Karnataka public news

Karnataka public news ಕರ್ನಾಟಕ ಪಬ್ಲಿಕ್ ನ್ಯೂಸ್ - A digital media channel, Brings to you a reality news updates/vblogs/videos

25/08/2026

ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಶ್ರೀರಾಮ ನೂತನ ದೇವಸ್ಥಾನದ ವಿಗ್ರಹ ಮತ್ತು ವಿಮಾನ ಗೋಪುರ ಕಳಸ ಪ್ರತಿಷ್ಠಾಪನ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವ ಧೂತ ಸ್ವಾಮಿಜಿ

24/08/2026

ಶಿರಾ : ನಗರಸಭೆಯಲ್ಲಿ ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ, ಅಕ್ರಮ ಲೇಔಟ್‌ಗಳಿಗೆ ಅನುಮೋದನೆ, ವಾರ್ಡ್‌ಗಳಿಗೆ ಮುನ್ಸಿಪಲ್ ಹಣಕಾಸು ನಿಧಿಗಳ ಅಸಮಾನ ಹಂಚಿಕೆ, ಸಮರ್ಪಕ ಕಸ ವಿಲೇವಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಫೋಟಗೊಂಡವು. ಸಾಮಾನ್ಯ ಸಭೆ ನಡೆಯಲು ಕನಿಷ್ಟ ನಗರಸಭೆ ಸದಸ್ಯರ (ಕೊರಂ ) ಬೆಂಬಲವಿಲ್ಲದ ಕಾರಣ ಹಾಲಿ ಅಧ್ಯಕ್ಷ ಜೀಷನ್ ಮಹಮದ್ ಅಧ್ಯಕ್ಷತೆಯ ಸಾಮಾನ್ಯ ಸಭೆ ಸದಸ್ಯರ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಂದೂಡಲಾಯಿತು.

23/08/2026

ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಕಾಲೇಜು ನಿರ್ಮಾಣಕ್ಕೆ 1 ಕೋಟಿ ದೇಣಿಗೆ ನೀಡಿದ ಜೀನಿ ಸಂಸ್ಥಾಪಕ ದಿಲೀಪ್ ಕುಮಾರ್. ಇವರ ಈ ನಡೆ ಇತರರಿಗೂ ಮಾದರಿ.

23/08/2026

ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಯಿಂದ ಮೇಕೆದಾಟು ಬಳಿ ಜಲಾಶಯ ನಿರ್ಮಿಸಿದರೆ. ತುಮಕೂರು ಭಾಗ ಮಂಡ್ಯ ಜಿಲ್ಲೆಯ ತರ ನೀರಾವರಿ ಪ್ರದೇಶವಾಗಲಿದೆ. ಶಿರಾ, ಮಧುಗಿರಿ, ಪಾವಗಡ ಭಾಗಗಳು ನೀರಾವರಿ ಪ್ರದೇಶಗಳಾಗಲಿವೆ. ಈ ಯೋಜನೆ ಜಾರಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಅವರು ಶಿರಾದಲ್ಲಿ ತಾಲೂಕು ಕುಂಚಿಟಿಗರ ಸಂಘ, ಕುಂಚಿಟಿಗರ ಚಾರಿಟಬಲ್ ಟ್ರಸ್ಟ್, ದಿ. ಕೆ ಮಲ್ಲಣ್ಣ ಸ್ಮಾರಕ, ದಿ. ಪಿ ಮೂಡ್ಲೇಗೌಡ, ದಿ. ಸಿ ಪಿ ಮೂಡಲಗಿರಿಯಪ್ಪ, ದಿ. ಬಿ ಸತ್ಯನಾರಾಯಣ, ದಿ. ಭುವನಹಳ್ಳಿ ಶ್ರೀನಿವಾಸಯ್ಯ ಅವರ ಸ್ಮರಣಾರ್ಥ ಕುಂಚಿಟಿಗ ಮಕ್ಕಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕುಂಚಿಟಿಗರ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

22/08/2026

ಮದಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್.ವೈ. ಕುಮಾರ್ ಅವಿರೋಧ ಆಯ್ಕೆ.

ಶಿರಾ : ತಾಲೂಕಿನ ಮದಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್. ವೈ. ಕುಮಾರ್, ಉಪಾಧ್ಯಕ್ಷರಾಗಿ ಈರಣ್ಣ ಅವಿರೋಧವಾಗಿ ಆಯ್ಕೆಯಾದರು.
ಮುಖಂಡರಾದ ಮದಲೂರು ನರಸಿಂಹಮೂರ್ತಿ, ವಕೀಲ ರಾಜು, ಮೇಲ್ವಿಚಾರಕ ಹೆಚ್.ಎಂ. ಜನಾರ್ಧನ, ಮುಖಂಡರಾದ ಡಿ.ಸಿ.ಅಶೋಕ್, ಹುಳಿಗೆರೆ ಸೂರ್ಯ ಗೌಡ,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಗುಡ್ಡಣ್ಣ, ಎಂ.ಕೆ.ನಾಗೇಂದ್ರಪ್ಪ, ಟಿ ಹನುಮಂತೇ ಗೌಡ, ಮೂಡ್ಲಪ್ಪ, ಎಚ್.ಟಿ.ಚಂದ್ರಶೇಖರ್, ಸಿದ್ದಮ್ಮ, ಜಯಮ್ಮ, ಜೆ .ರಂಗನಾಥಪ್ಪ, ಆರ್. ಕೃಷ್ಣಪ್ಪ, ಎಚ್. ಕೆ. ಪ್ರಕಾಶ್, ಮುಖಂಡರಾದ ರಾಮಚಂದ್ರಪ್ಪ, ಪಟೇಲ್ ಈರಣ್ಣ, ಉಮೇಶ್, ಕಾರ್ಯದರ್ಶಿ ನಾಗೇಶ್ ಕುಮಾರ್
ಹೆಚ್‍.ಪಿ.ಗುಡ್ಡಣ್ಣ, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಚಂದ್ರಪ್ಪ, ಹೆಚ್.ಆರ್.ಉಮೇಶ್, ಹೆಚ್.ಗೋವಿಂದಪ್ಪ, ದೇವರಾಜು
ಸೇರಿದಂತೆ ಇತರರು ಇದ್ದರು.
ಚುನಾವಣಾಧಿಕಾರಿಯಾಗಿ ಸಿಡಿಓ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು.

21/08/2026

ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು.

ಶಿರಾ ಉಪ ವಿಭಾಗದ ಡಿವೈಎಸ್ಪಿ ಬಿ.ಕೆ. ಶೇಖರ್ ಹಾಗೂ ಶಿರಾ ನಗರ ಪೊಲೀಸ್ ಠಾಣೆಯ ಸಿಪಿಐ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳ ಕುರಿತು ಚರ್ಚಿಸಲಾಯಿತು.

21/08/2026

ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು.
ಶುಭಕೋರುವರು : #ಜೀನಿಸಂಸ್ಥೆ #ಶಿರಾ

20/08/2026

ಶಿರಾ ತಾಲೂಕಿನ ಪಟ್ಟ ನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ,ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಶಾಖ ಮಠಕ್ಕೆ ಗುರುವಾರ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯ ಸ್ವಾಮಿರವರಿಗೆ ಆಶೀರ್ವಚನ ಹಾಗೂ ಸಲಹೆ ನೀಡಿ ಮಾತನಾಡಿದರು.
ನಂಜಾವಧೂತ ಶ್ರೀಗಳ ಸಲಹೆ ಸ್ವೀಕರಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎನ್. ಚೆಲುವರಾಯಸ್ವಾಮಿ

19/08/2026

ಮಾಜಿ ಸಚಿವರು ಹಾಗೂ ಹಿರಿಯ ಮುಖಂಡರಾದ ಬಿ. ಸಿ. ನಾಗೇಶ್ ಅವರ ನಿಧನ ತೀವ್ರ ಶೋಕ ತಂದಿದೆ. ಇಂದಿನ ರಾಜಕೀಯ ಕಾಲಘಟ್ಟದಲ್ಲಿ ಅವರಂತಹ ಅತ್ಯಂತ ಸರಳಜೀವಿ ಹಾಗೂ ಸಜ್ಜನಿಕೆಯ ರಾಜಕಾರಣಿಯನ್ನು ಕಾಣುವುದು ಬಹಳ ವಿರಳ ಎಂದು ಮಾಜಿ ಶಾಸಕ ಡಾ. ಸಿ. ಎಂ. ರಾಜೇಶ್ ಗೌಡ ತೀವ್ರ ಕಂಬನಿ ಮಿಡಿದಿದ್ದಾರೆ.

19/08/2026

ಲೈಫ್ ಸ್ಟೈಲ್ ಬದಲಾವಣೆಯಿಂದ ಬಿಪಿ, ಶುಗರ್ ಕಾಯಿಲೆಗಳಿಂದ ಬಲುಳುತ್ತಿದ್ದೀರಾ, ಚಿಂತೆ ಯಾಕೇ? #ಜೀನಿ #ಶುಗರ್ #ಆಮ್ಲ ಬಳಸಿ

Address

Yaliyuru
Sira
572137

Telephone

+19008559118

Website

Alerts

Be the first to know and let us send you an email when Karnataka public news posts news and promotions. Your email address will not be used for any other purpose, and you can unsubscribe at any time.

Shortcuts

Share