ಎ ಎಸ್ ಟಿವಿ ಕನ್ನಡ

ಎ ಎಸ್ ಟಿವಿ ಕನ್ನಡ AS TV KANNADA 99452 69631

https://youtu.be/JCUu_T53mfA?si=kU9-K4F-3bxf1zs_
01/05/2025

https://youtu.be/JCUu_T53mfA?si=kU9-K4F-3bxf1zs_

ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ(ರಿ) ದಿನಾಂಕ :01/05/25ಜಿ. ಬಿ. ಜ್ಯೋತಿ ಗಣೇಶ್ ಸರ್, 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ....

https://youtu.be/Uj7LdYI1LSs?si=3abWq20VRn7nyMSs
30/04/2025

https://youtu.be/Uj7LdYI1LSs?si=3abWq20VRn7nyMSs

ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ (ರಿ) ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ 2ನೇ, ಕ್ರಾಸ್ ಕೆ.ಆರ್. ಬಡಾವಣೆ ತುಮಕೂರು. ದ.....

12/04/2025

ಆಸ್ಥಾನ ಎ ಮೆಹಬೂಬಿಯ ಕದಿರಿಯ ಗುಲ್ಷನ್ ಚೌಡಂಬಳ್ಳಿ ತುಮಕೂರು

https://youtu.be/sKanubxTHIg?si=UrZzGW7G2Z_ZKMRY
10/04/2025

https://youtu.be/sKanubxTHIg?si=UrZzGW7G2Z_ZKMRY

ಏಪ್ರಿಲ್‌ 16 ರಂದು ಬೆಲೆ ಏರಿಕೆ ಬಡಜನ ವಿರೋಧಿ ನೀತಿ ಖಂಡಿಸಿ ಸ್ಲಂ ಸಂಘಟನೆ ಪ್ರತಿಭಟನೆಸ್ಲಂ ಜನರ ಸಮಾವೇಶ ಸಾಂಸ್ಕೃತಿಕ ಪ್ರಕಾರಗಳೊಂದ....

*ಸರ್ಕಾರದ ಯಾವುದೇ ಅನುದಾನವಿಲ್ಲದೆ ಪರಿಸರ ಸೇವೆ ಸಲ್ಲಿಸುತ್ತಿರುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ...... ಎಂ. ಅಮರೇಗೌಡ ವಕೀಲರು* ಸಿಂಧನೂರು ನಗ...
03/04/2025

*ಸರ್ಕಾರದ ಯಾವುದೇ ಅನುದಾನವಿಲ್ಲದೆ ಪರಿಸರ ಸೇವೆ ಸಲ್ಲಿಸುತ್ತಿರುವ ವನಸಿರಿ ತಂಡದ ಕಾರ್ಯ ಶ್ಲಾಘನೀಯ...... ಎಂ. ಅಮರೇಗೌಡ ವಕೀಲರು*

ಸಿಂಧನೂರು ನಗರದ ಮೆಹಬೂಬ್ ಕಾಲೋನಿಯ ಆರ್.ಜಿ.ಎಮ್.ಶಾಲೆ ಪಕ್ಕದಲ್ಲಿರುವ ಶ್ರೀ.ಎಂ.ಮರಿಬಸವನಗೌಡ ವಕೀಲರು ಚಾರಿಟೇಬಲ್ ಟ್ರಸ್ಟ್ ಕಾರ್ಯಾಲಯದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ. ಅಮರೇಗೌಡ ವಕೀಲರು ಅವರು ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರ ಪರಿಸರ ಸೇವೆ ಗುರುತಿಸಿ ಇನ್ನಷ್ಟು ಹೆಚ್ಚಿನ ಪರಿಸರ ಸೇವೆ ಮಾಡಲು 25 ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ವಿತರಣೆ ದೇಣಿಗೆ ನೀಡಿದರು.

ವನಸಿರಿ ಪೌಂಡೇಷನ್ ಸಂಸ್ಥೆ ಸುಮಾರು 10ವರ್ಷಗಳಿಂದ ಕಲ್ಯಾಣ ಕರ್ನಾಟಕದಾದ್ಯಂತ ಗಿಡ ಮರಗಳ ಉಳಿವಿಗಾಗಿ, ಬಿಸಿಲಿನ ತಾಪವನ್ನು ಕಡಿಮೆಗೊಳಿಸಲು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಗುರಿಯನ್ನು ಹೊಂದಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿದೆ.ಇದನ್ನು ಗುರುತಿಸಿದ ರಾಜ್ಯ ಸರ್ಕಾರ 2023 ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಪರಿಸರ ಸೇವೆಗೆ ಹಗಲಿರುಳು ಎನ್ನದೆ ದುಡಿಯುತ್ತಿರುವ ಏಕೈಕ ಸಂಸ್ಥೆ ವನಸಿರಿ ಫೌಂಡೇಶನ್. ವನಸಿರಿ ಫೌಂಡೇಶನ್ ಪರಿಸರ ಸಂರಕ್ಷಣೆ ಜೊತೆಗೆ ರಕ್ತದಾನ ಅನ್ನದಾನ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ನೀಡುವ ಪರಿಕಲ್ಪನೆಯನ್ನು ಹೊಂದಿದೆ.ಇಂತಹ ಒಂದು ಸಂಸ್ಥೆಗೆ ಸರ್ಕಾರದ ಯಾವುದೇ ಅನುದಾನವಿಲ್ಲದೆ, ಪಲಾಪೇಕ್ಷೆಗಳಿಲ್ಲದೆ ಪರಿಸರ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯ. ನಾವುಗಳೆಲ್ಲರೂ ಸಹಾಯ ಸಹಕಾರ ನೀಡುವ ಮೂಲಕ ಇನ್ನು ಹೆಚ್ಚಿನ ಪರಿಸರ ಸಂರಕ್ಷಣೆ ಕಾರ್ಯಗಳನ್ನು ಮಾಡಲಿ ಎಂದು ನಮ್ಮ ಶ್ರೀ.ಎಂ.ಮರಿ ಬಸನಗೌಡ ವಕೀಲರು ಚಾರಿಟೇಬಲ್ ವತಿಯಿಂದ 25 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿರುವುದು ನಮಗೆ ಸಂತೋಷದಾಯಕವಾಗುತ್ತಿದೆ. ಮತ್ತು ಇಂತಹ ಸಂಸ್ಥೆಗಳಿಗೆ ನಾವು ನೀವುಗಳೆಲ್ಲರೂ ಸಹಾಯ ಮಾಡುವ ಮೂಲಕ ವನಸಿರಿ ತಂಡದ ಜೊತೆಗೆ ಕೈಜೋಡಿಸೋಣ,ಪರಿಸರ ಸಂರಕ್ಷಣೆಗೆ ಸೇವೆ ಸಲ್ಲಿಸೋಣ ಎಂದು ಶ್ರೀ.ಎಂ. ಮರಿಬಸವನಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ ಅಮರೇಗೌಡ ವಕೀಲರು ತಿಳಿಸಿದರು.

ಶ್ರೀ.ಎಂ.ಮರಿಬಸವನಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಅಮರೇಗೌಡ ವಕೀಲರು ಅವರು ವನಸಿರಿ ಪೌಂಡೇಷನ್ ಸಂಸ್ಥೆಯ ಕಾರ್ಯವನ್ನು ಮೆಚ್ಚಿ 25 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿರುವುದು ತುಂಬಾ ಸಂತೋಷ ವಿಷಯ. ಅವರ ಈ ಸಹಾಯ ವನಸಿರಿ ತಂಡ ಯಾವತ್ತೂ ಮರೆಯುವುದಿಲ್ಲ.ಇವರ ಸಹಾಯ ನಮಗೆ ಇನ್ನಷ್ಟು ಪರಿಸರ ಸೇವೆ ಮಾಡಲು ಪಷ್ಟಿ ನೀಡಿದೆ.ಪ್ರತಿ ವರ್ಷ 1ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದೆವು ಆದರೆ ಈ ವರ್ಷ 1.20 ಸಾವಿರ ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಸಹಕರಿಸಿದ ಇದಕ್ಕೆ ಎಂ ಅಮರೇಗೌಡ ವಕೀಲರಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ತಿಳಿಸಿದರು.

ಈ ಸಂಧರ್ಭದಲ್ಲಿ ಆದನಗೌಡ ಎಲೆಕೂಡ್ಲಿಗಿ,ರಾಜು ಪತ್ತಾರ, ಮುದುಕಪ್ಪ ಹೊಸಳ್ಳಿ ಕ್ಯಾಂಪ್, ಮಂಜುನಾಥ ವಕೀಲರು ಇದ್ದರು.

01/04/2025

ತುಮಕೂರಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಸನ್ಮಾನ

01/04/2025

*ವನಸಿರಿ ಪೌಂಡೇಷನ್ ನಿಂದ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿ ಹಾಗೂ ಎಪ್ರೀಲ್ ಕೂಲ್ ಆಚರಣೆ*

ಸಿಂಧನೂರಿನ ನಟರಾಜ ಕಾಲೋನಿಯ ರಾಜೇಂದ್ರ ಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪೌಂಡೇಷನ್ (ರಿ)ರಾಜ್ಯ ಘಟಕ ರಾಯಚೂರು ವತಿಯಿಂದ
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿ ಅಂಗವಾಗಿ ಅನ್ನದಾಸೋಹ ಹಾಗೂ ಎಪ್ರೀಲ್ ಕೂಲ್ ಪಕ್ಷಿಗಳ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪೂಜ್ಯರು, ಗಣ್ಯವ್ಯಕ್ತಿಗಳು
ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ,ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಮಣ್ಣಿನ ಮಡಿಕೆ ಕಟ್ಟಿ ನೀರು ಹಾಕಿ ಎಪ್ರೀಲ್ ಪೂಲ್ ಬದಲಿಗೆ ಎಪ್ರೀಲ್ ಕೂಲ್ ಕಾರ್ಯಕ್ರವನ್ನು ಉದ್ಘಾಟಿಸಿದರು.ನಂತರ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಶ್ರೀ ಸದಾನಂದ ಶರಣರು ಸಿದ್ಧಾಶ್ರಮ ಬಂಗಾರಿ ಕ್ಯಾಂಪ್, ವನಸಿರಿ ಅಮರೇಗೌಡ ಮಲ್ಲಾಪುರ,ಅಮರೇಗೌಡ ವಕೀಲರು,ಅಶೋಕ ಗದ್ರಟಗಿ, ಬಸವರಾಜ ನಾಡಗೌಡ, ಅಮರಯ್ಯ ಸ್ವಾಮಿ ಅಲಬನೂರು,ಸೋಮನಗೌಡ ಬಾದರ್ಲಿ,ಬಸವರಾಜ ಸಾಹುಕಾರ ವಕೀಲರು, ಅಶೋಕ GJ ಗುತ್ತಿಗೆದಾರರು, ರಾಜೂಗೌಡ ಬಾದರ್ಲಿ, ಶಿವನಗೌಡ ಗೊರೇಬಾಳ, ಬಸವರಾಜ NGO, ಪಂಪಯ್ಯ ಸ್ವಾಮಿ ಸಾಲಿಮಠ,ತಿಮ್ಮಣ್ಣ ಸಾಹುಕಾರ ಕುರಕುಂದಿ, ರಾಜೇಂದ್ರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮುಖ್ಯ ಗುರುಗಳು ಹಾಗೂ ಶಿಕ್ಷಕರ ವರ್ಗದವರು, ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು,ವನಸಿರಿ ಪೌಂಡೇಷನ್ ಸದಸ್ಯರು,ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು,ಪರಿಸರ ಪ್ರೇಮಿಗಳು ಇನ್ನಿತರರು ಇದ್ದರು.

01/04/2025

ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘ (ರಿ)
ಚಾಮುಂಡೇಶ್ವರಿ ದೇವಸ್ಥಾನ ರಸ್ತೆ ಎರಡನೇ ಕ್ರಾಸ್ ಕೆ ಆರ್ ಬಡಾವಣೆ ತುಮಕೂರು
ದಿನಾಂಕ 1/ 4 /2025 ರಂದು ಮಂಗಳವಾರ ನಮ್ಮ ಆಫೀಸಿನಲ್ಲಿ 10:30ಕ್ಕೆ ಡಾಕ್ಟರ್ ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ 118ನೇ ಜಯಂತೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು ಈ ಒಂದು ಸಮಾರಂಭಕ್ಕೆ ರಾಜ್ಯ ಅಧ್ಯಕ್ಷರಾದಂತಹ ಎಂ ಗೋಪಿ ಸರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವಂತಹ ಹೆಚ್ ರಾಜಣ್ಣ ರಾಜ್ಯ ಉಪಾಧ್ಯಕ್ಷರು ವಿಜಯಕುಮಾರ ಬು ಳ್ಳಾರಾಜ್ಯ ನಿರ್ದೇಶಕರು ಮಂಜಮ್ಮ ಜಿಲ್ಲಾ ಉಪಾಧ್ಯಕ್ಷರಾಗಿರುವಂತ ಆದಿಲ್ ಭಾಷಾ ನಗರಾಧ್ಯಕ್ಷರು ರಾಮಾಂಜನೇಯ ಸರ್ ನಗರ ಉಪಾಧ್ಯಕ್ಷರು ಗಂಗಾಧರ್. ನಗರ ಪ್ರಧಾನ ಕಾರ್ಯದರ್ಶಿ ಕೃಷ್ಣ. ಜಿಲ್ಲಾ ಮಹಿಳಾ ಅಧ್ಯಕ್ಷರಾಗಿರುವಂತ ಶೃತಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ. ಹಾಗೂ ಶಿವಲಿಂಗಮ್ಮ. ಮಂಜುಳಾ ಈ ಒಂದು ಸಮಾರಂಭಕ್ಕೆ ಆಗಮಿಸಿದ್ದರು 🙏🙏 ಆಗಮಿಸಿದಂತಹ ಎಲ್ಲಾ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು

*ಆತ್ಮೀಯ ಪತ್ರಿಕಾ ಹಾಗೂ ಮಧ್ಯಮ ಮಿತ್ರರರಿಗೆ ಸ್ವಾಗತ 🙏🙏*  ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ  *ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ...
31/03/2025

*ಆತ್ಮೀಯ ಪತ್ರಿಕಾ ಹಾಗೂ ಮಧ್ಯಮ ಮಿತ್ರರರಿಗೆ ಸ್ವಾಗತ 🙏🙏*

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ *ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 118 ನೇ ಜಯಂತಿ* ಅಂಗವಾಗಿ *ಎಪ್ರಿಲ್ ಪೂಲ್ ಬದಲಿಗೆ ಏಪ್ರಿಲ್ ಕೂಲ್ ಆಚರಣೆ* ಮೂಲಕ
*ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮ* ಇದೇ ಎಪ್ರೀಲ್ 1ರಂದು *ವನಸಿರಿ ಪೌಂಡೇಷನ್(ರಿ)ರಾಜ್ಯ ಘಟಕ ರಾಯಚೂರು* ವತಿಯಿಂದ *ಸಿಂಧನೂರಿನ ನಟರಾಜ ಕಾಲೋನಿಯ ರಾಜೇಂದ್ರ ಕುಮಾರ ಮೆಮೋರಿಯಲ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ* ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಅಂಗವಾಗಿ ಬೆಳಗ್ಗೆ10:30 ಕ್ಕೆ
ನಡೆದಾಡುವ ದೇವರು *ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ,ಅನ್ನ ದಾಸೋಹ ಕಾರ್ಯಕ್ರಮ,ಜೊತೆಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ದಾಹ ತೀರಿಸಲು ಮಣ್ಣಿನ ಮಡಿಕೆ ಕಟ್ಟಿ ನೀರುಣಿಸಲಾಗುವುದು.*

ತಾವು ಕೂಡಾ ಈ ಕಾರ್ಯಕ್ರಮಕ್ಕೆ ಆಗಮಿಸಿ *ಶ್ರೀ ಸಿದ್ದಗಂಗಾ ಶ್ರೀಗಳ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ 🙏🙏🌳🌳🦜*

*ಸ್ವಾಗತ ಕೋರುವವರು..*

*ಚನ್ನಪ್ಪ ಕೆ ಹೊಸಹಳ್ಳಿ*
*ವನಸಿರಿ ಫೌಂಡೇಶನ್(ರಿ) ರಾಜ್ಯ ಸಾಮಾಜಿಕ ಜಾಲತಾಣದ ಅಧ್ಯಕ್ಷರು ರಾಯಚೂರು*

Address

Tumkur
572105

Alerts

Be the first to know and let us send you an email when ಎ ಎಸ್ ಟಿವಿ ಕನ್ನಡ posts news and promotions. Your email address will not be used for any other purpose, and you can unsubscribe at any time.

Share