Praja pragathi

Praja pragathi Praja Pragathi is one of the best Kannada state daily news paper in karnataka covering national,intern

ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಕ್ಯಾನಲ್ ಯೋಜನೆಯನ್ನು ವೀಕ್ಷಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗುಬ್ಬಿ ತಾಲೂಕು ಸುಂಕಾಪುರ ಬಳಿ ಎಪ್...
12/09/2025

ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಕ್ಯಾನಲ್ ಯೋಜನೆಯನ್ನು ವೀಕ್ಷಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್,
ಗುಬ್ಬಿ ತಾಲೂಕು ಸುಂಕಾಪುರ ಬಳಿ ಎಪ್ಪತ್ತನೇ ಮೈಲಿಯಿಂದ ಬೆಂಗಳೂರು ಗ್ರಾಮಾಂತರಕ್ಕೆ ಪೈಪ್ ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ಈಗಾಗಲೇ ಹಲವು ಹೋರಾಟಗಳು ನೆಡೆದು ಕಾಮಗಾರಿ ಸ್ಥಗಿತವಾಗಿದ್ದ ಕಾರಣ
ಈ ಬಗ್ಗೆ ಕೂಲಂಕುಷವಾಗಿ ಸ್ಥಳ ಪರೀಶೀಲನೆ ಮಾಡಿ ಕೆಲಸ ಪ್ರಾರಂಭಿಸಲು ಇಂದು ಡಿ ಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು,
ತಮಿಳುನಾಡು ರೈತರು ಮತ್ತು ನಾವು ಕಾವೇರಿಗೆ ಹೋರಾಟ ಮಾಡಿದಂತೆ ನಮ್ಮ ನಮ್ಮ ನಡುವೆ ಹೋರಾಟ ಮಾಡಿಕೊಂಡರೆ ಹೇಗೆ ಯಾರಿಗೂ ತೊಂದರೆಯಾಗದಂತೆ ಸ್ಕಾಡ ಅಳವಡಿಸಿ ನೀರು ತೆಗೆದುಕೊಂಡುಹೋಗುತ್ತಿವಿ ಇದನ್ನು ಎಲ್ಲಾ ರೈತರು ವೀಕ್ಷಿಸಬಹುದು ಎಂದರು,
ಹೋರಾಟಗಾರರಜೊತೆ ಹಾಗೂ ನಮ್ಮ ಮಿತ್ರರಾದ ಬಿ ಜೆ ಪಿ ಹಾಗೂ ಜೆ ಡಿ ಎಸ್ ಶಾಸಕರ ಜೊತೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸುತ್ತೇವೆ, ಈಗಾಗಲೇ ಈ ಯೋಜನೆಯ ಪೈಪ್ ಗಳಿಗೆ 300 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸಲಾಗದು ಎಂದರು,
ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾ ರಂಗನಾಥ್ ಮಾತನಾಡಿ ಪ್ರತಿ ವರ್ಷ ನಮಗೆ ಸಿಗಬೇಕಾದ ಪ್ರಮಾಣದಷ್ಟು ನೀರು ಸಿಗುತ್ತಿಲ್ಲ ಆ ಕಾರಣಕ್ಕೆ ಹಿಂದೆ ಕಾಂಗ್ರೆಸ್ ಸರ್ಕಾರ ಈ ಯೋಜನೆ ರೂಪಿಸಿತ್ತು ಆದರೆ ಬಿ ಜೆ ಪಿ ಸರ್ಕಾರ ಬಂದ ಮೇಲೆ ಇದನ್ನು ರದ್ದು ಗೊಳಿಸಿತ್ತು ಈಗ ಯೋಜನೆಯ ಮೊತ್ತ ದುಪ್ಪಟ್ಟಾಗಿದೆ ಎಂದರು,
ಶಾಸಕ ಎಸ್ ಆರ್ ಶ್ರೀನಿವಾಸ್ ಯೋಜನೆಗೆ ವಿರೋಧಿಸಿದ್ದಾರೆ ಎಂಬ ಪ್ರಶ್ನೆಗೆ ಈಗ ನಮ್ಮ ಜೊತೆ ಬಂದಿದ್ದರೆಂದರೆ ಯೋಜನೆಯ ಪರವಾಗಿದ್ದಾರೆ ಎಂಬಂತೆ ಅಲ್ಲವೇ ಎಂದರು,
ಈ ಸಂದರ್ಭದಲ್ಲಿ ಶಾಸಕರಾದ ಟಿ ಬಿ ಜಯಚಂದ್ರ, ಎಸ್ ಆರ್ ಶ್ರೀನಿವಾಸ್,
ಹೇಮಾವತಿ ಎಂ ಡಿ ಫಣೀಂದ್ರ, ನೀರಾವರಿ ಸಲಹೆಗಾರ ಜಯಪ್ರಕಾಶ್, ಜಿಲ್ಲಾ ಪಂಚಾಯ್ತಿ ಸಿ ಇ ಓ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

ಗುಬ್ಬಿ':ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನೆನ್ನೆ ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಬೀದಿ ನಾಯಿಯೊಂದು ದಾಳಿ ಮಾಡಿದ್ದು ಇದರಿಂದ ಇವರ ಮು...
07/09/2025

ಗುಬ್ಬಿ':ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನೆನ್ನೆ ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಬೀದಿ ನಾಯಿಯೊಂದು ದಾಳಿ ಮಾಡಿದ್ದು ಇದರಿಂದ ಇವರ ಮುಖ ಮತ್ತು ಕಣ್ಣಿನ ಬಾಗ ರಕ್ತ ಸಿಕ್ತವಾಗಿತ್ತು, ಇದರಿಂದ ಗುಬ್ಬಿ ಪಟ್ಟಣದ ನಾಗರೀಕರು ಭಯಬೀತಾರಾಗಿದ್ದಾರೆ, ಇತ್ತೀಚೆಗೆ ಗುಬ್ಬಿ ಪಟ್ಟಣದ ವಿವಿಧ ಬಡಾವಣೆಯಲ್ಲಿ
ಹಾಗೂ ಎಂ ಜಿ ರಸ್ತೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಹೆಂಗಸರು ಮಕ್ಕಳು ಹೊರಗೆ ಓಡಾಡಲು ಕಷ್ಟವಾಗಿದೆ ಈ ಬಗ್ಗೆ ಪಟ್ಟಣಪಂಚಾಯ್ತಿಯವರು ಕ್ರಮ ತೆಗೆದುಕೊಳ್ಳಬೇಕಾಗಿದೆ,

05/09/2025

ಗುಬ್ಬಿಯಲ್ಲಿ ನೆಡೆದ ಶಿಕ್ಷಕರ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿ,ಛೀಮಾರಿ ಹಾಕಿದ ಶಾಸಕ ಎಸ್ ಆರ್ ಶ್ರೀನಿವಾಸ್
ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 2 ನೇ ಸ್ಥಾನದಲ್ಲಿದ್ದ ಗುಬ್ಬಿ ತಾಲ್ಲೂಕು ಐದನೇ ಸ್ಥಾನಕೆ ಹೋಗಿದ್ದು ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು,

04/09/2025
04/09/2025

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸತತ 7ನೇ ಬಾರಿಗೆ ಆಯ್ಕೆಯಾದ ಮಧುಗಿರಿ ಶಾಸಕರು ಹಾಗೂ ಜನಪ್ರಿಯ ನಾಯಕರು ಆದ ಕೆ ಎನ್ ರಾಜಣ್ಣ ಅವರು ಆಯ್ಕೆಯಾದ ನಂತರ ಅಭಿಮಾನಿಗಳಿಂದ ಹರ್ಷೋದ್ಗಾರ.

*ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಗಿ  ಕೆ. ಎನ್. ರಾಜಣ್ಣ, ಉಪಾಧ್ಯಕ್ಷ ರಾಗಿ ಜಿ. ಜೆ. ರಾಜಣ್ಣ ಅವಿರೋಧ ಆಯ್ಕೆ*                              ...
04/09/2025

*ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಗಿ ಕೆ. ಎನ್. ರಾಜಣ್ಣ, ಉಪಾಧ್ಯಕ್ಷ ರಾಗಿ ಜಿ. ಜೆ. ರಾಜಣ್ಣ ಅವಿರೋಧ ಆಯ್ಕೆ* ತುಮಕೂರು: ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಗಿ ಮಾಜಿ ಸಚಿವ ಕೆ. ಎನ್. ರಾಜಣ್ಣ ಅವಿರೋಧ ಆಯ್ಕೆ ಯಾದರು. 6ನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿರುವುದು ಕೆಎನ್ ಆರ್ ಅವರ ಹೆಗ್ಗಳಿಕೆಯೆನಿಸಿದೆ. ಉಪಾಧ್ಯಕ್ಷ ರಾಗಿ ಜಿ. ಜೆ. ರಾಜಣ್ಣ ಅವರು ಅವಿರೋಧ ಆಯ್ಕೆ ಯಾಗಿರುವುದಾಗಿ ಚುನಾವಣಾ ಧಿಕಾರಿ ನಾಹಿದಾ ಜಂಜಂ ಪ್ರಕಟಿಸಿದರು. ನೂತನ ಅಧ್ಯಕ್ಷ ಉಪಾಧ್ಯಕ್ಷ ರಿಗೆ ಸಭಾಂಗಣ ದ ಒಳಗಡೆ ನೂತನ ನಿರ್ದೇಶಕ ಮಂಡಳಿಯವರು ಹೂಗುಚ್ಛ ನೀಡಿ ಹಾರ ಹಾಕಿ ಅಭಿನಂದಿಸಿದರೆ, ಬ್ಯಾಂಕ್ ಹೊರಗಡೆ ಬೃಹತ್ ಸಂಖ್ಯೆಯ ಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ ಸಿಹಿಹಂಚಿ ಜೈ ಕೆಎನ್ಆರ್, ಸಹಕಾರ ಸಾರ್ವಭೌಮ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು.

ಪತ್ರಿಕೋದ್ಯಮ ಸುಧೀರ್ಘ ಸೇವೆಗಾಗಿ ತುಮಕೂರು ವಿಶ್ವವಿದ್ಯಾನಿಲಯ ಕೊಡ ಮಾಡುವ ಗೌರವ ಡಾಕ್ಟರೇಟ್ ಹಿರಿಮೆಗೆ ಪಾತ್ರರಾಗಿರುವ ಪ್ರಜಾಪ್ರಗತಿ ಪತ್ರಿಕೆಯ...
01/09/2025

ಪತ್ರಿಕೋದ್ಯಮ ಸುಧೀರ್ಘ ಸೇವೆಗಾಗಿ ತುಮಕೂರು ವಿಶ್ವವಿದ್ಯಾನಿಲಯ ಕೊಡ ಮಾಡುವ ಗೌರವ ಡಾಕ್ಟರೇಟ್ ಹಿರಿಮೆಗೆ ಪಾತ್ರರಾಗಿರುವ ಪ್ರಜಾಪ್ರಗತಿ ಪತ್ರಿಕೆಯ ಸಂಪಾದಕರಾದ ಡಾ.ಎಸ್.ನಾಗಣ್ಣ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು .
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ , ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಚ್.ಬಿ.ಮದನಗೌಡ , ಇದೇ ಸಂದರ್ಭದಲ್ಲಿ ಸಂಶೋದಾನ್ಮಕ ಮತ್ತು ವೈಜ್ಞಾನಿಕ ವರದಿಗಳಿಗಾಗಿ ಕೆಯುಡಬ್ಲೂಜೆಯಲ್ಲಿ ದತ್ತಿನಿಧಿ ಪ್ರಶಸ್ತಿ ಸ್ಥಾಪನೆ ಮಾಡಿರುವ ಗಿರೀಶ್ ಲಿಂಗಣ್ಣ ಹಾಜರಿದ್ದರು.

ಗುಬ್ಬಿ :ಪಟ್ಟಣದ ವ್ಯಾಪ್ತಿ ಯಲ್ಲಿ ನೆನೆ ಗುದಿಗೆ ಬಿದಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಾಗೂ  ಹಲವು ಕಾಮಗಾರಿಗಳನ್ನು ಅಭಿವೃದ್ಧಿ ಮಾಡುವುದಕ್...
29/08/2025

ಗುಬ್ಬಿ :ಪಟ್ಟಣದ ವ್ಯಾಪ್ತಿ ಯಲ್ಲಿ ನೆನೆ ಗುದಿಗೆ ಬಿದಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಾಗೂ
ಹಲವು ಕಾಮಗಾರಿಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಸಚಿವರಾದ ವಿ ಸೋಮಣ್ಣ ಅವರು ಮುಂದಾಗಿರುವುದು ಅತ್ಯಂತ ಸಂತೋಷದ ವಿಷಯ ಎಂದು
ಜೆಡಿಎಸ್ ಮುಖಂಡ ಜಿ.ಎನ್ ಬೆಟ್ಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಎಂ ಎಚ್ ಪಟ್ಟಣ ಬಳಿ ಇರುವ
ಜಿ ಎನ್ ಬಿ ರೆಸ್ಟೋರೆಂಟ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು ನಾಳೆ ಬೆಳಗ್ಗೆ 10 ಗಂಟೆಗೆ ಗುಬ್ಬಿ ಪಟ್ಟಣದ ರೈಲ್ವೆ ಮೇಲ್ ಸೇತುವೆ ಹಾಗೂ ರಾಷ್ಟ್ರೀಯ ಹೆದ್ದಾರಿ ವೈಟ್ ಟಾಪಿಂಗ್ ಕಾಮಗಾರಿಗೆ ಸೇರಿದಂತೆ ಅರವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ವಿ ಸೋಮಣ್ಣ ಅವರು ಭೂಮಿ ಪೂಜೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ನಾಗರಿಕರು, ಸಾರ್ವಜನಿಕ ಬಂಧುಗಳು, ಆಗಮಿಸಬೇಕು ಎಂದು ಮನವಿ ಮಾಡಿದರು ಗುಬ್ಬಿಯ ಚೆನ್ನಬಸವೇಶ್ವರ ಸ್ವಾಮಿ ದೇವಾಲಯದ ದ್ವಾರಬಾಗಿಲ ಮುಂಭಾಗ ಹಾಗೂ ರೈಲ್ವೆ ನಿಲ್ದಾಣದ ಬಳಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು
ಈ ಹಿಂದೆ ರೈಲ್ವೆ ಮೆಲ್ಸುತುವೆ ಆಗಬೇಕೆಂದು
ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಲ್ಲಿ ಮಾಜಿ ಸಂಸದ ಜಿ ಎಸ್ ಬಸವರಾಜು ಹಲವು ಪ್ರಯತ್ನ ಮಾಡಿದ್ದರು ಅದು ಈಗ ಕೈಗೂಡಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು
ಈ ಕಾರ್ಯಕ್ರಮ ಕ್ಕೆ ಗುಬ್ಬಿ ಪಟ್ಟಣದ ನಾಗರೀಕರು
ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು. ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವ ವಿ ಸೋಮಣ್ಣನವರಿಗೆ
ಈ ಸಂದರ್ಭದಲ್ಲಿ ಎಲ್ಲಾ ಸಂಘ ಸಂಸ್ಥೆಯ ವತಿಯಿಂದಲೂ ಕೂಡ ನಾಗರಿಕ ಸನ್ಮಾನ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೊಕೇಶ್ ಮಾತನಾಡಿ ಕೇಂದ್ರ ಸರ್ಕಾರದ ವತಿಯಿಂದ ಇಷ್ಟೊಂದು ದೊಡ್ಡ ಮಟ್ಟದ ಕಾಮಗಾರಿಗಳನ್ನ ಮಾಡುತ್ತಿರುವಂತಹ ವಿ ಸೋಮಣ್ಣನವರು ನಮಗೆ ಸಿಕ್ಕಿರುವುದು ಪುಣ್ಯ ಸೋಮಣ್ಣನವರಿಗೆ ಕೆಲಸ ಮಾಡುವ ಇಚ್ಛೆ ಇರುವುದರಿಂದ ನಾವೆಲ್ಲರೂ ಸಹ ಅವರ ಜೊತೆಯಲ್ಲಿ ನಿಲ್ಲಬೇಕಾಗಿದೆ ಗುಬ್ಬಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಕಾಮಗಾರಿ ರೈಲ್ವೆ ನಿಲ್ದಾಣ ಆಧುನಿಕರಣ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ ಹಾಗಾಗಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಹೊನ್ನಗಿರಿ ಗೌಡ ಮಾತನಾಡಿ ತುಮಕೂರು ಜಿಲ್ಲೆಗೆ ಸಂಸದರಾಗಿ ಬಂದ ವರ್ಷದಲ್ಲಿಯೇ ಕೋಟ್ಯಾಂತರ ರೂಪಾಯಿ ಕಾಮಗಾರಿ ಮಾಡುವ ಮೂಲಕ ಉತ್ತಮ ಸಂಸದರಾಗಿ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ್, ಸುರೇಶ ಗೌಡ ಸಹ ಮಾತನಾಡಿ ಆಗಸ್ಟ್ 30 ರಂದು ಕೇಂದ್ರ ಸಚಿವರು ಬರುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಸಾರ್ವಜನಿಕರು ಆಗಮಿಸಬೇಕು ಎಂದು ಮನವಿಯನ್ನ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಯತೀಶ್, ಪಟ್ಟಣ
ಜಿಲ್ಲಾ ಸಹಕಾರಿ ಯೂನಿಯನ್ ನೂತನ ಸದಸ್ಯ ಜಿ ಡಿ ಸುರೇಶ್ ಗೌಡ
ಪಂಚಾಯ್ತಿ ಸದಸ್ಯ ಜಿ ಆರ್ ಶಿವಕುಮಾರ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಗನ್ನಾಥ್, ಮುಖಂಡರಾದ ಕೆ ಬಿ ಕೃಷ್ಣಪ್ಪ , ಅರ್ಜುನ್,ಪಾಪಣ್ಣ, ಹೇಮಂತ್ ರುದ್ರೇಶ್ ಸೇರಿದಂತೆ
ಲಯನ್ಸ್ ಸಂಸ್ಥೆಯ ರಮೇಶ್ ಬಾಬು
, ನಿವೃತ್ತ ಸೈನಿಕರ ಸಂಘದ, ನಿವೃತ್ತ ಸರ್ಕಾರಿ ನೌಕರರ ಸಂಘದ ಆರ್ ಬಿ ಜಯಣ್ಣ, ವೀರಶೈವ ಸಮಾಜದ ಅಧ್ಯಕ್ಷ ಆರ್ ಕಾಂತರಾಜು ಮಂಜುನಾಥ್ ರಾವ್
ಸೇರಿದಂತೆ ಎನ್ ಡಿ ಎ ಮುಖಂಡರುಗಳು ಹಾಜರಿದ್ದರು

ಶೇಷನಹಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿ ಶ್ರೀ ಗಜಾನನ ಗೆಳೆಯರ ಬಳಗದಿಂದ ವಿನಾಯಕನ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು ಈ ಸಂಧರ್ಭದಲ್ಲಿ ಸತೀಶ...
27/08/2025

ಶೇಷನಹಳ್ಳಿ ಗ್ರಾಮದಲ್ಲಿ ಬಹಳ ಅದ್ದೂರಿ ಶ್ರೀ ಗಜಾನನ ಗೆಳೆಯರ ಬಳಗದಿಂದ ವಿನಾಯಕನ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು ಈ ಸಂಧರ್ಭದಲ್ಲಿ ಸತೀಶ್ ಮೂರ್ತಿವರ್ಧನ್ ಮಂಜುನಾಥ್ ಶಿವು ನವೀನ್ ರಾಜ್ ಹರೀಶ್ ಯೋಗಿ ಹೇಮಂತ್ ಇನ್ನೂ ಮುಂತಾದವರು ಇದ್ದರು

27/08/2025

ಗುಬ್ಬಿ: ಗುಬ್ಬಿಯಲ್ಲಿ ವಿಶೇಷ ಗಣಪನ ತಯಾರಿಸಿದ ಕುಶಲ್
ಗುಬ್ಬಿ ತಾಲೂಕು ಚೇಳೂರು ಹೋಬಳಿ ಬಿದರೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಗಣಪನನ್ನು ತಯಾರುಮಾಡುವ ಕಾಯಕವನ್ನು ಮಾಡುತ್ತಿರುವ ಕುಶಲ್ ಮತ್ತು ಕುಟುಂಬ ಪರಿಸರ ಸ್ನೇಹಿ ಗಣಪತಿಯನ್ನು ತಯಾರು ಮಾಡಿ ಸಮಾಜಕ್ಕೆ ಮಾದರಿಯಾಗಿದೆ, ಗೆಣಸು ಹಳೆಯ ರೊಟ್ಟುಗಳು ಹಾಗೂ ಮಣ್ಣಿನಿಂದ ಈ ಮೂರ್ತಿಗಳನ್ನು ತಯಾರು ಮಾಡಿದ್ದು ಸರ್ಕಾರ ಮಾಡಿರುವ ನಿಬಂಧನೆಗಳಿಗೆ ಒಳಪಟ್ಟಿದೆ ಹಾಗೂ ಹಗುರವಾಗಿದೆ ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಿಯಲಾಗಿದೆ, ಆದರೂ ಈ ವರ್ಷ ಗಣೇಶ ಮೂರ್ತಿಗಳ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿನ ತಯಾರಕರು,

Address

Bengaluru/Honnavar Road
Tumkur
572102

Alerts

Be the first to know and let us send you an email when Praja pragathi posts news and promotions. Your email address will not be used for any other purpose, and you can unsubscribe at any time.

Contact The Business

Send a message to Praja pragathi:

Share

praja pragathi

prajapragathi is one of the best local news paper covering the districts tumkur,chitradurga,ballari,davangere,haveri,bangalore local newses and also state,national,international,sports news