MalnadToday

MalnadToday malenadutoday.com

05/06/2026

🎵 ಜೈಲು ಹಕ್ಕಿಗಳ ಗಾನಸುಧೆ! 📻 | ಶಿವಮೊಗ್ಗ ಕೇಂದ್ರ ಕಾರಾಗೃಹದ ಬಂದಿಗಳಿಂದ ಪ್ರಪ್ರಥಮ ಬಾರಿಗೆ ಆಕಾಶವಾಣಿಯಲ್ಲಿ ನೇರಪ್ರಸಾರ! 📝

"ಅಪರಾಧವನ್ನು ದ್ವೇಷಿಸು, ಅಪರಾಧಿಯನ್ನಲ್ಲ" ಎಂಬ ಉದಾತ್ತ ತತ್ವದಡಿಯಲ್ಲಿ, ಶಿವಮೊಗ್ಗ ಕೇಂದ್ರ ಕಾರಾಗೃಹದ ಬಂದಿಗಳ ಮನಃಪರಿವರ್ತನೆ ಹಾಗೂ ಸಕಾರಾತ್ಮಕ ಸುಧಾರಣೆಗಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಒಂದು ವಿನೂತನ ಹೆಜ್ಜೆ ಇಟ್ಟಿದೆ.

ನಮ್ಮ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ, ಶಿವಮೊಗ್ಗ ಜೈಲಿನಲ್ಲಿರುವ 20 ಜನ ಪ್ರತಿಭಾವಂತ ಬಂದಿಗಳನ್ನು ಗುರುತಿಸಿ, ಅವರ ಹಾಡುಗಾರಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಭದ್ರಾವತಿ ಆಕಾಶವಾಣಿ ಕೇಂದ್ರದ ಸಹಯೋಗದೊಂದಿಗೆ “ಜೈಲು ಹಕ್ಕಿಗಳ ಗಾನಸುಧೆ" ಎಂಬ ವಿಶೇಷ ಕಾರ್ಯಕ್ರಮ ಮೂಡಿಬರಲಿದೆ. ಇದರಲ್ಲಿ ಬಂದಿಗಳ ಗಾಯನದ ಜೊತೆಗೆ ಅವರ ಬದುಕಿನ ಪರಿವರ್ತನೆಯ ಸನ್ನಿವೇಶಗಳು ಮತ್ತು ಮುಕ್ತ ಅಭಿಪ್ರಾಯಗಳು ಕೂಡ ನೇರಪ್ರಸಾರವಾಗಲಿವೆ. 🎙️

ಕಾರ್ಯಕ್ರಮದ ವಿವರಗಳು:🗓️ ದಿನಾಂಕ/ಸಮಯ: ಜೂನ್ - 2026ರ ತಿಂಗಳ ಪ್ರತಿ ಭಾನುವಾರ ಸಂಜೆ 04:00 ರಿಂದ 05:00 ಗಂಟೆಯವರೆಗೆ.

📻 ಕೇಳುವ ಮಾಧ್ಯಮ: ಆಕಾಶವಾಣಿ ಕೇಂದ್ರ ಭದ್ರಾವತಿ (Frequency: 103.5 MHz & 101.4 MHz).

📱 ಮೊಬೈಲ್ ಆಪ್: ನಿಮ್ಮ ಮೊಬೈಲ್‌ನಲ್ಲಿ "NEWS ON AIR APP" ಡೌನ್‌ಲೋಡ್ ಮಾಡಿಕೊಂಡು ಕೂಡ ಈ ಕಾರ್ಯಕ್ರಮವನ್ನು ಆಲಿಸಬಹುದು. ಬನ್ನಿ, ಈ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾಗೋಣ ಮತ್ತು ಕಲಾವಿದರ ಮನಃಪರಿವರ್ತನೆಯ ಹಾದಿಗೆ ಪ್ರೋತ್ಸಾಹ ನೀಡೋಣ! ತಪ್ಪದೇ ಆಲಿಸಿ, ಎಲ್ಲರಿಗೂ ಶೇರ್ ಮಾಡಿ.

#ಮನಃಪರಿವರ್ತನೆ #ಶಿವಮೊಗ್ಗ #ಜೈಲುಹಕ್ಕಿಗಳಗಾನಸುಧೆ #ಆಕಾಶವಾಣಿ #ಕರ್ನಾಟಕಕಾರಾಗೃಹಸೇವೆಗಳು

05/06/2026

ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂದೆ ದೊಡ್ಡ ಕೈವಾಡವಿದೆ; ಈ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಲ್ಲ ಎಂದು ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಬಾಂಬ್ ಸಿಡಿಸಿದ್ದಾರೆ.
, , , , , ,

05/06/2026

ವಾಹನಗಳು ಓಡಾಡಿದರೆ ದಯವಿಟ್ಟು ಯಾರೂ ಗಾಬರಿಯಾಗಬೇಡಿ! 🚨

ದೇಶದ ರಕ್ಷಣಾ ಸಿದ್ಧತೆಯನ್ನು ಬಲಪಡಿಸುವ ಭಾಗವಾಗಿ, ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಇಂದು (ಜೂನ್ 5, ಶುಕ್ರವಾರ) ಸಂಜೆ 5:00 ಗಂಟೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ "ವೈಮಾನಿಕ ದಾಳಿ ಮತ್ತು ಕರಾಳ ರಾತ್ರಿ" ಕುರಿತು ವಿಶೇಷ ಮಾಕ್ ಡ್ರಿಲ್ (ಅಣಕು ಪ್ರದರ್ಶನ) ಆಯೋಜಿಸಲಾಗಿದೆ.

ಇದರ ಮುಖ್ಯ ಉದ್ದೇಶ:

ಆಕಸ್ಮಿಕ ವಾಯುದಾಳಿ ನಡೆದರೆ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು.

ವಿವಿಧ ಇಲಾಖೆಗಳ (ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ) ಸನ್ನದ್ಧತೆಯನ್ನು ಪರಿಶೀಲಿಸುವುದು.

ವಿಶೇಷ ಸೂಚನೆ: ತಾಲೀಮಿನ ಭಾಗವಾಗಿ 2 ನಿಮಿಷಗಳ ಕಾಲ ಸೈರನ್ ಮೊಳಗಿಸಲಾಗುವುದು ಹಾಗೂ ಆಂಬ್ಯುಲೆನ್ಸ್, ಫೈರ್ ಇಂಜಿನ್ ವಾಹನಗಳು ಸಂಚರಿಸಲಿವೆ. ಇದು ಕೇವಲ ಮುನ್ನೆಚ್ಚರಿಕೆ ಮತ್ತು ಜಾಗೃತಿಗಾಗಿ ನಡೆಸಲಾಗುತ್ತಿರುವ ಕೃತಕ ಪ್ರದರ್ಶನವಾಗಿದೆ. ಸಾರ್ವಜನಿಕರು ಮುಕ್ತವಾಗಿ ಬಂದು ಇದನ್ನು ವೀಕ್ಷಿಸಬಹುದು.

04/06/2026

ಬಹುಮುಖ ಪ್ರತಿಭೆಯ ಧೀಮಂತ ನಾಯಕ: ಎಸ್. ಬಂಗಾರಪ್ಪ
, , , , , , , , , , ,

03/06/2026

ಶರಾವತಿ ಪವರ್ ಹೌಸ್ ದುರಂತದ ವೇಳೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಜೊತೆ ಡಿಕೆಶಿ ಧಾವಿಸಿದ ಕ್ಷಣ!

ನಿಯೋಜಿಗತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಮಹತ್ವದ ಹಳೆಯ ದಿನಗಳ ನೆನಪು ಇಲ್ಲಿದೆ.

ಈ ಹಿಂದೆ ಸಾಗರ ತಾಲೂಕಿನ ಜೋಗದಲ್ಲಿರುವ ಪ್ರಸಿದ್ಧ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದ ಸಂದರ್ಭದಲ್ಲಿ, ಅಂದಿನ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು. ಆ ಕಷ್ಟದ ಸಮಯದಲ್ಲಿ ಸಾಗರದ ಹಿರಿಯ ಮುತ್ಸದ್ದಿ ನಾಯಕ ಹಾಗೂ ಅಂದಿನ ವಿಧಾನಸಭಾ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಅವರು ಡಿಕೆಶಿ ಅವರಿಗೆ ಸಾಥ್ ನೀಡಿದ್ದರು. ಇಬ್ಬರೂ ನಾಯಕರು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಸಿಬ್ಬಂದಿಗಳಿಗೆ ಧೈರ್ಯ ತುಂಬಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಬಿಕೆ ಹರಿಪ್ರಸಾದ್ ಅಲ್ಲದಿದ್ದರೇ, ಇವರಿಗಾ ಅಥವಾ ಅವರಿಗಾ ಮಂತ್ರಿಗಿರಿ! ಉತ್ತರ ನೀವೇ ಹೇಳಿ...ಈಡಿಗ ಕೋಟಾದಡಿ ಸಚಿವರಾಗುವ ನಿರೀಕ್ಷೆಯಲ್ಲಿದ್ದ ಹಿ...
03/06/2026

ಬಿಕೆ ಹರಿಪ್ರಸಾದ್ ಅಲ್ಲದಿದ್ದರೇ, ಇವರಿಗಾ ಅಥವಾ ಅವರಿಗಾ ಮಂತ್ರಿಗಿರಿ! ಉತ್ತರ ನೀವೇ ಹೇಳಿ...
ಈಡಿಗ ಕೋಟಾದಡಿ ಸಚಿವರಾಗುವ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಈಗ ಕೆಪಿಸಿಸಿ ಅಧ್ಯಕ್ಷ ಪಟ್ಟ ಒಲಿದಿದೆ. ಹಾಗಾದರೆ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತದಲ್ಲಿ ಈಡಿಗ ಕೋಟಾದ ಮಂತ್ರಿಗಿರಿ ಯಾರ ಪಾಲಾಗಲಿದೆ?
ಮಂತ್ರಿ ಸ್ಥಾನದ ರೇಸ್‌ನಲ್ಲಿರುವ ಮಧು ಬಂಗಾರಪ್ಪ ಅವರಿಗಾ? ಅಥವಾ ಸಾಗರದ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗಾ? ಯಾರಿ ಒಲಿಯಲಿದೆ ಅದೃಷ್ಟ?
ನಿಮ್ಮ ಪ್ರಕಾರ ಡಿಕೆಶಿ ಸಂಪುಟದಲ್ಲಿ ಶಿವಮೊಗ್ಗದಿಂದ ಯಾರಿಗೆ ಮಂತ್ರಿಗಿರಿ ಸಿಗಬೇಕು? ನಿಮ್ಮ ಒಲವು ಯಾರ ಕಡೆಗಿದೆ? ಕಮೆಂಟ್ ಮಾಡಿ ತಿಳಿಸಿ! 👇

ಬೇಕಾ ಇದೆಲ್ಲಾ!?
03/06/2026

ಬೇಕಾ ಇದೆಲ್ಲಾ!?

ಏನಂತೀರಿ :
03/06/2026

ಏನಂತೀರಿ :

03/06/2026

Address

Shimoga
577201

Alerts

Be the first to know and let us send you an email when MalnadToday posts news and promotions. Your email address will not be used for any other purpose, and you can unsubscribe at any time.

Contact The Business

Send a message to MalnadToday:

Share