವಾಣಿಯಲ್ಲಿ ನೇರಪ್ರಸಾರ! 📝
"ಅಪರಾಧವನ್ನು ದ್ವೇಷಿಸು, ಅಪರಾಧಿಯನ್ನಲ್ಲ" ಎಂಬ ಉದಾತ್ತ ತತ್ವದಡಿಯಲ್ಲಿ, ಶಿವಮೊಗ್ಗ ಕೇಂದ್ರ ಕಾರಾಗೃಹದ ಬಂದಿಗಳ ಮನಃಪರಿವರ್ತನೆ ಹಾಗೂ ಸಕಾರಾತ್ಮಕ ಸುಧಾರಣೆಗಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಒಂದು ವಿನೂತನ ಹೆಜ್ಜೆ ಇಟ್ಟಿದೆ.
ನಮ್ಮ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ, ಶಿವಮೊಗ್ಗ ಜೈಲಿನಲ್ಲಿರುವ 20 ಜನ ಪ್ರತಿಭಾವಂತ ಬಂದಿಗಳನ್ನು ಗುರುತಿಸಿ, ಅವರ ಹಾಡುಗಾರಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಭದ್ರಾವತಿ ಆಕಾಶವಾಣಿ ಕೇಂದ್ರದ ಸಹಯೋಗದೊಂದಿಗೆ “ಜೈಲು ಹಕ್ಕಿಗಳ ಗಾನಸುಧೆ" ಎಂಬ ವಿಶೇಷ ಕಾರ್ಯಕ್ರಮ ಮೂಡಿಬರಲಿದೆ. ಇದರಲ್ಲಿ ಬಂದಿಗಳ ಗಾಯನದ ಜೊತೆಗೆ ಅವರ ಬದುಕಿನ ಪರಿವರ್ತನೆಯ ಸನ್ನಿವೇಶಗಳು ಮತ್ತು ಮುಕ್ತ ಅಭಿಪ್ರಾಯಗಳು ಕೂಡ ನೇರಪ್ರಸಾರವಾಗಲಿವೆ. 🎙️
ಕಾರ್ಯಕ್ರಮದ ವಿವರಗಳು:🗓️ ದಿನಾಂಕ/ಸಮಯ: ಜೂನ್ - 2026ರ ತಿಂಗಳ ಪ್ರತಿ ಭಾನುವಾರ ಸಂಜೆ 04:00 ರಿಂದ 05:00 ಗಂಟೆಯವರೆಗೆ.
📻 ಕೇಳುವ ಮಾಧ್ಯಮ: ಆಕಾಶವಾಣಿ ಕೇಂದ್ರ ಭದ್ರಾವತಿ (Frequency: 103.5 MHz & 101.4 MHz).
📱 ಮೊಬೈಲ್ ಆಪ್: ನಿಮ್ಮ ಮೊಬೈಲ್ನಲ್ಲಿ "NEWS ON AIR APP" ಡೌನ್ಲೋಡ್ ಮಾಡಿಕೊಂಡು ಕೂಡ ಈ ಕಾರ್ಯಕ್ರಮವನ್ನು ಆಲಿಸಬಹುದು. ಬನ್ನಿ, ಈ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗೋಣ ಮತ್ತು ಕಲಾವಿದರ ಮನಃಪರಿವರ್ತನೆಯ ಹಾದಿಗೆ ಪ್ರೋತ್ಸಾಹ ನೀಡೋಣ! ತಪ್ಪದೇ ಆಲಿಸಿ, ಎಲ್ಲರಿಗೂ ಶೇರ್ ಮಾಡಿ.
#ಮನಃಪರಿವರ್ತನೆ #ಶಿವಮೊಗ್ಗ #ಜೈಲುಹಕ್ಕಿಗಳಗಾನಸುಧೆ #ಆಕಾಶವಾಣಿ #ಕರ್ನಾಟಕಕಾರಾಗೃಹಸೇವೆಗಳು