25/10/2025
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ | ಕನ್ನಡ ರಾಜ್ಯೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮದ ರೂವಾರಿಯಾದ ಕನ್ನಡಿಗ ಅಂಜನ್ ಕುಮಾರ್ ಸಿರಾ ತಾಲೂಕಿನ ಕನ್ನಡ ಅಭಿಮಾನಿಗಳು ಅಕ್ಟೋಬರ್ 31 ರಂದು ದ್ವಿಚಕ್ರ ವಾಹನ ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ, ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಾಡಬೇಕೆಂಬ ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.ದ್ವಿಚಕ್ರ ವಾಹನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ನಾವು ಬರುತ್ತೇವೆ ಎಂಬುವ ಆಸಕ್ತಿ ಉಳ್ಳ ಕನ್ನಡ ಅಭಿಮಾನಿಗಳು ಬರಲು ಮುಕ್ತ ಅವಕಾಶವಿದೆ. ದ್ವಿಚಕ್ರ ವಾಹನದಲ್ಲಿ ಬರಲು ಬಯಸುವರು ಕಡ್ಡಾಯವಾಗಿ ಲೈಸೆನ್ಸ್, ದ್ವಿಚಕ್ರ ವಾಹನದ ಇನ್ಸೂರೆನ್ಸ್ ಜೊತೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು.
ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಸೇರಿದಂತೆ ಸವಾರರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರಲು ಇಚ್ಛಿಸುವವರು ಈ ಕೆಳಕಂಡ ಸಂಖ್ಯೆಗೆ ಸಂಪರ್ಕ ಮಾಡಿ ನೋಂದಣಿ ಮಾಡಬೇಕು ನೊಂದಣಿ ಮಾಡಿದವರಿಗೆ ಮಾತ್ರ ಅವಕಾಶ ಎಂದರು.
ನಿಖಿಲ್ -9108234263
ಪೈಲ್ವಾನ್ ರಂಗ-8296293197