A1 media bidar

  • Home
  • A1 media bidar

A1 media bidar Akshaa welfare society (r) bidar

28/04/2023

*ಬೀದರ ಉತ್ತರ: ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿಯವರಿಗೆ ಬೆಂಬಲಿಸಿ ಸುದ್ದಿಗೋಷ್ಠಿ,*

ಮಾಚ್೯. 1೦ ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷವಾದ ಬಿ.ಜೆ.ಪಿ. ಯನ್ನು ಅಧಿಕಾರಿದಿಂದ ದೂರ ಇಡಲು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರನ್ನು ಬೆಂಬಲಿಸಿ ಬೀದರ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಸುದ್ದಿಗೋಷ್ಠಿ ಮೂಲಕ ಮಾಧ್ಯಮ ಮಿತ್ರರಿಗೆ ತಿಳಿಸುತ್ತಿದ್ದೇವೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿ.ಜೆ.ಪಿಯ ಡಬಲ್ ಇಂಜನ್ ಸರ್ಕಾರ ಇದೆ ರಾಜ್ಯದಲ್ಲಿ ಯಾವುದೇ ಹೇಳಿಕೊಳ್ಳದ ಪ್ರಗತಿಯಾಗಿರುವುದಿಲ್ಲ. ಪ್ರತಿದಿನ ಬೆಲೆ ಏರಿಕೆ, ಒಂದು ಧರ್ಮ ಒ೦ದು ಜಾತಿಯ ನಡುವೆ ವಿಷಬೀಜ ಬಿತ್ತುವುದೇ ಆಗಿತ್ತು. ಮೀಸಲಾತಿ ಹೆಚ್ಚಳ ಚುನಾವಣೆ ನೆಪಕ್ಕೆ ಮಾತ್ರ ಗೆದ್ದ ನಂತರ ಜಾರಿಯಾಗುವುದಿಲ್ಲ, ಈ ನಿಟ್ಟಿನಲ್ಲಿ ಬಿ.ಜೆ.ಪಿ. ಸರ್ಕಾರವನ್ನು ರಾಜ್ಯದಲ್ಲಿ ಮತ್ತೊಮ್ಮೆ ಬರಬಾರದು, ಬೀದರ ಉತ್ತರ ಕ್ಷೇತ್ರದ 3 ಅವದಿಗೆ ಶಾಸಕರಾಗಿ ಶ್ರೀ ರಹೀಮ್ ಖಾನ್ ರವರು ದಲಿತರನ್ನು ಓಟ ಬ್ಯಾಂಕ ಆಗಿ ಮಾಡಿಕೊಂಡಿದ್ದಾರೆ. ದಲಿತ ಗ್ರಾಮಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲದೇ ಬೀದರ ನಗರದಲ್ಲಿ ದಲಿತರು ವಾಸವಾಗಿರುವ ಕಾಲೋನಿಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ. ಸೌಕರ್ಯಗಳು ಇರುವುದಿಲ್ಲ ಅಲ್ಲದೆ ಡಾ ಬಿ.ಆರ್, ಅಂಬೇಡ್ಕರ ಭವನಗಳು ಮಂಜೂರು ಮಾಡಿಸಲು ಶಾಸಕರು ಹಿಂದೇಟು ಹಾಕಿದ್ದಾರೆ. ಅಲ್ಲದೇ ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಸಿಗಬೇಕಾಗಿರುವ ಪ್ರತಿ ಕುಟುಂಬಕ್ಕೆ 02 ಎಕರೆ ಜಮೀನು ಕೊಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. 2400 ಮನೆಗಳು ಮಂಜೂರಾಗಿದ್ದರೂ, ಫಲಾನುಭವಿಗಳಿಗೆ ಕೊಡದ ಅದರಲ್ಲಿ 1200 ಮನೆಗಳು ವಾಪಸ್ಸು ಸರ್ಕಾರಕ್ಕೆ ಕಳಿಸಿರುತ್ತಾರೆ. ಅಲ್ಲದೇ ಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋ ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಶಾಸಕರು ಯಾವುದೇ ಯೋಜನೆಗಳನ್ನು ತಂದಿರುವುದಿಲ್ಲ. ಅಲ್ಲದೆ, ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೀದರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ಹಿಂದೆಟು ಹಾಕಿದ್ದಾರೆ.
ಯಾವುದೇ ಅಧಿಕಾರವಿಲ್ಲದೇ ಬೀದರ ಜಿಲ್ಲೆಯಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ಸಹಕಾರ ಕ್ಷೇತ್ರದಲ್ಲಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕಾಗಿ ಮತ್ತು ಜಿಲ್ಲೆಯ ನಗರದ ಎಲ್ಲಾ ಧಾರ್ಮಿಕ ದೇವಾಲಯಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಬೀದರ ನಗರದಲ್ಲಿ 02 ಎಕರೆ ಜಾಗದಲ್ಲಿ ಭವ್ಯವಾದ ಅಂಬೇಡ್ಕರ ಭವನ ನಿರ್ಮಾಣ ಮಾಡುವುದು, ಬೀದರ ಉತ್ತರ ಕ್ಷೇತ್ರ ಗುಡಿಸಲು ಮುಕ್ತವಾಗಿ, ಎಲ್ಲರಿಗೆ ವಸತಿ ಒದಗಿಸಿಕೊಡುವುದು, ವಿದ್ಯಾವಂತ ನಿರುದ್ಯೋಗಿಗಳಿಗೆ ವಿವಿಧ ಯೋಜನೆಗಳ ಮೂಲಕ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಅನುಕೂಲ ಮಾಡಿಕೊಡುವುದು, ದಲಿತ ಓಣಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುರತಾದ ಬೇಡಿಕೆಗಳನ್ನು ಇಟ್ಟು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್‌, ಅಭ್ಯರ್ಥಿಯಾದ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರನ್ನು ಬೆಂಬಲಿಸುತ್ತಿದ್ದೇವೆ

ಕಲ್ಯಾಣರಾವ ಭೊಸ್ಲೆ ( ಜಿಲ್ಲಾ ಸಂಚಾಲಕರು ಕ.ದ.ಸಂ.ಸ.( ಭಿಮವಾದ)

ಚಂದ್ರಕಾಂತ ನಿರಾಟೆ
ರಾಜ್ಯ ಉಪಾಧ್ಯಕ್ಷರು
ದಲಿತ ಸೇನೆ ಬೀದರ
ಮಾರುತಿ ಭೌದ್ದೆ ರಾಜ್ಯ ಸಂಘಟನಾ ಸಂಚಾಲಕರು ಕ.ರಾ.ದ.ಸಂ. ಸ.ಬೀದರ.
ಉಮೆಶ ಸ್ವಾರಳಿಕರ ಜಿಲ್ಲಾ ಸಂಚಾಲಕರು ಬೀದರ.
ಶಾಲಿವಾನ್ ಬಡಿಗೆರ್.ಬಾಬುರಾವ ಮಿಠಾರೆ.ಅಂಬರಿಷ್ ಕುದರೆ ಸೆರಿದ್ದರು.

27/04/2023

ಬೀದರ ದಕ್ಷಿಣ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾದ ಸನ್ಮಾನ್ಯ ಅಶೋಕ ಖೇಣಿ ರವರು ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸಿದರು.

ಈ ಸಂಧರ್ಬದಲ್ಲಿ ಮಾತನಾಡಿದ ಅವರು ನನಗೆ ನನ್ನ ಕ್ಷೇತ್ರದ ಜನರು ಬಹಳ ವಿಶ್ವಾಸ ನಂಬಿಕೆ ನೀಡುತ್ತಾ ಇದ್ದಾರೆ ಸೋಲಿಗೆ ಚಾನ್ಸ್ ಇಲ್ಲಾ ಎಂದು ಮುಗ್ಲನಗೆಯಿಂದ ಮಾತನಾಡಿ ನಮ್ಮ ಸರಕಾರ ಬಂದಮೇಲೆ ವಿವಿಧ ಸವಲತ್ತುಗಳನ್ನು ಈಗಾಗಲೇ ಘೋಷಣೆ ಮಾಡಲಾಗಿದೆ ನಮ್ಮ ಕ್ಷೇತ್ರದ ಜನರಿಗೆ ಎಲ್ಲಾ ತರಹದ ಸವಲತುಗಳು ನಾನು ಮುಂದಿನ ದಿನದಲ್ಲಿ ಮಾಡಿ ಕುಡುತ್ತೇನೆ ಎಂದು ತಿಳಿಸಿದರು ಬಸ್ವರಾಜ್ ಬುಳ್ಳ ಅವರು ಮಾತನಾಡಿ ನಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಶೋಖೇಣಿಯವರಿಗೆ ಬಹುಮತದಿಂದ ಗೆಲುವು ಖಚಿತ ಇದೆ ಎಂದು ನುಡಿದರು ಇದೆ ಸಂಧರ್ಬದಲ್ಲಿ ಮೀನಾಕ್ಷಿ ಸಂಗ್ರಾಮ್ ಕೆಪಿಸಿಸಿ ಪ್ರಧಾನ್ ಕಾರ್ಯದರ್ಶಿ ಹಾಗೂ ದಕ್ಷಿಣ ಕ್ಷೇತ್ರದ ಉಸ್ತುವಾರಿ ಮಾತನಾಡಿ ನಾವು ಹೋಗಿದ ಕಡೆ ಜನರು ನಮ್ಮನ್ನು ಬಹಳ ಸ್ಪಂದಸುತ್ತ ಮುಂಬರುವಂತಹ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿ ಕೆಲಸ ಮಾಡುತ್ತಾ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತರುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು, ಎಂ ಡಿ ತನ್ವೀರ್ ಖಾನ್, ಶಾಮ್ ಬೋoಬುಳಗಿ, ಬಸ್ವರಾಜ ಭತರ್ಮಾಗೆ, ಪ್ರಭು ಸವಲ್ಗಿ, ಶಿವುಕುಮಾರ ಜುನ್ನು, ರಾಜು ಸ್ವಾಮಿ, ಉಪಸ್ಥಿತರಿದ್ದರು.

23/04/2023

ಎಂ ಡಿ ತನ್ವೀರ್ ಖಾನ್ ಅವರು ಸಮಾಜ ಸೇವಕರು ತಮ್ಮ ಸ್ವಗ್ರಹದಲ್ಲಿ ಪವಿತ್ರ ರಂಜಾನ್ ಹಬ್ಬದ ನಿಮಿತ ಔತಣ ಕೂಟವನ್ನು ಏರ್ಪಡಿಸಿದರು, ಇದರಲ್ಲಿ ಹಿಂದೂ ಮತ್ತು ಮುಸ್ಲಿಂ ಜನರು ಸೇರಿದರು, ಬೀದರ್ ಯಾವತ್ತು ಹಿಂದೂ ಮುಸ್ಲಿಂ ಅಣ್ಣತಮ್ಮರ ಬಾಂಧವ್ಯವನ್ನು ಬೆಳೆಸುತ್ತಾ ಬಂದಿದೆ ಅದಕ್ಕಾಗಿ ಬೀದರ್ ಜಿಲ್ಲೆಯು ಯಾವತ್ತು ಜಾತಿ ಧರ್ಮ ಮಾಡಲ್ಲ ಎಂದು ಸಮಾಜ ಸೇವಕರಾದ ಎಂ ಡಿ ತನ್ವೀರ್ ಖಾನ್ ಅವರು ಎತ್ತಿ ತೋರಿಸಿದರು ಹಾಗೂ ನಮ್ಮ ಮಾಧ್ಯಮದೊಂದಿಗೆ ಬಂದಂತಹ ಅತಿಥಿಗಳ ಜೊತೆ ಹಂಚಿಕೊಂಡರು.

21/04/2023

ಎಮ್.ಡಿ.ತನವಿರ ಖಾನ್ ಸಮಾಜ ಸೆವಕರು ಬೀದರ ಜನತೆಗೆ ರಂಜಾನ್ ಹಾಗೂ ಬಸವ ಜಯಂತ್ತ್ಸೊವ ಶುಭಾಶಯ ಕೊರಿದ್ದರು.

17/04/2023

ಔರಾದ(ಬಾ) ಮೀಸಲು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಪ್ರಭು ಚವ್ಹಾಣ ಅವರು ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಹಸೀಲ್ ಕಛೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ನಾಂದೇಡ್ ಜಿಲ್ಲೆಯ ಸಂಸದರಾದ ಪ್ರತಾಪ ಪಾಟೀಲ ಚಿಕ್ಲೆಕರ್, ಉದಗೀರ ಮಾಜಿ ಶಾಸಕರಾದ ಗೋವಿಂದ ಕೇಂದ್ರೆ, ಮುಖಂಡರಾದ ವಸಂತ ಬಿರಾದಾರ, ರೌಫುದ್ದೀನ್ ಕಛೇರಿವಾಲೆ, ಅಮರನಾಥ ಪಾಟೀಲ, ಶಿವರಾಜ ಗಂದಗೆ, ವೀರಣ್ಣಾ ಕಾರಬಾರಿ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ ಗಾದಗಿ, ಕೀರಣ ಪಾಟೀಲ, ಸುರೇಶ ಭೋಸ್ಲೆ, ಶರಣಪ್ಪಾ ಪಂಚಾಕ್ಷರಿ, ರಂಗರಾವ ಜಾಧವ, ಸಂತೋಷ ಪೋಕಲವಾರ, ಶಿವರಾಜ ಅಲ್ಮಾಜೆ, ಸಚಿನ್ ರಾಠೋಡ್, ದೊಂಡಿಬಾ ನರೋಟೆ, ಕೇರಬಾ ಪವಾರ, ಡಾ.ಕಲ್ಲಪ್ಪಾ ಉಪ್ಪೆ, ಡಾ.ವೈಜಿನಾಥ ಬುಟ್ಟೆ, ಪ್ರತೀಕ್ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ,‌ ಶೇಷರಾವ ಕೋಳಿ, ರಮೇಶ ಉಪಾಸೆ, ರಾಹುಲ ಕೇಂದ್ರೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

16/04/2023

ಬೀದರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ಹೆಚ್ಚಿನ ಕಾರ್ಯಕ್ರಮ ಆಯೋಜನೆ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ:ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಇದರ ಫಲವಾಗಿ 18 ವರ್ಷ ತುಂಬಿದ ಸಾಕಷ್ಟು ಜನ ಮತದಾರರ ಪಟ್ಟಿಯಲ್ಲಿ ತಮ್ಮ ಹೇಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶನಿವಾರ ನಗರದ ಬಿಗ್ ಬಜಾರ ಹತ್ತಿರ ಮಕ್ಕಳ ಮೇಳದಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಹಾಗೂ ಮಾಹಿತಿ ಶಿಕ್ಷಣ ಮತ್ತು ಸಂವಹ ಇಲಾಖೆ ವತಿಯಿಂದ ಆಯೋಜಿಸಿ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಜಾಗೃತಿಯ ಉದ್ದೇಶ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 72 ಪ್ರತಿಶತ ಮತದಾನವಾದರೆ ಜಿಲ್ಲೆಯಲ್ಲಿ ಶೇ 69 ರಷ್ಟು ಮತದಾನವಾಗಿದೆ. ಆದರಿಂದ ಈ ಬಾರಿ ಮತದಾನ ಪ್ರಕ್ರೀಯೆಯಲ್ಲಿ ಎಲ್ಲರೂ ಪಾಲ್ಗೋಳ್ಳಬೇಕು ಹಾಗೂ ಎಲ್ಲರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಆಕರ್ಷಸಬೇಕು ಎಂಬ ಉದ್ದೇಶದಿಂದ ಸ್ವೀಪ್ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಸ್ವೀಪ್ ಸಮಿತಿಯು ಈಗಾಗಲೇ ಕಡಿಮೆ ಮತದಾನ ಆಗಿರುವ ಮತಗಟ್ಟೆಗೆ ಭೇಟಿ ನೀಡಿ ಮತದಾನದ ಬಗ್ಗೆ ಜಾಗೃತಿ ಅಭಿಯಾನ, ಭೂತ್ ಅವೇರೆನ್ಸ್ ಕ್ಯಾಂಪ್, ಕಾಲೇಜು ಮಟ್ಟದಲ್ಲಿ ಲಿಟೇರೆಸ್ಸಿ ಕ್ಲಬ್, ತರಗತಿಗೆ ಒಬ್ಬರಂತೆ ಅಂಬಾಸೇಟರ್‌ಗಳ ನೇಮಕ ಸೇರಿದಂತ ನಾನಾ ರೀತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದವರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ಮತದಾನ ದಿನದಂದು ಅಂಗವಿಕಲರಿಗೆ ಹಾಗೂ 80 ವರ್ಷ ದಾಟಿದವರಿಗೆ ಆಟೋ ವ್ಯವಸ್ಥೆ ಮಾಡಲಾಗಿದೆ.ಮತಗಟ್ಟೆ ಕೇಂದ್ರದಲ್ಲ ಮ್ಯಾಗ್ನಿಫಾಯಿಂಗ್ ಗ್ಲಾಸ್ ಅಳವಡಿಸಲಾಗಿದೆ. ಬಿಸಿಲು ಇರುವದರಿಂದ ಶಾಮಿಯಾನ ಹಾಕಲಾಗುವುದು ಎಂದರು.

ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ .ಎಂ ಮಾತನಾಡಿ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸಿಕೊಳ್ಳಲು ಸಂವಿಧಾನ ನಮ್ಮೇಲ್ಲರಿಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿದೆ ಇದರ ಸದುಪಯೋಗ ನಮ್ಮಿದಾಗಬೇಕು ಅಂದಾಗ ಮಾತ್ರ ನಮಗೆ ಈ ಅಧಿಕಾರ ದೊರಕಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.

ನಾವು ಜಿಲ್ಲೆಯಲ್ಲಿ ಮತದಾನದ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆವೆ ಆದರು ಎಲ್ಲಕಿಂತ ಮುಖ್ಯವಾಗಿ ಸಾರ್ವಜನಿಕರು ತಾವಾಗಿಯೇ ಜಾಗೃತರಾಗಬೇಕು ಅಂದಾಗ ಮಾತ್ರ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದ ಅವರು ಯಾರಿಗೆ ಮತಗಟ್ಟೆಗೆ ಬರಲು ಆಗುವದಿಲ್ಲವೋ ಅವರಿಗಾಗಿ ಪೊಸ್ಟಲ್ ಬ್ಯಾಲೆಟ್ ಅವಕಾಶ ಸಹ ಚುನಾವಣಾ ಆಯೋಗ ಕಲ್ಪಿಸಿದೆ ಇದರ ಸದುಪಯೋಗ ಪಡೆಯಬೇಕು ಮತ್ತು ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ. ಎಲ್ಲರೂ ಮೇ 10 ರಂದು ಕಡ್ಡಾಯ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಜಾತ್ರೆಯಲ್ಲಿ ಪಾಲ್ಗೊಳ್ಳೊಣ ಹಾಗೂ ಇತರರನ್ನು ಪಾಲ್ಗೊಳ್ಳುವಂತೆ ಪ್ರೇರೆಪಿಸೊಣ್ಣ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಕೆಲವು ಮತಗಟ್ಟೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ ಈ ಬಾರಿ ಸ್ವೀಪ್ ಸಮಿತಿ ವತಿಯಿಂದ ಸಾಕಷ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಇದರ ಫಲ ನಮಗೆ ದೊರೆಯಲಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಮತದಾರರ ಪ್ರಮಾಣ ಹೆಚ್ಚುತ್ತಿದೆ ಹಾಗೂ ಸಾಕಷ್ಟು ಜನ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ ಇದೆ ಉಮ್ಮಸಿನಿಂದ ಮೇ 10 ಮತದಾನ ದಿನದಂದು ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡಬೇಕು ಎಂದು ಹೇಳಿದರು.
ಈ ಬಾರಿ ನೀವು ಮತದಾನ ಮಾಡಲು ಹಿಂಜರಿದರೆ ಮುಂದೆ ಐದು ವರ್ಷದ ವರೆಗೆ ನಿಮ್ಮನ್ನು ಆಳುವವರಿಗೆ ನೀವು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಿರಿ ಆದರಿಂದ ಇಂತಹ ಸುವರ್ಣ ಅವಕಾಶವನ್ನು ಬಳಸಿಕೊಂಡು ಉತ್ತಮ ವ್ಯಕ್ತಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನು ಗಟ್ಟಿಗೊಳಿಸಬೇಕು ಎಂದರು.
ರಾಜ್ಯ ಮಟ್ಟದ ಚುನಾವಣಾ ಮಾಸ್ಟರ ಟ್ರೇನರ್ ಡಾ. ಗೌತಮ ಅರಳಿ ಮಾತನಾಡಿ. ಕೆಲಸದ ನಿಮಿತ್ಯ ಇತರೆ ರಾಜ್ಯಗಳಿಗೆ ತೆರಳಿದವರಿಗೆ ಸಂಬAದಿಕರು ಸ್ನೇಹಿತರು ಮಾಹಿತಿ ನೀಡಬೇಕು. ಹಾಗೂ ತಮ್ಮ ಮನೆಯಲ್ಲಿರುವ ಕುಟುಂಬ ಸದಸ್ಯರು ಕಡ್ಡಾಯವಾಗಿ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಲ್ಲದಕಿಂತ ಹೆಚ್ಚಾಗಿ ಹಣ ಹಾಗೂ ಇತರೆ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಮೇ 10 ರಂದು ಕಡ್ಡಾಯವಾಗಿ ನಾನು ಮತದಾನ ಮಾಡುವೆ ಎಂದು ಸಹಿ ಮಾಡುವ ಮೂಲಕ ಎಲ್ಲರೂ ಶಪಥ ಮಾಡಿದ್ದರು. ಮೇಳದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ನೇರೆಗಾ ತಾಲೂಕು ಪಂಚಾಯತ ಸಿಬ್ಬಂದಿಗಳಾದ ಸುನಿತಾ ರೆಡ್ಡಿ, ರಮೇಶ ಚಟ್ನಳ್ಳಿ, ಸಂಜೀವ, ಸತ್ಯಜೀತ, ಎನ್.ಸಿ.ಸಿ ಕೆಡೇಟ್‌ಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

13/04/2023

ಇಂದು ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ನಾಮ ಪತ್ರ ಸಲ್ಲಿಸಿದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ ಯಾದ ಶೆಶಿಕಾಂತ ಪೊಲೀಸ್ ಪಾಟೀಲ್
ಬೀದರ ನಗರದ ಭವಾನಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂಬೇಡ್ಕರ್ ಮೂರ್ತಿಗೆ ಮಾಲಾ ಅರ್ಪಣೆ ಮಾಡಿದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ ಯಾದ ಶೆಶಿಕಾಂತ ಪಾಟೀಲ್ ಅವರು ಎತ್ತಿನ ಭಂಡಿ ಭವ್ಯವಾದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ನಾಮ ಪತ್ರವನ್ನು ಸಲ್ಲಿಸಿದರು

12/04/2023

ಬೇಸಿಗೆಯ ಸಂಗೀತ ಶಿಬಿರ ಇದೇ ತಿಂಗಳು 15ನೇ ತಾರೀಖಿನಿಂದ ಶುರುವಾಗಲಿರುವ ಬೇಸಿಗೆಯ ಸಂಗೀತ ಶಿಬಿರವನ್ನು ಎಲ್ಲರೂ ಪಾಲ್ಗೊಳ್ಳುವಂತೆ ಸೇಂಟ್ ಪೌಲ್ ಚರ್ಚ್ ಶಹಗಂಜ್ ಬೀದರ್ ಅವರಣದಲ್ಲಿ ಈ ಒಂದು ಸಂಗೀತ ಶಿಬಿರವನ್ನು ಏರ್ಪಡಿಸಲಾಗುತ್ತಿದೆ ಆಸಕ್ತಿಯೋಳ್ಳವರು ಬಂದು ಕೋರ್ಸ್ ಕಲಿಯಬಹುದು, ಅವರವರ ಇನ್ಸ್ಟ್ರುಮೆಂಟ್ ಒಂದಿಗೆ ಕಲಿಯಬಹುದು ಒಂದು ತಿಂಗಳಾದ ನಂತರ ಮೇ 15ತಾರೀಖು ಅವರಿಗೆ ಮತ್ತೆ ಸರ್ಟಿಫಿಕೇಟ್ ಕೊಟ್ಟು ಸನ್ಮಾನ ಮಾಡಿ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಾನ್ ವೆಸ್ಲಿ ಕ್ರೈಸ್ತ ಸಮಾಜದ ನಾಯಕರು
ಆಯೋಜಕರು ಹಾಗೂ ನಿರ್ದೇಶಕರು ಇಮಾನುವೇಲ್ ಲೇವಿ
ಸಂಗೀತ ಗುರುಗಳು ಜೋಶವ ಕಿಂಗ್ ಮತ್ತು
ಮೇಲ್ವಿನ್ ಜಾಬ್ಸ್
ಮ್ಯಾನೇಜ್ಮೆಂಟ್ ಭಾರತ್ ಮತ್ತು ಅವೆಂಜಲಿನ್
ಜೊತೆಗಾರರಾಗಿ ಇರುವವರು ರಂಜಿತ ದಾದಾನೂರ್ ಮತ್ತು ಹನ್ನಾಳು ಉಪಸ್ಥಿತರಿದ್ದರು.

07/04/2023

ಇಂದು ಪವಿತ್ರ ಶುಕ್ರವಾರವನ್ನು ಸಾರ್ವಜನಿಕರ ಸಮ್ಮುಖದಲ್ಲಿ ಮೂರು ದೇವಾಲಯಗಳು ಸ್ವಂತ ಜೋಸೆಫರ ದೇವಾಲಯ ಶೇಕ್ರೆಡ್ ಹಾಟ್ ಚರ್ಚ್ ಹಾಗೂ ಡಾನ್ ಬೋಸ್ಕೋ ದೇವಾಲಯದ ಗುರುಗಳು ಕನ್ಯಾ ಸ್ತ್ರೀಯರು ಹಾಗೂ ಭಕ್ತಾದಿಗಳು ಸೇರಿ ಶಿಲುಬೆ ಹಾದಿ ಆಚರಣೆಯನ್ನು ಭಕ್ತಿ ಪೂರ್ವಕವಾಗಿ ಸಾಯಿ ಗ್ರೌಂಡ್ ನಿಂದ ಹಿಡಿದು ಅಂಬೇಡ್ಕರ್ ಸರ್ಕಲ್ ,ತಹಸಿಲ್ದಾರ್ ಆಫೀಸ್, ಹಾಗೂ ಡಿಸಿ ಆಫೀಸ್ , ರೋಟರಿ ಕ್ಲಬ್ ವೃತ್ತದ ಮೂಲಕ ಹಾದು ಬಂದು ಏಸುಕ್ರಿಸ್ತರು ಅನುಭವಿಸಿದ ಯಾತನೆಯನ್ನು ನೋವು ನಿಂದನೆಯನ್ನು ಹಾಗೂ ಯೇಸುಕ್ರಿಸ್ತರು ನಮ್ಮನ್ನು ಎಷ್ಟಾಗಿ ಪ್ರೀತಿಸಿದರು ಎಂಬುದನ್ನು ಇಡೀ ಮನುಕುಲಕ್ಕೆ ಸಾರುವ ಒಂದು ದಿನವನ್ನಾಗಿ ಎಲ್ಲಾ ಕ್ರೈಸ್ತ ಭಕ್ತಾದಿಗಳು ನೆರವೇರಿಸಿ ಕೊಟ್ಟರು.
ನಮ್ಮ ಧರ್ಮ ಕೇಂದ್ರದ ಗುರುಗಳಾದ ವಿಲ್ಸನ್, ರಾಬಿನ್, ಜಾನ್ ಪೌಲ್, ಕ್ರಿಸ್ತುರಾಜ್, ಜೇಮ್ಸ್ ಪೌಲ್, ಹಾಗೂ ಕನ್ಯಾ ಭಗೀನ್ಯರಾದ ಕ್ರಿಸ್ಟಿನ್. , ರೀತಿಕ, ಲಿನೆಟ್. ಹಾಗೂ
ಸಂಜಯ ಜಾಗೀರದಾರ, ಶಾಂತ ಕುಮಾರ್, ಸುರೇಶ್, ದೊಡ್ಡಿ ಬಿನ್ನಿ ಶಾ ಇವರ ನೇತೃತ್ವದಲ್ಲಿ ನಡೆಯಿತು.

06/04/2023

ಪರಿಷ್ಠ ಜಾತಿ/ಪಂಗಡಗಳ ಹೊರಾಟ ಸಮಿತಿ ಬೀದರ ಸುಮಾರು 4 ವರ್ಷಗಳಿಂದ ನಿರಂತರವಾಗಿ ಸುಳ್ಳು ಬೇಡ ಜಂಗಮರ ವಿರುದ್ಧ ಹೋರಾಟ ನಡೆಸಿದರ ಫಲವಾಗಿ ನಿಪ್ನ್ನೆ ಬೀದರ ಜಿಲ್ಲಾಡಳಿತವು ರವೀಂದ್ರ ಸ್ವಾಮಿ ತಂದೆ ಕಲ್ಲಯ್ಯ ಸ್ವಾಮಿ ಅವರ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದು ಪಡೆಸಿ ಆದೇಶ ಹೊರಡಿಸಿದ್ದಾರೆ, ರಾಜಕುಮಾರ ಮೂಲಭಾರತಿ ಮತ್ತು ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸೆರಿ ಪತ್ರಿಕಾಗೋಷ್ಠಿ ಹೊಟಲ ಮಯೂರಾ ಬರಿದಶಾಹಿ ಬೀದರ ನಡೆಸಲಾಯಿತು.
ರಾಜಕುಮಾರ ಮೂಲಭಾರತಿ.ಅನಿಲ ಬೆಲ್ದಾರ್.ಸಂದಿಪ ಕಾಂಟೆ.ಸಂತೊಷ ಎಣಕುರೆ. ಹಾಜರಿದ್ದರು.

04/04/2023

ಬುದ್ದ ಬಸವ ಅಂಬೆಡ್ಕರ ಅವರ ಆಶಿವಾ೯ದದೊಂದಿಗೆ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಮುಖಂಡರು ಸನ್ಮಾನ ಶ್ರೀ ಶೆಶಿಕುಮಾರ ಎಸ್ ಪೊಲೀಸ್ ಪಾಟಿಲ ಚೌಳಿ ಅವರು ಬೀದರ ಉತ್ತರ ವಿಧಾನಸಭಾ ಮತ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯಥಿ೯ಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಕುರಿತು ಜನ ಬೆಂಬಲಿಗರ ಸಭೆ ಎಸ್.ಆರ್.ಎಸ್ ಫಂಕ್ಷನ್ ಹಾಲ್ ಬೀದರನಲ್ಲಿ ಹಮ್ಮಿಕೊಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿದ ಕೆಂಪನೂರು ಶಶಿಕುಮಾರ್ ಪೊಲೀಸ್ ಪಾಟೀಲ್ ಅಣ್ಣನವರು ನನ್ನ ಕುಟುಂಬದ ಸದಸ್ಯರಿದ್ದ ಹಾಗೆ ಎಲ್ಲ ಸಮಯದಲ್ಲೂ ನನಗೆ ಬೆಂಬಲಿಸುತ್ತಾರೆ ಹoತದಿದ್ದಾಗ ನಾನು ಮತ್ತೆ ನೀವು ಇವರಿಗೆ ಜೊತೆ ಯಾಕೆ ಕೈಜೋಡಿಸಬಾರದು ಏನೇ ಆಗಲಿ ಇವರಿಗೆ 2023 ನೇ ಚುನಾವಣೆಯಲ್ಲಿ ಪೂರ್ವ ಬಲದಿಂದ ನಾನು ಇವರಿಗೆ ಬೆಂಬಲಿಸುತ್ತೇನೆ ಯಾವುದೇ ಪದವಿ ಪೋಸ್ಟ್ ಇಲ್ಲದೆ ಜನರಿಗೆ ಸ್ವಂತ ಕೈಯಿಂದ ಮನೆಯ ಹಾಗೆ ಸ್ವಂತ ಕೈಯಿಂದ ಮನೆಯ ಮಗ ಹಾಗೆ ದಿನನಿತ್ಯ ಜನರಿಗೋಸ್ಕರ ಹಗಲಿರಳು ದುಡಿತ್ತಿರುತ್ತಾರೆ, ಮತ ಹಾಕಿ ಗೆಲ್ಲಿಸಿದ್ದವರು ಯಾವ ಮೂಲೆಯಲ್ಲಿ ಇರ್ತಾರೆ ಸಾಮಾನ್ಯ ಜನರನ್ನು ಕೈ ಗೊಂಬೆಯಾಗಿ ಆಟ ಆಡಿಸುತ್ತಾ ಮನ ಬಂದಂತೆ ತಮ್ಮ ರಾಜಕೀಯ ಆಟಗಳು ಆಡ್ತಾರೆ, ಈ ಒಂದು ಸಾರಿ ಶಶಿಕುಮಾರ್ ಪಾಟೀಲ್ ಅವರಿಗೆ ನಮ್ಮ ಮನೆಯ ಮಗನಾಗಿ ಗೆದ್ದಿಸಿ ತರೋಣ ಎಂದು ಭಾಷಣದಲ್ಲಿ ತಿಳಿಸಿದರು, ಈ ಸಂದರ್ಭದಲ್ಲಿ ಶಶಿಕುಮಾರ್ ಪೊಲೀಸ್ ಪಾಟೀಲ್ ಅವರು ಮಾತನಾಡಿ ತೊಡಗಿದ್ದಾಗ ಸುಮಾರು ಸಾವಿರ ಜನಸಂಖ್ಯೆಯಲ್ಲಿ ಅವರ ಕೂಗು ವಿಜಯಾಕಡೆ ಕಾಣಿಸಲಾಗಿತ್ತು, ಈ ಸಭೆಯಲ್ಲಿ ಬಂದಂತ ಎಲ್ಲರ ಆಶೀರ್ವಾದ ಮೇರೆಗೆ ಎಲ್ಲರ ನಿರ್ಧಾರದ ಮೇರೆಗೆ ನಾನು ಬಂಡಾಯ ಚುನಾವಣೆ ಅಭ್ಯರ್ಥಿಯಾಗಲು ನಿರ್ಧರಿಸಿದ್ದೇನೆ ತಮ್ಮ ಅನುಮತಿ ತಮ್ಮ ನಿರ್ಧಾರ ತಮ್ಮ ಅನಿಸಿಕೆಯ ವಿಚಾರ ಸಲುವಾಗಿ ಈ ಒಂದು ಸಭೆಯನ್ನು ಏರ್ಪಡಿಸಲಾಗಿದೆ ಆದಕಾರಣ ತಾವೆಲ್ಲ ನನಗೆ ಆಶೀರ್ವಾದ ಮಾಡಿದ್ದೀರಿ ಯಾವುದೇ ಕಾರಣಕ್ಕೂ ನಾನು ಹಿಂಜರಿಗುವುದಿಲ್ಲ ನಿಮ್ಮ ಈ ಆಶೀರ್ವಾದ ನಿಮ್ಮ ಈ ನಿರ್ಧಾರ ನನಗೆ ಇನ್ನಷ್ಟು ಬಲ ತುಂಬಿದೆ ನಾನು ಬಂಡಾಯ ಚುನಾವಣೆ ಮುಖಾಂತರ ಗೆದ್ದೇ ಗೆಲ್ಲುತ್ತೇನೆ ಅಂತ ನಿಮಗೆ ಭರವಸೆ ಕೊಡ್ತೀನಿ ನೀವು ನನ್ನ ಜೊತೆ ಇದ್ದು ಹೀಗೆ ನನಗೆ ಸಹಕರಿಸಿ ಮತ್ತೆ ನನಗೆ ಆಶೀರ್ವಾದ ಮಾಡಿ ನಿಮ್ಮ ಮನೆ ಮಗನಾಗಿ ಸ್ಥಾನ ಕೋಡಿ ಎಂದು ಹೇಳುವ ಮುಖಾಂತರ ಶಶಿಕುಮಾರ್ ಪೊಲೀಸ್ ಪಾಟೀಲ್ ಚವಳಿ ಅವರು ಮಾತನಾಡಿ ಜನರ ನಿರ್ಧಾರವೇ ನನ್ನ ನಿರ್ಧಾರ ಎಂದು ಭರವಸೆ ನೀಡಿದರು.

04/04/2023

03/04/2023

ಈ ಮೂಲಕ ತಮಗೆ ತಿಳಿಸುವುದೆನೆಂದರೆ, ಕರ್ನಾಟಕ ಪ್ರಜಾಶಕ್ತಿ ಸಂಘಟನೆ ತಮ್ಮ ನಿಷ್ಕಲ್ಮಷ ನಾಡ ಪ್ರೇಮ ತಮ್ಮ ನಡೆ ನುಡಿ ಉತ್ತಮ ಚರಿತ್ಯಾದ ಗುಣಗಳನ್ನು ಗುರುತಿಸಿ ಒಪ್ಪಿಗೆ ಮೇರಿಗೆ ತಮ್ಮ ಪ್ರಮಾಣಿಕತೆ ಮತ್ತು ಕನ್ನಡ ನಾಡಿನ ಪರ ಕಾಳಜಿಯನ್ನು ಗೌರವಿಸಿ ತಮ್ಮನ್ನು ಬೀದರ ದಕ್ಷಿಣ ಕ್ಷೇತ್ರದ ತಾಲೂಕ ಗೌರವಾಧ್ಯಕ್ಷರನ್ನಾಗಿ ಶ್ರೀ ರಮೇಶ ಜಿ.ಕೆ. ರವರನ್ನು ನೇಮಕ ಮಾಡಲಾಗಿದೆ. ಇನ್ನು ಮುಂದೆಯು ತಮ್ಮ ಪ್ರಮಾಣಿಕ ನಾಡ ಅಭಿಮಾನವನ್ನು ಎತ್ತಿ ಹಿಡಿಯುದರೊಂದಿಗೆ ಕನ್ನಡ ಪರ, ರೈತರ ಪರ, ಕಾರ್ಮಿಕರ ಪರ, ಮಹಿಳೆಯರ ಪರ, ವಿದ್ಯಾರ್ಥಿಗಳ ಹಾಗೂ ಸಮಗ್ರ ನಾಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಾಡಿನ ಸರ್ವೋತೋಮುಖ ಅಭಿವೃದ್ಧಿಗೆ ಕರ್ನಾಟಕ ಪ್ರಜಾಶಕ್ತಿ ಸಬುಲ ಸಂಘಟನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಮಸ್ಯೆಗಳಿಗೆ ಸ್ಪಂದಿಸುತ್ತ ತಮ್ಮ ನಾಯಕತ್ವದ ಸೇವೆಯನ್ನು ವಹಿಸಿಕೊಳ್ಳಬೇಕಾಗಿ ಈ ಮೂಲಕ ತಿಳಿಪಡಿಸುತ್ತೇವೆ. ನಾಡು, ನುಡಿ, ಜಲ, ಭಾಷೆ, ಸಮಗ್ರ ಅಭಿವೃದ್ಧಿಯ ತತ್ವ ಸಿದ್ಧಾಂತದ ಮಾರ್ಗದಲ್ಲಿ ನಡೆಯುತ್ತಾ ಕರ್ನಾಟಕ ಪ್ರಜಾಶಕ್ತಿ ಸಬುತಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಸಾಯಿ ಶಿಂಧೇ ನೇತೃತ್ವದಲ್ಲಿ ಸಂಘಟನೆಯ ತತ್ವ ಸಿದ್ದಾಂತವನ್ನು ನೀವು ಪಾಲಿಸಬೇಕೆಂದು ಆದೇಶಿಸಲಾಗಿದೆ.
ಧನ್ಯವಾದಗಳೊಂದಿಗೆ,
ಸಾಯಿ ಶಿಂಧೆ ಶ್ರೀಮತಿ ಜ್ಯೋತಿ ಮಹಿಳಾ ಘಟಕದ
ಜಿಲ್ಲಾಧ್ಯಕ್ಷರು

ವಿನೋದ ಶಿಂಧೆ ನಗರ ಘಟಕ ಅಧ್ಯಕ್ಷರು
ಮಹೇಂದ್ರಕುಮಾರ ಹೊಸಮನಿ
ಜಿಲ್ಲಾ ಉಪಾಧ್ಯಕ್ಷರು

03/04/2023

ಬೀದರನ ಜಾದೂಗಾರರಾದ ತುಕಾರಾಂ ಸರ ಅವರು ನನ್ನ ದೊಡ್ಡ ಮಗಳು ಮತ್ತು ಚಿಕ್ಕ ಮಗನಿಗೆ ಬೀದರ್ ಅಂಬೆಡ್ಕರ ವ್ರತ್ರದ ಹತ್ತಿರ ಅಚಾನಕ ಭೆಟ್ಟಿಯಾದರು ಮಕ್ಕಳಿಗೆ ಇವರು ಜಾದು ಮಾಡುವ ಸರರು ಇದ್ದಾರೆ ಅಂದಾಗ ಅವರು ಕೆಲವು ಜಾದು ಮಾಡಿತೊರಿಸಿದ ನೆನಪಿನ ವಿಡಿಯೋ ದ್ರಶ.

ಇಂದು ಬೀದರ ಜಿಲ್ಲೆಯ ಮೈಲೂರ ರಸ್ತೆ ಬಾಂಬೆ ಬಿಲಡಿಂಗ ಎದುರು ಗಡೆ ಕನಾ೯ಟಕ  ರಕ್ಷಣಾ ವೇದಿಕೆ ಜಿಲ್ಲಾ ಕಾಯ೯ಲಾಯ ಉದ್ಘಾಟನೆ ಮಾಡಲಾಯಿತು.
29/03/2023

ಇಂದು ಬೀದರ ಜಿಲ್ಲೆಯ ಮೈಲೂರ ರಸ್ತೆ ಬಾಂಬೆ ಬಿಲಡಿಂಗ ಎದುರು ಗಡೆ ಕನಾ೯ಟಕ ರಕ್ಷಣಾ ವೇದಿಕೆ ಜಿಲ್ಲಾ ಕಾಯ೯ಲಾಯ ಉದ್ಘಾಟನೆ ಮಾಡಲಾಯಿತು.

29/03/2023

ಇಂದು ಬೀದರ ಜಿಲ್ಲೆಯ ಮೈಲೂರ ರಸ್ತೆ ಬಾಂಬೆ ಬಿಲಡಿಂಗ ಎದುರು ಗಡೆ ಕನಾ೯ಟಕ ರಕ್ಷಣಾ ವೇದಿಕೆ ಜಿಲ್ಲಾ ಕಾಯ೯ಲಾಯ ಉದ್ಘಾಟನೆ ಮಾಡಲಾಯಿತು.

28/03/2023

ಕಾಂಗ್ರೆಸ್ ಪಕ್ಷದ(Karnataka congress) ಮೊದಲ ಪಟ್ಟಿ ಹೊರಬೀಳುತ್ತಿದ್ದಂತೆ ಬಂಡಾಯದ ಬಿಸಿ(Congress rebel) ಜೋರಾಗಿದೆ. ಬೀದರ್ ಜಿಲ್ಲೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಚಂದ್ರ ಸಿಂಗ್, ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಹಿಂದಿನ ಹನ್ನೆರಡು ವರ್ಷಗಳಿಂದ ಬೆಳೆಸಿ ಉಳಿಸಿ ಎಷ್ಟು ಜನಗಳಿಗೆ ಗ್ರಾಮ ಪಂಚಾಯತ್ ಸದ್ಯಸರು ಅಧ್ಯಕ್ಷರು ಮತ್ತು ತಾಲ್ಲೂಕಾ ಪಂಚಾಯತ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಬೆಳೆಸಿದ್ದಾರೆ. ಇಂದು ಅಂಥವರು ಸದ್ಯ ಪಕ್ಷ ತೊರೆದು ಬಂಡಾಯ ಅಭ್ಯಥಿ೯ಯನ್ನು ಗೆಲ್ಲಿಸಿ ಮತ್ತೆ ಕಾಂಗ್ರೆಸ್ ಸೆರುತ್ತೆವೆ ಎಂದು ಕಾಯ೯ತರು ಸಭೆಯಲ್ಲಿ ಪಣತೊಟ್ಟರು.
ಕಾಯ೯ಕ್ರಮ ಸ್ಥಳ ಕಾಂಗ್ರೆಸ್ ಪಕ್ಷದ(Karnataka congress) ಮೊದಲ ಪಟ್ಟಿ ಹೊರಬೀಳುತ್ತಿದ್ದಂತೆ ಬಂಡಾಯದ ಬಿಸಿ(Congress rebel) ಜೋರಾಗಿದೆ. ಬೀದರ್ ಜಿಲ್ಲೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿರುವ ಚಂದ್ರ ಸಿಂಗ್, ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಹಿಂದಿನ ಹನ್ನೆರಡು ವರ್ಷಗಳಿಂದ ಬೆಳೆಸಿ ಉಳಿಸಿ ಎಷ್ಟು ಜನಗಳಿಗೆ ಗ್ರಾಮ ಪಂಚಾಯತ್ ಸದ್ಯಸರು ಅಧ್ಯಕ್ಷರು ಮತ್ತು ತಾಲ್ಲೂಕಾ ಪಂಚಾಯತ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಬೆಳೆಸಿದ್ದಾರೆ. ಇಂದು ಅಂಥವರು ಸದ್ಯ ಪಕ್ಷ ತೊರೆದು ಬಂಡಾಯ ಅಭ್ಯಥಿ೯ಯನ್ನು ಗೆಲ್ಲಿಸಿ ಮತ್ತೆ ಕಾಂಗ್ರೆಸ್ ಸೆರುತ್ತೆವೆ ಎಂದು ಕಾಯ೯ತರು ಸಭೆಯಲ್ಲಿ ಕಾಯ೯ತರು ಪಣತೊಟ್ಟರು.
ಈ ಸಭೆ ಅಸ್ಲಂ ಫಂಕ್ಷನ್ ಹಾಲ್ ಕಮಠಾಣ. ತಾ. ಜಿ. ಬೀದರನಲ್ಲಿ ಹಮ್ಮಿಕೊಳಲಾಗಿತ್ತು.

25/03/2023

ಬೀದರ್ ನಗರದ ಟಿ.ಡಿ.ಬಿ ಕಾಲೋನಿಯಲ್ಲಿ ನಿನ್ನೆ ಅಲೆಮಾರಿ ಕುಟುಂಬವಾದ ಶ್ರೀ ಧರಂ ಅವರ ಮನೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಸಂಪೂರ್ಣವಾಗಿ ಅಗ್ನಿದುರಂತಕ್ಕೆ ಸಿಲುಕಿ ಸುಟ್ಟು ಹೋಗಿದೆ.

ಇಂದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ , ಅವರ ಜೀವನೋಪಾಯಕ್ಕೆ 2 ತಿಂಗಳ ದಿನಸಿ ಮತ್ತು ಆರ್ಥಿಕ ಸಹಾಯ ನೀಡಲಾಯಿತು.

ಈ ಅಗ್ನಿ ಅವಘಡದಲ್ಲಿ ಮನೆಯ ಉಡುಗೆ-ತೊಡುಗೆ, ಟಿವಿ, ಮೊಬೈಲ್, ಅವರ ವ್ಯಾಪಾರದ ಸಾಮಗ್ರಿ ಹಾಗೂ ದುಡ್ಡು ಸಹ ಸುಟ್ಟು ಹೋಗಿದೆ.

ಕುಟುಂಬಕ್ಕೆ ಇಲಾಖೆಯಿಂದ ಸಾಧ್ಯವಾದ ಸಹಾಯ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿಶಾಲ್ ಜೀ, ಶ್ರೀ ವಿಕಾಸ್, ಶ್ರೀ ಶಾಂತಕುಮಾರ್ ಹಳ್ಳದಕೇರಿ ಹಾಗೂ ಇತರರು ಉಪಸ್ಥಿತರಿದ್ದರು.

25/03/2023

ನ್ಯಾಯಮೂರ್ತಿ ಎ. ಜೆ ಸದಾಶಿವ ಆಯೋಗ ವರದಿ ಬಿಜೆಪಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆ ಇಂದು ಕರ್ನಾಟಕ ಮಾದಿಗ ವೇಲ್ಫರ್ ಅಸೋಸಿಯೇಷನ್ ಬೀದರ್ ಜಿಲ್ಲಾ ಘಟಕದ ವತಿಯಿಂದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿ ಸಿಹಿ ಹಂಚಿಕೊಳ್ಳಲಾಯ್ತು.

Address


Telephone

+919902395324

Website

Alerts

Be the first to know and let us send you an email when A1 media bidar posts news and promotions. Your email address will not be used for any other purpose, and you can unsubscribe at any time.

Shortcuts

  • Address
  • Telephone
  • Alerts
  • Claim ownership or report listing
  • Want your business to be the top-listed Media Company?

Share