Public News Sira

Public News Sira Contact information, map and directions, contact form, opening hours, services, ratings, photos, videos and announcements from Public News Sira, Media/News Company, Sira.

20/05/2025

ಶಿರಾ ನಗರದ ಜೌಹರ್ ಗ್ರೂಪ್ ವತಿಯಿಂದ 14 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು.
ಜೌಹರ್ ಗ್ರೂಪ್ ನ ಅಲ್ ಹಜ್ ದಿವಂಗತ ಸೈಯದ್ ಆಸಿಂ ಸಾಹೇಬ್ ಕುಟುಂಬಸ್ಥರಾದ ಜೌಹರ್ ಗ್ರೂಪ್ ಮಾಲೀಕರಾದ ಸೈಯದ್ ಇಕ್ಬಾಲ್ ರವರ ಮಗ ವೈದ್ಯ ಡಾ.ಸೈಯದ್ ಉಮರ್ ಮದುವೆ ಅಂಗವಾಗಿ ಸಾಮಾಜಿಕ ಚಿಂತನೆಯೊಂದಿಗೆ ಬಡವರಿಗೆ ಆಸರೆ ಆಗಬೇಕೆಂಬ ದೂರ ದೃಷ್ಟಿಯಿಂದ 14 ಜೋಡಿಗಳಿಗೆ ಪ್ರತಿ ಜೋಡಿಗಳಿಗೆ ವಧುವಿಗೆ 3 ಗ್ರಾಂ ಚಿನ್ನದ ಓಲೆ, ವರನಿಗೆ ಬೆಳ್ಳಿ ಉಂಗುರ, ಬಟ್ಟೆ, ಬೀರು, ಮಂಚ, ಹಾಸಿಗೆ, ಮೂರು ತಿಂಗಳ ದವಸಧಾನ್ಯ ನೀಡುವ ಮೂಲಕ ವಿಶೇಷ ರೀತಿ 14 ಜೋಡಿಗಳ ವಿವಾಹವನ್ನು ನೆರವೇರಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.
ಜೌಹರ್ ಗ್ರೂಪ್ ಸೈಯದ್ ಇಮ್ರಾನ್ ಸಾಮೂಹಿಕ ಮದುವೆಗಳ ಉಸ್ತವಾರಿ ವಹಿಸಿದ್ದರು.
ಸಂದರ್ಭದಲ್ಲಿ ಬೇಗ ಮೊಹಲ್ಲಾ ಫ್ರೆಂಡ್ಸ್ ವೆಲ್ಫೇರ್ ಆರ್ಗ ನೇಶನ್ ನ ನಾಸಿರ್ ಖಾನ್, ಆತಿಮ್ ಖಾನ್, ಕರೀಮ್ ಸಾಬ್, ಇಲಿಯಾಸ್ ಖಾನ್ ಸೇರಿದಂತೆ ಶಿರಾನಗರದ ಹಲವಾರು ಮುಖಂಡರು ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಧುವರರಿಗೆ ಆಶೀರ್ವಾದ ಮಾಡಿದರು.
ಜೌಹರ್ ಗ್ರೂಪ್ ನ ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

12/05/2025

ಸಿರಾ ನಗರದಲ್ಲಿ ಮಳೆ ಬೀಳುತ್ತಿರುವುದನ್ನು ಕಾಣಬಹುದು

05/04/2025

ರಾಷ್ಟ್ರೀಯ ಹೆದ್ದಾರಿ 48 ರ ಚಿಕ್ಕನಹಳ್ಳಿ ಬ್ರಿಡ್ಜ್ ಬಳಿ ಬೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಮಹಿಳೆ ಸಾವು, ಪುರುಷ ಗಂಭೀರ ಗಾಯ, ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು.

ಸ್ಥಳಕ್ಕೆ ಆಗಮಿಸಿದ ಕಳ್ಳಂಬೆಳ್ಳ ಪೊಲೀಸ್ ಠಾಣಾ ಅಧಿಕಾರಿಗಳು,

ಈ ಘಟನಾ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು [4/5, 9:17 AM] Babu Pt: ನವೀನ್, 35 ವರ್ಷ (ಗಾಯಳು )
ತಂದೆ ಹೆಸರು : ಶಿವಪ್ಪ,
ಗ್ರಾಮ : ರುದ್ರಾಪುರ,
ಚನ್ನಗಿರಿ ತಾಲ್ಲೂಕ್
ದಾವಣೆಗೆರೆ ಜಿಲ್ಲೆ

ಹೆಂಡತಿ ಹೆಸರು : ಪೂರ್ಣಿಮ 30ವರ್ಷ (ಸಾವು ) w/o ನವೀನ್

ಪತಿ ನವೀನ್ ಆಸ್ಪತ್ರೆಗೆ ಸಾಗಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವು

25/03/2025

#ಶಿರಾ ನಗರಸಭೆಯ ಅಧ್ಯಕ್ಷ # ಜಿಶಾನ್ #ಮಹಮ್ಮದ್ # #ಕುಟುಂಬದವರಿಂದ # ಶಿರಾ ನಗರದ ಜಾಮಿಯಾ ಶಾದಿ ಮಹಲ್ ನಲ್ಲಿ #ರಂಜಾನ್ ಇಫ್ತಿಯಾರ್ # ಕೂಟ #
ಶಿರಾ ನಗರದ ಜಾಮಿಯಾ ಶಾದಿ ಮಹಲ್ ನಲ್ಲಿ ಆಯೋಜಿಸಿದ್ದ ರಂಜಾನ್ ಇಫ್ತಿಯಾರ್ ಕೂಟ ಕಾರ್ಯಕ್ರಮದಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ.ಬಿ. ಜಯಚಂದ್ರ ರವರು ಪಾಲ್ಗೊಂಡಿದ್ದರು. ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್ ,ಸದಸ್ಯರಾದ ಮಹಮ್ಮದ್ ಜಾಫರ್, ಅಜಯಕುಮಾರ್, ಫಯಾಜ್ ,ಬುರಾನ್ ಮೊಹಮ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ನೂರುದ್ದೀನ್ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು

ಇಂದು ಅಂಬಾ ಭವಾನಿ ದೇವಾಲಯಕ್ಕೆ ಮೈಸೂರು ಮಹಾರಾಜರು ಭೇಟಿ ಶಿರಾ : ಶಿರಾ ನಗರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಂಬಾ ಭವಾನಿ ದೇವಾಲಯಕ್ಕೆ ಫೆ .9 ರಂ...
10/02/2025

ಇಂದು ಅಂಬಾ ಭವಾನಿ ದೇವಾಲಯಕ್ಕೆ ಮೈಸೂರು ಮಹಾರಾಜರು ಭೇಟಿ

ಶಿರಾ : ಶಿರಾ ನಗರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಂಬಾ ಭವಾನಿ ದೇವಾಲಯಕ್ಕೆ ಫೆ .9 ರಂದು ಮೈಸೂರು ಮಹಾರಾಜ ,ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ ಅಂಬಾ ಭವಾನಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು .

ಅಮ್ಮನವರಿಗೆ ಅಖಿಲ ಕರ್ನಾಟಕ ಲಾಡರ ಸಂಘದಿಂದ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳಲಾಗಿತ್ತು .

ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ , ಅಖಿಲ ಕರ್ನಾಟಕ ಲಾಡರ ಸಂಘದ ಅಧ್ಯಕ್ಷ ಜಿ ವಿ ವೆಂಕಟೇಶ್ ಲಾಡ್ , ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ , ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜಯ್ ಕುಮಾರ್ , ದೇವಾಲಯ ಸಮಿತಿ ಟ್ರಸ್ಟಿಗಳಾದ ಬಿ ಎಸ್ ವಿಜಯಕುಮಾರ್ , ಆರ್ ಉದಯಕುಮಾರ್ , ಎಸ್ ಕೆ ರೂಪೇಶ್ ಕೃಷ್ಣಯ್ಯ , ಮುಖಂಡರಾದ ಬಿ ವಿ ರಂಗನಾಥ್ ಲಾಡ್ ,ಎಸ್ ಜಿ ನರಸಿಂಹಮೂರ್ತಿ ಮತ್ತು ಹಲವು ಗಣ್ಯರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು .ದೇವಿಯ ಕೃಪೆಗೆ ಪಾತ್ರರಾದರು
ಈ ಸಂಧರ್ಭದಲ್ಲಿ

ಅಖಿಲ ಕರ್ನಾಟಕ ಲಾಡರ ಸಂಘ ಅಂಬಾ ಭವಾನಿ ದೇವಾಲಯದ ಶಿರಾ ಟೌನ್
ಸಹ ಕಾರ್ಯದರ್ಶಿ ವೈ ಅಶೋಕ್ ಕುಮಾರ್ ಸಂಘಟನಾ ಕಾರ್ಯದರ್ಶಿ
ಖಜಾಂಚಿ ಎಸ್ ಎನ್ ನಾರಾಯಣ್ ಜಿ ಆರ್ ಚಂದ್ರಾದರ ಲಾಡ್ ಉದಯಕುಮಾರ್ ಆರ್ ಎಸ್ ಜಿ ಸುದರ್ಶನ್ ಬಿ ಎಸ್ ರಮೇಶ್ ಬಾಬು ಬಿಎಸ್ ಪ್ರಸನ್ನ ಕುಮಾರ್ ಬಿವಿ ಹೇಮಂತ್ ಕುಮಾರ್ ಎನ್ ನವೀನ್ ಯೋಗೇಶ್ ಎಸ್ ಲಕ್ಷ್ಮಿಕಾಂತ ಕೆಎನ್ ರಾಘವೇಂದ್ರ ಎಸ್ ಜಿ ವಿಜಯಕುಮಾರ್ ಎ ಆರ್ ಕಿಶೋರ್ ಕುಮಾರ್ ನಾಗೇಶ್ ಲಾಡ್ ಸುಮನ್ ಎಸ್ ಎಸ್ ರಘು ಕೆ ಬಾಬಣ್ಣ ಎಚ್ ವೈ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

29/01/2025

#ಫೆಬ್ರವರಿ #4 #ನಾಲ್ಕನೇ #ವಾರದಲ್ಲಿ # ಮುಖ್ಯಮಂತ್ರಿ #ಸಿದ್ದರಾಮಯ್ಯ # ನವರು #ಶಿರಾ ತಾಲೂಕಿನ ತಾವರೆಕೆರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ 60 .ಕೋಟಿ ರೂಪಾಯಿ ವೆಚ್ಚದ ಆಧುನಿಕ ವಧಾಗಾರ ಲೋಕಾರ್ಪಣೆ ಹಾಗೂ 15 ಸಾವಿರ ಜನರಿಗೆ ನಿವೇಶನ ಹಕ್ಕು ಪತ್ರ ಹಂಚಿಕೆ ಮಾಡಲಿದ್ದಾರೆ.
ಶಿರಾ ತಾಲೂಕಿನ ತಾವರೆಕೆರೆ ಚೀಲಹಳ್ಳಿ ಯಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಆಧುನಿಕ ವಧಾಗಾರ ವೀಕ್ಷಣೆ ಮಾಡಿದ ಪಶು ಸಂಗೋಪನ ಸಚಿವ ವೆಂಕಟೇಶ್.
ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಡಾ.
ಟಿ.ಬಿ. ಜಯಚಂದ್ರ, ನಗರಸಭೆ ಅಧ್ಯಕ್ಷ ಜಿಶಾನ್ ಮೂಹಮ್ಮದ್, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಗರಸಭೆ ಸದಸ್ಯ ಅಜಯ್ ಕುಮಾರ್, ಡಾ.ಗೋ ಮಾ ನಾಗರಾಜು, ಡಾ.ನಾಗೇಶ್, ಮುಖಂಡರಾದ ಬಲರಾಮ್, ಸೋರೆಕುಂಟೆ ಸತ್ಯನಾರಾಯಣ, ಮೇಳೆ ಕೋಟೆ ಉದಯಶಂಕರ್, ಕೆ.ಆರ್. ಮಹೇಂದ್ರ ಗೌಡ, ವಾಜರಹಳ್ಳಿ ರಮೇಶ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಚೇತನ್ ಪಟೇಲ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

08/01/2025

ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣ (IDSMT) ಮಾಡಲು ಮುಂದಾದ ಶಿರಾ ನಗರಸಭೆ.

ಶಿರಾ ನಗರದಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರಸ್ಥರ ಹಾಗೂ ನಗರ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ವಾಣಿಜ್ಯ ಸಂಕೀರ್ಣ ಅತಿ ಶೀಘ್ರದಲ್ಲಿಯೇ ನಿರ್ಮಾಣವಾಗಲಿದೆ ಎಂದು ಶಿರಾ ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮದ್ ತಿಳಿಸಿದರು.

ಈ ವಾಣಿಜ್ಯ ಸಂಕೀರ್ಣ ನಿರ್ಮಾಣದಿಂದ ವ್ಯಾಪಾರಸ್ಥರಿಗೆ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ವಹಿವಾಟು ಮಾಡಲು ಅನುಕೂಲಕರ ವಾಗಲಿದೆ, ಇನ್ನೂ ಕೆಲವು ತಿಂಗಳುಗಳಲ್ಲಿ ಈ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ನೀರೇಕ್ಷೆಯಲ್ಲಿದ್ದೇವೆ ಎಂದ ಶಿರಾ ನಗರಸಭೆ ಪೌರಾಯುಕ್ತರಾದ ಆರ್. ರುದ್ರೇಶ್ ತಿಳಿಸಿದರು.

ಸ್ಥಳೀಯ ಮುಖಂಡರಾದ ವಿಜಯರಾಜ ಮಾತನಾಡಿ, ಈ ನಗರ ಸಭೆಯ ವಾಣಿಜ್ಯ ಸಂಕೀರ್ಣ ಕಳೆದ 15 ವರ್ಷಗಳಿಂದ ಉಪಯೋಗಕ್ಕೆ ಬಾರದೆ ಪಾಳು ಬಿದ್ದು, ಕಸ ವಿಲೇವಾರಿ ಘಟಕವಾಗಿ ಮಾರ್ಪಾಡಾಗಿತ್ತು, ಸ್ಥಳೀಯ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ ಇಂದು ಕಾಲ ಕೂಡಿಬಂದಿದ್ದು, ಶಿರಾ ನಗರದ ನೂತನ ಅಧ್ಯಕ್ಷರಾದ ಜಿಶನ್ ಮೊಹಮ್ಮದ್ ನೇತೃತ್ವದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಮುಂದಾಗಿರುವುದು ಶಿರಾ ನಗರದ ಜನತೆ ಹಾಗೂ ವ್ಯಾಪಾರಸ್ಥರಿಗೆ ಸಂತಸತಂದಿದೆ ಎಂದು ತಿಳಿಸಿದರು.

08/01/2025

*ಅಲ್ಪಸಂಖ್ಯಾತ ಸಮುದಾಯ ವಾಸಿಸುವ ಬೀದಿಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ 5. ಕೋಟಿ ರೂಪಾಯಿ : ಶಾಸಕ. ಡಾ. ಟಿ.ಬಿ.ಜಯಚಂದ್ರ ಶಂಕುಸ್ಥಾಪನೆ*
ಶಿರಾ ನಗರ ಸಭೆ ವ್ಯಾಪ್ತಿಯ ಹಲವಾರು ವಾರ್ಡ್ ಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚು ವಾಸ ಮಾಡುವ ಬೀದಿಗಳ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ 5. ಕೋಟಿ ರೂಪಾಯಿ ಮಂಜುರಾಗಿದ್ದು, ದೆಹಲಿ ವಿಶೇಷ ಪ್ರತಿನಿಧಿ, ಶಿರಾ ಕ್ಷೇತ್ರದ ಶಾಸಕ ಡಾ.ಟಿ.ಬಿ. ಜಯಚಂದ್ರ ರವರು ನಗರಸಭೆಯ 10 ಮತ್ತು 24ನೇ ವಾರ್ಡ್ ಗಳಲ್ಲಿ ಬುಧವಾರ ಭೂಮಿಪೂಜೆ ಮಾಡುವ ಮೂಲಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಗರಸಭೆಯ ಅಧ್ಯಕ್ಷ ಜಿಶಾನ್ ಮೂಹಮ್ಮದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸದಸ್ಯರಾದ ಎಸ್. ಎಸ್. ಅಜಯಕುಮಾರ್, ನಸ್ರುಲ್ಲಾ ಖಾನ್, ಬುರಾನ್ ಮೂಹಮ್ಮದ್, ಅಮಾನುಲ್ಲಾ ಖಾನ್, ಫಯಾಜ್, ರಫಿ, ಮಜರಿ ಉಲ್ಲಾ ಖಾನ್, ಫರ್ಮಾನ್, ನಗರಸಭೆ ಆಯುಕ್ತ ರುದ್ರೇಶ್, ನೂರುದ್ದೀನ್ , ಶಶಿಧರ ಗೌಡ, ವಾಜರಹಳ್ಳಿ ರಮೇಶ್ , ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

30/12/2024

# *ರೈತರ ಪಂಪ್* *ಸೆಟ್ ಗಳಿಗೆ ಸೋಲಾರ್ ವಿದ್ಯುತ್* #
ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ರವರು ಮತ್ತು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕರಾದ ಡಾ.ಟಿ.ಬಿ.ಜಯಚಂದ್ರ ಅವರು ಇಂದು
ಸೋಮವಾರ ಶಿರಾ ತಾಲೂಕಿನ ಚಂಗಾವರ ಮತ್ತು ಚಿಕ್ಕಬಾಣಗೆರೆ ಗ್ರಾಮದ ಬಳಿ ಪಿಎಂ- ಕುಸುಮ್ ಯೋಜನೆಯಡಿ‌ ನಿರ್ಮಾಣ ಮಾಡಲಾಗಿರುವ #ಸೋಲಾರ್ ಪಾರ್ಕ್ # ವೀಕ್ಷಣೆ ಮಾಡಿ ರೈತರು ಮತ್ತು ಅಧಿಕಾರಿಗಳ ಜೊತೆ ಸಂವಾದ ನಡೆಸಿದರು.
*ಈ ಸಂದರ್ಭದಲ್ಲಿ ಇಂಧನ ಸಚಿವ ಕೆ.ಜೆ .ಜಾರ್ಜ್ ಮಾತನಾಡಿ* ಪಿಎಂ ಕುಸುಮ್ ಯೋಜನೆ ರೈತರ ಹಸಿರು ಭವಿಷ್ಯಕ್ಕಾಗಿ ಬದ್ಧತೆಯನ್ನು ಇಟ್ಟುಕೊಂಡಿವೆ. ರೈತರಿಗೆ ನಿರಂತರ ವಿದ್ಯುತ್ ಪ್ರವೇಶದೊಂದಿಗೆ ಅಧಿಕಾರ ನೀಡುತ್ತದೆ. ಸರ್ಕಾರ ಸರ್ಕಾರ ನವೀಕರಿಸಬಹುದಾದ ಇಂಧನ ಪ್ರಮಾಣದಲ್ಲಿ ಅತ್ಯಗತ್ಯ ಹೆಜ್ಜೆ ಪಿಎಂ ಕುಸುಮ್ ಯೋಜನೆ ಇಟ್ಟಿದೆ.
ಈ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ ವಿದ್ಯುತ್ 2299 ಕೃಷಿ ಪಂಪ್ಸೆಟ್ ಗಳಿಗೆ ವಿಶ್ವಾಸ ಅರ್ಹ ಶಕ್ತಿಯನ್ನು ಒದಗಿಸುತ್ತದೆ.
ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಇಂತಹ ಯೋಜನೆಗಳು ರೈತರನ್ನು ಸಬಲಗೊಳಿಸುತ್ತವೆ.
ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಶಿರಾ ನಗರಸಭೆ ಅಧ್ಯಕ್ಷ ಜೀಶಾನ್ ಮೂಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ನಗರಸಭೆ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಸದಸ್ಯರಾದ ಅಜಯ್ ಕುಮಾರ್ ,ಮಹಮ್ಮದ್ ಜಾಫರ್, ಶಿವಶಂಕರ್, ಅಜಯ್ ಕುಮಾರ್, ಫಯಾಜ್ ಖಾನ್, ನೂರುದ್ದೀನ್, ಬೆಸ್ಕಾಂ ಎಇಈ ಶಾಂತರಾಜು, ಬೆಸ್ಕಾಂ ಎಸ್ಓ ಮುರಳಿದರ, ಹನುಮಂತರಾಯ, ಚಂಗಾ ವರ ಮತ್ತು ಚಿಕ್ಕ ಬಾಣಗೆರೆ ಗ್ರಾಮ ಗಳ ರೈತರದ ಸಿದ್ದಪ್ಪ, ದೊಡ್ಡಬಾಣಗೆರೆ ರಂಗನಾಥಪ್ಪ, ಸೋಮಣ್ಣ, ಕುರುಬ ರಾಮನಹಳ್ಳಿ ಕರಿಯಣ್ಣ ಸೇರಿದಂತೆ ರಾಮ್ ತರಂಗ ಸೆಲ್ಯೂಷನ್ ಪ್ರವೈಟ್ ಲಿಮಿಟೆಡ್ ನ ಅಧಿಕಾರಿಗಳು, ಸಿಬ್ಬಂದಿ ವರ್ಗ, ಬೆಸ್ಕಾಂ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

23/12/2024

ಶಿರಾ ನಗರದ ಮಹಬೂಬ್ ನಗರದಲ್ಲಿ
ಮಸ್ಜಿದ್ ಎ ರಜಯೇ ರೆಹನೀಯ ಹಾಗೂ ಜಾಮಿಯಾ ಮಸ್ಜಿದ್ ಕಮಿಟಿ ವತಿಯಿಂದ ಇಂದು ಹಿಜಮಾ (ಕಪಿಂಗ್ ) ಕಾರ್ಯಕ್ರಮವು ಆಯೋಜಿಸಿದ್ದು

ತುಮಕೂರಿನ ಹೆಲ್ಲಸ್ ಕ್ಲಿನಿಕ್ ಅಂಡ್ ವೆಲ್ಲನೆಸ್ ಸೆಂಟರ್ ನಾ ಡಾಕ್ಟರ್ ಉವೆಜ್ ಅಲಿ ಸಹಯೋಗದೊಂದಿಗೆ

ಬೆಳಗ್ಗೆ 9 ಗಂಟೆಯಿಂದ ಶುರುವಾದ ಹಿಜಮಾ ಕಾರ್ಯಕ್ರಮ ದಲ್ಲಿ ಸುಮಾರು 300ಜನ ಹಿಜಮಾ ಮಾಡಿಸಿದರು
ಈ ಸಂಧರ್ಭದಲ್ಲಿ

ರಜಾಯೇ ರೆಹನೀಯ ಮಸೀದಿಯ ಅಧ್ಯಕ್ಷರಾದ ಮುರದ್ ಪಾಶ ಉಪಾಧ್ಯಕ್ಷರು ಶಫಿವುಲ್ಲ ಖಾನ್ ಶೇಕು ಸಾದಿಕ್ ನಜ್ರುಲ್ಲ ಸಾಲರ್ ಅಮಾನ್ ಇನ್ನು ಮುಂತಾದವರು ಉಪಸ್ಥಿತರಿದ್ದರು

ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಜನಪ್ರಿಯ ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಟಿ.ಬಿ.ಜಯಚಂದ್ರ ...
17/12/2024

ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಜನಪ್ರಿಯ ಶಾಸಕರು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಶ್ರೀ ಟಿ.ಬಿ.ಜಯಚಂದ್ರ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಯನ್ನು ಸ್ಪೀಕರ್ ಶ್ರೀ ಯು.ಟಿ.ಖಾದರ್ ಅವರು ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ವಿರೋಧಪಕ್ಷದ ನಾಯಕ ರಾದ ಶ್ರೀ ಅರ್.ಅಶೋಕ್, ಉಪ ಸಭಾಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ ಅವರ ಉಪಸ್ಥಿತಿ ಯಲ್ಲಿ ಪ್ರಧಾನ ಮಾಡಿದರು ‌.

22/11/2024

ಶಿರಾ ನಗರಕ್ಕೆ ಆಗಮಿಸಿದ ಕ್ರೀಡಜ್ಯೋತಿಗೆ ಅದ್ಧೂರಿ ಸ್ವಾಗತ
ಸದಾ ಒತ್ತಡದಲ್ಲಿರುವ ಹಗಲು ಇರುಳು ಎನ್ನದೆ ಕೆಲಸ ಮಾಡುವ ಪತ್ರಕರ್ತರ ಸೇವೆ ದೇಶ ಸೇವೆ ಸಮನಾದುದು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಕ್ರೀಡಾಕೂಟ ಏರ್ಪಡಿಸಿರುವುದು ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು

Address

Sira
572137

Website

Alerts

Be the first to know and let us send you an email when Public News Sira posts news and promotions. Your email address will not be used for any other purpose, and you can unsubscribe at any time.

Share