Sawanna Books

  • Home
  • Sawanna Books

Sawanna Books We at Sawanna Enterprises have always been committed to improve the society from all dimensions through Books

 #ಹೊಸಪುಸ್ತಕ ನಿಮ್ಮ ಕೊನೆ ವೇತನವನ್ನು ನಿಮ್ಮ ಮಗಳು ಅಥವಾ ಮಗ ಮೊದಲ ತಿಂಗಳ ವೇತನವನ್ನಾಗಿ ಪಡೆಯುವ ಸಾಧ್ಯತೆ ಎಷ್ಟು? ಆ ಮಟ್ಟದ ಸಂಬಳ ಪಡೆಯಲು ಅವರ...
05/08/2025

#ಹೊಸಪುಸ್ತಕ

ನಿಮ್ಮ ಕೊನೆ ವೇತನವನ್ನು ನಿಮ್ಮ ಮಗಳು ಅಥವಾ ಮಗ ಮೊದಲ ತಿಂಗಳ ವೇತನವನ್ನಾಗಿ ಪಡೆಯುವ ಸಾಧ್ಯತೆ ಎಷ್ಟು? ಆ ಮಟ್ಟದ ಸಂಬಳ ಪಡೆಯಲು ಅವರೆಷ್ಟು ಸೈಕಲ್‌ ಹೊಡೆಯಬೇಕು ಗೊತ್ತಲ್ವಾ?
ಅದೇ ಉದ್ದಿಮೆ ಕಟ್ಟಿದವನು ನಿವೃತ್ತಿ ಹೊಂದಿದ ತಿಂಗಳು ಪಡೆದುಕೊಂಡ ಲಾಭ ಆತನ ಮಗಳು ಅಥವಾ ಮಗ ಮುಂದಿನ ತಿಂಗಳು ಪಡೆದುಕೊಳ್ಳಬಹುದು, ಅದಕ್ಕಿಂತ ಹೆಚ್ಚು ಆಗಬಹುದು. ಕಡಿಮೆಯಾದರೂ ತುಂಬಾ ಕುಸಿತವಂತೂ ಇರುವುದಿಲ್ಲ.
ಅರ್ಥವಿಷ್ಟೇ, ನೀವೆಷ್ಟೇ ವರ್ಷ ಕೆಲಸ ಮಾಡಿ, ನೀವು ಆ ಲೆಗೆಸಿಯ ಕಂಟಿನ್ಯೂಟಿ ನಿಮ್ಮ ಮಕ್ಕಳಿಗೆ ಬಿಟ್ಟು ಹೋಗಲಾರಿರಿ. ಅಂದರೆ ನೀವೆಷ್ಟೆ ಮೆಟ್ಟಿಲು ಹತ್ತದ್ದಿರೂ ನಿಮ್ಮ ಮಕ್ಕಳು ಮತ್ತೆ ಮೊದಲ ಮೆಟ್ಟಿಲಿಂದ ಶುರು ಮಾಡಬೇಕು! ಉದ್ದಿಮೆಯಲ್ಲಿ ನೀವು ಎಷ್ಟು ಮೆಟ್ಟಿಲು ಏರಿರುತ್ತೀರಿ, ನಿಮ್ಮ ಮಕ್ಕಳು ಅಲ್ಲಿಂದ ಶುರು ಮಾಡುತ್ತಾರೆ. ಅವರಿಗೆ ಒಂದು ತಲೆಮಾರಿನ ಕಷ್ಟದ ಲಾಭ ಸಿಗುತ್ತೆ. ಅಂದರೆ ಕಂಟಿನ್ಯೂಟಿ ಸಿಗುತ್ತದೆ. ಇದರ ಜೊತೆಗೆ AI ಬರುತ್ತಿದೆ. ಅದು ಸಣ್ಣ ಉದ್ದಿಮೆ ಕಟ್ಟುವುದನ್ನು ಆಯ್ಕೆಯಾಗಿ ಉಳಿಸುವುದಿಲ್ಲ. ಅನಿವಾರ್ಯವಾಗಿಸಲಿದೆ.
ಈ ನಿಟ್ಟಿನಲ್ಲಿ:
ಸಣ್ಣ ಉದ್ದಿಮೆ ಕಟ್ಟುವುದು ಹೇಗೆ? ಅದಕ್ಕೆ ಬೇಕಾದ ಮನಸ್ಥಿತಿಯೇನು? ಯಾವ ಫಾರ್ಮ್ಯಾಟ್‌ ಆಯ್ಕೆ ಮಾಡಿಕೊಳ್ಳಬೇಕು? ಉದ್ದಿಮೆ ತೆರೆಯಲು ಬೇಕಾಗುವ ಅನುಮತಿ ಪತ್ರಗಳು ಯಾವುವು? ಅವುಗಳನ್ನು ಪಡೆಯುವುದು ಹೇಗೆ? ಫಂಡ್‌ ರೈಸಿಂಗ್‌ ಹೇಗೆ? ಒಟ್ಟಾರೆ ಸಣ್ಣ ಉದ್ದಿಮೆ ಕಟ್ಟಲು ಬೇಕಾಗುವ ಎಲ್ಲಾ ಅವಶ್ಯ ಮಾಹಿತಿ ಇಲ್ಲಿದೆ.

 #ಹೊಸಪುಸ್ತಕ ಜಪಾನ್ ಪ್ರವಾಸ ಬೇರೆಲ್ಲಾ ವಿದೇಶ ಪ್ರವಾಸಕ್ಕಿಂತ ವಿಶೇಷ ಮತ್ತು ವಿಭಿನ್ನ. ಬಹಳ ಹಿರಿಯದಾದ ಧಾರ್ಮಿಕ , ಸಾಂಸ್ಕೃತಿಕ ಪರಂಪರೆಯನ್ನು ...
05/08/2025

#ಹೊಸಪುಸ್ತಕ

ಜಪಾನ್ ಪ್ರವಾಸ ಬೇರೆಲ್ಲಾ ವಿದೇಶ ಪ್ರವಾಸಕ್ಕಿಂತ ವಿಶೇಷ ಮತ್ತು ವಿಭಿನ್ನ. ಬಹಳ ಹಿರಿಯದಾದ ಧಾರ್ಮಿಕ , ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಜಪಾನ್ ಭವಿಷ್ಯದ ಟೆಕ್ನಾಲಜಿಯನ್ನೂ ಸಮರ್ಥವಾಗಿ ಜಗತ್ತಿಗೆ ಕಟ್ಟಿಕೊಡುತ್ತಿದೆ.
ಲೇಖಕಿ ಅಂಜಲಿ ರಾಮಣ್ಣ ತಮ್ಮ ಜಪಾನ್ ಪ್ರವಾಸದ ಅನುಭವವನ್ನು, ಚರಿತ್ರೆ, ಸಂಸ್ಕೃತಿ ಮತ್ತು ಜನರ ಸ್ವಭಾವಗಳನ್ನು ರಸವತ್ತಾಗಿ ವರ್ಣಿಸಿದ್ದಾರೆ Ja Ne ಜಪಾನ್ ಪ್ರವಾಸ ಕಥನದಲ್ಲಿ.
Anjali Ramanna

#ಕನ್ನಡ

 #ಹೊಸಪುಸ್ತಕ ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ...
05/08/2025

#ಹೊಸಪುಸ್ತಕ

ಸಮಾಜದ ಒತ್ತಡಗಳು, ಕುಟುಂಬದ ಬೇಡಿಕೆಗಳು ಹೊಸದಾಗಿ ಏನನ್ನಾದರೂ ಪ್ರಾರಂಭಿಸಲು ವಯಸ್ಸನ್ನು ದೊಡ್ಡ ತಡೆ ಎಂಬಂತೆ ನೋಡುತ್ತವೆ ಮತ್ತು ಈ ನಿರುತ್ಸಾಹಿ ವಾತಾವರಣದಲ್ಲೂ ಹೇಗೆ ಮನಸ್ಸನ್ನು ಸ್ವಸ್ಥವಾಗಿರಿಸಿಕೊಂಡು ಯಾವ ವಯಸ್ಸಿನಲ್ಲಾದರೂ ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತ ಹೋಗಬಹುದು ಎಂಬುದಕ್ಕೊಂದು ಸ್ಫೂರ್ತಿಯುತ ಉದಾಹರಣೆ ಈ ಪುಸ್ತಕ. ಪ್ರತಿ ಪಯಣವೂ ವಿಶಿಷ್ಟವಾದದ್ದು ಎಂಬ ಸರಳವಾದ ಆದರೆ ಬಹಳ ಮಂದಿ ಅರ್ಥ ಮಾಡಿಕೊಳ್ಳಲು ಸೋತಿರುವ ಸತ್ಯವನ್ನು ಅರ್ಥ ಮಾಡಿಸುವ ಪ್ರಯತ್ನವಿದು.
ಆರಂಭಿಕ ಸೋಲುಗಳಿಂದ, ಹಣಕಾಸಿನ ತೊಂದರೆಯಿಂದ, ಸಮಾಜದ ಚುಚ್ಚು ಮಾತುಗಳಿಂದ ತಮ್ಮಿಂದ ಏನೂ ಸಾಧ್ಯವಿಲ್ಲ ಎಂಬ ನೇತ್ಯಾತ್ಮಕ ಅಭಿಪ್ರಾಯವನ್ನು ತಮ್ಮ ಬಗ್ಗೆ ತಾವೇ ತುಂಬಿಕೊಂಡು ಸಣ್ಣ ಪುಟ್ಟ ಕನಸು ಕಾಣಲೂ ಹಿಂಜರಿಯುವವರು ಈ ಕಥೆಗಳನ್ನು ಓದಲೇಬೇಕು, ಕಾಲೇಜು ವಿದ್ಯಾರ್ಥಿಯಾಗಲಿ, ಮಧ್ಯವಯಸ್ಕರೇ ಆಗಲಿ ಇಳಿವಯಸ್ಸಿನವರೇ ಆಗಲಿ ಯಾರು ಬೇಕಾದರೂ ಓದಬಹುದಾದ ಮತ್ತು ಸ್ಫೂರ್ತಿ ಪಡೆಯಬಹುದಾದ ಅಪರೂಪದ ಸಾಧಕರ ಬದುಕಿನ ಕತೆಗಳು ನಿಮ್ಮೆದುರು...

Deepa Hiregutti

 #ಹೊಸಪುಸ್ತಕಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್...
05/08/2025

#ಹೊಸಪುಸ್ತಕ

ಜೀವನದ ಕೊನೆಯ ಹಂತಗಳನ್ನು ಅಲ್ಲಗಳೆದು ಸದಾ ಯೌವ್ವನ, ಯಶಸ್ಸನ್ನೇ ಹುಡುಕಿ ಮೆರೆಸುವ ಇತ್ತೀಚಿನ ಸಮಾಜದಲ್ಲಿ, ಹೆಚ್ಚುತ್ತಿರುವ ವೃದ್ಧರ ಸಂಖ್ಯೆಯು ಒಂದು ನಿಜವಾದ ಸಂಗತಿ. ಈ ವಯೋವರ್ಗದ ಅವಶ್ಯಕತೆಗಳು, ಅವರು ಎದುರಿಸಬಹುದಾದ ಸಮಸ್ಯೆಗಳು ಹಾಗು ಅವುಗಳನ್ನು ನಿಭಾಯಿಸುವ ಹಲವಾರು ಸಾಧ್ಯತೆಗಳನ್ನು ವಿವರಿಸುವ ಪುಸ್ತಕ ಇದು. ತಿಳಿ ಹಾಸ್ಯದೊಂದಿಗೆ ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುವ ವಿಷಯಗಳನ್ನು ಬಿಡಿಸಿ ಹೇಳಿ, ಮುಗುಳ್ನಗೆಯಿಂದ ಮುಪ್ಪನ್ನು ಕೂಡ ಧೈರ್ಯದಿಂದ ಆಲಿಂಗಿಸಿ ಮುನ್ನಡೆಯುವುದಕ್ಕೆ ಒಂದು ಮಾರ್ಗಸೂಚಿ.
ಡಾ।। ಸರಸ್ವತಿ ಐತಾಳ್‌ ಅವರು ಬೆಂಗಳೂರಿನ ಸಂಜಯನಗರದಲ್ಲಿ ಕಳೆದ 20 ವರ್ಷಗಳಿಂದ ವೈದ್ಯೆ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಗ್ರಾಮಾಂತರ ವೈದ್ಯಕೀಯ ಸೇವೆ, ಜೀವನ ಶೈಲಿಯ ರೋಗಗಳು (ಮಧುಮೇಹ), ಮಹಿಳೆಯರು ಹಾಗು ವೃದ್ಧರ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಕಾಳಜಿ. ಅದರ ಫಲಶ್ರುತಿಯೇ ಅವರ ಈ ಮೊದಲನೆಯ ಪುಸ್ತಕ `ಅರವತ್ತರ ನಂತರ ಮರಳಿ ಅರಳಿ'.

 #ಹೊಸಪುಸ್ತಕ`ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ...
05/08/2025

#ಹೊಸಪುಸ್ತಕ

`ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎನ್ನುವ ದಾಸರ ನುಡಿ ಇವತ್ತಿಗೆ ಒಂದಷ್ಟು ಬದಲಾವಣೆಯಾಗಿದೆ. ಹೊಟ್ಟೆ ಮತ್ತು ಬಟ್ಟೆಯನ್ನು ಮೀರಿದ ಅವಶ್ಯಕತೆಗಳು ಇಂದು ಉತ್ಪನ್ನವಾಗಿವೆ. ಸಮಾಜ ಬೆಳೆಯುತ್ತ ಹೋದಂತೆ ಇದು ಸಹಜ. ಅಂದಿನ ಕಾಲಘಟ್ಟದಲ್ಲಿ ಹೊಟ್ಟೆಗೆ ಮತ್ತು ಬಟ್ಟೆಗೆ ಆದರೆ ಸಾಕು ಬೇರೇನೂ ಬೇಕಿಲ್ಲ ಎನ್ನುವಂತಹ ಸನ್ನಿವೇಶವಿತ್ತು. ಬದಲಾದ ಸನ್ನಿವೇಶದಲ್ಲಿ ನಾವು ಅವುಗಳನ್ನು ಮೀರಿದ್ದೇವೆ. ಇವತ್ತಿಗೆ ಕಾರು, ಫೋನು ಇತ್ಯಾದಿಗಳು ಅವಶ್ಯಕವಾಗಿವೆ. ಅವು ಐಷಾರಾಮ ಎನ್ನಿಸಿಕೊಳ್ಳುವುದಿಲ್ಲ. ಕಳೆದ ಎರಡು ದಶಕಗಳಿಂದ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಹಿಂದೆ ಜನರ ಕೈಯಲ್ಲಿ ಹಣವಿರುತ್ತಿರಲಿಲ್ಲ. ಇಂದು ಅವಶ್ಯಕತೆಯನ್ನು ಮೀರಿ ಒಂದಷ್ಟು ಹಣ ಕೂಡ ಉಳಿಯುತ್ತಿದೆ. ಆದರೆ ಹಣದುಬ್ಬರ ಎನ್ನುವುದು ಅದರ ಮೌಲ್ಯವನ್ನು ಕಸಿದು ಬಿಡುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಪ್ರತಿಯೊಬ್ಬರೂ ಫೈನಾನ್ಶಿಯಲ್‌ ಪ್ಲಾನಿಂಗ್‌ ಮಾಡಬೇಕಾಗಿದೆ. ಈ ಪುಸ್ತಕ ಆ ದಾರಿಯಲ್ಲಿ ನಡೆಯ ಬಯಸುವವರಿಗೆ ಒಂದು ನಕ್ಷೆಯಂತೆ ದಾರಿ ತೋರುತ್ತದೆ. `ಆರಂಭ', `ಸರಿಯಾದ ದಾರಿ' ನಮ್ಮನ್ನು `ಗಮ್ಯ'ಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವ ಮೂರು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪುಸ್ತಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಶುಭವಾಗಲಿ. - ರಂಗಸ್ವಾಮಿ ಮೂಕನಹಳ್ಳಿ

 #ಹೊಸಪುಸ್ತಕ ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾ...
05/08/2025

#ಹೊಸಪುಸ್ತಕ
ಮಾನವನ ವಿಕಾಸದ ಹಾದಿಯಿಂದ ಹಿಡಿದು ಇತ್ತೀಚಿನ ಆಧುನಿಕತೆಯ ಪ್ರಗತಿಯ ಪಥವನ್ನು ಅವಲೋಕಿಸಿದಾಗ ಈ ಅಗಾಧವಾದ ಬೆಳವಣಿಗೆಯಿಂದ ಮೂಲತಃ ನಾವೆಲ್ಲರೂ ಬದುಕಲು ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ಹೊಂದಿ ಈ ವಿಕಸಿತ ಬುದ್ಧಿಯ ಪ್ರಭಾವದಿಂದ ಈ ಮೂಲಭೂತ ಅಗತ್ಯತೆಗಳಾಚೆ ಚಿಂತಿಸಿ ಇದರ ಪರಿಣಾಮವು ನಮ್ಮ ಬದುಕನ್ನು ಇನ್ನಷ್ಟು ಸರಳ ಹಾಗೂ ಸಂತೃಪ್ತಗೊಳಿಸಿ ತನ್ಮೂಲಕ ಹೆಚ್ಚಿನ ನೆಮ್ಮದಿಯಿಂದ ಕೂಡಿದ ಬದುಕನ್ನು ಸಂಭ್ರಮಿಸುವಂತಾಗಬೇಕಿತ್ತು! ಆದರೆ ಇಂದು ನಮ್ಮೆಲ್ಲರ ಬದುಕು ಇದಕ್ಕೆ ವ್ಯತಿರಿಕ್ತವಾದ ಮಾರ್ಗದಲ್ಲಿ ಸಾಗುತ್ತಿದೆ. ಒಂದುಕಡೆ ನಾಗರಿಕತೆ, ನೂತನ ತಂತ್ರಜ್ಞಾನ ಹಾಗೂ ಅನ್ವೇಷಣೆಗಳ ವಿಷಯದಲ್ಲಿ ಮಾನವ ಇತರೆ ಜೀವರಾಶಿಗಳ ಹೋಲಿಕೆಗೆ ಸಿಗದಷ್ಟು ಉಚ್ಛ್ರಾಯ ಸ್ಥಿತಿಯಲ್ಲಿದ್ದಾನೆ. ಇದಕ್ಕೆ ವ್ಯತಿರಿಕ್ತವಾಗಿ ಬಹುತೇಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹೋರಾಟದಲ್ಲಿ ನಿರಾಶೆ-ಹತಾಶೆಗಳಿಂದ ಬಳಲುತ್ತಾ ಬದುಕೇ ಇಲ್ಲವೇನೋ ಎಂಬಂತೆ ಸಾಯುತ್ತಿದ್ದಾರೆ! ಇದಕ್ಕೆಲ್ಲಾ ಮೂಲ ಕಾರಣ ಈ ಬದುಕನ್ನು ಅರ್ಥಮಾಡಿಕೊಳ್ಳದೆ ಬದುಕಿನ ಉದ್ದೇಶ ಹಾಗೂ ಲಯ ತಿಳಿಯದೆ ಬತ್ತದ ಬಯಕೆಗಳೆಂಬ ಬಿಸಿಲುಕುದುರೆ ಏರಿ ಫಲವೆಂಬ ನೀರು ಹುಡುಕುತ್ತಾ ಹೊರಟು ಮರೀಚಿಕೆಯನ್ನು ಕಂಡಂತಾಗಿದೆ ನಮ್ಮೆಲ್ಲರ ಸ್ಥಿತಿ! ಈ ಹಿನ್ನೆಲೆಯಲ್ಲಿ ಸುಖ-ಶಾಂತಿ ಹಾಗೂ ನೆಮ್ಮದಿ-ಸಂತೃಪ್ತಿಗಳ ಕೊರತೆಯಿಂದ ಮರುಭೂಮಿಯಂತೆ ಬರಡಾದ ಬದುಕನ್ನು ನಿಷ್ಕರ್ಶಿಸಿ, ಬದುಕುವ ಬಗೆಯನ್ನು ಅರಿತು, ಬದುಕಿನ ನಿಯಮಗಳನ್ನು ಪಾಲಿಸುತ್ತಾ ಅದರ ಲಯದಂತೆ ನಮ್ಮ ಅರ್ಹತೆ ಹಾಗೂ ಯೋಗ್ಯತೆಯನ್ನು ವೃದ್ಧಿಸಿಕೊಂಡು ಬಯಸಿದ ಬದುಕನ್ನು ಪಡೆಯುವ ಹುಡುಕಾಟದಲ್ಲಿ ಸಿಗುವ ಸ್ಫೂರ್ತಿಯ ಚಿಲುಮೆಯೇ ಈ `ಓಯಸಿಸ್‌.'
-ಗಿರೀಶ ಶ್ರೀಪಾದ ಮೇವುಂಡಿ

#ಕನ್ನಡ

BLOCK YOUR DATE 24th August 2025
02/08/2025

BLOCK YOUR DATE
24th August 2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಗೀರ್ವಾಣಿ ಅವರು ಬರೆದಿರುವ "ಮನಸೇ ಮನಸೇ ಥ್ಯಾಂಕ್ಯು", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ...
31/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಗೀರ್ವಾಣಿ ಅವರು ಬರೆದಿರುವ "ಮನಸೇ ಮನಸೇ ಥ್ಯಾಂಕ್ಯು", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
Geervani M. H.

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಶ್ವೇತಾ ಭಿಡೆ ಅವರು ಬರೆದಿರುವ "ಭರವಸೆಯೇ ಬದುಕು", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟ...
31/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಶ್ವೇತಾ ಭಿಡೆ ಅವರು ಬರೆದಿರುವ "ಭರವಸೆಯೇ ಬದುಕು", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
Shwetha Bhide

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಗುರುರಾಜ ಪಾಟೀಲ ಅವರು ಬರೆದಿರುವ "ಪಾಲಕತ್ವದ ತತ್ವ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ...
31/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಗುರುರಾಜ ಪಾಟೀಲ ಅವರು ಬರೆದಿರುವ "ಪಾಲಕತ್ವದ ತತ್ವ", ಈಗ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿದೆ.
Gururaj Patil

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವಸಂತ್‌ ಗಿಳಿಯಾರ್‌ ಅವರು ಬರೆದಿರುವ ಸೆಕೆಂಡ್‌ ವೈಫ್‌ ಪುಸ್ತಕವನ್ನು ಜೋಗಿ ಸರ್ ಕುಂದಾಪ್ರ  ಹಬ್ಬದಲ್ಲಿ ಲೋಕಾರ್...
31/07/2025

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವಸಂತ್‌ ಗಿಳಿಯಾರ್‌ ಅವರು ಬರೆದಿರುವ ಸೆಕೆಂಡ್‌ ವೈಫ್‌ ಪುಸ್ತಕವನ್ನು ಜೋಗಿ ಸರ್ ಕುಂದಾಪ್ರ ಹಬ್ಬದಲ್ಲಿ ಲೋಕಾರ್ಪಣೆ ಮಾಡಿದರು…

Vasanth Giliyar Jogi Girish Rao Hatwar

ನೀವೆಲ್ಲರೂ ಕುಂದಾಪುರ ಮೇಳಕ್ಕೆ ಬರಕ್ಕು...
26/07/2025

ನೀವೆಲ್ಲರೂ ಕುಂದಾಪುರ ಮೇಳಕ್ಕೆ ಬರಕ್ಕು...

Address

#12, Byrasandra Main Road, Jayanagar 1st Block East

560011

Opening Hours

Monday 10:00 - 18:00
Tuesday 10:00 - 18:00
Wednesday 10:00 - 18:00
Thursday 10:00 - 18:00
Friday 10:00 - 18:00
Saturday 10:00 - 18:00

Telephone

+919036312786

Alerts

Be the first to know and let us send you an email when Sawanna Books posts news and promotions. Your email address will not be used for any other purpose, and you can unsubscribe at any time.

Contact The Business

Send a message to Sawanna Books:

Shortcuts

  • Address
  • Telephone
  • Opening Hours
  • Alerts
  • Contact The Business
  • Claim ownership or report listing
  • Want your business to be the top-listed Media Company?

Share