News21 Kannada. ಉತ್ತರ ಕನ್ನಡ ಜಿಲ್ಲೆ

  • Home
  • India
  • Sirsi
  • News21 Kannada. ಉತ್ತರ ಕನ್ನಡ ಜಿಲ್ಲೆ

News21 Kannada. ಉತ್ತರ ಕನ್ನಡ ಜಿಲ್ಲೆ Contact information, map and directions, contact form, opening hours, services, ratings, photos, videos and announcements from News21 Kannada. ಉತ್ತರ ಕನ್ನಡ ಜಿಲ್ಲೆ, Media/News Company, Bangalore, Sirsi.

ಶಿರಸಿ-ಸಿದ್ದಾಪುರ ಕ್ಷೇತ್ರದ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ  ...
05/10/2023

ಶಿರಸಿ-ಸಿದ್ದಾಪುರ ಕ್ಷೇತ್ರದ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಶಾಸಕ ಭೀಮಣ್ಣ ನಾಯ್ಕ್ ಮನವರಿಕೆ ಮಾಡಿದರು.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಬಗ್ಗೆಹರಿಸುವುದಾಗಿ ತಿಳಿಸಿದರು.

ಶಿರಸಿ-ಸಿದ್ದಾಪುರ ಕ್ಷೇತ್ರದ ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗದ ಕುರಿತು ಪರಿಹಾರ ನೀಡಲು ಮಾನ್ಯ ತೋಟಗಾರಿಕೆ ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ...
04/10/2023

ಶಿರಸಿ-ಸಿದ್ದಾಪುರ ಕ್ಷೇತ್ರದ ಅಡಿಕೆ ಬೆಳೆಗೆ ಹಳದಿ ಚುಕ್ಕಿ ರೋಗದ ಕುರಿತು ಪರಿಹಾರ ನೀಡಲು ಮಾನ್ಯ ತೋಟಗಾರಿಕೆ ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಮನವರಿಕೆ ಮಾಡಿದ ಶಾಸಕ ಭೀಮಣ್ಣ ನಾಯ್ಕ್.

ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ   #ಆನಂದ್  #ಅಸ್ನೋಟಿಕರ್...? ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜೆಡಿ...
23/08/2023

ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ #ಆನಂದ್ #ಅಸ್ನೋಟಿಕರ್...?

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ #ಆನಂದ್ ವಸಂತ್ ಅಸ್ನೋಟಿಕರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗುತ್ತಿದೆ.

ಕಳೆದ ಮೂರು ದಶಕಗಳಿಂದಲೂ ಬ್ರಾಹ್ಮಣರ ಹಿಡಿತದಲ್ಲಿರುವ #ಲೋಕಸಭಾ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಅಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ಸಿದ್ದರಾಮಯ್ಯನವರು ಶ್ರೀ ಡಿ ಕೆ ಶಿವಕುಮಾರ ರವರು, ಶ್ರೀ ಮಧು ಬಂಗಾರಪ್ಪನವರ ಮಧ್ಯಸ್ಥಿಕೆಯಲ್ಲಿ ಆನಂದ್ ಅಸ್ನೋಟಿಕರ್ ಚುನಾವಣೆಗೆ ಸ್ಪರ್ಧಿಸದಂತೆ ಒಪ್ಪಂದ ಮಾಡಿಕೊಂಡಿದ್ದರು.

ಒಪ್ಪಂದದಂತೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರವಾಗಿ ಕಾರವಾರ ಮತ್ತು ಅಂಕೋಲಾದಲ್ಲಿ ಹಾಗೂ ಆರ್ ವಿ #ದೇಶಪಾಂಡೆ ಅವರ ಪರವಾಗಿ ಜೋಯಿಡಾದಲ್ಲಿ ಪ್ರಚಾರ ಮಾಡಿ #ಮೋದಿಯವರ ಅಂಕೋಲದ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದ್ದರು.

ಆತ್ಮೀಯ ಸ್ನೇಹಿತರಾಗಿರುವ ಆನಂದ್ ಅಸ್ನೋಟಿಕರ್ ಲೋಕಸಭೆ ಚುನಾವಣೆ ಸ್ಪರ್ಧಿಸುವಂತೆ ಮಾಡಲು ಸಚಿವ ಶ್ರೀ #ಮಧು ಬಂಗಾರಪ್ಪನವರು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ, ಉಸ್ತುವಾರಿಯನ್ನು ಸ್ವತಃ ಉಪಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ರವರು ವಹಿಸಿಕೊಂಡು ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ.

ಲೋಕಸಭಾ #ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಆನಂದ್ ಅಸ್ನೋಟಿಕರ್ ರವರು #ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

NEWS21 KANNADA. UTTARAKANNADA

ಉಪೇಂದ್ರ ಪೈ ಬೆಂಬಲಿಗರಿಂದ ಜೀವ ಬೆದರಿಕೆ;  ಪ್ರಕರಣ ದಾಖಲು.ಖಾಸಗಿ ಸುದ್ದಿ ವಾಹಿನಿಯ ರವೀಶ್ ಹೆಗಡೆಯವರಿಗೆ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಬೆಂ...
29/04/2023

ಉಪೇಂದ್ರ ಪೈ ಬೆಂಬಲಿಗರಿಂದ ಜೀವ ಬೆದರಿಕೆ; ಪ್ರಕರಣ ದಾಖಲು.

ಖಾಸಗಿ ಸುದ್ದಿ ವಾಹಿನಿಯ ರವೀಶ್ ಹೆಗಡೆಯವರಿಗೆ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಬೆಂಬಲಿಗರು ಜೀವ ಬೆದರಿಕೆ ಒಡ್ಡಿದ್ದು ಶಿರಸಿ ಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಖಾಸಗಿ ಸುದ್ದಿ ವಾಹಿನಿಯವರು ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಮತ್ತು ಕಾಮಧೇನು ಜ್ಯುವೆಲರ್ಸ್ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡಿದ್ದರು.

ಕಾಮಧೇನು ಜ್ಯೂವೆಲರ್ಸ್ ನಲ್ಲಿ ಬಂಗಾರದ ಗುಣಮಟ್ಟ ಸರಿ ಇಲ್ಲ, ಗ್ರಾಹಕರಿಗೆ ಮೋಸವಾಗುತ್ತಿದೆ ಎಂದು ಸುದ್ದಿ ಪ್ರಸಾರ ಮಾಡಿದ್ದರಿಂದ ಇವರ ವ್ಯವಹಾರದಲ್ಲಿ ಶೇಕಡ 90ಕ್ಕಿಂತ ಹೆಚ್ಚು ವ್ಯಾಪಾರ ಕುಂಠಿತವಾಗಿದೆ ಎಂದು ಹೇಳಲಾಗುತ್ತಿದೆ ಅಲ್ಲದೆ ಜೆಡಿಎಸ್ ಪಾರ್ಟಿ ಶಿರಸಿಯಲ್ಲಿ "ಆಟಕ್ಕುಂಟು ಲೆಕ್ಕಕ್ಕಿಲ್ಲ" ಎನ್ನುವ ವರದಿ ಪ್ರಸಾರ ಮಾಡಿದ ನಂತರ ಹಲವರು ಪಕ್ಷವನ್ನು ತೊರೆದು ಇತರ ಪಕ್ಷಗಳಿಗೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ..

ಈ ಎಲ್ಲಾ ಬೆಳವಣಿಗೆಗಳಿಂದಾಗಿ ಉಪೇಂದ್ರ ಪೈ ಬೆಂಬಲಿಗರು ಸಿಟ್ಟಾಗಿದ್ದು ಸುದ್ದಿ ವಾಹಿನಿಯ ರವೀಶ್ ಹೆಗಡೆಯವರಿಗೆ ವಾಟ್ಸಪ್ ಮೂಲಕ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದು ಅವರು ನೀಡಿರುವ ದೂರಿನಿಂದ ತಿಳಿದು ಬರುತ್ತಿದೆ.

NRWS21 KANNADA

19/04/2023

ಹಿಂದುಗಳಿಗಾಗಿ ಹಿಂದೂ ಮಹಾಸಭಾ ಬೆಂಬಲದೊಂದಿಗೆ ಗೋಪಾಲ್ ದೇವಾಡಿಗ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಅಪಾರ ಬೆಂಬಲಿಗರು, ಸ್ನೇಹಿತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದು ಅವರಿಗೆ ಶುಭ ಕೋರಿದರು.

ಇವರು ನಾಮಪತ್ರ ಸಲ್ಲಿಸದಂತೆ ತಡೆಯಲು ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಪ್ರಮುಖ ಬಿಜೆಪಿ ಮುಖಂಡರುಗಳು ಕೊನೆಯ ಕ್ಷಣದವರೆಗೂ ಪ್ರಯತ್ನಿಸಿ, ತಡೆಯುವಲ್ಲಿ ವಿಫಲರಾದರು.

"ಬಡವರ ಮಕ್ಕಳು ಬೆಳಿಬೇಕು ಕಂಡ್ರಿ" ಎಂದು ಗೋಪಾಲ್ ದೇವಾಡಿಗ ನಾಮಪತ್ರ ಸಲ್ಲಿಸಿದರು. ಇದರಿಂದಾಗಿ ಬಡವರ ಮಕ್ಕಳನ್ನು ಮತ್ತು ಹಿಂದುಳಿದ ವರ್ಗದವರನ್ನು ಧರ್ಮದ ಹೆಸರಿನಲ್ಲಿ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದವರಿಗೆ ದೊಡ್ಡ ಆಘಾತವಾಗಿದೆ.

ಗೋಪಾಲ್ ದೇವಾಡಿಗ ಅವರು ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಗೋಪಾಲಣ್ಣ ಎಂದೇ ಪ್ರಸಿದ್ಧರಾಗಿದ್ದು, ಇವರು ಹಿಂದುಗಳಿಗಾಗಿ, ಹಿಂದುತ್ವಕ್ಕಾಗಿ ದಶಕಗಳಿಂದ ಹೋರಾಟವನ್ನು ನಡೆಸಿಕೊಂಡು ಬಂದಿದ್ದು, ಇವರ ಹೋರಾಟವನ್ನು ಹತ್ತಿರದಿಂದ ನೋಡಿದವರು ಹೆಮ್ಮೆಯಿಂದ ಸಂಪೂರ್ಣ ವಿಶ್ವಾಸದಿಂದ ಇವರಿಗೆ ಬೆಂಬಲಿಸುತ್ತಿರುವುದು ನಕಲಿ ಹೋರಾಟಗಾರರಿಗೆ ನಡುಕ ಉಂಟುಮಾಡಿದೆ.

ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವ ಆಡಳಿತ ವಿರೋಧಿ ಅಲೆಯ ಜೊತೆಗೆ ಗೋಪಾಲ್ ರವರು ಪಡೆಯುವ ಪ್ರತಿಯೊಂದು ಮತವು ಕೂಡ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡುವ ಸಾಧ್ಯತೆಯಿದ್ದು, ಭೀಮಣ್ಣನವರಿಗೆ ಭೀಮ ಬಲ ಬರುವುದೇ ಕಾದು ನೋಡಬೇಕಾಗಿದೆ.

#ಹಿಂದೂ_ಮಹಾಸಭಾದ_ಮುಖಂಡ_ಗೋಪಾಲ್

18/04/2023

ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜನರ ಪ್ರೀತಿಯ ಗೋಪಾಲಣ್ಣ ಚುನಾವಣೆ ಕಣಕ್ಕೆ.

ಶಿರಸಿ- ಸಿದ್ದಾಪುರ_ವಿಧಾನಸಭಾ_ಕ್ಷೇತ್ರದ # ಚುನಾವಣಾ ಕಣಕ್ಕೆ ಧುಮಕಲು ಸನ್ನದ್ಧರಾಗುತ್ತಿರುವ #ಹಿಂದೂ_ಮಹಾಸಭಾದ_ಮುಖಂಡ_ಗೋಪಾಲ್. #ದಿನಾಂಕ_19 # ರಂದು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು, ಹಾಗೂ ಹಿಂದುತ್ವ ಮತ್ತು ಅಭಿವೃದ್ಧಿ ಎರಡನ್ನೂ ಬಯಸುವಂಥವರು ಬಂದು ತನಗೆ ಬೆಂಬಲ ನೀಡಬೇಕೆಂದು ಕೇಳಿಕೊಂಡಿದ್ದಾರೆ.

"NEWS21 KANNADA" ಶಿರಸಿ ಸಿದ್ದಾಪುರ ಕ್ಷೇತ್ರದ ಮತದಾರರಿಗೆ "ಬಿಜೆಪಿ ಬೇಕು ಕಾಗೇರಿ ಬೇಡ"  ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ ...
10/04/2023

"NEWS21 KANNADA" ಶಿರಸಿ ಸಿದ್ದಾಪುರ ಕ್ಷೇತ್ರದ ಮತದಾರರಿಗೆ "ಬಿಜೆಪಿ ಬೇಕು ಕಾಗೇರಿ ಬೇಡ" ಎನ್ನುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ನಾವು ಕೇಳಿಕೊಂಡಿದ್ದೆವು.

ಇದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿ 6013 ಜನ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಬೇರೆ ಅಭ್ಯರ್ಥಿಗಳ ಹಾಗೂ ಬೇರೆ ಪಕ್ಷಗಳ ಹೆಸರನ್ನು 782 ಜನರು ಸೂಚಿಸಿದ್ದಾರೆ.
"ಬಿಜೆಪಿ ಬೇಕು ಕಾಗೇರಿ ಬೇಡ"
ಎನ್ನುವುದಕ್ಕೆ ಸ್ಪಷ್ಟವಾಗಿ ಒಟ್ಟು 5,231 ಜನರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

"ಬಿಜೆಪಿ ಬೇಕು ಕಾಗೇರಿ ಬೇಡ"
ಎಂದು ಒಟ್ಟು 4,158 ಹೇಳಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಯವರಿಗೆ ಕೇವಲ 1,073 ಜನರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಮೇಲಿನ ಎಲ್ಲ ಮಾಹಿತಿಯನ್ನು ಬಿಜೆಪಿಯ ಕೆಲವು ಪ್ರಮುಖರು ನಮ್ಮಿಂದ ಪಡೆದುಕೊಂಡಿದ್ದರು ಕಾಗೇರಿಯವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗುತ್ತಿದೆ.

ಅಭಿವೃದ್ಧಿಯಾಗದಿರುವ ಬಗ್ಗೆ ಜನರಲ್ಲಿ ಬೇಸರವಿದ್ದರೂ ಬಿಜೆಪಿಯನ್ನು ಬಿಡಲು ಇಲ್ಲಿಯ ಮತದಾರರು ಸಿದ್ದರಿಲ್ಲ ಎಂದು ಕಂಡುಬರುತ್ತದೆ.

ಕಾಗೇರಿಯವರಿಗೆ ಪ್ರಮುಖವಾಗಿ ಕ್ಷೇತ್ರದಲ್ಲಿರುವ ಪ್ರಬಲ ನಾಮಧಾರಿ ಸಮಾಜದ ವಿರೋಧ ಸ್ಪಷ್ಟವಾಗಿ ಕಂಡುಬರುತ್ತದೆ.

ಮತದಾನದ ಸಮಯ ಸಮೀಪಿಸುತ್ತಿದ್ದಂತೆ ವಾತಾವರಣ ಬದಲಾಗಿ ಕಾಗೇರಿಯವರಿಗೆ ಪೂರಕವಾಗಬಹುದು ಹಾಗೂ ಉಪೇಂದ್ರ ಪೈ ರವರು ಬಹಳಷ್ಟು ಕಾಂಗ್ರೆಸ್ ಮತಗಳನ್ನು ಪಡೆದು ಬಿಜೆಪಿ ಗೆಲುವಿಗೆ ಕಾರಣವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ.

ಮುಖ್ಯವಾಗಿ ಭೀಮಣ್ಣ ನಾಯ್ಕ್ ರವರ ಎರಡನೇ ಸ್ಥಾನಕ್ಕೆ ಧಕ್ಕೆ ಬರುವ ಯಾವುದೇ ಲಕ್ಷಣಗಳಿಲ್ಲ.

ಚುನಾವಣೆ ಸಂದರ್ಭದಲ್ಲಿ ಹೈಡ್ರಾಮಗಳು ನಡೆಯುತ್ತಿರುತ್ತದೆ ಆದರೆ ಶಿರಸಿಯಲ್ಲಿ "ಪೈ ಡ್ರಾಮಾ" ನಡೆಯುತ್ತಿದೆ. ಡ್ರಾಮಾ ಮಾಡುತ್ತಿರುವುದು ಉಪೇಂದ್ರ ಪ...
03/04/2023

ಚುನಾವಣೆ ಸಂದರ್ಭದಲ್ಲಿ ಹೈಡ್ರಾಮಗಳು ನಡೆಯುತ್ತಿರುತ್ತದೆ ಆದರೆ ಶಿರಸಿಯಲ್ಲಿ "ಪೈ ಡ್ರಾಮಾ" ನಡೆಯುತ್ತಿದೆ. ಡ್ರಾಮಾ ಮಾಡುತ್ತಿರುವುದು ಉಪೇಂದ್ರ ಪೈ ಅವರಲ್ಲ, ಡ್ರಾಮಾ ಮಾಡುವಂತ ವ್ಯಕ್ತಿಯು ಅವರಲ್ಲ.

ಉಪೇಂದ್ರ ಪೈ ಅವರ ಒಳ್ಳೆಯತನ ದುರುಪಯೋಗವಾಗುತ್ತಿದೆ. ಬೀಜವಿಲ್ಲದ ಜೋಡೆತ್ತುಗಳಿಂದ ಏನು ಆಗುವುದಿಲ್ಲ ಎನ್ನುವುದನ್ನು ಮಂಡ್ಯದ ಜನ ಇಂಡಿಯಾಗೆ ತೋರಿಸಿಕೊಟ್ಟಿದ್ದಾರೆ. ಆದರೆ ಉಪೇಂದ್ರ ಪೈ ಅವರ ಸುತ್ತಲೂ ಹಣಕ್ಕಾಗಿ ಜೋಡೆತ್ತುಗಳು ಕಳ್ಳೆತ್ತುಗಳೆಂಬ ದುರುಳರೇ ತುಂಬಿದ್ದಾರೆ.

ದೂರದಿಂದ ನೋಡುವ ಪೈ ಅಭಿಮಾನಿಗಳಿಗೆ, ಮತದಾರರಿಗೆ ಸುತ್ತಲೂ ಇರುವ ದುರಳರಿಂದಾಗಿ ಡ್ರಾಮಾ ಕಂಪನಿಯಂತೆ ಕಂಡುಬರುತ್ತಿದೆ ಆದ್ದರಿಂದಲೇ ನಾವು ಹೇಳಿದ್ದು ಇದು "ಪೈ ಡ್ರಾಮಾ".

ಊಟಕ್ಕೆ ಉಪ್ಪು ಬಹಳ ಮುಖ್ಯ ಹಾಗೆಂದು ಉಪ್ಪನ್ನೇ ಊಟ ಮಾಡಲಾಗುವುದಿಲ್ಲ, ಉಪ್ಪಿನ ಪ್ರಮಾಣ ಅಡುಗೆಗೆ ಎಷ್ಟು ಹಾಕಬೇಕು ಎಂದು ಅಡುಗೆ ಮಾಡುವವರು ತಿಳಿದುಕೊಂಡಂತೆ, ಯಾವ ಯಾವ ವ್ಯಕ್ತಿಯನ್ನು ಚುನಾವಣೆ ಸಂದರ್ಭದಲ್ಲಿ ಎಲ್ಲಿ ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಅಭ್ಯರ್ಥಿಯಾದವನು ತಿಳಿದುಕೊಂಡಿರದಿದ್ದರೆ ಬರುವ ಮತಗಳು ಸುತ್ತಲೂ ಇರುವ ದುರುಳರಿಂದಾಗಿ ಬಾರದಂತಾಗಿ ಬಿಡುತ್ತವೆ.

ಸಾವಿರಾರು ವಿದ್ಯಾರ್ಥಿಗಳಿಗೆ, ಬಡವರಿಗೆ, ಶುದ್ಧ ಮನಸ್ಸಿನಿಂದ ಮಾಡಿದ ದಾನ ಧರ್ಮದ ಪುಣ್ಯದ ಫಲ ಉಪೇಂದ್ರ ಪೈ ಅವರ ಜೊತೆಗಿರುವುದರಿಂದ, ಇನ್ನೂ ಕಾಲ ಮಿಂಚಿಲ್ಲದೆ ಇರುವುದರಿಂದ, ಸುತ್ತಲೂ ಇರುವ ದುರುಳರನ್ನು ಸರಿಯಾಗಿ ಬಳಸಿಕೊಂಡು "ಉಪ್ಪಿ ದಾದಾ JDS" ಆಗುತ್ತಾರೋ ಅಥವಾ ದುರುಳರೆ ಇವರನ್ನು ಬಳಸಿಕೊಂಡು "ಉಪ್ಪಿಲ್ಲದ ಉಪ್ಪಿ2" ಮಾಡುತ್ತಾರೋ ಕಾದು ನೋಡಬೇಕಾಗಿದೆ.

ಸೋಮವಾರ 20/03/2023 ರಂದು ಶಶಿಭೂಷಣ್ ಹೆಗಡೆಯವರು ಸಿಎಂ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗ...
19/03/2023

ಸೋಮವಾರ 20/03/2023 ರಂದು ಶಶಿಭೂಷಣ್ ಹೆಗಡೆಯವರು ಸಿಎಂ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಲಾಗಿತ್ತು ಆದರೆ ಸಿಎಂ ಲಭ್ಯವಿಲ್ಲದ ಕಾರಣದಿಂದ ಯುಗಾದಿ ನಂತರ ಸೇರ್ಪಡೆ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.

ಕೆ ಜಿ ನಾಯ್ಕ್ ಹಣಜಿಬೈಲ್ ಇವರ ಅಪಾರ ಬೆಂಬಲಿಗರು ಸೇರಿದಂತೆ ಈಡಿಗ ಸಮಾಜ ಬಿಜೆಪಿಗೆ ಬೆಂಬಲಿಸುತ್ತಿದ್ದರು ಕಾಗೇರಿಯವರ ದೊಡ್ಡ ವಿರೋಧಿಯಾಗಿ ನಿಂತಿದೆ. ಈ ವಿರೋಧದಿಂದ ಆಗಬಹುದಾದ ದೊಡ್ಡ ಮಟ್ಟದ ಡ್ಯಾಮೇಜ್ ಕಂಟ್ರೋಲ್ ಮಾಡಲು ಶಶಿಭೂಷಣ್ ಹೆಗಡೆಯವರನ್ನು "ಬಿಜೆಪಿಯೇ ಭರವಸೆ" ಎಂದು ಭರವಸೆಗಳ ಮಹಾಪೂರವನ್ನೇ, ನೀಡಿ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ.

ರೊಟ್ಟಿ ಹಳಸಿತ್ತು, ನಾಯಿ ಹಸಿದಿತ್ತು, ಎನ್ನುವ ಮಾತಿನಂತೆ ಶಶಿಭೂಷಣ್ ಹೆಗಡೆಯವರಿಗೆ ಬಿಜೆಪಿ ಸೇರುವ ಹೊರತಾಗಿ ಇನ್ನೂ ಉತ್ತಮ ಆಯ್ಕೆ ಯಾವುದು ಅವರ ಮುಂದೆ ಇರಲಿಲ್ಲ.

ಮುಂದಿನ ಲೋಕಸಭೆ ಚುನಾವಣೆಗೆ ನಿಮ್ಮನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡಿರುವ ಬಗ್ಗೆ "ನ್ಯೂಸ್21 ಕನ್ನಡಕ್ಕೆ" ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ.

ದಶಕಗಳಿಂದಲೂ ಲೋಕಸಭಾ ಸ್ಥಾನವನ್ನು ಬ್ರಾಹ್ಮಣರಿಗೆಯೇ ನೀಡುತ್ತಿರುವ ಬಿಜೆಪಿಗೆ ಹಿಂದುತ್ವ ಎಂದರೆ ಕೇವಲ ಬ್ರಾಹ್ಮಣರೆ? ಬಿಜೆಪಿ ಕೇವಲ ಬ್ರಾಹ್ಮಣರಿಗೆ ಸೇರಿದೆಯೇ? ಬಿಜೆಪಿಗೆ ಹಿಂದುಳಿದ ವರ್ಗದವರು ಕೇವಲ ಬ್ಯಾನರ್ ಕಟ್ಟಲು , ಬಾವುಟ ಹಿಡಿದುಕೊಳ್ಳಲು ಮಾತ್ರ ಬೇಕಾಗಿದ್ದಾರ? ಎನ್ನುವ ಪ್ರಶ್ನೆ ಈಗಾಗಲೇ ಹಿಂದುಳಿದ ವರ್ಗದವರು ಪ್ರಬಲವಾಗಿ ಕೇಳಲು ಪ್ರಾರಂಭಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಪ್ರಬಲವಾಗಿ ಹಿಂದುಳಿದ ವರ್ಗದ ಗಟ್ಟದ ಕೆಳಗಿನ ವ್ಯಕ್ತಿಗಳಿಗೆ ಲೋಕಸಭಾ ಟಿಕೆಟ್ ಅನ್ನು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಈಗಾಗಲೇ ಸ್ಪಷ್ಟವಾಗುತ್ತಿದೆ.

ಕೆ ಜಿ ನಾಯ್ಕ ಹಣಜಿಬೈಲ್ ಇವರಿಗಾಗಿರುವ ಅನ್ಯಾಯ, ಕಿರುಕುಳ ದ ಜೊತೆಗೆ ಕ್ಷೇತ್ರದಲ್ಲಿ ನಡೆದ ಎಲ್ಲಾ ಕಳಪೆ ಕಾಮಗಾರಿಗಳು, ಅಧಿಕಾರಿ ವರ್ಗದಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ, ಶಿರಸಿಯ ಪ್ರಖ್ಯಾತ ವಕೀಲರೊಬ್ಬರಿಂದ ಶಾಸಕರ ಪರವಾಗಿ ನಡೆಯುತ್ತಿರುವ ದೊಡ್ಡ ಮಟ್ಟದ ವ್ಯವಹಾರಗಳಿಂದ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತಿರುವ ಶಾಸಕರಿಂದ ದೂರವಾಗಿರುವ ಮತದಾರರನ್ನು ಬಿಜೆಪಿಯತ್ತ ಕರೆ ತರುವುದು ಶಶಿಭೂಷಣ್ ಹೆಗಡೆಯವರಿಂದ ಸಾಧ್ಯವಾಗುವುದೆ ಎನ್ನುವ ಪ್ರಶ್ನೆ ಗೆ ಚುನಾವಣೆ ನಂತರವೇ ಉತ್ತರ ದೊರೆಯಲಿದೆ.

ಹಲವಾರು ಬಾರಿ ರಾಜಕೀಯವಾಗಿ ಎಡವಿದರೂ
ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿಯವರ ಭರವಸೆಗಳನ್ನು ನಂಬಿಕೊಂಡು ಬಿಜೆಪಿ ಸೇರುತ್ತಿರುವ ಶಶಿಭೂಷಣ್ ಹೆಗಡೆಯವರ ನಡೆ ಅವರ ರಾಜಕೀಯ ಆತ್ಮಹತ್ಯೆ, ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ವಿಶೇಷ ಸುದ್ದಿಗಳಿಗಾಗಿ "NEWS21 KANNADA" Like ಮಾಡಿ follow ಮಾಡಿ.

Address

Bangalore
Sirsi
581401

Telephone

+919988621721

Website

Alerts

Be the first to know and let us send you an email when News21 Kannada. ಉತ್ತರ ಕನ್ನಡ ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to News21 Kannada. ಉತ್ತರ ಕನ್ನಡ ಜಿಲ್ಲೆ:

Share