ಕನ್ನಡ ಆಲ್ ಇಂಡಿಯ ಮೀಡಿಯ ನ್ಯೂಸ್

  • Home
  • India
  • Sira
  • ಕನ್ನಡ ಆಲ್ ಇಂಡಿಯ ಮೀಡಿಯ ನ್ಯೂಸ್

ಕನ್ನಡ ಆಲ್ ಇಂಡಿಯ ಮೀಡಿಯ ನ್ಯೂಸ್ journalist. bangalore,( proper sira, tumkur) Karnataka,,,
, ಸತ್ಯ ಮುಚ್ಚಿಟ್ಟರೆ ಸಂವಿಧಾನಕ್ಕೆ ಮಾರಕ

06/09/2026

ಸಿರಾ :ಜಾತ್ಯತೀತವಾಗಿ ಕಾಡುಗೊಲ್ಲ ಯುವ ಮುಖಂಡರುಗಳಿಂದ ಶ್ರೀ ಕೃಷ್ಣ ಜನ್ಮೋತ್ಸವದ ಮೆರವಣಿಗೆ

06/09/2026

ಶಿರಾದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೆರವಣಿಗೆ ಕಾರ್ಯಕ್ರಮ

05/09/2026
ಕಾಲೇಜು ಹಾಸ್ಟೆಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಸಾವು: ಕುಟುಂಬದಿಂದ ಅನುಮಾನ, ತನಿಖೆಗೆ ಆಗ್ರಹದಾವಣಗೆರೆ: ದ್ವಿತೀಯ ಪಿಯುಸಿ ಓದುತ್ತಿದ್ದ ...
04/09/2026

ಕಾಲೇಜು ಹಾಸ್ಟೆಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಸಾವು: ಕುಟುಂಬದಿಂದ ಅನುಮಾನ, ತನಿಖೆಗೆ ಆಗ್ರಹ
ದಾವಣಗೆರೆ: ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ದಾವಣಗೆರೆಯ ಟೀಮ್‌ ಅಕಾಡೆಮಿ ಹಾಸ್ಟೆಲ್‌ನಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಅವರ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ.
ಓದಿನಲ್ಲಿ ಪ್ರತಿಭಾವಂತೆಯಾಗಿದ್ದ ರಂಜಿತಾ, ಕೆಲವೇ ದಿನಗಳ ಹಿಂದೆ ಸ್ವಗ್ರಾಮದಲ್ಲಿ ನಡೆದಿದ್ದ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಸಂತೋಷದಿಂದ ಭಾಗವಹಿಸಿ ಬಳಿಕ ದಾವಣಗೆರೆಗೆ ಮರಳಿದ್ದಳು.
ಬೆಳಗ್ಗೆಯಷ್ಟೇ ತಾಯಿಯೊಂದಿಗೆ ಮಾತನಾಡಿದ್ದಳು
ಘಟನೆ ನಡೆದ ದಿನ ಬೆಳಗ್ಗೆಯೂ ರಂಜಿತಾ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಳು ಎನ್ನಲಾಗಿದೆ. ಸಂಜೆ ಕಾಲೇಜಿನಿಂದ ಹಾಸ್ಟೆಲ್ ಕೊಠಡಿಗೆ ತೆರಳಿದ್ದಳು. ರಾತ್ರಿ ಆಕೆಯ ಸ್ನೇಹಿತೆಯರು ಕೊಠಡಿಗೆ ತೆರಳಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಕೊಠಡಿಯನ್ನು ಪರಿಶೀಲಿಸಿದಾಗ ರಂಜಿತಾ ಮೃತಪಟ್ಟಿರುವುದು ಪತ್ತೆಯಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾವಿನ ಬಗ್ಗೆ ಕುಟುಂಬಸ್ಥರಿಂದ ಅನುಮಾನ
ರಂಜಿತಾ ಸಾವಿನ ಹಿಂದೆ ಅನುಮಾನಾಸ್ಪದ ಸಂಗತಿಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಮಗ್ರ ತನಿಖೆ ನಡೆಸಿ ಸತ್ಯವನ್ನು ಹೊರತರಬೇಕು ಎಂದು ಒತ್ತಾಯಿಸಿದ್ದಾರೆ.
"ನಮ್ಮ ಮಗಳ ಸಾವಿನ ಬಗ್ಗೆ ನಮಗೆ ಅನುಮಾನಗಳಿವೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು" ಎಂದು ತಂದೆ ನಿಂಗಪ್ಪ ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.
ಕಾಲೇಜು ಆಡಳಿತದ ಪ್ರತಿಕ್ರಿಯೆ
ಘಟನೆಯ ಬಳಿಕ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಟೀಮ್‌ ಅಕಾಡೆಮಿ ಚೇರ್ಮನ್ ಮಂಜಪ್ಪ, ರಂಜಿತಾ ಊರಿನಿಂದ ಹಿಂದಿರುಗಿದ ಬಳಿಕ ಸ್ವಲ್ಪ ಖಿನ್ನತೆಯಲ್ಲಿದ್ದಳು ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದ್ದಾರೆ.
ಕುಟುಂಬಸ್ಥರು ದುಃಖದಲ್ಲಿರುವ ಕಾರಣ ವಿವಿಧ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿಯ ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಕುಟುಂಬಸ್ಥರ ಆರೋಪಗಳ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ.

🔥 ಹೈಕೋರ್ಟ್‌ನಲ್ಲಿ ಹೊಸ ದಾಖಲೆ!ಒಂದೇ ದಿನ 240ಕ್ಕೂ ಹೆಚ್ಚು ತುರ್ತು ಅರ್ಜಿಗಳ ವಿಚಾರಣೆತುರ್ತು ವಿಚಾರಣೆಗೆ ಕೋರಿದ್ದ 240ಕ್ಕೂ ಹೆಚ್ಚು ಅರ್ಜಿಗಳ...
04/09/2026

🔥 ಹೈಕೋರ್ಟ್‌ನಲ್ಲಿ ಹೊಸ ದಾಖಲೆ!
ಒಂದೇ ದಿನ 240ಕ್ಕೂ ಹೆಚ್ಚು ತುರ್ತು ಅರ್ಜಿಗಳ ವಿಚಾರಣೆ
ತುರ್ತು ವಿಚಾರಣೆಗೆ ಕೋರಿದ್ದ 240ಕ್ಕೂ ಹೆಚ್ಚು ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಕರ್ನಾಟಕ ಹೈಕೋರ್ಟ್‌ ಕಲಾಪಗಳ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ್ದಾರೆ.
⚖️ ಒಂದೇ ದಿನ ಇಷ್ಟೊಂದು ಅರ್ಜಿಗಳ ವಿಚಾರಣೆ — ವಿಶೇಷ ದಾಖಲೆ!

🌊 ನೇಪಾಳದ ಜಲಪ್ರಳಯದಲ್ಲೂ ಅಲುಗಾಡದೆ ನಿಂತ ಮನೆ! 🏠ಸುತ್ತಮುತ್ತ ಎಲ್ಲವೂ ಪ್ರವಾಹದ ರಭಸಕ್ಕೆ ಕೊಚ್ಚಿಹೋದರೂ, ಈ ಒಂದು ಮನೆ ಮಾತ್ರ ಗಟ್ಟಿಯಾಗಿ ನಿಂತ...
02/09/2026

🌊 ನೇಪಾಳದ ಜಲಪ್ರಳಯದಲ್ಲೂ ಅಲುಗಾಡದೆ ನಿಂತ ಮನೆ! 🏠
ಸುತ್ತಮುತ್ತ ಎಲ್ಲವೂ ಪ್ರವಾಹದ ರಭಸಕ್ಕೆ ಕೊಚ್ಚಿಹೋದರೂ, ಈ ಒಂದು ಮನೆ ಮಾತ್ರ ಗಟ್ಟಿಯಾಗಿ ನಿಂತಿದೆ. 😮
ಇಂತಹ ಬಲಿಷ್ಠ ನಿರ್ಮಾಣ ಮಾಡಿದ ಮೇಸ್ತ್ರಿ ಮತ್ತು ಎಂಜಿನಿಯರ್‌ಗೆ ನಿಜವಾಗಿಯೂ ಒಂದು ಅವಾರ್ಡ್ ಕೊಡಬೇಕು! 👏🏆
ಇದು ಕೇವಲ ಅದೃಷ್ಟವಲ್ಲ, ಮನೆಯ ನಿರ್ಮಾಣದ ಗುಣಮಟ್ಟವೂ ಕಾರಣವಾಗಿರಬಹುದು ಎಂದು ತಜ್ಞರ ವಿಶ್ಲೇಷಣೆ ಹೇಳುತ್ತದೆ.

ವಿಧಾನ ಪರಿಷತ್‌ಗೆ ಚಿತ್ರನಟ ವಿ. ರವಿಚಂದ್ರನ್ ಸೇರಿದಂತೆ ಮೂವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ?ಬೆಂಗಳೂರು: ಕರ್ನಾಟಕ ವಿಧಾನಸಭ...
31/08/2026

ವಿಧಾನ ಪರಿಷತ್‌ಗೆ ಚಿತ್ರನಟ ವಿ. ರವಿಚಂದ್ರನ್ ಸೇರಿದಂತೆ ಮೂವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ?

ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಳ್ಳುವ ಮೂವರು ಸದಸ್ಯರ ಆಯ್ಕೆ ಬಹುತೇಕ ಅಂತಿಮಗೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿನಿಮಾ ಕ್ಷೇತ್ರದಿಂದ ಹಿರಿಯ ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್, ಸಮಾಜಸೇವೆ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರದಿಂದ ಮಂಜುಳಾ ನಾಯ್ಡು, ಪತ್ರಿಕೋದ್ಯಮ ಕ್ಷೇತ್ರದಿಂದ ಕೆ.ವಿ. ಪ್ರಭಾಕರ್ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ.
ವಿ. ರವಿಚಂದ್ರನ್:
ಸಿನಿಮಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವಿ. ರವಿಚಂದ್ರನ್ ಅವರನ್ನು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ಹಿರಿಯ ನಟನಿಗೆ ಗೌರವ ದೊರೆತಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಲ್ಯದ ಸ್ನೇಹಿತರಾಗಿರುವ ರವಿಚಂದ್ರನ್ ಅವರ ಆಯ್ಕೆ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ. ಈ ಹಿಂದೆ ಇದೇ ಕೋಟಾದಲ್ಲಿ ಉಮಾಶ್ರೀ, ತಾರಾ, ಜಯಮಾಲಾ, ದೊಡ್ಡರಂಗೇಗೌಡ ಸೇರಿದಂತೆ ಹಲವರು ವಿಧಾನ ಪರಿಷತ್ ಸದಸ್ಯರಾಗಿದ್ದರು.
ಮಂಜುಳಾ ನಾಯ್ಡು:
ರಾಜ್ಯ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಹಾಗೂ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆಯಾಗಿರುವ ಮಂಜುಳಾ ನಾಯ್ಡು, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ಮಹಿಳಾ ಸಬಲೀಕರಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಪರಿಗಣಿಸಲಾಗಿದೆ ಎನ್ನಲಾಗಿದೆ.
ಕೆ.ವಿ. ಪ್ರಭಾಕರ್:
ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿರುವ ಕೆ.ವಿ. ಪ್ರಭಾಕರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ತಮ್ಮ ಆಪ್ತ ಸಲಹೆಗಾರರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕಲ್ಪಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಈ ಮೂವರ ನಾಮನಿರ್ದೇಶನದ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

30/08/2026

ಶಿರಾ : #ಸಾಹಿತ್ಯದ #ಸಂವಾದಕ್ಕೆ ಸಾಕ್ಷಿಯಾದ ಪಟ್ಟನಾಯಕನಹಳ್ಳಿ
ಪಟ್ಟನಾಯಕನಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ‘ಸಾಹಿತ್ಯದ ಸಂವಾದ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಾಡೋಜ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಸಾಹಿತಿಗಳು ಹಾಗೂ ಬರಹಗಾರರು ಭಾಗವಹಿಸಿ ಸಾಹಿತ್ಯ, ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ವಿಚಾರ ವಿನಿಮಯ ನಡೆಸಿದರು.
🎤 ಅಧ್ಯಯನ + ಅನುಭವ + ಸೃಜನಶೀಲತೆ = ಉತ್ತಮ ಸಾಹಿತ್ಯ

ಅಮೀದಾಲಗೊಂಡಿ ಬಳಿ ಮುಖಾಮುಖಿ ಡಿಕ್ಕಿ: ಬಸ್ ಚಾಲಕನ ಕಾಲು ಮುರಿತ, ಐವರು ಮಕ್ಕಳು ಆಸ್ಪತ್ರೆಗೆಅಮೀದಾಲಗೊಂಡಿ: ಅಮೀದಾಲಗೊಂಡಿ ಸಮೀಪ ಎರಡು ಬಸ್‌ಗಳ ನ...
29/08/2026

ಅಮೀದಾಲಗೊಂಡಿ ಬಳಿ ಮುಖಾಮುಖಿ ಡಿಕ್ಕಿ: ಬಸ್ ಚಾಲಕನ ಕಾಲು ಮುರಿತ, ಐವರು ಮಕ್ಕಳು ಆಸ್ಪತ್ರೆಗೆ
ಅಮೀದಾಲಗೊಂಡಿ: ಅಮೀದಾಲಗೊಂಡಿ ಸಮೀಪ ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಬಸ್ ಚಾಲಕನಿಗೆ ಕಾಲಿಗೆ ಗಾಯವಾಗಿರುವುದಾಗಿ ಹಾಗೂ ಐವರು ಮಕ್ಕಳು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ವರದಿಯಾಗಿದೆ.
ಅಪಘಾತದ ಪರಿಣಾಮ ಎರಡೂ ಬಸ್‌ಗಳ ಮುಂಭಾಗದ ಭಾಗಕ್ಕೆ ಹಾನಿಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಗೊಂಡವರನ್ನು ಸ್ಥಳೀಯರು ಹಾಗೂ ಸಂಬಂಧಪಟ್ಟವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.

🚆 ಜೋಗಿಹಳ್ಳಿ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಸಚಿವ ವಿ. ಸೋಮಣ್ಣಶಿರಾ: ತುಮಕೂರು–ದಾವಣಗೆರೆ ನೂತನ ರೈಲು ಮಾರ್ಗದ ಶಿರಾ ತಾಲ್ಲೂಕಿನ ಜೋಗಿ...
29/08/2026

🚆 ಜೋಗಿಹಳ್ಳಿ ರೈಲ್ವೆ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಸಚಿವ ವಿ. ಸೋಮಣ್ಣ
ಶಿರಾ: ತುಮಕೂರು–ದಾವಣಗೆರೆ ನೂತನ ರೈಲು ಮಾರ್ಗದ ಶಿರಾ ತಾಲ್ಲೂಕಿನ ಜೋಗಿಹಳ್ಳಿ ರೈಲ್ವೆ ನಿಲ್ದಾಣದ ಕಾಮಗಾರಿಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಪರಿವೀಕ್ಷಣೆ ನಡೆಸಿದರು.
ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ಕಾಮಗಾರಿಯನ್ನು ಅತ್ಯಂತ ವೇಗವಾಗಿ ಹಾಗೂ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಪ್ರಮುಖ ಮುಖಂಡರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
📍 ತುಮಕೂರು–ದಾವಣಗೆರೆ ರೈಲು ಮಾರ್ಗ | ಜೋಗಿಹಳ್ಳಿ

Address

Sira
TUMKURE

Website

Alerts

Be the first to know and let us send you an email when ಕನ್ನಡ ಆಲ್ ಇಂಡಿಯ ಮೀಡಿಯ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Shortcuts

Share