SIRA FIRST NEWS

SIRA FIRST NEWS Wellcome To SIRA FIRST NEWS its a Digital Media Started With The Slogan Of Fight For Justice In 2018

ಈ ದಿನ ಸಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಗ್ರಾಮದಲ್ಲಿ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ ಚಿಕ್ಕನಾಯಕನಹಳ್ಳಿ ಶಾಸ...
06/09/2026

ಈ ದಿನ ಸಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಗ್ರಾಮದಲ್ಲಿ ಕ್ರಿಕೆಟ್ ಕ್ರೀಡಾಕೂಟಕ್ಕೆ ಆಗಮಿಸಿದ ಚಿಕ್ಕನಾಯಕನಹಳ್ಳಿ ಶಾಸಕರಾದ ಶ್ರೀ ಸುರೇಶ್ ಬಾಬು ರವರಿಂದ ಸಿರಾ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ಕ್ರೀಡಾಕೂಟಕ್ಕೆ ಬಂದಂತಹ ಕ್ರೀಡಾ ಯುವಕರಿಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.

06/09/2026

ಶಿರಾ | ಗಿಲ್ಲಿ ನಟನ ಎಂಟ್ರಿಗೆ “ದಿ ಕಾಶ್ಮೀರಿ ಫುಡ್ ಫ್ಯಾಕ್ಟರಿ" ರೆಸ್ಟೋರೆಂಟ್ ಗೆ ಹರಿದು ಬಂದ ಜನಸಾಗರ..

05/09/2026

ಶಿಕ್ಷಕರ ದಿನಾಚರಣೆಗೆ ಯುವ ಕಾಂಗ್ರೆಸ್ ಮುಖಂಡ ಮನೋಜ್ ಅವರ ಸಹಕಾರ

ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಯುವ ಕಾಂಗ್ರೆಸ್ ಮುಖಂಡ ಮನೋಜ್ ಅವರು ಸಹಾಯ ಹಸ್ತ ಚಾಚಿ, ಕಾರ್ಯಕ್ರಮದ ಯಶಸ್ಸಿಗೆ ಬೆಂಬಲ ನೀಡಿದರು.

ಶಿಕ್ಷಕರ ಗೌರವ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಸದಾ ಬೆಂಬಲವಾಗಿ ನಿಲ್ಲುವ ಮನೋಜ್ ಅವರ ಕಾರ್ಯಕ್ಕೆ ಶಿಕ್ಷಕ ವೃಂದದಿಂದ ಮೆಚ್ಚುಗೆ ವ್ಯಕ್ತವಾಯಿತು.

ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ KPCC ಶಿಕ್ಷಕರ ಘಟಕ, ಬೆಂಗಳೂರು ವತಿಯಿಂದ ಸೆಪ್ಟೆಂಬರ್ 5, 2026ರಂದು ಶಿಕ್ಷಕರ ದಿನಾಚ...
05/09/2026

ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

KPCC ಶಿಕ್ಷಕರ ಘಟಕ, ಬೆಂಗಳೂರು ವತಿಯಿಂದ ಸೆಪ್ಟೆಂಬರ್ 5, 2026ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಭಾರತ್ ಜೋಡೋ ಭವನ, ಕ್ವೀನ್ಸ್ ರಸ್ತೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೀಡಲಾದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಹೊಸೂರಿನ ಹೆಮ್ಮೆಯ ರಮೇಶ್ ಮೇಸ್ಟ್ರು ಅವರು ಸ್ವೀಕರಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ ಹಾಗೂ ಸಮರ್ಪಣೆಗೆ ಸಂದ ಈ ಗೌರವಕ್ಕೆ ರಮೇಶ್ ಮೇಸ್ಟ್ರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.

ಶಿರಾ: ಶಿರಾ ನಗರದ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸತ್ಯಪ್ರಕಾಶ್  ...
05/09/2026

ಶಿರಾ: ಶಿರಾ ನಗರದ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಸತ್ಯಪ್ರಕಾಶ್ ಮತ್ತು ತುಮುಲ್ ನಿರ್ದೇಶಕರಾದ ಎಸ್. ಅರ್ ಗೌಡ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ಆದಷ್ಟು ಬೇಗ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಅವರು ನಗರಸಭೆ ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರಿಗೆ ಆಗ್ರಹಿಸಿದರು.

ಪೌರ ಕಾರ್ಮಿಕರು ನಗರದ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಬಹುದಿನಗಳ ನಿವೇಶನದ ಬೇಡಿಕೆಯನ್ನು ನಗರಸಭೆ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಅರ್ಹ ಪೌರ ಕಾರ್ಮಿಕರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಸತ್ಯಪ್ರಕಾಶ್ ಒತ್ತಾಯಿಸಿದರು.

ನಿವೇಶನ ಹಂಚಿಕೆ ವಿಚಾರದಲ್ಲಿ ಇನ್ನಷ್ಟು ವಿಳಂಬವಾದರೆ, ಪೌರ ಕಾರ್ಮಿಕರ ಪರವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರಿಗೆ ಸತ್ಯಪ್ರಕಾಶ್ ಎಚ್ಚರಿಕೆ ನೀಡಿದರು.

05/09/2026

ಶಿರಾದಲ್ಲಿ ಗುರುಭವನ ನಿರ್ಮಾಣಕ್ಕೆ ಮಹತ್ವದ ಭರವಸೆ | ತಾಲೂಕು ಕಚೇರಿ ಪಕ್ಕದಲ್ಲಿರುವ ಜಾಗ ಹಾಗೂ ಸ್ವಿಮ್ಮಿಂಗ್‌ ಪೂಲ್‌ಗಾಗಿ ಇರುವ ಸುಮಾರು ಮೂಕಾಲು ಎಕರೆ ಜಾಗವನ್ನು ಅಥವಾ ಇಲ್ಲೇ ಆಗಬೇಕು ಅನ್ನುವುದಾದರೂ ಅದಕ್ಕೂ ಪ್ರಯತ್ನ ಮಾಡುತ್ತೇನೆ | ಟಿ ಬಿ ಜೆ.

05/09/2026

ನಮ್ಮ ತಾಲ್ಲೂಕಿನ ಶಾಸಕರು ಸ್ವಷ್ಟವಾದ ನಿಲುವನ್ನು ಕೈಗೊಂಡ್ರೆ ಮುಂದಿನ ವರ್ಷದಲ್ಲಿ ಗುರುಭವನ ಮಾಡಬಹುದು | ಎಸ್ ಆರ್ ಗೌಡ

05/09/2026

ಶಿರಾ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಡಾ ಸರ್ವೇಪಲ್ಲಿ ರಾಧಾಕೃಷ್ಣನ್ ರವರ 139 ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ.

05/09/2026

ಸರ್ಕಾರಿ ಶಾಲೆಯಲ್ಲಿ ಓದಿದ್ದಕ್ಕೆ ಇವತ್ತು ಇಷ್ಟು ಎತ್ತರಕ್ಕೆ ಬೆಳೆದಿದ್ದು | ವಿದ್ಯಾರ್ಥಿಗಳಿಗೆ ರಂಗನಾಥಪ್ಪ ಅವರು ಬಸ್‌ ಫ್ರೀ ಬಿಟ್ಟಿದ್ದರಂತೆ ಆ ದಿನಗಳ ನೆನಪುಗಳನ್ನು ನಮ್ಮ ಮನೆಯವರು ಈಗಲೂ ಹೆಮ್ಮೆಯಿಂದ ಹೇಳ್ತಾರೆ.

04/09/2026

Address

KESHAVA NAGARA
Sira

Alerts

Be the first to know and let us send you an email when SIRA FIRST NEWS posts news and promotions. Your email address will not be used for any other purpose, and you can unsubscribe at any time.

Contact The Business

Send a message to SIRA FIRST NEWS:

Shortcuts

Share