Sirsi Info - ಶಿರಸಿ ಇನ್ಫೋ

Sirsi Info - ಶಿರಸಿ ಇನ್ಫೋ Sirsi.Info provides latest news from Sirsi, Uttara Kannada, Karnataka, India and the world. We provide timely information and day-to-day event updates.
(1)

Sirsi.Info is Classifieds website. That helps people Buy, Sell, Rent, find in categories like Furniture, Mobile phones, cars & bikes, services, pets, real estate, jobs, education, entertainment and matrimonial. You can post ads and reqly to ads on Sirsi.Info in the city you live in. Sirsi.Info's classifieds websites allow you to post ads, find what you are looking for and address your reqular need

s by connecting people in a faster, simpler and easier way.

ಶ್ರೀ ಮಾರಿಕಾಂಬೆಯ ಆಶೀರ್ವಾದದಿಂದ ಆರಂಭಗೊಂಡ Sirsi.Info ಹೊಸತನ, ನವೀನತೆ, ವಿವಿಧತೆ, ವಿಶಿಷ್ಟತೆ ಹಾಗೂ ಅನನ್ಯತೆಯನ್ನು ಹೊಂದಿದೆ. ಹಣಗಳಿಸಲು ನಾನಾ ಕಸರತ್ತು ಕೈಗೊಳ್ಳದೇ ಪ್ರಚಾರದ ಗೀಳನ್ನು ಹಚ್ಚಿಸಿಕೊಳ್ಳದೇ, ನೈಜತೆ, ಪಾರದರ್ಶಕತೆ ಹಾಗೂ ಶಿರಸಿಯ ಸೊಬಗನ್ನು ದೇಶ ವಿದೇಶಗಳನ್ನು ತಲುಪುವಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ.

ಮಲೆನಾಡಿನ ಮಡಿಲಲ್ಲಿನ ಸುಂದರ ನಗರಿ ಶಿರಸಿ ಕರ್ನಾಟಕದ ಪ್ರಮುಖ ತಾಲೂಕುಗಳಲ್ಲಿ ಒಂದು. ಪ್ರಸಿದ್ಧ ಯಾತ್ರಾ ಸ್ಥಳವಾಗಿ, ಪ್ರವಾಸಿ ತಾಣವಾಗಿ, ಉತ್ತರಕನ್ನಡ ಜಿಲ್ಲೆಯ ವಾಣಿಜ್ಯ ರಾಜಧಾನಿಯಾಗಿ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಶಿರಸಿಯು ಇಂದಿನ ಮಾಡರ್ನ್ ಯುಗದಲ್ಲಿಯೂ ಅಭಿವೃದ್ಧಿಗಳ ಬೆನ್ನತ್ತಿ ತಮ್ಮತನವನ್ನು ಕುಂದಿಸಿಕೊಳ್ಳುತ್ತಿರುವ ಎಷ್ಟೋ ಪ್ರದೇಶಗಳಿಗೆ ಅಪವಾದವೆಂಬಂತೆ, ಅಭಿವೃದ್ಧಿಗಳ ಜೊತೆ ಗ್ರಾಮೀಣ ಸೊಗಡನ್ನೂ ಉಳಿಸಿಕೊಂಡು ಬೆಳೆಯುತ್ತಿದೆ.ಅದು ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ ಹೀಗೆ ನಾನಾ ಪ್ರಕಾರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಜನರಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಜೊತೆಗೆ ಶಿರಸಿಯ ವಿಶೇಷತೆಗಳ ಬಗ್ಗೆ ಪರಿಚಯಿಸುವ ವೆಬ್ ತಾಣವೇ ನಮ್ಮ ಈ Sirsi.Info.
ನಮ್ಮ ವೆಬ್ ತಾಣಕ್ಕೆ ಭೇಟಿಕೊಡುವ ಎಲ್ಲರಿಗೂ ಇಲ್ಲಿ ಉಪಯುಕ್ತ ಮಾಹಿತಿಗಳು ಮತ್ತು ಭರಪೂರ ಮನರಂಜನೆಗಳನ್ನು ಕೊಡುವ ಪ್ರಯತ್ನ ನಮ್ಮದು. ಅದಕ್ಕಾಗಿ ಶಿರಸಿಯ ನಂಬರ್ 1 ವಾರಪತ್ರಿಕೆ ‘ಶಿರಸಿ ಸಿರಿ’ಯ e-Paper ಪ್ರತಿ ಬುಧವಾರ ನಮ್ಮಲ್ಲಿ ಪ್ರಕಟವಾಗುತ್ತಿದೆ. ಹಾಗೆಯೇ ಶಿರಸಿಯ ಸ್ಥಳೀಯ ಕೇಬಲ್ ಚಾನಲ್ ‘ನೂತನ ಟಿವಿ ಚಾನೆಲ್ ‘ನ ನ್ಯೂಸ್ ಪ್ರತಿದಿನ ಪ್ರಸಾರವಾಗುತ್ತಿದೆ. ಅದಲ್ಲದೇ ಟೆಕ್ನೋಲಜಿಗೆ ಸಂಬಂಧಪಟ್ಟ ವಿಷಯಗಳು, ಶಿರಸಿಯ ಎಲ್ಲಾ ಕಛೇರಿಯ ಫೋನ್ ನಂಬರಿಗಳು, ಹೆಸರಾಂತ ಲೇಖಕರ ಲೇಖನಗಳು, ಕವನಗಳು, ಕಥೆಗಳು, ನಗೆಹನಿಗಳು, ಪ್ರವಾಸಿ ತಾಣಗಳು, ಸ್ಥಳೀಯ ಪ್ರತಿಭೆಗಳ ಪ್ರತಿಭೆಯ ಅನಾವರಣಗಳು ಹೀಗೆ ದಿನಂಪ್ರತಿ ಎಲ್ಲರಿಗೂ ಉಪಯೋಗವಾಗುವಂತಹ ಮತ್ತು ಇಷ್ಟವಾಗುವಂತಹ ನೂರಾರು ವಿಚಾರಗಳನ್ನು ನಾವಿಲ್ಲಿ ಸ್ತುತಪಡಿಸುತ್ತೇವೆ. DifDesigner TechnologiesDIf-Main-Logo ನಡೆಸುತ್ತಿರುವ ಈ ವೆಬ್ ಸೈಟಿನ ಮೂಲ ಉದ್ಧೇಶ ಜನಗಳು ಮನೊರಂಜನೆಯ ಈ ತಾಣದಿಂದ ಪ್ರಯೋಜನ ಪಡೆದುಕೊಳ್ಳಲಿ’ ಎಂಬುದಷ್ಟೇ! ಯಾಕೆಂದರೆ ಆದಾಯ ಪಡೆಯದೇ, ಉಚಿತವಾಗಿ ಇದನ್ನು ನಿರ್ವಹಿಸಲಾಗುತ್ತಿದೆ. ಅಲ್ಲದೇ ಶಿರಸಿಯ ಐದು ರಸ್ತೆ ಬಳಿಯಿರುವ ನಮ್ಮ ಕಛೇರಿಯಲ್ಲಿ ಆಸಕ್ತರಿಗೆ ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಕಂಪ್ಯೂಟರ್ ತರಬೇತಿಯನ್ನೂ ನೀಡಲಾಗುತ್ತಿದೆ. ಹೊರ ಊರಿನಲ್ಲಿರುವ ಶಿರಸಿಗರಿಗೂ ಸಹಾಯವಾಗಲಿ ಎನ್ನುವುದೇ ನಮ್ಮ ಆಶಯ. Sirsi.Info ನ ಮೂಲ ಮಂತ್ರ ಜನತೆಯನ್ನು ಅದರಲ್ಲೂ ಯುವ ಜನತೆಯನ್ನು ಶಿರಸಿಯತ್ತ ಸೆಳೆಯುವುದು. ಹೊಸತನಕ್ಕೆ ಮುನ್ನುಡಿಯನ್ನು ಬರೆಯುವ ಪ್ರತಿಭಾವಂತರನ್ನು ಗುರುತಿಸಿ ಪೋಶಿಸುವುದು. ಇಲ್ಲಿ ಎಲ್ಲರಿಗೂ ಒಂದು ಅಡಿಪಾಯ ನೀಡುವ ವ್ಯವಸ್ಥೆಯಿದೆ. ಯಾವುದನ್ನು ಅತಿಯಾಗಿಸದೇ, ಅಗತ್ಯಕ್ಕೆ ತಕ್ಕ ಉಪ್ಪಿನಕಾಯಿ ಉಣಬಡಿಸುವುದೇ ನಮ್ಮ ಕಾಯಕ.



ನೀವು ಕೂಡ ನಿಮ್ಮ ಪ್ರತಿಭೆಯನ್ನು Sirsi.Info ದಲ್ಲಿ ಪ್ರಕಟಿಸಬಹುದು.

ಕುಂಭಮೇಳಕ್ಕೆ ವಿಶೇಷ ರೈಲು - ಉತ್ತರ ಕನ್ನಡಿಗರಿಗೆ ಅನುಕೂಲಉಡುಪಿಯಿಂದ ಭಟ್ಕಳ, ಕುಮಟಾ, ಕಾರವಾರ ಮಾರ್ಗವಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್...
13/02/2025

ಕುಂಭಮೇಳಕ್ಕೆ ವಿಶೇಷ ರೈಲು - ಉತ್ತರ ಕನ್ನಡಿಗರಿಗೆ ಅನುಕೂಲ

ಉಡುಪಿಯಿಂದ ಭಟ್ಕಳ, ಕುಮಟಾ, ಕಾರವಾರ ಮಾರ್ಗವಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಲು ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದಾಗಿ ಉಡುಪಿಯಿಂದ ಆರಂಭಗೊಂಡು ಉತ್ತರ ಕನ್ನಡ ಜಿಲ್ಲೆಯ ಮುಖಾಂತರ ಪ್ರಯಾಗ್‌ರಾಜ್ ತರಳಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.

ಶಿರಸಿ - ಕುಮಟಾ ಮಾರ್ಗದಲ್ಲಿ, ಶಿರಸಿಯಿಂದ ದೇವಿಮನೆ ತನಕ (35km) ಬಸ್ ವ್ಯವಸ್ಥೆ ಇರುತ್ತದೆ. ಬಸ್ ವೇಳಾಪಟ್ಟಿಯನ್ನು ಗಮನಿಸಿ.
18/12/2024

ಶಿರಸಿ - ಕುಮಟಾ ಮಾರ್ಗದಲ್ಲಿ, ಶಿರಸಿಯಿಂದ ದೇವಿಮನೆ ತನಕ (35km) ಬಸ್ ವ್ಯವಸ್ಥೆ ಇರುತ್ತದೆ. ಬಸ್ ವೇಳಾಪಟ್ಟಿಯನ್ನು ಗಮನಿಸಿ.

African Grey Parrot ಕಾಣೆಯಾಗಿದ್ದು, ಇದು ಎಲ್ಲಿಯಾದರೂ ಕಂಡುಬಂದಲ್ಲಿ ದಯವಿಟ್ಟು ನಮ್ಮ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.MISSING (AWARD)Afri...
26/10/2024

African Grey Parrot ಕಾಣೆಯಾಗಿದ್ದು, ಇದು ಎಲ್ಲಿಯಾದರೂ ಕಂಡುಬಂದಲ್ಲಿ ದಯವಿಟ್ಟು ನಮ್ಮ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.

MISSING
(AWARD)
African grey parrot
On 25/10/2024
From Vidyanagar, Maratikoppa, Sirsi
Please contact - 9741438703, 9113926117

09/10/2024

ಸಿರಸಿ ಘಟಕದಲ್ಲಿ ಬಸ್ಸುಗಳ ವಾಷಿಂಗ್ ಕಾರ್ಯ ನಿರ್ವಹಿಸಲು ಸ್ವಚ್ಛತೆಗಾರರು ಬೇಕಾಗಿದ್ದು. ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಂತವರನ್ನು ಘಟಕಕ್ಕೆ ಭೇಟಿ ನೀಡುವಂತೆ ತಿಳಿಸಲು ಎಲ್ಲ ಸಿಬ್ಬಂದಿಗಳಿಗೆ ತಿಳಿಸಿದೆ. ಇಬ್ಬರ ಅವಶ್ಯಕತೆ ಇದ್ದು ಒಬ್ಬರಿಗೆ ಹತ್ತು ಸಾವಿರ ತಿಂಗಳ ವೇತನ ನೀಡಲಾಗುವುದು. ಸಮಯ 12 ರಿಂದ 2 ಗಂಟೆವರೆಗೆ ಹಾಗೂ ಸಂಜೆ 5:00 ಇಂದ ವಾಷಿಂಗ್ ಕಾರ್ಯ ಮುಗಿಯುವವರೆಗೆ. ಯಾರಿಗಾದರೂ ಅವಶ್ಯಕತೆ ಇದ್ದಲ್ಲಿ ತಕ್ಷಣ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ತಿಳಿಸುವುದು.

ಕಾರವಾರದ ಕಾಳಿನದಿಗೆ ಕಟ್ಟಲಾಗಿದ್ದ 42 ವರ್ಷ ಹಳೆಯ ಸೇತುವೆ ಕುಸಿದಿದೆ.ಕಾರವಾರದಿಂದ ಸದಾಶಿವಗಡ ಗೋವಾ ಸಂಪರ್ಕಕ್ಕೆ ಕಟ್ಟಲಾಗಿದ್ದ ಹಳೆಯ ಬ್ರಿಡ್ಜ್...
07/08/2024

ಕಾರವಾರದ ಕಾಳಿನದಿಗೆ ಕಟ್ಟಲಾಗಿದ್ದ 42 ವರ್ಷ ಹಳೆಯ ಸೇತುವೆ ಕುಸಿದಿದೆ.

ಕಾರವಾರದಿಂದ ಸದಾಶಿವಗಡ ಗೋವಾ ಸಂಪರ್ಕಕ್ಕೆ ಕಟ್ಟಲಾಗಿದ್ದ ಹಳೆಯ ಬ್ರಿಡ್ಜ್ ಕುಸಿದಿದ್ದು ಒಂದು ಲಾರಿ ನೀರುಪಾಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.

ತಕ್ಷಣ ಎಚ್ಚೆತ್ತ ಜಿಲ್ಲಾಧಿಕಾರಿಗಳು ಹೊಸ ಸೇತುವೆಯ ಸುರಕ್ಷತೆ ಪರಿಶೀಲಿಸಿ ಇಂದೇ ವರದಿ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಹೆಚ್ಚಿನ‌ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Two special trains will be operated between Bengaluru and Karwar stations to clear the extra rush.ಪ್ರಯಾಣಿಕರ ಬೇಡಿಕೆಯ ಮೇರೆ...
25/07/2024

Two special trains will be operated between Bengaluru and Karwar stations to clear the extra rush.

ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಶಾಲಾ-ಕಾಲೇಜುಗಳು ದಿನಾಂಕ 23-07-2024 ರಿಂದ ಪುನರಾರಂಭವಾಗಲಿವೆ.ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ...
22/07/2024

ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಶಾಲಾ-ಕಾಲೇಜುಗಳು ದಿನಾಂಕ 23-07-2024 ರಿಂದ ಪುನರಾರಂಭವಾಗಲಿವೆ.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ನಾಳೆ ಶಾಲೆಗೆ ಹಾಜರಾಗಬೇಕು. ಈ ಕುರಿತು ಕಾರವಾರದಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

21/07/2024

ಗುಡ್ಡ ಕುಸಿತ: ನಮ್ಮೆಲ್ಲರ ಬೆಂಬಲ ಹಾಗೂ ಪ್ರಯತ್ನ ಬೇಕಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು, ಗುಡ್ಡ ತೆರವು ಕಾರ್ಯಾಚರಣೆ ನಡೆಯುತ್ತಲಿದೆ. ಆದರೆ ಅದಕ್ಕೆ ವೇಗ ದೊರಕದೇ, ಕೇರಳದಿಂದ ಸ್ವಯಂ ಪ್ರೇರಿತ ಯುವಕರು ಬಂದಿದ್ದು, ತಮ್ಮಿಂದ ಸಾಧ್ಯವಾದ ನೆರವು ನೀಡಲು ಸಿದ್ದರಿದ್ದಾರೆ.

ಜಿಲ್ಲೆಯ ಜನರ ಅಗತ್ಯ ನೆರವು ಬೇಕಿದ್ದು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವೂ ಇತ್ತ ಗಮನಹರಿಸಬೇಕಿದೆ. ಗುಡ್ಡ ತೆರವು ಹಾಗೂ ಮಣ್ಣಿನಡಿ ಸಿಲುಕಿದವರನ್ನು ಹೊರತೆಗೆಯುಲು ಶಕ್ತಿ ಮೀರಿ ಪ್ರಯತ್ನ ನಡೆಸಬೇಕಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಪ್ರಕೃತಿ ವಿಕೋಪ ‌ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಿನಾಂಕ 22-07-2024 ರಂದು ಶಾಲಾ ಕ...
21/07/2024

ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಪ್ರಕೃತಿ ವಿಕೋಪ ‌ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಿನಾಂಕ 22-07-2024 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

ಶಿರಸಿ ಕುಮಟಾ ಹೆದ್ದಾರಿ ಗುಡ್ಡ ಕುಸಿತವನ್ನು ತೆರವುಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ನಿರಂತರ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೆ ಹ...
18/07/2024

ಶಿರಸಿ ಕುಮಟಾ ಹೆದ್ದಾರಿ ಗುಡ್ಡ ಕುಸಿತವನ್ನು ತೆರವುಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ನಿರಂತರ ಮಳೆಯಿಂದಾಗಿ ಮಣ್ಣು ತೆರವು ಕಾರ್ಯಾಚರಣೆಗೆ ಹಿನ್ನೆಡೆ ಉಂಟಾಗಿದೆ.

ಇಲ್ಲಿನ ಚಿತ್ರಗಳು ಪ್ರಸ್ತುತ ಪರಿಸ್ಥಿತಿ ವಿವರಿಸುತ್ತಿದ್ದು, ಮಣ್ಣು ತೆರವು ಕಾರ್ಯಾಚರಣೆ ಪ್ರಗತಿ ಕಾಣಬಹುದಾಗಿದೆ.

ವರದಿಗಾರರು: ಸುಧನ್ವ ಖರೆ

ಮಳೆಗಾಳಿಗಳಿಂದ ವಿದ್ಯುತ್ ಅಡೆತಡೆ ಉಂಟಾದಲ್ಲಿ, ವಿದ್ಯುತ್ ವಾಹಕ ತುಂಡಾಗಿ ಬಿದ್ದಿದ್ದಲ್ಲಿ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗ...
17/07/2024

ಮಳೆಗಾಳಿಗಳಿಂದ ವಿದ್ಯುತ್ ಅಡೆತಡೆ ಉಂಟಾದಲ್ಲಿ, ವಿದ್ಯುತ್ ವಾಹಕ ತುಂಡಾಗಿ ಬಿದ್ದಿದ್ದಲ್ಲಿ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಹೆಸ್ಕಾಂ ಹೆಲ್ಪ್‌ಲೈನ್: 1912 ಅಥವಾ ಈ ಕೆಳಕಂಡ 24*7 ಗ್ರಾಹಕರ ಸಹಾಯವಾಣಿಗಳಿಗೆ ಸಂಪರ್ಕಿಸಿ ದೂರುಗಳನ್ನ ನೀಡಬಹುದಾಗಿದೆ.

ಕಾರವಾರ ವಿಭಾಗ- ಕಾರವಾರ ಶಾಖೆ: 08382- 221336, ಸದಾಶಿವಗಡ ಶಾಖೆ: 08382- 265753, ಅಂಕೋಲಾ ಶಾಖೆ: 08382- 230730, ಹೊನ್ನಾವರ ವಿಭಾಗ- ಕುಮಟಾ ಶಾಖೆ: 08386- 222034, ಗೋಕರ್ಣ ಶಾಖೆ: 94808 81935, ಮರಾಕಲ್ ಶಾಖೆ: 94808 83732, ಹೊನ್ನಾವರ ಶಾಖೆ: 08387- 220 294, ಕಾಸರಕೋಡ್ ಶಾಖೆ: 94808 81943, ಗೇರುಸೊಪ್ಪ ಶಾಖೆ: 08387- 268 063, ಭಟ್ಕಳ ಶಾಖೆ: 08385- 226 426/ 94808 81958, ಮುರುಡೇಶ್ವರ ಶಾಖೆ: 08385- 268 555/ 94815 04867

ಶಿರಸಿ ವಿಭಾಗ- ಶಿರಸಿ ಶಾಖೆ: 08384- 226 350/ 94808 81805, ಸಿದ್ದಾಪುರ ಶಾಖೆ: 08389- 230 162/ 94808 81888, ಯಲ್ಲಾಪುರ ಶಾಖೆ: 08419- 261 170/ 94808 81851, ಮುಂಡಗೋಡ ಶಾಖೆ: 08301- 222 151, ದಾಂಡೇಲಿ ವಿಭಾಗ- ದಾಂಡೇಲಿ ಶಾಖೆ: 08284- 231239, ಹಳಿಯಾಳ ಶಾಖೆ: 08284- 220 138, ದಾಂಡೇಲಿ ನಗರ ಶಾಖಾಧಿಕಾರಿ: 94808 81764, ದಾಂಡೇಲಿ ಗ್ರಾಮೀಣ ಶಾಖಾಧಿಕಾರಿ: 94808 81778, ರಾಮನಗರ ಶಾಖಾಧಿಕಾರಿ: 87490 08440, ಜೊಯಿಡಾ ಶಾಖಾಧಿಕಾರಿ: 94808 81779, ಹಳಿಯಾಳ ನಗರ ಶಾಖಾಧಿಕಾರಿ: 94808 81780, ಹಳಿಯಾಳ ಗ್ರಾಮೀಣ ಶಾಖಾಧಿಕಾರಿ: 94808 81781

ಹೊಸದೊಂದು ಸಮಸ್ಯೆ ಎದುರಾಗಿದೆ, ಇತ್ತ ಗಮನಿಸಿಅಂಕೋಲಾ ತಾಲೂಕಿನ ಶಿರೂರು ಬಳಿ ಟ್ಯಾಂಕರ್ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಈಗ ಅದರಿಂದ ಗ್ಯಾಸ್ ...
17/07/2024

ಹೊಸದೊಂದು ಸಮಸ್ಯೆ ಎದುರಾಗಿದೆ, ಇತ್ತ ಗಮನಿಸಿ

ಅಂಕೋಲಾ ತಾಲೂಕಿನ ಶಿರೂರು ಬಳಿ ಟ್ಯಾಂಕರ್ ನದಿ ನೀರಿನಲ್ಲಿ ಕೊಚ್ಚಿಹೋಗಿದ್ದು, ಈಗ ಅದರಿಂದ ಗ್ಯಾಸ್ ಸೋರಿಕೆ ಎದುರಾಗುವ ಸಾಧ್ಯತೆ ಇದೆ. ನದಿ ಪಾತ್ರದ ಅಕ್ಕಪಕ್ಕದ ಜನರು ಸುರಕ್ಷಿತ ಸ್ಥಾನಕ್ಕೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಸಿದೆ. ದಯವಿಟ್ಟು ಕರಾವಳಿ ಭಾಗದ ಜನತೆ ಈ ಬಗ್ಗೆ ಎಚ್ಚರವಹಿಸಿ.

Address

Chowkimath
Sirsi
581401

Telephone

+919986448244

Alerts

Be the first to know and let us send you an email when Sirsi Info - ಶಿರಸಿ ಇನ್ಫೋ posts news and promotions. Your email address will not be used for any other purpose, and you can unsubscribe at any time.

Contact The Business

Send a message to Sirsi Info - ಶಿರಸಿ ಇನ್ಫೋ:

Share