Swasthik Media

Swasthik Media Contact us for all kind of media related work

ಅಸಲಿ ಬಂಗಾರ ನೀಡುವುದಾಗಿ 10 ಲಕ್ಷ ರೂಪಾಯಿ ಪಡೆದು ನಕಲಿ ಬಂಗಾರ ನೀಡಿ ವಂಚಿಸಿದ ಆರೋಪಿಯ ಬಂಧನಸಿದ್ದಾಪುರ:ಅಸಲಿ ಬಂಗಾರ ನೀಡುವುದಾಗಿ ಹತ್ತು ಲಕ್ಷ...
28/03/2026

ಅಸಲಿ ಬಂಗಾರ ನೀಡುವುದಾಗಿ 10 ಲಕ್ಷ ರೂಪಾಯಿ ಪಡೆದು ನಕಲಿ ಬಂಗಾರ ನೀಡಿ ವಂಚಿಸಿದ ಆರೋಪಿಯ ಬಂಧನ

ಸಿದ್ದಾಪುರ:ಅಸಲಿ ಬಂಗಾರ ನೀಡುವುದಾಗಿ ಹತ್ತು ಲಕ್ಷ ರೂಪಾಯಿ ತೆಗೆದುಕೊಂಡು ನಕಲಿ ಬಂಗಾರ ನೀಡಿ ವಂಚಿಸಿದ ಪ್ರಕರಣವನ್ನು ಭೇದಿಸುವಲ್ಲಿ ಸಿದ್ದಾಪುರ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಕೆಲವು ದಿನಗಳ ಹಿಂದೆ ಸಿದ್ದಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬಂಗಾರವನ್ನು ನೀಡುವುದಾಗಿ ಹೇಳಿ ನಕಲಿ ಬಂಗಾರ ನೀಡಿ ಹತ್ತು ಲಕ್ಷ ರೂಪಾಯಿ ಪಡೆದು ವ್ಯಕ್ತಿಯೊಬ್ಬರನ್ನು ವಂಚಿಸಲಾಗಿತ್ತು. ಈ ಕುರಿತು ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಿಸಿ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದರು.ಕೊನೆಗೂ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕ ಮುದ್ದೇಶನಹಳ್ಳಿ ಗ್ರಾಮದ ಗಜೇಂದ್ರ ಹಾಲೇಶಪ್ಪ ಕೊರಚರ ಬಂದಿತ ವ್ಯಕ್ತಿಯಾಗಿದ್ದು ಬಂಧಿತನಿಂದ 10 ಲಕ್ಷ ರೂಪಾಯಿ,ಕೃತ್ಯಕ್ಕೆ ಉಪಯೋಗಿಸಿದ ಮೋಟರ್ ಸೈಕಲ್ ಹಾಗೂ ಕೀಪ್ಯಾಡ್ ಮೊಬೈಲ್ ಒಂದನ್ನು ವಶ ಪಡಿಸಿಕೊಂಡಿದ್ದಾರೆ. ಸಿದ್ದಾಪುರ ಪೊಲೀಸರ ಈ ಮಹತ್ವದ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

21/03/2026

ಶಿರಸಿ :- ಶ್ರೀ ಮಾರಿಕಾಂಬಾ ದೇವಿಯ ಬಗ್ಗೆ ಸುಳ್ಳು ಕಥೆಯನ್ನು ಸೃಷ್ಟಿ ಮಾಡಿ ದಲಿತ ಸಮುದಾಯವನ್ನು ಅವಹೇಳನ ಮಾಡುವ ಕಥೆಯನ್ನು ನಿಲ್ಲಿಸಿ . ಇಲ್ಲವಾದಲ್ಲಿ ಕಾನೂನು ಪ್ರಕ್ರಿಯೆಗೆ ಒಳಪಡಿ ಅರ್ಜುನ್ ಮಿಂಟಿ

ಶಿರಸಿಯ ಪ್ರಸಿದ್ಧ ದೇವತೆಯಾದ ಮಾರಿಕಾಂಬಾ ದೇವಿಯ ಬಗ್ಗೆ ಮನುವಾದಿಗಳು ಜಾತಿವಾದಿಗಳು ಸೃಷ್ಟಿ ಮಾಡಿರುವ ಸುಳ್ಳಿನಿಂದ ದಲಿತ ಸಮುದಾಯದ ಬಗ್ಗೆ ಕೀಳರಿಮೆ ಬರುವ ದುರುದ್ದೇಶದಿಂದ ಅದರಲ್ಲು ಕೂಡ ಚಮಗಾರ ಸಮುದಾಯ ವ್ಯಕ್ತಿಯು ಬ್ರಾಹ್ಮಣನಾದ ಹೆಣ್ಣನ್ನು (ಮಾರಿಕಾಂಬೆಯನ್ನು ) ಸುಳ್ಳು ಹೇಳಿ ತಾನು ಕುಡ ಬ್ರಾಹ್ಮಣ ಎಂದು ಮದುವೆಯಾಗುತ್ತಾನೆ . ನಂತರ ಇವರಿಗೆ ಜನಿಸಿದ ಮಕ್ಕಳು ಒಂದು ದಿನ ತಮ್ಮ ತಂದೆಯು ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಾರೆ ಎಂದು ತಮ್ಮ ತಾಯಿಯ ಬಳಿ ಬಂದು ಹೇಳಿದಾಗ ಆಗ ಆ ಹೆಣ್ಣು ರುದ್ರಾವತಾರ ತಾಳಿ ತನ್ನ ಗಂಡನು ನನಗೆ ಸುಳ್ಳು ಹೇಳಿ ತನ್ನ ಕುಲ ಮತ್ತು ಜಾತಿಯನ್ನು ಕೆಡಿಸಿದ ಎಂದು ಸ್ವತಾ ತನ್ನ ಗಂಡನನ್ನೇ ಸಂಹಾರ ಮಾಡುತ್ತಾಳೆ ನಂತರ ಮಾರಿ ಆಗುತ್ತಾಳೆ ಎಂದು ಸುಳ್ಳು ಅಸಯ್ಯವಾದ ಯಾವುದೇ ಪುರಾವೆ ಇಲ್ಲದ ಕಥೆಯನ್ನು ಜಾತಿವಾದಿಗಳು ಸೃಷ್ಟಿ ಮಾಡಿ ಇರುತ್ತಾರೆ . ಇಂಥಹ ಸುಳ್ಳು ಕಥೆಯಿಂದ ಒಂದು ಸಮುದಾಯದ ಜನರಿಗೆ ನೋವಾಗುವುದಲ್ಲದೆ ಜಾತಿ ಪದ್ದತಿಯನ್ನು ಹಾಗೆ ಮುಂದುವರಿಸಿಕೊಂಡು ಹೋಗುವ ಅನಿಷ್ಠ ಕಥೆ ಇದಾಗಿದ್ದು ಇಂಥಹ ಆಧಾರವಿಲ್ಲದ ಕಥೆಯಿಂದ ಅಂತರ್ಜಾತಿ ವಿವಾಹ ಆಗಲೇಬಾರದು ಆದರೆ ಇಂಥ ಸನ್ನಿವೇಶಗಳು ಆಗುತ್ತದೆ ಎಂದು ಅಂದಿನ ಜಾತಿವಾದಿಗಳು ಇಂಥಹ ಸುಳ್ಳು ಕಥೆಯನ್ನ ಸೃಷ್ಟಿ ಮಾಡಿ ಇರುತ್ತಾರೆ .ಇದೆ ಕಥೆಯನ್ನೇ ಜನರ ತಲೆಯಲ್ಲಿ ತುಂಬಿಸಿ ತುಂಬಿಸಿ ಅದನ್ನೇ ಸತ್ಯ ಅನ್ನುವ ಹಾಗೆ ಮಾಡಿ ದಲಿತ ಸಮುದಾಯಕ್ಕೆ ನೋವುಂಟು ಮಾಡಿದ್ದಾರೆ . ಮಾರಿಕಾಂಬಾ ಆಡಳಿತ ಮಂಡಳಿಯವರು ಜಿಲ್ಲಾ ಆಡಳಿತ ತಾಲೂಕು ಆಡಳಿತ ಇಂಥ ಸುಳ್ಳು ಕಥೆಗಳಿಗೆ ಆಸ್ಪದ ನೀಡದೆ ಯಾರು ಇಂಥ ಕಥೆಯನ್ನು ಇಂದಿನ ವಿದ್ಯಮಾನದಲ್ಲು ಕೂಡ ನಿಜವೆಂದು ಬಿಂಬಿಸಲು ಹೊರಟಿದ್ದಾರೋ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು . ಮುಂದುವರಿದು ಮಾತನಾಡಿದ ಇವರು ಇಗ ದಲಿತರು ಸ್ವಾಭಿಮಾನಿಗಳಾಗಿದ್ದಾರೆ. ನೀವು ಕಟ್ಟುವ ಕಥೆಯನ್ನು ಕೇಳಲು ನಾವು ಸಿದ್ದರಿಲ್ಲ . ದೇವರು ಎಂದಿಗು ಕುಡಾ ಕೊಲ್ಲು ಕೊಚ್ಚು ಕಡಿ ಎಂದು ಹೇಳುವುದಿಲ್ಲ ದೇವರು ಎಂದರೆ ಶಾಂತಿಯ ಸ್ವರೂಪ ಹಾಗೇನಾದರು ಕೊಚ್ಚು ಕಡಿ ಎಂದರೆ ಅದು ದೇವರಾಗಲು ಸಾಧ್ಯವಿಲ್ಲ ಎಂದು ಭೀಮಘರ್ಜನೆ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅರ್ಜುನ್ ಮಿಂಟಿ ಅವರು ತಿಳಿಸಿದರು .



ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನ

ರಾಜಾರಾಮ ಹೆಗಡೆ ನಿಧನಶಿರಸಿ:ಸುತ್ತ- ಮುತ್ತಲಿನ ಹತ್ತಾರು ತಾಲೂಕುಗಳಲ್ಲಿ ಏಕಮೇವಾದ್ವಿತೀಯ ಎಂಬ ಹೆಗ್ಗಳಿಕೆ ಹೊಂದಿದ್ದ ಅತ್ಯಂತ ಅನುಭವಿ, ಪ್ರಸಿದ್...
19/03/2026

ರಾಜಾರಾಮ ಹೆಗಡೆ ನಿಧನ

ಶಿರಸಿ:ಸುತ್ತ- ಮುತ್ತಲಿನ ಹತ್ತಾರು ತಾಲೂಕುಗಳಲ್ಲಿ ಏಕಮೇವಾದ್ವಿತೀಯ ಎಂಬ ಹೆಗ್ಗಳಿಕೆ ಹೊಂದಿದ್ದ ಅತ್ಯಂತ ಅನುಭವಿ, ಪ್ರಸಿದ್ಧ ಫೋಟೋ ಗ್ರಾಪರ್, ಶಿರಸಿಯ ಶ್ರೀ ರಾಜ್ ಫೋಟೋ ಸ್ಟುಡಿಯೋ ಮಾಲೀಕರಾಗಿದ್ದ ಶಿರಸಿ ತಾಲೂಕು ಮುಂಡದೋಟದ ರಾಜಾರಾಮ ಹೆಗಡೆ(72) ನಿನ್ನೆ ರಾತ್ರಿ ನಿಧನರಾದ ಬಗ್ಗೆ ವರದಿಯಾಗಿದೆ.

ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ವತಿಯಿಂದ  ಯುಗಾದಿ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.ಸ್ವಾಗತ ಕೋರುವವರು  ವಿನಾಯಕ ಶೆಟ್ಟಿ ಮುಖ್ಯ ಕಾ...
19/03/2026

ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ವತಿಯಿಂದ ಯುಗಾದಿ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.
ಸ್ವಾಗತ ಕೋರುವವರು ವಿನಾಯಕ ಶೆಟ್ಟಿ ಮುಖ್ಯ ಕಾರ್ಯನಿರ್ವಾಹಕರು ಮತ್ತು ದಾನಿಗಳು ಹಾಗೂ ಶ್ರೀಧರ್ ಮೊಗೇರ್ ಅಧ್ಯಕ್ಷರು ಹಾಗೂ ಮಾಜಿ ಸದಸ್ಯರು ನಗರಸಭೆ ಶಿರಸಿ ಹಾಗೂ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇoದು 2026-27 ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ.ಇದು ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್ ಆಗಿದೆ...
06/03/2026

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇoದು 2026-27 ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ.ಇದು ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್ ಆಗಿದೆ

2026 27ರ ಬಜೆಟ್ ನ ಮುಖ್ಯ ಅಂಶಗಳು

ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ ಕೃಷಿ ಬೆಳೆಗಳ ಮೌಲ್ಯ ವರ್ಧನೆ, ಕೃಷಿ ತ್ಯಾಜ್ಯ ಮರುಬಳಕೆ ಉತ್ತೇಜನಕ್ಕೆ 100 ಕೋಟಿ ರೂ ಮೀಸಲು.

ವಿದ್ಯಾರ್ಥಿಗಳಿಗೆ AI ಕಲಿಕೆಗೆ ಪ್ರೋತ್ಸಾಹ*(ಎಂಟರಿಂದ 12ನೇ ತರಗತಿ ಮಕ್ಕಳಿಗೆ)

ಜಾತಿ ದೌರ್ಜನ್ಯ ತಡೆಯಲು ರೋಹಿತ್ ವೇಮುಲು ಕಾಯ್ದೆ ಜಾರಿಗೆ

ಆಯುಷ್ಮಾನ್ ಯೋಜನೆಗೆ 400 ಕೋಟಿ ಮೀಸಲು

ನಾಲ್ಕು ಸಾವಿರ ಎಲೆಕ್ಟ್ರಿಕ್ ಹಾಗೂ ಒಂದು ಸಾವಿರ ಡೀಸೆಲ್ ಬಸ್ ಖರೀದಿ

ಅಲ್ಪಸಂಖ್ಯಾತ ಮಹಿಳಾ ಸಹಕಾರ ಸಂಘ ಸ್ಥಾಪನೆ

ಅರಣ್ಯ ಇಲಾಖೆಯಲ್ಲಿ ನೂತನ ಚಿರತೆ ಕಾರ್ಯಪಡೆ ರಚನೆ

ಬೌದ್ಧ ಧಮ್ಮಾಚಾರಿಗಳಿಗೆ ಆರು ಸಾವಿರ ರೂ ವೇತನ

ಹಂತ -ಹಂತವಾಗಿ ಹೆಂಡದ ದರ ಏರಿಸುವ ಪ್ರಸ್ತಾವ

ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ- ಪುಸ್ತಕ ವಿತರಣೆ

ಗರ್ಭಿಣಿ -ಬಾಣಂತಿಯರಿಗೆ ಬಿಸಿಊಟ

ಸರಕಾರದ ಕಾನೂನುಗಳು ಕನ್ನಡಕ್ಕೆ ಭಾಷಾಂತರ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು

ಮಣ್ಣಿನ ಗುಣಮಟ್ಟ ಹೆಚ್ಚಿಸಲು 'ವಸುಧಾಮೃತ' ಯೋಜನೆ ಜಾರಿ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಒಟ್ಟು 4.48ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ

22,957 ಕೋಟಿ ರಾಜಸ್ವ ಕೊರತೆಯ ಬಜೆಟ್

1.32 ಲಕ್ಷ ಕೋಟಿ ಸಾಲದ ಮೊರೆ

ವೈಷ್ಣೋದೇವಿ ಯಾತ್ರಿಕರಿಗೆ ಸರಕಾರದಿಂದ 5000 ರೂ ಸಹಾಯ ಧನ

83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70000 ಕೋಟಿ ರೂ ಸಾಲ

ಕಾರವಾರ -ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ 100 ಕೋಟಿ ರೂ ಮೀಸಲು

ವಿ.ವಿ.ಐ.ಪಿ ಗೇಟ್ ಬೀಗ ಹಾಕಿ ಸಚಿವರ ಎದುರು ಶಾಸಕರಿಗೆ ಮುಜುಗರಕ್ಕಿಡು ಮಾಡಿದ ಧರ್ಮದರ್ಶಿ ಮಂಡಳಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನ...
28/02/2026

ವಿ.ವಿ.ಐ.ಪಿ ಗೇಟ್ ಬೀಗ ಹಾಕಿ ಸಚಿವರ ಎದುರು ಶಾಸಕರಿಗೆ ಮುಜುಗರಕ್ಕಿಡು ಮಾಡಿದ ಧರ್ಮದರ್ಶಿ ಮಂಡಳಿ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡುರಾವ್ ಅವರು ಶಿರಸಿಯ ಶ್ರೀ ಮಾರಿಕಾಂಬಾ ದೇವಿ ದರ್ಶನಕ್ಕೆ ಬಂದ ಸಂದರ್ಭದಲ್ಲಿ ವಿ.ಐ.ಪಿ ಗೇಟ್ ಗೆ ಬೀಗ ಹಾಕಿ ಸಚಿವರನ್ನು ಹಾಗೂ ಶಾಸಕರನ್ನು ಕಾಯುವಂತೆ ಮಾಡಿ ದರ್ಮದರ್ಶಿಮಂಡಳಿಯವರು ಮುಜಿಗರಕ್ಕಿಡು‌ಮಾಡಿದ್ದಾರೆ‌.

ಶಿರಸಿ :- ಆಪರೇಷನ್ ಬೆಟ್ಟಲ್ಯಾಂಡ್ ಭೀಮಘರ್ಜನೆ ಸಂಘಟನೆಯಿಂದ ಘೋಷಣೆಶಿರಸಿ ಸಿದ್ದಾಪುರ ಭಾಗದಲ್ಲಿ ಅಕ್ರಮವಾಗಿ ಸರಕಾರಿ ಬೆಟ್ಟ ಮತ್ತು   ಕಾಯ್ದಿಟ್...
28/02/2026

ಶಿರಸಿ :- ಆಪರೇಷನ್ ಬೆಟ್ಟಲ್ಯಾಂಡ್ ಭೀಮಘರ್ಜನೆ ಸಂಘಟನೆಯಿಂದ ಘೋಷಣೆ

ಶಿರಸಿ ಸಿದ್ದಾಪುರ ಭಾಗದಲ್ಲಿ ಅಕ್ರಮವಾಗಿ ಸರಕಾರಿ ಬೆಟ್ಟ ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಭೂ ಕಳ್ಳರು ಗೇಟ್ ಮತ್ತು ಬೇಲಿಯನ್ನು ಅಳವಡಿಸಿ ಸರಕಾರಿ ಬೆಟ್ಟ ತಮ್ಮದೇ ಅನ್ನುವ ರೀತಿಯಲ್ಲಿ ಸಾರ್ವಜನಿಕರ ಮೇಲೆ ರೇಗುವುದು ಒಳಗಡೆ ಬಾರದಂತೆ ತಡೆಯುವುದು ಇಂತಹ ಚಟುವಟಿಕೆಗಳು ದಿನನಿತ್ಯ ಭೀಮಘರ್ಜನೆ ಸಂಘಟನೆಯ ಬಳಿ ಬಂದ ಹಿನ್ನೆಲೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅರ್ಜುನ್ ಮಿಂಟಿ ಅವರು ಇದರ ಬಗ್ಗೆ ಧ್ವನಿಯನ್ನು ಎತ್ತಿದ್ದರು . ಈಗ ಅವರಿಂದ ಶಿರಸಿ ಸಿದ್ದಾಪುರ ಭಾಗದಲ್ಲಿ ಯಾವ ಯಾವ ವ್ಯಕ್ತಿಗಳು ಸರಕಾರಿ ಬೆಟ್ಟದಲ್ಲಿ ಅಕ್ರಮವಾಗಿ ಸರ್ಕಾರಕ್ಕೆ ವಂಚಿಸಿ ಸರಕಾರಿ ಬೆಟ್ಟವನ್ನು ಅತಿಕ್ರಮಣ ಮಾಡಿ ಕೃಷಿ ಚಟುವಟಿಕೆ ಮಾಡಿ ಮನೆ ನಿರ್ಮಾಣ ಮಾಡಿಕೊಂಡು ಕೋಟ್ಯಂತರ ರೂಪಾಯಿ ದುಡಿದುಕೊಂಡು ಬೆಟ್ಟವನ್ನು ಲೂಟಿ ಮಾಡುತ್ತಿದ್ದಾರೋ ಅಂತವರ ವಿರುದ್ಧ ಹೋರಾಟ ಮಾಡಿ ಸರಕಾರಿ ಬೆಟ್ಟವನ್ನು ರಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ .ಅಲ್ಲದೆ ಕೆಲವು ಕಂದಾಯ ಮತ್ತು ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಇಂತಹ ಲೂಟಿಕೋರರ ಜೊತೆ ಶಾಮೀಲಾಗಿ ಇರುವುದು ಕಂಡುಬಂದಿದೆ. ಅಂತಹ ಅಧಿಕಾರಿಗಳ ವಿರುದ್ಧ ಕೂಡ ನಾವು ಹೋರಾಟ ಮಾಡುವುದು ನಿಶ್ಚಿತ . ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ನಾವು ಸಹಿಸಲ್ಲ . ಈ ದೇಶದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಇದೆ ಎನ್ನುವದನ್ನು ಅಧಿಕಾರಿಗಳು ಮರೆತಿರುವಂತಿದೆ . ಶಿರಸಿ ಸಿದ್ದಾಪುರ ಭಾಗದಲ್ಲಿ ಕಣ್ಣಿದ್ದರೂ ಕುರುಡರಂತೆ ಇರುವ ಅಧಿಕಾರಿಗಳ ಕಣ್ಣನ್ನು ತೆರೆಸುವ ಕೆಲಸವನ್ನು ಸಂಘಟನೆ ಮಾಡುತ್ತದೆ ಎಂದು ತಿಳಿಸಿದ್ದಾರೆ .

ಶ್ರೀ  ದೇವಸ್ಥಾನದ ಧರ್ಮದರ್ಶಿ ಒಬ್ಬನ ಎಲ್ಲೆ ಮೀರಿದ ಗಮಂಡಿ : ಕಡ್ಲೆಪುರಿಯತೆ ಹಂಚಿರುವ ವಿಐಪಿ ಪಾಸ್ ...!ಶಿರಸಿ: ಶಿರಸಿಯಲ್ಲಿ ಇತಿಹಾಸ ಪ್ರಸಿದ್...
28/02/2026

ಶ್ರೀ ದೇವಸ್ಥಾನದ ಧರ್ಮದರ್ಶಿ ಒಬ್ಬನ ಎಲ್ಲೆ ಮೀರಿದ ಗಮಂಡಿ : ಕಡ್ಲೆಪುರಿಯತೆ ಹಂಚಿರುವ ವಿಐಪಿ ಪಾಸ್ ...!

ಶಿರಸಿ: ಶಿರಸಿಯಲ್ಲಿ ಇತಿಹಾಸ ಪ್ರಸಿದ್ಧ ಮಾರಮ್ಮನ ಜಾತ್ರೆ ನಡೆಯುತ್ತಿದೆ.ದಿನಂಪ್ರತಿ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಸಹಸ್ರಾರು ಪೊಲೀಸರು ರಾಜ್ಯದ ಈ ಅತಿ ದೊಡ್ಡ ಜಾತ್ರೆ ನಿರ್ವಿಘ್ನವಾಗಿ ನಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ.ಆದರೆ ಇಷ್ಟಿದ್ದರೂ ಇಡೀ ಜಾತ್ರಾ ವಾತಾವರಣದಲ್ಲಿ ಶ್ರೀ ದೇವಸ್ಥಾನದ ಧರ್ಮದರ್ಶಿ ಒಬ್ಬ ಅವಾಂತರ ಮಾಡುತ್ತಿರುವ ಬಗ್ಗೆ ಕೇಳಿ ಬರುತ್ತಿದೆ. ಅಷ್ಟಕ್ಕೂ ಈ ಆಡಳಿತ ಕಮಿಟಿ ಅವಧಿ ಇದೇ ಮೇ 20ರಂದು ಮುಗಿಯಲಿದೆ ಎಂದು ತಿಳಿದುಬಂದಿದೆ.ಆದರೆ ಇಲ್ಲೊಬ್ಬ ಧರ್ಮದರ್ಶಿ ಅಧ್ಯಕ್ಷ-ಉಪಾಧ್ಯಕ್ಷರನ್ನೇ ಮೂಲೆಗುಂಪು ಮಾಡಿ ತಾನೇ ತಾನಾಗಿ ಮೆರೆಯುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಲಿದೆ. ದಿನಾಂಕ 27ರಂದು ಶುಕ್ರವಾರ ಜಾತ್ರಾದಿನ ಈ ಧರ್ಮದರ್ಶಿ ಅಪ್ಪಟ ಸರ್ವಾಧಿಕಾರಿಯoತೆ ನಡೆದುಕೊಂಡಿದ್ದಾನೆ.VIP ಪ್ರವೇಶ ದ್ವಾರದ ಬ್ಯಾರಿಕೇಡ್ ತೆಗೆದುಹಾಕಿ ನಮ್ಮ ಸಿಬ್ಬಂದಿಗಳೇ ನೋಡಿಕೊಳ್ಳುತ್ತಾರೆ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಆವಾಜ್ ಹಾಕಿದ್ದಾನೆ ಎಂದು ಹೇಳಲಾಗಿದೆ. ಈ ನಡುವೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕೆಲವು ಕಾರ್ಯಕರ್ತರು ಈತನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದು ಕೂಡ ನಡೆದಿದೆ. ಈಗಾಗಲೇ ಶ್ರೀ ದೇವಸ್ಥಾನದಿಂದ ಸಾವಿರಾರು ಪಾಸುಗಳನ್ನು ವಿತರಿಸಲಾಗಿದೆ ಎನ್ನಲಾಗಿದ್ದು ಇಲ್ಲೂ ಈ ಧರ್ಮದರ್ಶಿ ಮೂಗು ತೂರಿಸಿರುವ ಬಗ್ಗೆ ಕೇಳಿ ಬಂದಿದೆ. ಹಾಗೂ ಅದನ್ನು ಶಿರಸಿಯಲ್ಲಿ ಮುದ್ರಿಸದೆ ದಾವಣಗೆರೆಯಲ್ಲಿ ಮುದ್ರಿಸಿದ್ದಾನೆ ಎಂಬ ಸುದ್ದಿಯೂ ಇದೆ. ಜೇಬು ತುಂಬಾ, ಬ್ಯಾಗ್ ತುಂಬಾ ವಿಐಪಿ ಪಾಸ್ ಇಟ್ಟುಕೊಂಡು ಈತ ಈತನ ದೃಷ್ಟಿಯಲ್ಲಿ ಗಣ್ಯ(?) ರೆನಿಸಿಕೊಂಡವರಿಗೆ ಮಾತ್ರ ಪಾಸ್ ನೀಡಿ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ಈತನ ಆಟಾಟೋಪ ಎಲ್ಲೆ ಮೀರಿದೆ. ಹಿರಿಯ ಪತ್ರಕರ್ತ ವಯೋವೃದ್ದ ಆನಂದ ಶೆಟ್ಟಿಯವರಿಗೆ ಈತ ರೋಪ್ ಹಾಕಿದ್ದು ಈತನ ಲೇಟೆಸ್ಟ್ ಗಮಂಡಿಗೆ ಒಂದು ಚಿಕ್ಕ ಉದಾಹರಣೆ. ಇನ್ನು ಈತ ಒಳ್ಳೆಯ ಕೆಲಸಕ್ಕೆ ಯಾವಾಗಲೂ ತೊಂದರೆ ನೀಡುವ ಇತಿಹಾಸ ಹೊಂದಿದ್ದ ಅಸಾಮಿ. ಕಾನೂನು ಬಾಹಿರವಾಗಿ ಸಾಮ್ರಾಟ್ ರಸ್ತೆಯಲ್ಲಿ ಕಾಂಪ್ಲೆಕ್ಸ್ ಕಟ್ಟಿ ಅಲ್ಲಿ ರಸ್ತೆ ಮಾಡುವಾಗ ಖುಲ್ಲಾ ಪಡಿಸಿ ನೀಡದೆ ಈತನ ಅಂಗಡಿ ಎದುರು ಮಣ್ಣಿನ ರಸ್ತೆ ಹಾಗೇ ಉಳಿದು ಹೋಗಿದೆ. ಶಾಸಕರಿಗೆ ಸೇರಿದ ವಸತಿ ಗ್ರಹದ ಪಕ್ಕದಲ್ಲಿಯೇ ಈತನ ಕಾಂಪ್ಲೆಕ್ಸ್ ಇದ್ದು ಈತನ ಕಾನೂನು ಬಾಹಿರ ನಡೆಗೆ- ನಡುವಳಿಕೆಗಳಿಗೆ ಇನ್ನಾದರೂ ಕಡಿವಾಣ ಬೀಳಬೇಕಾಗಿದೆ.

Vishweshwar Hegde Kageri Bhimanna Naik

ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ನಿಮಿತ್ತಮಾರ್ಗ ಬದಲಾವಣೆಯ ಮೂಲಕ ಸಂಚಾರ;ಡಿಸಿ ಆದೇಶ.ಕಾರವಾರ: ಶಿರಸಿ ನಗರದಲ್ಲಿ ಫೆಬ್ರವರಿ 24 ರಿಂದ ಮಾರ್ಚ್4 ರ...
25/02/2026

ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ನಿಮಿತ್ತ
ಮಾರ್ಗ ಬದಲಾವಣೆಯ ಮೂಲಕ ಸಂಚಾರ;ಡಿಸಿ ಆದೇಶ.
ಕಾರವಾರ: ಶಿರಸಿ ನಗರದಲ್ಲಿ ಫೆಬ್ರವರಿ 24 ರಿಂದ ಮಾರ್ಚ್4 ರವರೆಗೆ ಶ್ರೀ ಮಾರಿಕಾಂಬಾ ಜಾತ್ರೆ ಜರುಗಲಿರುವುದರಿಂದ ಜನರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ/ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಶಿರಸಿ ಶಹರದ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ 77 ಮತ್ತು ರಾಷ್ಟ್ರೀಯ ಹೆದ್ದಾರಿ 766(ಇ) ಯಲ್ಲಿ ಈ ಕೆಳಗಿನಂತೆ ವಾಹನಗಳ ಸಂಚಾರ ನಿಷೇಧಿಸಿ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿದ್ದಾರೆ.

ಮಾರ್ಚ್ 4 ರ ಮಧ್ಯ ರಾತ್ರಿ 12 ಗಂಟೆ ರವರೆಗೆ ಶಿರಸಿ ಶಹರದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 766(ಇ) ರಲ್ಲಿ ಐದು ರಸ್ತೆ ವೃತ್ತದಿಂದ- ವಾಜಿ ಚೌಕ್, ಬಿಡ್ಡಿ ವೃತ್ತ, ಕಾಮತ ಹೋಟೆಲ್ ಕ್ರಾಸ್, ಮಂಗಳೂರ ಹೊಟೆಲ್ ಕ್ರಾಸ್‌ದಿಂದ ಕೋಟಿಕೇರೆ ವೃತ್ತದ ವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಿದೆ.

ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ, ಶಿರಸಿ ಶಹರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766(ಇ) ರಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗವಾಗಿ . ಐದು ರಸ್ತೆಯಿಂದ ಝೂ ವೃತ್ತ -ರಾಘವೇಂದ್ರ ಅಶ್ವಿನಿ ವೃತ್ತ, ಮಹಾಸತಿ ವೃತ್ತದಿಂದ ಯಲ್ಲಾಪುರ ಕಡೆಯಿಂದ, ಹುಬ್ಬಳ್ಳಿ ಕಡೆಗೆ ಹೋಗುವಂತೆ ಹಾಗೂ ಬನವಾಸಿ ಕಡೆಗೆ ಹೋಗುವ ವಾಹನಗಳಿಗೆ ಮಹಾಸತಿ ವೃತ್ತದಿಂದ ಎ.ಪಿ.ಎಂ.ಸಿ. ಮಾರ್ಗವಾಗಿ ಕೋಟೆಕೆರೆ ವೃತ್ತದಿಂದ ಸಿರ್ಸಿಕರ ಪ್ಲಾಟ್ ಮಾರ್ಗವಾಗಿ ಬನವಾಸಿ ರಸ್ತೆ ಮುಖಾಂತರ ಸಂಚರಿಸುವುದು. ಶಿರಸಿ ಶಹರದಲ್ಲಿ ಹಾದು ಹೋದ ರಾಜ್ಯ ಹೆದ್ದಾರಿ 77 ರಲ್ಲಿ ರಾಮನಬೈಲ್ ಕ್ರಾಸ್‌ದಿಂದ ಮಾರಿಕಾಂಬಾ ದೇವಸ್ಥಾನ ಮಾರ್ಗವಾಗಿ ಕಾಮತ ಹೊಟೆಲ್ ಕ್ರಾಸ್ ವರೆಗೆ ಎಲ್ಲ ತರಹದ ವಾಹನಗಳ ಸಂಚಾರನ್ನು ನಿಷೇಧಿಸಿದೆ.

ಬನವಾಸಿ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ, ಶಿರಸಿ ಶಹರದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 77 ರಲ್ಲಿ ಸಂಚರಿಸುವ ವಾಹನಗಳನ್ನು ಪರ್ಯಾಯ ಮಾರ್ಗವಾಗಿ ಸಿರ್ಸಿಕರ ಪ್ಲಾಟ್-ಕರಿಗುಂಡಿ ರಸ್ತೆ, ಕೋಟೆಕೇರೆ ಎ.ಪಿ.ಎಂ.ಸಿ. ವೇ ಬ್ರಿಜ್ ದಿಂದ ಹುಬ್ಬಳ್ಳಿ ಹಾವೇರಿ ಮತ್ತು ಎ.ಪಿ.ಎಂ.ಸಿ. ಮಾರ್ಗವಾಗಿ ಯಲ್ಲಾಪುರ ಕುಮಟಾ ಸಿದ್ದಾಪುರ ಮಾರ್ಗವಾಗಿ ಸಂಚರಿಸುವುದು.ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಹೋಗಲು ರಸ್ತೆ ಕಿರಿದಾಗಿರುವುದರಿಂದ ಅಲೇಕಾ ಗೇಟ್ ಕ್ರಾಸ್ ದಿಂದ ಪ್ರವೇಶಿಸಿ ರಾಯರಪೇಟೆ ಮಾರ್ಗವಾಗಿ ಅರ್ಬನ್ ಬ್ಯಾಂಕ್ ಕ್ರಾಸ್ ದಿಂದ ವೀರಭದ್ರಗಲ್ಲಿ ಕರ್ಜಗಿ ಕಲ್ಯಾಣ ಮಂಟಪ ಮಾರ್ಗವಾಗಿ ಶಂಕರ ಹೊಂಡಾ ಮಾರ್ಗವಾಗಿ ವಿಜಯನಗರ ಮಿಸ್ತಾರ ಪ್ಲಾಟ್ ಪಾರ್ಕಿಂಗ್ ಸ್ಥಳದವರೆಗೆ ರಸ್ತೆ ಮಾರ್ಗವನ್ನು ಏಕ ಮುಖ ಸಂಚಾರಿಸುವುದು. ಜಾತ್ರಾ ಪ್ರಯುಕ್ತ ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳನ್ನು ಪಾರ್ಕಿಂಗ್ ಸ್ಥಳಕ್ಕೆ ಹೋಗಲು ರಸ್ತೆ ಕಿರಿದಾಗಿರುವುದರಿಂದ ಅಗಸೇಬಾಗಿಲ್ ಚರ್ಚ ಕ್ರಾಸ್‌ದಿಂದ ದೈವಜ್ಞ ಕಲ್ಯಾಣ ಮಂಟಪದ ಕ್ರಾಸ್ ವರೆಗೆ ವಾಹನಗಳನ್ನು ಈ ಮಾರ್ಗವಾಗಿ ಸಂಚರಿಸದೇ,ಪಾರ್ಕಿಂಗ್ ಸ್ಥಳದಿಂದ ದೈವಜ್ಞ ಕಲ್ಯಾಣ ಮಂಟಪದ ಮಾರ್ಗವಾಗಿ ಅಗಸೇಬಾಗಿಲ್ ಚರ್ಚ ಕ್ರಾಸ್‌ದಿಂದ ನಿರ್ಗಮಿಸುವ ವಾಹನಗಳು ಏಕ ಮುಖವಾಗಿ ಸಂಚರಿಸುವುದು.

ಈ ಅವಧಿಯಲ್ಲಿ ಪೊಲೀಸ್ ಇಲಾಖೆಯಿಂದ ಅವಶ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಕಡ್ಡಾಯವಾಗಿ ಅಳವಡಿಸಿ, ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು, ವಾಹನಗಳ ಚಲನ-ವಲನಗಳ ನಿಗಾವಹಿಸಿ ಯಾವುದೇ ತರಹದ ಅಪಘಾತ ಆಗದಂತೆ ಕ್ರಮವಹಿಸುವವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಮದ್ಯ ಮಾರಾಟ ನಿಷೇಧ

ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಫೆ.24 ರ ರಾತ್ರಿ 10 ಗಂಟೆಯಿಂದ ಫೆ.25 ರ ರಾತ್ರಿ 10 ಗಂಟೆಯವರೆಗೆ ಹಾಗೂ ಮಾ.3 ರ ರಾತ್ರಿ 10 ಗಂಟೆಯಿಂದ ಮಾ.4 ರ ರಾತ್ರಿ 10 ಗಂಟೆಯವರೆಗೆ ಶಿರಸಿ ತಾಲ್ಲೂಕಿನ ಶಹರ ವ್ಯಾಪ್ತಿಯಲ್ಲಿನ ಇರುವ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಮದ್ಯ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

ಹೊಟೆಲ್ ಉದ್ಯಮಿ ಶಿವಾನಂದ ನಿಧನಶಿರಸಿಯ ಹೊಟೆಲ್ ಉದ್ಯಮಿ ಶಿವಾನಂದ ಹಾಲಯ್ಯ ದೂಪದಮಠ (65) ಇಂದು (ಫೆ,11) ಬೆಳಗಿನಜಾವ ನಿಧನರಾದರು.ಹಾಲೊಂಡವನಿವಾಸಿ...
11/02/2026

ಹೊಟೆಲ್ ಉದ್ಯಮಿ ಶಿವಾನಂದ ನಿಧನ

ಶಿರಸಿಯ ಹೊಟೆಲ್ ಉದ್ಯಮಿ ಶಿವಾನಂದ ಹಾಲಯ್ಯ ದೂಪದಮಠ (65) ಇಂದು (ಫೆ,11) ಬೆಳಗಿನಜಾವ ನಿಧನರಾದರು.ಹಾಲೊಂಡವನಿವಾಸಿಯಾಗಿದ್ದ ಮೃತರು ಪತ್ನಿ,ಒರ್ವ ಪುತ್ರಿ ಬಂಧು ಬಳದವರನ್ನು ಅಗಲಿದ್ದಾರೆ. ಮೃತರು ಶಿರಸಿ ಕೋರ್ಟ ರಸ್ತೆಯಲ್ಲಿರುವ ಜೆ ಪಿ ಸೆಂಟರ್ ನಲ್ಲಿ ನ್ಯೂ ತೃಪ್ತಿ ಸಾಗರ ಹೊಟೆಲ್ ನಡೆಸುತ್ತಿದ್ದರು.ಶಿವಸನಂದ ನಿಧನಕ್ಕೆ ಬಣ್ಣದ ಮಠದ ವ್ಯವಸ್ಥಾಪಕರಾದ ಎಸ್ ಬಿ ಹಿರೇಮಠ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂತ್ಯಕ್ರಿಯೆ
ಮೃತರ ಅಂತ್ಯಕ್ರಿಯೆಯು ಇಂದು ಮದ್ಯಾಹ್ನ 2 ಗಂಟೆಗೆ ಶಿರಸಿಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಶಿರಸಿ- ಇಸ್ಪೀಟ್ ಅಡ್ಡಗಳಲ್ಲಿ ಅಡಿಕೆ-ಬಾಳೆಗೊನೆಗಳ ಆರ್ತನಾದ..! ಶಿರಸಿ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ  9ರಿಂದ 10 ಇಸ್ಪೀಟ್ ಅಡ್ಡಗಳುಶಿರಸಿ...
10/02/2026

ಶಿರಸಿ- ಇಸ್ಪೀಟ್ ಅಡ್ಡಗಳಲ್ಲಿ ಅಡಿಕೆ-ಬಾಳೆಗೊನೆಗಳ ಆರ್ತನಾದ..!

ಶಿರಸಿ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ 9ರಿಂದ 10 ಇಸ್ಪೀಟ್ ಅಡ್ಡಗಳು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ವಾಣಿಜ್ಯ ನಗರಿ ಶಿರಸಿಯಲ್ಲಿ ಕಳೆದ ಎರಡು ವರ್ಷಗಳಿಂದ ಇಸ್ವೀಟ್ ಅಡ್ಡಗಳಿಗೆ ಲಗಾಮ ಹಾಕಲಾಗಿತ್ತು. ಆದರೆ ಈಗ ಕಳೆದ ಎರಡು ತಿಂಗಳಿಂದ ಈ ಇಸ್ಪೀಟ್ ಅಡ್ಡಗಳು ಪುನ: ಜೀವಂತಿಕೆ ಪಡೆದುಕೊಳ್ಳುತ್ತಿವೆ.ಒಂದು ಮೂಲದ ಪ್ರಕಾರ ಶಿರಸಿ ತಾಲೂಕಿನ ಬೈರುoಬೆ ಸಮೀಪದ ರೆಸಾರ್ಟ್ ಒಂದರಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡ ಮೇಲೆ ಪೊಲೀಸ್ ಇಲಾಖೆ ದಾಳಿ ನಡೆಸಿತ್ತು.ಆದರೆ ಈ ಪ್ರಕರಣದಲ್ಲಿ ಕಾನೂನಿನ ಹಿನ್ನಡೆ ಅನುಭವಿಸಿದ ಇಲಾಖೆ ಈಗ ಮೌನಕ್ಕೆ ಜಾರಿರುವುದು ಇಸ್ಪೀಟ್ ಕುಳಗಳಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ. ರಿಕ್ರಿಯೆeಶನ್ ಕ್ಲಬ್ ಹೆಸರಲ್ಲಿ ನಡೆಯುತ್ತಿರುವ ಹಲವಾರು ಇಸ್ಪೀಟ್ ಅಡ್ಡಗಳಲ್ಲಿ ರಮ್ಮಿ ಅಷ್ಟೇ ಅಲ್ಲದೆ,ಇತರ ನಿಷೇಧಿತ ಇಸ್ಪೀಟ್ ಆಟ ಹಾಗೂ ಹಣ ಹೂಡಿಕೆ ಆಟ ನಡೆಯುತ್ತಿರುವುದು ಕೇಳಿ ಬರುತ್ತಿದೆ. ಶಿರಸಿ ನಗರದ ಶಿವಾಜಿ ಚೌಕದಲ್ಲಿ ಎರಡು, ದೇವಿಕೆರೆ -ಹೊಸಪೇಟೆ ರಸ್ತೆಯಲ್ಲಿ ಎರಡು, ಶಿರಸಿ ಸಿಪಿ ಬಜಾರ್ ರಸ್ತೆಯಲ್ಲಿ ಒಂದು (ರಮೇಶ ಹೆಗಡೆ)ದುಂಡಸಿ ನಗರದಲ್ಲಿ ಒಂದು, ಟಿಎಸ್ಎಸ್ ರಸ್ತೆಯಲ್ಲಿ ಒಂದು.... ಹೀಗೆ ಇಸ್ಪೀಟ್ ಅಡ್ಡಗಳು ಯಾವುದೇ ಕಡಿವಾಣವಿಲ್ಲದ ರೀತಿಯಲ್ಲಿ ಕಾರ್ಯಾಚರಿಸುತ್ತಿರುವುದು ತಿಳಿದು ಬರುತ್ತಲಿದೆ. ಶಿರಸಿ ನಗರಸಭೆ ಹಕ್ಕಿನ ಆಶ್ರಮದ ಜಾಗ ಲಪಟಾಯಿಸಲು ಹೊರಟಿರುವ ರಮೇಶ ಹೆಗಡೆ ಕೂಡ ಇಲ್ಲಿ ಒಂದು ಇಸ್ಪೀಟ್ ಕ್ಲಬ್ಬಿನ ಮಾಲೀಕ!ಇನ್ನುಳಿದಂತೆ ಈ ಇಸ್ಪೀಟ್ ಅಡ್ಡಗಳಲ್ಲಿ ಕಿಂಗ್ ಪಿನ್ ಪ್ರಕಾಶ ಹೆಗಡೆ, ಕೃಷ್ಣ ಹೆಗಡೆ ಕಾನಗೋಡ, ಶ್ರೀಧರ ಭಟ್, ಪರಮೇಶ್ವರ ಭಟ್, ಸುರೇಶ್ ಬೆಣಗಿ, ಚಂದ್ರು, ವಿನಾಯಕ,ಪ್ರಕಾಶ ಹೆಗಡೆ ಹಲಗೆ.... ಇವು ಶಿರಸಿ ಇಸ್ಪೀಟ್ ಅಡ್ಡದಲ್ಲಿ ಪ್ರಚಲಿತದಲ್ಲಿರುವ ಹೆಸರುಗಳಾಗಿವೆ.ಕಾನೂನು ನಿಯಮಾವಳಿಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಅರ್ಥೈಸಿ ಹಾಡೇ ಹಗಲು ನಡೆಸುವ ಈ ಇಸ್ಪೀಟ್ ಅಡ್ಡಗಳಲ್ಲಿ ಕೃಷಿಕ ವರ್ಗಕ್ಕೆ ಸೇರಿದ ವಿಶೇಷವಾಗಿ ಇಸ್ಪೀಟ್ ಮೋಹಕ್ಕೆ ದಾಸರಾದ ಹತ್ತು -ಹಲವಾರು ಅಡಿಕೆ, ತೆಂಗು, ಬಾಳೆ ಬೆಳೆಗಾರರು ಹಣವನ್ನು ಜೂಜಿನಲ್ಲಿ ಕಳೆದುಕೊಂಡು ಬರ್ಬಾದ್ ಆಗುತ್ತಿರುವುದು ಕಾಣ ಬರುತ್ತದೆ.ಕೂಡಲೇ ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಇಸ್ಪೀಟ್ ಕ್ಲಬ್ ಗಳನ್ನು ಬಂದ್ ಮಾಡುವಲ್ಲಿ ಇಲಾಖೆ ಕ್ರಮವಹಿಸಬೇಕಾದದ್ದು ಅತ್ಯಂತ ಜರೂರಾಗಿದೆ.ಇದು ಜನರ ಆಗ್ರಹ ಕೂಡ ಆಗಿದೆ.

ಕೃಪೆ: ಪೃಥ್ವಿರಾಜ ನ್ಯೂಸ್

ಉತ್ತರ ಕನ್ನಡ ಜೆ.ಡಿ.ಎಸ್ ನ  ಜಿಲ್ಲಾ ಅಧ್ಯಕ್ಷರಾಗಿ ಸೂರಜ್ ನಾಯ್ಕ್ ಸೋನಿ .
08/02/2026

ಉತ್ತರ ಕನ್ನಡ ಜೆ.ಡಿ.ಎಸ್ ನ ಜಿಲ್ಲಾ ಅಧ್ಯಕ್ಷರಾಗಿ ಸೂರಜ್ ನಾಯ್ಕ್ ಸೋನಿ .

Address

SH 93, Sirsi 581401
Sirsi
581402

Alerts

Be the first to know and let us send you an email when Swasthik Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Swasthik Media:

Share