KAIM

KAIM journalist. bangalore,( proper sira, tumkur) Karnataka,,,
, ಸತ್ಯ ಮುಚ್ಚಿಟ್ಟರೆ ಸಂವಿಧಾನಕ್ಕೆ ಮಾರಕ

ಮಧ್ಯಪ್ರದೇಶದಲ್ಲಿ ಅಂಗನವಾಡಿಯಿಂದ ಗರ್ಭಿಣಿಗೆ ನೀಡಲಾದ ಪೌಷ್ಟಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆ...
07/06/2026

ಮಧ್ಯಪ್ರದೇಶದಲ್ಲಿ ಅಂಗನವಾಡಿಯಿಂದ ಗರ್ಭಿಣಿಗೆ ನೀಡಲಾದ ಪೌಷ್ಟಿಕ ಆಹಾರದ ಪ್ಯಾಕೆಟ್‌ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ.
ಪಾಂಡುರ್ಣ ಜಿಲ್ಲೆ, ಕಾರ್ಘಾಟ್ ಕಮಠಿ ಗ್ರಾಮದಲ್ಲಿ ವಚಲಾ ಬಾಯಿ ಧುರ್ವೆ ಅವರಿಗೆ ಅಂಗನವಾಡಿ ಕೇಂದ್ರದಿಂದ ಲಡ್ಡುಗಳಿರುವ ಪೌಷ್ಟಿಕ ಆಹಾರದ ಪ್ಯಾಕೆಟ್ ನೀಡಲಾಗಿತ್ತು. ಮನೆಗೆ ತೆಗೆದುಕೊಂಡು ಹೋಗಿ ಪ್ಯಾಕೆಟ್ ತೆರೆಯುವಾಗ ಅದರೊಳಗೆ ಸತ್ತ ಹಾವಿನ ಮರಿ ಕಂಡು ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಅಂಗನವಾಡಿ ಸಿಬ್ಬಂದಿ, ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪೊಲೀಸರು ಮತ್ತು ಕಂದಾಯ ಇಲಾಖೆ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಹಾರದ ಪ್ಯಾಕೆಟ್ ಅನ್ನು ವಶಕ್ಕೆ ಪಡೆದು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಭೋಪಾಲ್‌ನ ರಾಜ್ಯ ಆಹಾರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐವರು ಸದಸ್ಯರ ತನಿಖಾ ಸಮಿತಿಯನ್ನು ಕೂಡ ರಚಿಸಲಾಗಿದೆ.

 #ಅಗ್ನಿ ದುರಂತದಲ್ಲಿ  #ಹೀರೋ: ಹಾಸಿಗೆ ವ್ಯಾಪಾರಿಯಿಂದ  #8ಕ್ಕೂ ಹೆಚ್ಚು  #ಜೀವ ರಕ್ಷಣೆಹೊಸ ದೆಹಲಿ: ಇಲ್ಲಿನ ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕ...
06/06/2026

#ಅಗ್ನಿ ದುರಂತದಲ್ಲಿ #ಹೀರೋ:
ಹಾಸಿಗೆ ವ್ಯಾಪಾರಿಯಿಂದ #8ಕ್ಕೂ ಹೆಚ್ಚು #ಜೀವ ರಕ್ಷಣೆ

ಹೊಸ ದೆಹಲಿ: ಇಲ್ಲಿನ ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದ ವೇಳೆ ಸ್ಥಳೀಯ ವ್ಯಾಪಾರಿಯೊಬ್ಬರು ತೋರಿದ ತಕ್ಷಣದ ಸ್ಪಂದನೆ ಮತ್ತು ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹೋಟೆಲ್ ಕೆಳಭಾಗದಲ್ಲೇ ರಿಯಾಜುದ್ದೀನ್ ಮನ್ಸೂರಿ ಅವರ ಹಾಸಿಗೆ ಅಂಗಡಿ ಇತ್ತು. ಬೆಂಕಿ ಆವರಿಸಿದ ವೇಳೆ ಮೇಲ್ಮಹಡಿಗಳಲ್ಲಿ ಸಿಲುಕಿದ್ದವರಿಗೆ ಕೆಳಗೆ ಇಳಿಯಲು ದಾರಿ ಇರಲಿಲ್ಲ. ಜೀವ ಉಳಿಸಿಕೊಳ್ಳಲು ಅವರು ಜಿಗಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಮನ್ಸೂರಿ ಅವರು ತಮ್ಮ ಅಂಗಡಿಯಲ್ಲಿದ್ದ ಹಾಸಿಗೆಗಳನ್ನು ರಸ್ತೆಗೆ ಹಾಸಿದರು. ಸಿಲುಕಿದ್ದ ಜನರು ಒಬ್ಬಬ್ಬರಾಗಿ ಅವುಗಳ ಮೇಲೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಮ್ಮ ವ್ಯಾಪಾರದ ನಷ್ಟವನ್ನು ಲೆಕ್ಕಿಸದೆ ಜೀವ ಉಳಿಸಲು ಮುಂದಾದ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
👏 ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

06/06/2026

ಶಿರಾ:ಶಾಸಕ ಟಿ ಬಿ #ಜಯಚಂದ್ರ ರವರನ್ನು #ಸಚಿವ ಸಂಪುಟದಲ್ಲಿ #ಮಂತ್ರಿ ಸ್ಥಾನ ಕೊಡಬೇಕೆಂದು #ಒತ್ತಾಯ ಹಾಗು ಜಿ. ಪರಮೇಶ್ವರ್ ಗೆ ಉಪ ಮುಖ್ಯಮಂತ್ರಿ ಮತ್ತು ಪ್ರಿಯಾಂಕಾ ಖರ್ಗೆ ಗೆ ಗೃಹ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕಾಗಿ ತಾಲೂಕಿನಲ್ಲಿ ಚಲವಾದಿ ಮಹಾಸಭಾ ವತಿಯಿಂದ #ವಿಜಯೋತ್ಸವ.

ಶಿರಾ: ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ, ಶಿರಾ ತಾಲೂಕಿನ ಚಲವಾದಿ ಮಹಾಸಭಾ ಸಮುದಾಯದ ವತಿಯಿಂದ ಭವ್ಯ ವಿಜಯೋತ್ಸವವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಸಮುದಾಯದ ಮುಖಂಡರು ಹಾಗೂ ಬಂಧುಗಳು ಒಟ್ಟಾಗಿ ಸೇರಿ ಕ್ರಾಂತಿಕಾರಿ ಧೀಮಂತ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಸಿಹಿ ಹಂಚಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಸಂಭ್ರಮದಲ್ಲಿ ಭಾಗವಹಿಸಿದ ಪ್ರಮುಖರು:
ಈ ಸಂತೋಷದ ಕ್ಷಣದಲ್ಲಿ ತಾಲೂಕಿನ ಚಲವಾದಿ ಬಂಧುಗಳೊಂದಿಗೆ ಹಲವಾರು ಪ್ರಮುಖ ಮುಖಂಡರು ಭಾಗವಹಿಸಿದ್ದರು:
ಎನ್. ದಾಸಪ್ಪ
ಬಲರಾಮ್ ತಾವರೆಕೆರೆ
ಯೋಗೇಂದ್ರ ಕುಮಾರ್ ಬೋರಸಂದ್ರ
ಟಿ.ಎನ್. ಪುಟ್ಟರಾಜ್ ತರೂರ್
ಹರೀಶ್
ತಿಪ್ಪೇಸ್ವಾಮಿ ಧಾರಾಳು
ಪ್ರೇಮ್ ಕುಮಾರ್
ಶಿವಕುಮಾರ್ ಸೋರೆಕುಂಟೆ
ರಾಜಣ್ಣ ಹುಂಜನಾಳು
ವೀರೇಂದ್ರ ಕೆ.ಬಿ.
ರಂಗನಾಥ್ ಕೊಟ್ಟ
ಕುಮಾರಸ್ವಾಮಿ
ಇವರೆಲ್ಲರ ಉಪಸ್ಥಿತಿಯಲ್ಲಿ ವಿಜಯೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.

05/06/2026
📍 ಹಾಸನ | ಹೊಳೆನರಸೀಪುರವಿದ್ಯಾರ್ಥಿನಿ ನಿಲಯದಲ್ಲಿ ದುರಂತ ಘಟನೆಅಂತಿಮ ವರ್ಷದ ಬಿ.ಎಸ್‌.ಸಿ ವಿದ್ಯಾರ್ಥಿನಿಯ ಸಾವುಹಾಸನ ಜಿಲ್ಲೆಯ ಹೊಳೆನರಸೀಪುರ ಪ...
05/06/2026

📍 ಹಾಸನ | ಹೊಳೆನರಸೀಪುರ
ವಿದ್ಯಾರ್ಥಿನಿ ನಿಲಯದಲ್ಲಿ ದುರಂತ ಘಟನೆ
ಅಂತಿಮ ವರ್ಷದ ಬಿ.ಎಸ್‌.ಸಿ ವಿದ್ಯಾರ್ಥಿನಿಯ ಸಾವು
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಅಂತಿಮ ವರ್ಷದ ಬಿ.ಎಸ್‌.ಸಿ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ನ ಸ್ನಾನದ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಚುಂಚನಕಟ್ಟೆ ಗ್ರಾಮದ ಬಸವೇಗೌಡ ಹಾಗೂ ಸುವರ್ಣ ದಂಪತಿಯ ಪುತ್ರಿ ಶ್ರೀರಕ್ಷಾ (21) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಅವರು ಹೊಳೆನರಸೀಪುರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎಸ್‌.ಸಿ ವ್ಯಾಸಂಗ ಮಾಡುತ್ತಿದ್ದರು.
ಘಟನೆಯ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾವು ಸಂಬಂಧಿಸಿದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೃತ ವಿದ್ಯಾರ್ಥಿನಿಯ ಅಗಲಿಕೆಯಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಾಲೇಜು ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಶಿರಾಕ್ಕೆ ನ್ಯಾಯ ಸಿಗಲಿ
04/06/2026

ಶಿರಾಕ್ಕೆ ನ್ಯಾಯ ಸಿಗಲಿ

ಬೆಂಗಳೂರು : #ಫ್ಲೈಓವರ್  #ಪಿಲ್ಲರ್ ಒಳಗೆ  #ವ್ಯಕ್ತಿಯ ವಾಸ! ಜಾಲಹಳ್ಳಿ ಕ್ರಾಸ್‌ನ ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಬೆಂಗಳೂರುಬೆಂಗಳೂರು: ಸಿಲಿಕ...
03/06/2026

ಬೆಂಗಳೂರು : #ಫ್ಲೈಓವರ್ #ಪಿಲ್ಲರ್ ಒಳಗೆ #ವ್ಯಕ್ತಿಯ ವಾಸ! ಜಾಲಹಳ್ಳಿ ಕ್ರಾಸ್‌ನ ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಬೆಂಗಳೂರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕ್ಕೊಂದು ವಿಚಿತ್ರ ಘಟನೆ ಬೆಳಕಿಗೆ ಬರುತ್ತಲೇ ಇರುತ್ತದೆ. ಆದರೆ ಜಾಲಹಳ್ಳಿ ಕ್ರಾಸ್‌ನಲ್ಲಿ ನಡೆದಿರುವ ಈ ಘಟನೆ ಮಾತ್ರ ಸಾರ್ವಜನಿಕರನ್ನು ಅಚ್ಚರಿಗೊಳಿಸಿದೆ. ಜನಸಂದಣಿ, ಮೆಟ್ರೋ ಸಂಚಾರ ಮತ್ತು ಸಾವಿರಾರು ವಾಹನಗಳ ಓಡಾಟದ ನಡುವೆ ಇರುವ ಫ್ಲೈಓವರ್ ಪಿಲ್ಲರ್‌ನೊಳಗೆ ವ್ಯಕ್ತಿಯೊಬ್ಬ ವಾಸಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಫ್ಲೈಓವರ್ ಪಿಲ್ಲರ್‌ನ ಕಾಂಕ್ರೀಟ್ ಒಳಭಾಗದಲ್ಲಿರುವ ಕಿರಿದಾದ ಜಾಗದಲ್ಲಿ ವ್ಯಕ್ತಿಯೊಬ್ಬ ಮಲಗಿರುವುದು ಪತ್ತೆಯಾಗುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಆಶ್ಚರ್ಯಚಕಿತರಾದರು. ಈ ದೃಶ್ಯವನ್ನು ನೋಡಲು ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರು.
ಯಾರು ಈ ವ್ಯಕ್ತಿ?
ಹೆಸರು: ರಂಗನಾಥ್
ವಯಸ್ಸು: ಸುಮಾರು 38 ವರ್ಷ
ಮೂಲ ಊರು: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರ ನಿವಾಸಿ
ಹಿನ್ನೆಲೆ: ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಹಮಾಲಿ ಕಾರ್ಮಿಕ. ಶಾಶ್ವತ ವಾಸಸ್ಥಳವಿಲ್ಲದೆ ಅಲೆದಾಡುತ್ತಿದ್ದ ವ್ಯಕ್ತಿ.
ಪಿಲ್ಲರ್ ಒಳಗೆ ಹೋಗುತ್ತಿದ್ದದ್ದು ಹೇಗೆ?
ಅತ್ಯಂತ ಕಿರಿದಾದ ಮತ್ತು ಎತ್ತರದ ಈ ಜಾಗಕ್ಕೆ ಯಾವುದೇ ಏಣಿ ಅಥವಾ ಅಧಿಕೃತ ಪ್ರವೇಶ ಮಾರ್ಗ ಇರಲಿಲ್ಲ. ಆದರೂ ರಂಗನಾಥ್ ಹತ್ತಿರದ ಪೈಪ್‌ಗಳು ಹಾಗೂ ಕಾಂಕ್ರೀಟ್‌ನ ಸಣ್ಣ ಆಸರೆಗಳನ್ನು ಬಳಸಿಕೊಂಡು ಮೇಲಕ್ಕೆ ಹತ್ತಿ ಪಿಲ್ಲರ್ ಒಳಗೆ ಪ್ರವೇಶಿಸುತ್ತಿದ್ದ ಎನ್ನಲಾಗಿದೆ.
ಹಗಲು ವೇಳೆ ಕೂಲಿ ಕೆಲಸ ಮಾಡುತ್ತಿದ್ದ ಆತ, ಮುಂಜಾನೆ ಯಾರ ಗಮನಕ್ಕೂ ಬಾರದಂತೆ ಪಿಲ್ಲರ್ ಒಳಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದ. ಸಂಜೆ ವೇಳೆಗೆ ಮತ್ತೆ ಕೆಳಗೆ ಇಳಿದು ಬರುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.
ಆಕಸ್ಮಿಕವಾಗಿ ಬೆಳಕಿಗೆ ಬಂದ ಸಂಗತಿ
ಸ್ಥಳೀಯರ ಮಾಹಿತಿ ಪ್ರಕಾರ, ರಂಗನಾಥ್ ಹಲವು ದಿನಗಳಿಂದ ಫ್ಲೈಓವರ್‌ನ ‘ಎಕ್ಸ್‌ಪಾನ್ಷನ್ ಗ್ಯಾಪ್’ ಎಂದು ಕರೆಯಲಾಗುವ ಕಿರಿದಾದ ಜಾಗದಲ್ಲೇ ತಂಗಿದ್ದ.
ಕಳೆದ ವಾರ ಮಧ್ಯಾಹ್ನ ಸಾರ್ವಜನಿಕರೊಬ್ಬರು ಆಕಸ್ಮಿಕವಾಗಿ ಮೇಲಕ್ಕೆ ನೋಡಿದಾಗ, ಪಿಲ್ಲರ್ ಒಳಗಿನಿಂದ ವ್ಯಕ್ತಿಯ ಕಾಲುಗಳು ಕಾಣಿಸಿಕೊಂಡಿವೆ. ಅನುಮಾನಗೊಂಡು ಪರಿಶೀಲಿಸಿದಾಗ ಅಲ್ಲಿ ವ್ಯಕ್ತಿಯೊಬ್ಬ ನಿರಾಳವಾಗಿ ಮಲಗಿರುವುದು ಗೊತ್ತಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಕೆಳಗೆ ಜನರು ಗುಂಪುಗೂಡಿ ವಿಡಿಯೋ ಮಾಡುತ್ತಿದ್ದರೂ ಆತ ಗಾಢ ನಿದ್ರೆಯಲ್ಲಿದ್ದ.
ಸಾವಿರಾರು ಜನ ಸಂಚರಿಸುವ ಜಾಲಹಳ್ಳಿ ಕ್ರಾಸ್‌ನಂತಹ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ನಿಯಮಿತ ಪರಿಶೀಲನೆ ಹಾಗೂ ನಿರ್ವಹಣೆಯಲ್ಲಿ ಲೋಪವಿದೆಯೇ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
ಅಂತಿಮವಾಗಿ...
ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಂಗನಾಥ್ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿ ಅಗತ್ಯ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದಾದ ನಂತರ ಬಿಬಿಎಂಪಿ ಅಧಿಕಾರಿಗಳು ಪಿಲ್ಲರ್‌ನಲ್ಲಿದ್ದ ಖಾಲಿ ಜಾಗಕ್ಕೆ ಕಬ್ಬಿಣದ ಜಾಲರಿ ಅಳವಡಿಸಿ ಮುಚ್ಚುವ ಕ್ರಮ ಕೈಗೊಂಡಿದ್ದಾರೆ.

02/06/2026

ಹಿರಿಯೂರು :ನೀರಿಗಾಗಿ ರೈತರ ಬೈಕ್ ಜಾತಾ

ವೇಶ್ಯಾವೃತ್ತಿ ನಿಷೇಧಿತವಲ್ಲ, ಆದರೆ ಅದರ ವಾಣಿಜ್ಯೀಕರಣಕ್ಕೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್ವೇಶ್ಯಾವೃತ್ತಿ ಭಾರತದಲ್ಲಿ ಸ್ವತಃ ಕಾನೂನುಬಾಹಿರವಲ್...
01/06/2026

ವೇಶ್ಯಾವೃತ್ತಿ ನಿಷೇಧಿತವಲ್ಲ, ಆದರೆ ಅದರ ವಾಣಿಜ್ಯೀಕರಣಕ್ಕೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್
ವೇಶ್ಯಾವೃತ್ತಿ ಭಾರತದಲ್ಲಿ ಸ್ವತಃ ಕಾನೂನುಬಾಹಿರವಲ್ಲ. ಆದರೆ ಅದನ್ನು ಸಂಘಟಿತವಾಗಿ ನಡೆಸುವುದು, ದಲ್ಲಾಳಿ ವ್ಯವಸ್ಥೆ, ಮಾನವ ಕಳ್ಳಸಾಗಣೆ ಅಥವಾ ವಾಣಿಜ್ಯ ಉದ್ದೇಶದ ಶೋಷಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಪೀಠದ ಪ್ರಕಾರ, ಒಬ್ಬ ಮಹಿಳೆ ತನ್ನ ಜೀವನೋಪಾಯಕ್ಕಾಗಿ, ಯಾವುದೇ ದಲ್ಲಾಳಿ, ನಿರ್ವಾಹಕ ಅಥವಾ ಇತರರ ಹಸ್ತಕ್ಷೇಪವಿಲ್ಲದೆ ತನ್ನ ಸ್ವಂತ ನಿವಾಸದಲ್ಲಿ ಸ್ವತಂತ್ರವಾಗಿ ಲೈಂಗಿಕ ಸೇವೆ ಒದಗಿಸುತ್ತಿದ್ದರೆ, ಆ ನಿವಾಸವನ್ನು "ವೇಶ್ಯಾಗೃಹ" ಎಂದು ಪರಿಗಣಿಸಲಾಗುವುದಿಲ್ಲ.
ಈ ತೀರ್ಪು ಲೈಂಗಿಕ ಕಾರ್ಯಕರ್ತೆಯರ ಮೂಲಭೂತ ಹಕ್ಕುಗಳು, ಗೌರವಯುತ ಬದುಕು ಹಾಗೂ ಕಾನೂನು ರಕ್ಷಣೆಯ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ.

Address

Sira
TUMKURE

Website

Alerts

Be the first to know and let us send you an email when KAIM posts news and promotions. Your email address will not be used for any other purpose, and you can unsubscribe at any time.

Share